Saturday, June 28, 2025

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 125

 ಬದರಿನಾಥ (Badrinath)


 "ದೇವ ಭೂಮಿ" ಎಂದಎ ಕರೆಯಲ್ಪಡುವ ಉತ್ತರಾಖಂಡ ರಾಜ್ಯವು ಸಾಕಷ್ಟು ಮಹತ್ವ ಪಡೆದ ಧಾರ್ಮಿಕ ಆಕರ್ಷಣೆಗಳನ್ನು ಹೊತ್ತು ನಿಂತ, ಹಿಮಾಲಯ ಪರ್ವತಗಳ ಬುಡದಲ್ಲಿ ನೆಲೆಸಿರುವ ಸುಂದರವಾದ ರಾಜ್ಯವಾಗಿದೆ. ಇಲ್ಲಿ ಸಾಕಷ್ಟು ತೀರ್ಥ ಯಾತ್ರಾ ಕ್ಷೇತ್ರಗಳಿರುವುದು ವಿಶೇಷ. ಹಿಂದುಗಳು ತಮ್ಮ ಜೀವಮಾನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕಾದ ತೀರ್ಥ ಕ್ಷೇತ್ರಗಳ ಪೈಕಿ ಚಾರ್ ಧಾಮ್ ಯಾತ್ರೆಯಲ್ಲಿ ಬರುವ ಬದರಿನಾಥ, ಕೂಡ ಒಂದಾಗಿದೆ ಬದರಿನಾಥ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಧಾರ್ಮಿಕ ಮಹತ್ವವಿರುವ ಪಟ್ಟಣವಾಗಿದೆ. ಬದರಿನಾಥ ದೇವಾಲಯವು 50 ಅಡಿಗಳಷ್ಟು ಎತ್ತರವಿರುವ ರಚನೆಯಾಗಿದ್ದು ಬಂಗಾರದ ಪುಟ್ಟ ಗೋಪುರವನ್ನು ಹೊಂದಿದೆ. ಕಲ್ಲುಗಳಿಂದ ನಿರ್ಮಿಸಲಾಗಿರುವ ದೇವಾಲಯವು ಕಮಾನಿನಾಕಾರದ ಕಿಟಕಿಗಳನ್ನು ಹಾಗೂ ಪ್ರವೇಶಿಸಲು ಮೆಟ್ಟಿಲುಗಳನ್ನು ಹೊಂದಿದೆ.  ದೇವಾಲಯವು ಅಲಕಾನಂದ ನದಿಯ ದಡದಲ್ಲಿರುವ ಎರಡು ಪರ್ವತ ಶ್ರೇಣಿಗಳ ಮಧ್ಯೆದಲ್ಲಿದೆ. ಬದ್ರಿನಾಥ ದೇವಾಲಯದಲ್ಲಿನ ವಿಷ್ಣುವಿನ ವಿಗ್ರಹವನ್ನು ಶಾಲಿಗ್ರಾಮ ಕಲ್ಲಿನಿಂದ ನಿರ್ಮಿಸಲಾಗಿದೆ.   ವಿಗ್ರಹವನ್ನು ದೇವಸ್ಥಾನದ ಬದ್ರಿ ಮರದ ಕೆಳಗೆ ಚಿನ್ನದ ಆವರಣದಲ್ಲಿ ಇರಿಸಲಾಗಿದೆ. ಈ ವಿಗ್ರಹವು ಯೋಗಮುದ್ರೆಯಲ್ಲಿದ್ದು, ವಿಗ್ರಹದಲ್ಲಿನ ದೇವರಿಗೆ 4 ಕೈಗಳಿವೆ. ಒಂದು ಕೈಯಲ್ಲಿ ಚಕ್ರವನ್ನು, ಇನ್ನೊಂದು ಕೈಯಲ್ಲಿ ಶಂಖವನ್ನು ಹಾಗೂ ಇನ್ನೆರೆಡು ಕೈಗಳಲ್ಲಿ ಯೋಗ ಮುದ್ರೆಯನ್ನು ನೋಡಬಹುದಾಗಿದೆ. ಬದ್ರಿನಾಥ ವಿಗ್ರಹದಲ್ಲಿನ ದೇವರ ಹಣೆಯ ಮೇಲೆ ವಜ್ರವನ್ನು ಕೆತ್ತಲಾಗಿದ್ದು, ಇದು ನೋಡುತ್ತಿದ್ದಂತೆ ದೇವರು ಭಕ್ತರನ್ನು ಆಶೀರ್ವದಿಸುವಂತೆ ಕಾಣುತ್ತದೆ. ಬದ್ರನಾಥನ ವಿಗ್ರಹವನ್ನು ಹೊರತುಪಡಿಸಿ ಇಲ್ಲಿ ಏಕಾದಶಿ ದೇವಿಯ ವಿಗ್ರಹವನ್ನು ಕೂಡ ನೋಡಬಹುದಾಗಿದೆ.

ತಮಿಳು ಅಳ್ವರರು ನಮೂದಿಸಿರುವ ದಿವ್ಯ ದೇಸಂನ, ವಿಷ್ಣುವಿಗೆ ಮುಡಿಪಾದ 108 ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿರುವ ಬದರಿನಾಥ ದೇವಾಲಯವು ವೈಷ್ಣವರ ಪ್ರಮುಖ ಯಾತ್ರಾ ಕೇಂದ್ರವಾಗಿ ಗಮನ ಸೆಳೆಯುತ್ತದೆ. ಬದರಿನಾಥಕ್ಕೆ ತೆರಳಲು ದೆಹಲಿ, ಹರಿದ್ವಾರ ಹಾಗೂ ರಿಶಿಕೇಷಗಳು ಪ್ರಮುಖ ಪಟ್ಟಣಗಳಾಗಿವೆ. ಈ ಸ್ಥಳಗಳಿಂದ ಕ್ರಮವಾಗಿ ಬದರಿನಾಥ 525 ಕಿ.ಮೀ, 325 ಕಿ.ಮೀ ಹಾಗೂ 296 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಬದರಿನಾಥ ಕ್ಷೇತ್ರದ ಮಹಿಮೆ ಏನು, ಮಹತ್ವ ಏನು, ಎನ್ನುವುದನ್ನು ತಿಳಿಯಲು ಮುಂದೆ ಓದಿ-  


ಸಂಸ್ಕೃತದಲ್ಲಿ ಬದರಿ ಅಥವಾ ಬದ್ರಿ ಎಂದರೆ ಎಲಚಿ ಕಾಯಿ / ಬೋರೆ ಕಾಯಿ (ಬಾರಿ ಕಾಯಿ) ಎಂದಾಗುತ್ತದೆ. ಕೆಲವು ಪೌರಾಣಿಕ ಉಲ್ಲೇಖಗಳಲ್ಲಿ ಹೇಳಿರುವಂತೆ ಒಂದೊಮ್ಮೆ ಈ ಸ್ಥಳದಲ್ಲಿ ಬೋರೆಕಾಯಿಗಳು ಅತ್ಯಂತ ಹೆಚ್ಚಾಗಿ ಬೆಳೆಯುತ್ತಿದ್ದವಂತೆ. ಹಾಗಾಗಿ ಇದಕ್ಕೆ ಬದರಿ ಅಥವಾ ಬದ್ರಿ ಎಂಬ ಹೆಸರು ಬಂದಿತೆನ್ನಲಾಗಿದೆ. ಲ್ಲಿರುವ ವಿಷ್ಣುವಿನ ದೇವಾಲಯದಿಂದಾಗಿ ಇದಕ್ಕೆ ಬದರಿನಾಥ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಬದರಿಗಳಿರುವ ನಾಡಿನ ನಾಥ (ಒಡೆಯ) ನಾಗಿ ಬದರಿನಾಥನನ್ನು ಕೊಂಡಾಡಲಾಗುತ್ತದೆ.

ಇನ್ನು ಆದಿ ಶಂಕರಾಚಾರ್ಯರು ಧರ್ಮ ಪ್ರಸಾರಕ್ಕಾಗಿ ಭಾರತ ಸಂಚರಿಸುವ ಸಂದರ್ಭದಲ್ಲಿ ಈ ಸ್ಥಳಕ್ಕೆ ಬಂದಾಗ ಅಲಕನಂದಾ ನದಿಯಲ್ಲಿ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಒಡಮೂಡಿದ ಬದರಿನಾರಾಯಣನ ವಿಗ್ರಹವು ದೊರೆತಿತ್ತು. ಹೀಗೆ ದೊರೆತ ನಾರಾಯಣನನ್ನು ಅವರು ತಪ್ತ ಕುಂಡ ಎಂಬ ಬಿಸಿ ನೀರಿನ ಬುಗ್ಗೆ ಬಳಿಯಿರುವ ಗುಹೆಯೊಂದರಲ್ಲಿ ಪ್ರತಿಷ್ಠಾಪಿಸಿ ಪ್ರವರ್ಧಮಾನಕ್ಕೆ ಬರುವಂತೆ ಮಾಡಿದ್ದರು. ನಂತರ ಹದಿನೈದನೇಯ ಶತಮಾನದಲ್ಲಿ ಇಲ್ಲಿನ ಗಡ್ವಾಲ್ ಪ್ರಾಂತವನ್ನಾಳುತ್ತಿದ್ದ ಅರಸನು ಈ ವಿಗ್ರಹವನ್ನು ಈಗಿರುವ ದೇವಾಲಯಕ್ಕೆ ಸ್ಥಳಾಂತರಿಸಿದನು.

***

ಒಮ್ಮೆ ವಿಷ್ಣು ಲೋಕ ಕಲ್ಯಾಣಾರ್ಥವಾಗಿ ಥುಲಿಂಗ್ ಎಂಬ ಹಿಮಾಲಯ ಪರ್ವತಗಳಲ್ಲಿ ತಪಗೈಯುತ್ತಿರುವಾಗ ಅಲ್ಲಿನ ಮಾಂಸಾಹಾರಿಗಳು ಹಾಗೂ ಅಪವಿತ್ರರನ್ನು ಕುಂಡು ಬೇಸರಗೊಂಡು ಬದರಿ ಸ್ಥಳಕ್ಕೆ ಬಂದು ತಪಗೈಯಲು ಪ್ರಾರಂಭಿಸಿದ. ಆದರೆ ಈ ಸ್ಥಳದಲ್ಲಿ ವಿಷ್ಣುವಿಗೆ ಸಾಕಷ್ಟು ಚಳಿಯುಂಟಾದಾಗ ಲಕ್ಷ್ಮಿ ದೇವಿಯು ಸ್ವತಃ ಜೂಜುಬಿ/ಬೋರೆ ಕಾಯಿಯ ಗಿಡಗಳ ಕಾಡಿನ ರೂಪ ತಳೆದು ವಿಷ್ಣುವನ್ನು ಕಾಯತೊಡಗಿದಳು. ಇದರಿಂದ ಪ್ರಸನ್ನನಾದ ನಾರಾಯಣ ಬದ್ರಿಕಾ ಆಶ್ರಮ ಎಂದು ಕರೆದ.

***

ಅತ್ಯಂತ ಹಿಂದೆ ಪರಶಿವನು ತನ್ನ ಕುಟುಂಬದೊಂದಿಗೆ ಬದ್ರಿನಾಥದಲ್ಲಿ ವಾಸಿಸುತ್ತಿದ್ದನಂತೆ. ಒಮ್ಮೆ ಶ್ರೀಹರಿಯು ತಾನು ಏಕಾಂತವಾಗಿ ಧ್ಯಾನ ಮಾಡಲು ಪ್ರಶಾಂತ ಸ್ಥಳವನ್ನು ಹುಡುಕುತ್ತಿರುವಾಗ ಶ್ರೀಹರಿಗೆ ಬಲು ಇಷ್ಟವಾಗಿದ್ದು ಇದೇ ಬದ್ರಿನಾಥ. ಆದರೆ ಶ್ರೀಹರಿ ವಿಷ್ಣುವಿಗೆ ಬದ್ರಿನಾಥ ದೇವಾಲಯದಲ್ಲಿ ಪರಶಿವನು ನೆಲೆಸಿದ್ದಾನೆನ್ನುವುದು ತಿಳಿದಿತ್ತು ಆದ್ದರಿಂದ ಪರಶಿವನನ್ನು ಅಲ್ಲಿಂದ ಬೇರೆಡೆಗೆ ಕಳುಹಿಸಲು ಉಪಾಯವೊಂದನ್ನು ಹೂಡಿದನು. 

ವಿಷ್ಣುವು ಮಗುವಿನ ಅವತಾರವನ್ನು ಧರಿಸಿ ಬದ್ರಿನಾಥದಲ್ಲಿ ಜೋರಾಗಿ ಅಳಲು ಆರಂಭಿಸಿದನು. ಪುಟ್ಟ ಮಗು ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಂಡ ಪಾರ್ವತಿಯು ಆ ಮಗುವನ್ನು ಸಮಾಧಾನಗೊಳಿಸಲು ಮುಂದಾದಳು ಆದರೆ ಮಗುವಿನ ರೂಪದಲ್ಲಿದ್ದ ವಿಷ್ಣು ಸಮಾಧಾನಗೊಳ್ಳದೇ ಮತ್ತಷ್ಟು ಜೋರಾಗಿ ಅಳತೊಡಗಿದನು. ಪಾರ್ವತಿಗೆ ಆ ಮಗು ಯಾರೆಂದು ಗುರುತಿಸಲು ಸಾಧ್ಯವಾಗದಿದ್ದರೂ ಪರಶಿವನಿಗೆ ಆ ಮಗು ವಿಷ್ಣುವೇ ಎಂದು ತಿಳಿಯಿತು. ಪಾರ್ವತಿ ಮಗುವನ್ನು ಸಮಾಧಾನಗೊಳಿಸಲು ಕೋಣೆಯೊಳಗೆ ಕರೆದುಕೊಂಡು ಹೋಗುವಾಗ ಪರಶಿವನು ಬೇಡವೆಂದು ತಡೆಯುತ್ತಾನೆ. ಆದರೆ ಶಿವನ ಮಾತನ್ನು ಅಲ್ಲಗಳೆದ ಪಾರ್ವತಿಯು ಮಗುವನ್ನು ಸಮಾಧಾನಗೊಳಿಸಲು ಒಳಗೆ ಕರೆದುಕೊಂಡು ಹೋಗಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನಪಡಿಸುತ್ತಾಳೆ. ವಿಷ್ಣು ಪಾರ್ವತಿ ಹೊರಗಡೆ ಹೋಗಲೆಂದು ನಿದ್ರಿಸುವಂತೆ ನಾಟಕವಾಡುತ್ತಾನೆ. ಆಗ ಪಾರ್ವತಿಯು ಮಗು ಮಲಗಿದೆಯೆಂದು ಬಾಗಿಲಿನಿಂದ ಹೊರಗಡೆ ಹೋಗುತ್ತಾಳೆ. ಆ ಸಂದರ್ಭದಲ್ಲಿ ವಿಷ್ಣು ಬಾಗಿಲನ್ನು ಮುಚ್ಚಿ ಶಿವನಿಗೆ ಮತ್ತು ಪಾರ್ವತಿಗೆ ಕೇದರನಾಥದಲ್ಲಿ ನೆಲೆಸುವಂತೆ ಹೇಳುತ್ತಾನೆ. ಅಂದಿನಿಂದ ಬದ್ರಿನಾಥದಲ್ಲಿ ವಿಷ್ಣುವು ನೆಲೆಸುತ್ತಾನೆ. ಹಾಗೂ ಪರಶಿವನು ತನ್ನ ಕುಟುಂಬದೊಂದಿಗೆ ಕೇದರನಾಥದಲ್ಲಿ ನೆಲೆಯಾಗುತ್ತಾನೆ.

ಇನ್ನು ಪರಶಿವನು ಹಾಗೆ ಕೇದಾರಕ್ಕೆ ತೆರಳುವ ಸಮಯದಲ್ಲಿ ಇಲ್ಲಿ ತನ್ನೊಂದು ಅಂಶವನ್ನು ಉಳಿಸಿ ಹೋಗಿದ್ದು ಅದನ್ನು ಇಂದು ಆದಿ ಕೇದಾರ ಎನ್ನಲಾಗುತ್ತದೆ. ಬದರಿನಾರಾಯಣನ ದೇವಾಲಯದ ಎಡಭಾಗದಿಂದ ಸ್ವಲ್ಪ ಕೆಳಗಿಳಿದರೆ ಅಲ್ಲಿ ಆದಿ ಕೇದಾರ ಮಂದಿರವಿದ್ದು ಕೇದಾರನಾಥಕ್ಕೆ ಹೋಗಲಾಗದವರು ಇಲ್ಲಿಯೇ ದರ್ಶನ ಮಾಡಿ ಕೇದಾರನಾಥನ ದರ್ಶನ ಫಲ ಪಡೆಯಬಹುದಾಗಿದೆ. 

***

 ಒಮ್ಮೆ ಲಕ್ಷ್ಮಿ ದೇವಿಯು ತನ್ನ ತವರಿಗೆ ಹೋದಾಗ ವಿಷ್ಣುವಿಗೆ ತನ್ನ ಸತಿಯಿಲ್ಲದೇ ದಿನವನ್ನು ಹೇಗೆ ಕಳೆಯುವುದೆನ್ನುವುದರ ಕುರಿತು ಚಿಂತೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ವಿಷ್ಣು ಧ್ಯಾನ ಮಾಡಲು ಕುಳಿತುಕೊಳ್ಳುತ್ತಾನೆ. ಲಕ್ಷ್ಮಿಯು ತವರು ಮನೆಯಿಂದ ಹಿದಿರುಗಿ ವಿಷ್ಣುವಲ್ಲಿಗೆ ಬರುತ್ತಾಳೆ. ಆಗ ವಿಷ್ಣು ಎಲ್ಲಿಯೂ ಕೂಡ ಕಾಣಿಸುವುದಿಲ್ಲ. ಲಕ್ಷ್ಮಿ ತುಂಬಾ ಸಮಯಗಳ ಕಾಲ ಹುಡುಕಿದ ನಂತರ ವಿಷ್ಣು ಆಲದ ಮರದ ಬಳಿ ಧ್ಯಾನ ಮಾಡುತ್ತಿರುವುದನ್ನು ನೋಡುತ್ತಾಳೆ. ಆಗ ಲಕ್ಷ್ಮಿ ವಿಷ್ಣುವನ್ನು ಬದ್ರಿನಾಥ ಎನ್ನುವ ಹೆಸರಿನಿಂದ ಕೂಗಿ ಕರೆದ ಕಾರಣ  ಆ ಸ್ಥಳವು ಬದ್ರಿನಾಥವಾಗಿದೆ ಎನ್ನಲಾಯಿತು.

ಇನ್ನೊಂದು ಕಥೆಯ ಪ್ರಕಾರ ದೀರ್ಘ ಕಾಲ ನಾರಾಯಣನನ್ನು ಬಿಟ್ಟಿರಲಾಗದ ಲಕ್ಷ್ಮಿ ತಪಸ್ಸಿಗೆ ಕುಳಿತ ವಿಷ್ಣುವಿಗೆ ಆಹಾರ, ರಕ್ಷಣೆ, ನೆರಳು ನೀಡಲು ಮುಳ್ಳುಗಳಿಂದ ಕೂಡಿದ ಬದರಿ ವೃಕ್ಷವಾಗಿ ಈ ಸ್ಥಳದಲ್ಲಿ ನೆಲೆಯಾಗಿದ್ದಾಳೆ. ಆ ವೃಕ್ಷ ವಿಶಾಲವಾಗಿ ಹರಡಿಕೊಂಡು ವಿಶಾಲ ಬದರಿ ಎಂದು ಹೆಸರಾಯಿತು ಹಿಂದೆ ಕ್ಷೇತ್ರದ ತುಂಬಾ ಎಲ್ಲೆಲ್ಲೂ ಕಂಡು ಬರುತ್ತಿದ್ದ ಬದರಿ ವೃಕ್ಷ ಇಂದು ಲಕ್ಷ್ಮಿ ಸ್ತಂಭ ಎನ್ನುವ ಗುರುತಿನಲ್ಲಿ ಮಾತ್ರವೇ ಉಳಿದುಕೊಂಡಿದೆ. 

***

ಕ್ಷೇತ್ರಪಾಲ ಘಂಟಾಕರ್ಣ


ಬದರಿ ಕ್ಷೇತ್ರದ ಕ್ಷೇತ್ರಪಾಲ ಘಂಟಕರ್ಣನ ಕಥೆ ಸಹ ಸ್ವಾರಸ್ಯವಾಗಿದೆ. ಘಂತಕರ್ಣ ಒಬ್ಬ ರಾಕ್ಷಸನಾಗಿದ್ದು ಅವನು ರಾಮಾಯಣದಲ್ಲಿ ಬರುವ ರಾವಣನಂತೆ ಶಿವಭಕ್ತನಾಗಿದ್ದನು. ಅವನು ಶಿವನನ್ನು ಕುರಿತು ಸಾವಿರಾರು ವರ್ಷ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾನೆ. ಆಗ ಅವನಿಗೆ ಶಿವನು ಪ್ರತ್ಯಕ್ಷ್ಯವಾಗಿ "ವರವೇನು ಬೇಕು" ಎಂದು ಕೇಳಲು ತನಗೆ ಮುಕ್ತಿ ಕರುಣಿಸು ಎನ್ನುತ್ತಾನೆ. ಆದರೆ ಶಿವನು ಈ ಬದರಿ ಕ್ಷೇತ್ರವು ನಾರಾಯಣನಿಗೆ ಸೇರಿದೆ, ನಾನು ಇಲ್ಲಿ ನಿನಗೆ ಮುಕ್ತಿ ಕೊಡುವ ಅಧಿಕಾರ ಹೊಂದಿಲ್ಲ. ಅದಕ್ಕಾಗಿ ನೀನು ನಾರಾಯಣನ್ನ್ನು ಕೇಳಿಕೊಳ್ಲಬೇಕು ಎಂದಾಗ ಘಂಟಾಕರ್ಣನಿಗೆ ನಾರಾಯಣನನ್ನು ಕೇಳಲು ಮನಸ್ಸಾಗುವುದಿಲ್ಲ ಆಗ ಶಿವನು ಹಾಗಿದ್ದರೆ ನೀನಿಲ್ಲಿ ಕ್ಷೇತ್ರಪಾಲಕನಾಗಿ ಇರುವವನಾಗು ಎಂದಾಗ ಅವನು ಅದಕ್ಕೆ ಒಪ್ಪಿ ಇಲ್ಲಿಯ ಕ್ಷೇತ್ರಪಾಲಕನಾಗುತ್ತಾನೆ.  ವಿಷ್ಣುವಿನ ಶತ್ರುವಾಗಿದ್ದ ಘಂಟಾಕರ್ಣ ವಿಷ್ಣುವಿನ ಹೆಸರು ಕೇಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ  ಯಾವಾಗಲೂ ತನ್ನ ಕಿವಿಗಳಿಗೆ ಗಂಟೆ ಕಟ್ಟಿಕೊಂಡು ಓಡಾಡುತ್ತಿದ್ದನು. ಮತ್ತು ಈ ರೀತಿಯಾಗಿ ಕಿವಿಗಳಿಗೆ ಗಂಟೆ ಕಟ್ಟಿಕೊಂಡ ಕಾರಣ ಅವನಿಗೆ ಘಂಟಾಕರ್ಣ ಎನ್ನುವ ಹೆಸರಾಗಿದೆ. 

ಇನ್ನು ಈ ಘಂಟಾಕರ್ಣನ ಜನನದ ಬಗ್ಗೆ ಹೇಳುವುದಾದರೆ ದಾರುಕನು ಬ್ರಹ್ಮನಿಂದ ವರವನ್ನು ಪಡೆದ ನಂತರ , ಲೋಕಕ್ಕೆ ತುಂಬಾ ಕಿರುಕುಳ ಕೊಡುತ್ತಿದ್ದನು ಮತ್ತು ಅವನ ಉಪಟಳ ಅಸಹನೀಯವಾದಾಗ ಶಿವನು ತನ್ನ ಮೂರನೇ ಕಣ್ಣಿನಿಂದ ಭದ್ರಕಾಳಿಯನ್ನು ಸೃಷ್ಟಿಸಿದನು ಮತ್ತು ಅವಳು ಅಸುರನನ್ನು ಕೊಂದಳು . ದಾರುಕನ ಪತ್ನಿ ಮತ್ತು ಮಾಯಾಳ ಮಗಳು ಮಂಡೋದರಿ ತನ್ನ ಪತಿಯ ಮರಣದಿಂದ ದುಃಖದಲ್ಲಿ ಮುಳುಗಿದಳು. ಅವಳು ತಪಸ್ಸನ್ನು ಮಾಡಲು ಪ್ರಾರಂಭಿಸಿದಳು . ಶಿವನು ಕಾಣಿಸಿಕೊಂಡು ತನ್ನ ದೇಹದಿಂದ ಕೆಲವು ಹನಿ ಬೆವರನ್ನು ಅವಳಿಗೆ ಕೊಟ್ಟನು, ಅವಳು ಯಾರ ಮೇಲೆ ಬೆವರು ಹನಿಗಳನ್ನು ಸಿಂಪಡಿಸುತ್ತಾಳೋ ಅವರು ಸಿಡುಬಿನಿಂದ ಬಳಲುತ್ತಾರೆ ಮತ್ತು ಅಂತಹ ರೋಗಿಗಳು ಅವಳನ್ನು (ಮಂಡೋದರಿ) ಪೂಜಿಸುತ್ತಾರೆ ಮತ್ತು ಅವಳಿಗೆ ಅಗತ್ಯವಾದ ಆಹಾರವನ್ನು ನೀಡುತ್ತಾರೆ  ಎಂದು ಹೇಳಿದನು. ಆ ದಿನದಿಂದ ಮಂಡೋದರಿ ಸಿಡುಬಿನ ಅಧಿದೇವತೆಯಾದಳು. ಬೆವರಿನ ಹನಿಗಳೊಂದಿಗೆ ಭೂಮಿಗೆ ಹಿಂತಿರುಗುವಾಗ ಮಂಡೋದರಿ ಭದ್ರಕಾಳಿಯನ್ನು ಭೇಟಿಯಾದಳು, ಅವಳ ಗಂಡನ ಸಾವಿಗೆ ಸೇಡು ತೀರಿಸಿಕೊಳ್ಳಲು ಅವಳು ಆ ಬೆವರಿನ ಹನಿಗಳನ್ನು ಎಸೆದಳು. ತಕ್ಷಣವೇ ಭದ್ರಕಾಳಿ ಸಿಡುಬಿನ ದಾಳಿಯಿಂದ ಕೆಳಗೆ ಬಿದ್ದಳು. ಈ ಘಟನೆಯ ಬಗ್ಗೆ ಕೇಳಿದ ಶಿವನು ಘಂಟಾಕರ್ಣ ಎಂಬ ಭಯಾನಕ ರಾಕ್ಷಸನನ್ನು ಸೃಷ್ಟಿಸಿದನು. ಶಿವನ ನಿರ್ದೇಶನದ ಪ್ರಕಾರ ಘಂಟಾಕರ್ಣ ಭದ್ರಕಾಳಿಯ ದೇಹದಿಂದ ಸಿಡುಬನ್ನು ನೆಕ್ಕಿದನು. ಆದರೆ, ಅವನು ಅದನ್ನು ಆಕೆಯ ಮುಖದಿಂದ ನೆಕ್ಕಲು ಪ್ರಯತ್ನಿಸಿದಾಗ ಅವಳು ಅವನನ್ನು ತಡೆದಳು, ತಾನು ಮತ್ತು ಘಂಟಾಕರ್ಣ ಸೋದರ್ ಸೋದರಿಯರು ಮತ್ತು ಸೋದರಿಯ ಮುಖವನ್ನು ಸೋದರ  ನೆಕ್ಕುವುದು ಅನುಚಿತ ಎಂದು ಹೇಳಿದಳು. ಮತ್ತು, ಇಂದಿಗೂ ಸಹ ಭದ್ರಕಾಳಿಯ ಮುಖದ ಮೇಲಿನ ಸಿಡುಬು ಅವಳಿಗೆ ಆಭರಣವಾಗಿ ಉಳಿದಿದೆ.

ದ್ವಾಪರ ಯುಗದಲ್ಲಿ ಕೃಷ್ಣನು ಕ್ಷೇತ್ರ ಪರ್ಯಟನೆಯ ನಿಮಿತ್ತ ಬದರಿ ಕ್ಷೇತ್ರಕ್ಕೆ ಬಂದಾಗ ಅಲ್ಲಿ ಘಂಟಾಕರ್ಣನ ಬೇಟಿಯಾಗುತ್ತದೆ. ಅವನು ಕೃಷ್ಣನಿಗೆ ತಾನು ನಾರಾಯಣನ ದರ್ಶನ ಪಡೆಯಬೇಕು ಎನ್ನುವ ಉದ್ದೇಶ ಹೊಂದಿದ್ದಾಗಿ ಹೇಳುತ್ತಾನೆ. ಅದಕಾಗಿ ಅವನು ರಾಕ್ಷಕಸರು ಸಾಮಾನ್ಯವಾಗಿ ನೀಡುವ ಅತ್ಯುನ್ನತ ಗೌರವದ ಉಡುಗೊರೆಯಾದ ಸತ್ತ ಬ್ರಾಹ್ಮಣನ ಅರ್ಧ ಶವವನ್ನು ಕೃಷ್ಣನಿಗೆ ಅರ್ಪಿಸುತ್ತಾನೆ. ಅದರಿಂದ ಸಂತುಷ್ಟನಾದ ಕೃಷ್ಣ ಅವನ ಬೆನ್ನಿನ ಮೇಲೆ ತಟ್ಟುತ್ತಾನೆ. ಅದರಿಂದಾಗಿ ಘಂಟಾಕರ್ಣ ತನ್ನ ದೇಹವನ್ನು ತ್ಯಜಿಸಿ ವೈಕುಂಠಕ್ಕೆ ತೆರಳುತ್ತಾನೆ ಮುಕ್ತಿ ಪಡೆಯುತ್ತಾನೆ ಎಂದು ಭವಿಷ್ಯ ಪುರಾಣ ಕಥೆ ಹೇಳಿದೆ. ಹೀಗೆ ರಾಕ್ಷಸನೊಬ್ಬ ದೇವತೆಯಾಗಿ ಬದಲಾಗಿ ಇಂದಿಊ ಸಿಡುಬನ್ನು ಗುಣಪಡಿಸುತ್ತಾನೆ ಎಂದು ನಂಬಲಾಗುತ್ತದೆ.


Friday, June 27, 2025

ಬೆಂಗಳೂರಿನಲ್ಲಿ ಮನರಂಜನೆಯ ಹೊಸ ಯುಗಾರಂಭ

 ಯಲಹಂಕದ ಕರ್ಮ & ಕರಿಯಲ್ಲಿ ಇಮ್ಮರ್ಸಿವ್ ಇಂಡೀ ಫಿಲ್ಮ್ ಪಾಪ್-ಅಪ್ ಜೊತೆ ಎಲ್ಲೆಲ್ಲೂ ಮನರಂಜನೆ ಜಾರಿ

ಜೂನ್ 27, 2025 ರಂದು, ಎಂಟರ್ಟೈನ್ಮೆಂಟ್ ಎವ್ರಿವೇರ್ (ಇಇ) ಯಲಹಂಕದ ಕರ್ಮ & ಕರಿಯಲ್ಲಿ ಆಯೋಜಿಸಲಾದ ವಿಶೇಷ ಪಾಪ್-ಅಪ್ ಕಾರ್ಯಕ್ರಮದೊಂದಿಗೆ ತನ್ನ ಕ್ರಾಂತಿಕಾರಿ ಚಲನಚಿತ್ರ ಪ್ರದರ್ಶನ ವೇದಿಕೆಯನ್ನು ಅಧಿಕೃತವಾಗಿ ಪ್ರಾರಂಭಿಸಿತು. ರಾಡಿಕಲ್ ಕಾನ್ಸೆಪ್ಟ್ಸ್ ಸ್ಟುಡಿಯೋದ ಉಪಕ್ರಮವಾದ ಈ ಕಾರ್ಯಕ್ರಮವು, ಸ್ವತಂತ್ರ ಸಿನಿಮಾವನ್ನು ಹೇಗೆ ಪ್ರೇಕ್ಷಕರಿಗೆ ನಿಕಟವಾಗಿ, ಪರಿಣಾಮಕಾರಿಯಾಗಿ ಮತ್ತು ಸಾಂಪ್ರದಾಯಿಕ ಸ್ಥಳಗಳ ನಿರ್ಬಂಧಗಳಿಲ್ಲದೆ ಅನುಭವಿಸಬಹುದು ಎಂಬುದರ ದಿಟ್ಟ ಮರುಕಲ್ಪನೆ ಆಗಿದೆ.


ಕೇವಲ 25 ವಿಐಪಿ ಅತಿಥಿಗಳಿಗೆ ಸೀಮಿತವಾದ ಈ ಸಂಜೆ, ನೆಹೇಶ್ ಪೋಲ್ ನಿರ್ದೇಶಿಸಿದ ಇಟ್ಸ್ ಅಬೌಟ್ ಚಾಯ್ಸಸ್ ಮತ್ತು ಜಾಗತಿಕವಾಗಿ ಮೆಚ್ಚುಗೆ ಪಡೆದ ಕ್ಲಿಂಗ್ ಜಾನ್ಸನ್ ನಿರ್ದೇಶಿಸಿದ ದ್ವಮದ್ವ  ಎಂಬ ಎರಡು ಸ್ವತಂತ್ರ ಚಲನಚಿತ್ರಗಳನ್ನು ಒಳಗೊಂಡ ಬಹು-ಸಂವೇದನಾಶೀಲ ಸಿನಿಮೀಯ ಅನುಭವವನ್ನು ನೀಡಿತು. ಅತಿಥಿಗಳಿಗೆ ಹೆಚ್ಚಿನ ಗುಣಮಟ್ಟವುಳ್ಳ  ವೈರ್ಲೆಸ್ ಹೆಡ್ ಫೋನ್ ಗಳನ್ನು ನೀಡಿ ಅವರನ್ನು ಸುತ್ತಲಿನ ಗದ್ದಲಿಂದಾಚೆ ನಿಶ್ಯಬ್ದ ಪ್ರಪಂಚದೊಡನೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಯಿತು. ಇದರೊಂದಿಗೆ ಸ್ವಾದಿಷ್ಟ ಆಹಾರ, ಪಾನೀಯದೊಂದಿಗೆ ಚರ್ಚೆಗೆ ಸಹ ಅವಕಾಶಇತ್ತು.. ಇದರ ಫಲಿತಾಂಶವಾಗಿ ಆಯಾವ್ ವ್ಯಕ್ತಿಗಳಿಗೆ ವೈಯುಕ್ತಿಕವಾಗಿ ಮತ್ತು ಸಾಮಾಜಿಕವಾಗಿವಿಶೇಷವಾಗಿ  ತೊಡಗಿಸಿಕೊಳ್ಳುವ ಭಾವನೆ ಮೂಡಿಸುವ ಸಿನಿಮೀಯ ಅನುಭವ ಸಿಕ್ಕಿತು.

“ಎಂಟರ್ಟೈನ್ಮೆಂಟ್ ಎವೆರಿವೇರ್ ಚಲನಚಿತ್ರ ನಿರ್ಮಾಪಕರನ್ನು ಅವರ ಪ್ರೇಕ್ಷಕರೊಂದಿಗೆ ಸಂಪರ್ಕಿಸುವ ಮೂಲಕ ಅವರ ಬಲವರ್ಧಿಸುವ  ಗುರಿಯನ್ನು ಹೊಂದಿದೆ ಮತ್ತು ಮಾರುಕಟ್ಟೆಯಲ್ಲಿರುವ ವಿಪರೀತ ಸ್ಪರ್ಧೆಯ ನಡುವೆ  ಸ್ವತಂತ್ರ ಚಲನಚಿತ್ರಗಳಿಗೆ ಮೀಸಲಾದ ಸ್ಥಳವನ್ನು ಇಲ್ಲಿ ಒದಗಿಸುತ್ತದೆ, ಚಲನಚಿತ್ರ ನಿರ್ಮಾಪಕರು ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ಪ್ರದರ್ಶಿಸಲು ತಾವು ಸ್ಥಳವನ್ನು ಹುಡುಕುತ್ತಿದ್ದರೆ ಅಂಥವರಿಗೆ ಈ ಸಂಸ್ಥೆ  ಪ್ರೋತ್ಸಾಹಿಸುತ್ತದೆ” ಎಂದು ರಾಡಿಕಲ್ ಕಾನ್ಸೆಪ್ಟ್ಸ್ ಸ್ಟುಡಿಯೋದ ಮಾಲೀಕ ಶ್ರೀ ನೆಹೇಶ್ ಪೌಲ್ ಹೇಳಿದರು. “ನಮ್ಮ ಚಲನಚಿತ್ರಗಳನ್ನು ಪ್ರದರ್ಶಿಸುವ ಬಯಕೆಯಿಂದ ಎಂಟರ್ಟೈನ್ಮೆಂಟ್ ಎವ್ರಿವೇರ್ ಹುಟ್ಟಿಕೊಂಡಿತು. ನಮಗೆ ಸೂಕ್ತವಾದ  ಅವಕಾಶ ಸಿಗದಿದ್ದಾಗ, ನಾವು ನಮ್ಮದೇ ಆದ ಅವಕಾಶವನ್ನು  ಸೃಷ್ಟಿಸಲು ನಿರ್ಧರಿಸಿದೆವು ಮತ್ತು ಎಂಟರ್ಟೈನ್ಮೆಂಟ್ ಎವೆರಿವೇರ್ ಹೀಗೆ ಅಸ್ತಿತ್ವಕ್ಕೆ ಬಂದಿತು” ಎಂದು ಅವರು ಹೇಳಿದರು. "ಪ್ರೇಕ್ಷಕರು ಉಲ್ಲಿ ಸಾವಿರ ರೂ. ಪಾವತಿಸಿ ಎರಡು ಸಿನಿಮಾ ವೀಕ್ಷಿಸುವದರ ಜೊತೆಗೆ ತಮಗಿಷ್ತವಾದ ಆಹಾರ, ಪಾನೀಯ ಸಹ ಪಡೆಯುವ ಅವಕಾಶವಿದೆ. ಹಾಗಾಗಿ ಇಲ್ಲಿ ಮನರಂಜನೆಯ ಜೊತೆ ಜೊತೆಗೆ ಹಸಿವನ್ನು ಸಹ ನೀಗಿಸುವ ಉದ್ದೇಶವಿದೆ" ಎಂದು ಅವರು ವಿವರಿಸಿದ್ದಾರೆ.  

"ನಮ್ಮಲ್ಲಿ ಬೇರೆ ಕಡೆಗಳಲ್ಲಿ ಪ್ರದರ್ಶನಕ್ಕೆ ಸರಿಯಾದ ವ್ಯವಸ್ಥೆ ಕಾಣದೆ ನಿರಾಶರಾದ ಚಿತ್ರ ತಯಾರಕರು ನಮ್ಮಲ್ಲಿಗೆ ಬಂದರೆ ಅವರಿಗೆ ಸ್ಕ್ರೀನಿಂಗ್ ಗೆ ಅವಕಾಶ ಕಲ್ಪಿಸಿಕೊಟ್ಟು ಪ್ರೇಕ್ಷಕರಿಗೆ ಅವರ ಚಿತ್ರ ತಲುಪಿಸಲಾಗುತ್ತದೆ. ಅಲ್ಲದೆ ನಮ್ಮಲ್ಲಿ ಹಲವು ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನವೂ ಇರುತ್ತದೆ." ಎಂದರು. 

ಕೆಫೆಗಳು ಮತ್ತು ಓಪನ್ ಟೆರೇಸ್ ಮೈಕ್ರೋಬ್ರೂವರಿ ಮತ್ತು ಗ್ಯಾಲರಿಗಳ ವರೆಗೆ ಯಾವುದೇ ಜಾಗವನ್ನು ಮೊಬೈಲ್ ಸಿನೆಮಾ ಹಾಲ್ ಆಗಿ ಪರಿವರ್ತಿಸಲು ಎಂಟರ್ಟೈನ್ಮೆಂಟ್ ಎವೆರಿವೇರ್ ವಿಶಿಷ್ಟ ಮಾದರಿಯು ತಂತ್ರಜ್ಞಾನ, ಸೃಜನಶೀಲತೆ ಮತ್ತು ಆತಿಥ್ಯವನ್ನು ಜೊತೆಗೂಡಿಸುತ್ತದೆ. ಪ್ರೇಕ್ಷಕರಿಗೆ . ವೀಕ್ಷಣಾ ಅನುಭವವನ್ನು ಮರಳಿ ಪಡೆಯುವ ಧ್ಯೇಯದೊಂದಿಗೆ, ವೇದಿಕೆಯು  ಶಬ್ದಮಾಲಿನ್ಯ,, ಹೊರಗಿನ ಗದ್ದಲ ಮತ್ತು ಸ್ಕ್ರೀನಿಂಗ್ ಮಾಡಲು ಇರಬಹುದಾದಂತಹಾ  ಸಾಂಪ್ರದಾಯಿಕ ಅಡೆತಡೆಗಳನ್ನು ನಿವಾರಿಸುತ್ತದೆ.

ರಾಡಿಕಲ್ ಕಾನ್ಸೆಪ್ಟ್ಸ್ ಸ್ಟುಡಿಯೋದ ಕ್ರಿಯೇಟಿವ್ ಡೈರೆಕ್ಟರ್ ಮತ್ತು ಎಂಟರ್ಟೈನ್ಮೆಂಟ್ ಎವೆರಿವೇರ್ ನ ಸಹ-ಸಂಸ್ಥಾಪಕಿ ಅಕ್ಷರಾ ಸುರೇಶ್ ತಮ್ಮ ಸಂಥೆಯ ಮೂಲ ಉದ್ದೇಶವನ್ನು ಹಂಚಿಕೊಂಡರು. ”ಕೇವಲ ಸ್ಕ್ರೀನಿಂಗ್ ಮಾಡುವುದು ನಮ್ಮ ಗುರಿಯಲ್ಲ, ಕಥೆ ಹೇಳುವ ಪರಿಸರದ ಮರುಸೃಷ್ಟಿಯೂ ಇಲ್ಲಿರಲಿದೆ. . ಎಂಟರ್ಟೈನ್ಮೆಂಟ್ ಎವೆರಿವೇರ್  ಹೆಚ್ಚಾಗಿ ಗಮಕ್ಕೆ ಬಾರದ ಆದರೆ ತಮ್ಮೊಳಗೆ ಅಪಾರ ಕಥನ ಶಕ್ತಿಯನ್ನು ಹೊಂದಿರುವ  ಚಲನಚಿತ್ರ ತಯಾರಕರು ತಮ್ಮ  ತೀಕ್ಷ್ಣವಾದ ಕಥೆಗಳು ಮತ್ತು ಅದರ ಆಳವನ್ನು ಅನುಭವಿಸಬಲ್ಲ ಪ್ರೇಕ್ಷಕರಿಗಾಗಿ. ಈ ಸಂಸ್ಥೆ ಅಸ್ತಿತ್ವದಲ್ಲಿದೆ ಮತ್ತು ಇನ್ನೂ ಹೆಚ್ಚಿನದನ್ನು ನೀಡುವುದಕ್ಕಾಗಿ ಬಯಸುತ್ತಿದೆ ಎನ್ನುವುದಕ್ಕೆ ಈ ಸಂಜೆ ಸಾಕ್ಷಿಯಾಗಿದೆ.” ಎಂದು ಹೇಳಿದರು. 


ಎಂಟರ್ಟೈನ್ಮೆಂಟ್ ಎವೆರಿವೇರ್  ಉದ್ಘಾಟನಾ ಆವೃತ್ತಿಯು ಭಾರತೀಯ ಚಲನಚಿತ್ರ ಸಂಸ್ಥೆ (www.indianfilminstitute.org)  ನೊಂದಿಗೆ ಪ್ರಮುಖ ಸಹಯೋಗವನ್ನು ಹೊಂದಿದೆ. ಇದು ಭಾರತದಾದ್ಯಂತ ಹೊಸತಾದ, ಸ್ವತಂತ್ರ ಸಿನಿಮಾ ತಯಾರಕರ ದ್ವನಿಯನ್ನು  ಪೋಷಿಸುವ ವೇದಿಕೆಯ ಬದ್ದತೆಯನ್ನು ಬಲಪಡಿಸುತ್ತದೆ.

ಎಂಟರ್ಟೈನ್ಮೆಂಟ್ ಎವೆರಿವೇರ್ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಂತೆ, ಬೆಂಗಳೂರು ನಗರ ಇದಕ್ಕೆ ತಕ್ಕ ಹಾದಿಯನ್ನು ತೋರೊಸೊದೆ/: ಇದು ಕೇವಲ ಒಂದು ಘಟನೆಯಲ್ಲ, ಇದು ಕಥೆಗಳು, ತಯಾರಕರು/ನಿರ್ಮಾಪಕರು ಮತ್ತು ವೀಕ್ಷಕರ ನಡುವೆ ಅರ್ಥಪೂರ್ಣ ಸಂವಾದಗಳನ್ನು ಸೃಷ್ಟಿಸಲು ನಿರ್ಮಿಸಲಾದ ಸಾಂಸ್ಕೃತಿಕ ಚರ್ಚಾ ವೇದಿಕೆಯಾಗಿದೆ.

Monday, June 02, 2025

ಕನ್ನಡ ಸಹಿಷ್ಣು ಭಾಷೆ; 8 ಜ್ಞಾನಪೀಠ, 1 ಬೂಕರ್ ಪ್ರಶಸ್ತಿ, ಇದು ಕನ್ನಡದ ತಾಕತ್ತು: ಬಾನು ಮುಷ್ತಾಕ್

 ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ.  ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ಬಾನು ಮುಷ್ತಾಕ್ ಅವರು ನಮ್ಮ ಭಾಷೆಗೆ ಬೂಕರ್ ಒದಗಿಸಿಕೊಡುವ ಮೂಲಕ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ. ಇದು ಇಡೀ ಕನ್ನಡ ನಾಡು ಹೆಮ್ಮೆ‌ಪಡುವ ಕ್ಷಣ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ "ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ"ಗೆ ಭಾಜನರಾಗಿ ಜಾಗತಿಕ ಮಟ್ಟದಲ್ಲಿ ಕನ್ನಡ ನಾಡು - ನುಡಿಯ ಶ್ರೇಯ ಹೆಚ್ಚಿಸಿರುವ ಬಾನು ಮುಷ್ತಾಕ್ ಹಾಗೂ ದೀಪಾ ಭಸ್ತಿ ಅವರನ್ನು ಅಭಿನಂದಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 


ತಮ್ಮ ಕತೆಗಳ ಮೂಲಕ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಬಾನು ಮುಷ್ತಾಕ್, ದೀಪಾ ಭಸ್ತಿ ಅವರಿಗೆ ಸರ್ಕಾರದಿಂದ ತಲಾ ₹10 ಲಕ್ಷ ಪುರಸ್ಕಾರ ನೀಡಲಾಗುವುದು. ಇದರ ಜೊತೆಗೆ ಬಾನು ಅವರ ಕತೆಗಳನ್ನು ಇಂಗ್ಲಿಷ್ ಗೆ ಪ್ರಕಟಿಸಲು, ಅನುವಾದಕ್ಕೂ ಸರ್ಕಾರದ ನೆರವು ನೀಡಲಾಗುವುದು. ಎಂದು ಅವರು ಈ ವೇಳೆ ಘೋಷಿಸಿದರು. 

ಮುಖ್ಯಂತ್ರಿಗಳ ಭಷಣದ ಪ್ರಮುಖಾಂಶಗಳು ಹೀಗಿದೆ - 

ಪತ್ರಕರ್ತೆಯಾಗಿ, ಲೇಖಕಿಯಾಗಿ, ವಕೀಲರಾಗಿ, ಹೋರಾಟಗಾರ್ತಿಯಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಯ ಶಕ್ತಿ. 

ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಬರೆಯುತ್ತಲೇ, ವಕೀಲೆಯಾಗಿ ಬಡವರ ಪರ ವಕಾಲತ್ತು ವಹಿಸುತ್ತಾ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಗಳಲ್ಲಿ ಸಮಾಜಮುಖಿ ಸತ್ವ ಇದೆ ಎನ್ನುವುದಕ್ಕೆ ಸಾಕ್ಷಿ. 

ಮುಸ್ಲಿಂ ಸಮುದಾಯದ ಹೆಣ್ಣು‌ಮಕ್ಕಳ ಧ್ವನಿಯಾಗಿ ಮೌಡ್ಯ ವಿರೋಧಿಸಿ ಬರೆಯುವ ಪ್ರಗತಿಪರ ಎದೆಗಾರಿಕೆ ಬಾನು ಅವರಲ್ಲಿದೆ. ಸಾಹಿತ್ಯದ ಮೂಲಕ ಮಾನವೀಯ ಸಂದೇಶ ನೀಡುವ ಜವಾಬ್ದಾರಿ ಬಾನು ಮುಷ್ತಾಕ್ ಅವರು ನಿರ್ವಹಿಸಿದ್ದಾರೆ.

ಕವಿರಾಜಮಾರ್ಗದಲ್ಲಿ ಪರಧರ್ಮ ಮತ್ತು ಪರ ವಿಚಾರಗಳನ್ನು ಸಹಾನುಭೂತಿಯಿಂದ ನೋಡಬೇಕು ಎಂದು ಕರೆ ನೀಡಿದ್ದರೆ, 

ಆದಿಕವಿ ಪಂಪ ಅವರು ಮನುಷ್ಯ ಜಾತಿ ತಾನೊಂದೇ ವಲಂ ಎಂದಿದ್ದಾರೆ, ಬಸವಣ್ಣನವರು "ಇವ ನಮ್ಮವ" ಎಂದು ಹೇಳಿದ್ದಾರೆ. ಹೆಣ್ಣಿನ ಧ್ವನಿಯಾದ ಅಕ್ಕಮಹಾದೇವಿ ಅವರೂ ಇದನ್ನೇ ಧ್ವನಿಸಿದ್ದಾರೆ. ಇವರೆಲ್ಲರ ಆಶಯಗಳ ಮುಂದುವರಿಕೆಯಾಗಿ ಬಾನು ಮುಷ್ತಾಕ್ ಕೆಲಸ ಮಾಡಿದ್ದಾರೆ.

ಇಂಥದ್ದೊಂದು ಮೇರು ಪ್ರಶಸ್ತಿಗೆ ಭಾಜನರಾದ ಬಾನು ಅವರನ್ನು ಸನ್ಮಾನಿಸುವುದು ಕನ್ನಡಿಗನಾಗಿ ನನಗೆ ಸಂತೋಷದ ವಿಷಯ. ಇಂತಹ ಇನ್ನಷ್ಟು ಬರಹಗಳು ಅವರಿಂದ ಹೊರಬರಲಿ ಎಂದು ಹಾರೈಸುತ್ತೇನೆ.


ಕನ್ನಡ ಸಹಿಷ್ಣು ಭಾಷೆ;

 ಕರ್ನಾಟಕದಲ್ಲಿ ಇತರ ಭಾಷೆಗಳ ಬಗ್ಗೆ ಅಸಹಿಷ್ಣುತೆ ಏಕೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ತಮ್ಮನ್ನು ಆಗಾಗ್ಗೆ ಕೇಳುತ್ತವೆ. ಅದಕ್ಕೆ ನಾನು ಕನ್ನಡದ ಬಗ್ಗೆ ನಿಮ್ಮ ತಿಳುವಳಿಕೆ ತಪ್ಪು. ಕನ್ನಡದಷ್ಟು ಸಹಿಷ್ಣು ಭಾಷೆ ಇನ್ನೊಂದಿಲ್ಲ. ಇದು ಇತರ ಅನೇಕರಿಗೆ ವೇದಿಕೆಯನ್ನು ನೀಡಿದ ಭಾಷೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಮತ್ತು ಒಂದು ಬೂಕರ್ ಪ್ರಶಸ್ತಿಯನ್ನು ಹೊಂದಿರುವ ಹೆಗ್ಗಳಿಕೆಯನ್ನು ಕನ್ನಡ ಭಾಷೆ ಹೊಂದಿದೆ ಎಂದು ಮುಷ್ತಾಕ್ ಹೇಳಿದರು.

ಕಮಲ್ ಹಾಸನ್ ವಿವಾದಕ್ಕೆ ಇದೇ ನನ್ನ ಉತ್ತರ

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬೂಕರ್ ವಿಜೇತ ಖ್ಯಾತ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಪತ್ರಕರ್ತರು ಪ್ರಶ್ನಿಸಿದ್ರು. ಈ ವೇಳೆ ಮಾತನಾಡಿದ ಅವರು, ನಾನು ಅದಕ್ಕೆ ಉತ್ತರ ಹೇಳಿದ್ದೇನೆ. ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿದೆ, ಒಂದು ಬೂಕರ್ ಪ್ರಶಸ್ತಿ ಸಿಕ್ಕಿದೆ, ಇದೇ ಅವರ ಹೇಳಿಕೆಗೆ ಉತ್ತರ ಎನ್ನುವ ಮೂಲಕ ಕಮಲ್ ಹಾಸನ್‌ಗೆ ತಿರುಗೇಟು ನೀಡಿದ್ದಾರೆ.

Thursday, May 29, 2025

ಭಾವಗೀತೆಯ ಕವಿ ಎಂದೇ ಖ್ಯಾತಿಯಾಗಿದ್ದ ಸಾಹಿತಿ ಎಚ್.ಎಸ್.ವೆಂಕಟೇಶ್ ‌ಮೂರ್ತಿ ವಿಧಿವಶ!

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರಾದ ಭಾವಗಳ ಕವಿ ಎಚ್ಚೆಸ್ವಿ ಎಂದೇ ಕರೆಯಲ್ವಡುತ್ತಿದ್ದ ಎಚ್ ಎಸ್ ವೆಂಕಟೇಶಮೂರ್ತಿ (80 ವರ್ಷ )ನಿಧನರಾಗಿದ್ದಾರೆ. ಕಥೆ, ಕಾದಂಬರಿ, ವಿಮರ್ಶೆ, ಕವನ, ಮಕ್ಕಳ ಸಾಹಿತ್ಯ, ಸಿನಿಮಾ ಸಾಹಿತ್ಯ, ರಂಗಭೂಮಿ ಮುಂತಾಗಿ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಕೃಷಿ ಮಾಡಿದ್ದ ಕನ್ನಡದ ನಲ್ಮೆಯ ಕವಿ, ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಆಗಿದ್ದ ಇವರು ಕೆಲದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ನಾಲ್ವರು ಪುತ್ರರನ್ನು ಅಗಲಿದ್ದಾರೆ.


ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ‘ಕನ್ನಡದಲ್ಲಿ ಕಥನ ಕವನಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದುಕೊಂಡಿದ್ದರು. ಅಲ್ಲದೇ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ. ಜೊತೆಗೆ ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.

ಮೂಲತಃ ದಾವಣಗೆರೆ  ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಗ್ರಾಮದ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದರು. ನಂತರ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. ಕನ್ನಡದಲ್ಲಿ `ಕಥನ ಕವನಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ  ಪದವಿ ಪಡೆದಿದ್ದಾರೆ. 2000ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದರು.

ಎಚ್ ಎಸ್ ವೆಂಕಟೇಶಮೂರ್ತಿ ಅವರ ಅಂತಿಮ ದರ್ಶನವನ್ನು ಇಂದು ಮಧ್ಯಾಹ್ನ 11-2 ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ.

Tuesday, May 27, 2025

ಇದು ನಿಮ್ಮ ವಾಹಿನಿ ಕಲಾ ವೇದಿಕೆ ಬುದ್ದ ಪೂರ್ಣಿಮಾ, 16ನೇ ಸಾಂಸ್ಕೃತಿಕ ಸಿಂಚನ

ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ  ಬುದ್ದ ಪೂರ್ಣಿಮಾ ನಿಮಿತ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ   ೧೬ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಳೆದ ಐದು ವರ್ಷಗಳಿಂದ ಇದು ನಿಮ್ಮ ವಾಹಿನಿ ಕಲಾ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಲೆಮರೆಯ ಕಾಯಿಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ,ಗಂಡಸಿ ಸದಾನಂದ ಸ್ವಾಮಿ, ಡಿಕೆಡಿ ಮಂಜು ಮಾಸ್ಟರ್, ಗಜಲಕ್ಷ್ಮಿ  ಕಮಲೇಶ್, ಕಿಶೋರ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ಕಲಾವಿದರು ವೈವಿದ್ಯಮಯ ನೃತ್ಯ ಪ್ರದರ್ಶನ ನೀಡಿದರು. ಅವುಗಳಲ್ಲಿ ಭರತನಾಟ್ಯ, ಕೂಚುಪುಡಿ, ಕಥಕ್ಕಳಿ ಮೊದಲಾದ ನೃತ್ಯವು ಒಳಗೊಂಡಿತ್ತು. . 

ಈ ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ಎಲೆಮರೆಯ ಕಾಯಿಗಳಂತಾ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಇದಕ್ಕೆ ಮುನ್ನ ಈ ಕಾರ್ಯಕ್ರಮವನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದಲ್ಲದೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಡಾ. ಟಿ. ಶಿವಕುಮಾರ್ ನಗರ್ ನವಿಲೆ,ಸಪ್ನ ಜಿ.ಎಂ., ಅಜೀಂ ಮುನ್ನೀಸಾ, ಮಂಜುನಾಥ ಪಾಟೀಲ್, ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಭಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಕೆ.ಎಸ್.  ಹಾಗೂ ಪ್ರಧಾನ ಕಾರ್ಯದರ್ಶಿಗಳು ಈ ಸಂದರ್ಭ ಹಾಜರಿದ್ದರು.

Monday, May 26, 2025

Rotary Club of Bangalore. Programe


Greetings from the Rotary Club of Bangalore.

Bangalore May 2025, Rotary recognizes the importance of partnerships with like-minded individuals and organizations, and actively encourages collaboration. On this journey, something remarkable was discovered by the Rotary Club of Bangalore: that there are many others who are equally dedicated, equally credible, and equally passionate. Such individuals and institutions have come to be admired, respected, and honoured by us. Beyond our own service, those who contribute selflessly to their communities are actively sought out and spotlighted by the Rotary Club of Bangalore. Through such recognition, it is hoped that their impact will be amplified, and others will be inspired to join in making the world a better place. Our 8th edition of "Exemplars" was held at a glittering function in Bangalore.

Recognitions were given as follows. Citizen Extraordinaire: Dr. H Sudarshan Ballal Corporate Citizen: Alpha Design Technologies Pvt Ltd Pride of Work: Thomas Raja Home of Hope Community Service: Nightingales Medical Trust Environment Conservation: Hasiru Dala Youth Icon: Satyarup Siddhanta Startup Success: Digantara Research and Technologies Pvt Ltd Vigyan Veer: Col. H S Shankar (Retd.) Kind regards Rtn Gowri Oza President RCB 2024 – 25 ***

Bangalore, May 2025, As you are aware Rotary club of Bangalore, along with its charity partner Rotary club of Bangalore Charitable Trust, a Registered public charitable trust has been doing enormous charity activities in communities in and around Bangalore for the last 91 years. The trust has a state of art blood bank, free hospital for 1000 patient a month, a privately owned school with 500 students , constructed over 41 schools for the government, refurbished 156 primary health centres affecting 13 Lakh population, refurbished 100 anganwadis impacting 2000 Children, refurbished 125 Government primary schools impacting over 17,000 children , donated 40 dialysis machines, and is supporting numerous other socially relevant community projects in Bangalore. Some of them are continuing projects like RBV school, Rotary TTK blood bank, Manmohan Attavar hospital etc while most of the projects are single year projects. 

Alongside with our objective of doing good in the world, the Rotary Club also is actively in pursuit of identifying individuals and organizations who are engaged in doing good in the communities that they inhabit. We are often amazed at the enormous work that many others offer to society, and wish to highlight the same. So that the ground is prepared for even more good work to happen,  and to make this world a better place to live in.  For this reason we have an initiative called "Exemplars" where we identify on a yearly basis, the change makers and the path breakers of our community who have the sole objective of improving the life and lifestyle of the citizens of this country. This is the 8th edition of Exemplars where we have attempted to highlight the good efforts of all of us -- the do good people. 

Some of the Bangalore personalities who have been awarded   Citizen Extraordinaire in the past are  Dr. BM Verma N. Lakshman Rau Prof. C N R Rao Prakash Padukone Prof. U R Rao Kiran Majumdar Shaw Arundhathi Nag Dr. Annadurai Isro and so on

Saturday, May 24, 2025

ಆಂಜನೇಯನ ಜನ್ಮನಾಮ - ಸುಂದರ!


ಆಂಜನೇಯ ಅಥವಾ ಹನುಮನ ತಾಯಿ ಅಂಜನಾ, ಹನುಮ ಹುಟ್ಟಿದ ನಂತರ ಅವನಿಗೆ ಸುಂದರ ಎಂದು ಹೆಸರಿಟ್ಟಳು. ಮುಂದೆ ಅವನ ದವಡೆ ವಿರೂಪಗೊಂಡ ನಂತರ ಹನುಮಾನ್ ಎಂದು ಕರೆಯಲಾಯಿತು. ಹನುಮ ಎಂದರೆ 'ದವಡೆ' ಅಥವಾ 'ಗಲ್ಲ'. ಆಂಜನೇಯ ಎಂಬುದು ಅವನ ತಾಯಿ ಅಂಜನಾ ಗುರುತಾಗಿ ನೀಡಲಾದ ಹೆಸರು.


ಹನುಮನ ಬಗ್ಗೆ ಸಂಪೂರ್ಣ ವಿವರಗಳಿರುವ ಏಕೈಕ ಅಧಿಕೃತ ಗ್ರಂಥ ಪರಾಶರ ಸಂಹಿತವು, ಸುಂದರ (ಹನುಮಾನ್) ಶಿಶುವಾಗಿದ್ದಾಗ ಅಮಾವಾಸ್ಯೆಯ ದಿನದಂದು ಅವನು ಆಹಾರವನ್ನು ಕೇಳುವ ಕೆಲವು ಶ್ಲೋಕಗಳನ್ನು ಉಲ್ಲೇಖಿಸುತ್ತದೆ. ಅವನ ತಾಯಿ ಅಂಜನಾ ಅವನಿಗೆ ಯಾವುದಾದರೂ ಹಣ್ಣನ್ನು ತಿನ್ನಲು ಹೇಳುತ್ತಾಳೆ. ಅವನು ಉದಯಿಸುತ್ತಿರುವ ಸೂರ್ಯನನ್ನು ನೋಡುತ್ತಾನೆ, ಅದನ್ನು ಹಣ್ಣು ಎಂದು ಭಾವಿಸುತ್ತಾನೆ ಮತ್ತು ಹತ್ತಿರ ಬರುತ್ತಾನೆ. ಇಂದ್ರನು ಅವನ ಗಲ್ಲದ ಮೇಲೆ ವಜ್ರಾಯುಧದಿಂದ ಹೊಡೆದಾಗ ಅದು ಊದಿಕೊಳ್ಳುತ್ತದೆ.  ಅವನ ಗಲ್ಲ/ದವಡೆ (ಹನುಮ) ಊದಿಕೊಂಡಿದ್ದರಿಂದ/ವಿರೂಪಗೊಂಡಿದ್ದರಿಂದ, ಅವನಿಗೆ ಹನುಮ ಎಂದು ಹೆಸರಾಯಿತು. ಸೂರ್ಯನನ್ನು ನುಂಗಲು ಪ್ರಯತ್ನಿಸುತ್ತಿರುವ ಹನುಮನ ಈ ಕಥೆಯು ವಾಸ್ತವವಾಗಿ ಚಳಿಗಾಲದ ಅಯನ ಸಂಕ್ರಾಂತಿಯಿಂದ ವಸಂತದ ವಿಷುವತ್ ಸಂಕ್ರಾಂತಿಯವರೆಗಿನ ವೃಷಕಪಿ (ಓರಿಯನ್ ಅಥವಾ ಮೃಗಶಿರ ನಕ್ಷತ್ರಪುಂಜ) ಪ್ರಯಾಣವಾಗಿದೆ, ಇದು ಓರಿಯನ್ ನಕ್ಷತ್ರಪುಂಜವು ಸೂರ್ಯನನ್ನು ಸಮೀಪಿಸುವಂತೆ  ಕಾಣುತ್ತದೆ. ಓರಿಯನ್ ಮಾನವ ಆಕೃತಿಯಂತೆ (ಬೇಟೆಗಾರ) ಕಾಣಿಸಿಕೊಂಡರೆ, ಹಣ್ಣೊಂದನ್ನು ನುಂಗುವುದಕ್ಕೆ ಹೊರಟಂತೆ ಇದು ಭಾಸವಾಗುತ್ತದೆ. 

ಈ ಅವಧಿ (ಡಿಸೆಂಬರ್ - ಮಾರ್ಚ್) ಉತ್ತರ ಗೋಳಾರ್ಧದಲ್ಲಿ (ಸಮಭಾಜಕರೇಖೆಯ ಮೇಲೆ) ಮಳೆಯಿಲ್ಲದ ಸಮಯ. ಹೆಚ್ಚಿನ ಸಂಖ್ಯೆಯ ಮಾನವರು ಈ ವಲಯದಲ್ಲಿ ವಾಸಿಸುತ್ತಾರೆ. ಅವರಿಗದು ಚಳಿಗಾಲವಾಗಿರುತ್ತದೆ ಮತ್ತು ಆ ಸಮಯದಲ್ಲಿ ಮಳೆ ಬರುವುದಿಲ್ಲ. ಇಂದ್ರನು ಮಳೆಯೊಂದಿಗೆ ಸಂಬಂಧ ಹೊಂದಿರುವ ದೇವರು ಮತ್ತು ಈ ಅವಧಿಯಲ್ಲಿ ಅವನನ್ನು ಪೂಜಿಸಲಾಗುವುದಿಲ್ಲ. ವೃಷಕಪಿ ಇಂದ್ರನಿಗೆ ಪ್ರತಿಸ್ಪರ್ಧಿಯಾಗಲು ಇದೇ ಕಾರಣ. 


ವಾಸ್ತವವಾಗಿ, ಓರಿಯನ್‌ನ ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಒಂದಾದ ಬೆಟೆಲ್‌ಗ್ಯೂಸ್ (ಆಲ್ಫಾ ಓರಿಯೊನಿಸ್) ಒಂದು ಕೆಂಪು ದೈತ್ಯ ಆಗಿದ್ದು ಅದು ತುಂಬಾ ದೊಡ್ಡದಾಗಿದೆ, ಸೂರ್ಯನು ಅದರ ಮುಂದೆ ಒಂದು ಸಣ್ಣ ಚುಕ್ಕೆಯಂತೆ ಕಾಣಿಸಿಕೊಳ್ಳುತ್ತಾನೆ. ಸೂರ್ಯನು ಉದಯವಾಗುವ ಸಮಯ ಅಥವಾ ಉತ್ತರಾಯಣದ ಸಮೀಪದ ಅವಧಿ (ಪ್ರತಿ ವರ್ಷ ಡಿಸೆಂಬರ್-ಮಾರ್ಚ್ ನಡುವೆ) ಕಾಣಿಸಿಕೊಂಡಾಗ, ಓರಿಯನ್ ಅದೇ ವೇಗದಲ್ಲಿ ಸೂರ್ಯನ ಕಡೆಗೆ ಸಾಗುತ್ತಿರುವ ಹಾಗೆ  ಕಾಣುತ್ತದೆ. ಈ ಬೃಹತ್ ಬೆಟೆಲ್‌ಗ್ಯೂಸ್, ಓರಿಯನ್‌ನಲ್ಲಿರುವ ಇತರ ನಕ್ಷತ್ರಪುಂಜಗಳೊಂದಿಗೆ ಸಣ್ಣ ಸೂರ್ಯನ ಕಡೆಗೆ ಪ್ರಯಾಣಿಸುವಂತೆ ಕಂಡಾಗ ಸ್ಪಷ್ಟವಾಗಿ ಸೂರ್ಯನು ಒಂದು ಸಣ್ಣ ಕೆಂಪು ಹಣ್ಣಿನಂತೆ ಕಾಣುತ್ತಾನೆ. ಈ ಸಂಪೂರ್ಣ ಖಗೋಳ ಘಟನೆಯನ್ನು ಪರಾಶರ ಸಂಹಿತದಲ್ಲಿ ಮತ್ತು ನಂತರ ತುಳಸಿದಾಸರು ಹನುಮಾನ್ ಚಾಲೀಸಾದಲ್ಲಿ ಜಾನಪದ ಕಥೆಯ ರೂಪದಲ್ಲಿ ದಾಖಲಿಸಿದ್ದಾರೆ.

ಹನುಮಂತನು ಸಾಮಾನ್ಯ ಮಾನವ ಮುಖದೊಂದಿಗೆ ಜನಿಸಿದನು ಆದರೆ ದವಡೆ ವಿರೂಪವಾಗಿದ್ದ ಕಾರಣ ಇದನ್ನು ಋಷಿಗಳು ಇಂದ್ರನೊಂದಿಗಿನ ಅವನ ಬಾಲ್ಯ ಜೀವನದ ಘರ್ಷಣೆಯ ಪರಿಣಾಮವೆಂದು ವಿವರಿಸಿದರು. 

ವಾಲ್ಮೀಕಿ ರಾಮಾಯಣದಾದ್ಯಂತ ಹನುಮನನ್ನು "ಹನುಮ" ಎನ್ನುವ  ಹೆಸರಿನಲ್ಲೇ ಗುರುತಿಸಿದ್ದಾರೆ ಆದರೆ ಸುಂದರಕಾಂಡವನ್ನು ಹನುಮಾನ್ ಕಾಂಡ ಎನ್ನುವ  ಬದಲಿಗೆ ಸುಂದರ ಎಂದು  ಹೆಸರಿಡಲಾಗಿದೆ.


ಸುಂದರ ಕಾಂಡವು  ಹನುಮನೇ ಪ್ರಮುಖವಾಗಿರುವ ರಾಮಾಯಣದ ಏಕೈಕ ಅಧ್ಯಾಯವಾಗಿದ್ದು, ಇದರಲ್ಲಿ ಪ್ರಮುಖ ಪಾತ್ರ ರಾಮನ, ಬದಲಾಗಿ ಹನುಮನಾಗಿದ್ದಾನೆ.


ಈ ಇಡೀ ಕಾಂಡ ಅಥವಾ ಅಧ್ಯಾಯ 24 ಗಂಟೆಗಳ ಕಾಲದಲ್ಲಿ ನಡೆದಿದ್ದು, ಸಮುದ್ರದ ಮೇಲೆ ಹಾರಿ, ಲಂಕೆಯನ್ನು ಹುಡುಕಿ, ಸೀತೆಯನ್ನು ಕಂಡು ಮಾತನಾಡಿ, ರಾವಣನ ಸೈನ್ಯದ ವಿರುದ್ಧ ಹೋರಾಡಿ ಕೊಂದು, ಇಂದ್ರಜಿತುವಿನಿಂದ ಉದ್ದೇಶಪೂರ್ವಕವಾಗಿ ಸಿಕ್ಕಿಬಿದ್ದು, ಲಂಕೆಗೆ ಬೆಂಕಿ ಹಚ್ಚಿ ಮತ್ತೆ ಸಮುದ್ರ ದಾಟಿ ಹಿಂತಿರುಗಿದ ಹನುಮನ ವೀರತನದ ಬಗ್ಗೆ.. ಇಲ್ಲಿ ವಿವರವಿದೆ.  ಈ ಪ್ರಯಾಣದುದ್ದಕ್ಕೂ, ಅವನು ವಿಶ್ರಾಂತಿ ಪಡೆಯಲಿಲ್ಲ ಅಥವಾ ಆಹಾರವನ್ನು ಸೇವಿಸಲಿಲ್ಲ. ಗುರಿಯನ್ನು ಸಾಧಿಸಲು ಒಬ್ಬ ವ್ಯಕ್ತಿ   ಎಷ್ಟು ಗಮನಹರಿಸಬೇಕು ಎಂಬುದಕ್ಕೆ ಸುಂದರ ಕಾಂಡವು ಅತ್ಯುತ್ತಮ ಉದಾಹರಣೆಯಾಗಿದೆ. ನಿತ್ಯ ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಸುಂದರ ಕಾಂಡದ ಪಾರಾಯಣಕ್ಕೆ ವಿದ್ವಾಂಸರು ಸಲಹೆ ನೀಡುತ್ತಾರೆ, ಆದರೆ ನಿಜವಾದ ಉದ್ದೇಶವೆಂದರೆ ಹನುಮಂತನು ಗುರಿಯತ್ತ ಎಷ್ಟು ಗಮನಹರಿಸಿದ್ದ್ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದಾಗಿದೆ. ಅದು ಬಿಟ್ಟು "ಸುಂದರಕಾಂಡ" ಎನ್ನುವ ಹೆಸರಿಗಾಗಿ ಅದನ್ನು ಓದುವುದಲ್ಲ. 

ರಾಮಾಯಣದ ಸಂಸ್ಕೃತ ಆವೃತ್ತಿಯಲ್ಲಿ, ಹೆಚ್ಚಿನ ಹೆಸರುಗಳು ಸ್ವರಗಳೊಂದಿಗೆ ಕೊನೆಗೊಳ್ಳುತ್ತವೆ, ವಿಶೇಷವಾಗಿ 'ಅ'. ಹಿಂದಿ ಎಂಬುದು ಖರಿಬೋಲಿ, ಪ್ರಾಕೃತ, ಅಪಭ್ರಮ್ಸ ಮತ್ತು ಪರ್ಷಿಯನ್ ಭಾಷೆಗಳ ನಂತರ ಬಂದ ಭಾಷೆಯಾಗಿದೆ. ಅವರು ರಾಮನನ್ನು ರಾಮ ಎಂದು, ಸುಂದರನನ್ನು ಸುಂದರ ಎಂದು, ಶಿವನನ್ನು ಶಿವ ಎಂದು ಉಚ್ಚರಿಸುತ್ತಾರೆ (ಉಚ್ಚರಿಸುವಾಗ ಸ, ಶ, ಷ ನಡುವೆ ವ್ಯತ್ಯಾಸವಿಲ್ಲದೆ).


ಲಂಕೆ ಮತ್ತು ಅಶೋಕ ವನದ ಸುಂದರವಾದ (ಸುಂದರ) ವರ್ಣನೆಯಿಂದಾಗಿ ರಾಮಾಯಣದ ಒಂದು ಕಾಂಡವನ್ನು ಸುಂದರ ಕಾಂಡ ಎಂದು ಕರೆಯಲಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ, ಅದು ತಪ್ಪು! ಅಲ್ಲದೆ, ಭಾರತದ ಕೆಲವು ರಾಜ್ಯಗಳಲ್ಲಿ, ಏಪ್ರಿಲ್‌ನಲ್ಲಿ ಚೈತ್ರ ಪೌರ್ಣಮಿ (ಹುಣ್ಣಿಮೆಯ ದಿನ) ದಂದು ಹನುಮಾನ್ ಜಯಂತಿ (ಜನ್ಮೋತ್ಸವ) ವನ್ನು ತಪ್ಪಾಗಿ ಆಚರಿಸಲಾಗುತ್ತದೆ. ಮಂಗಳವಾರ ಮುಂಜಾನೆ, ಅಂದರೆ ಚೈತ್ರ ಪೌರ್ಣಮಿಯಂದು, ಹನುಮ ಅಶೋಕ ವನದಲ್ಲಿದ್ದ ಮರದ ಕೆಳಗೆ ಸೀತೆಯನ್ನು ಕಂಡುದಾಗಿ ಸುಂದರ ಕಾಂಡ ಸ್ಪಷ್ಟವಾಗಿ ಹೇಳುತ್ತದೆ. ಈ ದಿನದಂದು, ಅವನು ರಾವಣನ ಸೈನ್ಯದ ಬಹುಭಾಗವನ್ನು ಕೊಂದು, ಲಂಕೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಒಬ್ಬನೇ ಸುಟ್ಟುಹಾಕಿದನು. ಇದನ್ನು ‘ಹನುಮದ್ ವಿಜಯಂ’ (ಹನುಮನ ವಿಜಯ) ಎಂದು ಆಚರಿಸಬೇಕು.


ಪರಾಶರ ಸಂಹಿತೆಯು ಹನುಮಂತನು ತಿರುನಾಳದಲ್ಲಿರುವ ಏಳು ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿ ಬೆಟ್ಟದಲ್ಲಿ, ವೈಶಾಖ ಮಾಸದಲ್ಲಿ (ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳ ಕೊನೆಯಲ್ಲಿ ಬರುವ) ಶನಿವಾರದಂದು, ಕೃಷ್ಣಪಕ್ಷ  ದಶಮಿಯಂದು (ಹುಣ್ಣಿಮೆಯ ನಂತರದ 10 ನೇ ಚಂದ್ರನ ದಿನ) ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಜನಿಸಿದನೆಂದು ಸ್ಪಷ್ಟವಾಗಿ ಹೇಳುತ್ತದೆ. ಅಂಜನಾ ಶಿವನಿಗಾಗಿ ತಪಸ್ಸು ಮಾಡಿದಳು ಮತ್ತು ರುದ್ರರಲ್ಲಿ ಒಬ್ಬನಾದ (ಏಕ ಪಾದ ರುದ್ರ) ಎನ್ನುವ ಮಗುವನ್ನು ಪಡೆದಳು. ಶಿವನ ನಾಮಗಳಲ್ಲಿ (ರೂಪಗಳು) ಒಂದಾಗಿರುವುದರಿಂದ ಅವಳು ಮಗುವಿಗೆ ಸುಂದರ ಎಂದು ಹೆಸರಿಸಿದಳು. ಶಿವನು ಎಲ್ಲಾ ದೇವತೆಗಳೊಡನೆ ಪಾರ್ವತಿಯನ್ನು ವರಿಸಲೆಂದು ಹೋದಾಗ ಆಕೆಯ ಹೆತ್ತವರು ಅವನನ್ನು ಸಾಮಾನ್ಯವಾದ ಅವನ ಕಪಾಲವನ್ನು ಕರದಲ್ಲಿ ಹಿಡಿದಿರುವ ರೂಪಕ್ಕಿಂತ ಸುಂದ್ರವಾದ ರೂಪದಲ್ಲಿ ಕಾಣಿಸಿಕೊಳ್ಳಬೇಕೆಂದು ಕೇಳಿಕೊಂಡರು.  ಅದರಂತೆ ಪಾರ್ವತಿಯನ್ನು ಮದುವೆಯಾಗುವುದಕ್ಕೆ ಶಿವ ತನ್ನ ರೂಪವನ್ನು ಬದಲಿಸಿಕೊಂಡನು. ಶಿವನ ಆ ರೂಪವನ್ನು ಸುಂದರ ಎಂದು ಕರೆಯಲಾಯಿತು.


ಮೀನಾಕ್ಷಿ ಕಲ್ಯಾಣದ ಕಥೆಯಲ್ಲಿಯೂ ಸಹ, ಶಿವನು ಸುಂದರೇಶ್ವರರ್ ಅಥವಾ ಸುಂದರ ಪಾಂಡ್ಯನ್ ಎಂಬ ಹೆಸರಿನಿಂದ ಅವಳನ್ನು ಮದುವೆಯಾದನೆಂದು ಹೇಳಲಾಗುತ್ತದೆ ಮತ್ತು ಅವರಿಬ್ಬರೂ ಮಧುರೈ ಅನ್ನು ಹಲವು ವರ್ಷಗಳ ಕಾಲ ಆಳಿದರು.

ಸತ್ಯಂ ಶಿವಂ ಸುಂದರಂ