Wednesday, June 05, 2013

ಕೊಡಗು: ಒಂದು ಪರಿಚಯ ಭಾಗ - ೨

ಕೊಡಗಿನ ಪ್ರವಾಸಿ ತಾಣಗಳು
ತಲಕಾವೇರಿ:  ತಲಕಾವೇರಿ ಕೊಡಗಿನಲ್ಲಿರುವ ಪ್ರಸಿದ್ದ
ತೀರ್ಥಕ್ಷೇತ್ರ. ಹಿಂದೆ ಅಗಸ್ತ್ಯ ಮಹರ್ಷಿಗಳ ಧರ್ಮಪತ್ನಿಯಾಗಿದ್ದ ಕಾವೇರಿ ತಾಯಿಯು ನದಿಯ ರೂಪುತಾಳಿ ಇಲ್ಲಿ ಉಗಮಿಸುತ್ತಾಳೆ. ಭಾಗಮಂಡಲದಿಂದ ೮ ಕಿಲೋಮೀಟರ್ ದೂರದಲ್ಲಿ ೧೩೫೦ಅಡಿ ಎತ್ತರದ ಬ್ರಹ್ಮಗಿರಿ ಶಿಖರದ ಪೂರ್ವದ ಇಳಿಜಾರಿನಲ್ಲಿ ಈ ನದಿಯ ಉಗಮಸ್ಥಾನವಿದೆ. ಪ್ರತೀ ವರ್ಷ ತುಲಾ ಸಂಕ್ರಮಣದಂದು(ಅಕ್ಟೋಬರ್-೧೭) ಈ ತೀರ್ಥೋದ್ಭವವಾಗುವುದು ವಿಶೇಷ. ಆ ಸಂದರ್ಭದಲ್ಲಿ ಸುಮಾರು ಒಂದು ತಿಂಗಳ ಕಾಲ ಕರ್ನಾಟಕ, ತಮಿಳು ನಾಡು ಸೇರಿದಂತೆ ದೇಶದ ನಾನಾ ಕಡೆಗಳಿಂದ ಲಕ್ಷಾಂತರ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.

ಭಾಗಮಂಡಲ: ಭಾಗಮಂಡಲ ಜಿಲ್ಲಾಕೇಂದ್ರ ಮಡಿಕೇರಿಯಿಂದ ೩೩ ಕಿಲೊಮೀಟರ್ ದೂರದಲ್ಲಿದೆ. ಈಪ್ರದೇಶದಲ್ಲಿ ಕಾವೇರಿಯೊಂದಿಗೆ ಇನ್ನೆರೆಡು ನದಿಗಳಾದ ಕನ್ನಿಕಾ ಹಾಗೂ ಸುಜೋತಿ ನದಿಗಳು ಕೂಡಿಕೊಳ್ಳುತ್ತವೆ. ಹೀಗಾಗಿ ಇದು ೩ ನದಿಗಳ ಸಂಗಮ ಸ್ಥಳವಾಗಿ ಪುಣ್ಯಕ್ಷೇತ್ರವೆನಿಸಿಕೊಂಡಿದೆ. ಇದರೊಂದಿಗೆ ಇಲ್ಲಿ ಭಗಂಡ ಮಹರ್ಷಿಗಳಿಂದ ಸ್ಥಾಪಿಸಲ್ಪಟ್ಟಿದ್ದು ಎನ್ನಲಾಗುವ ಶ್ರೀ ಭಗಂಡೆಶ್ವರ ದೇವಾಲಯವಿದ್ದು ಇದನ್ನು ಕೇರಳ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಾಲಾಗಿದೆ. ಇದಲ್ಲದೆ ಮಹಾವಿಷ್ಣು, ಗಣಪತಿ, ಸುಬ್ರಹ್ಮಣ್ಯರ ದೆಗುಲಗಳೂ ಇಲ್ಲಿವೆ. ತಲಕಾವೇರಿಗೆಂದು ಬರುವ ಭಕ್ತ ಜನರೆಲ್ಲರೂ ಭಾಗಮಂಡಲವನ್ನು ಸ್ಂದರ್ಶಿಸದೆ ತೆರಳರಾರರು.

ಮಡಿಕೇರಿ ಓಂಕಾರೆಶ್ವರ ದೇವಾಲಯ: ಓಂಕಾರೇಶ್ವರ ದೇವಾಲಯವು ಮಡಿಕೇರಿಯಲ್ಲಿನ ಪ್ರಸಿದ್ದ ದೇವಾಲಯವಾಗಿದ್ದು ೧೮೨೦ರಲ್ಲಿ ಕೊಡಗಿನ ಅರಸು ಎರಡನೇ ಲಿಂಗರಾಜನೆಂಬುವವ ನಿರ್ಮಾಣ ಮಾಡಿದನು. ಇಂಡೋ ಇಸ್ಲಾಮಿಕ್ ಶೈಲಿಯಲ್ಲಿರುವ ಈ ದೇವಾಲಯವು ನೋಡಲು ಬಹು ಸುಂದರವಾಗಿದ್ದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.
ಮಡಿಕೇರಿ ಕೋಟೆ: ಮಡಿಕೇರಿ ಕೋಟೆಯೊಂದು ಐತಿಹಾಸಿಕ ಸ್ಮಾರಕವಾಗಿದ್ದು, ಮಡಿಕೇರಿ ಕೋಟೆಯನ್ನು ೧೭ನೇ ಶತಮಾನದಲ್ಲಿ ಮುದುರಾಜನೆನ್ನುವವನು ಪ್ರಥಮವಗಿ ನಿರ್ಮಣ ಮಾಡಿದನು. ಹಾಗೆಯೇ ಆತನು ಕೋಟೆಯೊಳಗೊಂದು ಅರಮನೆಯನ್ನೂ ಸಹ ನಿರ್ಮಿಸಿದ್ದನು. ಮಡಿಕೇರಿಯು ಟಿಪ್ಪುವಿನ ಆಡಳಿತಕ್ಕೊಳಪಟ್ಟಂತಹಾ ಸಮಯದಲ್ಲಿ ಕೋಟೆ ಮತ್ತು ಅರಮನೆಯ ಪುನರ್ನಿರ್ಮಾಣ ಕಾರ್ಯವು ನಡೆಯಿತು. ಮುಂದೆ ೧೮೧೨-೧೪ರಲ್ಲಿ ಎರಡನೇ ಲಿಂಗರಾಜೇಂದ್ರ ಅರಸರು ಕೋಟೆಯನ್ನು ಪುನರ್ನವೀಕರಣ ಮಾಡಿದರು. ತದನಂತರ ೧೮೩೪ರಲ್ಲಿ ಬ್ರಿಟಿಷರಾಡಳಿತದಲ್ಲಿ ಕೋಟೆಗೆ ಕೆಲ ಭಾಗಗಳನ್ನು ಸೇರಿಸುವ ಮೂಲಕ ಕೋಟೆಯನ್ನು ವಿಸ್ತರಿಸಲಾಯಿತು.
ರಾಜಾ ಸೀಟ್: ರಾಜಾ ಸೀಟ್ ಮಡಿಕೇರಿಯಲ್ಲಿನ ಅತ್ಯಂತ ಪ್ರಸಿದ್ದ ಪ್ರವಾಸೀ ಆಕರ್ಷಣೀಯ ಕೇಂದ್ರ. ಇಲ್ಲಿ ಪುಷ್ಪವನ
ಹಾಗೂ ಕೃತಕ ಜಾರಂಜಿಗಳನ್ನೊಳಗೊಂಡ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ. ಮಡಿಕೇರಿ ನಗರದ ಪಶ್ಚಿಮ ಭಾಗದಲ್ಲಿರುವ ಇದು ಸೂರ್ಯಾಸ್ತಮಾನವನ್ನು ವೀಕ್ಷಿಸಲು ಅತ್ಯಂತ ಪ್ರಶಸ್ತ ಸ್ಥಳವೆನ್ನಿಸಿದೆ. ಹಿಂದೆ ಮಡಿಕೇರಿಯನ್ನಾಳಿದ ರಾಜರುಗಳು ಪ್ರತಿದಿನ ಇಲ್ಲಿ ಬ್ಂದು ಸೂರ್ಯಾಸ್ತವನ್ನು ನೋಡುತ್ತಾ ಮನದ ಆಯಾಸವನ್ನು ಕಳೇಯುತ್ತಿದ್ದರೆನ್ನಲಾಗಿದ್ದು ಅದೇ ಕಾರಣ್ಕ್ಕೆ ಈ ಸ್ಥಳ ರಾಜಾ ಸೀಟ್ ಎನ್ನಿಸಿದೆ.

ಅಬ್ಬೆ ಜಲಪಾತ/ಅಬ್ಬೆ ಫಾಲ್ಸ್: ಮಡಿಕೇರಿ ನಗರದಿಂದ ೮ ಕಿಲೋಮೀಟರ್ ದೂರವಿರುವ ಅಬ್ಬೆ ಜಲಪಾತ ಕೊಡಗಿನಲ್ಲಿರುವ ಅತ್ಯಂತ ಪ್ರೆಕ್ಷಣೀಯ ಜಲಪಾತವಾಗಿದೆ. ಇಲ್ಲಿ ಕಾವೇರಿ ಧುಮ್ಮಿಕ್ಕಿ ಭೋರ್ಗರೆವ ರೀತಿ ಕಣ್ಮನಗಳನ್ನು ಸೂರೆಗೊಳ್ಳುವಂತಹದು.
ಇರ್ಪು ಜಲಪಾತ/ಇರ್ಪು ಫಾಲ್ಸ್: ಇರ್ಪು ಜಲಪಾತ ಕೊಡಗಿನ ಇನ್ನೊಂದು ಪ್ರಮುಖ ಜಲಪಾತವಾಗಿದೆ. ತಾಲ್ಲೂಕು ಕೇಂದ್ರ ವಿರಾಜಪೇಟೆಯಿಂದ ೪೮ ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳ ಕರ್ನಾಟಕ-ಕೇರಳ ಗಡಿ ಪ್ರದೇಶಕ್ಕೆ ಹೊಂದಿಕೊಂಡಿದೆ.
        ಇದಲ್ಲದೆ ಕೊಡಗಿನ ನಾಗರಹೊಳೆ, ಬ್ರಹ್ಮಗಿರಿ, ಪುಷ್ಪಗಿರಿ, ತಲಕಾವೇರಿಗಳಲ್ಲಿ ರಾಷ್ಟ್ರೀಯ ವನ್ಯಜೀವಿಧಾಮಗಳನ್ನು ಸ್ಥಾಪಿಸಲಾಗಿದೆ. ಇಲ್ಲೆಲ್ಲಾ ಆನೆ. ಹುಲಿ, ಘೇಂಡಾಮೃಗ, ಕಾಡೆಮ್ಮೆ, ಜಿಂಕೆಗಳೂ ಸೇರಿದಂತೆ ನಾನಾ ಜಾತಿಯ ಪ್ರಾಣಿ- ಪಕ್ಷಿಗಳು ನೆಲೆಸಿವೆ. ಈ ಎಲ್ಲಾ ವನ್ಯಜೀವಿ ಧಾಮಗಳು ಸಹ ಪ್ರವಾಸಿಗರನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊಡಗಿನತ್ತ ಆಕರ್ಷಿತರಾಗುವಂತೆ ಮಾಡುತ್ತವೆಂದರೆ ಅದು ಅತಿಶಯೋಕ್ತಿಯಲ್ಲ

No comments:

Post a Comment