Tuesday, July 03, 2018

ತುಳುನಾಡಿನ ಈ ಪರಶಿವನಿಗೆ ಆಲದ ಮರವೇ ಆಲಯ!

ಪರಮೇಶ್ವರ ಸದಾ ವಿರಾಗಿ, ಅವನಿಗೆ ಯಾವವೈಭೋಗದ ಆಸೆ ಇರುವುದಿಲ್ಲ ಎನ್ನುವುದನ್ನುನಾವೆಲ್ಲ ಕೇಳಿದ್ದೇವೆ. ಅದಕ್ಕೆ ಉದಾಹರಣೆಎನ್ನುವಂತೆ ಇರುವ ಶಿವ ಸನ್ನಿಧಾನವೇತುಳುವೇಶ್ವರ.

ತುಳುವೇಶ್ವರ ದೇವಸ್ಥಾನ, ಬಸ್ರೂರು


ಸಾವಿರ ವರ್ಷದ ಇತಿಹಾಸವಿರುವ ತುಳುವೇಶ್ವರನ ವಿಶೇಷವೆದರೆ  ಶಿವಲಿಂಗಕ್ಕೆಆಲಯವೇ ಇಲ್ಲ, ಬದಲಿಗೆ ಆಲದ ಮರವೇ ಶಿಆಲಯವಾಗಿ ಲಿಂಗವನ್ನು ಮಳೆ, ಬಿಸಿಲಿನಿಂದರಕ್ಷಿಸುತ್ತಿದೆ.

ಉಡುಪಿ ಜಿಲ್ಲೆ ಪ್ರಮುಖ ತಾಲೂಕು ಕೇಂದ್ರಕುಂದಾಪುರದಿಂದ ಸುಮಾರು 6 ಕಿಮೀ ಇರುವಐತಿಹಾಸಿಕ ಗ್ರಾಮ ಬಸ್ರೂರ್ನಲ್ಲಿ  ತುಳುವೇಶ್ವರಸನ್ನಿಧಾನವಿದೆ. ತುಳುನಾಡು ಎಂದುಕರೆಯಲ್ಪಡುವ ಕಾಸಗೋಡಿನಿಂದಬೈಂದೂರಿನವರೆಗಿನ ಉದ್ದನೆ ಕಡಲ ಕಿನಾರೆಯಪ್ರದೇಶದ ತುಳು ಭಾಷಿಕರ ಅಧಿದೇವತೆ ತುಳುವೇಶ್ವರನಾಗಿದ್ದು ಪ್ರಕೃತಿ ಮತ್ತು ದೈವ ಶಕ್ತಿಯಸಂಗಮವಾಗಿ ಉಳಿದಿದೆ.

ಹಿಂದೆ ವಸುಪುರ ಎಂದು ಹೆಸರಾಗಿದ್ದ ಬಸ್ರೂರುವಿಜಯನಗರ ಮತ್ತು ಅದಕ್ಕೂ ಮುನ್ನಿನಕಾಲದಿಂಡ ವ್ಯಾಪಾರಿ ಕೇಂದ್ರವಾಗಿಪ್ರಸಿದ್ದಿಯಾಗಿತ್ತು. ಬಾರ್ಕೂರು ಸಂಸ್ಥಾನದಲ್ಲಿಪ್ರಮುಖ ವಾಣಿಜ್ಯ ನಗರವಾಗಿಗುರುತಿಸಿಕೊಂಡಿದ್ ಬಸ್ರೂರು ಇಂತಹಾಊರಿನಲ್ಲಿ ಪ್ರಸಿದ್ದ ಮಹಾಲಿಂಗೇಶ್ವರನಸನ್ನಿಧಾನವೂ ಇದ್ದು ಆಲಯವೇ ಇಲ್ಲದೆ ಮರದನಡುವೆಯೇ ಪೂಜಿಸಲ್ಪಡುವ  ತುಳುವೇಶ್ವರಶಿವಾಲಯದ ಬಗೆಗೆ ಇನ್ನೂ ಹೆಚ್ಚಿನವರಿಗೆಮಾಹಿತಿಯೇ ಇಲ್ಲ.

ಇನ್ನು ಶತ ಶತಮಾನಗಳಷ್ಟು ಹಿಂದೆ ತುಳುವೇಶ್ವರನಿಗೆ ದೇವಾಲಯವಿತ್ತು. ಆದರೆಕಾಲದ ಹೊಡೆತಕ್ಕೆ ಸಿಕ್ಕು ಸುಮಾರು 200ವರ್ಷಗಳ ಹಿಂದೆ  ಪುರಾತನ ದೇವಾಲಯಶಿಥಿಲವಾಗಿದೆ. ವಿಶೇಷವೆಂದರೆ ಅನೇಕ ವರ್ಷಗಳಹಿಂದೆ ದೇವಾಲಯದ ಗೋಡೆಯ ಬದಿ ಬೆಳೆದಆಲದ ಮರವೊಂದು ಇಂದಿಗೂ ಹಾಗೆಯೇ ಇದ್ದುಶಿವಲಿಂಗದ ಸುತ್ತ ರಕ್ಷಣಾ ಗೋಡೆಯಂತೆಆವರಿಸಿದೆ.  ಆಲದ ಮರಕ್ಕೆ ಸುಮಾರು 250 ವರ್ಷಗಳಾಗಿದೆ ಎಂದು ಅಂದಾಜಿಸಲಾಗಿದೆ.
ತುಳುವೇಶ್ವರ ಇತಿಹಾಸ ಕಾಲದಲ್ಲಿ ಸಾಕಷ್ಟು ಪ್ರಸಿದ್ದಿಹೊಂದಿದ್ದ ದೇವ ಸನ್ನಿಧಾನವಾಗಿತ್ತು ಎನ್ನಲುಶಾಸನಾಧಾರಗಳೂ ಇದೆ. ಕ್ರಿಶ 1401ರಲ್ಲಿಕೆತ್ತಿಸಲಾದ ಶಾಸನದಲ್ಲಿ ತುಳುವೇಶ್ವರ ದೇವರಿಗೆದಾನ ಕೊಟ್ಟಿರುವ ವಿಚಾರ ಬರುತ್ತದೆ, ಬಾರ್ಕೂರುರಾಜ್ಯಪಾಲ ಬಸವಣ್ಣ ಒಡೆಯನ ಆಳ್ವಿಕೆಯಲ್ಲಿಬಸ್ರೂರಿನ ಪಡುವನ ಕೇರಿಯ ಭೂ ಒಡೆತನಹೊಂದಿದ್ದ ಪ್ರತಿಷ್ಠಿತ ಮನೆತನದವಳಾದ ತುಳುವಕ್ಕಹೆಗ್ಗಡತಿ ತಾನು ನಿರ್ಮಿಸಿದ್ದ ಧರ್ಮಛತ್ರದ ವೆಚ್ಚಕ್ಕೆಬೇರೆ ಬೇರೆ ಕಡೆಗಳಲ್ಲಿದ್ದ ಅವಳ ಭೂಮಿಯಿಂದಬರುವ ಆದಾಯವನ್ನು ದತ್ತಿ ನೀಡಿದ್ದಳು. ಹಾಗೆದತ್ತಿ ನೀಡುವಾಗ ಆಕೆ ತುಳುವೇಶ್ವರ ದೇವರಿಗೆಮತ್ತು ಮುಳುಲದೇವಿಗೆ ನೀಡಿದ್ದ ದತ್ತಿ ವಿಚಾರ ಸಹಶಾಸನದಲ್ಲಿ ಪ್ರಸ್ತಾಪವಾಗಿದೆ.

 ಸ್ಥಳದಲ್ಲಿ ಶಿವನ ಆಲಯವಿತ್ತು ಎನ್ನಲು ಇನ್ನೂದಾಖಲೆಗಳೆಂಬಂತೆ ಶಿವನ ಎದುರಲ್ಲಿ ನಂದಿವಿಗ್ರಹವಿದೆ. ಅಲ್ಲದೆ ಮುರಕಲ್ಲಿನಲ್ಲಿ ಕಟ್ಟಿರುವಗೋಡೆ, ನಂದಿ ಮಂಟಪದ ಕುರುಹುಗಳು, ನೈವೇದ್ಯಶಾಲೆ ಅವಶೀಷಗಳು, ಸೇರಿ ಅನೇಕ ಪ್ರಾಚೀನದಾಖಲೆಗಳು ಇಲ್ಲಿ ಸಿಗುತ್ತದೆ. ನಂದಿ ವಿಗ್ರಹವುಅತ್ಯಂತ ಅಪರೂಪದ ಕೆತ್ತನೆಯಿಂದ ಕೂಡಿದ್ದುಏಕಶಿಲಾ ವಿಗ್ರಹವು ಪ್ರಾಚೀನ ಚರಿತ್ರೆಯ ಮೇಲೆಬೆಳಕು ಚೆಲ್ಲುತ್ತದೆ.
ಸುಮಾರು 60 ವರ್ಷಗಳಷ್ಟು ಹಿಂದೆನಿಧಿಯಾಸೆಗಾಗಿ  ನಂದಿ ವಿಗ್ರಹವನ್ನು ಕಬ್ಬಿಣದಸಲಾಕೆ ಬಳಸಿ ಪೀಠದಿಂದ ಬೇರ್ಪಡಿಸಲು ಯತ್ನನಡೆದಿತ್ತು. ಆದರೆ ಅದು ವಿಫಲವಾಗಿತ್ತು.ಅಂದಿನಿಂದಲೂ ನಂದಿಯ ಒಂದು ಭಾಗವಾಲಿಕೊಂಡಿರುವುದು, ಮೇಲಕ್ಕೆ ಎದ್ದಿರುವುದನ್ನುನಾವು ಕಾಣುತ್ತೇವೆ.
ಇಲ್ಲಿನ ಶಿವಲಿಂಗದ ಸುತ್ತಲೂ ಆಲದ ಮರದಬಿಳಲುಗಳೇ ರಕ್ಷಣಾ ಪೌಳಿಯಾಗಿದ್ದುದೇವಾಲಯದ ಪೂರ್ವ ದಿಕ್ಕಿನಿಂದ ಶಿವಲಿಂಗದಕಡೆಗೆ ಓರ್ವ ವ್ಯಕ್ತಿ ಪ್ರವೇಶಿಸುವಷ್ಟುಸ್ಥಳಾವಕಾಶವಿದೆ. ಪಾಣಿಪೀಠದ ಮೇಲಿರುವಶಿವಲಿಂಗವು ಎರಡೂವರೆ ಅಡಿ ಎತ್ತರವಿದೆ.

ಸುಮಾರು 150 ವರ್ಷಗಳ ಹಿಂದೆ ವಿಠಲ ಕಿಣಿಎನ್ನುವ ವೈಷ್ಣವ ಸಂಪ್ರದಾಯಸ್ಥ ಮನೆತನಕ್ಕೆಸೇರಿದ ವ್ಯಕ್ತಿ  ಶಿವಲಿಂಗವಿದ್ದ ಜಾಗವನ್ನುಖರೀದಿಸಿದ್ದರು. ಹಾಗೆ ಜಾಗ ಖರೀದಿಸುವಾಗಅವರಿಗೆ  ಸ್ಥಳದಲ್ಲಿ ಶಿವಲಿಂಗವಿದೆ ಎನ್ನ್ನುವವಿಚಾರ ಸಹ ತಿಳಿದಿರಲಿಲ್ಲ. ಆದರೆ ಎಂದು ಶಿವನಕಾರಣಿಕ ಶಕ್ತಿ ಗೋಚರವಾಯಿತೋ ಅಂದೇ ವಿಠಲಕಿಣಿ ತಾವು ಪ್ರತಿನಿತ್ಯ  ಪರಮೇಶ್ವರನಿಗೆ ನಿತ್ಯಪೂಜೆ ಸಲ್ಲಿಸಲು ಪ್ರಾರಂಭಿಸುತ್ತಾರೆ. ಅಂದಿನಿಂದಇಂದಿನವರೆಗೆ ವಿಠಲ ಕಿಣಿ ಮನೆತನದವರೇ ತುಳುವೇಶ್ವರನಿಗೆ ನಿತ್ಯ ನೈಮಿತ್ತಿಕ ಪೂಜೆ ಸಲ್ಲಿಸುತ್ತಾಬರುತ್ತಿದ್ದಾರೆ.

ಇನ್ನು ಈಗ ಶಿವನ ಪೂಜಾ ಕೈಂಕರ್ಯನಡೆಸುತ್ತಿರುವ ಕುಟುಂಬಕ್ಕೆ ಶಿವನ  ಪ್ರಾಚೀನಸನ್ನಿಧಾನವನ್ನು ಜೀರ್ಣೋದ್ದಾರ ಮಾಡಬೇಕೆಂದಬಯಕ ಇದೆ. ಆದರೆ ಹಲವು ಕಡೆ ಪ್ರಶ್ನೆ, ದರ್ಶನಾದಿಗಳನ್ನು ನಡೆಸಿ ಕೇಳಲಾಗಿ ದೇವಾಲಯ ಜೀರ್ಣೋದ್ದಾರಕ್ಕೆ ಇನ್ನೂ ಸಮಯಕೂಡಿ ಬಂದಿಲ್ಲ, ಯೋಗಿಯೊಬ್ಬರ ಮೂಲಕ ದೇವಾಲಯ ಪುನರ್ ಅಭಿವೃದ್ಧಿ ಹೊಂದಲಿದೆಎನ್ನುವ ಉತ್ತರ ದೊರಕಿದೆ.

ತುಳುನಾಡಿನ ಬೇರೆಲ್ಲಿಯೂ 'ತುಳುವೇಶ್ವರ' ಎನ್ನುವದೇವರ ಸನ್ನಿಧಾನವಿಲ್ಲ. ಹೀಗಾಗಿಕಾಸರಗೋಡಿನಿಂದ ಪ್ರಾರಂಭವಾಗಿ ಉಡುಪಿ ಜಿಲ್ಲೆಬೈಂದೂರಿನ ತನಕದ ತುಳು ಭಾಷಾ ಪ್ರಾಂತಕ್ಕೆ ಶಿವನು ಅಧಿದೇವತೆಯಾಗಿದ್ದಾನೆ ಎಂದು ಇಲ್ಲಿನಸ್ಥಳೀಯರು ಹೇಳುತ್ತಾರೆ. ಅಲ್ಲದೆ ಕಳೆದವರ್ಷಗಳಲ್ಲಿ ಬದಿಯಡ್ಕ, ಧರ್ಮಸ್ಥಳಗಳಲ್ಲಿನಡೆದಿದ್ದ ವಿಶ್ವ ತುಳು ಸಮ್ಮೇಳನಕ್ಕೆ ಇದೇಸನ್ನಿಧಾನದಲ್ಲಿ ಚಾಲನೆ ನೀಡಲಾಗಿತ್ತು

(ಈ ನನ್ನ ಲೇಖನ 'ಕನ್ನಡ ಪ್ರಭ ಡಾಟ್ ಕಾಂ'ನಲ್ಲಿ ದಿನಾಂಕ 02-07-2018ದಂದು ಪ್ರಕಟವಾಗಿತ್ತು - https://goo.gl/hMWttR)