Sunday, November 23, 2025

“ತಾಯವ್ವ'ನಾಗಿ ತೆರೆಗ ಬಂದ ಗೀತಪ್ರಿಯಾ

- ರಾಘವೇಂದ್ರ ಅಡಿಗ ಎಚ್ಚೆನ್. 

ಶಿಕ್ಷಣ ಕ್ಷೇತ್ರದಿಂದ ಬಂದು ಚಿತ್ರ ನಿರ್ಮಾಪಕಿಯಾದ ದಿಟ್ಟ ಮಹಿಳೆ ಗೀತಪ್ರಿಯಾರ ಸಾಹಸ ನಿಜಕ್ಕೂ ಮೆಚ್ಚತಕ್ಕದ್ದು. 'ತಾಯವ' ಚಿತ್ರದ ಮೂಲಕ ಇವರು ಮಹಿಳಾ ಪ್ರೇಕ್ಷಕರಿಗೆ ಏನು ಹೇಳಬಯಸುತ್ತಾರೆ.....?

ಇತ್ತಿಚೆಗೆ ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಸಾಕಷ್ಟು ಸಂಖ್ಯೆಯ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿವೆ. ಅದರಲ್ಲಿಯೂ ಹೊಸ ಪ್ರತಿಭಾವಂತ ನಟ ನಟಿಯರು, ನಿರ್ದೇಶಕರು ಚಿತ್ರೋದ್ಯಮಕ್ಕೆ ಬರುತ್ತಿದ್ದಾರೆ. ಅದರಂತೆ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿಯೂ ಬಹು ಸಂಖ್ಯೆಯಲ್ಲಿ ಹೊಸಬರ ಆಗಮನವಾಗಿದೆ. ಅದರಲ್ಲಿ ಐಟಿ ಕ್ಷೇತ್ರದವರು, ಶಿಕ್ಷಣ ಕ್ಷೇತ್ರ, ರಿಯಲ್ ಎಸ್ಟೇಟ್ ಸೇರಿದಂತೆ ನಾನಾ ಕ್ಷೇತ್ರದ ವ್ಯಕ್ತಿಗಳು ಚಿತ್ರ ನಿರ್ಮಾಣ ಮಾಡಿದ್ದಾರೆ, ಮಾಡುತ್ತಿದ್ದಾರೆ. 


ಇತ್ತೀಚೆಗೆ ಬಂದಿರುವ ನವೀನ ಚಿತ್ರಗಳಲ್ಲಿ ಮಾಮೂಲಿಯಾದ ಪ್ರೀತಿ, ಪ್ರೇಮ, ಗ್ಯಾಂಗ್ ವಾರ್ ಅಂತಹ ವಿಷಯಗಳಲ್ಲದೆ ವೈದ್ಯಕೀಯ ಸಂಶೋಧನೆ, ಶಿಕ್ಷಣದ ಮಹತ್ವ, ಅನ್ಯಾಯದ ವಿರುದ್ಧ ನ್ಯಾಯಾಲದಲ್ಲಿ ಕಾನೂನಿನ ಸಮರ ಹೀಗೆ ನಾನಾ ಮಹತ್ವದ ವಿಷಯ ವೈವಿಧ್ಯತೆಗಳಿರುತ್ತವೆ. ಅಂತಹುದೇ ಸಾಲಿನಲ್ಲಿ ಸೇರಬಹುದಾದ ಇತ್ತೀಚಿನ ಒಂದು ಹೊಸಾ ಸಿನಿಮಾ ಎಂದರೆ 'ತಾಯವ್ವ.

ಗ್ರಾಮೀಣ ಸೂಲಗಿತ್ತಿ

'ತಾಯವ್ವ' ಎಂದರೆ ಗ್ರಾಮಗಳಲ್ಲಿರುವ ಸೂಲಗಿತ್ತಿ. ಈ ಸಿನಿಮಾ ಹೇಳಹೊರಟಿರುವುದು ಸಹ ಅದೇ ಸೂಲಗಿತ್ತಿಯ ಕಥೆ. ಇಂದಿನ ಯುವ ಪೀಳಿಗೆಗೆ ಹೆರಿಗೆಗಳೆಂದರೆ ಆಸ್ಪತ್ರೆಗಳಲ್ಲಿ ನಡೆಸುವ ಸಹಜ ಅಥವಾ ಸಿಸೇರಿಯನ್ ಹೆರಿಗೆಗಳ ಕುರಿತಂತೆ ಅರಿವಿರುತ್ತದೆ. ಆದರೆ ನಮ್ಮ ಹಿಂದಿನ ತಲೆಮಾರಿನಲ್ಲಿ ಯಾರೂ ಹೆರಿಗೆಗಾಗಿ ಆಸ್ಪತ್ರೆಗೆ ಹೋದವರಲ್ಲ. ಬದಲಿಗೆ ಆಯಾ ಗ್ರಾಮಗಳಲಿದ್ದ ಸೂಲಗಿತ್ತಿಯರೇ ಹೆರಿಗೆಯನ್ನು ಮಾಡಿಸುತ್ತಿದ್ದರು. ಅವೆಲ್ಲವೂ ಸಹಜ ಹೆರಿಗೆಗಳಾಗಿರುತ್ತಿದ್ದವು.

ಇಂತಹ ಸೂಲಗಿತ್ತಿಯರ ಜೀವನ ಹೇಗಿರುತ್ತದೆ ಎನ್ನುವುದನ್ನು ಇಂದಿನ ಆಧುನಿಕ ಸಮಾಜಕ್ಕೆ ಪರಿಚಯಿಸುವುದಕ್ಕಾಗಿ ಇರುವ ಸಿನಿಮಾ 'ತಾಯವ್ವ.' ಗ್ರಾಮೀಣ ಸೊಗಡಿನ ಕಥಾಹಂದರ, ಸೂಲಗಿತ್ತಿಯ ಬದುಕಿನ ಮೇಲೊಂದು ಚಿತ್ರ ಈ 'ತಾಯವ್ವ.'

ತಾಯವ್ವನಾಗಿ ಉಮಾಶ್ರೀ

ಈ ಹಿಂದೆ ಕಿಚ್ಚ ಸುದೀಪ್‌ ಹಾಗೂ ಉಮಾಶ್ರೀ ಅಭಿನಯದ 'ತಾಯವ್ವ' ಸಿನಿಮಾ ತೆರೆಗೆ ಬಂದಿತ್ತು. ಆದು ಸುದೀಪ್‌ ಚೊಚ್ಚಲ ಸಿನಿಮಾ ಸಹ ಹೌದು. ಈಗ ಮತ್ತೆ ಅದೇ ಹೆಸರಿನಲ್ಲಿ ಈ ಸಿನಿಮಾ ಬಂದಿದೆ. ಈ ಬಾರಿ 'ತಾಯವ್ವ'ನಾಗಿ ಗೀತಪ್ರಿಯಾ ಕಾಣಿಸಿಕೊಂಡಿದ್ದಾರೆ.

'ಆಮರ ಫಿಲಂಸ್ ಮತ್ತು 'ಜಯಶಂಕರ ಟಾಕೀಸ್ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ 'ತಾಯವ್ವ' ಸಿನಿಮಾಕ್ಕೆ ಸಾತ್ವಿಕ್ ಪವನ್‌ ಕುಮಾರ್ ನಿರ್ದೇಶನ ನೀಡಿದ್ದಾರೆ. ಅನಂತ್ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ 'ತಾಯವ್ವ' ಚಿತ್ರದ ಗೀತೆಗಳಿಗೆ ಸ್ವತಃ ಗೀತಪ್ರಿಯಾ ಆವರೇ ಧ್ವನಿಯಾಗಿದ್ದಾರೆ.

ಬಹುಮುಖ ಪ್ರತಿಭೆ ಗೀತಪ್ರಿಯಾ

ಅಂದಹಾಗೆ ಈ ಗೀತಪ್ರಿಯಾ ಅವರದು ಬಹುಮುಖ ಪ್ರತಿಭೆ. ಶಿಕ್ಷಣ, ಸಮಾಜಸೇವೆ, ಮಹಿಳಾಪರ ಹೋರಾಟ, ಇತರ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಈಕೆ 'ತಾಯವ್ವ' ಚಿತ್ರದ ಮೂಲಕ ನಟಿ, ನಿರ್ಮಾಪಕಿ, ಗಾಯಕಿಯಾಗಿ ಚಿತ್ರರಂಗಕ್ಕೆ ಬಂದಿದ್ದಾರೆ.


ಸಾಮಾನ್ಯ ಕುಟುಂಬದಿಂದ ಬಂದು ಇಷ್ಟೆಲ್ಲಾ ಸಾಧನೆ ಮಾಡಿ ಇನ್ನಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಬಲ್ಲ ಗೀತಪ್ರಿಯಾರ ಕಿರುಪರಿಚಯ ಈ ಮುಂದಿದೆ.

ಗೀತಪ್ರಿಯಾರ ಹಿನ್ನೆಲೆ

ಮೂಲತಃ ಚಿಕ್ಕಮಗಳೂರಿನವರಾದ ಗೀತಪ್ರಿಯಾ ಉನ್ನತ ವ್ಯಾಸಂಗ, ವೃತ್ತಿಕ್ಷೇತ್ರದಲ್ಲಿ ಸಾಧನೆ ಮಾಡಿರುವುದೆಲ್ಲವೂ ಬೆಂಗಳೂರಿನಲ್ಲಿಯೇ. 'ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಮೂಲಕ ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರ ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶದಾದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ರಾಪು ಮೂಡಿಸಿದ್ದಾರೆ.

ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲಾ ಹಂತದ ಶಿಕ್ಷಣವನ್ನು ಒಂದೇ ಕಡೆ ಸಿಗುವಂಥ ಸೌಕರ್ಯವನ್ನು ಇಲ್ಲಿ ಕಲ್ಪಿಸಲಾಗಿದೆ. ಇಂಥ ಸಾಧನೆಗಾಗಿ

ಗೀತಪಿ ಯಾರಿಗೆ ದೇಶ ವಿದೇಶಗಳ, ನೂರಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳು, ಸರ್ಕಾರಗಳು ಪ್ರಶಸ್ತಿ ನೀಡಿ ಗೌರವಿಸಿದೆ.

ಇಂತಹ ಗೀತಪ್ರಿಯಾ ಈಗ 'ತಾಯವ್ವ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಗ್ರಾಮೀಣ ಮಹಿಳೆಯೊಬ್ಬರು ಹೆಣ್ಣುಮಕ್ಕಳ ರಕ್ಷಣೆಗಾಗಿ ಹೇಗೆಲ್ಲಾ ಹೋರಾಟ ನಡೆಸುತ್ತಾರೆ ಎನ್ನುವ ಕಥೆಯನ್ನು 'ತಾಯವ್ವ' ನಮಗೆ ಸಾರಿ ಹೇಳುತ್ತದೆ.

ಇಂಥ ಸಿನಿಮಾ ಮಾಡುವುದಕ್ಕೆ ನಿಮಗೇನು ಪ್ರೇರಣೆ ಎಂದು ಕೇಳಿದಾಗ - ''ನನಗೆ ಮೊದಲಿನಿಂದಲೂ ಕಲಾತ್ಮಕ ಸಿನಿಮಾಗಳ ಕಡೆ ಒಲವಿತ್ತು. ಸಾಮಾಜಿಕ ಸಂದೇಶವಿರುವ ಚಿತ್ರಗಳು ವಿಶೇಷವಾಗಿ ಮಹಿಳಾ ಪ್ರೇಕ್ಷಕರ ಮನ ಮುಟ್ಟುತ್ತದೆ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ 'ತಾಯವ್ವ' ಸಿನಿಮಾ ನಿರ್ಮಿಸಿದ್ದೇನೆ,'' ಎಂದರು. 'ತಾಯವ್ವ' ಸಿನಿಮಾ ಎಲ್ಲಿಯೂ ಕೃತಕತೆಯಿಂದ ಕೂಡಿಲ್ಲ. ಎಲ್ಲವನ್ನೂ ಸಹಜವಾಗಿ ತೋರಿಸಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಆಲೋಚಿಸುವಂತೆ ಮಾಡುತ್ತದೆ. ಸಾಮಾನ್ಯ ಮಹಿಳೆಯೊಬ್ಬಳ ಹಿಂದಿನ ಮಹಾನ್ ಶಕ್ತಿಯ ಕುರಿತು ಇಲ್ಲಿ ತೋರಿಸಿರುವುದಾಗಿ ನಿರ್ಮಾಪಕಿ, ನಟಿ ಗೀತಪ್ರಿಯಾ ಹೇಳಿದ್ದಾರೆ.

ಗೀತಪ್ರಿಯಾರ ಮೊದಲ ಚಿತ್ರ

'ಈ ಚಿತ್ರದ ಮೂಲಕ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ಇದು ನನಗೆ ಮೊದಲು ಸಿನಿಮಾ ಆಗಿದ್ದರೂ ಸಹ ಕಥೆ, ಕಲಾವಿದರ ಆಯ್ಕೆಯಿಂದ ಹಿಡಿದು ಸಿನಿಮಾ ಬಿಡುಗಡೆಗಾಗಿ ಏನೆಲ್ಲಾ ಪರಿಶ್ರಮ ಪಡಬೇಕಾಗುತ್ತದೆ ಎನ್ನುವುದನ್ನು ನಾನು ಈ 'ತಾಯವ್ವ'ನಿಂದ ಕಲಿತಿದ್ದೇನೆ," ಎಂದು ಹೇಳುತ್ತಾರೆ.

ಇನ್ನು 'ತಾಯವ್ವ' ಸಿನಿಮಾ ಆರಂಭವಾದಾಗಿನಿಂದ ಬಿಡುಗಡೆಯಾಗುವವರೆಗೂ ಸಾಕಷ್ಟು ಸಂಖ್ಯೆಯ ಗಣ್ಯರು ಗೀತಪ್ರಿಯಾರ ಬೆಂಬಲಕ್ಕೆ ನಿಂತಿದ್ದಾರೆ. ಇವರಿಗೆಲ್ಲಾ ಗೀತಪ್ರಿಯಾ ಧನ್ಯವಾದ ಹೇಳುತ್ತಾರೆ. 


ಗಣ್ಯರ ಹಾರೈಕೆ

'ನನಗೆ ಮೊದಲಿನಿಂದ ಇಲ್ಲಿಯವರೆಗೆ ಹಲವಾರು ಗಣ್ಯರು ಬೆಂಬಲಿಸಿದ್ದಾರೆ. ನನ್ನ ಈ ಕೆಲಸಕ್ಕೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. ಹಿರಿಯ ನಟಿ ಉಮಾಶ್ರೀ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್, ನಟ ಕಿಚ್ಚ ಸುದೀಪ್, ಹಿರಿಯ ನಟ ಪ್ರಯಣರಾಜ ಶ್ರೀನಾಥ್, ಪದ್ಮಶ್ರೀ ಪ್ರಶಸ್ತಿ ವಿಜೇತ ವೈದ್ಯೆ ಡಾ. ಕಾಮಿನಿ ರಾವ್ ಇಂತಹವರಲ್ಲಿ ಕೆಲವರು. ಇವರೆಲ್ಲಾ ನನ್ನ 'ತಾಯವ್ವ' ಸಿನಿಮಾವನ್ನು ನಾನಾ ಹಂತಗಳಲ್ಲಿ ಬೆಂಬಲಿಸಿ ಬೆನ್ನು ತಟ್ಟಿದ್ದಾರೆ. ಅವರಿಗೆ ನನ್ನ ಹೃತ್ತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ,'' ಎಂದು ಗೀತಪ್ರಿಯಾ ಹೇಳುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಇಂದು ಚಿತ್ರಗಳ ಪೈಪೋಟಿ ಸಂಖ್ಯೆ ದೊಡ್ಡದಾಗಿದೆ. ಆದರೆ ಮೌಲ್ಯಯುತ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರವೇ ಎಂದರೆ ಅದು ತಪ್ಪಲ್ಲ. ಅಂತಹ ಒಂದು ಮೌಲ್ಯಯುತವಾದ ಸಿನಿಮಾ 'ತಾಯವ್ವ' ಈಗ ಪ್ರೇಕ್ಷಕರ ಬೆಂಬಲ ಬಯಸಿದೆ. ನಮ್ಮಸಿನಿ ರಸಿಕರು ಇಂಥ ಸಿನಿಮಾಗಳನ್ನು ಬೆಂಬಲಿಸುವ ಮೂಲಕ ಮುಂಬರುವ ದಿನಗಳಲ್ಲಿ ಗೀತಪ್ರಿಯಾ ಹಾಗೂ ಅವರಂಥ ಇತರೆ ಸಾಧಕಿಯರ ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಕಾರಣವಾಗಬೇಕಿದೆ.

ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭಾವಂತ ಮಹಿಳೆಯ ಗೀತಪ್ರಿಯಾರ ಮು೦ದಿನ ಯೋಜನೆಗಳು ಸಫಲವಾಗಲಿ ಎಂದು 'ಗೃಹಶೋಭಾ' ಹಾರೈಸುತ್ತಾಳೆ.


ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಭರತನಾಟ್ಯ ಕಲಾವಿದೆ ವಿದುಷಿ ದೀಕ್ಷಾ ವಿ

 - ರಾಘವೇಂದ್ರ ಅಡಿಗ ಎಚ್ಚೆನ್.

ಭರತನಾಟ್ಯದಲ್ಲಿ ಖ್ಯಾತಿ ಗಳಸುವುದೇ ಕಷ್ಟ, ಹಾಗಿರುವಾಗ ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ಹೊಸ ವಿಶ್ವದಾಖಲೆ ಬರೆದು, ವಿದುಷಿ ದೀಕ್ಷಾ ವಿ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.....!


ಭಾರತದ ಹೆಸರಿನೊಂದಿಗೇ ಬೆರೆತಿರುವ ಹೆಸರು ಭರತಮುನಿಯದು. ಭರತನ 'ನಾಟ್ಯಶಾಸ್ತ್ರ' ಎಲ್ಲಾ ಸಂಗೀತ, ನೃತ್ಯಕಲೆಗಳಿಗೆ ಒಂದು ಪ್ರಮುಖ ಆಧಾರ ಗ್ರಂಥವಾಗಿದೆ. ಭರತನಾಟ್ಯ ಅವುಗಳಲ್ಲೆಲ್ಲಾ ಅತ್ಯಂತ ಹೆಚ್ಚಿನ ಪ್ರಮುಖ ಸ್ಥಾನ ಪಡೆದ ನೃತ್ಯ ಪ್ರಕಾರ. ಅಂತಹ ಭರತನಾಟ್ಯದಲ್ಲಿ ಹೊಸ ವಿಶ್ವ ದಾಖಲೆ ಬರೆದಿರುವರು ಉಡುಪಿಯ ವಿದುಷಿ ದೀಕ್ಷಾ.

ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ಹೊಸ ವಿಶ್ವದಾಖಲೆ ಬರೆದಿರುವ ವಿದುಷಿ ದೀಕ್ಷಾ ವಿ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.

ಆಗಸ್ಟ್ 21 ರಂದು ಪ್ರತಿ ಮೂರು ಗಂಟೆಗೆ 15 ನಿಮಿಷಗಳ ವಿರಾಮ ನಿಯಮಕ್ಕೆ ಅನುಗುಣವಾಗಿ ಭರತನಾಟ್ಯ ಪ್ರದರ್ಶನವನ್ನು ವಿದುಷಿ ದೀಕ್ಷಾ ವಿ. ಆರಂಭಿಸಿದ್ದು, ಆಗಸ್ಟ್ 30ರ ಮಧ್ಯಾಹ್ನ 3.30ಕ್ಕೆ ನೃತ್ಯ ಪ್ರದರ್ಶನ ಅಂತ್ಯಗೊಂಡಿತ್ತು. ಸತತ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮನೀಶ್ ಬಿಷ್ಟೋಮ್, ವಿದುಷಿ ದೀಕ್ಷಾ ವಿ. ಅವರ ದಾಖಲೆಯ ಬಗ್ಗೆ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ 'ಗೃಹಶೋಭಾ' ಅವರನ್ನು ಮಾತಿಗೆಳೆದಿತ್ತು. ಅವರೊಂದಿಗೆ ನಡೆಸಿದ ಆ ಮಾತುಕತೆಯ ಸಾರಾಂಶ ಇಲ್ಲಿದೆ.

ನಾನು ಹುಟ್ಟಿದ್ದು ಉಡುಪಿಯ ಬ್ರಹ್ಮಾವರ ಹಾಕಿದ ಆಲೂರು ಗುಮದಲ್ಲಿ, ತಂದೆ ವಿಠಲ, ತಾಯಿ ತುಭು, ಗೊಂದು ವರ್ಷದ ಹಿಂದೆ ಮದುವೆಯಾಗಿ, ನನ್ನ ಪತಿ ಸಿವಿಲ್ ಇಂದು‌ ಬಹಳ ಹೀಗೆ ದೀಕ್ಷಾ ತಮ್ಮ ಹಾಗೂ ಕುಟುಂಬದ ಕುರಿತು ಚಿಕ್ಕದಾಗಿ ಪರಿಚಯಿಸಿಕೊಂಡರು.

ದೀಕ್ಷಾ ಲಿಟಲ್ ರಾಜ್ ಇಂಡಿಯನ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದಾಭ್ಯಾಸ ನಡೆಸಿದ್ದಾರೆ. ಹೆಬ್ರಿಯ ಅಮೃತ ಭಾರತೀ ಪಿಯು ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ನಡೆಸಿರುವ ಅವರು, ಡಾ. ಜಿ..ಶಂಕರ್‌ ಮಹಿಳಾ ಕಾಲೇಜು, ಅಜ್ಜರಕಾಡಿನಲ್ಲಿ ಪದವಿ ಪೂರೈಸಿದರು. ಪ್ರಸ್ತುತ ಡಾ.ಟಿ.ಎಂ.ಎ. ಪೈ ಎಜುಕೇಶನ್ ಕಾಲೇಜು, ಕುಂಜಿಬೆಟ್ಟುನಲ್ಲಿ ಬಿ.ಎಡ್. ವ್ಯಾಸಂಗ ಮಾಡುತ್ತಿದ್ದಾರೆ.


ನಾನು ಚಿಕ್ಕವಳಿದ್ದಾಗ ಭರತನಾಟ್ಯ ಹಾಗೂ ನೃತ್ಯದಲ್ಲಿ ನನಗೆ ಯಾವ ಆಸಕ್ತಿ ಇರಲಿಲ್ಲ. ಆದರೆ ಆಮ್ಮನಿಗೆ ನಾನು ನೃತ್ಯ ಕಲಿಯಬೇಕೆನ್ನುವ ಆಸೆ ಇತ್ತು. ಇದಕ್ಕಾಗಿ ಅವರು ನನಗಿನ್ನೂ ಮೂರು ವರ್ಷವಾಗಿದ್ದಾಗಲೇ ನನ್ನನ್ನು ಡ್ಯಾನ್ಸ್‌ ತರಗತಿಗೆ ಸೇರಿಸಲು ಮುಂದಾದರು. ಆದರೆ ಅಲ್ಲಿನ ಶಿಕ್ಷಕರು ನಾನಿನ್ನೂ ಚಿಕ್ಕವಳು, ಹಾಗಾಗಿ ಇನ್ನೂ ಸ್ವಲ್ಪ ಸಮಯ ಬಿಟ್ಟು ಬರಲು ಹೇಳಿದ್ದರು. ಆ ನಂತರ ನನಗೆ ಯಾವುದೇ ಆಸಕ್ತಿ ಇಲ್ಲದಿದ್ದರೂ ಒಂದನೇ ತರಗತಿಯಲ್ಲಿ ಕಲಿಯುವಾಗ, ಅಮ್ಮ ಮತ್ತೆ ನನ್ನನ್ನು ಡ್ಯಾನ್ಸ್ ತರಬೇತಿಗಾಗಿ ಸೇರಿಸಿದರು, ಎಂದು ದೀಕ್ಷಾ ತಮ್ಮ ನೃತ್ಯಾಭ್ಯಾಸದ ಮೊದಲ ದಿನಗಳನ್ನು ಬಾಲ್ಯದ ದಿನವನ್ನು ಮೆಲುಕು ಹಾಕಿದರು.

ಇದಾದ ನಂತರ ವಿದುಷಿ ಶೃತಿ ರಾಘವೇಂದ್ರ ಭಟ್‌ರವರಲ್ಲಿ ದೀಕ್ಷಾ ನೃತ್ಯಾಭ್ಯಾಸ ಮುಂದುವರಿಸಿದರು. ಅಲ್ಲಿಂದ ದೀಕ್ಷಾ ಭರತನಾಟ್ಯವನ್ನು ಆಸಕ್ತಿಯಿಂದ ಕಲಿಯಲು ತೊಡಗಿದರು. ಭರತನಾಟ್ಯದಲ್ಲಿ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾದ ದೀಕ್ಷಾ, ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಗಾಗಿ ವಿದ್ಯಾನ್ ಶ್ರೀಧರರಾವ್ ಬನ್ನಂಜೆಯವರಲ್ಲಿ ಅಧ್ಯಯನ ಮುಗಿಸಿದ್ದಾರೆ. 

ವಿಶ್ವದಾಖಲೆಗೆ ಪ್ರೇರಣೆ

ದೀಕ್ಷಾ, ಶ್ರೀಧರರಾವ್‌ರಲ್ಲಿ ಅಧ್ಯಯನ ನಡೆಸುತ್ತಿದ್ದಾಗ ಒಮ್ಮೆ ವಿದ್ವಾನ್ ಯಶವಂತ್ ಎಂ.ಜಿ.ಯವರೊಡನೆ ಆಕಸ್ಮಿಕ ಭೇಟಿಯಾಗಿತ್ತು ಯಶವ೦ತ್ ಸತತ 24 ಗಂಟೆಗಳ ಕಾಲ ಎಸ್.ಪಿ. ಬಾಲಸುಬ್ರಹ್ಮಣ್ಯರ ಹಾಡುಗಳನ್ನು ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ. ಅವರನ್ನು ಭೇಟಿಯಾಗಿದ್ದ ದೀಕ್ಷಾಗೆ ತಾನೂ ಸಹ ಏಕೆ ವಿಶ್ವದಾಖಲೆ ಮಾಡಬಾರದು ಎನ್ನುವ ಮನಸ್ಸಾಗಿತ್ತು.

ಆದರೆ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದುದ್ದರಿ೦ದ ತಕ್ಷಣವೇ ಈ ಸಂಬಂಧ ಮುಂದುವರಿಯಲು ಅವರಿಗೆ ಆಗಿರಲಿಲ್ಲ. ಆದರೆ ಬಿ.ಎಡ್. ಮೂರನೇ ಸೆಮಿಸ್ಟರ್ ಮುಗಿದ ನಂತರದಲ್ಲಿ ಒಂದು ತಿಂಗಳ ವಿರಾಮವಿದ್ದ ಕಾರಣ ಅದನ್ನೇ ಸದುಪಯೋಗ ಪಡಿಸಿಕೊಂಡ ದೀಕ್ಷಾ ಈಗ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಹೀಗೆ ದೀಕ್ಷಾರಿಗೆ ವಿಶ್ವದಾಖಲೆ ನಿರ್ಮಿಸಲು ವಿದ್ವಾನ್ ಯಶವಂತ್ ಪ್ರೇರಣೆಯಾಗಿದ್ದರು.


ದೀಕ್ಷಾ ಈಗ ಭರತನಾಟ್ಯದಲ್ಲಿ ಪ್ರವೀಣರಾಗಿದ್ದು, ನೂಪುರನಾದ ಕಲಾಕೇಂದ್ರ ಎಂಬ ತರಬೇತಿ ಕೇಂದ್ರವನ್ನೂ ನಡೆಸುತ್ತಿದ್ದು, ಇದುವರೆಗೆ ಎಪ್ಪತ್ತೈದಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಇವರಿಂದ ತರಬೇತಿ ಹೊಂದಿದ್ದಾರೆ. ಅಲ್ಲದೆ, ಪ್ರಸ್ತುತದಲ್ಲಿ ಸುಮಾರು ಮೂವತ್ತೈದು ವಿದ್ಯಾರ್ಥಿಗಳು ದೀಕ್ಷಾರಿಂದ ತರಬೇತಿ ಪಡೆಯುತ್ತಿದ್ದಾರೆ.

ಯಕ್ಷಗಾನ, ಚಂಡೆ ಮದ್ದಳೆಗೂ ಸೈ

ದೀಕ್ಷಾ ಕೇವಲ ಭರತನಾಟ್ಯದಲ್ಲಿ ಮಾತ್ರವಲ್ಲದೆ, ಯಕ್ಷಗಾನ, ಚಂಡೆ ಮದ್ದಳೆ ವಾದನಗಳಲ್ಲಿಯೂ ಸಹ ಪರಿಣಿತಿ ಹೊಂದಿದ್ದಾರೆ. ಚೇರ್ಕಾಡಿ ಮಂಜುನಾಥ ಪ್ರಭುರವರಲ್ಲಿ ದೀಕ್ಷಾ ಯಕ್ಷಗಾನ ತರಬೇತಿ ಪಡೆದಿದ್ದಾರೆ. ಅಷ್ಟು ಮಾತ್ರವಲ್ಲದೆ, ಚಂಡೆ ಮದ್ದಳೆಗಳನ್ನು ಸಹ ಅವರಲ್ಲಿಯೇ ತರಬೇತಿ ಪಡೆಯುತ್ತಿದ್ದಾರೆ.

ದೀಕ್ಷಾ ಕರ್ನಾಟಕ ಸಂಗೀತ ಸಹ ಅಭ್ಯಾಸ ನಡೆಸಿದ್ದು, ಅದರಲ್ಲಿ ಸೀನಿಯರ್ ವಿಭಾಗದ ತರಬೇತಿ ಪಡೆದುಕೊಳ್ಳುತ್ತಿದ್ದು ವೀಣಾ ವಾದನ ಸಹ ಕಲಿಯುತ್ತಿದ್ದಾರೆ. ವಿದುಷಿ ಸುಮಾ ಐತಾಳರಲ್ಲಿ ದೀಕ್ಷಾ ಸಂಗೀತ ಹಾಗೂ ವೀಣಾವಾದನದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಮಗುವಿನಂತೆ ಕಾತ್ತಾರೆ.

ನಾನು ಇಷ್ಟೆಲ್ಲಾ ಸಾಧನೆ ಮಾಡಲು ನನ್ನ ಕುಟುರಿತು ನನಗೆ ನೀಡಿದ ಸಹಕಾರವೇ ಪ್ರಮುಖ ಕಾರಣ, ಎನ್ನುವ ದೀಕ್ಷಾ ತಮ್ಮ ಕುಟುಂಬದ ಬೆಂಬಲಕ್ಕಾಗಿ ಧನ್ಯವಾದ ಹೇಳುತ್ತಾರೆ, ತಾಯಿ, ತಂದೆ, ಪತಿ ಸೇರಿದಂತೆ ಮನೆಯವರೆಲ್ಲಾ ನನಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದಾರೆ. ನನಗೆ ವಿವಾಹವಾಗಿದ್ದರೂ ವಿದ್ಯಾರ್ಥಿ ಜೀವನ ಮುಂದುವರಿಸಿದ್ದೇನೆ. ಎಲ್ಲರೂ ನನ್ನನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಅವರಿಗೆಲ್ಲಾ ನನ್ನ ಹೃತ್ತೂರ್ವೆಯಿ ಧನ್ಯವಾದಗಳು, ಎಂದು ದೀಕ್ಷಾ ಹೇಳಿದ್ದಾರೆ.

ಸಕಲ ಕಲೆಗಳ ಕಲಾ ಅಕಾಡು ಕನಸು

ದೀಕ್ಷಾ ಭವಿಷ್ಯದಲ್ಲಿ ಎಲ್ಲಾ ವಿಧವಾದ ಕಲೆಗಳ ಅಕಾಡೆಮಿ ಪ್ರಾರಂಭಿಸುವ ಉದ್ದೇಶ ಹೊಂದಿದ್ದಾರೆ. ಈ ಅಕಾಡೆಮಿ ಮೂಲಕ ಬಡ, ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ನೆರವು ದೊರಕಬೇಕೆನ್ನುವುದು ದೀಕ್ಷಾರ ಮನದಾಳದ ಬಯಕ ಆಗಿದೆ.

ವಿಶ್ವದಾಖಲೆ ಬರೆದಿದ್ದಕ್ಕೆ ಹೆಚ್ಚು ಪ್ರಚಾರ

ದೀಕ್ಷಾರ ವಿಶ್ವದಾಖಲೆ ಪ್ರಮಾಣ ಪತ್ರ ಪ್ರದಾನ, ಸಮಾರೋಪ : ಮಣಿಪಾಲ ರತ್ನ ಸಂಜೀವ ಕಲಾಮಂಡಲದ ಸಹಭಾಗಿತ್ವದಲ್ಲಿ ಡಾ. ಜಿ. ಶಂಕರ್ ಮಹಿಳಾ ಪ್ರರ್ಥ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದಿದ್ದು, ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ ಅಭಿನಂದನೆ ಸಲ್ಲಿಸಿದರು.

ನಾಡೋಜ ಡಾ. ಜಿ. ಶಂಕರ್, ಸಂಸದ ಕೋಟಿ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮ ಸುರೇಶ್ ಶೆಟ್ಟಿ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮುಖಂಡರಾದ ಎಂ.ಎ. ಗಫೂರ್, ಶಂಕರ ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ ಶೆಟ್ಟಿ, ಡಾ. ರೋಶನ್ ಕುಮಾರ್ ಶೆಟ್ಟಿ, ಗುರು ಶ್ರೀಧರ್ ಬನ್ನಂಜೆ, ವಿದುಷಿ್ ಉಷಾ ಹೆಬ್ಬಾರ್, ಗೀತಾಂಜಲಿ ಸುವರ್ಣ, ಮಹೇಶ್‌ ಠಾಕೂರ್, ತಂದೆ ವಿಠಲ ಪೂಜಾರಿ, ತಾಯಿ ಶಂಬಾ, ಭವಿ ರಾಜಲ್, ಕಿಶೋರ್ ಕುಮಾರ್‌ ಕುಂದಾಪುರ, ವಿದ್ವಾನ್ ಯಶವಂತ್ ಎಂ.ಜೆ., ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮುನೀಶ್ ಬಿಡೋಮ್‌ ಮುಂತಾದವರು ಉಪಸ್ಥಿತರಿದ್ದರು. ಅವಿನಾಶ್ ಕಾಮತ್‌ ಕಾರ್ಯಕ್ರಮದ ನಿರೂಪಕರಾಗಿದ್ದರು. ಈ ಕಾರ್ಯಕ್ರಮದ ಕುರಿತಂತೆ ದೀಕ್ಷಾ ಹೇಳುವುದು ಹೀಗೆ " ನಾನು ಇದುವರೆಗೆ ಭರತನಾಟ್ಯ ಕಲಿತರೂ, ವಿದ್ಯಾರ್ಥಿಗಳಿಗೆ ತರಬೇತಿ ಕೊಡುತ್ತಾ ಬಂದಿದ್ದರೂ ಸಾಕಷ್ಟು ಮುಟ್ಟಿನ ಪ್ರಚಾರ ದೊರಕಿರಲಿಲ್ಲ. ಆದರೆ ಈಗ ವಿಶ್ವದಾಖಲೆ ನಿರ್ಮಾಣ ಮಾಡಿದ ಕಾರಣ ಎಲ್ಲೆಡೆ ಪ್ರಚಾರ ಸಿಕ್ಕುತ್ತಿದೆ. ಇದು ನನಗೆ ಬಹಳ ಖುಷಿ ತಂದಿದೆ."


ಹಿಂದಿನ ಪರಂಪರೆ ತಿಳಿದಿರಬೇಕು.

ಇಂದಿನ ಯುವಪೀಳಿಗೆ ಬಗ್ಗೆ ಮಾತನಾಡುವ ದೀಕ್ಷಾ, ಭವಿಷ್ಯದ ಪೀಳಿಗೆಗೆ ನಮ್ಮ ಪರಂಪರೆಯ ಕುರಿತು ತಿಳಿದಿರಬೇಕು. ಪಾಶ್ಚಾತ್ಯರು ಸಹ ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ನಮ್ಮಯುವಜನತೆ ಅದರಿಂದ ವಿಮುಖರಾಗುತ್ತಿದ್ದಾರೆ. ಆದರೆ ಹಾಗಾಗಬಾರದು. ಯುವ ಪೀಳಿಗೆ ನಮ್ಮ ಸಂಸ್ಕೃತಿಯನ್ನು ಅರಿತು ಅದನ್ನು ಉಳಿಸಿಕೊಂಡು ಹೋಗಬೇಕಿದೆ. ನಾನು ನನ್ನ ಪೂರ್ವಜರ ಹೆಜ್ಜೆಯನ್ನೇ ಅನುಸರಿಸುತ್ತೇನೆ. ಅದರಂತೆ ಇಂದಿನ ಯುವ ಪೀಳಿಗೆ ಸಹ ನಮ್ಮ ಪವಿತ್ರ ಸಂಸ್ಕೃತಿಯ ಆಚರಣೆಯನ್ನು ಬೆಳೆಸಿಕೊಂಡು ಹೋಗಬೇಕಿದೆ ಎನ್ನುತ್ತಾರೆ.

ದೀಕ್ಷಾ ಮುಂಬರುವ ದಿನಗಳಲ್ಲಿ ಮತ್ತಷ್ಟು ಉನ್ನತ ಸಾಧನೆಗಳು ಮಾಡುವಂತಹ ಅವಕಾಶಗಲು ಬರಲಿ. ಅವರಿಂದ ಮತ್ತಷ್ಟು ವಿದ್ಯಾರ್ಥಿಗಳು ಭರತನಾಟ್ಯ, ನೃತ್ಯಾಭ್ಯಾಸ ಕಲಿತು ಹೆಸರುಗಳಿಸಲಿ ಎಂದು ಗೃಹಶೋಭಾ ಹಾರೈಸುತ್ತಾಳೆ. 


Monday, November 17, 2025

ಕನ್ನಡ ರಾಜ್ಯೋತ್ಸವ: ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ 19ನೇ ಸಾಂಸ್ಕೃತಿಕ ಸಿಂಚನ

 

  • ರಾಘವೇಂದ್ರ ಅಡಿಗ ಎಚ್ಚೆನ್.

ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ 19ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ನವಂಬರ್ 16ರ ಭಾನುವಾರದಂದು ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಯಿತು..



ಈ ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಡಲಾಯಿತು.. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ , ನಿವೃತ್ತ ಪೊಲೀಸ್ ಅಧಿಕಾರಿ ಶ್ರೀ ಎಸ್ ಕೆ ಉಮೇಶ್ , ಸಂಗೀತ ನಿರ್ದೇಶಕರು ಹಾಗೂ ಗಾಯಕರಾದ ಮಾನಸ ಹೊಳ್ಳ, ಉದಯೋನ್ಮುಖ ನಟ ಪುನೀತ್ ಕುಮಾರ್ ದೀಪ ಬೇಕಾಗುವ ಮೂಲಕ ಜೊತೆಗೆ ಕನ್ನಡಾಂಬೆಗೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು..




ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್ ಕೆ ಡಿ ಎಂ ಎ ಅಧ್ಯಕ್ಷರಾದ ಗಂಡಸಿ ಸದಾನಂದ ಗೌಡ ಅವರು , ಕೆಜಿಎಫ್ ಖ್ಯಾತಿಯ ಚೋಟ ರಾಖಿ ಬಾಯ್ ಅನ್ಮೋಲ್ ವಿಜಯ್ ಭಟ್ಕಲ್ , ಹಾಗೂ ಪವರ್ ಟಿವಿ ಯ ಮೂವರು ಮುಖ್ಯಸ್ಥರನ್ನು ಗುರುತಿಸಿ ಸನ್ಮಾನಿಸಲಾಯಿತು..




ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳು ಭಾಗವಹಿಸಿದ್ದು ನೂರಾರು ಪ್ರತಿಭಾನ್ವಿತರು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನ ನಡೆಸಿದ್ದು ವಿಶೇಷವಾಗಿತ್ತು.


ಈ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿದ್ದು, ಕನ್ನಡವನ್ನ ಉಳಿಸಿ ಬೆಳೆಸುವ ಜೊತೆಗೆ , ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯಲಿದೆ ಎಂದು ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಅವರು ತಿಳಿಸಿದರು


Wednesday, November 05, 2025

ಪದವಿಪೂರ್ವ ಚಿತ್ರದ ಬೆಡಗಿ ಯಶಾ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ನಟ

 ಈಗಾಗಲೇ ಸಣ್ಣಪುಟ್ಟ ಪಾತ್ರಗಳಲ್ಲಿ ಬಂದು, ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡದಲ್ಲಿ ನಟಿಸುತ್ತಿರುವ ಅಪ್ಪಟ ಕನ್ನಡತಿ ಯಶಾ ಶಿವಕುಮಾರ್ ಇಲ್ಲ ತಮ್ಮ ಬಗ್ಗೆ ಏನು ಹೇಳಿಕೊಂಡಿದ್ದಾರೆ....?

ಯಶಾ ಶಿವಕುಮಾರ್ ಕನ್ನಡದ ಒಬ್ಬ ಅಪರೂಪದ ನಟಿ, ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಜಂಟಿಯಾಗಿ ನಿರ್ಮಿಸುತ್ತಿರುವ 'ಪದವಿಪೂರ್ವ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಶಿವರಾಜ್ ಕುಮಾರ್, ಪೃಥ್ವಿ ಅಂಬಾ‌ ಮುಖ್ಯ ಭೂಮಿಕೆಯಲ್ಲಿರುವ 'ಬೈರಾಗಿ,' ಧನಂಜಯ್‌ ಅಭಿನಯದ 'ಮಾನ್‌ಸೂನ್ ರಾಗ' ಸಿನಿಮಾಗಳಲ್ಲಿ ಈಗಾಗಲೇ ಸಣ್ಣ ಪುಟ್ಟ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದರು.


ಆ ಪೈಕಿ 'ಮಾನ್‌ಸೂನ್ ರಾಗ' ಇವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿತು. ಮಾಡೆಲಿಂಗ್ ಮಾಡುತ್ತಿದ್ದ ಇವರು ಬೆಂಗಳೂರಿನ ಹುಡುಗಿ. ಮೂಡಬಿದರೆ ಆಳ್ವಾಸ್ ಕಾಲೇಜ್‌ನಲ್ಲಿ ಎಂಜಿನಿಯರಿಂಗ್ ಮಾಡಿದ್ದು, ಆ ಸಮಯದಲ್ಲೇ ರಾಜ್ ಬಿ ಶೆಟ್ಟಿಯವರ 'ಸೌಂಡ್ಸ್ & ಲೈಟ್ಸ್' ಎನ್ನುವ ತುಳು ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದರು.

ಸೌಂದರ್ಯ ಸ್ಪರ್ಧೆಗಳಲ್ಲಿ ಮುಂದು

2019ರ ವರ್ಷದಲ್ಲಿ 'ಫ್ಯಾಷನ್ ಎಬಿಸಿಡಿ' ಸಂಸ್ಥೆ ಆಯೋಜಿಸಿದ್ದ 'ಮಿಸ್ ಬೆಂಗಳೂರು 2019, ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ 2019' ಹಾಗೂ ಮುಂಬೈನಲ್ಲಿ ನಡೆದ 'ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019' ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದರು.

ನಾಟ್ಯ ಕಲೆಯಲ್ಲಿ ಪ್ರವೀಣೆ

ಇವರು ನೃತ್ಯ ಕಲಾವಿದೆಯೂ ಹೌದು. ಭರತನಾಟ್ಯ, ಕಥಕ್, ಫ್ರೀ ಸ್ಟೈಲ್, ಮಣಿಪುರಿ, ಜಾನಪದ ಕಲಾ ನೃತ್ಯಗಳಲ್ಲಿ ಇವರು ಪರಿಣಿತರಾಗಿದ್ದಾರೆ. ದೇಶದ ಅತ್ಯಂತ ಸುಪ್ರಸಿದ್ಧ ವಸ್ತ್ರ ವಿನ್ಯಾಸಕರು ಮತ್ತು ಛಾಯಾಗ್ರಾಹಕರುಗಳೊಂದಿಗೆ ಕೆಲಸ ಮಾಡಿರುವ ಅನುಭವವನ್ನೂ ಇವರು ಹೊಂದಿದ್ದಾರೆ. 


ತೆಲುಗಿನಲ್ಲೂ ಮಿಂಚುತ್ತಿರುವ ಯಾ

ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲಿ ಕೂಡ ಯಶಾ ಅಭಿನಯಿಸಿದ್ದಾರೆ, ಸಾಯಿರಾಮ್ ಶಂಕರ್ ನಾಯಕನಾಗಿರುವ 'ವೆ ದುವೆಯ ಸಿನಿಮಾದಲ್ಲಿ ಯಶಾ ನಾಯಕಿಯಾಗಿ ಅಭಿನಯಿಸಿದ್ದಾರೆ.

 'ದಂತಕಥೆ' ಎನ್ನುವ ಸಿನಿಮಾದಲ್ಲಿ ಸಹ ಅವರದು ಪ್ರಮುಖ ಪಾತ್ರ, ಉತ್ತಮ ಕಂಟೆಂಟ್ ಇರುವಂಥ, ಜನರ ಮೆರೆಸ್ಸಿನಲ್ಲಿ ಉಳಿಯುವ ಪಾತ್ರ ಮಾಡುವ ಆಸೆ ಇರುವ ನಟಿ ಯಶಾ.

ಇಷ್ಟಾನಿಷ್ಟಗಳು

ಈಕೆಗೆ ಸ್ನೇಹಿತರೆಂದರೆ ತುಂಬಾ ಇಷ್ಟ, ಹಾಗೆಯೇ ನಾಯಿ ಅಂದ್ರೆ ಬಹಳ ಇಪ್ಪ ಶಾಪಿಂಗ್ ಕ್ರೇಜ್ ಇದೆ. ಡಾನ್ ಅಂದ್ರೆ ಪಂಚಪ್ರಾಣ ಎನ್ನುವುದು ವಿಶೇಷ.

ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲೇ ಓದಿದ್ದೂ ಅಲ್ಲಿಯೇ ಮೊದಲಿನಿಂದಲೂ ನನಗೆ ನಟನೆ, ಭರತನಾಟ್ಯದಲ್ಲಿ ಆಸಕ್ತಿ ಇತ್ತು. ಡಿಗ್ರಿ ಮಾಡಲು ಮೂಡಬಿದಿರೆಯ ಆಳ್ವಾಸ್ ಕಾಲೇಜಿಗೆ ಸೇರಿದೆ. ಅಲ್ಲಿ ಕಥಕ್, ಮಣಿಸರಿ ಮೊದಲಾದ ನೃತ್ಯಗಳನ್ನು ಕಲಿತುಕೊಂಡೆ. 

ತುಳು ಚಿತ್ರದಲ್ಲೂ ನವನ

ಜೊತೆಗೆ ತುಳು ಭಾಷೆಯನ್ನೂ ಚೆನ್ನಾಗಿ ಕಲಿತುಕೊಂಡೆ. ಇದರಿಂದಾಗಿ ನನಗೆ ರಾಜ್‌, ಬಿ. ಶೆಟ್ಟಿ ಅವರ ತಂಡ ನಿರ್ಮಾಣ ಮಾಡುತ್ತಿರುವ 'ರಾಜ್ ಸೌಂಡ್ಸ್ & ಲೈಟ್ ಎನ್ನುವ ತುಳು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು, ಎನ್ನುತ್ತಾರೆ.

ಇಲ್ಲಿಂದ ನನ್ನ ಸಿನಿ ಜರ್ನಿ ಶುರುವಾಯಿತು. ಇದಾದ ನ೦ತರ ನಾನು ಮಾಡೆಲಿಂಗ್‌ನಲ್ಲಿ ಇರುವಾಗಲೇ ಯೋಗರಾಜ್‌ ಭಟ್‌ರನ್ನು ಭೇಟಿಯಾಗಿ ಆಡಿಷನ್ ಕೊಟ್ಟು ಬಂದಿದೆ. ಕೆಲವು ದಿನಗಳ ನಂತರ ಅವರು ಕಾಲ್ ಮಾಡಿ ನಾನು ಆಯ್ಕೆಯಾಗಿರುವ ವಿಷಯ ತಿಳಿಸಿದರು. 

ಅಧಿಕೃತ ಎಂಟ್ರಿ

ಮೊದಲ ಚಿತ್ರ 'ಪದವಿಪೂರ್ವ'ದ ಮೂಲಕ ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದುಕೊಂಡೆ ಎಂದು ನಟಿ ಯಶಾ ತಮ್ಮ ಚಿತ್ರರಂಗದ ಎಂಟ್ರಿ ಕುರಿತು ಹೇಳಿಕೊಂಡಿದ್ದಾರೆ.

ನಿರ್ವಹಿಸಿದ ಪಾತ್ರಗಳು


ಕಳೆದ ವರ್ಷ ತೆರೆಕಂಡಿದ್ದ ಕಿರಣ್ ರಾಜ್ ನಾಯಕನಾಗಿ ನಟಿಸಿರುವ 'ಭರ್ಜರಿ ಗಂಡು ಚಿತ್ರದಲ್ಲಿ ನಾಯಕಿಯಾಗಿ ಯಶಾ

ಅಭಿನಯಿಸಿದ್ದರು. ಪ್ರಸ್ತುತ ವರ್ಷ ತೆರೆಗೆ ಬಂದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿರುವ 'ಗಣ' ಸಿನಿಮಾದಲ್ಲಿ ನಾಯಕಿಯಾಗಿ ಯಶಾ ಅಭಿನಯಿಸಿದ್ದಾರೆ. 

ಕನ್ನಡ, ತೆಲುಗು, ತುಳು ಭಾಷೆಯ ಸಿನಿಮಾಗಳ ಆಫರ್‌ಗಳು ಯತ್ನಾಗೆ ಬರುತ್ತಿದ್ದು, ಸದ್ಯ ಸಾಕಷ್ಟು ಬ್ಯುಸಿ ನಟಿ ಎನಿಸಿದ್ದಾರೆ. ಯಶಾ ಮು೦ದಿನ ಜೀವನದಲ್ಲಿ ಮತ್ತಷ್ಟು ಯಶಸ್ಸು ಬರಲಿ ಎನ್ನುವುದು ಗೃಹಶೋಭಾ ಓದುಗರ ಹಾರೈಕೆ.

ಗೃಹಶೋಬಾ | ಏಪ್ರಿಲ್ 2025ರಲ್ಲಿ ಪ್ರಕಟವಾಗಿದ್ದ ನನ್ನ ಲೇಖನ... 

Tuesday, November 04, 2025

ಯುವರಾಜನಿಗೆ ನಾಯಕಿಯಾದ 'ಸಲಗ' ಸುಂದರಿ ಸಂಜನಾ ಆನಂದ್


ಕನ್ನಡದ ಅಪ್ಪಟ ಪ್ರತಿಭೆ ಸಂಜನಾ ಆನಂದ್‌, ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಾ, ಸ್ಯಾಂಡಲ್ ವುಡ್‌ನಲ್ಲಿ ತಾನು ಬೆಳೆದು ಬಂದ ಬಗೆಯನ್ನುವಿವರಿಸಿದ್ದು ಹೀಗೆ.....!

ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಬ್ಯುಸಿ ಆಗಿರುವ ನಾಯಕಿ ಅಂದ್ರೆ ಅದು ಸಂಜನಾ ಆನಂದ್. ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟಿಸಿದ ನಾಯಕಿಯರಲ್ಲಿ ಇವರೂ ಒಬ್ಬರು. ಇವರ ಅಂದಕ್ಕೆ ಸಿನಿರಸಿಕರು ಫಿದಾ ಆಗಿರೋದು ನಿಜ. ಮೂಲತಃ ಕೊಡಗಿನವರಾದರೂ ಹುಟ್ಟಿದ್ದು ಬೆಳೆದಿದ್ದು ಬೆಂಗಳೂರು.


ಪೋಷಕರ ಆಸೆಯಂತೆ ಕಂಪ್ಯೂಟರ್ ಸೈನ್ಸ್ ಮುಗಿಸಿಕೊಂಡು ಪ್ರತಿಷ್ಠಿತ ಡೆಲ್ ಕಂಪನಿಯಲ್ಲಿ ಸುಮಾರು 2 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. 2019ರಲ್ಲಿ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸಿದರು.

ಮೊದಲ ಚಿತ್ರ

ಭರತನಾಟ್ಯ ಕಲಾವಿದೆಯೂ ಆಗಿದ್ದ ಈಕೆಗೆ ಆಕಸ್ಮಿಕವೆಂಬಂತೆ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ನಂತರ ಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಉದ್ಯೋಗಕ್ಕೆ ರಾಜೀನಾಮೆ ನೀಡಿದರು. 

ಸದ್ಯ ಕನ್ನಡದ ಬೇಡಿಕೆಯ ಯುವನಟಿಯಾಗಿರುವ ಸಂಜನಾ ಆನಂದ್, ತೆಲುಗು ಚಿತ್ರರಂಗದಲ್ಲೂ ತೊಡಗಿಸಿಕೊಂಡಿದ್ದಾರೆ. ವಿರಾಟ್ ಅಭಿನಯದ, ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ನಿಮಾದಲ್ಲಿ ಸಂಜನಾ ಸಖತ್ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದರು. 

ಸಾಲು ಸಾಲು ಚಿತ್ರಗಳು

`ಕೆಮಿಸ್ಟ್ರಿ ಆಫ್ ಕರಿಯಪ್ಪ, ಕುಷ್ಕ, ಸಲಗ, ಕ್ಷತ್ರಿಯ, ಮಳೆಬಿಲ್ಲು, ವಿಂಡೋ ಸೀಟ್, ಶೋಕಿವಾಲ, ಸೂತ್ರಧಾರಿ, ರಾಯಲ್, ಹಯಗ್ರೀವ, ಮುಧೋಳ, ಗೌರಿ, ಎಕ್ಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಪೈಕಿ ಕೆಲವೊಂದು ಸಿನಿಮಾಗಳು ಇನ್ನಷ್ಟೇ ತೆರೆಗೆ ಬರಬೇಕಿವೆ.

`ನೇನು ಮಿಕು ಬಾಗ ಕಾವಲಿಸಿನವಾಡಿನಿ, ಫುಲ್ ಬಾಟಲ್' ಎನ್ನುವ ತೆಲುಗು ಸಿನಿಮಾಗಳಲ್ಲಿ ಸಹ ಸಂಜನಾ ಅಭಿನಯಿಸಿದ್ದಾರೆ. ಇದಷ್ಟೇ ಅಲ್ಲದೆ, ಕನ್ನಡದ ಮೊದಲ ಪರಿಪೂರ್ಣ ಪ್ರಮಾಣದ ವೆಬ್ ಸೀರೀಸ್ ಎನಿಸಿದ್ದ 'ಹನಿಮೂನ್' ವೆಬ್ ಸೀರೀಸ್‌ನಲ್ಲಿ ಕೂಡ ಸ೦ಜನಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.


ಮನದಾಳದ ಮಾತುಗಳು

ನನ್ನ ಸ್ನೇಹಿತರೊಬ್ಬರು ನಿರ್ದೇಶಕರಾಗಲು ಕಿರು ಚಿತ್ರ ಮಾಡುವಾಗ, ಅದರಲ್ಲಿ ನನ್ನನ್ನು ನಾಯಕಿಯನ್ನಾಗಿ ಮಾಡಿಕೊಂಡರು. 

“ಈ ಚಿತ್ರಕ್ಕಾಗಿ ಶೂಟ್ ಮಾಡಿದ್ದ ಪ್ರೊಮೋ ಯೂಟ್ಯೂಬ್‌ನಲ್ಲಿ ಹಾಕಿದ್ದರು. ಅದನ್ನು 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರ ತಂಡ ನೋಡಿ ಆಡಿಷನ್‌ಗೆ ಕರೆಯಿತು. ಹಾಗೆ ನಾನು ಸಿನಿಮಾ ಜಗತ್ತಿಗೆ ಬಂದೆ.

''ಚಿತ್ರರಂಗಕ್ಕೆ ಆಗತಾನೇ ಆಗಮಿಸಿದ ನನಗೆ 'ಸಲಗ' ಸಿನಿಮಾದ ಮೂಲಕ ಅದ್ದೂರಿ ಸ್ವಾಗತ ದೊರಕಿತು. ಆದರೆ ಇದಾಗಿ ಕೆಲವೇ ದಿನಗಳಲ್ಲಿ ಕೊರೋನಾ ಬಂದು ಚಿತ್ರರಂಗದ ಚಟುವಟಿಕೆಗಳೆಲ್ಲಾ ಸ್ತಬ್ಧವಾಯಿತು.

ಕೊರೋನಾ ಕೊಟ್ಟ ಕಾವ

“ಆಗೊಮ್ಮೆನಾನು ಕೆಲಸ ತೊರೆದು ಚಿತ್ರರಂಗಕ್ಕೆ ಬಂದ ನನ್ನ ನಿರ್ಧಾರದ ಕುರಿತು ಮರುಚಿಂತನೆ ಮಾಡಿಕೊಂಡಿದ್ದೂ ಉಂಟು, ಎನ್ನುತ್ತಾರೆ ಸಂಜನಾ.

“ಆದರೆ ಮನಿಯಾ ವಿಜಯ್ ಜೊತ ನಾಯಕಿಯಾಗುವ ಅವಕಾಶ ನನ್ನ ಜೀವನದ ಸರ್‌ಪ್ರೆಸ್‌ ಸಂಭ್ರಮ ಅಥವಾ ಅವಕಾಶ ಎನ್ನಬಹುದು.

ನಿರ್ದೇಶಕ ದುನಿಯಾ ವಿಜಯ್

“ಏಕೆಂದರೆ ನಟರಾಗಿ ದುನಿಯಾ ವಿಜಯ್ ತಮ್ಮಛಾಪು ಮೂಡಿಸಿದವರು. ಅಂಥವರು ಮೊದಲ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದರು. ಅವರ ಮೊದಲ ನಿರ್ದೇಶದಲ್ಲಿ ನಾನು ನಾಯಕಿ ಆಗಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಆಕಸ್ಮಿಕವಾಗಿ ಬಂದಿತು,'' ಎಂದು ತಮ್ಮ ಸಂತಸವನ್ನು ಹಂಚಿಕೊಂಡರು. 

ಅಚ್ಚುಮೆಚ್ಚಿನ ಹವ್ಯಾಸ


ಸಂಜನಾರಿಗೆ ಪ್ರವಾಸ ಎನ್ನುವುದು ಅಚ್ಚುಮೆಚ್ಚಿನ ಹವ್ಯಾಸವಾಗಿದೆ. 'ಹಸಿರಿನ ವನಸಿರಿ ಎಂದರೆ ಇಷ್ಟ. ಸಿಕ್ಕಾಪಟ್ಟೆ ಟ್ರಾವೆಲ್ ಮಾಡುತ್ತೇನೆ. ಪ್ರವಾಸ ಮಾಡುವ ಕ್ರೇಜ್ ಮೊದಲಿನಿಂದಲೂ ಇದೆ. 

“ಫ್ರೆಂಡ್ಸ್ ಜೊತೆ ನಾನಾ ರಾಜ್ಯಗಳಿಗೆ ಹೋಗುತ್ತಲೇ ಇರುತ್ತೇನೆ. ನನಗೆ ಸಾಹಸಮಯದಿಂದ ಕೂಡಿರುವ ಬೆಟ್ಟಗುಡ್ಡಗಳನ್ನು ಏರುವುದಕ್ಕೆ ಇಷ್ಟ,'' ಎಂದು ಹೇಳುತ್ತಾರೆ.

ಗ್ಲಾಮರಸ್ ಪಾತ್ರಗಳು

'ರಾಯಲ್' ಸಿನಿಮಾದಲ್ಲಿ ಸಂಜನಾ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಸಿಕ್ಕಿದೆ. ಆ ಪಾತ್ರ ಗ್ಲಾಮರಸ್ ಟಚ್ ಒಡನೆ ನಟಿಗೆ ಹೊಸ ಅವಕಾಶದ ಬಾಗಿಲು ತೆರೆದಿತ್ತು. ಇದಲ್ಲದೆ ಚಂದನ್ ಶೆಟ್ಟಿ, ಅಪೂರ್ವಾ ಅಭಿನಯದ 'ಸೂತ್ರಧಾರಿ' ಸಿನಿಮಾದ ಡ್ಯಾಶ್ ಸಾಂಗ್‌ನಲ್ಲಿ ಸಂಜನಾ ಕಾಣಿಸಿಕೊಂಡಿದ್ದು, ಈ ಹಾಡು ಬಹು ಬೇಗನೆ ಜನಪ್ರಿಯವಾಗಿದೆ.

ಸೂತ್ರಧಾರಿಯಲ್ಲಿ ಪಾತ್ರಧಾರಿ

ಈಗಲ್‌ ಮೀಡಿಯಾ ಕ್ರಿಯೇಷನ್ಸ್ ಮೂಲಕ ಚಿತ್ರರಂಗದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ನವರಸನ್ ನಿರ್ಮಾಣದ, ಕಿರಣ್ ಕುಮಾರ್ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಗಾಯನ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ 'ಸೂತ್ರಧಾರಿ' ಚಿತ್ರ ಈ ತಿಂಗಳು ಅದ್ಧೂರಿಯಾಗಿ

ಬಿಡುಗಡೆಯಾಗಲಿದೆ.(ಜುಲೈ ತಿಂಗಳಲ್ಲಿ ಬಿಡುಗಡೆ ಆಗಿದೆ..)

ಎಕ್ಕ ಚಿತ್ರದಲ್ಲಿ ಪಾತ್ರ

ಇದಲ್ಲದೆ ಯುವ ರಾಜ್‌ಕುಮಾರ್‌ ಎರಡನೇ ಸಿನಿಮಾ, ರೋಹಿತ್ ಪದಕಿ ನಿರ್ದೆಶನದ 'ಎಕ್ಕ' ಚಿತ್ರಕ್ಕೆ ಸಂಜನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್‌ರ ಪಿ.ಆರ್.ಕೆ. ಪ್ರೊಡಕ್ಷನ್ಸ್‌, ಜಯಣ್ಣ ಫಿಲಂಸ್ (ಜಯಣ್ಣ ಮತ್ತು ಭೋಗೇಂದ್ರ) ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ (ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್) ಸೇರಿ ನಿರ್ಮಿಸುತ್ತಿರುವ ಈ ಚಿತ್ರ ಇದೇ ಜೂನ್‌ನಲ್ಲಿ ತರಗೆ ಬರಲಿದೆ.

ಸಂಪದಾ ಜೊತೆ ಸಹನಾಯಕಿ

'ಎಕ್ಕ' ಆರಂಭವಾದ ಹೊಸತರಲ್ಲೇ ಈ ಸಿನಿಮಾಗೆ ಇಬ್ಬರು ನಾಯಕಿಯರು ಎಂದು ನಿರ್ದೇಶಕರು ಹೇಳಿದ್ದರು. ಆರಂಭದಲ್ಲಿ ಒಬ್ಬ ನಾಯಕಿ ಸಂಪದಾರನ್ನು ಪರಿಚಯ ಕೂಡ ಮಾಡಿದ್ದರು. ಆ ಚಿತ್ರಕ್ಕೆ ಸಹನಾಯಕಿಯಾಗಿ ಸಂಜನಾ ಅಭಿನಯಿಸಿದ್ದಾರೆ.

ಗೃಹಶೋಭಾ ಜುಲೈ 2025 ರಲ್ಲಿ ಪ್ರಕಟವಾಗಿದ್ದ ನನ್ನ ಲೇಕಾನ..


ನವ ಭಾರತದ ಸಪ್ತ ಸಿಂಧೂರರು

 -ರಾಘವೇಂದ್ರ ಅಡಿಗ ಎಚ್ಚೆನ್.


ಭಾರತದ ಕಿರಿಟ ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೬ ಮಂದಿ ಪ್ರವಾಸಿಗರು ಬಲಿಯಾಗಿದ್ದು ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕೈಗೊಂಡಿತು. ಈ ನಿರ್ಣಾಯಕ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಒಂಬತ್ತು ಉಗ್ರ ನೆಲೆಗಳನ್ನು ನಾಶ ಮಡಲಾಗಿದೆ. ಆದರೆ ಈ ಸಮಯ ನಮ್ಮ ಸೇನೆಯಲ್ಲಿನ ಹೆಮ್ಮೆಯ ಯೋಧರು ಸಹ ಹುತಾತ್ಮರಾಗಿದ್ದಾರೆ. ಹಾಗೆ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದವರ ಕಿರು ಪರಿಚಯ ಹೀಗಿದೆ-
ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ


ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಅವರು 1993ರ ಜನವರಿ 30ರಂದು  ಹರಿಯಾಣದ ಪಲ್ವಾಲ್ ಜಿಲ್ಲೆಯ ಮೊಹಮ್ಮದ್ ಪುರ ಗ್ರಾಮದಲ್ಲಿ ಜನಿಸಿದರು. ಅವರು  ದಯಾ ಚಂದ್, ಮೀರಾ ದೇವಿ ಅವರ ಪ್ರೀತಿಯ ಪುತ್ರರಾಗಿದ್ದರು.  ನಾಲ್ಕು ಸಹೋದರರು ಮತ್ತು ಒಬ್ಬ ಸಹೋದರಿಯೊಂದಿಗೆ ದೊಡ್ಡ ಕುಟುಂಬ ಅವರದು.. ಸೇವೆ, ಶಿಸ್ತು ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಅವರ ಕುಟುಂಬದ ಪ್ರಭಾವ ಅವರ ಮೇಲಾಗಿದೆ. ಅವರ ಸಹೋದರರ ಪೈಕಿ ಅವರ ಇಬ್ಬರು ಕಿರಿಯ ಸಹೋದರರಾದ ಕಪಿಲ್ ಮತ್ತು ಹರ್ದುತ್, ರಾಷ್ಟ್ರೀಯ ಸೇವೆಯ ಪರಂಪರೆಯನ್ನು ಮುಂದುವರಿಸುತ್ತಾ, ಭಾರತೀಯ ಸಶಸ್ತ್ರ ಪಡೆಗಳಿಗೆ ಅಗ್ನಿವೀರರಾಗಿ ಸೇರಿದರು. ಅವರ ಕಿರಿಯ ಸಹೋದರ ಪುಷ್ಪೇಂದರ್ ಅವರ ಅಧ್ಯಯನವನ್ನು ನಡೆಸುತ್ತಿದ್ದರೆ, ಸಹೋದರ ವಿಷ್ಣು ರೈತನಾಗಿ ಕುಟುಂಬಕ್ಕೆ ನೆರವಾಗಿದ್ದಾರೆ.  ಚಿಕ್ಕ ವಯಸ್ಸಿನಿಂದಲೇ, ದಿನೇಶ್ ಅಖಂಡ ದೇಶಭಕ್ತಿಯ ಪ್ರಜ್ಞೆಯನ್ನು ಮತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಬಲವಾದ ಬಯಕೆಯನ್ನು ಹೊಂದಿದ್ದರು. ಹಸಿರು ಸಮವಸ್ತ್ರದ ಬಗೆಗಿನ ಅವರ ಆಕರ್ಷಣೆ ಮತ್ತು ರಾಷ್ಟ್ರದ ಬಗೆಗಿನ ಅವರ ಬದ್ಧತೆಯು ಚಿಕ್ಕ ವಯಸ್ಸಿನಿಂದಲೇ ಸ್ಪಷ್ಟವಾಗಿತ್ತು. ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ನಿರ್ಧರಿಸಿದ ಅವರು, ವಿದ್ಯಾಭ್ಯಾಸದ ದಿನಗಳಲ್ಲಿ ತಮ್ಮ ಉದ್ದೇಶದ ಮೇಲೆ ಗಮನ ಕೇಂದ್ರೀಕರಿಸಿದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ,  15 ಸೆಪ್ಟೆಂಬರ್ 2014 ರಂದು, ತಮ್ಮ 21 ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಅವರು ಸೇರ್ಪಡೆಗೊಂಡರು.
ಅವರನ್ನು 5ನೇ ರೆಜಿಮೆಂಟೊ ಡಿ ಕ್ಯಾಂಪೊ ಡೆಲ್ ರೆಜಿಮೆಂಟೊ ಡಿ ಆರ್ಟಿಲ್ಲೆರಿಯಾದಲ್ಲಿ ಸೇರಿಸಲಾಯಿತು, ಇದು ಭಾರತೀಯ ಸೇನೆಯ ಪ್ರಮುಖ ಯುದ್ಧ ಶಾಖೆಯಾಗಿದ್ದು, ಕ್ಯಾಂಪೇನ್ ಫಿರಂಗಿಗಳು,  ಮತ್ತು ಇತರ ಸುಧಾರಿತ ಫಿರಂಗಿ ವ್ಯವಸ್ಥೆಗಳು ಸೇರಿದಂತೆ ಅದರ ಪ್ರಬಲ ಅಗ್ನಿಶಾಮಕ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಪದಾತಿದಳ ಮತ್ತು ಶಸ್ತ್ರಸಜ್ಜಿತ ಘಟಕಗಳನ್ನು ಬೆಂಬಲಿಸುವಲ್ಲಿ ಈ ರೆಜಿಮೆಂಟ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಹೊಂದಾಣಿಕೆಗಳೆರಡರಲ್ಲೂ ನಿಖರವಾದ ಮತ್ತು ಅಗಾಧವಾದ ಶಕ್ತಿಯನ್ನು ಒದಗಿಸುತ್ತದೆ. ಬಹಳ ಹಿಂದೆಯೇ, ದಿನೇಶ್ ಕುಮಾರ್ ಶರ್ಮಾ ಅವರ ಕಠಿಣ ಪರಿಶ್ರಮ, ಶಿಸ್ತು ಮತ್ತು ಕರ್ತವ್ಯಕ್ಕೆ ಸಮರ್ಪಣೆಗಾಗಿ ಹೆಸರುವಾಸಿಯಾಗಿದ್ದರು. . ಅವರ ಪ್ರಾಮಾಣಿಕತೆ ಮತ್ತು ಬದ್ಧತೆಯು ಅವರ ಸಹಚರರು ಮತ್ತು ಮೇಲಧಿಕಾರಿಗಳ ಗೌರವ ದಕ್ಕುವಂತೆ ಮಾಡಿತ್ತು. ಇದು ದಿನೇಶ್ ವೈಯಕ್ತಿಕ ಜವಾಬ್ದಾರಿಗಳನ್ನು ಸಹ ವಹಿಸಿಕೊಂಡರು. ಅವರು ಸೀಮಾ ಅವರನ್ನು ವಿವಾಹವಾದರು, ಮತ್ತು ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಜನಿಸಿದರು,
2025ರ ಮೇ 7ರ ರಾತ್ರಿ, ಪಾಕಿಸ್ತಾನಿ ಪಡೆಗಳು ತೀವ್ರವಾದ ಬಾಂಬ್ ದಾಳಿ ಮತ್ತು ಗುಂಡಿನ ದಾಳಿ ನಡೆಸಿ, ಭಾರತೀಯ ನೆಲೆಗಳು ಮತ್ತು ಅವುಗಳ ಸುತ್ತಮುತ್ತಲಿನ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಿದವು. ಕ್ಷಿಪಣಿಗಳು ಮತ್ತು ಫಿರಂಗಿಗಳು ಜನವಸತಿ ಪ್ರದೇಶದ ಬಳಿ ಸಿಡಿದು ಸೈನಿಕರು ಮತ್ತು ನಾಗರಿಕರಿಗೆ ಗಂಭೀರ ಅಪಾಯವನ್ನುಂಟುಮಾಡಿದವು.್
ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು 7 ಮೇ 2025 ರಂದು ಪ್ರಾರಂಭಿಸಿದ ಆಪರೇಷನ್ ಸಿಂಧೂರ್-ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿಈ ದಾಳಿ ಸಂಭವಿಸಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಬಳಸುವ ತರಬೇತಿ ಶಿಬಿರಗಳು ಮತ್ತು ಉಡಾವಣಾ ತಾಣವನ್ನು ನಾಶಪಡಿಸುವ ಉದ್ದೇಶದಿಂದ ಪಾಕಿಸ್ತಾನದೊಳಗಿನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತದಿಂದ ದಾಳಿಗಳು ನಡೆದಿದ್ದವು. ಈ ದಾಳಿಯ ಪರಿಣಾಮವಾಗಿ, ಪಾಕಿಸ್ತಾನಿ ಪಡೆಗಳು ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿಗಳನ್ನು ನಡೆಸಿ ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದವು. ಇಂತಹಾ ಒಂದು ಸಂದರ್ಭದಲ್ಲಿ  5 ನೇ ರೆಜಿಮೆಂಟೊ ಡಿ ಕ್ಯಾಂಪೊದ ಪೋಸ್ಟ್ ಗಳಲ್ಲಿ ಒಂದು ಭಾಗದ ಮೇಲೆ ದ ಹಠಾತ್ ಮತ್ತು ತೀವ್ರವಾದ ಶತ್ರು ದಾಳಿ ಸಂಭವಿಸಿತು.. ಈ ಭಯಾನಕ ದಾಳಿಯ ಸಮಯದಲ್ಲಿ ವೀರರಾದ ದಿನೇಶ್ ಕುಮಾರ್ ಶರ್ಮಾ ಅಸಾಧಾರಣ ಧೈರ್ಯವನ್ನು ತೋರಿಸಿದರು. ಅವರು ತಮ್ಮ ಕರ್ತವ್ಯಗಳನ್ನು ಪೂರೈಸಿದರು, ಆದರೆ ಈ ಹೋರಾಟದಲ್ಲಿ ಅವರಿಗೆ ಗಂಭೀರ ಗಾಯವಾಗಿತ್ತು.. ತಕ್ಷಣದ ವೈದ್ಯಕೀಯ ಆರೈಕೆಯ ಹೊರತಾಗಿಯೂ, ಅವರು  ಹುತಾತ್ಮರಾದರು. ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಅವರು ಹುತಾತ್ಮರಾದಾಗ ಅವರಿಗೆ 32 ವರ್ಷ ವಯಸ್ಸಾಗಿತ್ತು. ಸಮರ್ಪಣಾ ಮನೋಭಾವ ಮತ್ತು ಧೈರ್ಯಶಾಲಿ ಸೈನಿಕರಾಗಿದ್ದ ಅವರು ತಮ್ಮ ಸೇವೆ ಮತ್ತು ತ್ಯಾಗದ ಮೂಲಕ ಅಜರಾಮರ ಆದರು.
ರೈಫಲ್ ಮ್ಯಾನ್ ಸುನಿಲ್ ಕುಮಾರ್


ರೆಜಿಮೆಂಟೊ ಡಿ ಇನ್ಫ್ಯಾಂಟರಿಯಾ ಲಿಗೆರಾ ಡಿ ಜೆ & ಕೆ ಯ ವೀರರಾದ ಸುನಿಲ್ ಕುಮಾರ್ (25), ಆರ್ಎಸ್ ಪುರ ಸೆಕ್ಟರ್ನಲ್ಲಿ ನಡೆದ ಗುಂಡು ಹಾಗೂ ಬಾಂಬ್ ದಾಳಿಯ ಸಮಯದಲ್ಲಿ ಗಾಯಗೊಂಡು ಹುತಾತ್ಮರಾದರು.  ಜಮ್ಮು ಮತ್ತು ಕಾಶ್ಮೀರದ ಲಿಗೆರಾ ಪದಾತಿದಳದ ಸದಸ್ಯ ರೈಫಲ್ ಮ್ಯಾನ್ ಸುನೀಲ್ ಕುಮಾರ್ ಅವರ ತ್ಯಾಗ ಭಾರತೀಯರ ಹೃದಯದಲ್ಲಿ ಸದಾ ನೆನಪಾಗಿ ಉಳಿಯಲಿದೆ.
ಸಿಪಾಯಿ ಮುಧವತ್ ಮುರಳಿ ನಾಯಕ್
ಸಿಪಾಯಿ ಮುಧವತ್ ಮುರಳಿ ನಾಯಕ್ ಅವರು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯಲ್ಲಿರುವ ಸಣ್ಣ ಗ್ರಾಮವಾದ ಕಲ್ಲಿ ತಾಂಡಾದ ಹೆಮ್ಮೆಯ ಮಗ. ಸಾಧಾರಣ ಕೃಷಿ ಕುಟುಂಬದಲ್ಲಿ ಜನಿಸಿದ ಅವರು ಮುದಾವತ್ ಶ್ರೀರಾಮ್ ನಾಯಕ್ ಮತ್ತು ಮುದಾವತ್ ಜ್ಯೋತಿ ಬಾಯಿ ಅವರ ಏಕೈಕ ಪುತ್ರರಾಗಿದ್ದರು. ಅವರ ಕುಟುಂಬವು 1995ರಲ್ಲಿ ಮುಂಬೈಗೆ ಸ್ಥಳಾಂತರಗೊಂಡು ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ವಾಸಿಸುತ್ತಿತ್ತು. ತಮ್ಮ ಕುಟುಂಬವು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಹೊರತಾಗಿಯೂ, ಮುರುಳಿಯವರು  ಚಿಕ್ಕ ವಯಸ್ಸಿನಿಂದಲೇ ದೃಢ ನಿಶ್ಚಯ ಮತ್ತು ಬಲವಾದ ಉದ್ದೇಶ ಹೊಂದಿದ್ದರು. ಸೋಮಂಡೆಪಲ್ಲಿಯ ವಿಜ್ಞಾನ ಪ್ರೌಢಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದ ಮುರಳಿ ಶಿಸ್ತು ಮತ್ತು ಅಧ್ಯಯನದ ಬದ್ಧತೆಗೆ ಹೆಸರುವಾಸಿಯಾಗಿದ್ದರು. ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಬಯಕೆಯೊಂದಿಗೆ, ಮುರಳಿಯವರು ಸಶಸ್ತ್ರ ಪಡೆಗಳ ಸೇರುವುದಕ್ಕೆ ತೀರ್ಮಾನಿಸಿದರು.  2022ರ ನವೆಂಬರ್ ನಲ್ಲಿ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಅಗ್ನಿವೀರ್ ಆಗಿ ಸೇರಿಕೊಂಡರು.. ಅವರು ಮಹಾರಾಷ್ಟ್ರದ ನಾಸಿಕದಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿಯನ್ನು ಪಡೆದರು, ತನ್ನ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಸಿಪಾಯಿ ಮುರಳಿ ನಾಯಕ್ ಅವರನ್ನು ಭಾರತೀಯ ಸೇನೆಯ ಪ್ರತಿಷ್ಠಿತ ಮತ್ತು ಪ್ರಮುಖ ಯುದ್ಧ ಘಟಕವಾದ 851 ರೆಜಿಮೆಂಟೊ ಲಿಗೇರೊ ಡೆಲ್ ರೆಜಿಮೆಂಟೊ ಡಿ ಆರ್ಟಿಲ್ಲೆರಿಯಾದಲ್ಲಿ ಸೇರಿಸಲಾಯಿತು,
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ  2025ರ ಮೇ 9ರ ರಾತ್ರಿ, ಪಾಕಿಸ್ತಾನಿ ಪಡೆಗಳು ಭಾರತದ ಮೇಲೆ ದಾಳಿ ನಡೆಸಿದಾಗ ಭಾರತ ಅದಕ್ಕೆ ತಕ್ಕ ಪ್ರತ್ಯುತ್ತರ ಕೊಟ್ಟಿತ್ತು. ತೀವ್ರತರವಾದ ಸಂಘರ್ಷದ ಈ ಅವಧಿಯಲ್ಲಿ, 851ರ ಲಿಗೇರೊ ರೆಜಿಮೆಂಟೊ  ಹಠಾತ್ ಮತ್ತು ತೀವ್ರವಾದ ಶತ್ರು ಗುಂಡಿನ ದಾಳಿಗೆ ಸಾಕ್ಷಿಯಾಗಿತ್ತು.  ಈ ಸಮಯದಲ್ಲಿ ಸಿಪಾಯಿ ಮುರಳಿ ನಾಯಕ್ ಶೌರ್ಯ ಮತ್ತು ದೃಢನಿಶ್ಚಯವನ್ನು ತೋರಿಸಿದ್ದರು. ಅಲ್ಲದೆ ದೃಢ ನಿಶ್ಚಯದಿಂದ ತಮ್ಮ ಕರ್ತವ್ಯಗಳನ್ನು ಪೂರೈಸಿದರು.  ಆದರೆ ಈ ಹೋರಾಟದಲ್ಲಿ ಅವರಿಗೆ  ಗಂಭೀರವಾದ ಗಾಯವಾಗಿತ್ತು.  ತಕ್ಷಣದ ವೈದ್ಯಕೀಯ ಆರೈಕೆಯನ್ನು ಪಡೆದರೂ, ಸಹ ಪ್ರಯೋಜನವಾಗಲಿಲ್ಲ, ಅವರು ಹುತಾತ್ಮರಾದಾಗ ಅವರಿಗೆ  ಕೇವಲ 25 ವರ್ಷ ವಯಸ್ಸಾಗಿತ್ತು..
ಹವಾಲ್ದಾರ್ ಝಂಟು ಅಲಿ ಶೇಖ್
ಹವಾಲ್ದಾರ್ ಝಂಟು ಅಲಿ ಶೇಖ್ ಪಶ್ಚಿಮ ಬಂಗಾಳದ ಕೃಷ್ಣನಗರದ ಮೂಲದ ಹವಾಲ್ದಾರ್ ಝಂಟು ಅಲಿ ಶೇಖ್ 6ನೇ ಬಟಾಲೋನ್ ಡಿ ಲಾಸ್ ಪ್ಯಾರಾಸೈಡಿಸ್ಟಾಸ್ (ವಿಶೇಷ ಪಡೆಗಳು) ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು  ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಥರ್ಘಟಾ ಎನ್ ಕೃಷ್ಣನಗರ ಗ್ರಾಮದಿಂದ ಬಂದವರು. ಸಣ್ಣ ರೈತನೊಬ್ಬನ ಮಗನಾದ ಇವರು ಚಿಕ್ಕ ವಯಸ್ಸಿನಲ್ಲೇ ದೇಶಭಕ್ತಿಯನ್ನು ಬೆಳೆಸಿಕೊಂಡವರು. ಚಿಕ್ಕ ವಯಸ್ಸಿನಿಂದಲೇ ಸವಾಲುಗಳನ್ನು ಎದುರಿಸುವ ಬಯಕೆಯನ್ನು ತೋರಿಸಿದವರು.  ರೈತನ ಮಗನಾಗಿ ಬಡತನದಲ್ಲಿ ಬೆಳೆದ  ಇವರು  ನಾಡಿಯಾ ಜಿಲ್ಲೆಯ ಚಪ್ರಾ ಉಪವಿಭಾಗದ ಅಡಿಯಲ್ಲಿರುವ ಬಾರಾ ಅಂಡುಲಿಯಾದ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಸಹೋದರ ಮೇಯರ್ ಎಲ್ ಸುಬೇದಾರ್ ರಫಿಕುರ್ ಅಲಿ ಶೇಖ್ ಅವರ ಹೆಜ್ಜೆಗಳನ್ನು ಅನುಸರಿಸಿ, 2008ರಲ್ಲಿ ಸೇನೆಗೆ ಸೇರಿದರು. ಆರಂಭದಲ್ಲಿ ಭಾರತೀಯ ಸೇನೆಯ ಅತ್ಯಂತ ಗಣ್ಯ ಮತ್ತು ಪ್ರತಿಷ್ಠಿತ ಕಾಲಾಳುಪಡೆ ರೆಜಿಮೆಂಟ್ ಗಳಲ್ಲಿ ಒಂದಾದ ರೆಜಿಮೆಂಟೊ ಡಿ ಪ್ಯಾರಾಸೈಡಿಸ್ಟಾಸ್ನಲ್ಲಿ ನೇಮಿಸಲಾಯಿತು. ಕಠಿಣವಾದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾದ ನಂತರ ಮತ್ತು ತರಬೇತಿ ಪಡೆದ ನಂತರ, ಅವರನ್ನು 6 ಪ್ಯಾರಾ (ವಿಶೇಷ ಪಡೆಗಳು)-ರೆಜಿಮೆಂಟೊ ಡಿ ಪ್ಯಾರಾಸೈಡಿಸ್ಟಾಸ್ನ ಗಣ್ಯ ಘಟಕಕ್ಕೆ ಸೇರಿಸಲಾಯಿತು..
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯ ಬಸಂತ್ಗಢ ಪ್ರದೇಶದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿಈತ ಹುತಾತ್ಮರಾದರು.  ಶೇಖ್ ಅವರು ಉತ್ತರ ಪ್ರದೇಶದ ಆಗ್ರಾ ಕ್ಯಾಂಟನ್ನಲ್ಲಿ ವಾಸಿಸುತ್ತಿರುವ ಪತ್ನಿ ಝುಮಾ ಮತ್ತು ಇಬ್ಬರು ಪುತ್ರರಾದ ತನ್ವೀರ್ ಮತ್ತು ರೆಹಾನಾರನ್ನು ಅಗಲಿದ್ದಾರೆ. ಅವರ ಸಹೋದರ ಮೇಯರ್ ನಜೀಮ್ ಶೇಖ್ ಕೂಡ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೇನೆಯಲ್ಲಿ ನಿಯೋಜಿಸದ ಅಧಿಕಾರಿಯಾಗಿದ್ದಾರೆ.
ಡಾ. ರಾಜ್ ಕುಮಾರ್ ಥಾಪಾ
ಡಾ. ರಾಜ್ ಕುಮಾರ್ ಥಾಪಾ ರಾಜೌರಿ ಜಿಲ್ಲೆಯ ಅಭಿವೃದ್ಧಿ(ಹೆಚ್ಚುವರಿ) ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಮೇ 10ರಂದು ಜಮ್ಮು ಮತ್ತು ಕಾಶ್ಮೀರದ ರಾಜೌರಿ ನಗರದಲ್ಲಿರುವ ಅವರ ಅಧಿಕೃತ ನಿವಾಸದ ಮೇಲೆ ಪಾಕಿಸ್ತಾನಿ ಫಿರಂಗಿ ದಾಳಿ ಮಾಡಿ ಹತ್ಯೆ ಮಾಡಲಾಯಿತು.  ಅವರು ಪತ್ನಿ, ವೈದ್ಯೆ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಥಾಪಾ ಅವರು ಜಮ್ಮು ಮತ್ತು ಕಾಶ್ಮೀರದ ಆಡಳಿತಾತ್ಮಕ ಸೇವೆಯಲ್ಲಿ  ಮಹತ್ವದ ಸ್ಥಾನ ಪಡೆದಿದ್ದರು.  ಎಂಬಿಬಿಎಸ್ ಪದವಿ ಪಡೆದ ಅವರು 2001ರಲ್ಲಿ ಜೆ. ಕೆ. ಎ. ಎಸ್. ಗೆ ಸೇರಿದರು. ಈ ಹಿಂದೆ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್ (2009-2014) ಅವರ ವಿಶೇಷ ತಂಡದಲ್ಲಿ  ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಉದ್ವಿಗ್ನತೆಯ ಸಮಯದಲ್ಲಿ ಗಡಿಯ ನಿವಾಸಿಗಳಿಗೆ ನೆರವಿನ ಪ್ರಯತ್ನಗಳನ್ನು ಸಂಘಟಿಸುವಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸಾರ್ಜೆಂಟ್ ಸುರೇಂದ್ರ ಕುಮಾರ್ ಮೊಗಾ


ಭಾರತೀಯ ವಾಯುಪಡೆಯ ವೈದ್ಯಕೀಯ ಸಹಾಯಕ ಸುರೇಂದ್ರ ಕುಮಾರ್ ಮೊಗಾ ಅವರನ್ನು ಅವರು ಸಾಯುವ ನಾಲ್ಕು ದಿನಗಳ ಮೊದಲು ಬೆಂಗಳೂರಿನಿಂದ ಜಮ್ಮು ಮತ್ತು ಕಾಶ್ಮೀರದ ಉಧಂಪುರ್ಗೆ ಮರು ನಿಯೋಜಿಸಲಾಯಿತು. ಮೇ 11ರಂದು ಭಾರತದ ಆಪರೇಷನ್ ಸಿಂಧೂರ್  ಕಾರ್ಯಾಚರಣೆಯ ನಂತರ ಗಡಿಯಾಚೆಗಿನ ಬಾಂಬ್ ದಾಳಿ ಮತ್ತು ಡ್ರೋನ್ ದಾಳಿಯ ಸಮಯದಲ್ಲಿ ಅವರು ಹುತಾತ್ಮರಾದರು. ರಾಜಸ್ಥಾನದ ಝುಂಝುನು ಜಿಲ್ಲೆಯ ಮೆಹ್ರಾದಾಸಿ ಗ್ರಾಮದ ನಿವಾಸಿಯಾದ ಮೋಗಾ ಭಾರತೀಯ ವಾಯುಪಡೆಯ 36 ನೇ  ವಿಂಗ್ ಜೊತೆಗಿದ್ದರು. ಒಬ್ಬ ಅರ್ಹ ವೈದ್ಯಕೀಯ ಸಹಾಯಕನಾಗಿ, ಕರ್ತವ್ಯದ ಬಗೆಗಿನ ಅವರ  ಬದ್ಧತೆಯು ನಮಗೆ ಎಂದೂ ಸ್ಫೂರ್ತಿಯಾಗಿರಲಿದೆ. ಮೊಗಾ ಅವರಿಗೆ ಹೆಂಡತಿ ಸೀಮಾ, 11 ವರ್ಷದ ವರ್ತಿಕಾ ಮತ್ತು 7 ವರ್ಷದ ದಕ್ಷ ಎಂಬ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅಲ್ಲದೆ ತಾಯಿ ಹಾಗೂ ಸೋದರಿಯರಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಮೊಹಮ್ಮದ್ ಇಮ್ತಿಯಾಜ್
ಗಡಿ ಭದ್ರತಾ ಪಡೆಯ ಸಬ್ ಇನ್ಸ್ಪೆಕ್ಟರ್ ಮೊಹಮ್ಮದ್ ಇಮ್ತಿಯಾಜ್ ಅವರು ಆರ್. ಎಸ್. ಪುರ ಡಿ ಜಮ್ಮು ವಲಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದರು. ಆಪರೇಷನ್ ಸಿಂಧೂರ್ ನಂತರ ತೀವ್ರಗೊಂಡ ಬಾಂಬ್ ದಾಳಿ ಮತ್ತು ಡ್ರೋನ್ ದಾಳಿಯ ಮಧ್ಯೆ ಮೇ 11ರಂದು ಪಾಕಿಸ್ತಾನದ ಜೊತೆ ನಡೆದ ತೀವ್ರವಾದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದರು.

ಜೂನ್ 2025 "ವಂದೇ ಕರ್ನಾಟಕ" ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಕನ್ನಡದ ಮೊದಲ ಲೇಡಿ ಸೂಪರ್ ಸ್ಟಾರ್ ಅಭಿನಯ ಸರಸ್ವತಿ ಬಿ. ಸರೋಜಾದೇವಿ

 -        ರಾಘವೇಂದ್ರ ಅಡಿಗ ಎಚ್ಚೆನ್.

ಬಹುಭಾಷಾ ನಟಿ ಮೇರು ಕಲಾವಿದೆ ಡಾ. ಬಿ.ಸರೋಜಾದೇವಿ ಅವರು ತುಂಬು ಜೀವನ ನಡೆಸಿ ವಿಧಿವಶರಾಗಿದ್ದಾರೆ.  ಭಾರತೀಯ ಚಿತ್ರರಂಗಕ್ಕೆ ಸಂದ  ಕರ್ನಾಟಕದ ಭವ್ಯ ಕೊಡುಗೆ. ಅವರು ಕನ್ನಡದಲ್ಲಷ್ಟೇ ಅಲ್ಲದೆ ತಮಿಳುತೆಲುಗುಹಿಂದಿ ಚಿತ್ರರಂಗಗಳಲ್ಲಿ ಅಪಾರ ಜನಪ್ರಿಯತೆಗಳಿಸಿದ ಮೇರು ಕಲಾವಿದೆ.   ಕಿತ್ತೂರು ಚೆನ್ನಮ್ಮಬಬ್ರುವಾಹನಭಾಗ್ಯವಂತರುಮಲ್ಲಮ್ಮನ ಪವಾಡ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ‌ ಮೂಲಕ ಹಲವು ದಶಕಗಳ‌ ಕಾಲ ನಮ್ಮನ್ನೆಲ್ಲ ರಂಜಿಸಿದ್ದ ಕಲಾವಿದೆ ಇವರೇ ಬಿ.ಸರೋಜಾದೇವಿ 


ಇವರಲ್ಲಿದ್ದ ಪ್ರತಿಭೆಯನ್ನು ಮೊದಲು ಗುರುತಿಸಿದವರು ಹೊನ್ನಪ್ಪ ಭಾಗವತರು. ಬಿ.ಸರೋಜಾದೇವಿ ಅಂದರೆ ಕನ್ನಡಿಗರಿಗೆ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ.ಅರುವತ್ತರ ದಶಕದಲ್ಲಿಅವರು ನಟಿಸಿರುವ ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ಪುಳಕ ಹುಟ್ಟಿಸುತ್ತವೆ.ಕನ್ನಡ ಚಿತ್ರರಂಗದ ಭೀಷ್ಮ ”’ಹೊನ್ನಪ್ಪ ಭಾಗವತರ್”’ ಅವರ ”’ಮಹಾಕವಿ ಕಾಳಿದಾಸ”’ ಚಿತ್ರದ ಮೂಲಕ 1955ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಿ. ಸರೋಜಾದೇವಿ ತಮ್ಮ ಅಭಿನಯ ಕೌಶಲದಿಂದ ಬಹುಬೇಗ ಚತುರ್ಭಾಷಾ ತಾರೆಯಾದವರು. ವರನಟರಾದ ಡಾ.ರಾಜ್‌ಕುಮಾರ್ಕಲ್ಯಾಣ್‌ಕುಮಾರ್ಎ. ನಾಗೇಶ್ವರರಾವ್ಉದಯಕುಮಾರ್ಎನ್.ಟಿ. ರಾಮರಾವ್ಜೆಮಿನಿ ಗಣೇಶನ್ಶಿವಾಜಿಗಣೇಶನ್ಎಂ.ಜಿ. ರಾಮಚಂದ್ರನ್ದಿಲೀಪ್ ಕುಮಾರ್ರಾಜೇಂದ್ರಕುಮಾರ್ಶಮ್ಮೀಕಪೂರ್ಸುನಿಲ್‌ದತ್ ಮೊದಲಾದವರೊಂದಿಗೆ ಕನ್ನಡತಮಿಳುತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಭಭ್ರುವಾಹನ  'ಕಿತ್ತೂರು ರಾಣಿ ಚೆನ್ನಮ್ಮಅವರ ಪ್ರತಿಭೆಗೆ ಕನ್ನಡಿ ಹಿಡಿದಂತಿತ್ತು,  ಆಕೆಯನ್ನು ಕನ್ನಡದಲ್ಲಿ "ಅಭಿನಯ ಸರಸ್ವತಿ" (ನಟನೆಯ ಸರಸ್ವತಿ) ಮತ್ತು ತಮಿಳಿನಲ್ಲಿ "ಕನ್ನಡತು ಪೈಂಗಿಲಿ" (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತತಿತತು..  ಅವರ ಸಾಧನೆಗೆ ಪದ್ಮಶ್ರೀಪದ್ಮಭೂಷಣ ಪ್ರಶಸ್ತಿಗಳು ಅರಸಿ ಬಂದಿದ್ದವು. ಅದರೊಂದಿಗೇ ಡಾ.ರಾಜ್‌ಕುಮಾರ್ ಪ್ರಶಸ್ತಿಕನ್ನಡ ರಾಜ್ಯೋತ್ಸವತಮಿಳುನಾಡು ಸರ್ಕಾರದಿಂದ ಕಲೈಮಾಣಿ ಪ್ರಶಸ್ತಿಆಂಧ್ರ ಸರ್ಕಾರದಿಂದ ಎನ್‌ಟಿಆರ್ ಪ್ರಶಸ್ತಿಗೆ ಬಿ.ಸರೋಜಾದೇವಿ ಭಾಜನರಾಗಿದ್ದರು.

ಸತ್ಯನಾರಾಯಣ ದೇವರ ಪ್ರಸಾದದಿಂದ ಹುಟ್ಟಿದ ಸರೋಜಾದೇವಿ: ಸರೋಜಾದೇವಿ 1938ರ  ಜನವರಿ 7ರಂದು ರಾಮನಗರ ಜಿಲ್ಲೆ ಚೆನ್ನಪಟ್ಟಣದ ದಶಾವರ ಗ್ರಾಮದಲ್ಲಿ ಜನಿಸಿದರು.  ತಂದೆ ಭೈರಪ್ಪನವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ತಾಯಿ ರುದ್ರಮ್ಮ.  ನಟಿ ಸರೋಜಾದೇವಿ ಹುಟ್ಟಿದ್ದು ಸತ್ಯನಾರಾಯಣ ದೇವರ ಪ್ರಸಾದದಿಂದವಂತೆ.. ಹೀಗೆಂದು ನಟಿಯೇ ಒಮ್ಮೆಸಂದರ್ಶ್ನವೊಂದರಲ್ಲಿ ಹೇಳಿಕೊಂಡಿದ್ದರು.. "ನಾನು ಸತ್ಯನಾರಾಯಣ ದೇವರ ಪ್ರಸಾದದಿಂದ ಜನಿಸಿದ್ದೆ. ಈ ಕಾರಣಕ್ಕೆ ನನ್ನ ತಾಯಿಗೆ ನಾನು ಅಂದರೆ ಬಹಳ ಪ್ರೀತಿ" ಎಂದು ಎಂದು ಅವರು ಹೇಳಿದದರು.  ಸರೋಜಾದೇವಿ ಅವರ ಬಗ್ಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಸಾಕ್ಷ್ಯಚಿತ್ರವನ್ನು ತಯಾರಿಸಿತ್ತು. ಈ ಸಾಕ್ಷ್ಯಚಿತ್ರದಲ್ಲಿ ಅವರು ತಮ್ಮ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು.

"ನನ್ನ ತಾಯಿ ರುದ್ರಮ್ಮ ನಾಲ್ಕನೇಯ ಬಾರಿ ಗರ್ಭವತಿಯಾಗಿದ್ದರು. ಡೆಲಿವರಿ ಸಮಯ ಹತ್ತಿರ ಬಂದಾಗ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ನಮ್ಮ ಮನೆಯ ಹತ್ತಿರದಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ನನ್ನ ತಾಯಿ ಹೊಟ್ಟೆನೋವಿನಿಂದ ಬಳಲುವುದನ್ನು ನೋಡಿ ನೆರೆ ಮನೆಯವರು ದೊನ್ನೆಯಲ್ಲಿ ಸತ್ಯನಾರಾಯಣ ದೇವರ ಸಜ್ಜಿಗೆ ಪ್ರಸಾದವನ್ನು ನೀಡಿದರು. ಸಜ್ಜಿಗೆ ಪ್ರಸಾದವನ್ನು ತಾಯಿ ಸೇವಿಸಿದ ಕೆಲ ಸಮಯದಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದರು. ಮೊದಲ ಮೂರು ಹೆಣ್ಣು ಮಕ್ಕಳೇ  ಆಗಿದ್ದರಿಂದ ಸಂಬಂಧಿಕರು ನಾಲ್ಕನೇಯ ಹೆಣ್ಣು ಮಗುವನ್ನು ಯಾರಿಗಾದರೂ ಕೊಡು ಎಂದು ತಾಯಿಗೆ ಹೇಳಿದ್ದರು. ಆದರೆ ತಾಯಿ ನನ್ನನ್ನು ಯಾರಿಗೆ ಕೊಡಲಿಲ್ಲ. ನನ್ನ ಬಹಳ ಪ್ರೀತಿಯಿಂದ ಸಾಕಿದ್ದರು. ಅಂದು ನನಗೆ ಬಹಳ ಪ್ರೋತ್ಸಾಹ ನೀಡಿದ್ದರಿಂದ ನಾನು ಕಲಾವಿದೆಯಾದೆ" ಎಂದು ನಟಿ ಹೇಳಿಕೊಂಡಿದ್ದರು.

ಕನ್ನಡದ ಮೊದಲ ಮಹಿಳಾ ಸೂಪರ್ ಸ್ಟಾರ್‌: 13ನೇ ವಯಸ್ಸಿನಲ್ಲೇ ಸರೋಜಾ ದೇವಿಗೆ ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತ್ತು.  ಬಿ.ಆರ್ ಕೃಷ್ಣಮೂರ್ತಿ ಮೊದಲು ಸರೋಜಾದೇವಿಯವರ ಹಾಡು ಕೇಳಿದಾಗ ಅವರಿಗೆ ಅಭಿನಯಿಸಲು ಅವಕಾಶ ಕೊಟ್ಟಿದ್ದರು. ಹೀಗೆ ಸಿನಿಮಾ ಸೇರುವಾಗ ಅವರಿಗೆ ಅವರ ತಾಯಿ ಷರತ್ತೊಂದನ್ನು ಹಾಕಿದ್ದರು. ಅದೇನೆಂದರೆ ಎಂದಿಗೂ ಸ್ವಿಮ್ಮಿಂಗ್ ಸ್ಯೂಟ್ ಹಾಕುವಂತಿಲ್ಲಸ್ಲೀವ್‌ಲೆಸ್ ಧರಿಸಬಾರದು ಎನ್ನುವುದಾಗಿತ್ತು. ಅದರಂತೆಯೇ ಸರೋಜಾದೇವಿಯವರು ತಾವು ಅಭಿನಯಿಸಿದ ಯಾವ ಸಿನಿಮಾದಲ್ಲಿಯೂ ಸ್ಲೀವ್‌ಲೆಸ್ ಡ್ರೆಸ್ ಹಾಕಿಲ್ಲ.  1958ರಲ್ಲಿ ತಮಿಳಿನಲ್ಲಿ  ಬಹುಬೇಡಿಕೆ ನಟಿಯಾಗಿದ್ದ ಸರೋಜಾದೇವಿ. ಅವರಿಗೆ `ನಾಡೋಡಿ ಮಾನಾನ್..?’ ಸಿನಿಮಾ ತಮಿಳಿನಲ್ಲಿ ದೊಡ್ಡ ಹೆಸರು ತಂದುಕೊಟ್ಟಿತ್ತು.  1959ರಲ್ಲಿ `ಪಾಂಡುರಂಗ ಮಾಹಾತ್ಯಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1970ರ ವರೆಗೂ ತೆಲುಗಿನಲ್ಲಿ  ಯಶಸ್ವಿ ನಟಿಯಾಗಿದ್ದರು. 1967ರಲ್ಲಿ ಮದುವೆಯಾದ ಬಳಿಕವೂ 1974ರ ವರೆಗೂ ತಮಿಳಿನಲ್ಲಿ ಬೇಡಿಕೆಯ ಅಭಿನೇತ್ರಿಯಾಗಿದ್ದರು.  1980ರ ವರೆಗೂ ಕನ್ನಡ ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ, 1959 ರಿಂದ ಹಿಂದಿ ಸಿನಿಮಾರಂಗದಲ್ಲಿಯೂ ತನ್ನ ಛಾಪು ಮೂಡಿಸಿದ್ದರು. 161 ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸರೋಜಾದೇವಿಯವರು  ಡಾ. ರಾಜ್‌ಕುಮಾರ್ ಜೊತೆ `ಬಬ್ರುವಾಹನ’, `ಭಾಗ್ಯವಂತರು’, `ತಂದೆ ಮಕ್ಕಳು’ ಎಂಬ ಸಿನಿಮಾಗಳಲ್ಲಿ ಅವರು ನಟಿಸಿಖ್ಯಾತಿ ಪಡೆದಿದ್ದ ಮೇರು ನಟಿ ಇವರಾಗಿದ್ದರು. ಅಷ್ಟೇ ಅಲ್ಲದೇ `ಕಿತ್ತೂರು ರಾಣಿ ಚೆನ್ನಮ್ಮ’ `ಕೋಕಿಲವಾಣಿ’, `ಶ್ರೀರಾಮಪೂಜಾ’, `ರತ್ನಗಿರಿ ರಹಸ್ಯ’, `ಸ್ಕೂಲ್ ಮಾಸ್ಟರ್’, `ಭೂಕೈಲಾಸ’, `ಜಗಜ್ಯೋತಿ ಬಸವೇಶ್ವರ’, ‘ದೇವಸುಂದರಿ’ ಸಿನಿಮಾ ಜನಪ್ರಿಯವಾಗಿದ್ದವು. ಸರೋಜಾ ದೇವಿ ಅವರು ಪುನೀತ್ ರಾಜ್ ಕುಮಾರ್‌ ಅವರ ಜೊತೆಗೆ ಸಹ ನಟಿಸಿದ್ದರು. ಸರೋಜಾ ದೇವಿ ಅವರು ಪುನೀತ್ ಅವರನ್ನು ತಮ್ಮ ಮಗನಂತೆ ಕಾಣುತ್ತಿದ್ದರು. 1984ರಲ್ಲಿ `ಯಾರಿವನು’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ತೆರೆ ಹಂಚಿಕೊಂಡಿದ್ದ ನಟಿ `ನಟಸಾರ್ವಭೌಮ’ ಚಿತ್ರಗಳಲ್ಲಿ ಅವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ. `ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ’ ಎಂಬ ಹಾಡು ಇವತ್ತಿಗೂ ಫೇಮಸ್ ಆಗಿದೆ. ಆ ಹಾಡಿನ ದೃಶ್ಯ ನೋಡಿ ಸರೋಜಾ ದೇವಿ ಅವರು `ಈ ಮಗು ನನ್ನ ಮಗುವೇ ಆಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಅಂತ ಹೇಳಿದ್ದರು.


ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದ ನಟಿ: ಬಿ. ಸರೋಜಾದೇವಿಯವರು  ಕರ್ನಾಟಕ ಸರ್ಕಾರ ಕನ್ನಡದ  ಬಹುತೇಕ  ಕಲಾವಿದರಿಗೆ ರಾಷ್ಟ್ರೀಯ ಗೌರವ ಸಲ್ಲುವಂತೆ ಕ್ರಮ ಕೈಗೊಳ್ಳದೆ ಇರುವುದನ್ನು ಹಲವು ಸಂದರ್ಭಗಳಲ್ಲಿ ನೇರ ಮಾತುಗಳಲ್ಲಿ ಹೇಳಿದ್ದರು.  “ತಮಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಬಂದಿದ್ದು ತಮಿಳುನಾಡು ಸರ್ಕಾರ ಮಾಡಿದ ಶಿಫಾರಿಸ್ಸಿನಿಂದ.  ಕರ್ನಾಟಕದಲ್ಲಿ ಕೂಡ ಉತ್ತಮ ಕೆಲಸ ಮಾಡಿದವರು ಬಹಳಷ್ಟು ಉತ್ತಮ ಕಲಾವಿದರಿದ್ದಾರೆ ಅವರಿಗೆ ಕೂಡ ಗೌರವ ಸಲ್ಲಬೇಕು” ಎಂದು ಅವರು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದರು.

ವಿಶ್ವದಾಖಲೆಯ ನಟಿ: 1955-1978ರವರೆಗಿನ 23 ವರ್ಷಗಳ ಅವಧಿಯಲ್ಲಿ 154 ಚಿತ್ರಗಳಲ್ಲಿ ಮುಖ್ಯ ನಾಯಕಿಯಾಗಿ ನಟಿಸಿದ ಏಕೈಕ ಭಾರತೀಯ ಚಲನಚಿತ್ರ ನಾಯಕಿ ಸರೋಜಾ ದೇವಿ. 1955-1984ರವರೆಗೆ ಪೋಷಕ ಪಾತ್ರಗಳನ್ನು ನಿರ್ವಹಿಸದೆಯೇ 161 ಚಿತ್ರಗಳಲ್ಲಿ - ಸತತವಾಗಿ ಅತಿ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ನಟಿ ಎಂಬ ವಿಶ್ವದಾಖಲೆಯನ್ನು ಅವರು ಹೊಂದಿದ್ದಾರೆ. 1955 ರಿಂದ 2015ರ ನಡುವೆ ಅವರು ನಟಿಸಿದ 190 ಚಿತ್ರಗಳಲ್ಲಿ 165 ಬಾಕ್ಸ್ ಆಫೀಸ್ ಹಿಟ್ ಕಂಡಿದ್ದವು. ತಮ್ಮ ವೃತ್ತಿಜೀವನದ ಉದ್ದಕ್ಕೂ ಆಯಾ ಚಲನಚಿತ್ರೋದ್ಯಮದ ಬಹುಬೇಡಿಕೆಯ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಕಡೆಯ ಚಿತ್ರ: ಸರೋಜಾ ದೇವಿ ಅವರು ಕೊನೆಯದಾಗಿ ಕನ್ನಡದಲ್ಲಿ 2019ರಲ್ಲಿ ತೆರೆಕಂಡ ‘ನಟ ಸಾರ್ವಭೌಮ’ ಚಿತ್ರದಲ್ಲಿ ದಿವಂಗತ ನಟ ಡಾ. ಪುನೀತ್ ರಾಜ್‌ಕುಮಾರ್ ಜೊತೆಗೆ ನಟಿಸಿದ್ದರು. ಈ ಚಿತ್ರದಲ್ಲಿ ಅವರ ಕಿರು ಪಾತ್ರವು ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿತ್ತು

ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಜ್ಯೂರಿಯಾಗಿ:: ಬಿ. ಸರೋಜಾದೇವಿಯವರ ಅಭಿನಯದ ಮಹತ್ತಿಕೆ ಅರಿವಿದ್ದ ಕೇಂದ್ರ ಸರ್ಕಾರ ಅವರನ್ನು  45 ಹಾಗೂ 53ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ  ಜ್ಯೂರಿಯನ್ನಾಗಿಸಿತ್ತು. ಕಲಾವಿದರ ಸಂಘದ ಉಪಾಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದ ಸರೋಜಾದೇವಿ  ತಿರುಪತಿ TTDಯ ಲೋಕಲ್ ಅಡ್ವೈಸರಿ ಕಮಿಟಿಯ ಮೆಂಬರ್ ಕೂಡ ಆಗಿದ್ದರು. ಸೆನ್ಸರ್ ಬೋರ್ಡ್‌‌ನಲ್ಲೂ ಕಾರ್ಯ ನಿರ್ವಹಿಸಿಕರ್ನಾಟಕ ಫಿಲ್ಮ್ ಡೆವೆಲಪ್ಮೆಂಟ್ ಕಾರ್ಪೊರೇಷನ್‌‌ನ ಅಧ್ಯಕ್ಷೆಯಾಗಿಯೂ ಗುರ್ತಿಸಿಕೊಂಡಿದ್ದರು. ಒಳ್ಳೆಯ ಉದ್ಯಮಿಯಾಗಿಯೂ ಆಗಿದ್ದ ಈ ಅಭಿನೇತ್ರಿ ಪತಿ ಹಾಗೂ ತಾಯಿಯ ಹೆಸರಲ್ಲಿ ಹತ್ತಾರು ಸಮಾಜಿಕ ಕಾರ್ಯಗಳನ್ನ ಸಹ ಮಾಡಿದ್ದರು.

ಸರೋಜಾದೇವಿವರಿಗೆ ಒಲಿದು ಬಂದಿದ್ದ ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ಹೀಗಿದೆ-


ರಾಷ್ಟ್ರಪ್ರಶಸ್ತಿಗಳು

* 2008ರಲ್ಲಿ ಜೀವಮಾನ ಸಾಧನೆಗಾಗಿ ಭಾರತ ಸರ್ಕಾರದಿಂದ ಪ್ರಶಸ್ತಿ

* 1992ರಲ್ಲಿ ಪದ್ಮಭೂಷಣ ಪ್ರಶಸ್ತಿ

* 1969ರಲ್ಲಿ ಪದ್ಮಶ್ರೀ ಪ್ರಶಸ್ತಿ

ರಾಜ್ಯಪ್ರಶಸ್ತಿಗಳು

* 2010ರಲ್ಲಿ ಜೀವಮಾನ ಸಾಧನೆಗಾಗಿ ತಮಿಳುನಾಡು ಸರ್ಕಾರದಿಂದ ಗೌರವ

* 2009ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ರಾಜಕುಮಾರ್ ರಾಷ್ಟ್ರ ಪ್ರಶಸ್ತಿ

* 2009ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ನ್ಯಾಷನಲ್ ಪ್ರಶಸ್ತಿ

* 2001ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ನ್ಯಾಷನಲ್ ಪ್ರಶಸ್ತಿ

* 1993ರಲ್ಲಿ ತಮಿಳುನಾಡು ಸರ್ಕಾರದಿಂದ ಎಂಜಿಆರ್ ಪ್ರಶಸ್ತಿ

* 1989ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ

* 1980ರಲ್ಲಿ ಕರ್ನಾಟಕ ರಾಜ್ಯದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ

* 1969ರಲ್ಲಿ ಕುಲ ವಿಲಕ್ಕು ಸಿನಿಮಾದ ಉತ್ತಮ ನಟನೆಗಾಗಿ ಫಿಲ್ಮ್ ಅವಾರ್ಡ್

* 1965ರಲ್ಲಿ ಕರ್ನಾಟಕ ಸರ್ಕಾರದಿಂದ ಅಭಿನಯ ಸರಸ್ವತಿ ಬಿರುದು.

ಕಲೆಗಾಗಿ ಬದುಕಿ ತಮ್ಮ ಎಲ್ಲ ಕಾರ್ಯದಲ್ಲೂ ಘನತೆಸೌಂದರ್ಯಗಳನ್ನು ಮೆರೆದಿದ್ದ ಡಾ. ಬಿ.ಸರೋಜಾ ದೇವಿ ಅವರ ಕೆಲಸಸಾಧನೆಗಳು ಕನ್ನಡದ ನವ ನಟ ನಟಿಯರಿಗೆ ಮಾದರಿಯಾಗಲಿ ಎಂದು ಈ ಮೂಲಕ ಆಶಿಸೋಣ.


ಆಗಸ್ಟ್ 2025"ವಂದೇ ಕರ್ನಾಟಕ" ಪತ್ರಿಕೆಯಲ್ಲಿ ಪ್ರಕಟವಾದ ಲೇಖನ