Wednesday, September 02, 2020

ವಿಶ್ವಾಮಿತ್ರನ ತಪೋಭಂಗಕ್ಕೆ ಕಾರಣವಾದ 'ಮೇನಕೆ' ಹಾಗೂ ಪ್ರಾಚೀನ ಭಾರತದಲ್ಲಿದ್ದ ಗಂಧರ್ವ, ಅಪ್ಸರಾ ಕುಲ!!

ವಿಶ್ವಾಮಿತ್ರ ತಾನು ಬ್ರಹ್ಮಜ್ಞಾನ  ಪಡೆದು ವಸಿಷ್ಟನನ್ನು ಮೀರಿಸಬೇಕು ಎಂಬ ಛಲದೊಡನೆ ತಪಸ್ಸಿಗೆ ಕುಳಿತಿದ್ದಾಗ ದೇವರಾಜ ಇಂದ್ರನಿಗೆ ಸಮಸ್ಯೆ ತಲೆದೋರುತ್ತದೆ.  ಏಕೆಂದರೆ ವಿಶ್ವಾಮಿತ್ರ ತಾನು ತಪಸ್ಸಿನ ಶಕ್ತಿಯಿಂದ ವಸಿಷ್ಟರನ್ನು ಮಾತ್ರವಲ್ಲ ದೇವತೆಗಳನ್ನೂ ಸೋಲಿಸುವ ಶಪಥ ಮಾಡಿದ್ದ. ದೇವಗಣದ ಜನರು ವಾಸಿಸುವ ಸ್ವರ್ಗದಂತೆಯೇ ತಾನೂ ಒಂದು ಸ್ವರ್ಗವನ್ನು ಸೃಷ್ಟಿಸುವುದಾಗಿ ಇಂದ್ರನಿಗೆ ಸವಾಲೆಸಿಸಿದ್ದ. ಇದರಿಂದಾಗಿ ದೇವಗಣದ ಮುಖ್ಯಸ್ಥನಾಗಿದ್ದ ಇಂದ್ರನಿಗೆ ಸಹಜವಾಗಿ ಭೀತಿ ಆವರಿಸುತ್ತದೆ, ವಿಶ್ವಾಮಿತ್ರ ಒಂದೊಮ್ಮೆ ಸರ್ವಜ್ಞಾನ ವನ್ನೂ ಪಡೆದು ತನ್ನ ಅಧಿಕಾರವನ್ನು ಪ್ರಶ್ನಿಸಿದರೆ ಕೆಡುಕಾಗಬಹುದು ಎಂದು ಆಲೋಚನೆಯೊಡನೆ  ಮೇನಕೆ ಎಂಬ ಅಪ್ಸರಾ ಕನ್ಯೆಯನ್ನು ವಿಶ್ವಾಮಿತ್ರನ ತಪೋಭಂಗಕ್ಕಾಗಿ ಕಳಿಸುತ್ತಾನೆ. 

ಮೇನಕೆ ಎಂಬ ಅಪ್ಸರ ಕುಲದ ಕನ್ಯೆ!!!

अप्सरा मेनका ने क्यों छोड़ दिया था विश्वामित्र को? | apsara menaka story
ಮೇನಕೆ

ಪ್ರಾಚೀನ ಬಾರತದ ಮಹಾಕಾವ್ಯಗಲಾಗಿರುವ ರಾಮಾಯಣ ಮತ್ತು ಮಹಾಭಾರತ , ಪುರಾಣಗಳಲ್ಲಿ ವೈವಿಧ್ಯಮಯ ಜೀವಿಗಳನ್ನು ಉಲ್ಲೇಖವಿದೆ. ಅವುಗಳನ್ನು ಅತಿಮಾನುಷ ಅಥವಾ ಅಮಾನುಷ ಜೀವಿ ಎನ್ನಲಾಗುತ್ತದೆ.  ಆದರೆ ಅಂತಹಾ ಜೀವಿಗಳು ಲೌಕಿಕ ಜಗತ್ತಿನಲ್ಲಿ ವಾಸಿಸಲು ಭೂಮಿಗೆ ಬಂದಿದ್ದರೆಂದು ಹೇಳಲಾಗಿದೆ.  ಅವರಲ್ಲಿ ದೇವ, ಅಸುರ, ಗಂಧರ್ವ, ಯಕ್ಷ, ಕಿನ್ನರ, ಕಿರಾತ, ಕಿಂಪುರುಷ, ರಾಕ್ಷಸ, ನಾಗ, ಸುಪರ್ಣ, ವಾನರ,ವಿದ್ಯಾಧರ, ವಲಾಖಿಲ್ಯಾಸ್, ಪಿಶಾಚಾ,  ರುದ್ರ, ಆದಿತ್ಯ, ದಾನವ,  ಮಾರುತ್, ನಿವತಕವಾಚ, ದೈತ್ಯ, ಕಾಲಕೇಯ, ವಸು ಈ ಎಲ್ಲರೂ ಇದ್ದಾರೆ.

ಆದರೆ ಐತಿಹಾಸಿಕ ದೃಷ್ಟಿಯಿಂದ ನೋಡಿದ್ದಾದರೆ ಪ್ರಾಚೀನ ಭಾರತದಲ್ಲಿ ವೇದಕಾಲ ಹಾಗೂ ಅದರ ಪೂರ್ವದಲ್ಲಿ ಈ ಮೇಲೆ ಹೆಸರಿಸಲಾದ ಬುಡಕಟ್ಟುಗಳ ಜನರು ಸಾಕಷ್ಟು ಸಂಖ್ಯೆಯಲ್ಲಿ ವಾಸವಿದ್ದರು. ವಿಶೇಷವಾಗಿ ಉತ್ತರ ಭಾರತದ ಹಿಮಾಲಯದ ಭಾಗಗಳಲ್ಲಿ ಇವರ ವಸತಿ ಸ್ಥಳಗಳಿತ್ತು!!

ಇವರಲ್ಲಿ ದೇವ ಬುಡಕಟ್ಟು ಎನ್ನುವುದು ವಿಶೇಷ ಬುಡಕಟ್ಟು ಹಾಗೂ ಅತ್ಯಂತ ಉಚ್ಚ ಬುಡಕಟ್ಟು ಆಗಿತ್ತು. ಯಕ್ಷ, ಕಿನ್ನರ, ಕಿಂಪುರುಷ, ಸುಪರ್ಣ, ,ವಿದ್ಯಾಧರ, ವಲಾಖಿಲ್ಯಾಸ್ ಈ ಮೊದಲಾದವು ಸಹ ವಿವಿಧ ಬುಡಕಟ್ಟು ಸಮುದಾಯವೇ ಆಗಿತ್ತು!!! ಇನ್ನು ಅಸುರ, ದೈತ್ಯ, ದಾನವ, ಕಿರಾತ, , ರಾಕ್ಷಸ, ನಾಗ, ಪಿಶಾಚಾ,  ರುದ್ರ, ಮೊದಲಾದವು ದೇವ ಬುಡಕಟ್ಟು ಸಮುದಾಯದ ವಿರೋಧಿಗಳ್ಳೂ ವೈರಿಗಳೂ ಆಗಿದ್ದರು. 

ಇನ್ನು ಗಂಧರ್ವರು ವಿಶೇಷತಃ ಸಂಗೀತ, ನೃತ್ಯದಂತಹಾ ಲಲಿತಕಲೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಸಮುದಾಯದ ಜನಾಂಗವಾಗಿತ್ತು!! ಇವರು ಇಂದ್ರ(ಆಡಳಿತ ಮುಖ್ಯ) ನ ಸಭೆಯಲ್ಲಿ ತಮ್ಮ ಸಂಗೀತ, ನೃತ್ಯಗಳನ್ನು ಪ್ರಸ್ತುತ ಪಡಿಸಿ ಮನರಂಜಿಸುತ್ತಿದ್ದರು. 

ಅಪ್ಸರಾ ಎಂದರೆ ಯಾರು?

ಅಪ್ಸರಾ ಅಥವಾ ಅಪ್ಸರೆಯರು ಎಂಬ ಪದ ಹಿಂದೂ ಮತ್ತು ಬೌದ್ಧ ಸಂಸ್ಕೃತಿಯಲ್ಲಿ ಮೋಡಗಳು ಮತ್ತು ನೀರಿನ ರೀತಿಯ ಒಂದು ಸ್ತ್ರೀ ಸ್ವಭಾವ  ಎಂಬ ವಿವರಗಳ ಹಿನ್ನೆಲೆಯಲ್ಲಿ ಬರುತ್ತದೆ. ಅಲ್ಲದೆ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಸಂಸ್ಕೃತಿಗಳ ಶಿಲ್ಪಕಲೆ, ನೃತ್ಯ, ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಅಪ್ಸರೆಯರನ್ನು ಕಾಣಬಹುದಾಗಿದೆ. ಎರಡು ವಿಧದ ಅಪ್ಸರೆಯರಿದ್ದು ಲೌಕಿಕ ಹಾಗೂ ದೈವಿಕ ಎಂಬುದಾಗಿ ಇವರನ್ನು ವಿಂಗಡಿಸಲಾಗಿದೆ. ಲೌಕಿಕ ಅಪ್ಸರೆಯರ ಪೈಕಿ ಮೂವತ್ತನಾಲ್ಕು  ಅಪ್ಸರೆಯರಿದ್ದರೆ ದೈವಿಕ ಅಪ್ಸರೆಯರು ಹತ್ತು ಮಂದಿ ದ್ದು ಅವರಲ್ಲಿ ಮೂವರು ಅತ್ಯಂತ ಹೆಚ್ಚು ಪ್ರಸಿದ್ದರಿದ್ದಾರೆ.

ಉತ್ತರ ಪ್ರದೇಶದ 12 ನೇ ಶತಮಾನದ ಅಪ್ಸರೆಯ ಮರಳುಗಲ್ಲಿನ ಪ್ರತಿಮೆ.

ಭಾರತೀಯ ಪುರಾಣಗಳಲ್ಲಿ, ಅಪ್ಸರಗಳು ಸುಂದರವಾದ, ಅಲೌಕಿಕ ಸ್ತ್ರೀ ಜೀವಿಗಳು. ಅವರು ಸೌಂದರ್ಯ, ಯೌವ್ವನ ಹಾಗೂ ಸೊಗಸಾದ, ನೃತ್ಯ ಕಲೆಯಲ್ಲಿ ಅದ್ಭುತ ಪರಿಣಿತಿ ಸಾಧಿಸಿದ್ದರು. ಹಾಗೂ ಅವರು ಆಗಾಗ ಗಂಧರ್ವರ ಪತ್ನಿಯರಾಗಿ ಕಾಣಿಸಿಕೊಳ್ಳುತ್ತಾರೆ. (ಎಂದರೆ ಅಪ್ಸರೆಯರು ಗಂಧರ್ವ ಸಮುದಾಯಕ್ಕೇ ಸೇರಿದವರು ಅಥವಾ ಅದಕ್ಕೆ ಸರಿಸಮಾನ ಸಮುದಾಯದವರು ಎಂದಾಯಿತು!)  ದೇವಗಣದ ಅಧಿಪತಿಯಾದ ಇಂದ್ರನ ಸಭೆಯಲ್ಲಿ ಈ ಅಪ್ಸರೆಯರು ಗಂಧರ್ವ (ವಿಶೇಷವಾಗಿ ಸಂಗೀತದಲ್ಲಿ ಪ್ರವೀಣರಾದ ಕುಲ)ರ ಹಾಡಿಗೆ ನೃತ್ಯ ಮಾಡುತ್ತಿದ್ದರು. ಆ ಮೂಲಕ ದೇವತೆಗಳು, ಸಭಿಕರನ್ನು ಮನರಂಜಿಸುತ್ತಿದ್ದರು.  ಆಕಾಶದಲ್ಲಿ ತೇಲುವ ದೇವಗಣದವರ ಸೇವೆ ಮಾಡುವ ಇವರನ್ನು  ಅಲೌಕಿಕ ಜೀವಿಗಳಾಗಿ ಹಿಂದೂ ಪುರಾಣಗಳಲ್ಲಿ ದೇವತೆಗಳಂತೆಯೇ ಚಿತ್ರಿಸಲಾಗಿದೆ. 

ಒಡಿಶಾದ ಬೈತಲಾ ಡಿಯುಲಾದ  ಬಾಗಿಲಿನ ಚೌಕಟ್ಟನ್ನು ಹಿಡಿದಿರುವ ಅಪ್ಸರೆಯ ಪ್ರತಿಮೆ 


ಇನ್ನು ಈ ಅಪ್ಸರೆಯರು ತಮ್ಮ ದೈಹಿಕ ರೂಪವನ್ನು ಇಚ್ಚೆಮಾತ್ರದಿಂದ ಬದಲಿಸಿಕೊಳ್ಳಬಲ್ಲವರಾಗಿದ್ದರು. ಅವರು ಕ್ರೀಡೆ, ಜೂಜಾಟದ ಅದೃಷ್ಟದ ಕೇಂದ್ರವಾಗಿರುತ್ತಿದ್ದರು(ಎಂದರೆ ದೇವಗಣ ಸಮುದಾಯದವರು ಇವರನ್ನು ಜೂಜಾಟದಲ್ಲಿಯೂ, ಇತರೆ ಕ್ರೀಡೆಗಳಲ್ಲಿ ಪಣದಂತೆಯೋ ಇನ್ನಾವ ಬಗೆಯಲ್ಲಿಯೋ  ತೊಡಗಿಸಿಕೊಳ್ಳುತ್ತಿದ್ದರೆಂದು ಭಾವಿಸಬಹುದೆ?

ಮಧ್ಯಪ್ರದೇಶದ ಖುಜರಾಹೋ ದೇವಾಲಯದಲ್ಲಿರುವ ಅಪ್ಸರೆಯ ಪ್ರತಿಮೆ 
ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ  9 ನೇ ಶತಮಾನದ ಬೊರೊಬುದುರ್ ದೇವಾಲಯದ;;ಇರಿಬ ಅಪ್ಸರೆಯರ ಶಿಲ್ಪ

ಕಾಂಬೋಡಿಯಾದಲ್ಲಿನ ದೇವಾಲಯಗಳಲ್ಲಿ ಅಪ್ಸರೆಯರ ಕಲಾಕೃತಿ

ಇನ್ನು ಭಾರತೀಯ ಪುರಾಣದ ಅಪ್ಸರೆಯರನ್ನು ಪ್ರಾಚೀನ ಗ್ರೀಕ್ ನ ಮ್ಯೂಸ್‌ಗಳಿಗೆ ಹೋಲಿಸಲಾಗುತ್ತದೆ, ಇಂದ್ರನ ಆಸ್ಥಾನದಲ್ಲಿರುವ 26 ಅಪ್ಸರೆಯರಲ್ಲಿ ಪ್ರತಿಯೊಂದೂ ಪ್ರದರ್ಶನ ಕಲೆಗಳ ಒಂದು ವಿಶಿಷ್ಟ ಅಂಶವನ್ನು ಪ್ರತಿನಿಧಿಸುತ್ತದೆ. ಅವು ಫಲವತ್ತತೆ(ಸಂತಾನಶಕ್ತಿ) ವಿಧಿಗಳೊಂದಿಗೆ ಸಂಬಂಧ ಹೊಂದಿವೆ. ಭಾಗವತ ಪುರಾಣವು ಅಪ್ಸರೆಯರು ಕಶ್ಯಪನಿಂದ ಹುಟ್ಟಿದವರು ಎನ್ನುತ್ತದೆ. ಎಂದರೆ ಅಪ್ಸರೆಯರ ವರ್ಗ ಅಥವಾ ಸಮುದಾಯ ಮೂಲತಃಅ ಕಶ್ಯಪ ಋಷಿಕುಲದ  ಬುಡಕಟ್ಟಿಗೆ ಸೇರಿದೆ!!!

ಇನ್ನು ಭಾರತ ಮಾತ್ರವಲ್ಲದೆ ಶ್ರೀಲಂಕಾ, ಚೀನಾ, ಇಂಡೋನೇಷಿಯಾ, ಕಾಂಬೋಡಿಯಾ ಸೇರಿ ಅನೇಕ ರಾಷ್ಟ್ರಗಲಲ್ಲಿ ಸಹ ಅಪ್ಸರೆಯರ ಬಗೆಗೆ ವಿವಿಧ ರೀತಿಯ ಉಲ್ಲೇಖಗಳಿದ್ದು ಆಯಾ ದೇಶದ ಕೆಲ ಪ್ರಾಚೀನ ದೇವಾಲಯಗಳಲ್ಲಿ ಸಹ ಅಪ್ಸರೆಯರ ಶಿಲ್ಪಗಳನ್ನು ಕಾಣಬಹುದಾಗಿದೆ. 

ಮೇನಕೆ/ಮೇನಕಾ ಎಂಬ ಅಪ್ಸರೆ ಯಾರು?

ಹಾಗಾದರೆ ಮೇನಕೆ/ಮೇನಕಾ ಎಂಬ ಅಪ್ಸರೆ ಯಾರು ಎಂದು ತಿಳಿಯೋಣ. ಕಥಾಸರಿತ್ಸಾಗರದಲ್ಲಿ ಹೇಳಿದಂತೆ ಮೇನಕಾ ಓರ್ವ ಅಪ್ಸರೆ ಆಕೆ ಪ್ರಿಸದ್ವರ ಅಥವಾ ಪ್ರಮದ್ವರ  ಎಂಬಾತನ ತಾಯಿ.ಕ್ರಿ.ಪೂ 1 ನೇ ಶತಮಾನದ ಮತ್ಸ್ಯ ಪುರಾಣದಲ್ಲಿ (179.8) ಉಲ್ಲೇಖಿಸಿದಂತೆ ಮೇನಕಾ ಅಂಧಕ ಎಂಬ ರಾಕ್ಷಸನ  ರಕ್ತವನ್ನು ಕುಡಿಯುವ ಉದ್ದೇಶದಿಂದ ಸೃಷ್ಟಿಯಾದ ‘ದೈವಿಕ ತಾಯಿ’ (ಮಾತೆ). 
Menaka Apsara designs, themes, templates and downloadable graphic elements  on Dribbble

ಮೇನಕೆ ಅಸಾಧಾರಣ ಸೌಂದರ್ಯವತಿ ಅಪ್ಸರೆ ಇಂದ್ರನಿಂದ ಸೂಚನೆಗಳನ್ನು ತೆಗೆದುಕೊಂಡು ಅನೇಕ ಋಷಿಗಳನ್ನು ಪ್ರಲೋಭನೆಗೊಳಿಸುದ್ದಳು.  ಅವರ ತಪಸ್ಸಿನ ಶಕ್ತಿಯನ್ನು ನಾಶಪಡಿಸುತ್ತಿದ್ದಳು!! ಪುರಾಣಗಳಲ್ಲಿ ಇಂತಹಾ ಅನೇಕ ಘಟನೆಗಳು ಬರುತ್ತದೆ, ಈಕೆ ಪ್ರಮದ್ವರೆಯ ತಾಯಿ ಎನ್ನುವುದು ಒಂದು ಕಥೆ.  ಒಮ್ಮೆ ಮೆನಕೆ ವಿಸವಸು(ವಿಶ್ವವಸು೦ ಎಂಬ ಹೆಸರಿನ ಗಂಧರ್ವನನ್ನು ಕೂಡಿ ಗರ್ಭಿಣಿಯಾದಳು. ಆ ನಂತರ ಆಕೆ ತನಗೆ ಹುಟ್ಟಿದ ಮಗುವನ್ನು ನದಿಯ ದಡದಲ್ಲಿ ಎಸೆದು ಸ್ವರ್ಗಕ್ಕೆ ಹೋದಳು. ಹತ್ತಿರದಲ್ಲಿ ತಪಸ್ಸು ಮಾಡುತ್ತಿದ್ದ ಸ್ಥೂಲಕೇಶ(ದಪ್ಪಕೂದಲಿನ) ಓರ್ವ ಋಷಿಮಗುವನ್ನು ತೆಗೆದುಕೊಂಡು ಅದನ್ನು ಬೆಳೆಸಿದನು. ಅದು ಹೆಣ್ಣು ಮಗುವಾಗಿದ್ದು ಅದಕ್ಕೆ ಪ್ರಮದ್ವರೆ ಎಂದು ಹೆಸರಿಟ್ಟ. ಮುಂದೆ ರುರು ಎಂಬಾತ ಪ್ರಮದ್ವರೆಯನ್ನು ವಿವಾಹವಾದ. 

ಮೇನಕೆಯ ಬಗೆಗಿನ ಇತರೆ ಮುಖ್ಯ ಉಲ್ಲೇಖಗಳು ಹೀಗಿದೆ-

  • ಒಮ್ಮೆ ದೇವಲೋಕಕ್ಕೆ ಆಗಮಿಸಿದ್ದ ದೂರ್ವಾಸನಿಗೆ ಮೇನಕೆ ಹೂವಿನ ಹಾರವನ್ನು ಅರ್ಪಿಸಿದ್ದಳು. ಈ ಘಟನೆಯು ನಂತರದ ಅವಧಿಯಲ್ಲಿ ಕ್ಷೀರ ಸಾಗರ (ಹಾಲಿನ ಸಮುದ್ರ ಅರ್ಥಾನ್ ಬಿಳುಪಾದ, ಶುದ್ದವಾದ ನೀರಿನಿಂದ ಕೂಡಿದ) ಮಥಿಸಲು ಕಾರಣವಾಯಿತು
  • ಮೇನಕೆಯು ಆರು ಪ್ರಮುಖ ಆಕಾಶತಾರೆಯರ ಪೈಕಿ ಒಬ್ಬಳಾಗಿದ್ದಾಳೆಂದು ಮಹಾಭಾರತದ ಆದಿ ಪರ್ವಅಧ್ಯಾಯ 74ರ ಶ್ಲೋಕ ಸಂಖ್ಯೆ  68ರಲ್ಲಿ ಹೇಳಿದೆ.
  • ಮೇನಕೆಯು ಅರ್ಜುನನ (ಅರ್ಜುನ ಕುಂತಿಗೆ ಜನ್ಮಿಸಿದ್ದ ಇಂದ್ರನ ಮಗ)ಜನ್ಮೋತ್ಸವದ ವೇಳೆ ಭಾಗವಹಿಸಿ ಹಾಡಿ ನರ್ತಿಸಿದ್ದಳು ಎಂದೂ ಮಹಾಭಾರತದ ಆದಿ ಪರ್ವದಲ್ಲಿ ಅಧ್ಯಾಯ 122 ಶ್ಲೋಕ 64ರಲ್ಲಿ ಉಲ್ಲೇಖವಿದೆ.  ಅಲ್ಲದೆ ಅದೇ ಮಹಾಭಾರತದ ಸಭಾ ಪರ್ವದ ಅಧ್ಯಾಯ 10ಶ್ಲೋಕ 10ರಲ್ಲಿ ಮೇನಕೆ ಕುಬೇರನ ಆಸ್ಥಾನ ನರ್ತಕಿಯಾಗಿದ್ದಳೆನ್ನಲಾಗಿದೆ.
  • ಮೇನಕೆ ಒಮ್ಮೆ ಅರ್ಜುನನ ಗೌರವಾರ್ಥವಾಗಿ ಇಂದ್ರನ ಆಸ್ಥಾನದಲ್ಲಿ ಸಂಗೀತ ಪ್ರದರ್ಶನ ನೀಡಿದಳು ಎನ್ನುವುದಾಗಿ ಮಹಾಭಾರತ , ವನ ಪರ್ವ ಅಧ್ಯಾಯ 43ಶ್ಲೋಕ  29, ಹೇಳುತ್ತದೆ.
  • ಇನ್ನು ಶಿವಪುರಾಣದಲ್ಲಿ ( 2.2.22 ರ ಪ್ರಕಾರ) ಮೇನಕೆ “ಪರ್ವತಗಳ ರಾಜ” (ಪರ್ವತರಾಜ / ಹಿಮವಂತ)ನ ಪತ್ನಿಯಾಗಿದ್ದಳು.
ಇನ್ನು ಮೇನಕೆ ಬಗೆಗೆ ಇತಿಹಾಸಿಕ ದಾಖಲೆಗಳೂ ನಮಗೆ ಸಿಕ್ಕುತ್ತದೆ. : ಭಾರತದ ಪುರಾತತ್ವ ಸಮೀಕ್ಷಾಲಯ ದಾಖಗಳಲ್ಲಿರುವಂತೆ ಕರ್ನಾಟಕದ ಪಟ್ಟದಕಲ್ಲಿನ ಶೈವ ಸ್ಮಾರಕಗಳಲ್ಲಿ ಮೇನಕೆಯ ಉಲ್ಲೇಖವಿದೆ!. ಅಲ್ಲಿಯೂ ಆಕೆ ಹಾಗೂ ವಿಶ್ವಾಮಿತ್ರ ಸಂಪರ್ಕದ ಶಿಲ್ಪಗಳನ್ನು ಕಥೆಯನ್ನೂ ಕಾಣುತ್ತೇವೆ.

ಈ ಎಲ್ಲಾ ಮಾಹಿತಿಯನ್ನೂ ನೋಡಿದಾಗ ಇದೆಲ್ಲವೂ ಒಬ್ಬ ಮೇನಕೆಯ ಬಗೆಗೆ ವಿವರಗಳು ಎಂದೆನಿಸುದಿಲ್ಲ. ಬಹುಷಃ "ಮೇನಕಾ/ಮೇನಕೆ" ಎಂಬ ಹೆಸರಿನ ಅನೇಕ ಅಪಸರಾ ಕನ್ಯೆಯರೂ ಇದ್ದಿರಬೇಕು. ವಿಶ್ವಾಮಿತ್ರನನ್ನು ಮೋಹಿಸಿದ ಅಪ್ಸರಾ ಮೇನೆಕೆ ಹಾಗೂ ಅರ್ಜುನನನ್ನು ಕಂಡ ಮೇನಕೆ ಬೇರೆ ಬೇರೆ ಎನ್ನುವುದು ನನ್ನ ಊಹೆ.

ಈಗ ಮತ್ತೆ ವಿಶ್ವಾಮಿತ್ರನ ಕಡೆ ಬರೋಣ. ಅಪ್ಸರಾ ಗಣದವಳಾಗಿದ್ದ ಮೇನಕೆ ತನ್ನ ಅಧಿಕಾರು ಇಂದ್ರನ ಆದೇಶದ ಅನುಸಾರ ವಿಶ್ವಾಮಿತ್ರನ ತಪಸ್ಸನ್ನು ಭಂಗಪಡಿಸಲು ಮುಂದಾದಳು. ಹಲವಾರು ವಿಧದಲ್ಲಿ ಪ್ರಯತ್ನಿಸಿದ ನಂತರ ಮೇನಕೆ ವಿಶ್ವಾಮಿತ್ರನ ತಪೋಭಂಗ ಮಾಡಲು ಯಶಸ್ವಿಯಾದಳು.  
Vishwamitra Menka Love Story | पौराणिक प्रेम कथाएं: मेनका ने क्यों ठुकरा  दिया विश्वामित्र का प्यार - Photo | नवभारत टाइम्स
ವಿಶ್ವಾಮಿತ್ರ ಮತ್ತು ಮೇನಕೆ

ಆದರೆ ಮೇನಕೆಗೆ ವಿಶ್ವಾಮಿತ್ರನ ತಪೋಭಂಗ ಮಾಡುವ ವೇಳೆ ಆತನ ಮೇಲೆ ನಿಜವಾಗಿ ಪ್ರೀತಿ ಅಂಕುರಿಸಿತ್ತು. ಮೇನಕೆ ವಿಶ್ವಾಮಿತ್ರನಿಂದ ಸಂತಾನವನ್ನು ಬಯಸಿದ್ದಳು!!

ಶಕುಂತಲೆಗೆ ತಂದೆ ವಿಶ್ವಾಮಿತ್ರ!

ಆದರೆ ವಿಶ್ವಾಮಿತ್ರನಿಗೆ ಮೇನಕೆಯನ್ನು ಕಳಿಸಿದ್ದು ದೇವರಾಜ /ಅಧಿಕಾರಿ ಇಂದ್ರ ಎನ್ನುವುದು ತಿಳಿದು ಅತ್ಯಂತ ಹೆಚ್ಚಿನ ಕೋಪ ಬರುತ್ತದೆ.  ಆದರೆ ಅದೇ ವೇಳೆ ಮೇನಕೆಯ ನೈಜ ಪ್ರೀತಿಗೆ ಅವನ ಮನಸೋತಿರುತ್ತದೆ. ಹಾಗಾಗಿ ಅಪ್ರಸರಾ ಕನ್ಯೆ ಮೇನಕೆಯ ಬೇಡಿಕೆಯನ್ನು ವಿಶ್ವಾಮಿತ್ರ ಮನ್ನಿಸುತ್ತಾನೆ. ಅವರಿಬ್ಬರೂ ಕೆಲ ವರ್ಷಗಳ ಕಾಲ ಒಟ್ಟಾಗಿ ಜೀವನ ನಡೆಸುತ್ತಾರೆ. ಅವರಿಗೆ ಹೆಣ್ಣು ಮಗು ಜನ್ಮಿಸುತ್ತದೆ.
ಶಕುಂತಲೆಯ ಜನನ(ಖ್ಯಾತ ಚಿತ್ರಕಾರ ರವಿವರ್ಮ ಕಲಾಕೃತಿ)


ಆದರೆ ಕೆಲ ಸಮಯದ ನಂತರ ವಿಶ್ವಾಮಿತ್ರನಿಗೆ ತನ್ನ ತಪ್ಪಿನ ಅರಿವಾಗಿ ಮೇನಕೆಯನ್ನು ಬಿಟ್ಟು ಮತ್ತೆ ತನ್ನ ತಪಸ್ಸಾಧನೆಗೆ ಹೊರಟು ಹೋಗಿರುತ್ತಾನೆ. ಅಪ್ಸರೆ ಮೇನಕೆ ತಾನು ಆ ಮಗುವನ್ನು ಒಂದು ಕಾಡಿನಂಚಿನಲ್ಲಿ ಬಿಟ್ಟು ತಾನೂ ತನ್ನ ಸ್ಥಳಕ್ಕೆ ತೆರಳುತ್ತಾಳೆ. ಆ ಮಗುವನ್ನು ಕಣ್ವ ಋಷಿಯ ಆಶ್ರಮದ ನಿವಾಸಿಗಳು ಸಾಕಿ ಬೆಳೆಸುತ್ತಾರೆ. ಆಕೆಯೇ ಮುಂದೆ ಶಕುಂತಲೆಯಾಗಿ ಬೆಳೆದು ಅಯೋಧ್ಯೆಯ ರಾಜ ದುಶ್ಯಂತನನ್ನು ವಿವಾಹವಾಗುತ್ತಾಳೆ. ಆ ದುಶ್ಯಂತ-ಶಕುಂತಲೆಯರಿಗೆ ಭರತ ಎಂಬ ಪುತ್ರನ ಜನ್ಮವಾಗುತ್ತದೆ. ಆತನೇ ಮುಂದೆ ಭಾರತೀಯ ಪುರಾಣಗಳ ಖ್ಯಾತ ಭರತ ಚಕ್ರವರ್ತಿ ಎನಿಸಿದ್ದಾನೆ. 

ಮತ್ತೆ ಬಂದ ಮೇನಕೆ!!!

ಇನ್ನು ಇದಾಗಿ ಹಲವಾರು ವರ್ಷದ ನಂತರ ವಿಶ್ವಾಮಿತ್ರ ತಪಸ್ಸಾಚರಿಸುತ್ತಿದ್ದ ವೇಳೆ ಮತ್ತೆ ಮೇನಕೆ ಆಗಮಿಸುತ್ತಾಳೆ. ಆಗಲೂ ವಿಶ್ವಾಮಿತ್ರ ಮತ್ತೊಮ್ಮೆ ಆಕೆಯಲ್ಲಿ ಮೋಹ ಹೊಂದುತ್ತಾನೆ ಅವರು ಹತ್ತು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಒಂದು ದಿನ  ವಿಶ್ವಾಮಿತ್ರನಿಗೆ  ಅವನ ತಪ್ಪಿನ ಅರಿವಾಗಿ ಮತ್ತೆ ಅವಳನ್ನು ತೊರೆದು ಹೋಗುತ್ತಾನೆ. 

ಇದು ನಮಗೆ ಲಭ್ಯವಿರುವ ವಿಶ್ವಾಮಿತ್ರ ಮೇನಕೆಯ ಕಥೆ. ಇಲ್ಲಿ ನಾವು ಐತಿಹಾಸಿಕತೆಯನ್ನು ಗಮನಿಸಿದರೆ ಋಗ್ವೇದ ರಚನೆ ಹಾಗೂ ಅದರ ಕಾಲಮಾನ ಕ್ರಿ.ಪೂ. 1500–1200 ಎಂದು ತಿಳಿಯುತ್ತದೆ. ಅಂದರೆ ವಿಶ್ವಾಮಿತ್ರ ಋಗ್ವೇದ ಮೂರನೇ ಮಂಡಲದ ಕರ್ತೃ ಎಂದು ನಂಬುವುದಾದರೆ ಆತನ ಕಾಲಮಾನವೂ ಕುಡ ಇದೇ ಅವಧಿಯಲ್ಲಿ ಬರುತ್ತದೆ!!! ಋಗ್ವೇದ ಕಾಲದಲ್ಲಿ ಭಾರತದಲ್ಲಿ ಅಪಾರ ಸಂಖ್ಯೆಯ ಜ್ಞಾನಿ ಗಳಿದ್ದರು. ಅಂತೆಯೇ ಗಂಧರ, ಅಪ್ಸರಾ ಕುಲದ ಜನರೂ ವಾಸವಿದ್ದರು ಎಂದು ನಂಬಬಹುದು.

ಇನ್ನು ಮೇನಕೆಯಿಂದ ದೂರವಾದ ನಂತರ ವಿಶ್ವಾಮಿತ್ರ  ಹಿಮಾಲಯದ ಅತಿ ಎತ್ತರದ ಪರ್ವತಕ್ಕೆ ಹೋಗಿ ವರ್ಷಗಳ ಕಾಲ ತಪಸ್ಯವನ್ನು ಮಾಡುತ್ತಾನೆ.  ನಿತ್ಯವೂ ಯೋಗ, ದ್ಯಾನಾದಿಗಳನ್ನು ಮಾಡಿ ವಿವಿಧ ಮಾನಸಿಕ, ಆದ್ಯಾತ್ಮಿಕ ಸಾಧನೆಗಳಲ್ಲಿ ನಿರತನಾಗುತ್ತಾನೆ.  ಆ ಮೂಲಕ ತನ್ನ ಭಾವೋದ್ರೇಕಗಳ ಮೇಲೆ ನಿಯಂತ್ರಣ ಸಾಧಿಸುತ್ತಾನೆ.  

ಮತ್ತೆ ಪರೀಕ್ಷೆಗೆ ಒಡ್ಡಿದ ಇಂದ್ರ

ಇನ್ನು ಈ ನಡುವೆ ಮೇನಕೆಯಿಂದ ದೂರವಾದ ವಿಶ್ವಾಮಿತ್ರನಿಗೆ ಇಂದ್ರ ಮತ್ತೆ ಪರೀಕ್ಷೆಯನ್ನೊಡ್ಡುತ್ತಾನೆ. ಸುದೀರ್ಘ ತಪಸ್ಸಾಚರಿಸುತ್ತಿದ್ದ ವಿಶ್ವಾಮಿತ್ರನಲ್ಲಿಗೆ ಇಂದ್ರ ಬಡ ಬ್ರಾಹ್ಮಣನೊಬ್ಬನನ್ನು ಕಳಿಸುತ್ತಾನೆ. ಆತ ವಿಶ್ವಾಮಿತ್ರನಲ್ಲಿ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಾನೆ ಆಗ ವಿಶ್ವಾಮಿತ್ರ ಆ ದಿನ ತನಗಾಗಿ ಇರಿಸಿದ್ದ ಆಗಾರ ಪದಾರ್ಥಗಳನ್ನು ಆ ಬ್ರಾಹ್ಮಣನಿಗೆ ಕೊಟ್ಟುಬಿಡುತ್ತಾನೆ!! ಎಂದರೆ ಇಂದ್ರನ ಯಾವುದೇ ಪರೀಕ್ಷೆ ಮತ್ತು ಪ್ರಲೋಭಕ ಹಸ್ತಕ್ಷೇಪಗಳಿಂದ ವಿಶ್ವಾಮಿತ್ರನ ಸಾಧನೆಯನ್ನು ಮುರಿಯಲು ಸಾಧ್ಯವಾಗದೆ ಹೋಗುತ್ತದೆ. 

ವಿಶ್ವಾಮಿತ್ರ ಬ್ರಹ್ಮರ್ಷಿ ಎನಿಸಿದ!!
Vishwamitra – MyindMedia

ಹಲವಾರು ವರ್ಷಗಳ ಸಾಧನೆಯ ನಂತರ ವಿಶ್ವಾಮಿತ್ರನ ಯೋಗ ಶಕ್ತಿ ಅತ್ಯಂತ ಗರಿಷ್ಠ ಎತ್ತರಕ್ಕೆ ತಲುಪುತ್ತದೆ.  ಈ ಸಮಯದಲ್ಲಿ, ಬ್ರಹ್ಮ, ಇಂದ್ರ ಸೇರಿ ದೇವಗಣದ ಪ್ರಮುಖರೆಲ್ಲಾ  ಸೇರಿ ವಿಶ್ವಾಮಿತ್ರನಲ್ಲಿಗೆ ಆಗಮಿಸುತ್ತಾರೆ. ಹಾಗೂ ಅವನಿಗೆ "ಬ್ರಹ್ಮರ್ಷಿ" ಎಂಬ ಪದವಿ ಪ್ರಧಾನ ಮಾಡುತ್ತಾರೆ. ಅಷ್ತಲ್ಲದೆ ವಿಶ್ವಾಮಿತ್ರಅಥವಾ ಎಲ್ಲರ ಸ್ನೇಹಿತ ಎಂದು ಬ್ರಹ್ಮ ಸ್ವತಃಅ ವಿಶ್ವಾಮಿತ್ರನನ್ನು ಕರೆದು ಹೊಗಳುತ್ತಾನೆ!! ಮೇಲಾಗಿ ವಿಶ್ವಾಮಿತ್ರನನ್ನು ಅದುವರೆಗೆ ಎದುರಿಇಸಿದ್ದ ವಸಿಷ್ಟರೂ ಸಹ ಇದೀಗ ವಿಶ್ವಾಮಿತ್ರ ಒಬ್ಬ ಬ್ರಹ್ಮರ್ಷಿ ಎಂದು ಒಪ್ಪಿಕೊಳ್ಳುತ್ತಾನೆ!!!

....ಮುಂದುವರಿಯುವುದು

No comments:

Post a Comment