Thursday, October 09, 2025

"ಹಲೋ ಸರ್ " ಗೆ ಸಿಕ್ಕ ಹೊಸ ನಾಯಕಿ - ಸ್ವಾತಿ ಲಿಂಗರಾಜು

ಕ ನ್ನಡ ಚಿತ್ರರಂಗಕ್ಕೆ ನಿತ್ಯವೂ ಹೊಸಬರ ಪ್ರವೇಶ ಆಗುತ್ತಲೇ ಇದೆ. ಇತ್ತೀಚೆಗಂತೂ ಹೊಸ ಪ್ರತಿಭಾವಂತ ನಟನಟಿಯರ ದಂಡೇ ಇತ್ತ ಹರಿದುಬರುತ್ತಿದೆ. ಅಂತಹವರಲ್ಲಿ ಹಲವರು ಚಿತ್ರರಂಗದ ಹಿನ್ನೆಲೆ ಇರದಂತಹ ಬೇರೆಯದೇ ಕ್ಷೇತ್ರದಲ್ಲಿ ದುಡಿದವರು ಎನ್ನುವುದು ವಿಶೇಷ.


ಸಾಫ್ಟ್‌ವೇರ್ ಟೆಕ್ಕಿಗಳು, ಮಾಡೆಲಿಂಗ್ ಕ್ಷೇತ್ರದವರು, ಖಾಸಗಿ ಬಿಸ್‌ನೆಸ್‌ ನಡೆಸುವವರು ಸಹ ಇದರಲ್ಲಿ ಇದ್ದಾರೆ. ಇವರಲ್ಲಿ ಅನೇಕರು ಚಿತ್ರರಂಗಕ್ಕೆ ಪ್ರವೇಶಿಸುವುದು ಕೇವಲ ಆಕಸ್ಮಿಕವಾಗಿ, ಸ್ವಾತಿ ಲಿಂಗರಾಜು ಸಹ ಅಂತಹವರಲ್ಲಿ ಒಬ್ಬರು. ಮೂಲತಃ ಸಾಫ್ಟ್‌ವೇರ್ ಟೆಕ್ಕಿಯಾಗಿ ನೆಟ್‌ವರ್ಕ್ ಎಂಜಿನಿಯರ್ ಆಗಿದ್ದ ಸ್ವಾತಿ ವಿಧಾನಸೌಧದಲ್ಲಿ ಸಹ ಕೆಲಸ ಮಾಡಿದ್ದಾರೆ.

ಆದರೆ ಈಗ ಆಕೆ 'ವಿಧಿ (ಆರ್ಟಿಕಲ್‌) 370' ಖ್ಯಾತಿಯ ನಿರ್ದೇಶಕ ಶಂಕರ್‌ರ ನಿರ್ದೆಶನದ 'ಹಲೋ ಸರ್' ಚಿತ್ರದ ನಾಯಕಿಯಾಗಿದ್ದಾರೆ. ಸ್ವಾತಿಯ ನಟನಾವೃತ್ತಿ ಹೇಗೆ ಪ್ರಾರಂಭವಾಗಿತ್ತು? ಅವರ ಭವಿಷ್ಯದ ಕನಸೇನು ಎನ್ನುವುದನ್ನು 'ಗೃಹಶೋಭಾ'ದ ಜೊತೆ ಹಂಚಿಕೊಂಡಿದ್ದಾರೆ. ಅವರ ಈ ಸಂದರ್ಶನದ ಸಾರಾಂಶ ಇಲ್ಲಿದೆ : 

ಆರಂಭದ ಕೆರಿಯರ್


ವಿಧಾನಸೌಧದ ಕೆಲಸದಲ್ಲಿದ್ದ ಸಮಯದಲ್ಲಿ ಸ್ವಾತಿಗೆ ಒಂದು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಒದಗಿ

ಬಂದಿತು. ಮಿಸೆಸ್ ಇಂಡಿಯಾ ಇಂಟರ್ ನ್ಯಾಷನಲ್ ಕ್ಲೀನ್-2022 ಎನ್ನುವ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ವಾತಿಗೆ, ನಟನಯೇ ತನ್ನ ವೃತ್ತಿಯಾಗಲಿದೆ ಎನ್ನುವುದರ ಬಗ್ಗೆ ಯಾವ ಸೂಚನೆಯೂ ಇರಲಿಲ್ಲ. ಆದರೆ ಉದ್ಯೋಗದಲ್ಲಿನ ಕೆಲವು ಅಡೆತಡೆಯ ಬಳಿಕ ಅವರು ನಟನೆಯತ್ತ ವಾಲಿದ್ದರು.

ಇದಕ್ಕಾಗಿ ಅವರು ಸಂತೋಷ್ ಮೈಮ್‌ರ ಬಳಿ ತರಬೇತಿ ಪಡೆದುಕೊಂಡಿದ್ದು ಚಿತ್ರವೊಂದಕ್ಕೆ ಆಯ್ಕೆಯಾದ ನಂತರವೇ ಇವರು ನಟನಾ ತರಬೇತಿ ಪಡೆಯಲು ಪ್ರಾರಂಭಿಸಿದ್ದರೆನ್ನುವುದು ಮಹತ್ವದ ಸಂಗತಿಯಾಗಿದೆ. “ನಾನು ಸಿನಿಮಾದಲ್ಲಿ ಅಭಿನಯಿಸುವುದರ ಬಗೆಗೆ ನನ್ನ ತಾಯಿ ತ೦ದೆಗೆ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಪತಿಗೆ ಇದರ ಬಗ್ಗೆ ತಿಳಿದಿದೆ. ಅವರ ಸಪೋರ್ಟ್ ನನಗೆ ಬಹಳ ಇದೆ. ಅವರ ಬೆಂಬಲದಿಂದಲೇ ನಾನು ನಟನಾ ಕ್ಷೇತ್ರಕ್ಕೆ ಬಂದಿರುವುದು,' ಎಂದು ಸ್ವಾತಿ ಹೇಳುತ್ತಾರೆ. 

ನಿರ್ದೇಶಕ ಪ್ರಸಿದ್ ಬೆಂಬಲ


 ಕಿರಣ್ ರಾಜ್‌ 'ಭರ್ಜರಿ ಗಂಡು' ಸೇರಿದಂತೆ ಮೂರು ಸಿನಿಮಾ ನಿರ್ದೇಶನ ಮಾಡಿರುವ ಪ್ರಸಿದ್ದ್ ಸ್ವಾತಿಗೆ ಆತ್ಮಸ್ಥೆರ್ಯ ತುಂಬಿದ್ದರು. ಸ್ವಾತಿ ಇದುವರೆಗೆ 'ತಾಯವ್ವ, ಶೇರ್‌,' ಎನ್ನುವ ಸಿನಿಮಾಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಸ್ವಾತಿ ತೆಲುಗು ಸಿನಿಮಾವೊಂದರಲ್ಲಿ ಸಹ ಅಭಿನಯಿಸುತ್ತಿದ್ದಾರೆ.

ಸ್ವಾತಿ ಚಿತ್ರರಂಗದ ಜೊತೆಗೆ ಒಬ್ಬ ಉದ್ಯಮಿಯೂ ಹೌದು. ಅವರದೇ ಸ್ವಂತ ಸಂಸ್ಥೆಯೊಂದನ್ನು ನಡೆಸುತ್ತಿರುವ ಇವರು ಆ ಸಂಸ್ಥೆಯ ಮೂಲಕ ಕಸ್ಟಮೈಸ್ ಕಾಟನ್ ಕ್ಲಾತಿಂಗ್ ಪೂರೈಸುತ್ತಿದ್ದಾರೆ. ಅದು ಲೋಗೋ ಮತ್ತು ಬೇರೆ ಬೇರೆ ವೈವಿಧ್ಯಮಯ ಡಿಸೈನ್‌ಗಳನ್ನು ಹೊಂದಿರುತ್ತದೆ. 

ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದ ಕುರಿತು ವಿವರಿಸಿರುವ ನಟಿ, “ನಾನು ಆನ್‌ಲೈನ್ ಆಡಿಷನ್ ತೆಗೆದುಕೊಂಡು ಸ್ಪರ್ಧೆಗೆ ಆಯ್ಕೆಯಾಗಿದ್ದೆ. ಆ ಸ್ಪರ್ಧೆಗಾಗಿ ನಾನು ಮೂರು ತಿಂಗಳ ಕಾಲ ತಯಾರಿ ನಡೆಸಿದ್ದೆ. ಅದರಲ್ಲಿ ಡ್ಯಾನ್ಸ್ ತರಬೇತಿ ಸಹ ಒಳಗೊಂಡಿತ್ತು, ಈ ಸ್ಪರ್ಧೆಯಲ್ಲಿ ನನಗೆ ಮಿಸೆಸ್ ಇಂಡಿಯಾ ಅಲ್ಲುರಿಂಗ್ ಎನ್ನುವ ಟೈಟಲ್ ಬಂದಿದೆ. ನಾಲ್ಕು ಸುತ್ತಿನ ಸ್ಪರ್ಧೆ ಇದಾಗಿದ್ದು, ಅದರಲ್ಲಿ ನನ್ನ ಪರಿಚಯ, ಬೌದ್ಧಿಕ ಸಾಮರ್ಥ್ಯ, ಆಂಗಿಕ ಅಭಿನಯ ಸೇರಿ ನಾನಾ ರೀತಿಯ ಪರೀಕ್ಷೆಗಳಿದ್ದವು,” ಎಂದು ಅವರು ವಿವರಿಸಿದ್ದಾರೆ. 

ಸ್ಟಿಕ್ಸ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು ಸ್ವಾತಿ ಅವರ ಮನದಾಳದ ಆಸೆಯಾಗಿದೆ. ಮೃದು ಸ್ವಭಾವ ಅವರ ಸಹಜ ಗುಣವಾಗಿದ್ದು, ಅದಕ್ಕೆ ವಿರುದ್ಧ ವಾಗಿ ತೆರೆಯಲ್ಲಿ ಪಾತ್ರ ಮಾಡಬೇಕೆನ್ನುವುದು ಅವರ ಕನಸು. ಅಲ್ಲದೆ, ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್‌ರನ್ನು ಇಷ್ಟದ ನಟ ಎನ್ನುವ ಸ್ವಾತಿ, ತೆಲುಗಿನಲ್ಲಿ ಅಲ್ಲು ಅರ್ಜುನ್‌ರನ್ನು ಮೆಚ್ಚುತ್ತಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ಅವರಿಷ್ಟದ ನಟ.

ಒಂದು ವೇಳೆ ಚಿತ್ರರಂಗದಲ್ಲಿ ವಿಜಯ್ ಸೇತುಪತಿಯನ್ನು ಭೇಟಿಯಾಗಿದ್ದೇ ಆದರೆ, ಅವರು, ತಮ್ಮನ್ನು ಕೇವಲ ಅವರ ಅಭಿಮಾನಿ

ಎಂದು ನೋಡದೆಯೇ, ತಮ್ಮಂತೆಯೇ ಒಬ ನಟಿ, ಅಭಿನೇತ್ರಿ ಎಂದು ಗುರುತಿಸಬೇಕು ಎನ್ನುವುದು ಸ್ವಾತಿ ಅವರ ಗುರಿಯಾಗಿದೆ. ಅದಕ್ಕಾಗಿ ನಾನು ಸಹ ಸೆಲೆಬ್ರಿಟಿ ಆಗಬೇಕು ಎನ್ನುವುದಾಗಿ ಹೇಳುತ್ತಾರೆ.

ಪೊಲೀಸ್‌ ಪಾತ್ರದ ಕುರಿತು ಹೇಳುವುದಾದರೆ ಮಾಲಾಶ್ರೀ ಪಾತ್ರ ನನಗೆ ಬಹಳ ಇಂಪ್ರೆಸ್ ಆಗಿದೆ ಎನ್ನುತ್ತಾರೆ. ನಿರ್ದೇಶಕ ಶಂಕರ್ 'ಹಲೋ ಸಾರ್' ಚಿತ್ರದಲ್ಲಿ ಅವಕಾಶ ನೀಡಿ ನನಗೆ ಮಾರ್ಗದರ್ಶನ ನೀಡಿದ್ದನ್ನು ಮರೆಯಲಾರೆ ಎಂದವರು ಹೇಳಿಕೊಂಡರು.

ಕೌಟುಂಬಿಕ ಸಾಮರಸ್ಯ

ಕುಟುಂಬ ಹಾಗೂ ನಟನೆಯ ಕುರಿತು ಹೇಳುವ ಸ್ವಾತಿ, ಪತಿ ತುಂಬಾ ಬೆಂಬಲ ನೀಡುವರು ಎನ್ನುತ್ತಾರೆ. ತಮ್ಮ ಬಾಲ್ಯದ ದಿನಗಳ ಬಗ್ಗೆ ಹೇಳುವ ಸ್ವಾತಿ, ತಾವು ಪಾಂಡವಪುರದಲ್ಲಿದ್ದ ಸಮಯದಲ್ಲಿ ಹೆಚ್ಚು ಸಿನಿಮಾ ನೋಡಿದವರಲ್ಲ, ಸಿನಿಮಾ ಆಸಕ್ತಿಯೂ ಇರಲಿಲ್ಲ ಎನ್ನುತ್ತಾರೆ. 'ಯಜಮಾನ, ದಿಗ್ಗಜರು,' ಸೇರಿ ಕೆಲವೇ ಬೆರಳೆಣಿಕೆಯ ಚಿತ್ರಗಳನ್ನು ಸಿನಿಮಾ ಮಂದಿರದಲ್ಲಿ ವೀಕ್ಷಿಸಿದ್ದರು. ಇನ್ನು ಸ್ವಾತಿಗೆ ಅಡುಗೆ ಮಾಡುವುದೆಂದರೆ ಅಚ್ಚುಮೆಚ್ಚು. ಅವರು ಮಾಡುವ ನಾನ್ ವೆಜ್ ಅಡುಗೆಯನ್ನು ಮನೆಯವರೆಲ್ಲಾ ಮೆಚ್ಚುತ್ತಾರಂತೆ. ಅಲ್ಲದೆ, ಬಿಡುಗವಾಗಿದ್ದಾಗಲೆಲ್ಲಾ ಶಾಪಿಂಗ್ ಮಾಡುವುದು ಅವರ ಹವ್ಯಾಸ.

ಸಿನಿ ಅಭಿಮಾನಿಗಳೆಲ್ಲಾ ಸಿನಿಮಾ ಮಂದಿರಕ್ಕೆ ತೆರಳಿ ಸಿನಿಮಾ ನೋಡಬೇಕು ಎನ್ನುವುದು ಸ್ವಾತಿಯ ಸಲಹೆ. ಚಿತ್ರಮಂದಿರದಲ್ಲಿ ಸೌಂಡ್ ಎಫೆಕ್ಟ್, ದೃಶ್ಯದ ಕ್ವಾಲಿಟಿ ಸೇರಿ ಎಲ್ಲ ರೀತಿ ರಿಯಲ್ ಎಕ್ಸ್‌ಪೀರಿಯನ್ಸ್ ಆಗಬೇಕೆಂದರೆ ಚಿತ್ರ ಮಂದಿರದಲ್ಲೇ ಸಿನಿಮಾ ವೀಕ್ಷಿಸಬೇಕು ಎನ್ನುವುದು ಸ್ವಾತಿಯ ಅಭಿಪ್ರಾಯ.

ಗೃಹ ಶೋಭಾ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ (ಮಾರ್ಚ್ 2025)

“ನೀ ನಂಗೆ ಅಲ್ಲವಾ' ಚಿತ್ರದ ನಾಯಕಿಯಾದ ಕಾಶಿಮಾ

ಕನ್ನಡ, ತಮಿಳು, ತೆಲುಗು ಸೇರಿ ಬಹು ಭಾಷಾ್ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಕಾಶಿಮಾ ರಫಿ ಈಗ ಕನ್ನಡದ ಮತ್ತೊಂದು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲು ಸಿದ್ಧ ವಾಗಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಅಪ್ಪಟ ಕನ್ನಡ ಪ್ರತಿಭೆ ಕಾಶಿಮಾ “ನೀ ನಂಗೆ ಅಲ್ಲವಾ'  ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ವಿದ್ಯಾ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದರೆ, `ಮ್ಯಾಟೆ' ಚಿತ್ರದ ಖ್ಯಾತಿ ನಿರ್ಮಾನಕರಾದ ಎಸ್‌. ಪಾರ್ವತಿ ಗೌಡ, ಪವನ್ ಪರಚುತಿದ್ದು ಹಾಗೂ ಮನೋಹರ್ ಕಾಂಪಲ್ಲಿ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಮನೋಜ್ ಪಿ ನಡಲುಮನೆ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. 


ಕಾಶಿಮಾ ರವಿ ಇದಕ್ಕೆ ಮುನ್ನ 'ಸೌತ್ ಇಂಡಿಯನ್ ಹೀರೋ" ಸಿನಿಮಾ ಮೂಲಕ  ಕನ್ನಡ ಚಿತ್ರೋದ್ಯಮದಲ್ಲಿ ಮಿಂಚಿದ್ದರು. ಅಲ್ಲದೆ, ಟೆಂರ್, ಕಸ್ತೂರಿ ಮಹರ್ 'ನಲ್ಲಿ ಸಹ ಕಾಣಿಸಿಕೊಂಡಿದ್ದರು.

ಕಾಶಿಮಾರ ತಂದೆ ರಫಿ ನಿರ್ಮಾಣ ಮತ್ತು ಗುತ್ತಿಗೆ ಕ್ಷೇತ್ರದ ಉದ್ಯಮಿಯಾಗಿದ್ದು ಕಾಶಿಮಾ ತಾವು ಮಾಡೆಲಿಂಗ್‌ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಬಂದವರು, ಅವರು ಈ ಮುನ್ನ ಮಿಸ್ ಬೆಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. ಗಾಡ್ರಿನ್ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರಿನ ಸಿಂಧಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಕಾಶಿಮಾ 'ಕಳಾಪುರಂ' ಎನ್ನುವ ತೆಲುಗು ಸಿನಿಮಾದಲ್ಲಿ ಹಾಗೂ 'ಕಾದಂಬರಿ' ಎನ್ನುವ ತಮಿಳು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ.


'ನೀ ನಂಗೆ ಅಲ್ಲವಾ' ಚಿತ್ರದ ಮೂಲಕ ರಾಹುಲ್‌ ಆರ್ಕಾಟ್ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರತಂಡ, ಈಗ ಚಿತ್ರದ ನಾಯಕಿಯ ಬಗ್ಗೆ ಮಾಹಿತಿ ನೀಡಿದೆ. ಬೆಡಗಿ ಕಾಶಿಮಾ 'ನೀ ನಂಗೆ ಅಲ್ಲವಾ' ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಕಾಶಿಮಾರಿಗೆ ಚಿತ್ರತಂದ ಸ್ವಾಗತ  ಹೇಳಿದೆ.

ಗೃಹ ಶೋಭಾ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ  (ಫೆಬ್ರವರಿ 2025)

ಸ್ಯಾಂಡಲ್ ವುಡ್‌ಗೊಂದು ಅಪ್ಪಟ ಹೊಸ ಪ್ರತಿಭೆ - ಪ್ರಕೃತಿ ಸೌಂದರ್ಯಾ

ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಕಷ್ಟು ಪ್ರತಿಭೆಗಳ ಆಗಮನವಾಗುತ್ತಿದೆ. ಹಾಗೆ ಬಂದವರಲ್ಲಿ ಸರಳ ಸೌಂದರ್ಯವತಿಯಾದ ಪ್ರಕೃತಿ ಸೌಂದರ್ಯಾ ಕೂಡ ಒಬ್ಬರು. ದುನಿಯಾ ವಿಜಯ್‌ ನಿರ್ದೇಶನದ 'ಭೀಮ' ಚಿತ್ರದಲ್ಲಿ ಡ್ರಾಗನ್ ಮಂಜು ಪತ್ನಿಯಾಗಿ 'ರಗಡ್' ಅವತಾರದಲ್ಲಿ ಕಾಣಿಸಿಕೊಂಡಿದ್ದ ಇವರ ಪಾತ್ರ ಎಲ್ಲರ ಗಮನ ಸೆಳೆದಿತ್ತು.


ಮೂಲತಃ ತುಮಕೂರಿನವರಾದ ಪ್ರಕೃತಿ ಸೌಂದರ್ಯಾ ಚಿಕ್ಕಂದಿನಿಂದಲೇ ಕಲೆಯ ನಂಟು ಇದು ಇವರ ತಾತಾ ಕೂಡ ಬೆಳೆಸಿಕೊಂಡವರು. ರಂಗಭೂಮಿ ಕಲಾವಿದರಾಗಿ ಅನೇಕ

ನಾಟಕಗಳಲ್ಲಿ ಅಭಿನಯಿಸಿದ್ದರು. ಕಾಲೇಜು ದಿನಗಳಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ ಪ್ರಕೃತಿ ಸೌಂದರ್ಯಾಗೆ ಸ್ನೇಹಿತರೆಲ್ಲ ನೀನು ಚೆನ್ನಾಗಿದ್ದೀಯ, ಹಾಡುವುದಕ್ಕಿಂತ ಆ್ಯಕ್ಸಿಂಗ್ ಮಾಡಿದರೆ ಚೆನ್ನಾಗಿರುತ್ತೆ ಎಂದು ಸಲಹೆ ನೀಡಿದರಂತೆ. ಆ ಮಾತನ್ನೇ ಆಳವಾಗಿ ತೆಗೆದುಕೊಂಡ ಪ್ರಕೃತಿ ನಾನು ಕಲಾವಿದೆಯಾಗಿ ಬೆಳೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ.

ನಂತರ ಸ್ನೇಹಿತರೊಬ್ಬರ ಸಹಾಯದಿಂದ ಕಿರುತೆರೆಯ 'ಗೀತಾ' ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಆನಂತರ ಸಿಕ್ಕ ದೊಡ್ಡ ಅವಕಾಶವೇ 'ಕನ್ಯಾದಾನ',


ಈ ಸೀರಿಯಲ್‌ನ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡ ಪ್ರಕೃತಿ ಸೌಂದರ್ಯಾರ ಪಾತ್ರ, ಅಭಿನಯ ಎಲ್ಲರ ಗಮನ ಸೆಳೆಯಿತು. ಆದಾದ ನಂತರ ದುನಿಯಾ ವಿಜಯ್, ತಮ್ಮ 'ಭೀಮ' ಚಿತ್ರದ ಪ್ರಮುಖ ಪ್ರಮುಖ ಪಾತ್ರಕ್ಕೆ ಇವರೇ ಸೂಕ್ತ ಎಂದು ಆಯ್ಕೆ ಮಾಡಿಕೊಳ್ಳದ ಪಾತ ಮಾಡಿಕೊಂಡಿದ್ದಾರೆ. `ಭೀಮ' ಚಿತ್ರದ ಪಾತ್ರ ನೋಡಿ. ತೆಲುಗು ಚಿತ್ರರಂಗದ ಕಡೆಯಿಂದಲೂ ಇವರಿಗೆ ಹಲವಾರು ಆಫರ್‌ಗಳು ಬರುತ್ತಿವೆ! ಕಾರು ಆಯಲ್‌ ಒಂದರಲ್ಲಿ ಈಗಾಗಲೇ ತೆಲುಗು ಸೀರಿಯಲ್ ಕೂಡ ಪ್ರಕೃತಿ ಸೌಂದರ್ಯಾ ಅಭಿನಯಿಸಿದ್ದಾರೆ. ಸದ್ಯ ಕನ್ನಡದ ಬಿಗ್ ಪ್ರಾಜೆಕ್ಟ್ ವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದು, ಅದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಹೇಳಿದ ಪ್ರಕೃತಿ ಸೌಂದರ್ಯಾರಿಗೆ, ಜನರು ಗುರುತಿಸುವಂಥ ಹಾಗೂ ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರಗಳಲ್ಲಿ ತಾನು ಕಾಣಿಸಿಕೊಳ್ಳಬೇಕೆ೦ಬ ಕನಸಿದೆ. ಇತ್ತೀಚೆಗಷ್ಟೇ ಆತ್ಮೀಯರ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕೃತಿ ಸೌಂದರ್ಯಾಗೆ, ಇದೇ ಸಂದರ್ಭದಲ್ಲಿ ಹೊಸ ಹೊಸ ಚಿತ್ರಗಳ ಆಫರ್ ಬರುತ್ತಿರುವುದು ಅವರಿಗೆ ಡಬಲ್ ಖುಷಿ ನೀಡಿದೆ. ಗೃಹಶೋಭಾ ಓದುಗರೆಲ್ಲರ ಪರವಾಗಿ ಪ್ರಕೃತಿ ಸೌಂದರ್ಯಾರಿಗೆ ಆಲ್‌ ದಿ ಬೆಸ್ಟ್‌!

ಗೃಹ ಶೋಭಾ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ  (ಜನವರಿ 2025)

Monday, September 22, 2025

ಇದು ನಿಮ್ಮ ವಾಹಿನಿ ಕಲಾ ವೇದಿಕೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ, 18ನೇ ಸಾಂಸ್ಕೃತಿಕ ಸಿಂಚನ

 ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ  ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ, ಪ್ರಯುಕ್ತ18ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ  ಅದ್ದೂರಿಯಾಗಿ ನಡೆಯಿತು. 



ಕಳೆದ ಐದು ವರ್ಷಗಳಿಂದ ಇದು ನಿಮ್ಮ ವಾಹಿನಿ ಕಲಾ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಲೆಮರೆಯ ಕಾಯಿಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಬಾರಿಯ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಉಪ ಕೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಉದ್ಘಾಟಿಸಿದರು. ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾದ ಗಂಡಸಿ ಸದಾನಂದ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪ ಪೋಲೀಸ್ ಆಯುಕ್ತರಾದ (ಡಿಜಿಪಿ) ಡಾ. ಮಂಜುನಾಥ್ ಬಾಬು, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಗರ್ ನವಿಲೆ, ಜೂನಿಯರ್ ಅಪ್ಪು ಖ್ಯಾತಿಯ ಮೂಡಲಗಿ, ಕೆ,ಜಿ.ಎಫ್. ಖ್ಯಾತಿಯ ನಟ ಅನ್ಮೋಲ್ ವಿಜಯಭಟ್ಕಳ್, ಭೈರವಿ ನಾಟ್ಯ ಕಲಾರೂಪಸಂಸ್ಥೆಯ ಸಂಸ್ಥಾಪಕಿ ರೂಪ ಹೃಷಿಕೇಶ್ ಮತ್ತು ಸುಹಾಲಯ ಟ್ರಾವೆಲ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ವೀರಭದ್ರಸ್ವಾಮಿ ಮೊದಲಾದವರು ಭಾಗವಹಿಸಿದ್ದರು.



ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (ರಿ)ವತಿಯಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಹನ್ನೆರಡು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ  ಪುರಸ್ಕರಿಸಲಾಯಿತು. 



ಕಾರ್ಯಕ್ರಮದ ಸಾಂಸ್ಕೃತಿಕ ಸಂಜೆಯಲ್ಲಿ ಹಲವಾರು ಸಂಘ ಸಂಸ್ಥೆಯ ಗಾಯಕರು, ಕಲಾವಿದರು ಸಂಗೀತ ಹಾಗೂ ವೈವಿದ್ಯಮಯ ನೃತ್ಯ ಪ್ರದರ್ಶನವನ್ನು ನೀಡಿದರು. 


ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಭಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 



ಮೂರನೇ ವಿಶ್ವ ಕನ್ನಡ ಹಬ್ಬ ಸಂಚಾಲಕರಾದ ವಿಕಾಸ್,  ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಕೆ.ಎಸ್.  ಹಾಗೂ ಪ್ರಧಾನ ಕಾರ್ಯದರ್ಶಿಗಳು ಈ ಸಂದರ್ಭ ಹಾಜರಿದ್ದರು

Saturday, September 20, 2025

ಶ್ವೇತಾಶ್ವತರೋಪನಿಷತ್ತಿನಲ್ಲಿ ಆತ್ಮದ ಗಾತ್ರದ ವಿವರಣೆ!



ನಮ್ಮಲ್ಲಿ ಯಾರೂ ತಮ್ಮ ದೇಹದಲ್ಲಿರುವ ಆತ್ಮವನ್ನು ಬರಿಗಣ್ಣಿನಿಂದ ನೋಡಿಲ್ಲ. ಶ್ವೇತಾಶ್ವತರೋಪನಿಷತ್ತಿನಲ್ಲ ಆತ್ಮದ ನಿಜವಾದ ಆಯಾಮ ಅಥವಾ ಗಾತ್ರವನ್ನು ವಿವರಿಸಲಾಗಿದೆ.

ಶ್ವೇತಾಶ್ವತರೋಪನಿಷತ್ತು ಕೃಷ್ಣ ಯಜುರ್ವೇದಕ್ಕೆ ಸಂಬಂಧಿಸಿದೆ ಮತ್ತು 6 ಅಧ್ಯಾಯಗಳಲ್ಲಿ 113 ಮಂತ್ರಗಳನ್ನು ಒಳಗೊಂಡಿದೆ. ಇದನ್ನು ಸಾ.ಶ.ಪೂ. 4 ನೇ ಶತಮಾನದ ಸುಮಾರಿಗೆ ರಚಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಈ ಉಪನಿಷತ್ತಿನ ಹೆಚ್ಚಿನ ಭಾಗವು ಶ್ವೇತಾಶ್ವತರ ಋಷಿಗಳಿಗೆ (ಶ್ವೇತಾಶ್ವತರ ಅಂದರೆ ಬಿಳಿ ಹೇಸರಗತ್ತೆಯ ಸೃಷ್ಟಿಸಿದವನು) ಸೇರಿದೆ.. ಇದರ ಇತರ ವ್ಯಾಖ್ಯಾನಕಾರರು ಆದಿ ಶಂಕರಾಚಾರ್ಯ, ವಿಜ್ಞಾನಾತ್ಮ, ಶಂಕರಾನಂದ ಮತ್ತು ನಾರಾಯಣ ತೀರ್ಥರು. ಶ್ವೇತಾಶ್ವತರೋಪನಿಷತ್ತು ಶೈವಧರ್ಮದ ವ್ಯವಸ್ಥಿತ ತತ್ತ್ವಶಾಸ್ತ್ರದ ಅತ್ಯಂತ ಆರಂಭಿಕ ಪಠ್ಯ ವಿವರಣೆಯಾಗಿದ್ದು, ಮೊದಲ ಬಾರಿಗೆ ರುದ್ರನನ್ನು ಈಶ (ಭಗವಂತ)ನ ಸ್ಥಾನಮಾನಕ್ಕೆ ಏರಿಸಿದೆ, ಇದೇ ನಂತರ ಶಿವನಾಗಿ ರೂಪುತಳೆದ ವಿಶ್ವವಿಜ್ಞಾನದ ಕಾರ್ಯಗಳನ್ನು ನಡೆಸುವ ದೇವರಾಗಿ ಬದಲಾಗಿದೆ.

ಬಾಲಗ್ರ ಸತಾ ಭಾಗಸ್ಯ ಶತಧಾ ಕಲ್ಪಿತಸ್ಯ ಚ ಭಾಗೋ ಜೀವಃ ಸ ವಿಜ್ಞೇಯಃ ಸ ಕಾನಂತ್ಯಾಯ ಕಲ್ಪತೇ || ಶ್ವೇತಾಶ್ವತರ ಉಪನಿಷದ್ (5.9)

ಎಂದರೆ - ಒಂದು ಕೂದಲನ್ನು ನೂರು ಭಾಗಗಳಾಗಿ ವಿಂಗಡಿಸಿ, ಮತ್ತೆ ಅಂತಹ ಪ್ರತಿಯೊಂದು ಭಾಗವು ನೂರು ಭಾಗಗಳಾಗಿ ವಿಂಗಡಿಸಲ್ಪಟ್ಟಾಗ, ಅಂತಹ ಪ್ರತಿಯೊಂದು ಭಾಗವು ಆತ್ಮದ ಗಾತ್ರವಾಗಿದೆ.

ಇದೇ ರೀತಿಯ ವಿವರಣೆಯನ್ನು ಸ್ವಾಮಿ ಪ್ರಭುಪಾದರು ಚೈತನ್ಯ ಚರಿತಾಮೃತದಲ್ಲಿ ಮಾಡಿದ್ದಾರೆ. ಅವರು ಹೇಳಿದಂತೆ - "ಒಂದು ಕೂದಲಿನ ತುದಿಯನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಬೇಕು ಮತ್ತು ಅಂತಹ ಒಂದು ಭಾಗವು ಚಿತ್-ಕಣ (ಚೇತನದ ಕಣ). ಅಂದರೆ, ಆತ್ಮದ ಪ್ರತ್ಯೇಕ ಕಣವು ಭೌತಿಕ ಪರಮಾಣುಗಳಿಗಿಂತ ಚಿಕ್ಕದಾದ ಆಧ್ಯಾತ್ಮಿಕ ಪರಮಾಣುವಾಗಿದೆ ಮತ್ತು ಅಂತಹ ಪರಮಾಣುಗಳು ಅಸಂಖ್ಯಾತವಾಗಿವೆ."

ಭಗವದ್ಗೀತೆಯೂ ಆತ್ಮದ ಗಾತ್ರವನ್ನು ಉಲ್ಲೇಖಿಸುತ್ತದೆ.

ಆತ್ಮವು ಅವಿನಾಶಿಯಾಗಿದ್ದು ಅದನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ ಎಂದು ಅದು ಹೇಳುತ್ತದೆ. "ಇಡೀ ದೇಹವನ್ನು ವ್ಯಾಪಿಸಿರುವ ವಸ್ತು(ಆತ್ಮ)ವು ಅವಿನಾಶಿ ಎಂದು ನೀವು ತಿಳಿಯಿರಿ. ಆ ಅವಿನಾಶಿ ಆತ್ಮವನ್ನು ಯಾರೂ ನಾಶಮಾಡಲು ಸಾಧ್ಯವಿಲ್ಲ." - ಭಗವದ್ಗೀತೆ 2.17

ಮುಂಡಕೋಪನಿಷತ್ತು ಮಾನವ ದೇಹದಲ್ಲಿ ಆತ್ಮವು ವಾಸಿಸುವ ಸ್ಥಳವನ್ನು ಮತ್ತಷ್ಟು ವಿವರಿಸುತ್ತದೆ. "ಆತ್ಮವು ಪರಮಾಣು ಗಾತ್ರದ್ದಾಗಿದೆ ಮತ್ತು ಪರಿಪೂರ್ಣ ಬುದ್ಧಿಶಕ್ತಿಯಿಂದ ಅದನ್ನು ಗ್ರಹಿಸಬಹುದು. ಈ ಪರಮಾಣು ಆತ್ಮವು ಐದು ವಿಧದ ಗಾಳಿಯಲ್ಲಿ (ಪ್ರಾಣ, ಅಪಾನ, ವ್ಯಾನ, ಸಮಾನ ಮತ್ತು ಉದಾನ) ತೇಲುತ್ತದೆ, ಹೃದಯದೊಳಗೆ ನೆಲೆಗೊಂಡಿದೆ ಮತ್ತು ಸಾಕಾರಗೊಂಡ ಜೀವಿಗಳ ದೇಹದಾದ್ಯಂತ ತನ್ನ ಪ್ರಭಾವವನ್ನು ಹರಡುತ್ತದೆ. ಐದು ವಿಧದ ಭೌತಿಕ ಗಾಳಿಯ ಮಾಲಿನ್ಯದಿಂದ ಕೂಡಿದ ಆತ್ಮವು ಶುದ್ಧವಾದಾಗ, ಅದರ ಆಧ್ಯಾತ್ಮಿಕ ಪ್ರಭಾವವು ಪ್ರದರ್ಶಿಸಲ್ಪಡುತ್ತದೆ." - ಮುಂಡಕ ಉಪನಿಷತ್ (3.1.9)

ನಾವು ಎಚ್ಚರವಾಗಿರುವಾಗ, ನಿದ್ರಿಸುವಾಗ ಮತ್ತು ಕನಸು ಕಾಣುವಾಗ ಪ್ರಾಣ (ಜೀವ) ಕಣ್ಣು, ಹೃದಯ ಮತ್ತು ಗಂಟಲಿನ ನಡುವೆ ಚಲಿಸುತ್ತದೆ ( 3 ಮನಸ್ಸಿನ ಸ್ಥಿತಿಗಳನ್ನು ತ್ರಿ-ಪುರಗಳು ಎಂದು ವಿವರಿಸಲಾದ


.

Monday, September 08, 2025

ಮಸ್ಕತ್ ನಲ್ಲಿ ಮೂರನೇ ವಿಶ್ವಕನ್ನಡ ಹಬ್ಬ: ಬಿತ್ತಿಪತ್ರ ಬಿಡುಗಡೆ

ಮಸ್ಕತ್ ನಲ್ಲಿ ನಡೆಯಲಿರುವ ಮೂರನೇ ವಿಶ್ವ ಕನ್ನಡ ಹಬ್ಬವನ್ನು ನವೆಂಬರ್ 28 ರಂದು ಆಯೋಜಿಸಲಾಗಿದ್ದು,  ಕಾರ್ಯಕ್ರಮದ ಬಿತ್ತಿಪತ್ರ ಬಿಡುಗಡೆ ಸಮಾರಂಭವನ್ನು ಹೆಚ್. ಎಸ್. ಆರ್. ಲೇಔಟ್ ನಲ್ಲಿರುವ ಸಮರ್ಥನಂ ಟ್ರಸ್ಟ್ ನಲ್ಲಿ  ಲೋಕಾರ್ಪಣೆಗೊಂಡಿತು.


 ಇಲ್ಲಿನ ಸಮರ್ಥನಂ ಟ್ರಸ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮೂರನೇ ವಿಶ್ವಕನ್ನಡ ಹಬ್ಬದ ಪದಾಧಿಕಾರಿಗಳ ಜೊತೆಯಲ್ಲಿ ಶಾರದಾ ಹಾಗೂ ಶ್ರಾವ್ಯ ರವರು ಪಲ್ಲಕ್ಕಿಯಲ್ಲಿ ಭೀತಿ ಪತ್ರವನ್ನು ವೇದಿಕೆಗೆ ತಂದು ಗಣ್ಯಾಧಿ ಗಣ್ಯರು ಬಿಡುಗಡೆಯನ್ನು ಮಾಡಿದರು. ಇದೇ ವೇಳೆ ಪಿ,ಎಸ್,  ರಂಗನಾಥ್ ಸಂಪಾದಿಸಿರುವ  'ಬಿಯಾಂಡ್ ದಿ ಹರಿಜಾನ್' ( ಇಂಡಿಯನ್ ವಾಯ್ಸಸ್ ಫ್ರಮ್ ಒಮಾನ್) ಪುಸ್ತಕವನ್ನು ಜನಾರ್ಪಣೆಗೊಳಿಸಿದರು.

 ಈ ಸಂದರ್ಭದಲ್ಲಿ ಮೂರನೇ ವಿಶ್ವಕನ್ನಡ ಹಬ್ಬದ ಪ್ರಧಾನ  ಕಾರ್ಯದರ್ಶಿಯನ್ನಾಗಿ ಚೈತ್ರಾ ಕೆ. ಎಸ್. ಹಾರೋಬೆನವಳ್ಳಿ,  ನೃತ್ಯಕ್ಕೆ ಸಹನಾ, ಗಾಯನಕ್ಕೆ ಚೇತನ್ ನಾಯ್ಕ್ ರವರನ್ನು ಆದೇಶ ಪತ್ರ  ವಿತರಿಸಿದರು  ಅಭಿನಂದಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸೋಮಣ್ಣ ಬೇವಿನಮರದ ಅವರು ಕನ್ನಡದ ಸಂಸ್ಕೃತಿ ಉಳಿಸಲು ಬೆಳೆಸಲು ನಮ್ಮ ಬೆಂಬಲ ಯಾವಾಗಲೂ ಇದ್ದೆ ಇರುತ್ತದೆ  ಎಂದು ತಿಳಿಸಿದರು.

 ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಮಾತನಾಡಿ ಕನ್ನಡದ ಕಾರ್ಯಕ್ರಮಗಳು ನಮ್ಮ ಜೀವಾಳ, ನಾಡಿನ ನೆಲ ಜಲ ಸಾಂಸ್ಕೃತಿಕತೆಗಾಗಿ ಸಾಕಷ್ಟು ಹಿರಿಯರು ಹೋರಾಟ ಮಾಡಿದ್ದಾರೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ರೀತಿಯಲ್ಲಿ ನಾವು ಕನ್ನಡವನ್ನು ರಕ್ಷಿಸಿದರೆ ಕನ್ನಡದಿಂದ ನಾವು ರಕ್ಷಿಸಲ್ಪಡುತ್ತೇವೆ ಎಂದು ತಿಳಿಸಿದರು.


 ಮಾಜಿ ಕೇಂದ್ರ ಸಚಿವ ಭಗವಂತ ಖೂಬ ರವರು ಮಾತನಾಡಿ ವಿಶ್ವದಾದ್ಯಂತ ಕನ್ನಡಿಗರು ನೆಲೆಸಿದ್ದಾರೆ ಯಾವುದೇ ಸಮುದಾಯ ಅತ್ಯುನ್ನತ ಸ್ಥಾನಕ್ಕೆ ಇರಬೇಕಾದರೆ ಅದರ ಸಂಸ್ಕೃತಿ ತಳಪಾಯ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಕನ್ನಡ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಹರಡೋಣ ವಿದೇಶದಲ್ಲಿರುವ ಕನ್ನಡಿಗರಲ್ಲಿ ಕನ್ನಡದ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಹೆಜ್ಜೆ ಹೆಜ್ಜೆಗೂ ಅಲ್ಲಿ ಕನ್ನಡಿಗರ ಪ್ರೀತಿ ಸಹಕಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಲ್ಲಿ ಕನ್ನಡದ ಹಬ್ಬ ನಡೆಯಲಿದೆ ಎಂದು  ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ರವರು ಕಣ್ಣಿಲ್ಲದವರು ಸೇರಿ ಅಂಗವಿಕಲರಿಗೆ ಬೆಳಕಾಗಿರುವ ಸಮರ್ಥನಂ ಸಂಸ್ಥೆಯ ಮಹಾಂತೇಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗುವಂತಾಗಲು ಪಕ್ಷಾತೀತವಾಗಿ ರಾಜಕಾರಣಿಗಳು ಪ್ರಯತ್ನ ಮಾಡಬೇಕು ಎಂದು ಅಗ್ರಹಿಸಿದರು.

 ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಮಹಂತೇಶ್ ಕಿವಡಸಣ್ಣವರ್ ದೇಶ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸೇರಿ ಮಸ್ಕತ್ ನಲ್ಲಿ ನಡೆಯಲಿರುವ ಮೂರನೇ ವಿಶ್ವಕನ್ನಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದೀವಿ, ಕನ್ನಡದವನ್ನು ಉಳಿಸಿಕೊಳ್ಳಲು ಬೆಳೆಸಲು ಇಂತಹ ಕಾರ್ಯ ಹೆಜ್ಜೆ  ಹೆಜ್ಜೆಯೂ ಸಹಕಾರಿಯಾಗುತ್ತದೆ ಎಂದು ಹೇಳಿದರು.

 ಕಾರ್ಯಕ್ರಮದ ರೂವಾರಿ ಟಿ ಶಿವಕುಮಾರ್ ನಾಗರನವಿಲೆ ಮಾತನಾಡಿ ದುಬೈ, ಸಿಂಗಾಪುರ್ ಬಳಿಕ ವಿಶ್ವಕನ್ನಡ ಹಬ್ಬ ಮಸ್ಕತ್ ನಲ್ಲಿ ನಡೆಯಲಿದೆ. ಕನ್ನಡದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಸಾಕಷ್ಟು ಸವಾಲಿನಿಂದ ಕೂಡಿದ್ದ ಎರಡನೇ ಕನ್ನಡ ಹಬ್ಬವನ್ನು ಯಶಸ್ವಿಗೊಳಿಸಿದ್ದೇನೆ, ಈ ಬಾರಿಯೂ ಎಲ್ಲ ಕನ್ನಡಿಗರು ಒಟ್ಟಾಗಿ ಹಬ್ಬವನ್ನು ಗೆಲ್ಲಿಸಿ ಎಂದರು. ಮೂರನೇ ವಿಶ್ವಕನ್ನಡ ಹಬ್ಬದ ಸಮಿತಿ ಅಧ್ಯಕ್ಷ ದಿನೇಶ್ ಜೋಶಿಯವರು ನಮ್ಮ ತನು, ಮನ, ಎಲ್ಲದರಲ್ಲಿಯೂ ನಮ್ಮ ಬೆಂಬಲವಿದೆ ಮುನ್ನುಗೋಣ ನಮ್ಮ ಕನ್ನಡಾಂಬೆಯ ಹಬ್ಬ ಆಚರಿಸಲು ಎಂದು ಪ್ರಶಂಸಿಸಿದರು. ಮಸ್ಕತ್ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಕರುಣಾಕರಾವ್, ಜಾನಕಿನಾಥ್, ಬಸವ ಬಳಗದ ಶಿವ ಕುಮಾರ್ ಕೆಂಚನಗೌಡ್ರ,  ಮೂರನೇ ವಿಶ್ವಕನ್ನಡ ಹಬ್ಬದ ಎಲ್ಲಾ ಪದಾಧಿಕಾರಿಗಳು  ಸೇರಿ ಹಲವರಿದ್ದರು.


ಹಲವಾರು ಗಣ್ಯಾಧಿ ಗಣ್ಯರು ಮಾತನಾಡಿ ಕನ್ನಡದ ಸೇವೆಗೆ ನಮ್ಮ ಬೆಂಬಲ ಯಾವಾಗಲು ಸಿದ್ದ ನಮ್ಮ ಕನ್ನಡದ ಸೇವೆ ಮಾಡುತ್ತಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಶಿವಕುಮಾರ್ ನಾಗರ ನಾವಿಲೆ ಹಾಗೂ ವಿಶ್ವ ಕನ್ನಡ ಹಬ್ಬದ ಸಮಿತಿಗೆ ಅಭಿನಂದಿಸಿದರು.

Tuesday, September 02, 2025

ತ್ಯಾಗರಾಜನಗರದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗ ೧೫ನೇ ವರ್ಷದ ಭವ್ಯ ಗಣೇಶೋತ್ಸವ

ಶ್ರೀ ವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ೧೫ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಭವ್ಯವಾಗಿ ಜರುಗಿತು. ಈ ಬಾರಿ ವಿಶೇಷವಾಗಿ ಏಳು ದಿನಗಳ “ಸಪ್ತಾಹ” ಕಾರ್ಯಕ್ರಮ ನಡೆಯಿತು.


ಉತ್ಸವದಲ್ಲಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯ, ಶ್ರೀ ವಜ್ರಕ್ಷೆತ್ರ ವ್ಯವಸ್ಥಾಪಕರು ವಾದಿರಾಜ ಆಚಾರ್ಯರು ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯರ ಉಪಸ್ಥಿತಿ ವಿಶೇಷ ಆಕರ್ಷಣೆಯಾಯಿತು.

ಉತ್ಸವದಲ್ಲಿ ಪ್ರತಿದಿನ ವಿವಿಧ ಪೂಜೆಗಳು, ಮೂರು ದಿನಗಳಲ್ಲಿ ಮೂರೂ ಬಾರಿ ಅನ್ನಸಂತರ್ಪಣೆ, ಹಾಗೂ ಸ್ವಚ್ಛತೆ – ಪರಿಸರ ಶುದ್ಧೀಕರಣ ಕಾರ್ಯಕ್ರಮ ನಡೆಯಿತು. ಜೊತೆಗೆ ಭಜನೆ, ಸಂಗೀತ, ನೃತ್ಯ, ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಗೆದ್ದವು.


ಸುಂದರ ಅಲಂಕಾರದ ಗಣಪತಿ ವಿಗ್ರಹ ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದು, ಕೊನೆಯ ದಿನ ಭವ್ಯ ವಿಸರ್ಜನೆ ಮೆರವಣಿಗೆ ಉತ್ಸಾಹಭರಿತವಾಗಿ ನೆರವೇರಿತು.