Saturday, March 07, 2026

ಅರಮನೆ ಮೈದಾನದಲ್ಲಿ ಟಿವಿ9 ಎಕ್ಸ್​​ಪೋ: ಹಯಗ್ರೀವ ಸಿನಿಮಾ ನಾಯಕ ಧನ್ವೀರ್, ನಾಯಕಿ ಸಂಜನಾ ಭಾಗಿ

  - ರಾಘವೇಂದ್ರ ಅಡಿಗ ಎಚ್ಚೆನ್.




ಟಿವಿ9 ಎಕ್ಸ್​​ಪೋ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿದೆ. ಮಾರ್ಚ್ 6, 7, 8 ಮೂರು ದಿನ ಇದು ಇರಲಿದೆ. ಆಟೋಮೊಬೈಲ್, ಲೈಫ್​ಸ್ಟೈಲ್​, ಫರ್ನಿಚರ್​ಗಳ ಮಾರಾಟ ನಡೆಯಲಿದ್ದು, ಒಂದೇ ಸೂರಿನಡಿ ನೂರಾರು ಮಳಿಗೆಗಳ ಸಂಗಮ ಆಗಿದೆ. 
ಇದಕ್ಕೆ ನಟ ಧನ್ವೀರ್ ಹಾಗೂ ಸಂಜನಾ ಆಗಮಿಸಿ ಚಾಲನೆ ನೀಡಿದರು. ಈ ವೇಳೆ ಅವರುಗಳು ಟಿವಿ9 ಎಕ್ಸ್​​ಪೋ ಬಗ್ಗೆ ಹಾಗೂ ಹಯಗ್ರೀವ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ಅವರು ಖುಷಿಯಾಗಿದ್ದಾರೆ.


ಈ ವೇಳೆ ಮಾತನಾಡಿದ ಧನ್ವೀರ್ ಎಲ್ಲಾ ತರದ ಮನೆಗೆ ಸಂಬಂಧಪಟ್ಟ ಆಟೋಮೊಬೈಲ್ಸ್ ಆಗಿರಬಹುದು ಫರ್ನಿಚರ್ ಆಗಿರಬಹುದು ಪ್ರತಿಯೊಂದು ಒಂದೇ ಜಾಗದಲ್ಲಿ ಸಿಗೋದ್ರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗುತ್ತೆ  ಎಂದರು.

ಅದಲ್ಲದೆ ಹಯಗ್ರೀವ ಸಿನಿಮಾ ಎಲ್ಲೆಡೆ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಕಾರಣ ಅದರ ಕುರಿತು ಸಂತೋಷ ಹಂಚಿಕೊಂಡರು.

ನಟಿ ಸಂಜನಾ ಮಾತನಾಡಿ ಹಯಗ್ರೀವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತುಂಬಾ ಖುಷಿಯಾಗಿದೆ. ಎಲ್ಲಾ ಕಡೆ ಓಡಾಡ್ತಾ ಇದೀವಿ ಪಾಸಿಟಿವ್ ಆಗಿ ರೆಸ್ಪಾನ್ಸ್ ಇದೆ  ಎಲ್ಲಾ ಕಡೆ ಆಲ್ಮೋಸ್ಟ್ ಹೌಸ್ ಫುಲ್ಸ್ ಓಡ್ತಾ ಇದೆ ಅಂಡ್ ಟಿವಿ೯ ಈ ಒಂದು ಎಕ್ಸ್ಪೋ ನಲ್ಲಿ ಒಂದೇ ರೂಫ್ ಅಡಿ ಎಲ್ಲಾ ಸಿಗುತ್ತಿರುವುದು  ಮತ್ತು ಯುಗಾದಿ ಸೇಲ್ ನಡೆಯುತ್ತಿರುವುದು ವಿಶೇಷ ಎಂದು ಖುಷಿಯಿಂದ ಹೇಳಿದ್ದಾರೆ.

Sunday, February 22, 2026

ಸಂಪೂರ್ಣ ಚಂದ್ರ ಗ್ರಹಣ 3 ಮಾರ್ಚ್ 2026 ವೈದಿಕ ಜ್ಯೋತಿಷ್ಯದ ಭವಿಷ್ಯವಾಣಿ


2026ರ ಮಾರ್ಚ್ 3ರಂದು ನಡೆಯುವ ಈ ಸಂಪೂರ್ಣ ಚಂದ್ರಗ್ರಹಣವು ಜಪಾನ್, ಆಸ್ಟ್ರೇಲಿಯಾದ ಪೂರ್ವ ಕರಾವಳಿ, ನ್ಯೂಜಿಲೆಂಡ್, ಅಲಾಸ್ಕಾ, ಪಪುವಾ ನ್ಯೂ ಗಿನಿಯಾ ಮತ್ತು ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಗೋಚರಿಸಲಿದೆ.

ಏಷ್ಯಾದ ಹೆಚ್ಚಿನ ಭಾಗ, ಇಡೀ ಆಸ್ಟ್ರೇಲಿಯಾ, ಉತ್ತರ ಮತ್ತು ದಕ್ಷಿಣ ಅಮೆರಿಕ ಭಾಗಶಃ ಚಂದ್ರಗ್ರಹಣವನ್ನು ನೋಡುತ್ತವೆ.

ಈ ಸಂಪೂರ್ಣ ಚಂದ್ರಗ್ರಹಣವನ್ನು ಮೇಲಿನ ಚಿತ್ರದಲ್ಲಿರುವ ಗಾಢ ಬಣ್ಣದ ವಲಯದ ಅಡಿಯಲ್ಲಿ ಬರುವ ಎಲ್ಲಾ ದೇಶಗಳಿಂದ ನೋಡಬಹುದು.

ಪೆರುದಲ್ಲಿನ ಲಿಮಾ, ಹೊನೊಲುಲು, ನ್ಯೂಯಾರ್ಕ್, ಚಿಕಾಗೊ, ವಾಷಿಂಗ್ಟನ್ ಡಿಸಿ, ಹೊನೊಲುಲು, ಸ್ಯಾನ್ ಫ್ರಾನ್ಸಿಸ್ಕೊ, ಲಾಸ್ ಏಂಜಲೀಸ್, ನ್ಯೂ ಓರ್ಲಿಯನ್ಸ್, ಡೆಟ್ರಾಯಿಟ್, ಯುಎಸ್ಎಯ ನ್ಯೂ ಓರ್ಲಿಯನ್ಸ್, ಮಾಂಟ್ರಿಯಲ್, ಕೆನಡಾದ ಟೊರೊಂಟೊ, ಫಿಲಿಪೈನ್ಸ್ನ ಮನಿಲಾ, ವಿಯೆಟ್ನಾಂನ ಹನೋಯಿ, ಆಸ್ಟ್ರೇಲಿಯಾದ ಮೆಲ್ಬೋರ್ನ್, ತೈವಾನ್ನ ತೈಪೆ, ಇಂಡೋನೇಷ್ಯಾದ ಜಕಾರ್ತಾ ವಿಶೇಷ ರಾಜಧಾನಿ ಪ್ರದೇಶ, ಮೆಲ್ಬೋರ್ನ್, ಬ್ರಿಸ್ಬೇನ್, ಆಸ್ಟ್ರೇಲಿಯಾದ ಸಿಡ್ನಿ, ಹಾಂಗ್ ಕಾಂಗ್, ಗ್ವಾಟೆಮಾಲಾದ ಗ್ವಾಟೆಮಾಲಾ ನಗರ, ಕ್ಯೂಬಾದ ಹವಾನಾ, ಥೈಲ್ಯಾಂಡ್ನ ಬ್ಯಾಂಕಾಕ್, ದಕ್ಷಿಣ ಕೊರಿಯಾದ ಸಿಯೋಲ್, ಸಿಂಗಾಪುರ್, ಶಾಂಘೈ, ಚೀನಾದಲ್ಲಿ ಬೀಜಿಂಗ್, ಎಲ್ ಸಾಲ್ವಡಾರ್ನ ಸ್ಯಾನ್ ಸಾಲ್ವಡಾರ್, ಜಪಾನ್ನ ಟೋಕಿಯೊ, ಮೆಕ್ಸಿಕೊದ ಮೆಕ್ಸಿಕೋ ನಗರ, ಮ್ಯಾನ್ಮಾರ್ನ ಯಾಂಗೊನ್, ಮುಂಬೈ, ದೆಹಲಿ, ಭಾರತದ ಕೋಲ್ಕತ್ತಾ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ - ಈ ನಗರಗಳು ಆ ದಿನದಂದು ಸಂಪೂರ್ಣ ಚಂದ್ರ ಗ್ರಹಣದ ಕನಿಷ್ಠ ಭಾಗವನ್ನು ನೋಡಬಹುದುಃ 

ಲಘು ಬಣ್ಣದ ವಲಯದಲ್ಲಿರುವವರು ಭಾಗಶಃ ಚಂದ್ರಗ್ರಹಣವನ್ನು ಮಾತ್ರ ನೋಡಬಹುದು.

ಗ್ರಹಣವು ಪ್ರಾರಂಭವಾದಾಗ, ಭೂಮಿಯ ನೆರಳು ಮೊದಲು ಚಂದ್ರನನ್ನು ಸ್ವಲ್ಪ ಗಾಢವಾಗಿಸುತ್ತದೆ. ನಂತರ, ನೆರಳು ಚಂದ್ರನ ಭಾಗವನ್ನು "ಮುಚ್ಚಲು" ಪ್ರಾರಂಭಿಸುತ್ತದೆ.

ಚಂದ್ರ ಗ್ರಹಣವು ಮಾರ್ಚ್ 3,2026 ರಂದು 00:44 ಗೆ ಪ್ರಾರಂಭವಾಗುತ್ತದೆ  ಈ ಗ್ರಹಣವು 06:23 ಗೆ ಕೊನೆಗೊಳ್ಳುತ್ತದೆ, 

ಪೂರ್ವ ಆಸ್ಟ್ರೇಲಿಯಾ, ಏಷ್ಯಾ ಪೆಸಿಫಿಕ್ ದ್ವೀಪಗಳು, ಚೀನಾ ಮತ್ತು ಭಾರತೀಯ ಉಪಖಂಡದಲ್ಲಿ, ಮಾರ್ಚ್ 2 ರ ಸಂಜೆಯಿಂದ ಗ್ರಹಣವನ್ನು ಕಾಣಬಹುದು.

ಈ ಗ್ರಹಣದ ಒಟ್ಟು ಅವಧಿ 05 ಗಂಟೆ 39 ನಿಮಿಷಗಳು.

ಸಿಂಹ ರಾಶಿಯಲ್ಲಿ (ಸಿಂಹ) ಗ್ರಹಣವು ಸಂಭವಿಸಿದಂತೆ, ಇದು ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಚಂದ್ರನನ್ನು ಹೊಂದಿದ್ದು, ಕೇತುವಿನೊಂದಿಗೆ 4 ಗ್ರಹಗಳನ್ನು ಹೊಂದಿರುತ್ತದೆ-ಧನುಷ್ಟದಲ್ಲಿ ಮಂಗಳ, ಶತಭಿಷಾದಲ್ಲಿ ರಾಹು ಮತ್ತು ಸೂರ್ಯ, ಕುಂಭ ರಾಶಿಯಲ್ಲಿ ಪೂರ್ವಭದ್ರ ನಕ್ಷತ್ರದಲ್ಲಿ ಬುಧ (ಹಿಮ್ಮುಖ ಚಲನೆ) ಅವುಗಳನ್ನು ಹೊಂದಿರಲಿದೆ.

ಈ 6 ಗ್ರಹಗಳು ಸಿಂಹ ಮತ್ತು ಕುಂಭ ರಾಶಿಯವರಿಗೆ ದೈಹಿಕ ಮತ್ತು ಆರ್ಥಿಕ ಸವಾಲುಗಳನ್ನು ಸೃಷ್ಟಿಸುತ್ತವೆ.

ಹಣಕಾಸಿನ ಒತ್ತಡಗಳು, ಪಾಲುದಾರರು, ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಭಿನ್ನಾಭಿಪ್ರಾಯಗಳು, ಕುಟುಂಬದಿಂದ ಸಹಕಾರವಿಲ್ಲದಿರುವುದು, ದೈಹಿಕ ಮತ್ತು ಮಾನಸಿಕ ಒತ್ತಡ, ನಿದ್ರಾಹೀನತೆಯು ಮುಂದಿನ 1 ತಿಂಗಳವರೆಗೆ ನಿಮ್ಮನ್ನು ಕಾಡಬಹುದು

ಆಗಾಗ್ಗೆ ಬದಲಾಗುತ್ತಿರುವ ತೆರಿಗೆ ನೀತಿಗಳು, ಯುದ್ಧದ ಪರಿಸ್ಥಿತಿಗಳು, ಆರ್ಥಿಕ ಹಿಂಜರಿತದಿಂದಾಗಿ ಉಂಟಾಗುವ ಆರ್ಥಿಕ ಅನಿಶ್ಚಿತತೆಯು ಅಸ್ಥಿರ ಮಾರುಕಟ್ಟೆಗಳಿಗೆ ಕಾರಣವಾಗುತ್ತದೆ. ಲೋಹಗಳು ಮತ್ತು ರಿಯಲ್ ಎಸ್ಟೇಟಿನಂತಹ ಸುರಕ್ಷಿತ ಹೂಡಿಕೆಗಳಿಗೆ ಜನರು  ಆಸಕ್ತಿ ತಾಳುತ್ತಾರೆ. 

ಪೂರ್ವಾಶಾಡ ನಕ್ಷತ್ರದಲ್ಲಿ ಜನಿಸಿದ ಜನರು ಶುಕ್ರನ ಸಂಚಾರ ಫಲದಿಂದ  ಮಾನಸಿಕವಾಗಿ ಮತ್ತು ದೈಹಿಕವಾಗಿ ಭಾರೀ ಪ್ರಕ್ಷುಬ್ಧತೆಯನ್ನು ಎದುರಿಸುತ್ತಾರೆ.

ಕುಂಭ ರಾಶಿಯಲ್ಲಿನ 4 ಗ್ರಹಗಳ ಮೇಲೆ ಗುರುಗ್ರಹದ ದೃಷ್ಟಿಯು ಸ್ವಲ್ಪ ಮಟ್ಟಿಗೆ ಅವುಗಳನ್ನು ಉಳಿಸುವ ಏಕೈಕ ಅಂಶವಾಗಿದೆ.

ಆಹಾರ ವ್ಯಾಪಾರ (ರೆಸ್ಟೋರೆಂಟುಗಳು ಮತ್ತು ವಿತರಣಾ ಅಪ್ಲಿಕೇಶನ್ನುಗಳು) ಅನೇಕ ದೇಶಗಳಲ್ಲಿ ತೀವ್ರ ಹಿನ್ನಡೆಗಳನ್ನು ಎದುರಿಸುತ್ತವೆ.

ಇರಾನ್ ಮತ್ತು ಇಸ್ರೇಲಿನಲ್ಲಿನ ಪರಿಸ್ಥಿತಿಯನ್ನು  ಸಂಭಾಳಿಸಲು ವಿಶ್ವ ನಾಯಕರು ಮಧ್ಯಪ್ರವೇಶಿಸುತ್ತಾರೆ.

.

Friday, February 20, 2026

"ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ: ಕೆ.ವಿ.ಪ್ರಭಾಕರ್

 ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಪ್ರೆಸ್‌ ಕ್ಲಬ್‌ನ ‘ವರ್ಷದ ವ್ಯಕ್ತಿ’ಪ್ರಶಸ್ತಿ

- ರಾಘವೇಂದ್ರ ಅಡಿಗ ಎಚ್ಚೆನ್.

ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಇಲ್ಲಿನ ಪ್ರೆಸ್ ಕ್ಲಬ್ ನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪ್ರೆಸ್ ಕ್ಲಬ್ ನೀಡಿದ  ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಯೇ ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟತೆ ಮತ್ತು ಖಚಿತತೆ ಸತೀಶ್ ಜಾರಕಿಹೊಳಿಯವರಿಗೆ ಇರುವ ಕಾರಣದಿಂದಲೇ ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ  ಜಾರಕಿಹೊಳಿಯವರನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ.  ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ತೇರನ್ನು ಎಳೆಯುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗಳ ಪಕ್ಕದಲ್ಲೇ ಜಾರಕಿಹೊಳಿಯವರ ಕೈಗಳಿವೆ ಎಂದು ನುಡಿದರು.
ಜಾರಕಿಹೊಳಿಯವರು ಹೆಚ್ಚು ಮಾತಾಡುವುದಿಲ್ಲ, ಐವತ್ತು ಮಂದಿ ಸೇರಿರುವ ಸಭೆಯಾಗಲಿ, ಐದು ಲಕ್ಷ ಮಂದಿ ಸೇರಿರುವ ಸಭೆಯಾಗಲಿ ಐದೇ ನಿಮಿಷದಲ್ಲಿ ಮಾತು ಮುಗಿಸುತ್ತಾರೆ ಎಂದು ಬಹಳ ಮಂದಿ ನನಗೆ ಹೇಳಿದ್ದಾರೆ. ಅವರಿಗೆಲ್ಲಾ ನಾನು ಒಂದೇ ಉತ್ತರ ಕೊಡುತ್ತೇನೆ, "ದಡದಲ್ಲಿ ನಿಂತು ನೋಡುವಾಗ ಸಮುದ್ರ ಬಹಳ ಪ್ರಶಾಂತವಾಗಿ ಕಾಣುತ್ತದೆ. ಆದರೆ ಸಮುದ್ರದ ರಭಸ ಇರುವುದು ಅದರ ಆಳದಲ್ಲಿ. ಜಾರಕಿಹೊಳಿಯವರ ಮೌನದ ಆಳದಲ್ಲಿ ಅವರ ರಭಸ ಇದೆ. ಆ ರಭಸ ಅವರ ಕೆಲಸದಲ್ಲಿ ಕಾಣುತ್ತದೆ ಎಂದರು.
ಯಾವತ್ತು Easy chair politics ಗೆ ಒರಗಿಕೊಳ್ಳದ ಸತೀಶ್ ಅವರು ಬಹಳ ಕಷ್ಟವಾದ ಹಾದಿಯನ್ನೇ ಆರಿಸಿಕೊಂಡು ಅದರಲ್ಲಿ ಸಕ್ಸಸ್ ಆಗುತ್ತಾರೆ. ಇದು ಸ್ಪಷ್ಟವಾಗಿ ಮತ್ತೊಮ್ಮೆ ಗೋಚರಿಸಿದ್ದು ಶಿಗ್ಗಾಂವ್ ಉಪ ಚುನಾವಣೆಯಲ್ಲಿ. ಯಾವ ಮಾಧ್ಯಮದವರೂ ಕಲ್ಪಿಸಿಕೊಳ್ಳದ ರೀತಿಯಲ್ಲಿ ಹಲವು ಸವಾಲುಗಳ ನಡುವೆಯೂ ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಂಡೇ ಬಂದರು. ಇದಕ್ಕಾಗಿ ಅವರು ಮಾಡಿದ ಕೆಲಸವನ್ನು ನಾನು ಬಹಳ ಹತ್ತಿರದಿಂದ ಗಮನಿಸಿದ್ದೇನೆ."

"ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಹೇಗೆ ಇಡೀ ಕ್ಷೇತ್ರದ ತುಂಬ ಹರಡಿ ಹೋಗಿದ್ದರು. ಅವರ ಮೂಲಕ ಹೇಗೆ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಿಸಿದರು ಎನ್ನುವುದು ಪ್ರತಿಯೊಬ್ಬ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಪಾಠ ಆಗುತ್ತದೆ ಎಂದು ವಿವರಿಸಿದರು.
ಸೈದ್ಧಾಂತಿಕ ರಾಜಕಾರಣ ಅಳಿವಿನ‌ ಅಂಚಿನಲ್ಲಿರುವ ಈ ಕಾಲಘಟ್ಟದಲ್ಲಿ "ಮಾನವ ಬಂಧುತ್ವ ವೇದಿಕೆ" ಮೂಲಕ ಇಡೀ ರಾಜ್ಯದಲ್ಲಿ ಸೈದ್ಧಾಂತಿಕ‌ ಪಡೆಯನ್ನು ಕಟ್ಟುತ್ತಿದ್ದಾರೆ. ಇವತ್ತು ಅಭಿಮಾನಿ ಪಡೆಯನ್ನು ಕಟ್ಟುವುದು ಬಹಳ ಸಲೀಸು. ಧಾರವಾಹಿ ನಟರೂ ಅಭಿಮಾನಿ ಪಡೆ ಕಟ್ಟುತ್ತಾರೆ. ಆದರೆ ಸೈದ್ಧಾಂತಿಕ‌ ಪಡೆ ಕಟ್ಟವುದು ಬಹಳ ದೊಡ್ಡ ಸವಾಲು. ಅಧಿಕಾರ-ಹಣ-ಜಾತಿಯ ಬಲ ಇದ್ದರೆ ರಾತ್ರಿ ಬೆಳಗಾಗುವುದರೊಳಗೆ ಅಭಿಮಾನಿಗಳು ಸಾಲುಗಟ್ಟುತ್ತಾರೆ. ಆದರೆ ಸೈದ್ದಾಂತಿಕ ಪಡೆ ಕಟ್ಟಲು ನಿತ್ಯ ಕಸರತ್ತು ಮಾಡಬೇಕಾಗುತ್ತದೆ. ಈ ಕಸರತ್ತನ್ನು ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯದ ತುಂಬ ಮಾಡುತ್ತಿದ್ದಾರೆ. ಈ ಮಾನವ ಬಂಧುತ್ವ ವೇದಿಕೆ ಕಾಂಗ್ರೆಸ್ಸಿಗೆ ಸೈದ್ಧಾಂತಿಕವಾಗಿ ನೀರು ಗೊಬ್ಬರ ಹಾಕುತ್ತಿದೆ ಎಂದು ವಿವರಿಸಿದರು.
ಜಾರಕಿಹೊಳಿ ಅವರಲ್ಲದೆ ಬೇರೆ ಯಾರಾದರೂ ಲೋಕೋಪಯೋಗಿ ಇಲಾಖೆ ಸಚಿವರಾಗಿದಿದ್ದರೆ ಇಷ್ಟೊತ್ತಿಗೆ ಹೈರಾಣಾಗಿಬಿಡುತ್ತಿದ್ದರು. ಹಿಂದಿನ ಸರ್ಕಾರ ಮಾಡಿಟ್ಟು ಹೋಗಿರುವ ಅನಾಹುತಗಳು ಮತ್ತು ವಿಪರೀತ ಆರ್ಥಿಕ ಹೊರೆಯ ಬಳಿಕವೂ ಸಮತೋಲನದಿಂದ  ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕೇ ನಾನು ಆಗಲೇ ಹೇಳಿದ್ದು, ಸತೀಶ್ ಅವರು ಕಷ್ಟವಾದ ಸವಾಲುಗಳಿಗೇ ಕೈ ಹಾಕಿ ಅದರಲ್ಲಿ ಸಕ್ಸಸ್ ಆಗುತ್ತಾರೆ.
ಬೆಳಗಾವಿ ರಾಜಕಾರಣದಲ್ಲಿ ಸಕ್ಸಸ್ ಆದವರು ರಾಜ್ಯ ರಾಜಕಾರಣದಲ್ಲಿ ಸಕ್ಸಸ್ ಆಗುವುದರಲ್ಲಿ ಅನುಮಾನಗಳೇ ಇಲ್ಲ.  ಹಾಗೆಯೇ ಬಹಳ ದೊಡ್ಡ ಉದ್ಯಮಿಯಾಗಿ ಸಕ್ಸಸ್ ಆಗಿದ್ದರೂ, ಉದ್ಯಮ ಮತ್ತು ರಾಜಕಾರಣವನ್ನು ಪರಸ್ಪರ ಬೆರೆಸದೆ ಸ್ಪಷ್ಟ ಅಂತರ ಕಾಯ್ದುಕೊಳ್ಳುವಲ್ಲೂ ಸಕ್ಸಸ್ ಆಗಿದ್ದಾರೆ.  ಈ ಎಲ್ಲಾ ಕಾರಣಗಳಿಂದ ಬೆಂಗಳೂರು ಪ್ರೆಸ್ ಕ್ಲಬ್ , ವರ್ಷದ ವ್ಯಕ್ತಿ ಪ್ರಶಸ್ತಿಗೆ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾರ್ನಮಿ MOVIE REVIEW : ಪ್ರೀತಿ, ದ್ವೇಷ ಮತ್ತು ಹುಲಿವೇಷ

 - ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: ಮಾರ್ನಮಿ
ನಿರ್ದೇಶನ: ರಿಷಿತ್‌ ಶೆಟ್ಟಿ
ನಿರ್ಮಾಣ:  ಗುಣಾಢ್ಯ ಪ್ರೊಡಕ್ಷನ್ಸ್  - ಶಿಲ್ಪಾ ನಿಶಾಂತ್, ನಿಶಾಂತ್ ಮುನಿಸ್ವಾಮಯ್ಯ
ತಾರಾಗಣ: ರಿತ್ವಿಕ್ ಮಠದ್‌, ಚೈತ್ರಾ ಆಚಾರ್, ಸೋನು ಗೌಡ, ಪ್ರಕಾಶ್‌ ತುಮ್ಮಿನಾಡು, ಜ್ಯೋತಿಶ್‌ ಶೆಟ್ಟಿ, ಸ್ವರಾಜ್ ಶೆಟ್ಟಿ,  ಸುಮನ್‌ ತಲ್ವಾರ್‌ ಮೊದಲಾದವರು
ರೇಟಿಂಗ್: 3/5 


ಚೇತು (ರಿತ್ವಿಕ್)‌ಗೆ ಚಿಕ್ಕ ವಯಸ್ಸಿನಲ್ಲಿ ಸೀತಾಳೆ ಸಿಡುಬು ಉಂಟಾಗಿದ್ದಾಗ ಅವನ ತಾಯಿ ಈರಿನ ದೇವಿಗೆ ನನ್ನ ಮಗ ಗುಣವಾದರೆ ಮುಂದೆ ಅವನಿಂದ ಮಾರ್ನಮಿ ( ನವರಾತ್ರಿ) ಉತ್ಸವಕ್ಕೆ ಹುಲಿವೇಷದ ಕುಣಿತ ಮಾಡಿಸುವುದಾಗಿ ಹರಕೆ ಕಟ್ಟಿಕೊಂಡಿರುತ್ತಾಳೆ. ಆದರೆ ತಾಯಿ ಅವನು ಚಿಕ್ಕವನಿರುವಾಗಲೇ ತೀರಿ ಹೋದ ಕಾರಣ ಚೇತು  ಮಾವನ ಆಸರೆಯಲ್ಲಿ ಬೆಳೆಯುತ್ತಾನೆ.  ಅವನೊಬ್ಬ ಯುವನಾಕನಾಗಿ ಊರಿನ ಪ್ರಮುಖರೆಲ್ಲರ ಕಣ್ಣು ಸೆಳೆಯುವಂತೆ ಬೆಳೆಯುತ್ತಿರುವಾಗಾಗಲೇ ಅದೇ ಊರಿನ ದೀಕ್ಷಾ  (ಚೈತ್ರಾ ಆಚಾರ್)‌ ಆಗಮನವಾಗುತ್ತದೆ. ಚೇತು ಹಾಗೂ ದೀಕ್ಷಾ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವಾಗಲೇ ವಿಧಿಯಾಟ ಎನ್ನುವಂತೆ ಅನಿರೀಕ್ಷಿತ ತಿರುವು ಬರುತ್ತದೆ. ಆ ಸಮಸ್ಯೆಗೆ ಕಾರಣವೇನು? ಅದರಿಂದ ಚೇತು ಹೇಗೆ ಪಾರಾದ? ಇದನ್ನು ತಿಳಿಯಲು ನೀವು  ಈ ವಾರ ತೆರೆಗೆ ಬಂದ "ಮಾರ್ನಮಿ" ಚಿತ್ರವನ್ನು ಸಿಇನಿಮಾ ಮಂದಿರದಲ್ಲಿ ನೋಡಬೇಕು.
ನಿರ್ದೇಶಕ ರಿಷಿತ್‌ ಶೆಟ್ಟಿತಮ್ಮ ಚೊಚ್ಚಲ ಚಿತ್ರದಲ್ಲಿ ಭರವಸೆ ಹುಟ್ಟಿಸಿದ್ದಾರೆ. ತುಳುನಾಡಿನ ಮಾರ್ನಮಿ ಆಚರಣೆ, ಹುಲಿವೇಷದ ಕುಣಿತ, ಅದಕ್ಕೆ ಬೇಕಾದ ತಯಾರಿಗಳು ಇದನ್ನು ಸ್ವಲ್ಪ ವಿವರವಾಗಿಯೇ ತೋರಿಸಲಾಗಿದೆ. ಆದರೆ ಪ್ರಥಮಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ಸ್ವಲ್ಪ ನಿಧಾನಗತಿಯೆಂದು ತೋರುತ್ತದೆ. . ಚರಣ್‌ ರಾಜ್‌ ಅವರ ಸಂಗೀತದಲ್ಲಿ "ಏ ಮಾರಾಯ.." ಹಾಡು ಮತ್ತೆ ಮತ್ತೆ ಕೇಳಬೇಕು ಎನಿಸುವಂತಿದೆ. , . ಶಿವಸೇನ ಅವರ ಛಾಯಾಗ್ರಹಣ ಮೆಚ್ಚುವಂತಿದೆ.
ಕಿರುತೆರೆಯಲ್ಲಿ ಹೆಸರಾದ ರಿತ್ವಿಕ್ ಮಠದ್‌  ಈ ಚಿತ್ರದ ಮೂಲಕ ನಾಯಕ ನಟನಾಗಿದ್ದಾರೆ. ಮೂಲತಃಅ ಉತ್ತರ ಕರ್ನಾತಕದವರಾದ ರಿತ್ವಿಕ್ ಮಠದ್‌ ಕರಾವಳಿ ಹುಡುಗನಾಗಿ ಅಭಿನಯಿಸುವ ಮೂಲಕ ಮನಸ್ಸು ತಟ್ಟುತ್ತಾರೆ. ಅವರದು ಇದರಲ್ಲಿ ಎರಡು ಶೇಡ್ ನ ಪಾತ್ರವಿದೆ. ಇನ್ನು ಚೈತ್ರಾ ಆಚಾರ್ ಅಭಿನಯಕ್ಕೆ ಮೆಚ್ಚುಗೆ ಸೂಚಿಸಲೇಬೇಕು. ಇವರೊಂದಿಗೆ ಪ್ರಕಾಶ್‌ ತುಮ್ಮಿನಾಡು, ಜ್ಯೋತಿಶ್‌ ಶೆಟ್ಟಿ, ಸ್ವರಾಜ್ ಶೆಟ್ಟಿ,  ಸುಮನ್‌ ತಲ್ವಾರ್‌ ಅವರು ಕಥೆಗೆ ತಕ್ಕ ಅಭಿನಯ ಕೊಟ್ಟಿದ್ದರೆ ಸೋನು ಗೌಡ ಒಂದು ವಿಶೇಷ ಪಾತ್ರದಲ್ಲಿ ಬಂದು ಹೋಗುತ್ತಾರೆ. ಒಟ್ಟಾರೆ "ಮಾರ್ನಮಿ" ಒಂದು ಉತ್ತಮ ಮನರಂಜನಾತ್ಮಕ ಚಿತ್ರ ಎನ್ನಲು ಯಾವ ಅಡ್ಡಿಯೂ ಇಲ್ಲ. 

Monday, February 02, 2026

ವಲವಾರ ಚಿತ್ರ ವಿಮರ್ಶೆ - ಒಂದೇ ರಾತ್ರಿಯಲ್ಲಿ ಜೀವನಾನುಭವ ಕಲಿಸುವ 'ಗೌರ’, ಬಾಲ್ಯವನ್ನು ಕಳೆದುಕೊಂಡವರ ಸಿನಿಮಾ


- ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ –  ವಲವಾರ

ನಿರ್ಮಾಪಕರು – ಜೆ. ಗಿರಿಧರ್,   ಅನಿರುದ್ ಗೌತಮ್, ಸಹನ ನಾಗರಾಜ್, ಸಾನ್ಯಾ ಅರೋರ.

ನಿರ್ದೇಶನ –  ಸುತಾನ್ ಗೌಡ

ಕಲಾವಿದರು – ವೇದಿಕ್ ಕೌಶಲ್, ಶಯನ್, ಮಾಲತೇಶ್, ಹರ್ಷಿತಾ ಗೌಡ, ಅಭಯ್ ಮುಂತಾದವರು.

ರೇಟಿಂಗ್: 3.5/5



“ವಲವಾರ” ಚಿತ್ರವು ಈವಾರ ಬಿಡುಗಡೆಯಾದ ಕನ್ನಡ ಸಿನಿಮಾವಾಗಿದ್ದು, ಸುತಾನ್ ಗೌಡ ನಿರ್ದೇಶನದಲ್ಲಿ ತಯಾರಾಗಿದೆ. ಇದು ಬಡ ಕುಟುಂಬದಲ್ಲಿನ ಮಕ್ಕಳ ಮನಸ್ಥಿತಿ ಹಾಗೂ ಮಕ್ಕಳಿನ ನಡುವಿನ ತಾರತಮ್ಯದ ಬಗ್ಗೆ ಹೆಣೆಯಲಾದ ಕಥೆಯಾಗಿದೆ. 

ಚಿಕ್ಕಹಳ್ಳಿ ಊರಿನ ಬಡ ಕುಟುಂಬದಲ್ಲಿ ಕುಂಡೇಸಿ (ವೇದಿಕ್ ಕೌಶಲ್) ಮತ್ತು ಚಿಕ್ಕ ತಮ್ಮ ಕೊಸುಡಿ (ಶಯನ್) ಅಣ್ಣ-ತಮ್ಮಂದಿರು. ತಂದೆ (ಮಾಲತೇಶ್) ಚಿಕ್ಕ ಮಗನಿಗೆ ಹೆಚ್ಚು ಪ್ರೀತಿ ತೋರುತ್ತಾನೆ, ಹಿರಿಯ ಮಗ ಕುಂಡೇಸಿಯನ್ನು ಕಂಡರೆ ಸಿಡುಕುವುದು, ಹೊಡೆಯುವುದು, ರೇಗುವುದೆ ಮಾಡುತ್ತಾನೆ ಇದರಿಂದ ಕುಂಡೇಸಿ ಮಾನಸಿಕವಾಗಿ ನೋವು ಅನುಭವಿಸುತ್ತಾನೆ. ತಂದೆಯನ್ನು ಕಟ್ಟಿಹಾಕಿ ಹೊಡೆಯಬೇಕೆಂಬ ಅವನ ಸುಪ್ತ ಮನಸ್ಸಿನ ವ್ಯಾಕುಲತೆಯನ್ನು ನಿರ್ದೇಶಕರು ಮೊದಲ ದೃಶ್ಯದಲ್ಲೇ ಕನಸಿನ ಮೂಲಕ ತೋರಿಸಿದ್ದಾರೆ. ತಂದೆ ಮಾಲತೇಶ್ ಗೆ ಅವರ ಅಪ್ಪನ ಕಡೆಯಿಂದ ಬಂದ ಒಂದಷ್ಟು ಭೂಮಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಶತಾಯ ಗತಾಯ ಕಷ್ಟ ಪಡುತ್ತಲೇ ಇರುತ್ತಾನೆ. ಹಾಗೆ ರಿಜಿಸ್ಟ್ರಾರ್ ಕಛೇರಿಯ ಅಧಿಕಾರಿ ನಿಮ್ಮ ಮನೆಯ ಹಸು ಕರು ಹಾಕಿದ ಕೂಡಲೇ ಅದರ ಮೊದಲ ಗಿಣ್ಣು ಹಾಲು ತಂದು ಕೊಡುವಂತೆ ಹೇಳಿರುತ್ತಾನೆ. ಆದರೆ ಹಸು ಕರು ಹಾಕಬಾಕಾದ ನಿಗದಿತ ದಿನಾಂಕ ಮುಗಿದು 15 ದಿನವಾಗಿದ್ದರೂ ಕರು ಹಾಕಿರುವುದಿಲ್ಲ. ಈ ಎಲ್ಲಾ ಗೊಂದಲಗಳಿಂದ ಬೇಸತ್ತಿದ್ದ ಮಾಲತೇಶ್ ತನ್ನ ಕೋಪ, ದುಗುಡವನ್ನೆಲ್ಲಾ ಮಗ ಕುಂಡೇಸಿ ಮೇಲೆ ತೀರಿಸಿ ಕೊಳ್ಳುತ್ತಿರುತ್ತಾನೆ. ಆದರೆ ಕುಂಡೇಸಿಗೆ ಎಲ್ಲಾ ರೀತಿಯಲ್ಲಿ ಸಮಾಧಾನ ಮಾಡಿ, ಪ್ರೀತಿ ತೋರಿಸಿ ಸಂತೈಸುವುದು ಅವನ ತಾಯಿ. ಒಂದು ದಿನ ಅಪ್ಪ ಸಿಟಿಗೆ ಹೋದಾಗ ಹಸುವನ್ನು ಮೇಯಿಸಲು ಅಣ್ಣ, ತಮ್ಮರಾದ ಕುಂಡೇಸಿ ಮಾತ್ತು ಕೋಸೂಡಿ ಇಬ್ಬರು ಹೋಗುತ್ತಾರೆ. ತಮ್ಮನ ಎಡವಟ್ಟಿನಿಂದ ಗೌರಿ ಹಸು ಕಾಣೆಯಾದಾಗ, ಕುಂಡೇಸಿ ಅಪ್ಪನಿಗೆ ಗೊತ್ತಾದರೆ ಏನು ಮಾಡುವುದು ಎಂದು ನನೆದು ಹೆದರುತ್ತಾನೆ. ಒಂದೇ ರಾತ್ರಿಯಲ್ಲಿ ಬದುಕಿನ ಹಲವು ಕಷ್ಟಗಳನ್ನು ಎದುರಿಸುತ್ತಾನೆ. 


ಚಿತ್ರವು  ಮಗುವಿನ ಭಯ, ಅತಂಕದ ನಿರ್ಧಾರಗಳನ್ನು ಒಳಗೊಂಡಿದೆ. ನಟನೆ ಮತ್ತು ತಂತ್ರಗಾರಿಕೆ ವೇದಿಕ್ ಕೌಶಲ್‌ನ ಕುಂಡೇಸಿ ಪಾತ್ರ ಹಾಗೂ ಕೋಸೂಡಿ ಶಯನ್‌ ಪಾತ್ರಗಳ ಅಭಿನಯ  ಅಚ್ಚುಕಟ್ಟಾಗಿ ಮತ್ತು ಭಾವನಾತ್ಮಕವಾಗಿದೆ, ಹರ್ಷಿತಾ ಗೌಡ ತಾಯಿಯಾಗಿ ಮತ್ತು ಮಾಲತೇಶ್ ತಂದೆಯಾಗಿ ಸಹಜವಾಗಿ ಕಾಣುತ್ತಾರೆ. ಅಭಯ್ ಕೋಳಿ ಕಳ್ಳನಾಗಿ ನೈಜವಾಗಿ ಅಭಿನಯಿಸಿದ್ದಾರೆ.

ಬಾಲರಾಜ್ ಗೌಡ ರವರ ಛಾಯಾಗ್ರಹಣ, ಕದ್ರಿ ಮಣಿಕಾಂತ್ ರವರ ಸಂಗೀತ ಮತ್ತು ಸರಳ ಚಿತ್ರಕಥೆ ಚಿತ್ರದ ಶಕ್ತಿಯಾಗಿದೆ. ಮಕ್ಕಳಲ್ಲಿ ತಾರತಮ್ಯ ಮಾಡಬಾರದು ಮತ್ತು ಮಕ್ಕಳ ಚಿಕ್ಕ ಚಿಕ್ಕ ಆಸೆಗಳನ್ನು ಕಡೆಗಣಿಸ ಬಾರದು ಎಂಬುದನ್ನು ನಿರ್ದೇಶಕರು ಚನ್ನಾಗಿ ತೋರಿಸಿದ್ದಾರೆ.

Monday, January 19, 2026

ಇದು ನಿಮ್ಮ ವಾಹಿನಿ ಕಲಾ ವೇದಿಕೆ 20ನೇ ಸಾಂಸ್ಕೃತಿಕ ಸಿಂಚನ - ಹೊಸ ವರ್ಷದ ಹಾಗೂ ಸಂಕ್ರಾಂತಿ ಸಂಭ್ರಮ


- ರಾಘವೇಂದ್ರ ಅಡಿಗ ಎಚ್ಚೆನ್. 




ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಹೊಸ ವರ್ಷದ ಹಾಗೂ ಸಂಕ್ರಾಂತಿ ಹಬ್ಬದ ಅಂಗವಾಗಿ 20ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ಜನವರಿ 18ರ ಭಾನುವಾರದಂದು ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.. ಈ ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಡಲಾಯಿತು.. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಹಿರಿಯ ಪತ್ರಕರ್ತರಾದ ಗಂಡಸಿ ಸದಾನಂದ ಸ್ವಾಮಿ ಅವರು ವಹಿಸಿಕೊಂಡಿದ್ದರು. ವಿಶೇಷ ಆಹ್ವಾನಿತರಾಗಿ ರಾಜ್ ನ್ಯೂಸ್ ಪ್ರಧಾನ ಸಂಪಾದಕರಾದ ಬಿಎಸ್ ಮಂಜುನಾಥ್, ರಾಜ್ ನ್ಯೂಸ್ ನಿರ್ದೇಶಕರಾದ ಎನ್‌ಪಿ ಅನಿಲ್ ಕುಮಾರ್, ಗಾಯಕರು ಹಾಗೂ ನಟರಾದ ಶಶಿಧರ್ ಕೋಟೆ ಹಾಗೂ ಇವೆಂಟ್ ಕೋ ಆರ್ಡಿನೇಟರ್ ಶ್ರೀಮತಿ ಚಂದ್ರಿಕಾ ಅವರು ವಹಿಸಿಕೊಂಡಿದ್ದರು.. ಎಲ್ಲರೂ ಜೊತೆಗೂಡಿ ದೀಪ ಬೇಕಾಗುವ ಮೂಲಕ ಜೊತೆಗೆ ಕನ್ನಡಾಂಬೆಗೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.. ಕಾರ್ಯಕ್ರಮದಲ್ಲಿ ಹಲವು ಪ್ರತಿಭೆಗಳನ್ನ ಗುರುತಿಸಿ ಸನ್ಮಾನಿಸಲಾಯಿತು.. 




ಇನ್ನು ದ್ವಿತೀಯಾರ್ಥದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಂ ನರಸಿಂಹಲು, ನಾಟ್ಯ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಕಾರ್ಯದರ್ಶಿಯಾದ ಶ್ರೀಮತಿ ಮೋನಿಕಾ ನವೀನ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.. ವಿಶೇಷ ಅತಿಥಿಗಳಾಗಿ ಸ್ಕ್ರೀನಿಂಗ್ ಸ್ಟಾರ್ ಸೊಲ್ಯೂಷನ್ಸ್ ನಿರ್ದೇಶಕರಾದ ಮಂಜುನಾಥ್ ಎಚ್ ಎಸ್ ರವರು ಹಾಗೂ ಶ್ರೇಯಸ್ ಎಂಟರ್ಪ್ರೈಸಸ್ ನಿರ್ದೇಶಕರಾದ ಮಂಜಪ್ಪ ಅವರು ವಹಿಸಿಕೊಂಡಿದ್ದರು.. ಮುಖ್ಯ ಅತಿಥಿಗಳಾಗಿ ಉದಯ ಕಾಮಿಡಿಯ ನಿರೂಪಕರಾದ ಮುದ್ದುಕೃಷ್ಣರವರು  ಎಲ್ಲರೂ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.. 



ಇನ್ನು ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳು ಭಾಗವಹಿಸಿದ್ದು ನೂರಾರು ಪ್ರತಿಭಾನ್ವಿತರು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನ ನಡೆಸಿದ್ದು ವಿಶೇಷವಾಗಿತ್ತು. ಈ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿದ್ದು, ಕನ್ನಡವನ್ನ ಉಳಿಸಿ ಬೆಳೆಸುವ ಜೊತೆಗೆ , ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯಲಿದೆ ಎಂದು ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಅವರು ತಿಳಿಸಿದರು



Monday, January 12, 2026

ಬೋಲ್ಡ್ ನಟಿ ಸಂಗೀತಾ ಭಟ್

 - ರಾಘವೇಂದ್ರ ಅಡಿಗ ಎಚ್ಚೆನ್.

ಕಮಲ್ ಶ್ರೀದೇವಿ' ಕಸದಲ್ಲಿನ ನೈಜ ಅಭಿನಯಕ್ಕೆ ಹೆಸರಾದ ನಟಿ ಈ ಭಟ್, ಕನ್ನಡದಲ್ಲಿ ಒಬ್ಬ ಹೊಸ ಪ್ರತಿಭೆಯಾಗಿ ಮಿಂಚಲಿದ್ದಾರೆ. ತಮ್ಮ ನವರೆಯ ಕುರಿತು ಈತ ಹೇಳಿರುವುದೇನು....?


ಚಂದನವನದಲ್ಲಿ ತನ್ನ ನೈಜ ನಟನೆಯ ಮೂಲಕ ಮೋಡಿ ಮಾಡಿದ ಬೆಡಗಿ ಸಂಗೀತ ಭಟ್ ಮತ್ತೊಮ್ಮೆಕಮಾಲ್ ಮಾಡೋಕ ತಯಾರಾಗಿದ್ದಾರೆ. ಅವರ 'ಕಮಲ್ ಶ್ರೀದೇವಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಕೈಮ್ ಡ್ರಿಲ್ಲರ್ ಕಥಾ ನಾಯಕಿಯಾದ ಸಂಗೀತಾ ಭಟ್ ಅದಾಗಲೇ ಚಿತ್ರರಂಗಕ್ಕೆ ಎಂಟ್ರಿಯಾಗಿ ದಶಕದ ಮೇಲಾಗಿದೆ. ಅವರ ಸಿನಿ ಪಯಣ ಹಾಗೂ ಜೀವನದ ಒಂದು ಚಿಕ್ಕ ಪರಿಚಯ ಇಲ್ಲಿದೆ.

ನಟಿ ಸಂಗೀತಾ ಭಟ್ 1992 ಜುಲೈ 4 ರಂದು ಜನಿಸಿದರು. ಹತ್ತನೇ ತರಗತಿಯಲ್ಲಿದ್ದಾಗ ಸಂಗೀತಾರ ತಂದೆ ತೀರಿಹೋಗಿದ್ದು ಆ ಬಳಿಕ ಹೊಟ್ಟೆಪಾಡಿಗಾಗಿ ಚಿತ್ರರಂಗದತ್ತ ಆಗಮಿಸಿದ ನಟಿ 2014ರಲ್ಲಿ ಪ್ರೀತಿ ಗೀತಿ ಇತ್ಯಾದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಸಂಗೀತಾ ನಟಿಸಿದ್ದಾರೆ.

'ಪ್ರೀತಿ ಗೀತಿ ಇತ್ಯಾದಿ, ಎರಡನೇ ಸಲ, ಕಿಸ್ಮತ್, ಅಳಿದು ಉಳಿದವರು, ಕಪಟನಾಟಕ ಸೂತ್ರಧಾರಿ, ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಅವರು ಧನ೦ಜಯ್ ನಟನೆಯ 'ಎರಡನೇ ಸಲ, ದಯವಿಟ್ಟು ಗಮನಿಸಿ, ಆದ್ಯ, ಅನುಕ್ತ' ಮೊದಲಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. 

ಇವರಿಗೆ ಹೆಸರು ತಂದುಕೊಟ್ಟ ಚಿತ್ರ ಎಂದರೆ 'ಎರಡನೇ ಸಲ ಕೆಲವೊಂದು ವೈಯಕ್ತಿಕ ಕಾರಣಗಳಿಂದ ಚಿತ್ರರಂಗದಿಂದ ದೂರವಾಗಿದ್ದ ಈ ನಟಿ 'ಕಾಂತಾ' ಚಿತ್ರದ ಮೂಲಕ ಮತ್ತೆ ಸಕ್ರಿಯವಾದರು. ಆದರೆ ಚಿತ್ರ ನಿರೀಕ್ಷೆಯ ಮಟ್ಟದಲ್ಲಿ ಯಶಸ್ವಿ ಆಗಲಿಲ್ಲ.

ಸಂಗೀತಾ ತಾವು ಸಿನಿಮಾ ಮಾತ್ರವಲ್ಲದೆ, ಕಿರುತೆರೆಯಲ್ಲಿ ಕೂಡಾ ತಮ್ಮಭಾವು ತೋರಿಸಿದ್ದು 'ಪಂಜರದ ಗಿಳಿ, ಭಾಗ್ಯವಂತರು. ಚಂದ್ರಚಕೋರಿ, ನೀಲಿ, ಚಂದ್ರಮುಖಿ

ಮೊದಲಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದಲ್ಲದೆ ರಿಯಾಲಿಟಿ ಶೋಗಳಾದ ಲೈಫ್ ಸೂಪರ್ ಗುರು, ಬಿ.ಸಿ.ಎಲ್. ಗಳಲ್ಲಿ ಸಹ ಭಾಗವಹಿಸಿದರು. 

ಹೀಗೆ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಈ ನಟಿಯ ಪತಿ ಸಹ ಪ್ರತಿಭಾವಂತ ಕಲಾವಿದರೇ ಆಗಿದ್ದಾರೆ. ಅವರ ಪತಿ ಸುದರ್ಶನ್ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. "ಭಾಗ್ಯಲಕ್ಷ್ಮಿ" ಧಾರಾವಾಹಿಯ ತಾಂಡವ್ ಪಾತ್ರದ ಮೂಲಕ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸುದರ್ಶನ್ ಸಹ ಒಬ್ಬ ಪ್ರಮುಖ ಸ್ಟಾಂಡಪ್ ಕಾಮಿಡಿ ನಟ ಆಗಿದ್ದಾರೆ. 


"ಅಣ್ಣ" ಎನ್ನುತ್ತಿದ್ದವನನ್ನೇ ವರಿಸಿದ ಸಂಗೀತಾ!

ಸುದರ್ಶನ್ ಹಾಗೂ ಸಂಗೀತಾ ನಡುವಿನ  ಪ್ರೀತಿ ಹಾಗೂ ವಿವಾಹದ ಕಥೆ ಕೂಡ ಸ್ವಾರಸ್ಯವಾಗಿದೆ. ತಮ್ಮ ಹಾಗೂ ಸುದರ್ಶನ್‌ರ ಪ್ರೀತಿ ಮತ್ತು ಮದುವೆ ವಿಷಯವಾಗಿ ಸಂಗೀತಾ ಹೀಗೆ ವಿವರಿಸುತ್ತಾರೆ - 'ಸುದರ್ಶನ್ ಹಾಗೂ ನಾನು ಪ್ರೀತಿ ಗೀತಿ ಇತ್ಯಾದಿ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದೆವು.

ತಮಾಷೆ ಎಂದರೆ ಮದುವೆಗೆ ಮುನ್ನ ಸುದರ್ಶನ್‌ರನ್ನು ನಾನು ಅಣ್ಣ' ಎನ್ನುತ್ತಿದ್ದೆ. ನನಗೆ ಚಿಕ್ಕವಯಸ್ಸಿನಿಂದಲೂ ಒಂದು ಅಭ್ಯಾಸವೆಂದರೆ ಎಲ್ಲರನ್ನೂ ಅಣ್ಣ ಅಕ್ಕ ಎಂದೇ ಮಾತನಾಡಿಸುವ ರೂಢಿ, ಚಿಕ್ಕ ವಯಸ್ಸಿನಲ್ಲೇ ಇಂಡಸ್ಟ್ರಿಗೆ ಬಂದಿದ್ದರಿಂದ ಇಲ್ಲೂ ಅದನ್ನು ಮುಂದುವರಿಸಿದ.

“ಹಾಗೆಯೇ ಇವರ ಜೊತೆ ಕೆಲಸ ಮಾಡುವಾಗ, ನಿಮ್ಮನ್ನು ಅಣ್ಣ ಅಂತ ಕರೆಯಲಾ ನಿಮ್ಮನ್ನು ನೋಡಿದ್ರೆ ನನಗೆ ಹಾಗೆ ಅನಿಸ್ತಿದೆ,' ಎಂದಿದ್ದೆ. ಆದರೆ ಕ್ರಮೇಣ ನಮ್ಮಿಬ್ಬರ ನಡುವೆ ಪ್ರೀತಿ ಚಿಗುರಿತು. ಸಿನಿಮಾ ಸೆಟ್‌ಗೆ ಹೋಗುವಾಗ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಿದೆವು, ಆಗ ನಮಗೆ ಮಾತನಾಡಲು ಸಮಯ ಸಿಗುತ್ತಿತ್ತು.

“ಅಲ್ಲಿಂದ ನಮ್ಮಿಬ್ಬರ ಪ್ರೀತಿ ಶುರುವಾಯ್ತು. ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿ ನಾವಿಬ್ಬರೂ ಪ್ರೀತಿ ಇದೆ ಎಂದು ಹೇಳಿಕೊಂಡು ಒಪ್ಪಿಕೊಂಡೆವು. ಇವತ್ತಿಗೂ ನಮಗೆ ಆ ಜಾಗ ತುಂಬಾ ಸ್ಪೆಷಲ್,' ಎನ್ನುತ್ತಾರೆ ಸಂಗೀತಾ.

ಸುದರ್ಶನ್ ಹಾಗೂ ಸಂಗೀತಾ ಮದುವೆಗೆ ಎರಡು ಕುಟುಂಬದವರ ಖುಷಿಯಿಂದ ಒಪ್ಪಿಕೊಂಡರು. ಇವರಿಬ್ಬರ ವಿವಾಹವಾಗಿ ಈಗಾಗಲೇ ಒಂಬತ್ತು ವರ್ಷಗಳಾಗಿವೆ. ಇತ್ತೀಚೆಗೆ ಅವರು ತಮ್ಮ ಸ್ವಂತ ಮನೆಯ ಗೃಹಪ್ರವೇಶ ಸಹ ಮಾಡಿದ್ದಾರೆ.

ಹೊಸ ಮನೆಗೆ 'ಸುಖಾಸ ಎಂದು ಹೆಸರಿಟ್ಟಿದ್ದಾರೆ. ಸುಖಾಸ ನಮಗೆ ಕನಸಿನ ಮನೆ. - ಎಂದರೆ ಸುದರ್ಶನ, ಸುಖ - ಎಂದರೆ ಆಳದ ಸಂತೋಷ ಸ - ಎಂದರೆ ಸಂಗೀತಾ. ಸುಖಾಸ ಎಂದರೆ ನಿಮ್ಮ ಮನೆ, ಖಾಸ ಎಂದರೆ ಗೃಹ ಆಸ ಎಂದರೆ ಆಶ್ರಯ ಎಂದು ಅರ್ಥವಂತೆ. 


ಸಂಗೀತಾ ತಮ್ಮ ಪತಿ ಸುದರ್ಶನ್ ಜೊತೆಯಾಗಿ ತಮ್ಮದೇ ಆದ ನಿರ್ಮಾಣ ಸಂಸ್ಥೆ 'ಸ್ಟಾಟಲ್ ಪ್ರೊಡಕ್ಷನ್ ಎನ್ನುವ ಸಂಸ್ಥೆ ಸಹ ಪ್ರಾರಂಭಿಸಿದ್ದು ಈಗಾಗಲೇ ಒಂದು ಕಿರುಚಿತ್ರವನ್ನು ಹೊರತಂದಿದ್ದಾರೆ. ಅಲ್ಲದೆ, ಸಂಗೀತಾ ಭಟ್ ಹಾಗೂ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ "ಅರವಣಿಪುರಂ" ಸಿನಿಮಾಗೆ ಸುದರ್ಶನ್ ರಂಗಪ್ರಸಾದ್ ನಿರ್ದೇಶನವಿದ್ದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ಬೀಡಿ ಫೋಟೋಶೂಟ್

ಸಂಗೀತಾ ಭಟ್ ಒಂದು ಪೊಟೋಶೂಟ್ ಗಾಗಿ ಬೀಡಿ ಸೇದಿದ ಕಥೆ ಇದು. ಸಿನಿಮಾ ಜೀವನದಲ್ಲಿ ಹೊಸತನವನ್ನು ಪ್ರಯತ್ನಿಸಬೇಕು ಎನ್ನುವುದು ಸಂಗೀತಾ ಅವರ ಆಲೋಚನೆ ಹಾಗಾಗಿ ಈ ಬೀಡಿ  ಸೇದುವ ಫೋಟೋಶೂಟ್ ಮಾಡೋಕೆ ತಯಾರಾದರು. ಆದರೆ ಇವರು ಅಂದಿನವರೆಗೆ ಎಂದೂ ಬೀಡಿ ಸೇದುವುದಿರಲಿ ಮುಟ್ಟಿಯೂ ನೋಡಿರಲಿಲ್ಲ. ಆದರೆ ಫೋಟೋಶೂಟ್‌ಗಾಗಿ ಬೀಡಿ ಸೇದುವುದನ್ನು ಅವರು ಕಲಿಯಬೇಕಾಯಿತು.

ಬೀಡಿಯನ್ನು ಹೇಗೆ ಹಚ್ಚಬೇಕು, ಹೇಗೆ ಧಂ ಎಳೆಯಬೇಕು ಅಂತ ಸೆಟ್ ಹುಡುಗರಿಂದ ಅವರು ಕಲಿತುಕೊಂಡರು. ಆ ಫೋಟೋಶೂಟ್ ಹೇಗೋ ಮುಗಿದಿತ್ತು. ಆದರೆ ಅದಾಗಿ ಎರಡು ದಿನವಿಡೀ ಕೆಮ್ಮು ಅವರನ್ನು ಬಾಧಿಸಿತ್ತು. 

ಅರೋಗ್ಯ ಸೌಂದರ್ಯದ ಗುಟ್ಟು

ಸಂಗೀತಾ ಭಟ್ ನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ಪ್ರಾಣಾಯಾಮದೊಡನೆ ಯೋಗದಲ್ಲಿ ಉಸಿರಾಟದ ನಿಯಂತ್ರಣ ಮಾಡುವ 'ಕಪಾಲಬಾತಿ' ಆಸನವನ್ನು ಅವರು ನಿತ್ಯ ಅಭ್ಯಾಸ ಮಾಡುತ್ತಾರೆ. 'ಪ್ರತಿನಿತ್ಯ ಹತ್ತು ನಿಮಿಷ ಪ್ರಾಣಾಯಾಮ ಮಾಡಿದರೆ ಮನೋಬಲ ಹೆಚ್ಚುತ್ತದೆ, ನಕಾರಾತ್ಮಕ ಆಲೋಚನೆ ಹತ್ತಿರ ಬರುವುದಿಲ್ಲ. ಎಲ್ಲಕ್ಕೂ ಮನೋಸಂಕಲ್ಪ ಅಗತ್ಯ.' ಎನ್ನುವುದು ಸಂಗೀತಾರ ಮಾತು.

ನಿತ್ಯವೂ ಪೌಷ್ಟಿಕಾಂಶಯುಕ್ತ ಆಹಾಸ ಸೇವನೆ ಮಾಡಬೇಕು, ಖಾಲಿ ಹೊಟ್ಟೆಗೆ ಎರಡು ಚಮಚ ಆಪಲ್ ಸೈಡರ್ ವಿನಿಗರ್ ಸೇವಿಸುವುದರ ಜೊತೆಗೆ ಬೆಳಗ್ಗೆ ಓಟ್ಸ್ ಹಾಗೂ ಡೈಫೂಟ್ಸ್ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಎನ್ನುತ್ತಾರೆ.

ಮಧ್ಯಾಹ್ನಕ್ಕೆ ಅನ್ನ, ಸಾರು, ಪಲ್ಯ ಸೇವಿಸುತ್ತಾರೆ. ಮಧ್ಯಾಹ್ನ ಯಾವ ಡಯೆಟ್ ಇರುವುದಿಲ್ಲ. ರಾತ್ರಿ ಕನಿಷ್ಠ ಪ್ರಮಾಣದಲ್ಲಿ ಅನ್ನ ಸೇವಿಸುತ್ತಾರೆ. ಆದಷ್ಟೂ ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಬೇಕು ಎನ್ನುವುದು ಸಂಗೀತಾರ ಸಲಹೆ, ಅವರಿಗೆ ಮೊಸರನ್ನ ಎಂದರೆ ಅಚ್ಚುಮೆಚ್ಚು.

ಸಂಗೀತಾ ಭಟ್ ಬ್ಯೂಟಿ ಪಾರ್ಲರ್ ಅವಲಂಬಿಸಿಲ್ಲ. ಸ್ವತಃ ಅವರೇ ಐದ್ರೋ, ಅಪ್ಪ‌ ಲಿಪ್ ಬ್ರೆಡಿಂಗ್ ಮಾಡಿಕೊಳ್ಳುತ್ತಾರೆ. ರಾತ್ರಿ ಹೊತ್ತು ನೀಮ್ ಫೇಸ್ ಪ್ಯಾಕ್ ಬಳಸುವುದರಿಂದ ಹಾಲುಗೆನ್ನೆಯ ಹೊಳಪು ಹೆಚ್ಚುತ್ತದೆ. ನೈಸರ್ಗಿಕ ಉತ್ಪನ್ನ ಬಳಸಿ ಎರಡು ದಿನಕ್ಕೊಮ್ಮೆ ತ್ವಚೆಯನ್ನು ಸ್ವಚ್ಛ ಮಾಡಿಕೊಳ್ಳುವ ಈ ನಟಿ, ಹೆಚ್ಚಾಗಿ ನೀರು ಮಜ್ಜಿಗೆ, ನಿಂಬೆ ಪಾನಕದ ಸೇವನೆಯೇ ನನ್ನ ಸೌ೦ದರ್ಯದ ಗುಟ್ಟು ಎನ್ನುತ್ತಾರೆ. ತಿಂಗಳಲ್ಲಿ ಎರಡು ದಿನ ಉಪವಾಸ ಮಾಡುವ ಈಕೆ ಆ ದಿನಗಳಲ್ಲಿ ಸ್ವಲ್ಪ ಹಣ್ಣು ಹಾಗೂ ನೀರನ್ನು ಮಾತ್ರವೇ ಸೇವಿಸುತ್ತಾರಂತೆ.

ಚಿತ್ರೋದ್ಯಮದ ಬಗ್ಗೆ ನಟಿಯ ಮಾತು


“ಕೋವಿಡ್ ನಂತರ ಚಿತ್ರರಂಗದ ಡೆಸ್ಟೇಷನ್ಸ್  ಬದಲಾಗಿದೆ. ಈಗ ಚಿತ್ರೋದ್ಯಮದಲ್ಲಿ ತಯಾರಾಗುತ್ತಿರುವ ವಿವಿಧ ರೀತಿಯ ಚಲನಚಿತ್ರಗಳು ಮತ್ತು ಲಭ್ಯವಿರುವ ಅವಕಾಶಗಳು ಬದಲಾದ ಮಾರುಕಟ್ಟೆಯನ್ನು ಸೂಚಿಸುತ್ತವೆ. ಈ ಬದಲಾವಣೆ ಧನಾತ್ಮಕ ಅಥವಾ ಋಣಾತ್ಮಕ ಫಲಿತಾಂಶಗಳನ್ನು ಹೊಂದಿರುತ್ತದೆ. ಅನೇಕ ವರ್ಷಗಳಿಂದಲೂ ನಟನೆಯೊಂದೇ ನನ್ನ ಏಕೈಕ ಪ್ಯಾಶನ್ ಆಗಿದೆ. ನಾನು ಅದನ್ನು ಬಿಡಲು ಸಾಧ್ಯವಾಗಲಿಲ್ಲ.

'ನಾನು ಜರ್ಮನಿಯಲ್ಲಿದ್ದಾಗ ಕಲಾವಿದರೂ ಆಗಿರುವ ನನ್ನ ಪತಿ ಸುದರ್ಶನ್ ನನ್ನಲ್ಲಿ ಆಗಿದ್ದ ಬದಲಾವಣೆಯನ್ನು ಗಮನಿಸಿ, ಆ ಬಗ್ಗೆ ಚರ್ಚಿಸಿದರು. ಕಲೆಯ ಮೇಲಿನ ನನ್ನ ಪ್ರೀತಿಯನ್ನು ನಾನು ಅರಿತುಕೊಂಡೆ.' ಎನ್ನುತ್ತಾರೆ ಸಂಗೀತಾ.

ಫಿಟ್‌ನೆಸ್ ವಿಚಾರದಲ್ಲಿ ಹೆಚ್ಚಿನ ಗಮನ ಅಗತ್ಯ ಎಂದು ಒತ್ತಿಹೇಳುವ ನಟಿ ಸಂಗೀತಾ, ಜರ್ಮನಿಯಲ್ಲಿದ್ದಾಗ ದೊರಕಿದ ಸಮಯ ನನ್ನ ದೃಷ್ಟಿಕೋನವನ್ನು ವಿಸ್ತರಿಸಿ, ನನ್ನನ್ನು ಹೆಚ್ಚು ಮುಕ್ತ ಹಾಗೂ ವಿಚಾರವಾದಿ ಆಗಿಸಿತು ಎಂದು ಹೇಳಿದ್ದಾರೆ.

"ಬೇರೆ ದೇಶದಲ್ಲಿ ವಾಸಿಸುವುದು ನನ್ನ ಕಂಫರ್ಟ್ ರೋನ್‌ನಿಂದ ಹೊರಬರಲು, ವಿವಿಧ ಸಂಪ್ರದಾಯಗಳನ್ನು ಅನುಸರಿಸಲು ಮತ್ತು ಹೆಚ್ಚು ಮುಕ್ತ ಮನಸ್ಸಿನವಳಾಗಲೂ ನನಗೆ ಸಹಾಯ ಮಾಡಿತು. ಟೀಕೆಗಳನ್ನು ಎದುರಿಸುತ್ತಿದರೂ, ನಾನು ಅಡೆತಡೆಗಳನ್ನು ತೊಡೆದು ಹಾಕಲು ಮತ್ತು ಸಾಮಾಜಿಕ ನಿಯಮಗಳಿಗೆ ಸವಾಲು ಹಾಕುವ ಗುರಿಯನ್ನು ಹೊಂದಿದ್ದೇನೆ. ನಾನು ಯಾವುದೇ ಅರ್ಥಪೂರ್ಣ ಪಾತ್ರಕ್ಕೆ ತೆರೆದಕೊಳ್ಳುತ್ತೇನೆ,” ಎನ್ನುತ್ತಾರೆ.

ಅನುಭವಿ ನಟರು, ಹೊಸಬರ ಜೊತೆಗೆ ಹೊಂದಿಕೊಂಡರೆ, ಮೌಲ್ಯಯುತವಾದ ಉದ್ಯಮದ ಅನುಭವವನ್ನು ನೀಡಬಹುದು,' ಎನ್ನುತ್ತಾರೆ ಸಂಗೀತಾ.

ಇಂದು ಸಿನಿಮಾ ನೋಡಲು ಜನ ಬರುತ್ತಿಲ್ಲ. ಮಾಡಿದ ಸಿನಿಮಾ ಮಾರಾಟವಾಗುತ್ತಿಲ್ಲ. ಹಾಗಾಗಿ ಅನೇಕರು ಸಿನಿಮಾ ಮಡುವುದಕ್ಕೆ ಹಿಂದೇಟು ಹಾಕುತ್ತಾರೆ. ಚಿತ್ರೀಕರಣ ಪೂರ್ಣವಾಗಿರುವ ಸಿನಿಮಾ ಬಿಡುಗಡೆಗೂ ಸಹ ಭಯ. ಹಾಗಾಗಿ ನಟರಿಗೆ ಅವಕಾಶಗಳು ಸಿಕ್ಕುತ್ತಿಲ್ಲ. ಇಂದು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವುದು ಸವಾಲು ಎನ್ನುವುದಕ್ಕಿಂತ ಉದ್ಯಮದಲ್ಲಿ ಉಳಿದುಕೊಳ್ಳುವುದೇ ದೊಡ್ಡ ಸವಾಲು ಎನ್ನುವಂತಾಗಿದೆ.' ಇದು ಸಂಗೀತಾರ ಮಾತು.

ಇದೆಲ್ಲದರ ಹೊರತಾಗಿ ಮಿಟೂ ಅಭಿಯಾನದಲ್ಲಿ ಸಂಗೀತಾರ ಹೆಸರು ಬಾರಿ ಸದ್ದು ಮಾಡಿತ್ತು. ಸಂಗೀತಾ ಭಟ್ ಚಿತ್ರರಂಗದಲ್ಲಿ ಎದುರಿಸಿದ ಕಡಗ ಪರಿಸ್ಥಿತಿಯನ್ನು ಸಹ ಒಮ್ಮೆ ಹೇಳಿಕೊಂಡಿದ್ದರು. ನಾನು ಎಷ್ಟೋ ಚಿತ್ರಗಳಲ್ಲಿ ಅಭಿನಯಿಸಿದ್ದೆ. ಆ ಚಿತ್ರಗಳು ತಲೆಗೇ ಬರಲೇ ಇಲ್ಲ ಹಾಗಾಗಿ ಆ ಚಿತ್ರಕ್ಕಾಗಿ ನನ್ನ ಸಂಬಾವನೆ ಇನ್ನೂ ದಿರಕಿಲ್ಲ" ಎಂದು ಹೇಳುತ್ತಾರೆ. 

ಹದಿನೈದನೇ ವಯಸ್ಸಿಗೆ ಆಡಿಷನ್ ಕೊಡಲು ಪ್ರಾರಂಭಿಸಿದಾಗಿ ನಟಿ ಹೇಳಿದ್ದಾರೆ.

“ಸಿನಿಮಾ ಎಂದರೆ ಅಂಗಡಿಗೆ ಹೋಗಿ ನಮಗಿಷ್ಟದ ವಸ್ತು ಖರೀದಿಸಿದಂತೆ ಅಲ್ಲ, ನಾವು ಯಾರನ್ನೂ ಹುಡುಕಿಕೊಂಡು ಹೋಗಿ ಅವಕಾಶ ಕೇಳುವುದಕ್ಕೆ ಆಗುವುದಿಲ್ಲ. ನಮ್ಮನ್ನು ಯಾರು ಹುಡುಕಿ ಬರುತ್ತಾರೆಯೋ ಅವರೊಡನೆ ಕೆಲಸ ಮಾಡಬೇಕಷ್ಟೇ,'' ಎನ್ನುವುದು ಈ ನಟಿಯ ಅಭಿಪ್ರಾಯ. 'ಸು ಫ್ರಂ ಸೋ' ಚಿತ್ರದ ಟಿಕೆಟ್ ಸಿಗ್ತಿಲ್ಲ. 'ಸು ಪ್ರಂ ಸೋ' ಚಿತ್ರದ ಗೆಲುವು ಇಡೀ ಇಂಡಸ್ಟ್ರೀಗೆ ಹೊಸ ಉಲ್ಲಾಸ ತುಂಬಿದೆ. ಜನ ಥಿಯೇಟರ್‌ಗೆ ಬರ್ತಿಲ್ಲ ಅನ್ನೋರಿಗೆ ಇದು ಉತ್ತರವಾಗಿದೆ. ವಾರ ವಾರಕ್ಕೂ ಹೆಚ್ಚು ಕಲೆಕ್ಷನ್ ಮಾಡುತ್ತಿರುವ ಚಿತ್ರದ ಕುರಿತು ಸಂಗೀತಾ ಭಟ್ ಹೇಳಿದ್ದಾರೆ.

''ಚಿತ್ರಗಳು ಥಿಯೇಟರ್‌ಗೆ ಬಂದರೂ ಜನ ಬರದೇ ಇರೋ ಸ್ಥಿತಿ ಇತ್ತು. ಆದರೆ, ಇದೀಗ 'ಸು ಪ್ರತಿ ಸೋ' ಚಿತ್ರ ಮನೆಯಲ್ಲಿರುವ ಮಂದಿಯನ್ನು ಥಿಯೇಟ‌ಗೆ ಕರೆದುಕೊಂಡು ಬಂದಿದೆ. ಈ ಚಿತ್ರವನ್ನು ನೋಡಲು ಜನ ಥಿಯೇಟರ್‌ಗೆ ಬರುತ್ತಿರುವುದರಿಂದ ಹೌಸ್‌ಫುಲ್ ಆಗಿವೆ. ಈ ಒಂದು ವಿಷಯ್ ತಿಳಿದು ತುಂಬಾನೇ ಖುಷಿಯಾಗಿದೆ.

'ಹಾಗೇನೆ ಈ ಚಿತ್ರ ನೋಡಲು ನಮಗೆ ಟಿಕೆಟ್ ಸಿಗುತ್ತಿಲ್ಲ ನೋಡಿ, ಹಾಗಾಗಿಯೇ ಟಿಕೆಟ್‌ ಗಾಗಿಯೇ ನಾವು ರಾಜ್ ಶೆಟ್ಟಿಗೆ ಕಂಪ್ಲೇಂಟ್ ಮಾಡಬೇಕಿದೆ' ಎಂದು ಸಂಗೀತ ಹೇಳಿಕೊಂಡಿದ್ದಾರೆ.

ಕಮಲ್ ಶ್ರೀದೇವಿ'ಯ ಪಾತ್ರ ಹೇಗಿದೆ?

'ಕಮಲ್ ಶ್ರೀದೇವಿ' ಸಿನಿಮಾದಲ್ಲಿ ಹಿಂದೆಂದೂ ಕಾಣದ ಬೋಲ್ಡ್ ಪಾತ್ರದಲ್ಲಿ ಸಂಗೀತಾ ಭಟ್ ಅಭಿನಯಿಸಿದ್ದಾರೆ. ಈ ಚಿತ್ರ ಹಾಗೂ ಪಾತ್ರದ ಕುರಿತು ನಟಿ ಹೇಳುವದು ಹೀಗೆ - “ಒಂದೇ ದಿನದಲ್ಲಿ ನಡೆಯುವ ಕಥಾನಕವುಳ್ಳ ಕಮಲ್ ಶ್ರೀದೇವಿ' ಸಿನಿಮಾದಲ್ಲಿ ನನ್ನದು ಮಧ್ಯವಯಸ್ಸಿನ ಸೇಲ್ಸ್ ಪ್ರಮನ್ ಪಾತ್ರ. ಇದರ ಹೀರೋ ಹಾಗೂ ಉಳಿದ ಏಳು ಪಾತ್ರಗಳೂ ನಾನು ಮಾಡಿರುವ ಶ್ರೀದೇ ಪಾತ್ರಕ್ಕೆ ಸಂಬಂಧ ಹೊಂದಿರುತ್ತವೆ. ಪ್ರತಿಯೊಬ್ಬರೂ ಇಂಥದ್ದೊಂದು ಸನ್ನಿವೇಶದಲ್ಲಿ ಸಿಲುಕಿರುತ್ತಾರೆ ಅಥವಾ ಒಮ್ಮೆಯಾದರೂ ಕೇಳಿರುತ್ತಾರೆ. 

“ಶ್ರೀದೇವಿಯಂಥ ಪಾತ್ರವನ್ನು ನಾನು ಮಾಡಬಹುದೇ ಎಂಬ ಬಗ್ಗೆ ನಿರ್ದೆಶಕರಿಗೆ ಆರಂಭದಲ್ಲಿ ಸ್ವಲ್ಪ ಹಿಂಜರಿಕೆ ಇತ್ತು. ಆದರೆ, ಚಿತ್ರೀಕರಣದ ಬಳಿಕ ಇದೀಗ ಅವರು ತೃಪ್ತರಾಗಿದ್ದಾರೆ. ರಾಜವರ್ಧನ್ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ನಿರ್ದೇಶಕ ಸುನಿ ಮತ್ತು ಇಡೀ ತಂಡ ನನಗೆ ಉತ್ತಮ ಸ್ಥಾನ ನೀಡಿದರು. ಚಿತ್ರ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ ಎಂಬ ವಿಶ್ವಾಸ ನನಗಿದೆ.”

ಸಚಿನ್‌ ಚೆಲುವರಾಯ ಸ್ವಾಮಿ, ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ ಮಿತ್ರ, ಎಂ.ಎಸ್. ಉಮೇಶ್ ಮುಂತಾದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹ್ಯಾಪಿ ಬರ್ತ್‌ಡೇ (2016) ಮತ್ತು ಬೆಂಗಳೂರು ಬಾಯ್ಸ್ (2023) ನಂತರ ಸಚಿನ್‌ ಮೂರನೇ ಚಿತ್ರ ಇದಾಗಿದೆ. 'ಗಜರಾಮ ಖ್ಯಾತಿಯ ವಿ.ಎ. ಸುನೀಲ್‌ ಕುಮಾ‌ ನಿರ್ದೆಶನ ಮಾಡುತ್ತಿದ್ದಾರೆ. ಸಿನಿಮಾದ ಕ್ರಿಯೇಟಿವ್ ಜವಾಬ್ದಾರಿಯನ್ನು ಸಹ ನಿರ್ಮಾಪಕ ರಾಜವರ್ಧನ್ ವಹಿಸಿಕೊಂಡಿದ್ದಾರೆ.

ಎನ್. ಚೆಲುವರಾಯ ಸ್ವಾಮಿ ಕಮಲ್ ಶ್ರೀದೇವಿ' ಚಿತ್ರವನ್ನು ಅರ್ಪಿಸುತ್ತಿದ್ದಾರೆ. 'ಸ್ವರ್ಣಾಂಬಿಕ ಪಿಕ್ಚರ್ಸ್' ಮೂಲಕ ಬಿ.ಕೆ. ಧನಲಕ್ಷ್ಮೀ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಒಟ್ಟು ಏಳು ಪಾತ್ರಗಳು ಬರುತ್ತವೆ. ಆ ಪಾತ್ರಗಳಿಗೆ ಸಾಂಕೇತಿಕವಾಗಿ ಪ್ರಾಣಿಗಳ ರೂಪ ನೀಡಿ ಪೋಸ್ಟರ್‌ನಲ್ಲಿ ಬಳಸಿಕೊಳ್ಳಲಾಗಿದೆ. ಈಗಾಗಲೇ ತನ್ನ ಶೀರ್ಷಿಕೆ, ಟೀಸರ್‌ಗಳಿಂದಲೇ ಈ ಚಿತ್ರ ತೀವ್ರ ಕುತೂಹಲ ಮೂಡಿಸಿದ್ದು, ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ.

ಈ ಚಿತ್ರವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಚಿತ್ರಕ್ಕೆ ಛಾಯಾಗ್ರಹಣವನ್ನು ನಾಗೇಶ್ ಮಾಡುತ್ತಿದ್ದು, ಕೀರ್ತನ್ ಸಂಗೀತ ನಿರ್ದೇಶನ ನೀಡಿದ್ದಾರೆ. ಗುಣ ಸಲಾ ನಿರ್ದೆಶನ ಮಾಡಿದ್ದಾರೆ, ಕಮಲ್ ಹಾಗೂ ಶ್ರೀದೇವಿ ನಡುವೆ ನಡೆಯುವ ಇದರ ಕಥೆ ಪ್ರಶಿಕ್ಷಣ ಹೊತ್ತಿನ ಯಾವುದೋ ಮೂಲೆಯಲ್ಲಿ ಭೀತಿಸುತ್ತಲೇ ಇರುತ್ತದೆ ಎಂದು ಹೇಳುವ ಮುಲಕ ಈ ಸಿನಿಮಾ ತಂಡ ಕುತೂಹಲ ಮೂಡಿಸಿದೆ. 

"ಗೃಹಶೋಭಾ" ಮಾಸಪತ್ರಿಕೆಯಲ್ಲಿ ಸೆಪ್ಟೆಂಬರ್ 2025 ಸಂಚಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ