Friday, March 28, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 21

ಮಧೂರು(Madhoor)

‘ದೇವರ ಸ್ವಂತ ನಾಡು’ ಎಂದೇ ಖ್ಯಾತವಾಗಿರುವ ಕೇರಳ ರಾಜ್ಯದ ಉತ್ತರದಲ್ಲಿನ ಸುಂದರ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜಿಲ್ಲೆ ಕಾಸರಗೋಡು. ಇಲ್ಲಿನ ಶ್ರೀ ಕ್ಷೇತ್ರ ಮಧೂರು ಅಲ್ಲಿನ ಮದನಂತೇಶ್ವರ ವಿನಾಯಕ ದೇವಾಲಯದಿಂದಾಗಿ ದಕ್ಷಿಣ ಭಾರತದಲ್ಲೆಲ್ಲಾ ಪ್ರಸಿದ್ದಿ ಹೊಂದಿದೆ. ದೇವಾಲಯದ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಕ್ಷೇತ್ರ. ಸ್ವಲ್ಪ ದೂರದಲ್ಲಿ ಕಾಣಿಸುವ ಬೆಟ್ಟಗಳು ಅದರ ತಪ್ಪಲಲ್ಲಿ ಇರುವ ತೆಂಗು-ಅಡಿಕೆ ತೋಟಗಳು ಕ್ಷೇತ್ರಕ್ಕೆ ಮೆರುಗನ್ನು ನೀಡುತ್ತದೆ. ದೇವಸ್ಥಾನದ ಮುಂಭಾಗದಲ್ಲಿ ಮಧುವಾಹಿನಿ ಹೊಳೆ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ಪೂರ್ವಾಭಿಮುಖವಾಗಿ ಗಜಪೃಷ್ಠಾಕಾರದ ಮೂರು ಅಂತಸ್ತಿನಲ್ಲಿ ಇರುವುದು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ. ಮೇಲಿನ ಎರಡು ಅಂತಸ್ತುಗಳಿಗೆ ತಾಮ್ರದ ಮತ್ತು ಕೆಳಗಿನ ಅಂತಸ್ತಿಗೆ ಹಂಚಿನ ಹೊದಿಕೆ. ದೇವಾಲಯದ ಸುತ್ತಲೂ ವಿವಿಧ ಕೆತ್ತನೆ ಕೆಲಸಗಳನ್ನು ಕಾಣಬಹುದು. ’ಗಜಪೃಷ್ಠಆಕಾರವು ಪ್ರಾಚೀನ ಬೌದ್ಧರ ಕೊಡುಗೆ ಎನ್ನುವ ಪ್ರತೀತಿಯಿದೆ. ಕರಾವಳಿಯ ಭಾರಿ ಮಳೆ ಮತ್ತು ಹವಾಮಾನಗಳು ಇವುಗಳ ರಚನೆಯ ಮೇಲೆ ಪ್ರಭಾವ ಬೀರಿದೆ. ಹಾಗೆ ನೇಪಾಳಿ ಶೈಲಿಯ ಪ್ರಭಾವವೂ ಇರಬಹುದು ಎಂದು ಊಹಿಸಲಾಗಿದೆ.

Madhur Sri Mahaganapathi


ಬಹಳ ವರ್ಷಗಳ ಹಿಂದೊಮ್ಮೆ ಕ್ಷೇತ್ರದ ಬಳಿಯ ಹಳ್ಲಿಯೊಂದರ ಪಕ್ಕದಲ್ಲಿ ವಾಸವಿದ್ದ ಮದರು’ ಎನ್ನುವ ಹೆಸರಿನ ಸ್ತ್ರೀಯೋರ್ವಳು ತನ್ನ ಗೃಹಕೃತ್ಯಕ್ಕಾಗಿ ಸೊಪ್ಪು ಕಡಿಯುತ್ತಿದ್ದ ಸಮಯದಲ್ಲಿ ಆಕೆಯ ಕತ್ತಿಯು ಶಿಲೆಯೊಂದಕ್ಕೆ ತಾಗಿ ರಕ್ತ ಹರಿಯಲು ಆರಂಭವಾಯಿತು. ಅದನ್ನು ಅವಳು ಗಾಬರಿಯಿಂದ ತನ್ನ ಮನೆಯವರಿಗೆ ತಿಳಿಸಿದಾಗ, ಅವರೆಲ್ಲ ಒಂದಾಗಿ ಸೀಮೆಯ ಅರಸರ ಬಳಿ ಹೇಳಿಕೊಂಡರು. ಅರಸರೂ ಮತ್ತು ಅಲ್ಲಿರುವವರು ಒಕ್ಕೊರಲಿನಿಂದಜಲಾಶಯವಿರುವ ಪ್ರಶಸ್ತ ಜಾಗದಲ್ಲಿ ಕಾಣಿಸಿಕೊಂಡರೆ ಮಂದಿರ ನಿರ್ಮಿಸಿ ಪೂಜಿಸುವೆವುಎಂದು ಭಕ್ತಿಯಿಂದ ಪ್ರಾರ್ಥಿಸಿದಾಗ ವಿಗ್ರಹವು ಮಧುವಾಹಿನಿ ತಟದಲ್ಲಿ ಕಾಣಿಸಿಕೊಂಡಿತಂತೆ. ಪ್ರದೇಶದಲ್ಲಿ ಸ್ವಭಾವ ವೈರವನ್ನು ಮರೆತು ಹುಲಿ-ದನಗಳು ಸ್ನೇಹದಿಂದ ಇರುವುದನ್ನು ಕಂಡು ಅವರು ಇದುವೇ ಯೋಗ್ಯ ಸ್ಥಳವೆಂದು ಅಲ್ಲಿಯೇ ಮಂದಿರ ನಿರ್ಮಿಸಿ ಪೂಜಿಸತೊಡಗಿದರು. ದೇವಾಲಯದ ಹಿಂಭಾಗದಲ್ಲಿ ಈಗ ಒಂದು ಅರಳಿ ಕಟ್ಟೆಯಿದೆ. ಹುಲಿ-ದನಗಳು ವಿಶ್ರಮಿಸಿಕೊಂಡಿದ್ದನ್ನು ನೆನಪಿಸುವ ಹುಲಿ-ಕಲ್ಲನ್ನು ಅಲ್ಲಿ ಈಗಲೂ ಕಾಣಬಹುದು. ’ಮದರುಎಂಬ ಹೆಸರೇ ನಂತರ ಗ್ರಾಮೀಣ ಆಡುಭಾಷೆಯಲ್ಲಿ ಮುಂದೆಮಧೂರುಎಂದಾಯಿತು ಎಂಬ ನಂಬಿಕೆಯಿದೆ.


Madhur Sri Madanantheshwara Sri Mahaganapathi Temple
ಹೀಗಿರಲು ಅದೊಮ್ಮೆ ಜಾತ್ರೆಗೆಂದು ಬಂದ ದೇವಾಲಯದ ಅರ್ಚಕರ ಮಕ್ಕಳು ಗೋಡೆಯಲ್ಲಿ ಗಣಪತಿಯ ಚಿತ್ರ ಬರೆದು ಹೂಗಳಿಂದ ಅಲಂಕರಿಸಿ ಪೂಜಿಸುತ್ತಾ ಹಿರಿಯರು ಪೂಜಾಕಾರ್ಯಕ್ಕಾಗಿ ತಂದ ಅಕ್ಕಿಯ ಹುಡಿಯನ್ನು ನೀರಿನಲ್ಲಿ ಕಲಸಿ ಉಂಡೆಯಂತೆ ಮಾಡಿ ನೈವೇದ್ಯ ಮಾಡುತ್ತಾ ಶ್ರದ್ಧಾ ಭಕ್ತಿಗಳಿಂದ ಪೂಜೆಯಲ್ಲಿ ತನ್ಮಯರಾಗಿದ್ದರು. ಹಿರಿಯರು ಇದನ್ನು ಕಂಡು ಅಚ್ಚರಿಗೊಂಡು ವಿಧಿವತ್ತಾದ ಪೂಜೆ ನಡೆಸಿದರು. ಮಕ್ಕಳು ಮಾಡಿದ "ಹಸಿ ಅಕ್ಕಿ ಹುಡಿಯಿಂದ ಕಲಸಿದ ಉಂಡೆ" ಪ್ರತೀಕವಾಗಿ ಬೆಲ್ಲ ಸೇರಿಸಿದ, ಸಂಪೂರ್ಣ ಬೇಯದ "ಪಚ್ಚಪ್ಪ" ನೈವೇದ್ಯ ಅಂದಿನಿಂದ ಆರಂಭವಾಯಿತು. ಮುಂದೆ ಕಡುಶರ್ಕರಪಾಕದಿಂದ ಚಿತ್ರದ ಉಬ್ಬು ಶಿಲ್ಪವನ್ನು ರಚಿಸಿ, ಅಲ್ಲಿಗೆ ಚಿಕ್ಕ ಬಾಗಿಲಿನಿಂದ ಕೂಡಿದ ಗುಡಿಯನ್ನು ನಿರ್ಮಾಣ ಮಾಡಲಾಯಿತು.  ಇಲ್ಲಿರುವುದು ಬಲಮುರಿ ಗಣಪತಿಯ ಮೂರ್ತಿಯಾಗಿದ್ದು ಮೂರ್ತಿಯ ಸೊಂಡಿಲು ಬಲಭಾಗಕ್ಕೆ ತಿರುಗಿಕೊಂಡಿದೆ. 

ಕಥೆಯಾದರು ಚಿತ್ತಾಲ

ಕನ್ನಡ ಸಾಹಿತ್ಯ ದಿಗಂತದ ಇನ್ನೊಂದು ತಾರೆ ಅಸ್ತಂಗತವಾಗಿದೆ. ಕವಿ, ಕಥೆಗಾರ, ಶ್ರೀ ಯಶವಂತ ಚಿತ್ತಾಲರು (86) ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಷಃ ತಾವೊಬ್ಬರೇ ಚಿರಶಾಂತಿಯ `ಶಿಕಾರಿ’ ಗಾಗಿ ಹೊರಟಿರುವರೇನೊ? “ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ.” ಎಂದಿದ್ದ ಚಿತ್ತಾಲರಿಲ್ಲದ ಈ ಸಮಯದಲ್ಲಿ ಅವರ ಪುಸ್ತಕಗಳ ಅಪಾರ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಅವರ ಬದುಕಿನ ಕುರಿತು ನಿಮ್ಮೊಡನೆ
ನಾಲ್ಕು ಮಾತುಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ


ಆತ್ಮೀಯ ಗೆಳೆಯರಿಗೆಲ್ಲಾ ನನ್ನ ನಮಸ್ಕಾರಗಳು,
ಕನ್ನಡ ಸಾಹಿತ್ಯ ದಿಗಂತದ ಇನ್ನೊಂದು ತಾರೆ ಅಸ್ತಂಗತವಾಗಿದೆ. ಕವಿ, ಕಥೆಗಾರ, ಶ್ರೀ ಯಶವಂತ ಚಿತ್ತಾಲರು (86) ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಷಃ ತಾವೊಬ್ಬರೇ ಚಿರಶಾಂತಿಯ `ಶಿಕಾರಿ’ ಗಾಗಿ ಹೊರಟಿರುವರೇನೊ? ಚಿತ್ತಾಲರಿಲ್ಲದ ಈ ಸಮಯದಲ್ಲಿ ಅವರ ಪುಸ್ತಕಗಳ ಅಪಾರ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಅವರ ಬದುಕಿನ ಕುರಿತು ನಿಮ್ಮೊಡನೆ  ನಾಲ್ಕು ಮಾತುಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ.
ಯಶವಂತ ಚಿತ್ತಾಲರು ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದಲ್ಲಿ ನವ್ಯ ಯುಗ ಪ್ರಾರಂಭಾವಾಗಿದ್ದ ಕಾಲಘಟ್ಟದಲ್ಲಿ ತಮ್ಮನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡ ಚಿತ್ತಾಲರು ನವ್ಯ ಮಾರ್ಗದಲ್ಲಿನ ಕಥೆಗಳು, ಕಾದಂಬರಿಗಳು ಅಂದು ಸಾಕಷ್ಟು ಪ್ರಸಿದ್ದವಾಗಿದ್ದವು. ‘ಪುರುಷೋತ್ತಮ’, ‘ಛೇದ’, ‘ಶಿಕಾರಿ’ ಗಳಂತಹಾ ಪ್ರಸಿದ್ದ ಹಾಗೂ ಮಹತ್ವದ ಕಾದಂಬರಿಗಳನ್ನು ರಚಿಸಿದ್ದ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕನ್ನಡದ ಅತ್ಯಂತ ಜನಪ್ರಿಯ ಕಥಾ ಸಂಕಲನಗಳಲ್ಲಿ ಒಂದು.
ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಕುಮಟಾದ ಹನೇಹಳ್ಳಿಯವರಾದ ಚಿತ್ತಾಲರು ತಮ್ಮ ಜೀವನದ ಅರ್ಧಕ್ಕೂ ಹೆಚ್ಚಿನ ಸಮಯವನ್ನು ಮುಂಬೈನಲ್ಲಿ ಕಳೆದಿದ್ದರು. ಹನೇಹಳ್ಳಿಯ ವಿಠೋಬಾ, ರುಕ್ಮಿಣಿ ದಂಪತಿಗಳ ಏಳು ಮಕ್ಕಳುಗಳ ಪೈಕಿ ಐದನೆಯವರಾಗಿದ್ದ ಯಶವಂತ ಚಿತ್ತಾಲರು 1928 ರಲ್ಲಿ ಜನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರೈಸಿದ ಚಿತ್ತಾಲರು ಕುಮಟಾ, ಧಾರವಾಡ್, ಮುಂಬೈ ಹಾಗೂ ನ್ಯೂ ಜರ್ಸಿಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ್ದರು. ಇವರು ವಿಜ್ಞಾನ ಪದವೀಧರರಾಗಿದ್ದು ರಸಾಯನ ಶಾಸ್ತ್ರದಲ್ಲಿ ಉನ್ನತ ಮಟ್ಟದ ಪ್ರೌಢಿಮೆಯನ್ನು ಹೊಂದಿದ್ದರು. ಅದರಲ್ಲಿಯೂ ಪಾಲಿಮರ್ ತಂತ್ರಜ್ಞಾನದಲ್ಲಿ ವಿಶೇಷ ಅನುಭವ ಹೊಂದಿದ್ದ ಚಿತ್ತಾಲರು . ಮುಂಬೈ ವಿವಿಯ ಪ್ಲಾಸ್ಟಿಕ್ ತಂತ್ರವಿಜ್ಞಾನದ ಬಿಎಸ್‌ಸಿಯಲ್ಲಿ ಪ್ರಥಮ ಸ್ಥಾನ ಸುವರ್ಣ ಪದಕ ಪಡೆದಿರು. ನಲ್ವತ್ತ ನಾಲ್ಕನೇ ವಯಸ್ಸಿನಲ್ಲಿ ಅಮೆರಿಕದ ಸ್ಟೂವನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಎ ಪದವಿ ಪಡೆದಿದ್ದ. ಚಿತ್ತಾಲರು ಬೆಕಾಲೈಟ್ ಹೈಲಮ್ ಲಿ. ಕಂಪನಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದಾರೆ. ಇಲ್ಲಿ ಹಲವು ವರ್ಷಗಳ ಕಾಲ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಮುಂಬೈನಲ್ಲಿ ಅದೇ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಡೈರಕ್ಟರ್ ಆಗಿ 1985ರಲ್ಲಿ ನಿವೃತ್ತಿ ಹೊಂದಿದ್ದರು.
ಯಶವಂತ ಚಿತ್ತಾಲ (1928 - 2014)

ಕವಿ ಗಂಗಾಧರ ಚಿತ್ತಾಲರ ಸಹೋದರರಾಗಿದ್ದ ಯಶವಂತ ಚಿತ್ತಾಲರಿಗೆ ಬಾಲ್ಯದಿಂದಲೂ ಸಾಹಿತ್ಯದ ಕಡೆಗೆ ಒಲವಿದ್ದಿತು. ಪಾಶ್ಚಾತ್ಯ ದೇಶಗಳನ್ನೆಲ್ಲಾ ಸುತ್ತಿ ಅಲ್ಲಿನ ಸಾಹಿತ್ಯದ ಮೌಲ್ಯಗಳ ತೌಲನಿಕ ಚಿಂತನೆಯನ್ನು ನಡೆಸಿ ಕನ್ನಡದಲ್ಲಿ ಕೃತಿಗಳನ್ನು ರಚಿಸಿದ ಯಶವಂತ ಚಿತ್ತಾಲರಿಗೆ ಮನಃಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರಗಳಲ್ಲಿ ಬಹಳ ಆಸಕ್ತಿ ಇದ್ದಿತು. ಇವರು ತಮ್ಮ ವಿಶಿಷ್ಟ ಬಗೆಯ ಸಾಹಿತ್ಯದಿಂದ ಜನರನ್ನು ಸಮ್ಮೋಹಗೊಳಿಸಿದ್ದಲ್ಲದೆ ತಮ್ಮ ಸಜ್ಜನಿಕೆಯ ಜೀವನ ಶೈಲಿ, ಜೀವನ ಪ್ರೀತಿಯಿಂದಲೂ ಅಪಾರ ಜನ ಮೆಚ್ಚುಗೆಗೆ ಭಾಜನರಾಗಿದ್ದವರು.
ಶಾಂತಿನಾಥ ದೇಸಾಯಿ, ಗೌರೀಶ ಕಾಯ್ಕಿಣಿಯವರುಗಳಿಂದ ಅಪಾರ ಪ್ರಭಾವಕ್ಕೊಳಗಾಗಿದ್ದ ಚಿತ್ತಾಲರು 1957 ರಲ್ಲಿ ಹೊರತಂದ ‘ಸಂದರ್ಶನ’ ಕಥಾ ಸಂಕಲನದಿಂದ ಪ್ರಾರಂಭಿಸಿ ತಾವು ಆಸ್ಪತ್ರೆಗೆ ಸೇರುವ ಹಿಂದಿನ ದಿನದವರೆಗೂ ನಿರಂತರವಾಗಿ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಚಿತ್ತಾಲರು ಆಸ್ಪತ್ರೆಗೆ ಸೇರುವ ಮುನ್ನಿನ ದಿನ ‘ದಿಗಂಬರ’ ಎನ್ನುವ ಹೆಸರಿನ ಕಾದಂಬರಿಯ ೨೫ ನೇ ಅಧ್ಯಾಯವನ್ನು ಮುಗಿಸಿದ್ದರು. ವಿನೂತನ ವಸ್ತುವಿನಿಂದ ಕೂಡಿದ್ದ ಈ ಕಾದಂಬರಿ ಚಿತ್ತಾಲರ ಅನಿರೀಕ್ಷಿತ ಮರಣದಿಂದಾಗಿ ಅಪೂರ್ಣವಾಗಿಯೇ ಉಳಿಯುವಂತಾಗಿದೆ.
 ಚಿತ್ತಾಲರ ವಿವಿಧ ಕೃತಿಗಳನ್ನು ಓದುತ್ತಾ ಹೋದಂತೆ ಆ ಬರವಣಿಗೆ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಬಾಲ್ಯಕಾಲದ ಜಗತ್ತನ್ನು ವರ್ತಮಾನದ ಸಂಕೀರ್ಣ ಬದುಕಿನೊಡನೆ ಹೋಲಿಸುವ ಅವರ ರೀತಿಯು ಬಹಳವೇ ಅದ್ಭುತವಾದುದು. ಯಶವಂತ ಚಿತ್ತಾಲರು ತಮ್ಮ ವೈಯುಕ್ತಿಕ ಬದುಕಿನಲ್ಲಿ ತಾವು ಅನುಭವಿಸಿದ ದುರಂತಗಳನ್ನೆಲ್ಲವನ್ನೂ ಮೆಟ್ಟಿ ನಿಂತು ಅದಕ್ಕೂ ಹೆಚ್ಚಿನ ಜೀವನ ಶ್ರದ್ದೆಯಿಂದ, ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ ಕಥೆ, ಕಾದಂಬರಿಗಳ ಮುಖೇನ ತಮ್ಮ ಅನಯತೆಯನ್ನು ಮೆರೆದಿದ್ದಾರೆ. ಇವರ ‘ಕಥೆಯಾದಳು ಹುಡುಗಿ’ ಕಥಾ ಸಂಕಲನಕ್ಕೆ 1983 ರ ಕೇಂದ್ರ ಸಾಹಿತ್ಯ ಅಕಾಡ್ಮಿ ಪ್ರಶಸ್ತಿ ದೊರಕಿದ್ದರೆ, ಇವರ ಖ್ಯಾತ ಕಾದಂಬರಿ ‘ಶಿಕಾರಿ’ 1979 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ವಿಶೇಷ ಬಹುಮಾನದಿಂದ ಪುರಸ್ಕೃತವಾಗಿದೆ ಇವರ ಮತ್ತೊಂದು ಮಹತ್ವದ ಕಾದಂಬರಿ ‘ಪುರುಷೋತ್ತಮ’ ಕ್ಕೆ 2000 ನೇ ಸಾಲಿನ ನಿರಂಜನ ಪುರಸ್ಕಾರ, ಬಾರತ ಬಾಷಾ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಅಕಾಡ್ಮಿ ಪ್ರಶಸ್ತಿಗಳು ಲಭಿಸಿದೆ.
ಒಟ್ತಾರೆಯಾಗಿ ಐದು ಕಾದಂಬರಿಗಳು, ಒಂಭತ್ತು ಕಥಾ ಸಂಕಲನಗಳು, ಮೂರು ವಿಮರ್ಶಾ ಪ್ರಬಂಧ ಲೇಖನ ಸಂಗ್ರಹಗಳನ್ನು ರಚಿಸಿರುವ ಚಿತ್ತಾಲರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ(1988), ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರಗಳು ಸಂದಿವೆ.
“ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ನಾನು ನಾನಾಗಿಯೇ ಉಳಿದು ಉಳಿದವರಿಂದ ಬರೆಯಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ.” ಚಿತ್ತಾಲರು ಬರವಣಿಗೆಯನ್ನು ಕುರಿತು ತಾಳಿದ್ದ ನಿಲುವು ಇದು. ಇಂದು ಚಿತ್ತಾಲರ ಭೌತಿಕ ದೇಹ ನಮ್ಮೊಂದಿಗಿಲ್ಲ. ಆದರೆ ಅವರ ಸಾಹಿತ್ಯ, ಬರವಣಿಗೆಯ ಮೂಲಕ ಅವರೆಂದಿಗೂ ನಮ್ಮೊಡಾನಿರುತ್ತಾರೆ. ಕನ್ನಡ ಇರುವವರೆಗೂ ಕನ್ನಡ ಸಾಹಿತ್ಯವಿರುತ್ತದೆ. ಕನ್ನಡ ಸಾಹಿತ್ಯವಿರುವವರೆಗೂ ಯಶವಂತ ಚಿತ್ತಾಲರ ಬರಹಗಳಿರುತ್ತವೆ. ಅವರ ಬರಹಗಳಿರುವವರೆಗೂ ಅವರೂ ನಮ್ಮೊಡನಿರುತ್ತಾರೆ. ಎಲ್ಲಾ ಕನ್ನಡ ಸಾಹಿತ್ಯಾಭಿಮನಿಗಳ ಹೃದಯದಲ್ಲಿ ‘ಕಥೆ’ಯಾಗಿ, ಪುರುಷೋತ್ತಮನಾಗಿ.....
ನಮಸ್ಕಾರ. 

Sunday, March 23, 2014

‘ಮರಣವು ಪ್ರಾಪ್ತವಾಗಿದೆ, ಇದರ ಅರ್ಥವೇನು?’

ಇದ್ದಕ್ಕಿದ್ದಂತೆಯೇನಾನು ಸಾಯುವೆನುಎಂಬ ಭಯವು ನನ್ನನ್ನಾವರಿಸಿಕೊಂಡಿತು…..    ಭಾವನೆಯು ತೋರಿದ ಕೂದಲೇ ಈಗ ನಾನೇನು ಮಾಡಬೇಕೆಂದು ನನ್ನಲ್ಲಿ ನಾನೇ ಯೋಚಿಸತೊಡಗಿದೆನು.  ಮರಣ ಭಯವು ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿತು. ನಾನು ಮಾತುಗಳಿಂದ ಹೇಳಿದೆ, ‘ಇದೋ ಮರಣವು ಪ್ರಾಪ್ತವಾಗಿದೆ, ಇದರ ಅರ್ಥವೇನು? ಸಾಯುವವನು ಯಾರು?  ದೇಹವು ಸಾಯುತ್ತದೆ.’

 “ಕಡೆಯದಾಗಿ ನಾನು ಮಧುರೆಯನ್ನು ಬಿಟ್ಟು ಹೊರಡುವ ಆರು ವಾರಗಳ ಮುಂಚಿತವಾಗಿಯೇ ನನ್ನ ಜೀವಿತದಲ್ಲಿ ಒಂದು ದೊಡ್ಡ ಮಾರ್ಪಾಡಾಯಿತು. ಅದು ಆಕಸ್ಮಿಕವಾಗಿ ಉಂಟಾದದ್ದು. ಒಂದು ದಿನ ಮಹಡಿಯ ಮೇಲೆ ನಾನೊಬ್ಬನೇ ಕುಳಿತಿದ್ದೆನು. ಎಂದಿನಂತೆ ಆರೋಗ್ಯವಾಗಿಯೇ ಇದ್ದೆನು. ಆದರೆ ಇದ್ದಕ್ಕಿಂದ್ದಂತೆಯೇನಾನು ಸಾಯುವೆನುಎಂಬ ಭಯವು ನನ್ನನ್ನಾವರಿಸಿಕೊಂಡಿತು. ಭಾವನೆಯು ತೋರಿದ ಕೂದಲೇ ಈಗ ನಾನೇನು ಮಾಡಬೇಕೆಂದು ನನ್ನಲ್ಲಿ ನಾನೇ ಯೋಚಿಸತೊಡಗಿದೆನು. ವೈದ್ಯರನ್ನಾಗಲೀ, ಹಿರಿಯರನ್ನಾಗಲೀ, ಗೆಳೆಯರನ್ನಾಗಲೀಈ ವಿಷಯವನ್ನು ಕುರಿತು ವಿಚಾರಿಸಲು ಇಷ್ಟಪಡಲಿಲ್ಲ. ಆಗ ನನಗುಂಟಾದ ಪ್ರಶ್ನೆಯನ್ನು ನಾನೇ ಬಗೆಹರಿಸಿಕೊಳ್ಳಬೇಕೆಂದು ನಿರ್ಧರಿಸಿದೆನು. ಮರಣ ಭಯವು ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿತು. ನಾನು ಮಾತುಗಳಿಂದ ಹೇಳಿದೆ, ‘ಇದೋ ಮರಣವು ಪ್ರಾಪ್ತವಾಗಿದೆ, ಇದರ ಅರ್ಥವೇನು?ಸಾಯುವವನು ಯಾರು? ದೇಹವು ಸಾಯುತ್ತದೆ.’ ಎಂದು ಮನಸ್ಸಿನಲ್ಲಿಯೇ ಅಂದುಕೊಡೆನು. ಕೂಡಾಲೇ ಇಂತಹಾ ಸ್ಥಿತಿಯನ್ನು ಅಭಿನಯಿಸಿ ನೋಡಿದೆನು. ಕೈಕಾಲುಗಳನ್ನು ಉದ್ದಕ್ಕೆ ಚಾಚಿ ಅವು ಬಿಗಿದುಕೊಳ್ಳುವಂತೆ ಮಾಡಿದೆನು. ಅನಂತರ ಮುಂದಾಗುವುದನ್ನು ಕಾಣಲು ನಿಜವಾದ ಶವದಂತೆಯೇ ಆದೆನು. ಅಂದರೆ ಉಸಿರನ್ನು ಬಿಗಿಹಿಡಿದು ಶಬ್ದವು ಹೊರಬೀಳದಂತೆ ತುಟಿಗಳನ್ನು ಬಲವಾಗಿ ಅಮುಕಿ ಹಿಡಿದುಕೊಂಡೆನು. ಈಗ ದೇಹವು ಸತ್ತಿದೆ. ಇದನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಬೂದಿ ಮಾಡುವರು. ದೇಹದ ನಾಶದಿಂದ ನಾನು ನಾಶವಾದೆನೆ? ನಾನು ದೇಹವೆ? ಇದು ಮಾತನಾಡದ ಜಡವಸ್ತು. ಆದರೆ ನನ್ನ ವ್ಯಕ್ತಿತ್ವವು ಪೂರ್ಣ ಶಕ್ತಿಯೊಂದಿಗೆ ಸ್ಪಷ್ಟವಾಗಿ ತಿಳಿಯುತ್ತಿರುವುದಲ್ಲದೆ ದೇಹಕ್ಕಿಂತಲೂ ಭಿನ್ನವಾಗಿ ಒಳಗಡೆಯಲ್ಲಿನಾನು, ನಾನುಎಂಬ ಸ್ಮರಣೆಯನ್ನುಂಟುಮಾಡುತ್ತಿರುವುದು. ಆದುದರಿಂದ ದೇಹವನ್ನತಿಕ್ರಮಿಸಿದ ಒಂದು ಚೇತನವೇ ನಾನು. ಭೌತಿಕ ದೇಹವು ಸಾಯುವುದು. ಆದರೆ ಅದನ್ನತಿಕ್ರಮಿಸಿರುವ (ದೇಹವಿಲ್ಲದಿರುವಾಗಲೂ ಇರುವ) ಆತ್ಮವನ್ನು ಮರಣವು ಮುಟ್ತಲಾರದು. ಆದುದರಿಂದ ಮರಣ ರಹಿತನಾದ ಆತ್ಮನೇ ನಾನು, ಎಂಬುದಾಗಿ ನನ್ನಲ್ಲಿಯೇ ಅಂದುಕೊಂಡೆನು. ಇದೆಲ್ಲಾ ಬುದ್ದಿಯ ಕಲ್ಪನೆಗಳಲ್ಲ. ಯಾವ ಬಗೆಯ ವಿವಾದಕ್ಕೂ ಅವಕಾಶವಿಲ್ಲದೆ ಪ್ರತ್ಯಕ್ಷವಾಗಿ ನಾನು ಕಂಡ ಶಾಶ್ವತವಾದ ಸತ್ಯ ಸ್ವರೂಪವು, ನನ್ನ ಕಣ್ಣ ಮುಂದೆ ಮಿಂಚಿನಂತೆ ಸ್ಪಷ್ಟವಾಗಿ ತೋರಿತು. ನಾನು ಎಂಬುದು ಸತ್ಯಕ್ಕಿಂತಲೂ ಸತ್ಯವಾಗಿತ್ತು. ಸ್ಥಿತಿಯಲ್ಲಿ ಅದೊಂದೇ ಸತ್ಯವು. ದೇಹ ಸಂಬಂಧವಾದ ಕಾರ್ಯಗಳೂ, ಬುದ್ದಿ ಸಂಬಂಧವಾದ ವೃತ್ತಿಗಳೂ ಅದನ್ನೆ ಆಶ್ರಯಿಸಿಕೊಂಡಿರುತ್ತವೆ. ನಾನು ಅಥವಾ ಆತ್ಮನು ಒಂದು ವಶೀಕರಣ ಶಕ್ತಿಯೊಂದಿಗೆ ನನ್ನ ಪೂರ್ಣ ತಿಳುವಳಿಕೆಗೂ ಕೇಂದ್ರವಾಗಿತ್ತು. ಅನುಭವವಾದ ಕೂಡಲೇ ನನಗುಂಟಾಗಿದ್ದ ಮರಣ ಭಯವು ಮಾಯವಾಯಿತು. ಕ್ಷಣದಿಂದ ಇಂದಿನವರೆಗೂ ಆತ್ಮಭಾವವು ನನ್ನಲ್ಲಿ ಅನುಸ್ಯೂತವಾಗಿದೆ.”

*****

ಗೆಳೆಯರಿಗೆಲ್ಲಾ ನನ್ನ ನಮಸ್ಕಾರಗಳು.


ಕಳೆದ ವಾರವಷ್ಟೇ ನಾನು ತಿರುವಣ್ಣಾಮಲೈಗೆ ಭೇಟಿ ನೀಡಿದ್ದಾಗ ಅಲ್ಲಿನ ಶ್ರೀ ಅರುಣಾಚಲೇಶ್ವರ ತೇಜೋಲಿಂಗದ ದರ್ಶನ ಪಡೆದ ತರುವಾಯ  ಅಲ್ಲಿನ ರಮಣಾಶ್ರಮಕ್ಕೂ ಹೋಗಿದ್ದೆನು. ಅಲ್ಲಿನ ಪ್ರಶಾಂತ ಪರಿಸರ, ಪರಮ ಯೋಗಿವರ್ಯರು ನಡೆದಾಡಿದ ಪುಣ್ಯಭೂಮಿಯಲ್ಲಿ ನನ್ನ ಚೇತನವೂ ಸಮ್ಮಿಳಿತಗೊಂಡು ಒಂದು ಬಗೆಯ ಅನಿರ್ವಚನೀಯ ಆನಂದವನ್ನು ಹೊಂದಿತು. ಸಂದರ್ಭದಲ್ಲಿ ತಿರುವಣ್ಣಾಮಲೈ ನಲ್ಲಿನ ರಮಣಾಶ್ರಮದವರು ಪ್ರಕಟಿಸಿರುವ, ಎಸ್. ರಾಮಚಂದ್ರ ರಾವ್ ಬರೆದಿರುವಭಗವಾನ್ ಶ್ರೀ ರಮಣ ಮಹರ್ಷಿಪುಸ್ತಿಕೆಯನ್ನು ಓದಲಾಗಿ ನನಗೆ ಬಹಳವೇ ಮೆಚ್ಚುಗೆಯಾದ ರಮಣ ಗುರು ತಮ್ಮ ಹದಿನಾರನೇ ವರ್ಷದಲ್ಲಿ ಅನುಭವಿಸಿದ ಮರಣದ ಕುರಿತಾದ ಸತ್ಯಾನುಭವವು ಅವರದೇ ಮಾತುಗಳಲ್ಲಿರುವ ಮೇಲಿನ ಭಾಗವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.

ತಿರುವಣ್ಣಾಮಲೈ ಎಂಬ ತೇಜೋಲಿಂಗ ಕ್ಷೇತ್ರದಲ್ಲಿ ನೆಲೆಸಿ ತಮ್ಮ ಮಾರ್ಗದರ್ಶನವನ್ನರಸಿ ಬಂದವರಿಗೆ ಕಿಂಚಿತ್ತೂ ಕೋಪಿಸಿಕೊಳ್ಳದೆ ದಾರಿತೋರಿದ ಮಹಾ ಗುರು ಭಗವಾನ್ ಶ್ರೀ ರಮಣ ಮಹರ್ಷಿ ನಡೆಸಿದ ಸರಳ ಜೀವನ ತೋರಿದ ಆದರ್ಶ ಎಂದೆಂದೂ ಸದಾ ಅನುಕರಣೀಯವಾದುದು. ಮಹಾತ್ಮರ ಸದುಪದೇಶ, ಪವಿತ್ರವಾದ ನಡೆ ನುಡಿಗಳು ಇಂದಿನ ಯುವಜನರಿಗೆ ಮಾದರಿಯಾಗಿವೆ ಬೋಧಪ್ರದವಾಗಿವೆಯಲ್ಲವೆ?

ನಮಸ್ಕಾರ