Monday, January 18, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 66

ಶ್ರೀ ಮಲೆ ಮಹದೇಶ್ವರ (Male Mahadeshwara)
ಭಾಗ –4

 ಶ್ರೀ ಮಲೆ ಮಹದೇಶ್ವರ ಬೆಟ್ಟ.  ಕರ್ನಾಟಕದ ದಕ್ಷಿಣ ಭಾಗದ ಪೂರ್ವಘಟ್ಟಗಳ ಮಧ್ಯ ಪ್ರದೇಶದಲ್ಲಿನ, ಈಗಿನ ಚಾಮರಾಜನಗರ ಜಿಲ್ಲಾ, ಕೊಳ್ಳೇಗಾಲ ತಾಲ್ಲೋಕಿನಲ್ಲಿದ್ದು, ಅನೇಕ ಶತಮಾನಗಳಿಂದ ತನ್ನ ಮಹತ್ವವನ್ನು ಪಡೆದುಕೊಂಡು ಬಂದಿದೆಬೆಂಗಳೂರಿನಿಂದ 210  ಕಿ ಮೀ ದೂರ ದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ. ಬೆಟ್ಟಗಳಿಗೆ ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಇತರೆ ಹೆಸರುಗಳಿವೆ. ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳಇಲ್ಲಿನ ದೇವರನ್ನು "ಏಳು ಮಲೆ ಮಾದಪ್ಪ"ಎನ್ನುವುದು ಪ್ರಸಿದ್ದಿ. ಏಳು ಮಲೆಗಳು ಇವು- ಆನೆಮಲೆ, ಕಾನಮಲೆ, ಗುತ್ತಿಮಲೆ, ಜೇನುಮಲೆ, ಪಚ್ಚೆನೀಲಿಮಲೆ, ಮಂಜುಮಲೆ, ನಡುಮಲೆ ನಡುಮಲೆಯಲ್ಲಿಯೇ ಸ್ವಾಮಿಯ ದೇವಾಲಯವಿದೆ.
ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ. ಮಹದೇಶ್ವರರ ಬಗ್ಗೆ ನೂರಾರು ಜಾನಪದ ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾ ಪುರುಷ, ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಹದೇಶ್ವರರ ಜನ್ಮ ತಳೆದರೆಂಬ ಪ್ರತೀತಿ ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ ಕಾಲದ 1761 ಒಂದು ಶಾಸನದಲ್ಲಿ ಮಹದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ. ದೇವಸ್ಥಾನಕ್ಕೆಫೆಬ್ರವರಿ ತಿಂಗಳ ಮಹಾಶಿವರಾತ್ರಿ ಅಮವಾಸ್ಯೆಯಂದು ವಿಶೇಷ ಪೂಜೆಯು ನಡೆಯುತ್ತದೆ. ದಿನದಂದು ಲಕ್ಷಾಂತರ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.ಮಂಡ್ಯ,ಚಾಮರಾಜನಗರ,ಮೈಸೂರು,ಬೆಂಗಳೂರು, ಇತ್ಯಾದಿ ಜಿಲ್ಲೆಗಳ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.





***

ನಂತರ ಸ್ವಾಮಿ ಮಾದಪ್ಪ ತಾಳಬೆಟ್ಟಕ್ಕೆ ಬಂದರು. ಅಲ್ಲಿ ಮುಕ್ಕಡಲಿ ಮಾರಿಯನ್ನು ಭೇಟಿಯಾಗಿ ಅವಳಿಂದ ಶ್ರವಣಾಸುರನ ವಿಚಾರವನ್ನು ತಿಳಿದುಕೊಳ್ಳುತ್ತಾನೆ. ಅಲ್ಲಿಂದ ಬಿಳಿಗಿರಿ ರಂಗನಾಥನನ್ನು ದರ್ಶನ ಮಾಡಿಕೊಂಡು ಮುಂದೆ ನದಿಯ  ಸನಿಹದಲ್ಲಿ ಮಾರೀರೆಯರಿಗೆ ಹರಸಿ ಬಂಕಾಪುರಕ್ಕೆ ಆಗಮಿಸಿದನು. ಅಲ್ಲಿ ಶ್ರವಣಾಸುರನನ್ನು ಸಂಹರಿಸಿ ಶ್ರಾವಣ ಮಾಸದಲ್ಲಿ ನಿನಗೆ ಕಜ್ಜಾಯವನ್ನು ನೀಡುವ ವ್ಯವಸ್ಥೆ ನಾನು ಮಾಡಿಸುತ್ತೇನೆಂದು ಹರಸಿ ಸ್ವಾಮಿಯು ಮುಂದೆ ತವಸೆರೆ ಬೆಟ್ಟಕ್ಕೆ ಬಂದು ತಪಸ್ಸು ಮಾಡುತ್ತಾರೆ. ಅಲ್ಲಿ ಅವರಿಗೆ "ತವಸಾರಪ್ಪ" ಎಂದು ಹೆಸರಾಗುತ್ತದೆ. ಅಲ್ಲಿಂದ ನಂತರದಲ್ಲಿ ಸ್ವಾಮಿ ಮಾದಪ್ಪನು ಪಯಣಿಸಿ ಮಾರ್ಗದಲ್ಲಿ ಒಂದು ಕರಿ ಬಂಡೆಯ ಮೇಲೆ ಮಲಗಿ ಆಯಾಸ ಪರಿಹರಿಸಿಕೊಳ್ಳುತ್ತಿರಲು ಬಿಸಿಲು ಬೀಳುತ್ತಿದ್ದ ಸಮಯಕ್ಕೆ ಆನೆಗಳು ಅಲ್ಲಿಗೆ ಬಂದು ಸ್ವಾಮಿಗೆ ಎಳತಾದ ಸೊಪ್ಪಿನಿಂದ ನೆರಳನ್ನು ನೀಡುತ್ತಿವೆ. ಜತೆಗೆ ತಮ್ಮ ಸೊಂಡಿಲಿನಿಂದ ಸ್ವಾಮಿಗೆ ದಿಂಬನ್ನು ಮಾಡುತ್ತವೆ. ಆಗ ಮಾದಪ್ಪನು ಆನೆಗಳಿಗೆ ಮುಂದೆ ಸ್ಥಳವು "ಆನೆ ತಲೆ ದಿಂಬ" ಎಂದು ಹೆಸರಾಗಲಿ, ನಿಮ್ಮಗಳ ಸೇವೆಗಾಗಿ ಭೂಲೋಕದ ಜನರು ಗಜಗೌರಿ ವ್ರತವನ್ನು ಮಾಡಲಿ." ಎಂದು ಹರಸುತ್ತಾನೆ.
ಅಲ್ಲಿಂದ ಮಾದಪ್ಪನು ನಡುಮಲೆಗೆ ಬಂದು ಹನ್ನೆರಡು ವರ್ಷಗಳ ಕಾಲ ತಪಸ್ಸನ್ನಾಚರಿಸಿ ಸಿದ್ದಿಯನ್ನು ಪಡೆದುಕೊಂಡನು. ಮುಂದೆ ಆಲಂಬಾಡಿ ಚಿತ್ತೇಗೌಡರ ಹಸುಗಳನ್ನು ತನ್ನತ್ತ ಕರೆಸಿಕೊಂದನು. ಆಗ ತನ್ನ ಲೀಲೆಯಿಂದ ಚಿಂಜೇಗೌಡನಿಂದ ಹದಿನಾರಂಕಣದ ಗುಡಿಯನ್ನು ಕಟ್ಟಿಸಿಕೊಂಡನು. ನಂತರದಲ್ಲಿ ಶಾಂತ ಮಲ್ಲಿಕಾರ್ಜುನ ಸ್ವಾಮಿಯವರಿಂದ ಬೇಡ ಕಂಬಳಕ್ಕೆ ನೂರೊಂದು ವಕ್ಕಲನ್ನು ಮಾಡಿಕೊಂಡನು.  ಅವರೆಲ್ಲರಿಗೂ ಲಿಂಗಧಾರಣೆಯನ್ನು ಮಾಡಿಸಿದ. ಅವಲರೆಲ್ಲರೂ ಮಾದಪ್ಪನ ಬಳಿಯೇ ಉಳಿದರು. ಅವರೆಲ್ಲರೂ ಸೇರಿ ಅಲ್ಲೊಂದು ಊರನ್ನು ಕಟ್ಟಿ ಅದಕ್ಕೆ "ದೇವರ ಹಳ್ಳಿ" ಎಂದು ನಾಮಕರಣ ಮಾಡಿದರು. ಬಳಿಕ ಶಾಂತವೀರ ಸ್ವಾಮಿಗಳು ತಾವು ತಪವನ್ನಾಚರಿಸಿ ಲಿಂಗೈಕ್ಯರಾದರು. ಸ್ಥಳವೇ ಇಂದು " ಸಾಲೂರು  ಮಠ" ಎಂದು ಕರೆಯಲ್ಪಟ್ಟು ಪ್ರತಿದಿನವೂ ಸಾವಿರಾರು ಜಂಗಮರು ಆಗಮಿಸುವ ಯಾತ್ರಾ ಸ್ಥಳವಾಗಿದೆ.

ಮುಂದೆ ಕಾವೇರಿ ನದಿ ತಿರುಗುವ ಎಡಯಲ್ಲಿ ಮಾದಪ್ಪನು ತಪವನಾಚರಿಸುತ್ತಿರಲು ಅಲ್ಲಿಗೆ ಗಂಗಾಧರ (ಹಿಂದೆ ಹಾವಾಗಲೆಂದು ಶಾಪ ಹೊಂದಿದ ಮಾಂತ್ರಿಕ) ಆಗಮಿಸಿ ಸ್ವಾಮಿಯಲ್ಲಿ ಪ್ರಾಯಶ್ಚಿತ್ತಕ್ಕಾಗಿ ಕ್ಷಮೆ ಯಾಚಿಸುತ್ತಾನೆ. ಆಗ ಮಾದಪ್ಪನು "ಅಯ್ಯಾ ಮುಂದೆ ಕಲಿಯುಗದಲ್ಲಿ ನೀನಿಲ್ಲಿ ಕಲ್ಲಾಗಿತು, ನಾನು ಲಿಂಗರೂಪಿಯಾಗಿರುತ್ತೇನೆ. ನನ್ನ ಭಕ್ತಗಣಗಳಿಗೆ ರಕ್ಷಕನಾಗಿದ್ದು ನನ್ನ ಸೇವೆಯಲ್ಲಿ ಭಾಗಿಯಾಗು. ನೀನಿರುವ ಸ್ಥಳವು "ನಾಗಮಲೆ"ೆಂದು ಹೆಸರಾಗಲಿ."ಎಂದು ಆಶೀರ್ವದಿಸುತ್ತಾನೆ. ಮುಂದೆ ಮಾದಪ್ಪನು ನಡುಮಲೆಗೆ ಬಂದು ನಾನಾರಿಂದ ಪೂಜೆಗೊಳ್ಳಬೇಕೆನ್ನುವುದನ್ನು ನಿರ್ಧರಿಸುತ್ತಿದ್ದಾನೆ.
ಬೇಡ ಕಂಪಣವೆನ್ನುವಲ್ಲಿ ಮಾದಪ್ಪನ ಅನುಗ್ರಹವಿರುವ ಓರ್ವ ಹೆಣ್ಣು ಮಗಳು ಹುಟ್ಟಿರುತ್ತಾಳೆ. ಅವಳ ಹೆಸರು ಸಂಕಮ್ಮ, ಆಕೆ ಮಾದೇಶ್ವರನ ಪರಮ ಭಕ್ತಳಾಗಿ ಬೆಳೆದು ಒಡ್ದವಳಾಗಿದ್ದಾಳೆ. ವಳಿಗೆ ದೇವಗಾರ ನೀಲಯ್ಯನೊಡನೆ ವಿವಾಹವಾಗುತ್ತದೆ. ನೀಲಯ್ಯನು ಸಂಕಮ್ಮನ ಮನೆಯಲ್ಲಿ ಹನ್ನೆರಡು ವರ್ಷಗಳ ಕಾಲ ಇದ್ದನು. ಆಗ ಅವನ ದಾಯಾದಿಗಳು ಸುಮ್ಮನಾಗಿರಲಿಲ್ಲ. ಅವರೆಲ್ಲರೂ ನೀಲಯ್ಯನನ್ನು ಕೊಂಕು ಮಾತುಗಳಿಂದ ಚುಚ್ಚುತ್ತಲೂ, ಅಪಹಾಸ್ಯವನ್ನು ಮಾಡುತ್ತಲೂ ಇದ್ದರು. ಆಗ ನೀಲಯ್ಯನು ತಕ್ಷಣವೇ ತನ್ನ ಪತ್ನಿಯೊಂದಿಗೆ ಒಂದು ತಿಂಗಳಿಗಾಗುವಷ್ಟು ಸಾಮಾನನ್ನು ತೆಗೆದುಕೊಂಡು   ಮನೆ ತೊರೆಯುತ್ತಾನೆ.


ಅಲ್ಲಿಂದ ಅಲರುಗಳು ಬಹುದೂರ ನಡೆದು ಒಂದು ಗವಿಯಲ್ಲಿ ವಾಸಕ್ಕೆ ನಿಲ್ಲುತ್ತಾರೆ. ಸಂಕಮ್ಮ ಆ ಗವಿಯಲ್ಲಿ ವಾಸ ಮಾಡಿದ್ದಕ್ಕಾಗಿ ಆ ಪ್ರದೇಶವನ್ನಿಂದು "ಸಂಕಮಲೆ" ಎಂದು ಕರೆಯಲಾಗುತ್ತದೆ. ಅಲ್ಲಿ ಅವರು ವಾಸ ಮಾಡುತ್ತಿರಲು ಅವರು ಮನೆಯಿಂದ ತಂದಿದ್ದ ಸಾಮಾನುಗಳು ಖಾಲಿಯಾಗುತ್ತದೆ. ಆಗ ನೀಲಯ್ಯನು ನಾನಿನ್ನು ಬೇಟೆಯಾಡಲು ಹೊರಡಬೇಕಾಗಿದೆ ಎಂದು ತೀರ್ಮಾನಿಸಿದ. ಹೋಗಿ ಬರಲು ಒಟ್ಟೂ ಒಂಭತ್ತು ದಿನಗಳಾಗುತ್ತವೆ. ಅಷ್ಟರವರೆಗೂ ಈ ಸುಕುಮಾರಿ ಒಬ್ಬಳೇ ಇರಬೇಕು. ಅವಳಾನ್ನಾರಾದರೂ ಹಾರಿಸಿಕೊಂಡು ಹೋದರೆ ಏನುಗತಿ ಎಂದು ತರ್ಕಿಸಿ ಅವಳನ್ನು ಕರೆದು ಅವಳ ಸೀರೆ, ಕುಪ್ಪಸವನ್ನೆಲ್ಲಾ ಬಿಚ್ಚಲು ಹೇಳಿ ಅವಳಿಗೆ ತೇಗದೆಲೆಗಳನ್ನು ತೊಡಿಸಿದ. ಬಾಯಿ ತೆರೆಯಲು ಹೇಳಿ ಮಾತನಾಡಲೂ ಆಗದಂತೆ ನೆಗ್ಗಿಲ ಮುಳ್ಳನ್ನು ಚುಚ್ಚಿದನು. ಮತ್ತು ಕೈ ಕಾಲುಗಳನ್ನು ಸರಪಣಿಗಳಿಂದ ಬಂಧಿಸಿ ಗವಿಯ ಬಾಯಿಗೆ ಬಂಡೆಯನ್ನು ತುರುಕಿ ತಾನು ಕಾಡಿನೊಳಗಡೆ ನಡೆದನು. ಮೂರು ದಿನಗಳು ಕಳೆಯಿತು. ಆ ಸಂಕವ್ವೆ ತಾನು ಉಪವಾಸವಿದ್ದಳು. ಮೈಮೇಲಿನ ಎಲೆಗಳು ಒಣಗಿವೆ. ಗೆದ್ದಿಲುಗಳು ತಿಂದು ಹಾಕಿದ ಪರಿಣಾಮ ಬರಿ ಮೈನಲ್ಲಿ ಮಲಗಿದ್ದಳೆ. ಆಗ ಅಲ್ಲಿದ್ದ ಕಟ್ಟಿರುವೆಗಳು ಅವಳ ಮೈಯನ್ನು ಮುತ್ತುತ್ತವೆ. ಕಚ್ಚುತ್ತವೆ. ಆಗ ನೋವು ತಾಳಲಾರದೆ, ಹಸಿವು , ನೀರಡಿಕೆಗಳನ್ನು ತಾಳಲಾರದೆ ಮಾಯಕಾರ ಮಾದಪ್ಪನನ್ನು ಬೇಡಿಕೊಳ್ಳುತ್ತಾಳೆ. ಆಗ ಮಾದಪ್ಪ ತಪಸ್ಸಿನಲ್ಲಿ ನಿರತನಾದವನು ಎಚ್ಚೆತ್ತು ಬೇಡರ ಕನ್ನಯ್ಯನಿಗೆ ತನ್ನ ಹುಲಿಯನ್ನು ತಯಾರು ಮಾಡೆಂದು ಅಪ್ಪಣೆ ಕೊಡಿಸಿ ಅವಳನ್ನು ರಕ್ಷಿಸಲು ಹೊರಡುತ್ತಾನೆ. ಹಾಗೆ ಬಂದ ಮಾದಪ್ಪನು ಗವಿಯ ಬಾಯಿಯ ಬಂಡೆಯನ್ನು ಸರಿಸಿ ಒಳಬಂದು ವಿಭೂತಿಯನ್ನು ಮಂತ್ರಿಸಿ ಅವಳಿಗೆ ಕೊಟ್ತನು. ತಕ್ಷಣವೇ ಅವಳ ಕಷ್ತಗಳೆಲ್ಲ ನೀಗಿದವು. ಅವಳಿದ್ದ ಗವಿಯು ಅರಮನೆಯಾಯಿತು. ತೊಟ್ಟಿದ್ದ ಸೊಪ್ಪಿನ ಉಡುಗೆ ರೇಶಿಮೆಯ ಸೀರೆಯಾಯಿತು. ಮನೆಯ ಹೊರಗೆ ಚಿನ್ನದ ಕಂಸಾಳೆಗಳ ನಾದ ಪ್ರರಂಭವಾಗಿ ಮಾದಪ್ಪನ ಆಗಮನವನ್ನು ಸಾರುತ್ತಿದ್ದವು. ಆಗ ಸಂಕವ್ವೆಯು ತಾನು ಮುತ್ತು ರತ್ನಗಳನ್ನು ತಂದು ಮಾದಪ್ಪನ ಪಾದಕ್ಕೆ ಸಮರ್ಪಿಸಿದಳು. ಆನಂದದಿಂದ ಆರತಿ ಎತ್ತಿ ಸಂಭ್ರಮಿಸಿದಳು. ಆಗ ಮಾದಪ್ಪನು "ತಾಯೀ, ನಿನಗೆ ಮಕ್ಕಳಿದ್ದಾರೆಯೇ?" ಎಂದು ಕೇಳಲು "ಅಯ್ಯಾ ಮಾದಪ್ಪ ಮದುವೆಯಾಗಿ ಒಂಭತ್ತು ವರ್ಷಗಳಾದವು. ಮಕ್ಕಳಾಗಿಲ್ಲ." ಎನ್ನಲು ಮಾದಪ್ಪನು ಬಂಜೆಯಾದವಳ ಬಳಿ ಭಿಕ್ಷೆ ಸ್ವೀಕರಿಸಲಾರೆ ಎನ್ನುತ್ತಾನೆ. ಆಗ ಸಂಕವ್ವೆ ನನ್ನ ಮನೆ ದೇವರಾದ ನೀನೇ ಹಾಗೆಂದರೆ ನನ್ನ ಗತಿಯೇನು ಎಂದು ವಿಲಾಪಿಸುತ್ತಾಳೆ. ಆಗ ಮಾದೇಶನು "ನಿನಗೆ ಮಕ್ಕಳ ಭಾಗ್ಯವನ್ನು ಕರುಣಿಸುತ್ತೇನೆ, ಆದರೆ ಗಂಡು ಮಗುವಾದರೆ ಗುಡ್ದದವನನ್ನಾಗಿಯೂ, ಹೆಣ್ಣಾದರೆ ಗುಡ್ಡಿಅನ್ನಾಗಿಯೂ ಬಿಡಬೇಕು. ಸಮ್ಮತವೆ?" ಎಂದು ಕೇಳಲು ಸಂಕವ್ವೆ ಸಂತೋಷದಿಂದ ಒಪ್ಪಿಕೊಳ್ಳುತ್ತಾಳೆ.
ಮಾದಪ್ಪನು ಅನುಗ್ರಹಿಸಿ ಹೊರಡುತ್ತಾನೆ. ಆಗ ಅದೇ ಸಮಯಕ್ಕೆ ಬೇಟೆಗೆ ಹೋಗಿದ್ದ ಅವಳ ಪತಿ ನೀಲಯ್ಯನು ಆಗಮಿಸುತ್ತಾನೆ. ಗುಹೆಯ ಬದಲಾಗಿ ಮನೆಯನ್ನು ಕಂಡು, ಅವಳ ಅಲಂಕಾರವನ್ನು ಕಂಡು ಕುಪಿತಗೊಂಡು, ಇವಳು ಯಾರನ್ನೋ ಮಾಡಿಕೊಂಡಿದ್ದಾಳೆ ಎಂದು ಶಂಕಿಸಿ ಅವಳನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಮಾಯಕಾರ ಮಾದೇಶನು ಅವಳ ತದ್ರೂಪವನ್ನು ಒಂದು ಮರದ ಕೊಂಬೆಯಿಂದ ನಿರ್ಮಿಸಿರುತ್ತಾನೆ ಮತ್ತು ನೀಲಯ್ಯ ಅದನ್ನೇ ತನ್ನ ಪತ್ನಿಯೆಂದು ಭಾವಿಸಿ ಕಡಿದು ಹಾಕುತ್ತಾನೆ. ಆಗ ಆ ಶಬ್ದದಿಂದ ಕುಪಿತಗೊಂಡ ಸಂಕವ್ವೆ ಹೊರ ಬಂದು ನೋಡಲು ನೀಲಯ್ಯನು "ಎಲೆ ಹೆಣ್ಣೆ ಏನು ಮಾಡುತ್ತಿರುವೆ? ನಾನು ಬೇಟೆಗೆ ಹೋದ ಬಳಿಕ ಯಾರೊಡನೆ ವಾಸಿಸುತ್ತಿದ್ದೆ?" ಎಂದು ಕೇಳಲು :ಶಿವ ಶಿವಾ! ನಾನೇನೂ ತಪ್ಪು ಮಾಡಿಲ್ಲಸ್ವಾಮಿ.ನಮ್ಮ ಮನೆ ದೇವರಾದ ಮಾಯಕಾರ ಮಾದಪ್ಪನ ಕೃಪೆ ಇದು."ಎನ್ನಲು ಅವನು ನಂಅದೆ ಅವಳನ್ನು ನಡುಮನೆಗೆ ಕರೆದು ಕುದಿವ ಎಣ್ಣೆ ಬಾಣಲೆಯಲ್ಲಿ ಕುಳ್ಳಿರಲು ಹೇಳಿದ ಅವಳು ಮಾದಪ್ಪನನ್ನು ನೆನೆದು ಕುಳಿತಿರಲು ಆ ಎಣ್ಣೆಯೂ ತಣ್ಣನೆಯ ನೀರಾಯಿತು. ಅವನಾಗ ಇವಳಾರೋ ಮಂತ್ರ್ವಾದಿಯನ್ನೇ ವರಿಸಿದ್ದಾಳೆಂದು ನಂಬಿ ಮೂರು ಖಂಡುಗ ಎಳ್ಳು, ರಾಗಿ ಹಾಗೂ ನವಣೆಯನ್ನು ಮಿಶ್ರ ಮಾಡಿ ಅವಳನ್ನು ಕರೆದು "ನೋದು ರಾತ್ರಿ ಬೆಳಗಾಗುವುದರೊಳಗೆ ಈ ಮೂರೂ ಧಾನ್ಯಗಳು ಬೇರೆ ಬೇರೆಯಾಗಿರಬೇಕು. ಇಲ್ಲವಾದರೆ ನಿನ್ನ ತಲೆಯನ್ನು ಆಹುತಿ ತೆಗೆದುಕೊಳ್ಳುತ್ತೇನೆ." ಎನ್ನುತ್ತಾನೆ. ಮಾಯಕಾರ ಮಾದಪ್ಪನ ಸಹಾಯದಿಂದ ರಾತ್ರಿ ಬೆಳಗಾಗುವುದರಲ್ಲಿ ಆ ಧಾನ್ಯಗಳೂ ಬೇರೆ ಬೇರೆಯಾಗಿದ್ದವು , ಆದರೆ ನೀಲಯ್ಯ ಇನ್ನೂ ತನ್ನ ಪತ್ನಿಯನ್ನು ನಂಬಲು ತಯಾರಿರಲಿಲ್ಲ.
ಕಡೆಗೆ ಕೆಂದದ ರಾಶಿಯ ಮೇಲೆ ಮೂರು ಬೊಗಸೆ ಕೆಂದವನ್ನು ಉಡಿಯಲ್ಲಿರುವಂತೆ ನಡೆಯಲು ಸಂಕಮ್ಮನಿಗೆ ಹೇಳಲು ಅವಳು ಹಾಗೆಯೇ ಮಾಡುತ್ತಾಳೆ. ಆಗ ಅವನು ತನ್ನ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟು ಮಾದೇಶನ ಒಕ್ಕಲಾಗಿ ಬಾಳಲು ಸಮ್ಮತಿಸಿ ಬಾಳುತ್ತಾನೆ. ಮುಂದೆ ಅವರಿಗೆ ಆವಳಿ ಜವಳಿ ಮಕ್ಕಳಾಗುತ್ತಾರೆ. ಅವರಿಬ್ಬರನ್ನೂ ಚೆನ್ನಾಗಿ ಬೆಳೆಸಿದ ನೀಲಯ್ಯ-ಸಂಕಮ್ಮ ದಂಪತಿಗಳು ಆ ಮಕ್ಕಳನ್ನು ಮಠಕ್ಕೆ ನೀಡುತ್ತಾರೆ. ಮಠದಲ್ಲಿ ಅವರಿಗೆ "ಕಾರಯ್ಯ" ಹಾಗೂ "ಬಿಲ್ಲಯ್ಯ"ಎಂದು ನಾಮಕರಣ ಮಾಡುತ್ತಾರೆ. ಕಾರಯ್ಯನಿಗೆ ಮಂತ್ರ, ತಂತ್ರಗಳನ್ನು ಕಲಿಸಿ ಪರಿಶೆ ಜನರನ್ನು ನೋಡಿಕೊಳ್ಳಲಿಕ್ಕಾಗಿ ನೇಮಿಸಿದ ಮಾದಪ್ಪನು ಬೀರಯ್ಯನಿಗೆ ಅನುಸಾಲಮ್ಮನನ್ನು ತಂದು ಮದುವೆ ಮಾಡಿಸುತ್ತಾನೆ. ಆ ದಂಪತಿಗಳಿಗೆ ಶೇಶಣ್ಣನೆನ್ನುವ ಗಂಡು ಮಗು ಜನ್ಮಿಸುತ್ತದೆ.
ಅವನಿಗೆ ಮಠಕ್ಕೆ ಬಂದ ಜನಗಳನ್ನು ಕಾಯುವ ಕೆಲಸ ಹಚ್ಚಲಾಯಿತು. ಆ ಶೇಶಣ್ಣನೂ ದೊಡ್ದವನಾದನು. ಆಗ ಮಾದಪ್ಪ " ಶೇಶಣ್ಣ ನೀನು ದೀಕ್ಷೆ ತೆಗೆದುಕೊಂಡು ನಾಲ್ಕಾರು ಮನೆಯಿಂದ ಭಿಕ್ಷೆ ಎತ್ತಿ ಗುಡ್ದರನ್ನು ಸಲಹುವಂತವನಾಗು." ಎಂದಾಗ ಾವನು ಅದಕ್ಕೆ ಒಪ್ಪಿಕೊಳ್ಳುವುದಿಲ್ಲ. ಆಗ ಮಾದಪ್ಪ ತಾನು ಮಂತ್ರದಿಂದ ದನಗಳ ಹಟ್ಟಿಯಲ್ಲಿ ಒಂದು ಹುಲಿಯನ್ನು ಸೃಷ್ಟಿಸುತ್ತಾನೆ. ಮರುದಿನ ಯಥಾಪ್ರಕಾರ ಶೇಶಣ್ಣ ಕೊಳಲನೂದಲು ದನಗಳೆಲ್ಲವೂ ಎದ್ದು ಮೇಯಲು ಹೊರ ಹೋಗುತ್ತವೆ. ಆದರೆಆ ಒಂದು ಹುಲಿ ಮಲಗಿರುತ್ತದೆ. ಆಗ ಶೇಶಣ್ಣ ಅದೂ ಸಹ ದನವೆಂದೇ ಭಾವಿಸಿ ದೊಣ್ಣೆಯಿಂದ ಬೀಸಿ ಹೊಡೆಯುತ್ತಾನೆ. ಆಗ ಒಂದೇ ನೆಗೆತದಲ್ಲಿ ಎದ್ದ ಆ ಭಯಂಕರ ವ್ಯಾಘ್ರವು ಶೇಶಣ್ಣನ ಮೇಲೆರಗಿ ಅವನ ಹೊಟ್ಟೆಯನ್ನೇ ಬಗೆದು ಹಾಕುತ್ತದೆ.
ಶೇಶಣ್ಣ್ ಸತ್ತು ಮಲಗಿರಲು ತಾಯಿ ಅನುಸಾಲಮ್ಮ ನನ್ನ ಮಗನನ್ನು ಹುಡುಕುತ್ತಾ ಬರುತ್ತಾಳೆ. ಆಗ ತೊಟ್ಟಿಯಲ್ಲಿ ಸತ್ತು ಬಿದ್ದ ಶೇಶಣ್ಣನನ್ನು ಕಂಡು ಗಾಬರಿಯಿಂದ ತನ್ನ ಪತಿ ಬಿಲ್ಲಯ್ಯನಿಗೆ ಸುದ್ದಿ ತಿಳಿಸಲು ಬಿಲ್ಲಯ್ಯನು ಮಾದಪ್ಪನ ಬಳಿ ಸಾರಿ ತನ್ನ ಮಗನನ್ನು ಉಳಿಸಿ ಕೊಡುವಂತೆ ಕೇಳುತ್ತಾನೆ. ಆಗ ಮಾದಪ್ಪ "ನಿನ್ನೆಗೆ ಅವನ ಆಯಸ್ಸು ತೀರಿದೆ. ಚಿಂತೆ ಬೇಡ ಅವನಿಗೆ ನಾನು ಹನ್ನೆರಡು ವರ್ಷಗಳಿಗೊಮ್ಮೆ ಜಾತ್ರೆ ಮಾಡಿಸುತ್ತೇನೆ. ಹಸಿ ಬತ್ತ, ಹಸಿ ಕೊಂಡದಿಂದ ಜಾತ್ರೆ ಮಾಡಿಸುತ್ತೇನೆ. ಇವನನ್ನು ಕರೆದುಕೊಂಡು ಹೋಗಿ ಅಂತರಗಂಗೆ ಹತ್ತಿರ ನಿಕ್ಷೇಪವನ್ನು ಮಾಡಿರಿ. ಎಂದು ಅಪ್ಪಣೆ ಮಾಡಲು ದಂಪತಿಗಳು ಹಾಗೆಯೇ ಮಾಡಿದರು.
ನಂತರದಲ್ಲಿ ಆ ದಂಪತಿಗಳಿಗೆ ಕಾಳ ಮಾದ ಒಡೆಯರು, ಬೋಳಮಾದ ಒಡೆಯರು, ಕೆಂಪಮಾದ ಒಡೆಯರು ಎನ್ನುವ ಮೂವರು ಮಕ್ಕಳಾದರು. ಅವರ ವಂಶದವರೇ ಈಗ ನಾಲ್ಕು ನಾಲ್ಕು ತಿಂಗಳಿಗೆ ಸೇವೆ ಮಾಡಿಕೊಂಡು ಬರುತ್ತಿದ್ದಾರೆ,
ಹೀಗೆ ತಮಡಿಗಳನ್ನು ಪಡೆದ ನಂತರ ಅಲ್ಲಿನ ನೇರಳೆಕೆರೆ ಎನ್ನುವ ಜಾಗದಲ್ಲಿ ಪಟಗಾರ ರಾಯಣ್ಣ ನಾಯಕನೆನ್ನುವನಿದ್ದ. ಅವನನ್ನು ಓಕುಳಿ ಸೇವೆಗೆ ಕತೃವಾಗಿಸಿಕೊಳ್ಳುತ್ತಾರೆ. ಹೀಗೆ ಆನಂದದಿಂದ ಸ್ವಾಮಿಯು ನಡುಮಲೆಯಲ್ಲಿ ನೆಲೆಸಿರಲು ಅದೊಮ್ಮೆ ಸರಗೂರಿನ ಮೂಗಪ್ಪ ಹಾಗೂ ರಾಮವ್ವೆ ಬರುತ್ತಾರೆ. ಹಾಗೆ ಬಂದ ಮೂಗಪ್ಪ,"ತಂದೆ ನನಗೆ ವಯಸ್ಸಾಗಿದೆ. ನಾನು ಬೆಟ್ಟವನ್ನೇರಲುಸಾಧ್ಯವಿಲ್ಲವಲ್ಲ." ಎಂದಾಗ ಮಾದಪ್ಪನು ಅವರಿಗೊಂದು ಲಿಂಗವನ್ನು ನೀಡಿ "ಇದನ್ನು ನಿನ್ನ ಊರಾದ ಸರಗೂರಿನಲ್ಲಿ ಪ್ರತಿಷ್ಠೆ ಮಾಡು. ಯಾರಿಗೆ ನನ್ನ ಏಳು ಮಲೆ ಬೆಟ್ಟವನ್ನೇರಲು ಸಾಧ್ಯವಿಲ್ಲವೋ ಅಂತಹವರು ಸರಗೂರಿಗೆ ಬಂದು  ದರ್ಶನ ಮಾಡಿದರೆ ನನಗೆ ಸಂತೋಷವಾಗುತ್ತದೆ" ಎಂದು ಅಭಯ ನೀಡುತ್ತಾರೆ. ಆಗ ರಾಮವ್ವೆ "ಸ್ವಾಮಿ ನಮ್ಮ ವಂಶದಲ್ಲಿ ಯಾರೇ ಎಣ್ಣೆ ಮಜ್ಜನ ಮಾಡಿಸಿದರೂ ಅವರಿಗೆ ದರ್ಶನ ನೀಡುವಂತೆ ಪ್ರಾರ್ಥಿಸಿಕೊಳ್ಳುತ್ತಾಳೆ. ಸ್ವಾಮಿಯು ಅದಕ್ಕೆ ಸಮ್ಮತಿಸಿ ಅನುಗ್ರಹಿಸುತ್ತಾನೆ.
ಹೀಗೆ ಸ್ವಾಮಿಯು ದಿನ ದಿನಕ್ಕೆ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರಲು ಒಂದು ಮಹಾ ಶಿವರಾತ್ರಿಯ ದಿನ ಹಾಲಂಬಾಡಿ ಜುಂಜೇಗೌಡರು ಕಟ್ಟಿಸಿಕೊಟ್ಟ ಗುಡಿಯ ಒಳಗೆ ಲಿಂಗರೂಪಿಯಾಗಿ ನೆಲೆಸುತ್ತಾರೆ. ಅಲ್ಲಿಂದ ಇಂದಿನವರೆಗೂ ಲಕ್ಷಂತರ ಭಕ್ತರಿಗೆ ಮಾದಪ್ಪನು ಅಭಯವನ್ನಿತ್ತು ಆಶೀರ್ವಾದ, ಸಕಲಯ್ಶ್ವರ್ಯ, ಸಿರಿ ಸಂಪತ್ತನ್ನು ಕರುಣಿಸುತ್ತಾ ಬರುತ್ತಿದ್ದಾನೆ. 

"ಏಳು ಮಲೆ, ಎಪ್ಪತ್ತೇಳು ಮಲೆ ಮಾಯಕಾರ ಮಾದಪ್ಪನಿಗೆ ಉಘೇ.... ಉಘೇ....!!"

Saturday, January 16, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 65

ಶ್ರೀ ಮಲೆ ಮಹದೇಶ್ವರ (Male Mahadeshwara)
ಭಾಗ – 3

 ಶ್ರೀ ಮಲೆ ಮಹದೇಶ್ವರ ಬೆಟ್ಟ.  ಕರ್ನಾಟಕದ ದಕ್ಷಿಣ ಭಾಗದ ಪೂರ್ವಘಟ್ಟಗಳ ಮಧ್ಯ ಪ್ರದೇಶದಲ್ಲಿನ, ಈಗಿನ ಚಾಮರಾಜನಗರ ಜಿಲ್ಲಾ, ಕೊಳ್ಳೇಗಾಲ ತಾಲ್ಲೋಕಿನಲ್ಲಿದ್ದು, ಅನೇಕ ಶತಮಾನಗಳಿಂದ ತನ್ನ ಮಹತ್ವವನ್ನು ಪಡೆದುಕೊಂಡು ಬಂದಿದೆಬೆಂಗಳೂರಿನಿಂದ 210  ಕಿ ಮೀ ದೂರ ದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ. ಬೆಟ್ಟಗಳಿಗೆ ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಇತರೆ ಹೆಸರುಗಳಿವೆ. ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳಇಲ್ಲಿನ ದೇವರನ್ನು "ಏಳು ಮಲೆ ಮಾದಪ್ಪ"ಎನ್ನುವುದು ಪ್ರಸಿದ್ದಿ. ಏಳು ಮಲೆಗಳು ಇವು- ಆನೆಮಲೆ, ಕಾನಮಲೆ, ಗುತ್ತಿಮಲೆ, ಜೇನುಮಲೆ, ಪಚ್ಚೆನೀಲಿಮಲೆ, ಮಂಜುಮಲೆ, ನಡುಮಲೆ ನಡುಮಲೆಯಲ್ಲಿಯೇ ಸ್ವಾಮಿಯ ದೇವಾಲಯವಿದೆ.




ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ. ಮಹದೇಶ್ವರರ ಬಗ್ಗೆ ನೂರಾರು ಜಾನಪದ ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾ ಪುರುಷ, ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಹದೇಶ್ವರರ ಜನ್ಮ ತಳೆದರೆಂಬ ಪ್ರತೀತಿ ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ ಕಾಲದ 1761 ಒಂದು ಶಾಸನದಲ್ಲಿ ಮಹದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ. ದೇವಸ್ಥಾನಕ್ಕೆಫೆಬ್ರವರಿ ತಿಂಗಳ ಮಹಾಶಿವರಾತ್ರಿ ಅಮವಾಸ್ಯೆಯಂದು ವಿಶೇಷ ಪೂಜೆಯು ನಡೆಯುತ್ತದೆ. ದಿನದಂದು ಲಕ್ಷಾಂತರ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.ಮಂಡ್ಯ,ಚಾಮರಾಜನಗರ,ಮೈಸೂರು,ಬೆಂಗಳೂರು, ಇತ್ಯಾದಿ ಜಿಲ್ಲೆಗಳ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.

***
ಅಂದು ಸಂಜೆ ಮಾದಪ್ಪನನ್ನು ಕರೆದ ಗುರುಗಳು ಶಿವಪೂಜೆಗಾಗಿ ಮಲ್ಲಿಗೆ ಹೂವನ್ನು ತರಲು ಹೇಳುತ್ತಾರೆ. ಆಗ ಮಾದಪ್ಪ ತಾನು ಬೆಟ್ಟದಿಂದಿಳಿದು ಎಂದಿನಂತೆಯೇ ಗೊದ್ದ ಗೋಸುಂಬೆಗಳನ್ನೂ, ಹೆಂಡ ಗೊಜ್ಜಿಗಳನ್ನೂ ಕರೆದು ತನ್ನ ನಾಗಬೆತ್ತದಿಂದ ಹೊಡೆದು ಚೀಲದಲ್ಲಿ ತುಂಬಿಕೊಂಡು ಕೊಳದತ್ತ ಬಂದು ಅವನ್ನು ಕೊಳದಲ್ಲಿ ಅದ್ದಲು ಅವೆಲ್ಲವೂ ದುಂಡುಮಲ್ಲಿಗೆ ಹೂವುಗಳಾಗಿ ಪರಿವರ್ತನೆಗೊಂಡವು. ಅದನ್ನು ಕಂಡ ಗುರುಗಳು ಮಾದಪ್ಪನನ್ನು ಬಾಚಿ ತಬ್ಬಿಕೊಂಡು "ನೀನು ಸಾಮಾನ್ಯನಲ್ಲ, ನಿಜವಾಗಿಯೂ ಪರಮೇಶ್ವರನ ಅಂಶವಾಗಿದ್ದಿ. ನಿನ್ನನ್ನು ಇಂದಿನಿಂದ ನನ್ನ ಶಿಷ್ಯ ಕೋಟಿಗಳೆಲ್ಲರೂ ಪೂಜಿಸಲಿ, ಆಪೂಜೆ ನನ್ನಿಂದಲೇ ಪ್ರಾರಂಭವಾಗಲಿ." ಎಂದಾಗ ಸ್ವಾಮಿಯು "ನಿಮ್ಮನ್ನು ನಾನು ಗುರುವಾಗಿ ಸ್ವೀಕರಿಸುವುದರಿಂದ ನಾನು ಇಲ್ಲಿ ನಿಮ್ಮೊಡನೆ ಪೂಜೆಗೊಳ್ಳುವುದು ಸರಿಯಲ್ಲ. ನಾನೆಲ್ಲಿ ನೆಲೆಸುತ್ತೇನೋ ಅಲ್ಲಿಗೆ ನಿಮ್ಮ ಶಿಷ್ಯರಿಂದ ಪಾದೋದಕವನ್ನು ಕಳಿಸಿಕೊಡಿ ಎನ್ನುವುದಾಗಿ ಹೇಳಿ ಅಲ್ಲಿಂದ ಮುಂದೆ ಸಾಗುತ್ತಾನೆ.ಶಾಂತವೀರ ಮಹಾಸ್ವಾಮಿಗಳ ಗುಹೆಗೆ ಆಗಮಿಸುತ್ತಾರೆ.
ಅದೇ ಸಮಯದಲ್ಲಿ ನಂಜನಗೂಡಿನ ಹತ್ತಿರದ ಹದಿನಾರೆನ್ನುವ ಹಳ್ಳಿಯಲ್ಲಿ ಸಿದ್ದನಂಜರಾಜ ಒಡೆಯನೆನ್ನುವನಿದ್ದನು. ಅವನು ಪಾಳೇಗಾರನಾಗಿದ್ದು ತಾನು ಮೂರು ಸಾವಿರ ಜನರ ದಂಡನ್ನು ತೆಗೆದುಕೊಂಡು ತಲಕಾಡು ಹಾಗೂ ಕೊಳ್ಳೆಗಾಲದ ಬಳಿಯ ಹರದಹಳ್ಳಿಯ ಪಾಳೇಗಾರರನ್ನು ಭೇಟಿಯಾಗಲು ಹೊರಟಿದ್ದನು. ಅದಾಗ ಮಾರ್ಗಮದ್ಯೆ ಅವನ ಪಡೆಯವರಿಗೆ ನೀರಡಿಕೆಯಾಗಲು ಅಲ್ಲಿನ ಕೆಲವು ಮಂದಿ ಶಾಂತವೀರರ ಗವಿಯತ್ತ ಬಂದು ನೀರಿಗಾಗಿ ಕೇಳಿದರು. ಆಗ ಅಲ್ಲಿದ್ದ ಮಾದೇವನು ತಾನು ಒಟ್ಟೂ ಮೂರು ಸಾವಿರ ಮಂದಿಗೂ ತೃಪ್ತಿಯಾಗುವಂತೆ ನೀರನ್ನು ಹಂಚಿದನು. ಅದನ್ನು ಕಂಡ ಪಾಳೇಗಾರನು "ಸ್ವಾಮಿ, ಶರಣ ಜಂಗಮರ ಶಕ್ತಿಯನ್ನು ನಾನಿಂದು ಅರಿತೆನು, ನನಗೂ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ." ಎಂದು ಅಂಗಲಾಚಿದನು. ಆಗ ಮಾದಪ್ಪ "ನೀನು ಸೇವೆ  ನೀಡುವುದಾದರೆ ಇಲ್ಲಿ ಕಾಣುತ್ತಿದೆಯಲ್ಲ ಕುಂತೂರು, ಆ ಸ್ಥಳದಲ್ಲಿ ನಮ್ಮ ಗುರುಗಳ ಹೆಸರಲ್ಲಿ ಒಂದು ಕಲ್ಮಠವನ್ನು ಕಟ್ಟಿಸಿ ಕೊಡು." ಎನ್ನಲು ಪಾಳೇಗಾರನು ಸಂತೋಷದಿಂದ "ನಾನು ಹರದಹಳ್ಳಿಯಿಂದ ವಾಪಾಸಾದ ಬಳಿಕ ಕಟ್ಟಿಸಿಕೊಡುತ್ತೇನೆ." ಎಂದು ಭಾಷೆ ನೀಡಿದನು.

ಅದಾಗ ಗುರುಗಳು "ಮಾಯಕಾರ ಮಾದಪ್ಪ, ನೀನು ಕೇವಲ ಒಂದು ಸೋರೆ ಬುರುಡೆಯಷ್ಟು ನೀರಿನಿಂದ ಇಷ್ಟು ಜನರನ್ನೂ ಸಲಹಿದೆ. ನಿಜಕ್ಕೂ ನೀನು ದೊಡ್ದವನು, ನಾನು ನಿನ್ನ ಸೇವೆ ಮಾಡಬೇಕು. ನಿನ್ನ ಸೇವೆ ನಾವಝೊಂದುವುದಲ್ಲ." ಎನ್ನಲು ಮಾದಪ್ಪನು "ಗುರುಗಳೇ ಹಾಗಾದಲ್ಲಿ ನಾನೆಲ್ಲಿ ನೆಲೆಗೊಳ್ಳುವೆನೋ ಅಲ್ಲಿಗೆ ನೀವು ದಯಮಾಡಿಸಿ ಲಿಂಗಧಾರಣೇಯನ್ನು ಮಾಡಿಕೊಳ್ಳಬೇಕು" ಎಂದು ಆದೇಶಿಸಿ ತಾನು ಮೂಡಲ ದಿಕ್ಕಿನೆಡೆಗೆ ಹೊರಟನು.
ಹಾಗೆ ಮುಂದೆ ಸಾಗುತ್ತಾ ಕನಕಗಿರಿಗೆ ಮಾದಪ್ಪನು ಬರಲು ಅಲ್ಲಿ ಅವನಿಗೆ ಶಿವ ಪಾರ್ವತಿಯರು ದರ್ಶನ ನೀಡಿ ಶೂಲಾಯುಧವನ್ನು ಕರುಣಿಸುತ್ತಾರೆ. ಹಾಗೆ ಕರುಣಿಸಿದ ಶೂಲಾಯುಧವನ್ನು ಅಲ್ಲಿಗೆ ಸನಿಹದಲ್ಲಿದ್ದ ಬಂಕಾಪುರಿ ಪಟ್ಟಣಕ್ಕೆ ಹಾಗೆ ಮುಂದೆ ಸಾಗುತ್ತಾ ಕನಕಗಿರಿಗೆ ಮಾದಪ್ಪನು ಬರಲು ಅಲ್ಲಿ ಅವನಿಗೆ ಶಿವ ಪಾರ್ವತಿಯರು ದರ್ಶನ ನೀಡಿ ಶೂಲಾಯುಧವನ್ನು ಕರುಣಿಸುತ್ತಾರೆ. ಹಾಗೆ ಕರುಣಿಸಿದ ಶೂಲಾಯುಧವನ್ನು ಅಲ್ಲಿಗೆ ಸನಿಹದಲ್ಲಿದ್ದ ಬಂಕಾಪುರಿ ಪಟ್ಟಣಕ್ಕೆ  ಹೋಗಿ ಅಲ್ಲಿರುವ ದುಷ್ಟ ಶ್ರಮಣಾಸುರನನ್ನು ಸಂಹರಿಸಿ ಬಳಿಕ ಏಳು ಮಲೆಯನ್ನು ನಿನ್ನ ತಪೋಭೂಇಯಾಗಿಸಿಕೊಂಡು ಮಲೆ ಮಾದೇಶ್ವರ ಎನ್ನುವ ಹೆಸರಿನಿಂದ ಪ್ರಖ್ಯಾತನಾಗಿ ಸಾವಿರಾರು ಭಕ್ತರಿಂದ ಪೂಜೆಗೊಳ್ಳು. ಎಂದು ಹರಸಿ ನೀಡುತ್ತಾರೆ.
ಸ್ವಾಮಿಯು ಪರಮೇಶ್ವರನ ಆಶೀರ್ವಾದ ಪಡೆದು ಸಿಂಗಾನಲ್ಲೂರಿಗೆ ಆಗಮಿಸುತ್ತಾರೆ. ಅಲ್ಲಿ ಊರ ಹೊರಗಿನ ತೋಪಿನಲ್ಲಿ ಧ್ಯಾನದಲ್ಲಿ ಕುಳಿತಿರಲು ಶಾಂತವೀರ ಸ್ವಾಮಿಗಳ ಗವಿಯಲ್ಲಿದ್ದ ಬಸವನು ತನ್ನ ಸ್ವಾಮಿಯನ್ನು ಹುಡುಕುತ್ತಾ ಗುರುಗಳ ಆದೇಶದಂತೆ ಸಿಂಗನಲ್ಲೂರಿಗೆ ಸ್ವಾಮಿಯಿದ್ದೆಡೆಗೆ ಬಂದು ಸ್ವಾಮಿಯನ್ನು ಹಿಂತಿರುಗಿ ಬರುವಂತೆ ಬೇಡಿಕೊಳ್ಳುತ್ತದೆ. ಆಗ ಸ್ವಾಮಿ ಮಾದಪ್ಪನು "ನಾನಿಟ್ಟ ಹೆಜ್ಜೆಯನ್ನು ಹಿಂದಿದಲಾರೆ. ನೀನು ನನ್ನನ್ನು ಇಲ್ಲಿ ಬಂದು ನನ್ನನ್ನು ಅಡ್ದಗಟ್ಟಿದ ಕುರುಹಾಗಿ ನೀನು ಇಲ್ಲಿಯೇ "ಕಟ್ಟೆ ಬಸವ" ಎನ್ನುವ ಹೆಸರಿನಿಂದ ನೆಲೆಸು. ನನ್ನ ಭಕ್ತರು ನನ್ನ ದರ್ಶನಕ್ಕೆ ಬರುವ ಮುನ್ನ ನಿನ್ನ ದರ್ಶನ ಮಾಡಿ, ಧೂಪ ಸೇವೆಯನ್ನಿತ್ತು ಬರಲಿ." ಎಂದು ಆಶೀರ್ವದಿಸುತ್ತಾನೆ. ಅಲ್ಲಿಂದ ಆ ಬಸವಣ್ಣನು ಸಿಂಗಾನಲ್ಲೂರಿನ ಕಲ್ಲು ಬಸವ ಎಂದು ಖ್ಯಾತಿ ಹೊಂದುತ್ತದೆ.
ಅಲ್ಲಿಂದ ಮಾದಪ್ಪನು ತಲ್ಗುಣಿ ಹೊಸೂರಿಗೆ ಆಗಮಿಸುತ್ತಾನೆ. ಅಲ್ಲಿ ಗಂಗಾಧರನೆನ್ನುವ ಮಂತ್ರವಾದಿಯು ಇದ್ದನು. ಅಲ್ಲಿ ಅವನು ಜನಗಳಿಗೆಲ್ಲಾ ಬಹಳ ಹಿಂಸ್ ನೀಡುತ್ತಿದ್ದ. ತಾನು ದಾರಿಯಲ್ಲಿ ಬರುವಾಗ ಯಾರು ಸಿಕ್ಕಿದರೂ ತನ್ನ ಕಾಲಿಗೆ ಅಡ್ದಬಿದ್ದು ಮುಂದುವರಿಯಬೇಕೆನ್ನುವುದು ಅವನ ಅಪ್ಪಣೆಯಾಗಿತ್ತು. ಹೀಗಿರಲು ಸ್ವಾಮಿಯು ಹುಲಿವಾಹನನಾಗಿ ಬರುತ್ತಿರಲು ಗಂಗಾಧರನು ಎದುರಿಗೆ ಸಿಕ್ಕಿದ. "ಎಲಾ ಕಾವಿ ಬಟ್ಟೆಯ ಸನ್ಯಾಸಿ, ನನ್ನ ಕಾಲಿಗೆ ಅಡ್ದಾಗು." ಎನಲು ಮಾದಪ್ಪನು, "ಗಂಗಾಧರ, ನಿನ್ನ ವಿದ್ಯೆಯನ್ನು ಜನರ ಉದ್ದಾರಕ್ಕೆ ಬಳಸಿದರೆ ನಿನಗೆ ಸದ್ಗತಿ ಸಿಗುವುದು." ಎಂದು ಉಪದೇಶಿಸಲು ಅದರಿಂದ ಕೆರಳಿದ ಗಂಗಾಧರ ಸ್ವಾಮಿಯು ಹಾವಾಗುವಂತೆ ಶಾಪ ನೀಡಲು ಮುಂದಾದ. ಆಗ ಸ್ವಾಮಿಯು ನೀನೇ ಹಾವಿನ ಜನ್ಮ ಹೊಂದೆಂದಾಗ ಗಂಗಾಧರನು ಹಾವಾಗಿ ಕಾಡಿನೊಳಗೆ ಹೊರಟು ಹೋದನು. ನಂತರ ಸ್ವಾಮಿಯು ಅಲ್ಲಿನ ಜನಗಳಿಗೆ ಅಭಯವನ್ನು ಕರುಣಿಸಿ ಮುಂದೆ ಸಾಗುತ್ತಾರೆ.
ಮುಂದೆ ಸ್ವಾಮಿಯು ಕಾಮಗೆರೆ (ಕಾಮತಟಾಕಪುರಿ) ಮಾರ್ಗವಾಗಿ ಹನೂರಿಗೆ ಆಗಮಿಸಿದನು. ಅಲ್ಲಿಂದ ಈಶಾನ್ಯ ದಿಕ್ಕಿನಲ್ಲಿ ಪಯಣಿಸಿ ಹನುಮಕಣಿವೆ ಎನ್ನುವುದಾಗಿ ಹನುಮಂತ ತಪಸ್ಸನ್ನಾಚರಿಸಿದ, ಸ್ವಾಮಿಯನ್ನು ಸಂಧಿಸಿದ ಸ್ಥಳವನ್ನು ಹಾಯ್ದು  ಮೂಡಲಗಿರಿಯತ್ತ ನಡೆಯುತ್ತಾರೆ. ಅಲ್ಲಿಂದ ಒಡೆಕೆ ಹಳ್ಳ ಎಂದು ಕರೆಯುವ ಪ್ರದೇಶದಿಂದ ಮಾದಪ್ಪನು ಮುಂದೆ ಸಾಗಿದ್ದಾನೆ.

ಅಲ್ಲಿನ ಬೇವಿನ ಹಟ್ಟಿ ಎನ್ನುವ ಜಾಗದಲ್ಲಿ ಹದಿನಾಲ್ಕು ಮನೆಗಳನ್ನು ಕೇವಲ ಬೇವಿಝಟ್ಟಿಯಿಂದ ಕಟ್ಟಲಾಗಿತ್ತು. ಅಲ್ಲಿ ವಾಸವಿದ್ದ ಕೆಂದ ಗೌಡ ಹಾಗೂ ಕಾಳಮ್ಮ ದಂಪತಿಗಳಿಗೆ ಏಳು ಮಂದಿ ಮಕ್ಕಳು. ಅವರಿಗೆ ಆಲಂಬಾಡಿಯಿಂದ ತಂದ ಏಳುಮಂದಿ ಹೆಣ್ಣುಮಕ್ಕಳೊಡನೆ ಲಗ್ನವಾಗಿರುತ್ತದೆ. ಅವರಿಗೆ ಮೂವತ್ತಮೂರು ಮಂದಿ ಮಕ್ಕಳು. ಅವರು ತನ್ನ ಮನೆಯ ಸುತ್ತ ಬೇಲಿ ಹಾಕಿಕೊಂಡು ಯಾವ ಜಂಗಮರಿಗೂ ಒಂದು ಕಾಳನ್ನೂ ದಾನ ಮಾಡದಂತೆ ಕಾಳಮ್ಮನು ದವಸ ಧಾನ್ಯಗಳನ್ನು ಬೆಳೆದು ಕಾಯುತ್ತಿದ್ದಳು. ಅ<ತಹಾ ಕಾಳಮ್ಮನ ಮನೆಗೆ ಮಾಯಕಾರ ಮಾದಪ್ಪ ಆಗಮಿಸಿದನು. ಹಾಗೆ ಬಂದು ಕಾಳಮ್ಮನ ಬಳಿ ಒಂದು ಹಿಡಿ ಎಳ್ಲಿಗಾಗಿ ಬೇಡಲು ಕಾಳಮ್ಮ ಎಳ್ಳು ದಾನ ನೀದಲು ನಿರಾಕರಿಸುತ್ತಾಳೆ. ಅದಾಗ ಮಾದಪ್ಪ ಒಂದು ವಿಭೂತಿ ಉಂಡೆಯನ್ನು ಮಂತ್ರಿಸಿ ಆ ಎಳ್ಳಿನ ರಾಶಿಯ ಮೇಲಿಟ್ತಾಗ ಎಳ್ಳೆಲ್ಲವೂ ಮರಳಾಗಿರುತ್ತದೆ!. ಆಗ ಪುನಃ ಒಂದು ಹಿಡು ಮರಳನ್ನಾದರೂ ದಾನ ನೀಡು ಎಂದಾಗಲೂ ಕಾಳಮ್ಮ ದಾನ ನೀಡುವುದಿಲ್ಲ. ಆಗ ಸ್ವಾಮಿಗೆ ಕೋಪ ಬಂದು "ಎಲೆ ಬೇವಿನ ಕಾಳಿ, ನಿನ್ನ ಈ ಶ್ರೀಮಂತಿಕೆ ತುಂಬಿದ ಮನೆ ಸುಟ್ಟು ಬೂದಿಯಾಗಲಿ! ನೀನು ಕಲ್ಲಾಗಿ ಹೋಗು!!" ಎಂದು ಶಪಿಸುತ್ತಾರೆ. ಅದರಂತೆ ಬೇವಿನ ಕಾಳಿ ಇಂದಿಗೂ ಕಲ್ಲಾಗಿ ಅಲ್ಲಿ ಕುಳಿತಿದ್ದಾಳೆ. 

Wednesday, January 06, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 64

ಶ್ರೀ ಮಲೆ ಮಹದೇಶ್ವರ (Male Mahadeshwara)
ಭಾಗ -2

 ಶ್ರೀ ಮಲೆ ಮಹದೇಶ್ವರ ಬೆಟ್ಟ.  ಕರ್ನಾಟಕದ ದಕ್ಷಿಣ ಭಾಗದ ಪೂರ್ವಘಟ್ಟಗಳ ಮಧ್ಯ ಪ್ರದೇಶದಲ್ಲಿನ, ಈಗಿನ ಚಾಮರಾಜನಗರ ಜಿಲ್ಲಾ, ಕೊಳ್ಳೇಗಾಲ ತಾಲ್ಲೋಕಿನಲ್ಲಿದ್ದು, ಅನೇಕ ಶತಮಾನಗಳಿಂದ ತನ್ನ ಮಹತ್ವವನ್ನು ಪಡೆದುಕೊಂಡು ಬಂದಿದೆಬೆಂಗಳೂರಿನಿಂದ 210  ಕಿ ಮೀ ದೂರ ದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ. ಬೆಟ್ಟಗಳಿಗೆ ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಇತರೆ ಹೆಸರುಗಳಿವೆ. ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳಇಲ್ಲಿನ ದೇವರನ್ನು "ಏಳು ಮಲೆ ಮಾದಪ್ಪ"ಎನ್ನುವುದು ಪ್ರಸಿದ್ದಿ. ಏಳು ಮಲೆಗಳು ಇವು- ಆನೆಮಲೆ, ಕಾನಮಲೆ, ಗುತ್ತಿಮಲೆ, ಜೇನುಮಲೆ, ಪಚ್ಚೆನೀಲಿಮಲೆ, ಮಂಜುಮಲೆ, ನಡುಮಲೆ ನಡುಮಲೆಯಲ್ಲಿಯೇ ಸ್ವಾಮ್ಯ ದೇವಾಲಯವಿದೆ.
ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ. ಮಹದೇಶ್ವರರ ಬಗ್ಗೆ ನೂರಾರು ಜಾನಪದ ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾ ಪುರುಷ, ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಹದೇಶ್ವರರ ಜನ್ಮ ತಳೆದರೆಂಬ ಪ್ರತೀತಿ ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ ಕಾಲದ 1761 ಒಂದು ಶಾಸನದಲ್ಲಿ ಮಹದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ. ದೇವಸ್ಥಾನಕ್ಕೆಫೆಬ್ರವರಿ ತಿಂಗಳ ಮಹಾಶಿವರಾತ್ರಿ ಅಮವಾಸ್ಯೆಯಂದು ವಿಶೇಷ ಪೂಜೆಯು ನಡೆಯುತ್ತದೆ. ದಿನದಂದು ಲಕ್ಷಾಂತರ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.ಮಂಡ್ಯ,ಚಾಮರಾಜನಗರ,ಮೈಸೂರು,ಬೆಂಗಳೂರು, ಇತ್ಯಾದಿ ಜಿಲ್ಲೆಗಳ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.


***

ಅದೊಂದು ದಿನ ಹಲಗೆ ಗೌಡರು ಸ್ವಾಮಿಗೆ ಪೂಜೆ ಸಲ್ಲಿಸಿ ಜಗುಲಿಯ ಮೇಲೆ ಮೈಮರೆತು ಮಲಗಿರಲು ಅದಾಗ ಮಾದಪ್ಪ ಅವರ ಕನಸಿನಲಿ ಬಂದು ಹೀಗೆ ಆದೇಶಿಸುತ್ತಾನೆ- "ಅಯ್ಯಝಲಗೆ ಗೌಡ ನಾನಿನ್ನು ನಿಮ್ಮ ಮನೆಯಲ್ಲಿರಲಾರೆ. ನಿಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಲಕ್ಕಿ ಮರಗಳಿಂದ ಆವರಿಸಿರುವ ತೋಪಿನಲ್ಲಿ ಒಂದು ಗವಿ ಇದೆ. ಅಲ್ಲಿ ನಾನು ಲಿಂಗ ರೂಪದಲ್ಲಿರುತ್ತೇನೆ. ನಿಮ್ಮ ಮನೆಯ ಹಸುವೊಂದು ಅಲ್ಲಿಗೆ ಬಂದು ಹಾಲನ್ನು ಕರೆಯುತ್ತಿರುತ್ತದೆ, ಅದೇ ಗುರುತಾಗಿ ಭಾವಿಸಿ ನೀನು ಅಲ್ಲಿಗೆ ಬಂದು ಪ್ರತಿದಿನವೂ ನನ್ನನ್ನು ಪೂಜಿಸುತ್ತಾ ಬಂದೆ ಎಂದರೆ ನಾನು ಒಪ್ಪಿಕೊಳ್ಳುವೆನು." ಇಷ್ಟು ಹೇಳಿ ಸ್ವಾಮಿ ಮರೆಯಾಗುತ್ತಾನೆ. ಮರುದಿನ ಇವರ ಮನೆಯಲ್ಲಿ ಲಿಂಗವಿರುವುದಿಲ್ಲ. ಅದಾದ ಕೆಲ ದಿನಗಳ ಬಳಿಕ ಇವರ ಹಸುವು ಹಾಲು ಕರೆಯುವ ಸ್ಥಳಾವನ್ನು ಪತ್ತೆ ಹಚ್ಚಿ ಅಲ್ಲಿನ ಲಕ್ಕಿ ಮರಗಳ ಪೊದೆಗಳನ್ನು ಸವರಿ ಗುಹೆಯನ್ನೇ ದೇವರ ಗುಡಿಯಾಗಿ ಪರಿವರ್ತಿಸುತ್ತಾರೆ. ಇಂದು ಅದೇ ದೇವಾಲಯವನ್ನು ಬ್ಯಾಲಗುಪ್ಪೆ ಮಾದೇಶ್ವರ ಗುಡಿಯೆಂದು ಹೆಸರಿನಲ್ಲಿ ಕರೆದು ಸಾವಿರಾರು ಭಕ್ತಾದಿಗಳು ಮಾದಪ್ಪನಿಗೆ ಸೇವೆ ಸಲ್ಲಿಸುತ್ತಾರೆ.

***



ಅಲ್ಲಿಂದ ಮುಂದೆ ಮಾದಪ್ಪ ನಂಜನಗೂಡಿಗೆ ಬಂದು ನಂಜುಂಡನ ದರ್ಶನ ಮಾಡಿದ್ದಾರೆ. ಬಳಿಕ ಹತ್ತಿರದ ಮಠ ಮಾನ್ಯಗಳಾನ್ನು ಬವಿಚಾರಿಸಿ ಸುತ್ತೂರಿಗೆ ಪಯಣಿಸುತ್ತಾರೆ. ಅಲ್ಲಿ ಸಿದ್ದನಂದ ದೇಶಿಕೇಂದ್ರರ ಬಳಿಗೆ ಬರುತ್ತಾರೆ. ಶ್ರೀಗಳು ಸ್ನಾನಾದಿಗಳನ್ನು ಮುಗಿಸಿ ನದಿ ದಂಡೆಯ ಮೇಲೆ ಬರುತ್ತಿರಲು ಮಾದಪ್ಪನು ನೇರಳೆ ಮರದ ಮೇಲೆ ಕುಳಿತು ಹಣ್ಣನ್ನು ತಿನ್ನುತ್ತಲಿದ್ದನು. ಅದಾಗ ಶ್ರೀಗಳು "ನಾವು ಮದುಕರು, ನಮಗೆ ಮರ ಹತ್ತಲಾಗದು. ಹಣ್ಣನ್ನು ಉದುರಿಸಿಕೊಡುವೆಯಾ?" ಕೇಳಲು ಮಾದಪ್ಪ ಹಣ್ಣುಗಳನ್ನು ಉದುರಿಸಿದನು. ಅದರ ಮೇಲಿನ ಧೂಳನ್ನು ಕೊಡವಿಕೊಂಡು ಶ್ರೀಗಳು ತಿನ್ನುತ್ತಿರಲು "ಶ್ರೀಗಳೇ, ಹಣ್ಣು ಬಿಸಿಯಾಗಿಲ್ಲ. ತಣ್ಣಗಿವೆ, ನಿಧಾನವಾಗಿ ತಿನ್ನಿರಿ." ಎನ್ನುತ್ತಾನೆ. ಆಗ ಶ್ರೀಗಳಿಗೆ ಈತ ನಮ್ಮವನಲ್ಲ ಎನ್ನುವುದ ತಿಳಿದು ಮರದಿಂದ ಕೆಳಗಿಳಿದು ಬರಲು ಹೇಳುತ್ತಾರೆ. ಹಾಗೆ ಮರದಿಂದ ಇಳಿದ ಸ್ವಾಮಿ ಮಾದೇವನು "ತಾನು ಉತ್ತರ ದೇಶದವನು ಶಿವ ಶರಣರ ಸಂದೇಶವನ್ನು ಕೇಳಲಾಗಿ ಬಂದಿದ್ದೇನೆ, ನಾನು ವ್ಯಾಘ್ರಾನಂದ ಮಹಾಸ್ವಾಮಿಗಳ ಶಿಷ್ಯನೆಂದು ಪರಿಚಯಿಸಿಕೊಳ್ಳುತ್ತಾನೆ.ಅವನನ್ನು ಸ್ವಾಮಿಗಳು ತಮ್ಮೊಂದಿಗೆ ಮಠಕ್ಕೆ ಕರೆದೊಯ್ಯುತ್ತಾರೆ.
ಅಲ್ಲಿ ಮಾದಪ್ಪನು ತಾನು ಪವಾಡ ಶಕ್ತಿಯಿಂದ ಹಲವಾರು ಜನಗಳಕಷ್ಟವನ್ನು ಪರಿಹರಿಸುತ್ತಾ ದಿನಗಳನ್ನು ಕಳೆಯುತ್ತಿರಲು ಅದೊಂದು ದಿನ ಸ್ವಾಮಿಗಳು, "ಮಾದಪ್ಪಾ, ನಿನ್ನ ಪವಾದ ಶಕ್ತಿಯಿಂದ ಜನಗಳ ಕಷ್ಟ್ ಪರಿಹಾರವಾಗುತ್ತದೆ. ಆದರೆ ನಮ್ಮ ಶರಣ ಧರ್ಮ ಅದನ್ನು ಒಪ್ಪಆರದು ಜನರು ಆತ್ಮಾವಲಂಬಿಗಳಾಗಬೇಕು. ಶ್ರಮಪಟ್ಟು ದುಡಿಯಬೇಕು, ಆಗಲೇ ಶಿವತತ್ವವು ಬೇಳಗುವುದು." ಎನ್ನಲು ಮಾದಪ್ಪ ತನಗೊಂದು ಕೆಲಸ ನೀಡುವಂತೆ ಕೇಳುತ್ತಾನೆ. ಗುರುಗಳು ಅವನನ್ನು ರಾಗಿ ಬೀಸುವ ಕಲ್ಲಿನ ಬಳಿ ಕರೆದೊಯ್ಯುತ್ತಾರೆ. "ರಾಗಿ ಬೀಸಿ ಅದ್ರಿಂದ ಹಿಟ್ಟನ್ನು ಮಾಡು. ಜನರು ಹೊಟ್ಟೆ ತುಂಬಿಸಿದ ಪುಣ್ಯ ನಿನ್ನದಾಗುತ್ತದೆ." ಎಂದು ಗುರುಗಳು ಅಪ್ಪಣೆ ಕೊಡಿಸಲು ಮಾದಪ್ಪನು ನಸುನಕ್ಕು ತಾನು ಯೋಗ ಮುದ್ರೆಯಲ್ಲಿ ಕುಳಿತನು. ತಕ್ಷಣದಿಂದ ರಾಗಿ ಬೀಸುವ ಕಲ್ಲು ತಾನಾಗಿ ಬೀಸಿತು. ರಾಗಿಯು ಹಿಟ್ಟಾಯಿತು. ಇದು ಹಗಲು, ರಾತ್ರಿಗಳವರೆಗೂ ನಡೆಯಿತು.
ಅದಾಗ ಬೆಳಗಿನ ಜಾವದಲ್ಲಿಯೂ ರಾಗಿ ಕಲ್ಲಿನ ಶಬ್ದ ಕೇಳಿದ ಗುರುಗಳು ನೋಡಲು ಬಂದು ಮಾದಪ್ಪನ ಚಮತ್ಕಾರಕ್ಕೆ ಅಚ್ಚರಿಗೊಂದರು. ಅಬ್ಬಾ! ಇಂತಹಾ ಪುಣ್ಯಾತ್ಮ ನಮ್ಮ ಮಠದಲ್ಲಿರುವುದೇ ನನಗೆ ಸೌಭಾಗ್ಯವೆಂದುಕೊಂಡರು. ಅಂದು ಬೆಳೆಗ್ಗೆ ಮಾದಪ್ಪನು ಗುರುಗಳ ಬಳಿಗೆ ಬಂದು ಗುರುಗಳೇ, ಲೌಕಿಕ ದೃಷ್ಟಿಯಿಂದ ನಾನಿನ್ನೂ ಜಂಗಮ ಸ್ಥಳ ದೀಕ್ಷೆಯನ್ನು ಪಡೆದಿಲ್ಲ. ತಾವದನ್ನು ನನಗೆ ಅನುಗ್ರಹಿಸಿ." ಎಂದು ಕೇಳಲು ಗುರುಗಳು, "ಅಪ್ಪಾ ಮಹಾನುಭಾವ, ಲೋಕಪಾವನಾದ ಜಂಗಮ ನೀನು. ಇಲ್ಲಿಗೆ ಸಮೀಪದಲ್ಲಿ ಕೊಳ್ಳೆಗಾಲವೆಂಬ ಪರಮ ದಿವ್ಯ ಕ್ಷೇತ್ರವಿದೆ, ಅಲ್ಲಿಗೆ ಸಮೀಪದ ಕಾವೇರಿ ನದಿಯ ದಡದಲ್ಲಿ ಪ್ರಭುದೇವರ ಬೆಟ್ಟವಿದೆ. ಅಲ್ಲಿ ಪ್ರಭುದೇವ ಸ್ವಾಮಿಗಳೆಂಬ ದಿವ್ಯ ಗುರುಗಳಿದ್ದಾರೆ. ಅವರ ಬಳಿ ಹೋಗಿ ನಾನು ಕಳಿಸಿದ್ದಾಗಿ ತಿಳಿಸು." ಎಂದಾಗ ಮಾದಪ್ಪ ಸುತ್ತೂರು ಸ್ವಾಮಿಗಳಿಗೆ ವಂದಿಸಿ ಪ್ರಭುದೇವರ ಬೆಟ್ಟದತ್ತ ಪ್ರಯಾಣ ಮುಂದುವರಿಸಿದ್ದಾರೆ.
ಪ್ರಭುದೇವರ ಬೆಟ್ಟಕ್ಕೆ ಬಂದು ಅಲ್ಲಿ ಗುರುಗಳಿಗೆ ನಮಿಸಿ ತನ್ನ ಇತಿ ವೃತ್ತಗಳನ್ನು ತಿಳಿಸಿದಾಗ ಸ್ವಾಮಿಗಳು, "ನಿನ್ನಂತಹಾ ಮಾಹಾಪುರುಷನಿಗೆ ಜಂಗಮ ಸ್ಥಳ ದೀಕ್ಷೆಯ ಅವಷ್ಯಕತೆ ಇಲ್ಲವಾದರೂ ಲೌಕಿಕ ದೃಷ್ಟಿಯಿಂದ ನಾನು ನಿಮಿತ್ತ ಮಾತ್ರವಾಗಿ ನಿನಗದನ್ನು ಅನುಗ್ರಹಿಸುತ್ತೇನೆ." ಎಂದು ಶಂತ ಮಲ್ಲಿಕಾರ್ಜುನ ಸ್ವಾಮಿಗಳನ್ನು ಕರೆಸಿ ಶಾಸ್ತ್ರೋಕ್ತವಾಗಿ ವಿರಕ್ತ ಜಂಗಮ ಪಟ್ಟ ದೀಕ್ಷೆಯನ್ನು ಅನುಗಶಿಸುತ್ತಾರೆ.
ಹಾಗೆ ದೀಕ್ಷೆ ತೆಗೆದುಕೊಂದ ಮಾದಪ್ಪ ಅಲ್ಲಿ ಗುರುಗಳ ಆಶೀರ್ವಾದ ಪಡೆದು ನಾಗಬೆತ್ತ ಹಿಡಿದು ಕಲ್ಲೂರು ತೋಪಿನತ್ತ ಬರುತ್ತಾರೆ. ಅಲ್ಲಿಂದ ಮುಂದೆ ತಲಕಾಡಿಗೆ ಹೋಗಿ ಅಲ್ಲಿ ದಿವ್ಯವಾದ ವೈದ್ಯೇಶ್ವರ ಸ್ವಾಮಿಯ ದರ್ಶನ ಮಾಡಿದ ಮಾದಪ್ಪ ಅಲ್ಲಿಂದ ಮುಡುಕುತೊರೆಯ ಮಲ್ಲಿಕಾರ್ಜುನ, ಪಾರ್ವತಿ ಅಮ್ಮನವರ ದರ್ಶನ ಪಡೆದು, ಇನ್ನು ನಾನೆಲ್ಲಿ ನೆಲೆಗೊಳ್ಲಬೇಕೆಂದು ಜಾಗವನ್ನರಸುತ್ತಿರಲು ಉಪ್ಪಾರ ಜನಾಂಗದ, ಮೇರು ಶಂಕರ ಶೆಟ್ಟಿಯ ಜನಾಂಗದ, ಮೂಗಪ್ಪ, ಸರಗೂರಯ್ಯನ ಮಗನಿಗೆ ತಿ. ನರಸೀಪುರದ ಕೊತ್ತೆಗಾಲದ ರಾಮವ್ವೆಯೊಂದಿಗೆ ಲಗ್ನವಾಗಿರುತ್ತದೆ. ಆ ದಂಪತಿಗಳ ಶಿವ ನಿಷ್ಠೆಗೆ ಮೆಚ್ಚಿದ ಮಾಯಜ್ಕಾರ ಮಾದಪ್ಪ ಅವರ ಬಳಿ ಸಾರಿ, ಅವರಿಗೆ ಶಿವತತ್ವವನ್ನು ಉಪದೇಶಿಸಿ ತಾನು ವರ ಸೇವೆಯಲ್ಲಿ ಆನಂದವಾಗಿತುತ್ತಾನೆ. ಹಾಗೆ ಮಾಡಿದ ಬಳಿಕ ಮತ್ತೆ ಗುರುಗಳಿದ್ದ ಸ್ಥಳಕ್ಕೆ ಬರಲು ತಾನು ಗುರುಗಳ ಪೂಜೆಗಾಗಿ ಹೂವನ್ನು ತರುತ್ತಾನೆ.
ಮತ್ತೆ ಮರುದಿನವೂ ಯಥಾ ಪ್ರಕಾರ ಸ್ವಾಮಿಯು ತಲಕಾಡು, ಮುಡುಕುತೊರೆಗೆ ಹೋಗಿ ಸ್ವಾಮಿಯ ದರ್ಶನ ಪಡೆದು ಮೂಗಪ್ಪ-ರಾಮವ್ವೆಯರಿಂದ ಸೇವೆ ಹೊಂದುತ್ತಾನೆ. ಅಲ್ಲದೆ ರಾಮವ್ವೆಗೆ "ಅಮ್ಮಾ, ಮುಂದೆ ನಾನು ಯಾವ ಊರಲ್ಲಿ ನೆಲೆಗೊಳ್ಳುವೆನೋ ಅಲ್ಲಿಗೆ ಪ್ರತಿ ತಿಂಗಳ ಎಣ್ಣೆ ಮಜ್ಜನಕ್ಖಾಗಿ ನಿನ್ನ ಗಂದನನ್ನು ಕಳುಹಿಸು." ಎನ್ನುವುದಾಗಿ ಹೇಳಲು, ತಾಯಿ ರಾಮವ್ವೆ ನೀವು ಜಂಗಮರಾಗಿದ್ದೀರಿ. ನೀವು ದಟ್ಟ ಅಡವಿಯ ಗುಹೆಯಲ್ಲಿರಲು ನಾನು ನಮ್ಮ ಪತಿ ಮೂಗಪ್ಪನನ್ನೊಬ್ಬರನ್ನು ನಿಮ್ಮ ಬಳಿ ಕಳುಹಿಸಿ ಇಲ್ಲಿ ಹೇಗಿರಲಿ? ನಾನೂ ಪತಿಯೊಂದಿಗೆ ಬರುತ್ತೇನೆ"ನಂದಳು. ಆದರೆ ಸ್ವಾಮಿಯು "ಅಮ್ಮಾ, ನಾನು ವಿರಕ್ತ. ನಾನು ಇದ್ದ ಕಡೆ ಹೆಂಗಸರು ಬರುವಂತಿಲ್ಲ." ಎಂದಪ್ಪಣೆ ಗೊಡಿಸುತ್ತಾರೆ. ಆಗ ರಾಮವ್ವೆ, "ಅಯ್ಯಾ, ಇಲ್ಲಿರುವ ಪಾರ್ವತಿಯು ಹೆಣ್ಣು, ಭೂಮಿ ತಾಯಿಯೂ ಹೆಣ್ಣು, ನಿಮ್ಮನ್ನು ಹೆತ್ತ ಮಹಾತಾಯಿಯೂ ಹೆಣ್ನಾಗಿರುವಾಗ ನಿಮ್ಮ ಸ್ಥಳಕ್ಕೆ ಹೆಂಗಸರು ಬರಬಾರದೇಕೆ?" ಎನ್ನಲು ಮಾದಪ್ಪ "ತಾಯಿ ನಾನಿದ್ದ ಕಡೆ ಹೆಂಗಸರು ಬರಲಿ, ಯಾವ ಹೆಂಗಸರು ಶುದ್ದವಾಗಿ ಮಡಿಯುಟ್ಟು ಹಳದಿ ಪಿತಾಂಬರ ತೊಟ್ಟು ಅರಿಶಿಣ ಕುಂಕುಮವಿರಿಸ್ಕೊಂಡು ನನ್ನ ಸೇವೆಗಾಗಿ ಬಂರುವಳೋ ಅವಳ ಕಷ್ಟ್ಗಳನ್ನು ನಾನು ಕಳೆಯುತ್ತೇನೆ. ಎನ್ನಲು ರಾಮವ್ವೆ ನಾನೂ ಅದೇ ರೀತಿಯಾಗಿ ಬರಲುೊಪ್ಪುತ್ತಾಳೆ. ಮಾದಪ್ಪನು ಮೂಗಪ್ಪನನ್ನು ಕರೆದು "" ನೀನು ನನ್ನ ಭಕ್ತರ ಮನೆಗೆ ಹೋಗಿ ಎಳ್ಳನ್ನು ಸಂಗ್ರಹಿಸಿ ಪ್ರತಿ ತಿಂಗಳೂ ನನ್ನ ಎಣ್ಣೆ ಮಜ್ಜನ ಮಾಡಿಸಬೇಕೆಂದು ಅಪ್ಪಣೆ ಮಾಡಿ ಅಲ್ಲಿಂದ ಗುಮಠಕ್ಕೆ ಹಿಂತಿರುಗುತ್ತಾನೆ.
ಇಷ್ಟರ ನಡುವೆ ಮಠದಲ್ಲಿದ್ದ ಉಳಿದ ಶಿಷ್ಯರಿಗೆ ಇವನ ಮೇಲೆ ಅನುಮಾನ ಬಂದು ಇವನ ಬೆನ್ನತ್ತಿ ನಡೆದಿರುತ್ತಾರೆ. ಮಾದಪ್ಪ ಗುರುಪೂಜೆಗಾಗಿ ಹೂವನ್ನು ಎಲ್ಲಿಂದ ತರುವನೆಂದು ತಿಳಿಯಲು ಅವನ ಬೆನ್ನು ಹತ್ತಿದ್ದಾರೆ ಮಾದಪ್ಪನಾದರೋ ತಾನು ಬೆಟ್ತದಲ್ಲಿದ್ದ ಹೆಂದಗೊದ್ದೆ, ಗೋಸುಂಬೆಗಳನ್ನು ಕರೆದು ಅವುಗಳನ್ನು ಕೊಳದಲ್ಲಿ ಅದ್ದಲು ಅವು ಸುಂದರ ಪುಷ್ಪಗಳಾಗುತ್ತಿದ್ದವು! ಅದನ್ನು ಆತ ಗುರುಗಳ ಪೂಜೆಗಾಗಿ ನೀಡುತ್ತಿದ್ದನು. ಇದನ್ನ ಕಂಡ ಉಳಿದ ಶಿಷ್ಯರು ತಾವೂ ಪ್ರಯೋಗಕ್ಕೆ ಮುಂದಾಗಲು ಅವರಿಗೆ ಯಾವ ಫಲವೂ ದೊರೆಯಲಿಲ್ಲ. ಕಡೆಗೆ ಮಾಯಕಾರ ಮಾದಪ್ಪನ ವಿಚಾರವನ್ನು ಉಳಿದ ಶಿಷ್ಯರೆಲ್ಲರೂ ಗುರುಗಳಿಗೆ ತಿಳಿಸಲು ಗುರುಗಳಿಗೂ ಮಾದಪ್ಪನ ಬಗೆಗೆ ಸಣ್ಣ ಅನುಮಾನ ಬಂದಿತು. ಅವರೂ ಸ್ವಾಮಿ ಮಾದಪ್ಪನ ಪರೀಕ್ಷೆಗೆ ತೊಡಗಿದರು