Wednesday, July 30, 2025

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 126

ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ

ನಂಜುಂಡೇಶ್ವರ ದೇವಾಲಯದ ಕಾರಣ ಇಂದು ಮೈಸೂರು ಜಿಲ್ಲೆಯ ನಂಜನಗೂಡು ವಿಶ್ವ ಪ್ರಸಿದ್ಧವಾಗಿದೆ. ಅದೇ ಊರಿನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಸಹ ಅಷ್ಟೇ ಮಹತ್ವವನ್ನು ಹೊಂದಿದೆ ಎನ್ನುವುದು ನಿಮಗೆ ಗೊತ್ತೆ?


ರಾಘವೇಂದ್ರ ಸ್ವಾಮಿಗಳು ಸದಾ ಭಕ್ತರ ಕಷ್ಟ - ಕಾರ್ಪಣ್ಯಗಳನ್ನು ದೂರ ಮಾಡುತ್ತಲೇ ಕೋಟ್ಯಾಂತರ ಭಕ್ತರನ್ನು ಹೊಂದಿದ್ದಾರೆ.  ರಾಘವೇಂದ್ರ ಸ್ವಾಮಿಗಳಿಗೆ ಮಂತ್ರಾಲಯದ ಮೂಲ ವೃಂದಾವನವಲ್ಲದೆ, ಜಗತ್ತಿನೆಲ್ಲೆಡೆ ಬೃಂದಾವನಗಳು, ಮಠಗಳು ಇದೆ. ಆದರೆ ಯಾವುದೇ ಸ್ಥಳದಲ್ಲಾಗಲಿ ಅಥವಾ ಯಾವುದೇ ದೇವಸ್ಥಾನಗಳಲ್ಲಾಗಲಿ ಅಥವಾ ಮಠದಲ್ಲಾಗಲಿ ರಾಘವೇಂದ್ರ ಸ್ವಾಮಿಗಳನ್ನು ವಿಗ್ರಹದ ರೂಪದಲ್ಲಿ ಪೂಜಿಸುವುದನ್ನು ಕಂಡಿದ್ದೀರಾ? ಹಾಗೆ ವಿಗ್ರಹದ ರೂಪದಲ್ಲಿರುವ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ, ಪುನಸ್ಕಾರಗಳನ್ನು ನಡೆಸಿಕೊಂಡು ಬರುತ್ತಿರುವ ಜಗತ್ತಿನ ಏಕೈಕ ಸ್ಥಳ ಅಥವಾ ಕ್ಷೇತ್ರ ಎಂದರೆ ಅದುವೇ ನಂಜನಗೂಡಿನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠ. 

ಇದು ಯಾರೋ ಕೆತ್ತಿದ ವಿಗ್ರಹವಲ್ಲ ಬದಲಾಗಿ, ಸ್ವತಃ ರಾಘವೇಂದ್ರ ಸ್ವಾಮಿಗಳೇ ತಮ್ಮ ಇಚ್ಛೆಯ ಮೇರೆಗೆ ಕಾವೇರಿ ನದಿಯಲ್ಲಿ ಉದ್ಭವ ಮಾಡಿಸಿದ ದೈವಿಕ ಶಕ್ತಿಯುಳ್ಳ ವಿಗ್ರಹ. ಹಾಗಾಗಿ . ಮೈಸೂರಿನ ನಂಜನಗೂಡಿನಲ್ಲಿರುವ ಈ ರಾಘವೇಂದ್ರ ಸ್ವಾಮಿ ಸನ್ನಿಧಾನವನ್ನು ಪ್ರತೀಕ ಸನ್ನಿಧಾನವೆಂದು ಕರೆಯಲಾಗುತ್ತದೆ.


ಸುಜ್ಞಾನೇಂದ್ರ ತೀರ್ಥರು 1836 ರಿಂದ 1861 ರವರೆಗೆ ಈ ಸನ್ನಿಧಾನದ ಮಠಾಧೀಶರಾಗಿದ್ದರು. ಇವರು ತಮ್ಮ ಕೊನೆಯ ದಿನಗಳಲ್ಲಿ, ತನ್ನ ಅಂತಿಮ ದಿನಗಳು ದೂರವಿಲ್ಲ ಎಂದು ತಿಳಿದು ಮಂತ್ರಾಲಯಕ್ಕೆ ತೆರಳಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳತೊಡಗಿದ್ದರು. ಆ ಸಮಯದಲ್ಲಿ ಸುಜ್ಞಾನೇಂದ್ರ ಸ್ವಾಮಿಗಳ ಕನಸಿನಲ್ಲಿ ರಾಘವೇಂದ್ರ ಸ್ವಾಮಿಗಳು ಕಾಣಿಸಿಕೊಂಡು ನೀವು ಮಂತ್ರಾಲಯಕ್ಕೆ ಬರುವ ಅಗತ್ಯವಿಲ್ಲ. ನಾನೇ ಸ್ವತಃ ನೀವಿದ್ದಲ್ಲಿಗೆ ಬಂದು ನೆಲೆಸುತ್ತೇನೆ ಇದಕ್ಕಾಗಿ, ನಾನು ಮೂರ್ತಿಯ ರೂಪದಲ್ಲಿ ನಿಮಗೆ ಕಾಣಿಸಿಕೊಳ್ಳುತ್ತೇನೆ ಆ ಮೂರ್ತಿಯನ್ನು ತಂದು ನಂಜನಗೂಡಿನಲ್ಲಿ ಪ್ರತಿಷ್ಠಾಪಿಸಬೇಕೆಂದು ಹೇಳುತ್ತಾರೆ. ಕೇವಲ ಸ್ಯಜ್ಞಾನೇಂದ್ರ ತೀರ್ಥರ ಕನಸಿನಲ್ಲಿ ಮಾತ್ರವಲ್ಲದೇ, ಇನ್ನು ಮೂರು ಜನರ ಕನಸಿನಲ್ಲಿ  ಸಹ ಸ್ವಾಮಿಗಳು ಕಾಣಿಸಿಕೊಳ್ಳುತ್ತಾರೆ. ಅವರೆಂದರೆ ಒಬ್ಬ ಅಗಸ -  ಕಾವೇರಿ ನದಿಯ ತಟದಲ್ಲಿ ಬಟ್ಟೆಯನ್ನು ಒಗೆಯುವ ಒಬ್ಬ ವ್ಯಕ್ತಿ.  ಅವನು ಬಟ್ಟೆಯನ್ನು ಒಗೆಯುವ ಕಲ್ಲಿಂದ ಓಕಾರ ಕೇಳಿಸುತ್ತದೆ.  ಇದರಿಂದ ಗಾಬರಿಯಾದ ಅವನು  ಕಲ್ಲಿನ ಮೇಲೆ ಬಟ್ಟೆ ಒಗೆಯುವುದನ್ನೇ ನಿಲ್ಲಿಸುತ್ತಾನೆ.  ಆಗ ಸ್ವಾಮಿಗಳು ಅವನ ಕನಸಿನಲ್ಲಿ ಬಂದು ಆ ಕಲ್ಲಿನಲ್ಲಿ ನನ್ನ ವಿಗ್ರಹವಿದೆ. ಆ ಕಲ್ಲನ್ನು ಕೇಳಿಕೊಂಡು ಒಬ್ಬ ವ್ಯಕ್ತಿ ಬರುತ್ತಾನೆ. ಆಗ ಕಲ್ಲನ್ನು ಆತನಿಗೆ ನೀಡೆಂದು ಹೇಳುತ್ತಾರೆ. 

ಇದೇ ಸಮಯದಲ್ಲಿ ಮತ್ತೊಬ್ಬ ಬ್ರಾಹ್ಮಣನ ಕನಸಿನಲ್ಲಿ ಸಹ ಸ್ವಾಮಿಗಳು ಕಾಣಿಸಿಕೊಳ್ಳುತ್ತಾರೆ. ಬ್ರಾಹ್ಮಣನ ಕನಸಿನಲ್ಲಿ ಕಾಣಿಸಿಕೊಂಡು ಆ ಕಲ್ಲಿನ ಬಗ್ಗೆ ಹೇಳಿ ಆ ಕಲ್ಲನ್ನು ನೀನು ಸುಜ್ಞಾನೇಂದ್ರ ತೀರ್ಥರಿಗೆ ತಲುಪಿಸಬೇಕೆಂದು ಹೇಳುತ್ತಾರೆ. ಅದರಂತೆ ಬ್ರಾಹ್ಮಣ ಆ ಅಗಸನ ಬಳಿ ಬಂದು ಕಲ್ಲನ್ನು ಪಡೆದು ಅದನ್ನು ನಂಜನಗೂಡಿನಲ್ಲಿರುವ ಸುಜ್ಞಾನೇಂದ್ರ ತೀರ್ಥರಿಗೆ ತಲುಪಿಸುತ್ತಾನೆ. ಅದಕ್ಕೆ ಮುನ್ನ ಅಗಸ ಒಮ್ಮೆ ಆಕಲ್ಲನ್ನು ಪರೀಕ್ಷಿಸಲು ಎನ್ನುವಂತೆ ಒಮ್ಮೆ ತಿರುಗಿಸಿ ನೋಡಲು ಅಲ್ಲಿ  ರಾಯರ ಮೂರ್ತಿ ಇರುವುದು ಗೋಚರಿಸುತ್ತದೆ. 


ಇನ್ನು ಮೈಸೂರಿನ ಅಂದಿನ ಒಡೆಯರ್ ಕನಸಿನಲ್ಲಿ ಸಹ ಸ್ವಾಮಿಗಳು ಕಾಣಿಸಿಕೊಳ್ಳುತ್ತಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ ಕನಸಿನಲ್ಲಿ ಕಾಣಿಸಿಕೊಂಡು ಸುಜ್ಞಾನೇಂದ್ರ ತೀರ್ಥರಿಗೆ ತನ್ನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು ಧನ ಸಹಾಯ ಮಾಡುವಂತೆ ಆಜ್ಞೆ ನೀಡುತ್ತಾರೆ. ಅದರಂತೆಯೇ  ಮುಮ್ಮಡಿ ಕೃಷ್ಣರಾಜ ಒಡೆಯರು ಸುಜ್ಞಾನೇಂದ್ರ ತೀರ್ಥರಿಗೆ ಸಹಾಯ ಮಾಡುವ ಮೂಲಕ ನಂಜನಗೂಡಿನಲ್ಲಿ ರಾಯರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಇಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಉತ್ತರಾಧನೆಯ ದಿನವೇ ಸುಜ್ಞಾನೇಂದ್ರ ತೀರ್ಥರು ರಾಯರ ಪಾದವನ್ನು ಸೇರುತ್ತಾರೆ.

ಅಂದಿನಿಂದ ಇಂದಿನವರೆಗೆ ಮೈಸೂರಿನ ನಂಜನಗೂಡಿನಲ್ಲಿ ಈ ರಾಯರ ವಿಗ್ರಹಕ್ಕೆ ವಿಶೇಷ ಪೂಜೆ ಆರಾಧನೆಗಳು ನಡೆಯುತ್ತಿದ್ದು ದೇಶ ವಿದೇಶಗಳ ಅನೇಕ ಭಕ್ತರು ನಿತ್ಯವೂ ಇಲ್ಲಿಗೆ ಭೇಟಿ ಕೊಟ್ಟು ರಾಯರ ಆಶೀರ್ವಾದ ಪಡೆಯುತ್ತಿದ್ದಾರೆ. 

Sunday, July 27, 2025

ಇದು ನಿಮ್ಮ ವಾಹಿನಿ ಕಲಾ ವೇದಿಕೆ 50ನೇ ಸುವರ್ಣ ಮಹೋತ್ಸವ ಸಂಭ್ರಮ ವೈದ್ಯಕೀಯ, ಪತ್ರಿಕಾ ದಿನಾಚರಣೆ 17ನೇ ಸಾಂಸ್ಕೃತಿಕ ಸಿಂಚನ

- ರಾಘವೇಂದ್ರ ಅಡಿಗ ಎಚ್ಚೆನ್.


ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ  50ನೇ ಸುವರ್ಣ ಮಹೋತ್ಸವ ಸಂಭ್ರಮ  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ  ಅದ್ದೂರಿಯಾಗಿ ನಡೆಯಿತುವೈದ್ಯಕೀಯ, ಪತ್ರಿಕಾ ದಿನಾಚರಣೆ ಅಂಗವಾಗಿ ೧೬ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಕಳೆದ ಐದು ವರ್ಷಗಳಿಂದ ಇದು ನಿಮ್ಮ ವಾಹಿನಿ ಕಲಾ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಲೆಮರೆಯ ಕಾಯಿಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಭಾವಾಲಯ ನೃತ್ಯ ಅಕಾಡೆಮಿ ಸಂಸ್ಥಾಪಕರಾದ ಭವಾನಿ ರಾಜ್ ಪಿ., ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್, ಗಾಯಕ ಶಶಿಧರ ಕೋಟೆ, Screening star solution Pvt Ltd ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಎಚ್.ಎಸ್. Karnataka federation of Direct selling ಅಧ್ಯಕ್ಷ ಶರತ್ ಕುಮಾರ್ ಪಿ.ಎಸ್., Prakruthi Enterprises Landscape ಸಂಸ್ಥಾಪಕರಾದ ಪರಮೇಶ್ ಮೊದಲಾದವರು ಭಾಗವಹಿಸಿದ್ದರು.



ಕಾರ್ಯಕ್ರಮದಲ್ಲಿ ಎಂಟಕ್ಕೂ ಹೆಚ್ಚು ಭಜನಾ ಮಂಡಳಿಯವರು ಭಕ್ತಿಗೀತೆಗಳನ್ನು ಹಾಡಿದರು. ಎಂಟಕ್ಕೂ ಹೆಚ್ಚು ಅಕಾಡೆಮಿಗಳು ಜಾನಪದ ನೃತ್ಯ, ಭರತನಾಟ್ಯ, ಪಾಶ್ಚಾತ್ಯ ನೃತ್ಯ, ಹಿಪ್ ಹಾಪ್ ಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಭಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 




ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಕೆ.ಎಸ್.  ಹಾಗೂ ಪ್ರಧಾನ ಕಾರ್ಯದರ್ಶಿಗಳು ಈ ಸಂದರ್ಭ ಹಾಜರಿದ್ದರು


Thursday, July 24, 2025

ದಕ್ಷಿಣ ಭಾರತದ ಭಾಷೆಗಳ ಮಹಾಸಂಗಮಕ್ಕೆ ಬೆಂಗಳೂರು ಸಜ್ಜು: ಆಗಸ್ಟ್ 8-10 ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2025

 ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ-2025 ಆಗಸ್ಟ್.‌8ರಿಂದ 10ರವರೆಗೆ ನಗರದ ಕೋರಮಂಗಲದಲ್ಲಿರುವ ಸೇಂಟ್‌ ಜಾನ್ಸ್‌ ಸಭಾಂಗಣದ ಆವರಣದಲ್ಲಿ ನಡೆಯಲಿದೆ. 

ದಕ್ಷಿಣ ಭಾರತದ ಭಾಷೆಗಳ ಈ ಮಹಾಸಂಗಮಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಉಚಿತ ಪ್ರವೇಶವಿರಲಿದೆ. ಸಾಹಿತ್ಯಾಸಕ್ತರು www.bookbrahmalitfest.com ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. 

ಪ್ರತಿ ವರ್ಷ ಆಗಸ್ಟ್. ಎರಡನೇ ಶುಕ್ರವಾರ, ಶನಿವಾರ, ಭಾನುವಾರ ನಡೆಯಲಿರುವ ಈ ಸಾಹಿತ್ಯ ಉತ್ಸವದಲ್ಲಿ ದೇಶ-ವಿದೇಶದ 350ಕ್ಕಿಂತಲೂ ಹೆಚ್ಚು ಸಾಹಿತಿಗಳು, ಕಲಾವಿದರು ಹಾಗೂ ತಜ್ಞರು ಭಾಗವಹಿಸಲಿದ್ದಾರೆ. 


ಕಳೆದ ವರ್ಷ ನಡೆದ ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿ ಇದನ್ನು ಇನ್ನೂ ವಿಸ್ತರಣೆ ಮಾಡಲಾಗಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳು ಮತ್ತು ಇಂಗ್ಲಿಷ್‌ ಒಳಗೊಂಡು ಒಟ್ಟು ಐದು ಭಾಷೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. 

ದಕ್ಷಿಣ ಭಾರತದಲ್ಲದ ಭಾಷೆಗಳಿಗೆ ಸ್ಥಾನ ನೀಡುವ ಸಲುವಾಗಿ ಈ ವರ್ಷದಿಂದ ಭಾರತದ ಇನ್ನೊಂದು ಭಾಷೆಯನ್ನು ಆಹ್ವಾನಿತ ಭಾಷೆಯಾಗಿ ಪರಿಗಣಿಸುವ ಸಂಪ್ರದಾಯ ಆರಂಭಿಸಲಾಗಿದೆ. 

ಈ ಬಾರಿ ಮರಾಠಿ ಆಹ್ವಾನಿತ ಭಾಷೆಯಾಗಿದ್ದು, ಮುಂದಿನ ವರ್ಷ ಬಂಗಾಲಿ ಅಥವಾ ಇನ್ಯಾವುದೋ ಒಂದು ಭಾಷೆಯನ್ನು ಆಹ್ವಾನಿತ ಭಾಷೆಯಾಗಿ ಕರೆಯಲಾಗುವುದು ಎಂದು ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವದ ನಿರ್ದೇಶಕ ಸತೀಶ್‌ ಚಪ್ಪರಿಕೆ ತಿಳಿಸಿದ್ದಾರೆ. 

ಎಲ್ಲಾ ಸಾಹಿತ್ಯಾಸಕ್ತರಿಗೆ ಪ್ರವೇಶ ಉಚಿತವಾಗಿದೆ. ಆಸಕ್ತರು ತಮ್ಮ ಹೆಸರನ್ನು ಮುಕ್ತವಾಗಿ ನೋಂದಾಯಿಸಿಕೊಳ್ಳಬಹುದು. ಮೂರು ದಿನಗಳ ಎಲ್ಲಾ ಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. 

ಭಾರತೀಯ ಭಾಷೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಪ್ರಯತ್ನವಾಗಿದ್ದು, ಸಾಹಿತ್ಯಾಸಕ್ತರೆಲ್ಲರೂ ಇದರಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಈ ಬಾರಿಯ ಸಾಹಿತ್ಯ ಉತ್ಸವದಲ್ಲಿ 8 ವಿವಿಧ ಸಮಾನಾಂತರ ವೇದಿಕೆಗಳಿದ್ದು, 180ಕ್ಕೂ ಹೆಚ್ಚು ಗೋಷ್ಠಿಗಳು, 8 ಸಾಂಸ್ಕೃತಿಕ ಕಾರ್ಯಕ್ರಮಗಳು, 6 ಭಾಷೆಗಳ ಕೃತಿಗಳನ್ನು ಒಳಗೊಂಡ ಪುಸ್ತಕ ಮಳಿಗೆ, ಮಕ್ಕಳ ಸಾಹಿತ್ಯ ಉತ್ಸವ, ಜನಪದ ಮಾರುಕಟ್ಟೆ, ಆಹಾರ ಮಳಿಗೆಗಳು ಇರಲಿವೆ. 


ಬೂಕರ್‌ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್‌, ದೀಪಾ ಭಾಸ್ತಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ದಾಮೋದರ ಮೌಜೋ, ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ.ಕೃಷ್ಣ, ಕುಂ ವೀರಭದ್ರಪ್ಪ, ಎಸ್.ದಿವಾಕರ, ಅಡೂರ್‌ ಗೋಪಾಲಕೃಷ್ಣನ್‌, ಅಮರೇಶ್‌ ನುಗಡೋಣಿ, ಬಿ.ಜಯಮೋಹನ್‌, ಗಿರೀಶ್‌ ಕಾಸರವಳ್ಳಿ, ಎಚ್.ಎಸ್.ಶಿವಪ್ರಕಾಶ್‌, ಹರೀಶ್‌ ಭಟ್‌, ಇಮಯಂ, ಜಯಂತ ಕಾಯ್ಕಿಣಿ, ಕೆ.ಪಿ.ರಾವ್‌, ಕೆ.ಸಚ್ಚಿದಾನಂದನ್‌, ಮಕರಂದ ಸಾಥೆ, ವಿಶ್ವಾಸ್‌ ಪಾಟೀಲ್‌ ಮನು ಪಿಳ್ಳೈ, ಎನ್.ಎಸ್.ಮಾಧವನ್‌, ಪಾಲ್‌ ಝಕಾರಿಯಾ, ಪೆರಿಮಾಳ್‌ ಮುರುಗನ್‌, ಪ್ರಶಾಂತ್‌ ಪ್ರಕಾಶ್‌, ರವಿ ಮಂತ್ರಿ, ಶಿಲ್ಪಾ ಮುಡಬಿ, ಸುಧೀಶ್‌ ವೆಂಕಟೇಶ್‌, ವಸುಧೇಂದ್ರ, ಜೋಗಿ, ವಿವೇಕ್‌ ಶಾನಭಾಗ, ವೋಲ್ಗಾ ಅವರನ್ನು ಒಳಗೊಂಡು 350ಕ್ಕೂ ಹೆಚ್ಚು ಸಾಹಿತಿಗಳು ವಿವಿಧ ಗೋಷ್ಠಿಗಳಲ್ಲಿರುತ್ತಾರೆ. 

ಲಕ್ಷ್ಮೀ ಚಂದ್ರಶೇಖರ, ಬಿ.ಜಯಶ್ರೀ ತಂಡ, ಪ್ರವೀಣ್‌ ಗೋಡ್ಕಿಂಡಿ, ಮಾನಸಿ ಪ್ರಸಾದ್‌, ಟಿ.ಎಂ.ಕೃಷ್ಣ, ಗಣಪತಿ ಭಟ್‌ ಹಸಣಗಿ ಬಿ ಸ್ಟುಡಿಯೋ ಮತ್ತು ಬೆಂಗಳೂರು ಕ್ಲಬ್‌ ಆಫ್‌ ಕಥಕ್ಕಳಿ ಅವರಿಂದು ಒಟ್ಟು 8 ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದಿನಗಳ ಅವಧಿಯಲ್ಲಿ ನಡೆಯಲಿವೆ.

Friday, July 18, 2025

ದುಷ್ಟರ ಪಾಲಿನ ಮೃತ್ಯುವಾದ ಮುತ್ತುವಿನ ಕಥೆ - ಎಕ್ಕ

- ರಾಘವೇಂದ್ರ ಅಡಿಗ ಎಚ್ಚೆನ್. 

ಚಿತ್ರ: ಎಕ್ಕ

ನಿರ್ದೇಶನ: ರೋಹಿತ್ ಪದಕಿ

ನಿರ್ಮಾಣ: ಪಿ.ಆರ್.ಕೆ., ಜಯಣ್ಣ ಕಂಬೈನ್ಸ್ ಹಾಗೂ ಕೆ.ಆರ್.ಜಿ. 

ತಾರಾಂಗಣ:  ಯುವ ರಾಜ್​ಕುಮಾರ್, ಸಂಜನಾ ಆನಂದ್, ಸಂಪದಾ, ಅತುಲ್ ಕುಲಕರ್ಣಿ, ಆದಿತ್ಯ, ಶ್ರುತಿ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಮುಂತಾದವರು.

ರೇಟಿಂಗ್: 3.5/5 

ಯುವ ರಾಜ್ ಕುಮಾರ್, ಸಂಜನಾ ಹಾಗೂ ಸಂಪದಾ.. ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ರೋಹಿತ್ ಪದಕಿ ರವರ ನಿರ್ದೇಶನದ 'ಎಕ್ಕ' ಚಿತ್ರ ಈ ವಾರ (ಜುಲೈ ೧೮) ಬಿಡಿಗಡೆ ಆಗಿದೆ.  ಚಿತ್ರವು ದೊಡ್ಡ ಮಟ್ಟದಲ್ಲಿಯೇ ಅದ್ದೂರಿಯಾಗಿ ತೆರೆಗೆ ಬಂದಿದ್ದು, ಒಳ್ಳೆಯ ಓಪನಿಂಗ್ ಸಹ ಪಡೆದುಕೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಹಳ್ಳಿಯಲ್ಲಿ ತನ್ನ ಪಾಡಿಗೆ ತಾನಿದ್ದ ಕಥಾ ನಾಯಕ ಮುತ್ತುವಿನ ಕಥೆಯನ್ನು ಬೆಂಗಳೂರಿಗೆ ತಂದು, ನೈಜತೆಗೆ ಹತ್ತಿರ ಎನಿಸುವ ಭೂಗತ ಲೋಕವನ್ನು ಪರದೆ ಮೇಲೆ ಸೃಷ್ಟಿ ಮಾಡಿದ್ದಾರೆ ನಿರ್ದೇಶಕರು. ಕಥಾ ನಾಯಕ ಮುತ್ತುವಿನ ಎರಡು ರೀತಿಯಲ್ಲಿನ ಬದುಕಿಗೆ ನಾಯಕಿಯರಾಗಿ ನಟಿಸಿರುವ ಸಂಜನಾ ಹಾಗೂ ಸಂಪದಾ.. ಇಬ್ಬರೂ ಇಷ್ಟವಾಗುತ್ತಾರೆ. 

ವಾರಣಾಸಿಯಲ್ಲಿ ಶುರು ಆಗುವ ಚಿತ್ರದ ಕಥೆ, ನಂತರ ಪಾರ್ವತಿಪುರ ಎಂಬ ಹಳ್ಳಿ, ಆಮೇಲೆ ಬೆಂಗಳೂರು, ಅಲ್ಲಿನ ಮಿಡಲ್ ಕ್ಲಾಸ್ ಜೀವನ ಶೈಲಿ, ಭೂಗತ ಜಗತ್ತು.. ಎಲ್ಲವೂ ಚಂದ ಇದೆ.. ಹಳ್ಳಿಯಲ್ಲಿ ಇರುವ ಹೀರೋ ಬಡತನದ ಕುಟುಂಬದವನು. ದುಡಿಯಬೇಕು ಎಂದು ಬೆಂಗಳೂರಿಗೆ ಬಂದು ಅನಿವಾರ್ಯ ಕಾರಣದಿಂದ ಭೂಗತ ಲೋಕಕ್ಕೆ ಎಂಟ್ರಿ ಪಡೆಯುತ್ತಾನೆ. ಹಳ್ಳಿಯಲ್ಲಿರುವ ತಾಯಿಗೆ ಮಗ ಈ ರೀತಿ ರೌಡಿ ಆಗಿದ್ದಾನೆ ಎಂಬುದರ ಅರಿವು ಇರುವುದಿಲ್ಲ.  ಕೆಟ್ಟದ್ದನ್ನು ನೋಡಬೇಡ, ಕೇಳಬೇಡ, ಮಾತನಾಡಬೇಡ ಎಂದು ಹೇಳಿ ಹೇಳಿ ಅಮ್ಮ ಬೆಳೆಸಿರುತ್ತಾಳೆ. ಒಳ್ಳೆತನದಿಂದ ಜೀವನದ ಸಾಗಿಸೋಕೆ ಹೊರಟವರಿಗೆ ನೂರಾರು ಅಗ್ನಿಪರೀಕ್ಷೆ. ಇಂತಹ ಪರೀಕ್ಷೆಗಳನ್ನು ಎದುರಿಸುತ್ತಾ ಸಾಗುವ ಹಾದಿಯಲ್ಲೇ ಮುತ್ತು ಕೈಗೆ ರಕ್ತ ಅಂಟುತ್ತದೆ. ಬೆಂಗಳೂರಿನ ಭೂಗತಲೋಕದಲ್ಲಿ ಗುರುತಿಸಿಕೊಂಡಿರುವ ನಾಯಕ, ಮುತ್ತು ವಾರಣಾಸಿಯಲ್ಲಿ ತಲೆ ಮರೆಸಿಕೊಂಡಿರುತ್ತಾನೆ. ಪ್ರೇಯಸಿಯಿಂದಲೇ ಪೊಲೀಸರ ಕೈಗೆ ಸಿಕ್ಕಿಬೀಳುವಂತಾಗುತ್ತದೆ. ಬಳಿಕ ಅವನ ಹಳೆಯ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮಗುವಿನಂತ ಮನಸ್ಸಿನ ಮುತ್ತು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಮೃಗದಂತಾಗುತ್ತಾನೆ. ಅದಕ್ಕೆ ಕಾರಣ ಏನು? ಪೊಲೀಸರಿಂದ ಬಂಧನವಾದ ಆತನ ಮುಂದಿನ ಕಥೆ ಏನು ಅಂತ ತೆರೆಯ ಮೇಲೆ ನೋಡಬೇಕು.  

ಈ ನಡುವೆ ಮುತ್ತಿವಿಗೆ ನಂದಿನಿ(ಸಂಜನಾ ಆನಂದ್) ಜೊತೆ ಲವ್ ಆಗುತ್ತದೆ. ಆದರೆ ಭೂಗತ ಲೋಕದ ಸಂಪರ್ಕದೊಡನೆ ಅವನ ಈ ಪ್ರೀತಿ ಹೆಚ್ಚು ದಿನ ಉಳಿಯುವುದಿಲ್ಲ ನಂದಿನಿ ಬದಲಾಗಿ ಅವನ ಬಾಳಲ್ಲಿ ಮಲ್ಲಿಕಾ(ಸಂಪದಾ) ಆಗಮನವಾಗುತ್ತದೆ. 

ಇದು ಈ ಹಿಂದೆ ಬಂದಿದ್ದ "ಜೋಗಿ", "ವಂಶಿ" ಚಿತ್ರಗಳ ಸಾಲಿನಲ್ಲಿ ನಿಲ್ಲಬಹುದಾದ ಸಿನಿಮಾ ಕಥೆಯಾಗಿದೆ. ಯುವ ರಾಜ್​ಕುಮಾರ್ ಅವರು ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗನ ಮುಗ್ದತೆ ಹಾಗೂ ಭೂಗತ ಲೋಕದ ರೌಡಿಯಾಗಿ ಅವರು ಅಭಿನಯಿಸಿದ್ದಾರೆ. ಇದರೊಡನೆ ಅವರು ಲವರ್ ಬಾಯ್ ಕೂಡ ಹೌದು. ಮೊದಲ ಚಿತ್ರಕ್ಕೆ ಹೋಲಿಸಿದರೆ ಯುವ ಅವರ ಅಭಿನಯ ತುಸು ಪಕ್ವವಾಗಿದೆ. ಡ್ಯಾನ್ಸ್ ಹಾಗೂ ಫೈಟ್ಸ್ ವಿಚಾರದಲ್ಲಿ ಜಬರ್ದಸ್ತ್ ಪರ್ಫಾರ್ಮನ್ಸ್ ನೀಡಿದ್ದಾರೆ.

ಯುವ ರಾಜ್​ಕುಮಾರ್ ಅವರ ಪಾತ್ರ ಹೈಲೈಟ್  ಆಗಿದ್ದರೆ ಅವರ ತಾಯಿಯಾಗಿ ಶ್ರುತಿ ಪಾತ್ರವು ಗಮನ ಸೆಳೆಯುತ್ತದೆ.  ನಾಯಕಿಯರಾದ  ಸಂಜನಾ ಆನಂದ್ ಮತ್ತು ಸಂಪದಾ ಅಭಿನಯ ಸೊಗಸಾಗಿದೆ.  ಸಂಜನಾ ಕೆಲವೊಂದು ಕಡೆಗಳಲ್ಲಿ "ಲೇಡಿ ಡಾನ್" ಎನ್ನುವಂತೆ ಕಾಣಿಸಿಕೊಂಡಿದ್ದಾರೆ. ಸಂಪದಾ ಓರ್ವ ಬಾರ್ ಗರ್ಲ್ ಆಗಿ ಕಾಣಿಸಿಕೊಂಡಿದ್ದು ಚಿತ್ರ ಪ್ರಾರಂಭವಾಗುವುದು ಹಾಗೂ ಮುಕ್ತಾಯವಾಗುವುದು ಇವರ ಪಾತ್ರದೊಡನೆ ಎನ್ನುವುದು ವಿಶೇಷ.  ಕಥೆಗೆ ತಿರುವು ನೀಡುವಂತಹ ಪಾತ್ರದಲ್ಲಿ  ಡಾನ್ ಮಸ್ತಾನ್ ಭಾಯ್ (ಅತುಲ್ ಕುಲಕರ್ಣಿ) ಮತ್ತು  ಎಸಿಪಿ ರುದ್ರ ಪ್ರತಾಪ್ (ಡೆಡ್ಲಿ ಆದಿತ್ಯ)  ಇದ್ದರೆ ಕಾಮಿಡಿ  ಟಚ್ ಕೊಡಲು ಸಾಧು ಕೋಕಿಲ  ಇದ್ದಾರೆ. ಪೂರ್ಣಚಂದ್ರ ಮೈಸೂರು, ಹರಿಣಿ ಹಾಗೂ ಸೂರಿ ಸಹ ತಮ್ಮ ಪಾತ್ರಗಳಲ್ಲಿ ಉತ್ತಮವಾಗಿ ಕಾಣಿಸಿದ್ದಾರೆ. 

ಚರಣ್  ರಾಜ್ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಸಿನಿಮಾದ ಪ್ಲಸ್ ಪಾಯಿಂಟ್. ಈಗಾಗಲೇ ವೈರಲ್ ಆಗಿರುಇವ  ‘ಬ್ಯಾಂಗಲ್ ಬಂಗಾರಿ..’ ತೆರೆ ಮೇಲೆ ನೋಡಲು ಸೊಗಸಾದ ಅನುಭವ ಕೊಡುತ್ತದೆ  ಸತ್ಯ ಹೆಗಡೆ ಅವರ ಛಾಯಾಗ್ರಹಣ ಉತ್ತಮವಾಗಿದೆ. ಬೆಂಗಳೂರಿನ ಗಲ್ಲಿಯಿಂದ ವಾರಣಾಸಿ ಘಾಟ್‌ವರೆಗೂ ಚೆಂದವಾಗಿರುವುದನ್ನೆಲ್ಲಾ ಸೆರೆ ಹಿಡಿದಿದೆ. "ಅನ್ನಕ್ಕೆ ಎಲೆ ಇಲ್ಲ ಅಂದ್ರು ಬೆಲೆ ಇದೆ", "ಎಲ್ಲಕ್ಕಿಂತ ದೊಡ್ಡಾಟ ಉಸಿರಾಟ" ಎನ್ನುವ ಸಣ್ಣ ಸಣ್ಣ ಡೈಲಾಗ್ಸ್ ಗಮನ ಸೆಳೆಯುತ್ತೆ.

ಲವ್, ಸೆಂಟಿಮೆಂಟ್, ಆ್ಯಕ್ಷನ್, ಕಾಮಿಡಿ ಮುಂತಾದ ಅಂಶಗಳ ಪ್ಯಾಕೇಜ್ ರೀತಿ ಫಸ್ಟ್ ಹಾಫ್ ಮೂಡಿ ಬಂದಿದ್ದು, ಸೆಕೆಂಡ್ ಹಾಫ್ ನಲ್ಲಿ ಕಥೆ ಮಾಸ್ ಆಗುತ್ತದೆ. ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಿದ್ದು, ಚಿತ್ರವನ್ನು ಒಂದೇ ಜಾನರ್‌ ನಲ್ಲಿ ಇಡಲು ಸಾಧ್ಯವಿಲ್ಲ, ನಂದಿನಿ  ಪಾತ್ರ ಹಠಾತ್ತನೆ ಮರೆಯಾಗುತ್ತದೆ. ಕ್ಲೈಮ್ಯಾಕ್ಸ್ ಸಹ ಹಠಾತ್ತನೆ ಸಿನಿಮಾ ಕೊನೆಯಾದಂತೆ ಭಾಸ ನೀಡುತ್ತದೆ. ಹಾಗಾಗಿ ಚಿತ್ರಕಥೆ ಇನ್ನಷ್ಟು ಬಿಗುವಾಗಿದ್ದರೆ ಚೆನ್ನಾಗಿತ್ತು ಎನಿಸುತ್ತದೆ.  ಒಟ್ಟಾರೆಯಾಗಿ ಇದೊಂದು ಮನರಂಜನೆ ನೀಡುವ ಕಥೆ. ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ಮಿಸ್ ಮಾಡದೇ ನೋಡಿ...

Friday, July 11, 2025

ಜೆನ್ ಜೀ ಪ್ರೇಮಿಗಳ ತವಕ ತಲ್ಲಣಗಳ ಕಥೆ - ದೂರ ತೀರ ಯಾನ


- ರಾಘವೇಂದ್ರ ಅಡಿಗ ಎಚ್ಚೆನ್. 

ಚಿತ್ರ: ದೂರ ತೀರ ಯಾನ

ನಿರ್ಮಾಣ: ದೇವರಾಜ್ ಆರ್. 

ನಿರ್ದೇಶನ: ಮಂಸೋರೆ

ತಾರಾಂಗಣ: ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್, ಶ್ರುತಿ ಹರಿಹರನ್, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ ಮುಂತಾದವರು.

ರೇಟಿಂಗ್: 3/5


ಆಕಾಶ್ ಒಬ್ಬ ವಯೋಲಿನ್ ವಾದಕ, ಹಾಗೂ ಭೂಮಿ ಕೊಳಲು ವಾದಕಿ 5 ವರ್ಷಗಳಿಂದ ಪ್ರೇಮಿಗಳಾಗಿರುತ್ತಾರೆ. ಆದರೆ ಇಬ್ಬರ ನಡುವೆ ಚಿಕ್ಕ ಪುಟ್ಟ ವಿಷಯಗಳಿಗೂ ಕಿತ್ತಾಡಿಕೊಳ್ಳುತ್ತಾರೆ. ಅದು ಕಾಫಿ ಟೀ ವಿಷಯದಲ್ಲಿಯೂ ಜಗಳ ಆಗುವಷ್ಟರ ಮಟ್ಟಿಗೆ ಇದೆ. ಹಾಗಾಗಿ ಇಬ್ಬರೂ ಮದುವೆಯಾಗದೆ ಬೇರೆ ಆಗುವುದಕ್ಕೆ ನಿರ್ಧರಿಸುತ್ತಾರೆ. ಅದಕ್ಕೆ ಮುನ್ನ ಒಂದು ವಾರ ಇಬ್ಬರೂ ಒಟ್ಟಿಗೇ ಪಯಣಿಸಿ ನಂತರ ಬೇರಾಗಬೇಕು ಎನ್ನುವ ತೀರ್ಮಾನ ಮಾಡುತ್ತಾರೆ. ಆ ಒಂದು ವಾರದ ಪಯಣವೇ "ದೂರ ತೀರ ಯಾನ"

ನಿರ್ದೇಶಕ ಮಂಸೋರೆ ಈ ಬಾರಿ ಹೊಸದೊಂದು ಸ್ವರೂಪದ ಕಥೆಯನ್ನು ತೆಗೆದುಕೊಂಡು ಬಂದಿದ್ದಾರೆ.  ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್ 1978’, ‘19-20-21’ ಎಲ್ಲವುಗಳಿಗಿಂತ ಇದು ಬೇರೆಯದೇ ರೀತಿಯ ಕಥೆ. ಮುಖ್ಯವಾಗಿ ಈ ಸಿನಿಮಾ ಪ್ರೇಮಿಗಳು ಹೇಗೆ ಒಂದಾಗುತ್ತಾರೆ ಎನ್ನುವುದಕ್ಕಿಂತ ಪ್ರೇಮಿಗಳ ನಡುವೆ ಬ್ರೇಕಪ್  ಆಗುವಾಗ ಹೇಗೆ ಗೌರವಯುತವಾಗಿ ದೂರವಾಗುವುದು ಎಂಬುದನ್ನು ತೋರಿಸಲಾಗಿದೆ. ದಾಂಪತ್ಯ ಅಥವಾ ಪ್ರೇಮದ ಜೀವನದಲ್ಲಿ ಹೊಂದಾಣಿಕೆಯ ಬದುಕಿನ ಬಗ್ಗೆ ಕೆಲವು ಸಿದ್ದ ಸೂತ್ರವಿದೆ. ಆದರೆ ಹಾಗೆ ಸಿದ್ದ ಸೂತ್ರ ಪಾಲನೆ ಮಾಡುವವರೆಲ್ಲಾ ಖುಷಿಯಾಗಿದ್ದಾರೆಯೆ? ಅದು ಸಾಧ್ಯವಿದೆಯ? ಈ ಪ್ರಶ್ನೆಗೆ ಚಿತ್ರದಲ್ಲಿ ಉತ್ತರ ಕೊಡುವ ಪ್ರಯತ್ನ ಇದೆ. ಇದೊಂದು ಪ್ರೇಮಕಥೆ,, ಅದರಲ್ಲೂ ಈಗಿನ ಜನರೇಷನ್‌ ಅನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ.. ಇಂದಿನ ಕಾಲದ ಪ್ರೇಮಿಗಳ ತವಕ ತಲ್ಲಣಗಳಿಗೆ ಇದು ಕನ್ನಡಿಯಾಗಿದೆ. 

ಚಿತ್ರಕಥೆ ಸೊಗಸಾಗಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರದ ಹೈಲೈಟ್, ಕಾರ್ತಿಕ್ ಹಾಗೂ ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕಥೆಗೆ ಪೂರಕವಾಗಿದೆ.  ಆದರೆ ಕಥೆಯಲ್ಲಿ ಹೆಚ್ಚು ತಿರುವು ಇಲ್ಲ, ಸಿನಿಮಾದಲ್ಲಿ ಎಲ್ಲೂ ಹಾಸ್ಯ ಸನ್ನಿವೇಶಗಳಿಲ್ಲ ನಿಧಾನಗತಿಯ ನಿರೂಪಣೆಯೂ ಕೆಲವೆಡೆ ನೀರಸ ಎನಿಸಬಹುದು

ನಾಯಕ ವಿಜಯ್ ಕೃಷ್ಣ ಹಾಗೂ ನಾಯಕಿ ಪ್ರಿಯಾಂಕಾ ಕುಮಾರ್ ಅವರು ಇಡೀ ಸಿನಿಮಾ ಆವರಿಸಿಕೊಳ್ಳುತ್ತಾರೆ. ಇಬ್ಬರದೂ ಸಹಜಾಭಿನಯವಿದೆ.  ಆದರೆ ಕೆಲ ಭಾವನಾತ್ಮಕ ಸನ್ನಿವೇಶಗಳಲ್ಲಿ ಪ್ರಿಯಾಂಕಾ ಅವರಿಂದ ಇನ್ನಷ್ಟು ಉತ್ತಮ ನಟನೆಯ ನಿರೀಕ್ಷೆ ಇತ್ತು. ಉಳಿದಂತೆ ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, , ಕೃಷ್ಣ ಹೆಬ್ಬಾಲೆ,ಅವರೆಲ್ಲರ ಪಾತ್ರಗಳು ಹೀಗೆ ಬಂದು ಹಾಗೆ ಮರೆಯಾಗುತ್ತದೆ. 

Wednesday, July 09, 2025

ಏಪ್ರಿಲ್, ಮೇ ಮತ್ತು ಜೂನ್ ತಿಂಗಳ "ಗೃಹಶೋಭಾ" ಸಂಚಿಕೆಯಲ್ಲಿ ನನ್ನ ಲೇಖನ

 May be an image of text

May be an image of 1 person and text that says "5 ಸಾಯರಾಮ プずの ២ ಿಅಿರಮಾಡಲ್ಲಿ ಭುಸ್ಸಮ ಮನక್ನ್ಲಿ ಮೂರುಕ 리닉 သစ်မာ បានអ្នកក6 วำซัท ಹಾಗಯ್ೋ ನಾಯ rise ಪಂಚಸ್ರವಗ ಮందವಾ ಬೆಂಗಳಯರಗರೇ ಸದಲಿಸಿಂದಲೂ ನನೆಗೆ ಒದಿದೂ ನಟಸೆ. ಮಾಡಲು ಕಾರಲೇಜೆಗೆ පටක් ಕಡಕ್ ಮಗವರಿ ಸಯತ್ಮಗಳನ್ನು රයාන්යකක. ತಳು ಚಿಪ್ರದಲಲ್ಲಿ ನವನೆ ಚೊತೆಗೆ ಸುಳು ಭಾನೆಯನ್ನೂ ದರಿಂದಾಗಿ ರಾಜ್. ನಿರ್ಮಾಣ ಮಾಡುತಿರುವ 'ರಾಜ್ মমিয়য়গ ತುಳು ನಟವಿಕುವ ಎಸ್ುತತಾರೆ ಇಲ್ಲಿಂದ ಜರ್ನಿ ಶುರುವಾಯಿತು ಜೋಗರಾಜ್ ರೆಲವುದಿ ದಿನಗಳ ನಾವು ಆಯ್ಯೆಯಾಗಿರುವ ವಿಷಯ ತಿಳಿಸಿವರು. ಮಾಡಿ ಅಧಿಕ್ಯತ 'ಪದವಿಸಂರ್ತ' ಮೂಲಕ ಆಧಿಕ್ೃತವಾಗಿ ನ್ಾಂಡಲ್‍ವುಡ್ಗ ಎಂಟ್ರ ಪಡೆದುಕೊಂಡ ಎಂದು ಯಸಾ ತಮ್ಮ ಚಿತ್ಯರಂಗದ ಎಂಟ್ರ ಕುರಿತು ಹೇಭಿಕೊಂದಿದಾರ. ನಿರ್ವಹಿಸಿದ ಸಾತ್ರಗಳು ಕಳೆದ ವರ್ ತರೆಕಂಡಿದ ಕಿರಣ್ ನಟಿಸಿರುವ 'ಭರ್ಜರ ಗಂು ಅಭಿನಯೆಸ್ಿದರು. ವ್ರಸ್ತ ಡೈನಾಮಿಕ್ ದೇವರಾಜ್ ನಾಯಕನಾಗಿರುವ ತಲುಗು, ತುಳು ಬಾವಯ ಸಿನಿಮಾಗಳ ಸದ್ದ ಮುಂದಿನ ಬರಲಿ ವನ್ನುವುರು ಹಾರೈರ. ರಾಭರವಂುದ್ಯ ಎನಿಸಿದಾರ. ಮದಾ ಎಟ್ಟನ್ 77 കയ்ലോാ 2025"

May be an image of 1 person, smiling and text that says "ಬೇಸಿಗೆಯಲ್ಲಿ ಆರೋಗ್ಯ ಬೇಸಿಗೆ ರಜೆಯಲ್ಲಿ ಸಾಂದರ್ಯ ದ ನಿರ್ವ ಹಣೆ ಪ್ರವಾಸಕ್ಕೆ ಹೊರಟಿರಾ...? ? ಗೃಹಶೋಭಾ ಏಪ್ರಿಲ್,2025 2025 Grihshobha ಏಪ್ರಿಲ್, ಜೋಯಾ ಅಖ್ತರ್ ಬಾಲಿವುಡ್‌ನಲ್ಲಿ ಈಕೆ ತನ್ನ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದು ಹೇಗೆ? ಸಮ್ಮರ್ 06 ಸಪಷಲ್ ನ್ಯ ನ್ಯೂಡಿನೈತ್ នថ្លែសន"

May be an image of 1 person, smiling and text that says "ក្គក ಸಿనಿ ಆಕಾಶದಲ್ಲಿ ಮೇದಿನಿ ಮಿಂಚು! ಅಸ್ಥವ ಪನ್ಲಾಸ ಸ್ರತಿಬೆ, ಲನಾಡಿನ ಮೀಂಚನ ಬೆಡಗಿ ಮೇಡಿನಿಗೆ ಸ್ಾಂಡಲ್‌ಪುಣ್ನಲ್ಲಿ ಅಸ್ತುತ್ತಮ ಅನಕಾಲಗಳು ದೊರಬುತ್ತಿವೆ ಬವರ ನ್ರತಿಬಿಗೆ ಸ್ನತಿಬೆಗೆತಕ್ನಂತೆ ತಪ್ಸಂತೆ ಭವಸ್ಯದಲ್ಲ តាបម្ៀំថ្នា ದಿಶೇಸೆ ಅನಕಾಶಗಳ ಸಿಗಲಿ လ ಪ್ರಕಂಚದಲ್ಲ ನಮತಗಾರೆಯಯಾಗಿ ಬೆಳಗಲ ಳದ ವರ್ ತರೆಕಂಡ ರಿಯಲ್ ত ಅವೇಂದಯ ನಿರ್ದೆೇಕನದ 'ಯಯುಖ ಸಿನಿಮೂ ಸೇಕ್ಕಕನಂದ ಭರಪೂರ ಗನಿಡದುಕೊಂಡಿದ ಗಮನಿಸೆಳೆದೇ ವಯಸ್ನಿಗೆ ಮೀರಿದ ಪಾತ್ನದಲ್ಲಿ ಮಂಡೆದರು, ฟลอส ಅವರ ಯಾರು? ವು? ಸೋತೋ សង្ចរ ಮೋದಿನಿ ನದು ගපක් ದಾರಿ ಮಲಹ ಶಗ್ಯೋಸದನರಾದ ಮೋದಿದಿ 80 മകക്രുമ ಮೇ 2025"May be an image of 1 person and textMay be an image of 3 people and text

May be an image of 7 people, people smiling and text that says "ಮದರ್ಸ್ ಡೇ ಸಪಷಲ್ ₹50 ಗೃಹಶೋಭಾ ಮೇ, 2025 Grihshobha GRIHSHOBHA INSPIBE AWARDS ತಿಕಾರಿ ಬದಲಾವಕು ತಂದುಕೊಟ್ಣ ಸಾಧಕಿಯರ ಯಶೋಗಾಥ"


May be an image of 2 people and text

No photo description available.

May be an image of 1 person, smiling and text

ಗುರು ಪೂರ್ಣಿಮಾ ವಿಶೇಷ - ವ್ಯಾಸ ಮಹರ್ಷಿಯ ಕಥೆ

May be an image of templeಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ ಅರ್ಥಾತ್ Teacher’s Day. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎಂದೇ ಪರಿಗಣಿತರಾದ ಭಗವಾನ್ ವೇದವ್ಯಾಸ ಜನ್ಮದಿನ. 

ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರ ಮುನಿಗಳು ಹಾಗೂ ತಾಯಿ ಸತ್ಯವತೀ ದೇವಿ. ಒಮ್ಮೆ ಮಹರ್ಷಿ ಪರಾಶರರು ನಾವೆಯೊಂದರಲ್ಲಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಮೀನು ಕೊಳೆತಾಗ ಬರುವಂತಹ ಕೆಟ್ಟ ವಾಸನೆ ಬರುತ್ತಿತ್ತು. ಅವರು ಆ ದ್ವೀಪಕ್ಕೆ ಹೋಗಿ ನೋಡಿದಾಗ ಅಲ್ಲಿ ಒಬ್ಬ ಕುರೂಪಿಯಾದ ಬೆಸ್ತರ ಕನ್ಯೆ ಕುಳಿತಿದ್ದಳು. ಆಕೆಯ ದೇಹದಿಂದಲೇ ಆ ಕೆಟ್ಟ ವಾಸನೆ ಬರುತ್ತಿತ್ತು. ಆಕೆಯ ಹೆಸರು “ಸತ್ಯವತಿ”. ಆಕೆಯ ದೇಹದಿಂದ ಮೀನಿನ ವಾಸನೆ ಬರುತ್ತಿದ್ದುದರಿಂದ ಆಕೆಯನ್ನು “ಮತ್ಸ್ಯಗಂಧೀ” ಎಂದೂ ಮತ್ತು ಆ ವಾಸನೆಯು ಯೋಜನ ದೂರದವರೆಗೂ ಪಸರಿಸುತ್ತಿದ್ದುದರಿಂದ ಆಕೆಯನ್ನು “ಯೋಜನಗಂಧೀ” ಎಂದೂ ಕರೆಯುತ್ತಿದ್ದರು. 

ಆಕೆಯು ಮೂಲತಃ ಬೆಸ್ತರವಳಲ್ಲ. ಆಕೆಯ ಜನ್ಮ ವೃತ್ತಾಂತವು ಬಹಳ ವಿಚಿತ್ರವಾಗಿದೆ. ಮೃಗಬೇಟೆಗೆಂದು ಕಾಡಿಗೆ ಹೋದ ಚೇದಿ ದೇಶದ ಅರಸ ಉಪರಿಚರ ವಸು ಎಂಬವನು ಅಲ್ಲಿ ಹರಿಣಗಳ ಮೈಥುನವನ್ನು ನೋಡುತ್ತಾನೆ. ಇದರಿಂದ ಆತ ಕಾಮೋದ್ರಿಕ್ತನಾದಾಗ ಅವನಿಗೆ ವೀರ್ಯ ಸ್ಖಲನವಾಗುತ್ತದೆ. ವೀರ್ಯನಾಶವು ಭ್ರೂಣಹತ್ಯೆಗೆ ಸಮ ಎಂಬುದನ್ನು ಮನಗಂಡು ವಸುವು ಅದನ್ನು ಒಂದು ಗಿಡುಗ ಪಕ್ಷಿಯ ಮೂಲಕ ಅರಮನೆಯಲ್ಲಿರುವ ತನ್ನ ಪತ್ನಿ ಗಿರಿಕೆಗೆ ಕಳುಹಿಸುತ್ತಾನೆ. ಆ ಗಿಡುಗವು ಆಕಾಶ ಮಾರ್ಗದಲ್ಲಿ ಹಾರುತ್ತಾ ಹೋಗುತ್ತಿರುವಾಗ ಇನ್ನೊಂದು ಗಿಡುಗವು ಅದನ್ನು ನೋಡಿ , ಅದರ ಬಾಯಿಯಲ್ಲಿರುವುದು ಮಾಂಸದ ಚೂರು ಎಂಬುದಾಗಿ ಭ್ರಮಿಸಿ , ಆಹಾರಕ್ಕಾಗಿ ಜಗಳಕ್ಕೆ ತೊಡಗುತ್ತದೆ. ಹಾಗೆ ಜಗಳ ಆಡುವಾಗ ಗಿಡುಗದ ಬಾಯಿಯಲ್ಲಿರುವ ವೀರ್ಯವು ಎರಡು ತುಂಡುಗಳಾಗಿ ಕೆಳಗಡೆ ಇರುವ ಗಂಗಾ ನದಿಗೆ ಬೀಳುತ್ತದೆ. 

ಬ್ರಹ್ಮನ ಶಾಪದ ಕಾರಣದಿಂದಾಗಿ ಆ ನದಿಯಲ್ಲಿ ಮತ್ಸ್ಯಕನ್ಯೆಯಾಗಿ ಜೀವಿಸುತ್ತಿದ್ದ “ಅದ್ರಿಕೆ” ಎಂಬ ಅಪ್ಸರೆಯು ಆ ವೀರ್ಯದ ತುಂಡುಗಳೆರಡನ್ನು ನುಂಗುತ್ತಾಳೆ. ಪರಿಣಾಮವಾಗಿ ಆ ಮೀನು ಗರ್ಭವತಿಯಾಗುತ್ತದೆ. ಮುಂದೆ ಒಂದು ದಿನ ಬೆಸ್ತರ ಗುರಿಕಾರನಾದ ದಾಶರಾಜ ಕಂಧರನಿಗೆ ಆ ಮೀನು ಸಿಗುತ್ತದೆ. ಅವನು ಅದರ ಹೊಟ್ಟೆಯನ್ನು ಸೀಳಿದಾಗ ಅದರಲ್ಲಿ ಅವಳಿ ಶಿಶುಗಳು ಒಂದು ಗಂಡು ಮತ್ತು ಒಂದು ಹೆಣ್ಣು ಶಿಶುಗಳು ಕಾಣಿಸುತ್ತವೆ. ಕಂಧರನಿಂದ ಸೀಳಲ್ಪಟ್ಟು ಮತ್ಸ್ಯಕನ್ಯೆಯು ಕೊಲ್ಲಲ್ಪಟ್ಟಾಗ ಶಾಪವಿಮೋಚನೆಗೊಂಡ ಅದ್ರಿಕೆಯು ಪ್ರತ್ಯಕ್ಷಳಾಗಿ ಆ ಅವಳಿ ಮಕ್ಕಳನ್ನು ವಸುರಾಜನಿಗೆ ಒಪ್ಪಿಸುವಂತೆ ತಿಳಿಸಿ ಆಕೆ ಅದೃಶ್ಯಳಾಗುತ್ತಾಳೆ. 

ಅವಳ ಆಣತಿಯಂತೆ ಕಂಧರನು ಆ ಎರಡು ಶಿಶುಗಳನ್ನು ವಸುರಾಜನಿಗೆ ಒಪ್ಪಿಸಿದಾಗ ಆತ ಗಂಡು ಶಿಶುವನ್ನು ಮಾತ್ರ ಸ್ವೀಕರಿಸಿ , ಆ ಮಗುವಿಗೆ “ಮತ್ಸ್ಯ” ಎಂಬ ಹೆಸರನ್ನಿರಿಸಿ ತಾನೇ ಸಾಕಿಕೊಳ್ಳುತ್ತಾನೆ. ಮುಂದೆ ಆತನೇ “ಮತ್ಸ್ಯರಾಜ”ನಾಗುತ್ತಾನೆ. ಹೆಣ್ಣು ಶಿಶುವಿಗೆ “ಮತ್ಸ್ಯಗಂಧೀ” ಎಂಬ ಹೆಸರನ್ನಿರಿಸಿ ಕಂದರನಿಗೆ ಮರಳಿಸಿ ಸಾಕಿಕೊಳ್ಳುವಂತೆ ಆದೇಶಿಸುತ್ತಾನೆ. ಹೀಗೆ ಬೆಸ್ತನಾದ ಕಂಧರನ ಸಾಕು ಮಗಳಾಗಿ ಬೆಳೆದವಳೇ ಈ ಮತ್ಸ್ಯಗಂಧಿ. ಆಕೆಯು ವಸುದೇವರಿಂದ ಶಾಪಗ್ರಸ್ತಳಾಗಿದ್ದುದರಿಂದ ಆಕೆಯ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು. 

ಆಕೆಯು ಪರಾಶರ ಮುನಿಗಳನ್ನು ನೋಡಿ , ಬಳಿಗೆ ಬಂದು ಅವರ ಪಾದಕ್ಕೆರಗುತ್ತಾಳೆ. ಅಲ್ಲದೇ “ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ನನ್ನ ಶಾಪ ವಿಮೋಚನೆ ಮಾಡಬೇಕು” ಎಂದು ಆಕೆ ಪರಾಶರರನ್ನು ಪ್ರಾರ್ಥಿಸುತ್ತಾಳೆ. ಆಗ ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡುತ್ತಾರೆ. ಆಗ ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವ “ಯೋಜನಗಂಧಿ”ಯಾಗುತ್ತಾಳೆ. ತ್ರಿಕಾಲ ಜ್ಞಾನಿಗಳಾದ ಪರಾಶರರು ಆಕೆಯ ಭವಿಷ್ಯವನ್ನು ಅರಿತು “ಯೋಜನಗಂಧೀ , ಒಬ್ಬ ಮಹಾಮುನಿಯ ಮಹಾಮಾತೆಯಾಗುವ ಯೋಗ ನಿನಗಿದೆ. ಹೀಗಾಗಿ ನಾನು ಲೋಕಕಲ್ಯಾಣಕ್ಕಾಗಿ ನಿನ್ನ ಸಮಾಗಮವನ್ನು ಬಯಸುತ್ತಿದ್ದೇನೆ. ಹಾಗಂತ ನೀನು ಶಿಶುವನ್ನು ನವಮಾಸ ಪರ್ಯಂತ ಗರ್ಭದಲ್ಲಿ ಧರಿಸುವ ಅಗತ್ಯವಿಲ್ಲ. ನಮ್ಮಿಬ್ಬರ ಸಮಾಗಮವಾದ ಕೂಡಲೇ ಒಬ್ಬ ಮಹಾಪುರುಷನ ಜನನವಾಗುತ್ತದೆ. ಅಲ್ಲದೇ ಶಿಶು ಪಡೆದ ಮೇಲೆ ನಿನ್ನ ಕನ್ಯೆತನವೂ ನಾಶವಾಗುವುದಿಲ್ಲ. ನಮ್ಮ ಮಿಲನದಿಂದ ಜನಿಸುವ ಆ ತೇಜೋವಂತ ಮಗನಿಂದ ಮುಂದೆ ಲೋಕ ಕಲ್ಯಾಣವಾಗುವುದು” ಎನ್ನುತ್ತಾರೆ.

ಸತ್ಯವತಿಯು ಅದಕ್ಕೆ ಒಪ್ಪುತ್ತಾಳೆ. ನಂತರ ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ , ಗಾಂಧರ್ವ ರೀತಿಯಲ್ಲಿ ಆಕೆಯನ್ನು ವಿವಾಹವಾಗುತ್ತಾರೆ. ಇವರಿಬ್ಬರಿಂದ ಜನಿಸಿದ ಮಗುವೇ “ಕೃಷ್ಣ ದ್ವೈಪಾಯನ”. ಅಂದರೆ ವ್ಯಾಸರು. ‘ಕೃಷ್ಣ’ ಎಂದರೆ ‘ಕಪ್ಪು’ ಎಂತಲೂ , ‘ದ್ವೈಪಾಯನ’ ಎಂದರೆ ಸುತ್ತಲೂ ನೀರು ಇರುವ ಪ್ರದೇಶ ಅಂದರೆ ದ್ವೀಪ ಎಂತಲೂ ಅರ್ಥ. ಹೀಗೆ ವ್ಯಾಸರ ಬಣ್ಣ ಕಪ್ಪಾಗಿದ್ದು ದ್ವೀಪದಲ್ಲಿ ಜನಿಸಿದವರಾದ್ದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು. ಈ ದ್ವೀಪವು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ 'ಕಲ್ಪಿ' ಎನ್ನುವ ಸ್ಥಳದ ಬಳಿಯಿದೆ. 

ಹುಟ್ಟಿದ ಕ್ಷಣವೇ ಅಳುವುದಕ್ಕೆ ಬದಲಾಗಿ ಕೃಷ್ಣದ್ವೈಪಾಯನರು ದೊಡ್ಡವರಾಗಿ ಬೆಳೆದು ತಾಯಿ ಸತ್ಯವತಿಯ ಪಾದಕ್ಕೆ ಎರಗಿ “ಮಾತೃದೇವೋಭವ” ಎನ್ನುತ್ತಾ ವಂದಿಸುತ್ತಾರೆ. ಅಲ್ಲದೇ “ತಾಯೇ ನಿನಗೆ ಕಷ್ಟಕಾಲ ಒದಗಿದಾಗ ನನ್ನನ್ನು ಸ್ಮರಿಸಿಕೋ , ತಕ್ಷಣ ನಾನು ಪ್ರತ್ಯಕ್ಷನಾಗಿ ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ” ಎಂದು ಹೇಳಿ ಅಲ್ಲಿಂದ ಬದರಿಕಾಶ್ರಮಕ್ಕೆ ಹೊರಟು ಹೋಗುತ್ತಾರೆ. ಅಲ್ಲಿ ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗುತ್ತಾರೆ.  ಕೃಷ್ಣದ್ವೈಪಾಯನರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ , ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿನ ಅವುಗಳ ಬಳಕೆಯ ಆಧಾರದ ಮೇಲೆ ಅವುಗಳನ್ನು ಋಗ್ವೇದ , ಯಜುರ್ವೇದ , ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ , ಅವುಗಳನ್ನು ಕ್ರಮವಾಗಿ ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಪೈಲ , ವೈಶಂಪಾಯನ , ಜೈಮಿನಿ ಮತ್ತು ಸುಮಂತು ಮುನಿಗಳಿಗೆ ಬೋಧಿಸಿದರು.   ಆ ನಾಲ್ಕು ಮುನಿಗಳು ತಮ್ಮ ಶಿಷ್ಯ ಪರಂಪರೆಗೆ ಆ ವೇದವನ್ನು ಬೋಧಿಸಿದರು. ಹೀಗೇ ವೇದ ಪಾಠವು ಇಂದಿಗೂ ಗುರುಗಳಿಂದ ಶಿಷ್ಯರಿಗೆ ನಡೆಯುತ್ತಿದೆ. ಹೀಗೆ ವೇದವನ್ನು ವಿಭಜಿಸಿದುದರಿಂದ ಕೃಷ್ಣದ್ವೈಪಾಯನರಿಗೆ ವೇದವ್ಯಾಸ ಎಂಬ ಗೌರವ ನಾಮ ದೊರೆಯಿತು. 

'ಶುಕ' ಮಹರ್ಷಿ

'ಶುಕ' ಮಹರ್ಷಿ ಕೃಷ್ಣದ್ವಪಾಯನನ ಮಗ. ಅರ್ಥಾತ್ ವೇದವ್ಯಾಸರ ಪುತ್ರ. 'ಪ್ರತಾಜಿ' ಎಂಬ ಅಪ್ಸರೆಯು 'ಶುಕಿ' ಎಂದರೆ ಹೆಣ್ಣು ಗಿಳಿಯ ರೂಪದಲ್ಲಿ ವೇದವ್ಯಾಸರಲ್ಲಿಗೆ ಬಂತು. ಇದಕ್ಕೆ ಮೊದಲು ಒಬ್ಬ ಸುಪುತ್ರನ ಜನನಕ್ಕಾಗಿ ವೇದವ್ಯಾಸರು ತಪಸ್ಸು ಮಾಡುತ್ತಿದ್ದರು. ಈ ಘತಾಜಿ ಎಂಬ ಶುಕಿಯು ವೇದವ್ಯಾಸರಿಂದ ಪಡೆದ ಮಗನಿಗೆ 'ಶುಕ' ಎಂದು ನಾಮಕರಣ ಮಾಡಿದನು. 'ಪಿತೃ' ಎಂಬ ಋಷಿಯ ಮಗಳಾದ 'ಪೀವರಿ'ಯು ಈತನ ಪತ್ನಿ. ಈ ದಂಪತಿಗಳ ಮಗನೇ ಬ್ರಹ್ಮದತ್ತ. ಶುಕಮುನಿಗೆ ಪೀವರಿಯಲ್ಲಿ 'ಕೃಷ್ಣ' ಗೌರಪ್ರಭ, ಭೂರಿ, ದೇವಶ್ರುತರೆಂಬ ನಾಲ್ವರು ಮಕ್ಕಳಾದರು. ಹಾಗೆಯೇ ಕೀರ್ತಿ ಎಂಬ ಮಗಳೂ ಜನಿಸಿದಳು.

ಶುಕನು ಜನಕರಾಜನಿಂದ ವಿದ್ಯಾಭ್ಯಾಸ ಪಡೆದನು. ಹಾಗೆಯೇ ನಾರದ ಮಹರ್ಷಿಯಿಂದ ಉಪದೇಶ ಹೊಂದಿ ವೈರಾಗ್ಯಶಾಲಿಯಾದನು. ಶುಕನು ತಪಸ್ಸು ಮಾಡುತ್ತಿದ್ದಾಗ ಅದನ್ನು ಭಂಗಗೊಳಿಸುವುದಕ್ಕಾಗಿ ದೇವಲೋಕದ ವೇಶೈಯರಲ್ಲಿ ಸುಪ್ರಸಿದ್ದಳೆನಿಸಿದ ರಂಭೆಯು ಹಲವು ಬಾರಿ ಪ್ರಯತ್ನಪಟ್ಟಳು. ಆದರೆ ಶುಕ ಮಹರ್ಷಿಯ ತಪಸ್ಸು ಕೆಡಿಸಲು ಆಕೆಯಿಂದಾಗದೆ ಆಕೆಯೇ ಹತಾಶಳಾಗಬೇಕಾಯಿತು. ಶುಕಮಹರ್ಷಿಯು ಭಾಗವತ ಪುರಾಣವನ್ನು ಪರೀಕ್ಷಿತ್ ರಾಜನಿಗೆ ಹೇಳಿದನು. ಈ ಮೂಲಕ ಶ್ರೀಮದ್ಭಾಗವತವು ಲೋಕದಲ್ಲಿ ಪ್ರಚಾರವಾಯಿತು. ಪರೀಕ್ಷಿತ್ ರಾಜನು ಬೇಟೆಯಾಡುತ್ತಾ ಒಮ್ಮೆ ಕಾಡಿನಲ್ಲಿ ಸಂಚರಿಸುತ್ತಿದ್ದಾಗ 'ಶಮೀಕ'ನೆಂಬ ಋಷಿಯು ತಪಸ್ಸು ಮಾಡುತ್ತಿದ್ದುದನ್ನು ಕಂಡನು. ವಿನೋದಕ್ಕಾಗಿ ಸತ್ತ ಹಾವನ್ನು ಶಮೀಕನ ಕೊರಳಿಗೆ ಹಾಕಿ ಅರಮನೆಗೆ ತೆರಳಿದ್ದನ್ನು ತಿಳಿದ ಶಮೀಕನ ಮಗ ಶೃಂಗಿಯು 'ಪರೀಕ್ಷಿತನನ್ನು ಏಳು ದಿನಗಳೊಳಗೆ ಹಾವು ಕಚ್ಚಿ ಮರಣಿಸಲಿ” ಎಂದು ಶಾಪವಿತ್ತನು. ಈ ಚಿಂತೆಯಿಂದ ನೊಂದು ಬೆಂದ ಪರೀಕ್ಷಿತನಿಗೆ ಶುಕ ಮಹಾಮುನಿಯು ಶ್ರೀಮದ್ಭಾಗವತ್‌ವನ್ನು ಹೇಳುತ್ತಾನೆ ಎಂದು ಭಾಗವತದಿಂದ ತಿಳಿದು ಬರುತ್ತದೆ. ಹಾಗೆಯೇ ಶುಕನು ಮಹಾಭಾರತವನ್ನು ಯಕ್ಷ, ರಾಕ್ಷಸ, ಗಂಧರ್ವರಿಗೆ ಹೇಳಿದನು ಎಂದು ತಿಳಿದು ಬರುತ್ತದೆ. ಕಾರ್ಯ ಸಾಧಿಸುವ ಕಲೆಯನ್ನೂ ಗ್ರಂಥ ಪ್ರಕಾಶನ ಕಲೆಯನ್ನೂ ನಾವು ಶುಕ ಮಹರ್ಷಿಯಿಂದ ಕಲಿಯಬಹುದು. 

ವೇದವ್ಯಾಸರು ನಾಲ್ಕು ವೇದಗಳನ್ನು ರಚಿಸಿದ್ದಲ್ಲದೇ , 18 ಪುರಾಣಗಳನ್ನು , ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ. ವೇದಾಧ್ಯಯನಕ್ಕೆ ನಾಂದಿ ಹಾಡಿದ ವೇದವ್ಯಾಸ ಮಹರ್ಷಿಗಳ  ಜನ್ಮ ದಿನವಾದ ಈ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸುವುದು ಅರ್ಥಪೂರ್ಣವಾಗಿದೆ.