Friday, February 25, 2022

ಬದುಕಿನ ಗೆಲುವಿಗೆ ಹೊಸ ದಿಕ್ಕು ತೋರಿಸುವ ಮಧುಕರ್‌ ಬಳ್ಕೂರ್‌ ಅವರ ’ಆಸೆಗಳು ಕನಸಾಗಿ ಬದಲಾಗಲಿ’

 ’ಆಸೆಗಳು ಕನಸಾಗಿ ಬದಲಾಗಲಿ’ ಎಂತಹಾ ಅದ್ಭುತ ಮಾತು! ಮಾನವನ ಆಸೆಗಳಿಗೆ ಕೊನೆ ಮೊದಲಿರುವುದಿಲ್ಲ. ಆದರೆ ಅದೇ ಆಸೆ ಕನಸುಗಳಾಗಿ ಬದಲಾಗುವುದು ಎನ್ನುವ ಹಾಗಿದ್ದರೆ ಅದೆಷ್ಟು ಚೆನ್ನ? ಇಷ್ಟಕ್ಕೂ ಇಲ್ಲಿ ಇದನ್ನು ಹೇಳುತ್ತಿರುವುದಕ್ಕೆ ಕಾರಣವಿದೆ. ಉದಯೋನ್ಮುಖ ಲೇಖಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿಯ ಹೆಸರು ’ಆಸೆಗಳು ಕನಸಾಗಿ ಬದಲಾಗಲಿ’ ಈ ಪುಸ್ತಕ ಸಹ ಶೀರ್ಷಿಕಯಷ್ಟೇ ಸುಂದರವಾಗಿದೆ.

ಮೂಲತಃ ಉಡುಪಿಯ ಕುಂದಾಪುರದ ಬಳ್ಕೂರು ಗ್ರಾಮದವರಾದ ಮಧುಕರ್ ವಿದ್ಯಾಭ್ಯಾಸ, ವೃತ್ತಿ ಸಂಬಂಧ ನಾನಾ ಊರುಗಳಲ್ಲಿದ್ದು ಅನುಭವ ಹೊಂದಿದವರು. ಕಳೆದ ಆರೇಳು ವರ್ಷಗಳಿಂದ ರಾಜ್ಯದ ವಿವಿಧ ಪತ್ರಿಕೆ, ನಿಯತಕಾಲಿಕಗಳಲ್ಲಿ ಅವರ ಲೇಖನಗಳು ಪ್ರಕಟವಾಗಿದ್ದು ಹೀಗೆ ಪ್ರಕಟವಾದ ಆಯ್ದ ಪ್ರಮುಖ ಲೇಖನಗಳನ್ನು ಒಟ್ಟುಗೂಡಿಸಿ ’ಆಸೆಗಳು ಕನಸಾಗಿ ಬದಲಾಗಲಿ’ ಎನ್ನುವ ಪುಸ್ತಕವನ್ನು ಹೊರತಂದಿದ್ದಾರೆ.

ವ್ಯಕ್ತಿತ್ವ ವಿಕಸನ ಅಥವಾ ಪರ್ಸನಾಲಿಟಿ ಡೆವಲಪ್‌ಮೆಂಟ್ ಎಂಬುದು ಇಂದಿನ ಯುವಜನತೆ ಇಷ್ಟಪಡುವ ಪ್ರಮುಖ ವಿಷಯಗಳಲ್ಲಿ ಒಂದು. ಇದನ್ನು ಸಧ್ಯ ಚಾಲ್ತಿಯಲ್ಲಿರುವ ಪ್ರಮುಖ ಟ್ರೆಂಡಿಂಗ್ ವಿಷಯವೆಂದರೂ ತಪ್ಪಲ್ಲ. ಅಂತಹ ವ್ಯಕ್ತಿತ್ವ ವಿಕಸನ ವಿಷಯಕ್ಕೆ ಸಂಬಂಧಿ ವಿವಿಧ ವಿಚಾರಗಳನ್ನು ಹೊಂದಿರುವ 32 ಲೇಖನಗಳು ಈ ಪುಸ್ತಕದಲ್ಲಿವೆ. ಆದರೆ ಆ ಒಂದೊಂದು ಲೇಖನವೂ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಜೀವನವನ್ನು ಯಾವ ಯಾವ ದೃಷ್ಟಿಕೋನದಿಂದ ನೋಡಿದಾಗ ಹೇಗೆಲ್ಲಾ ಕಾಣಬಲ್ಲುದು ಎನ್ನುವುದನ್ನು ಇಲ್ಲಿನ ಲೇಖನಗಳಲ್ಲಿ ಲೇಖಕರು ಸ್ವಾರಸ್ಯಕರವಾಗಿ, ಅಷ್ಟೇ ಸರಳವಾಗಿ ವಿವರಿಸಿದ್ದಾರೆ. ’ಗೆಲುವಿಗೆ ನಾವು ಬೇರೆ ದಾರಿ ಹುಡುಕಬೇಕಾಗಿಲ್ಲ. ನಮ್ಮೊಳಗೆ ನಮಗೇ ಗೊತ್ತಿಲ್ಲದೆ ಇರುವ ದಾರಿಗಳನ್ನೇ ಹುಡುಕಿಕೊಳ್ಳುವ ಸಮಯ ಈಗ ಬಂದಿದೆ’ ಎನ್ನುವ ಪುಸ್ತಕದ ಮುಖಪುಟದಲ್ಲಿರುವ ಸಾಲುಗಳು ಪುಸ್ತಕದ ಒಳಪುಟಗಳು ಏನನ್ನು ಹೇಳುತ್ತಿದೆ ಎನ್ನುವುದನ್ನು ತಿಳಿಸುತ್ತದೆ.

ಮೊದಲಿಗೆ ಪುಸ್ತಕದಲ್ಲಿನ ಕೆಲ ಲೇಖನಗಳನ್ನು ಬಿಡಿ ಬಿಡಿಯಾಗಿ ನೋಡುವುದಾದರೆ ಪುಸ್ತಕದ ಮೊದಲ ಲೇಖನ ’ಆಸೆಗಳು ಕನಸಾಗಿ ಬದಲಾಗಲಿ’ ಯಲ್ಲಿ ಲೇಖಕ ನಮ್ಮ ಆಸೆಗೂ ಕನಸಿಗೂ ಇರುವ ವ್ಯತ್ಯಾಸವನ್ನು ವಿವರಿಸುತ್ತಾರೆ. ಜೊತೆಗೆ ಕನಸುಗಳು ಆಸೆಗಳಿಗಿಂತ ಹೇಗೆ ಶ್ರೇಷ್ಠವಾದದ್ದೆನ್ನುವುದನ್ನು ಹೇಳಿದ್ದಾರೆ. “ಆಸೆಗಳನ್ನು ದುಡ್ಡು ಕೊಟ್ಟು ಕೊಳ್ಳಬಹುದು ಹಾಗೇ ಮಾರಿಕೊಳ್ಳಬಹುದು, ಆದರೆ ಯಾವ ಕನಸನ್ನೂ ದುಡ್ಡಿನಿಂದ ಖರೀದಿಸಲಾಗುವುದಿಲ್ಲ ಹಾಗೂ ಮಾರಿಕೊಳ್ಳಲು ಬರುವುದಿಲ್ಲ” ಎಂಬ ಲೇಖಕರ ಮಾತು ಆಸೆಗಳ ಕ್ಷಣಿಕತೆ ಹಾಗೂ ಕನಸುಗಳ ಮಹತ್ವವನ್ನು ಸಾರುತ್ತದೆ.

ಇನ್ನು ಇಮೇಜ್‌ಗಳ ಬಗ್ಗೆ, ಸೋಲು, ಗೆಲುವುಗಳ ಬಗ್ಗೆ, ಹಿರಿಯರ ಹಾರೈಕೆಗಳ ಬಗ್ಗೆ, ಒಳ್ಳೆತನವೇ ದೌರ್ಬಲ್ಯವಾಗುವ ಬಗ್ಗೆ ನಾನಾ ದೃಷ್ಟಿಕೋನಗಳಿಂದ ವಿವರಿಸಿದ ಲೇಖನಗಳು ಈ ಪುಸ್ತಕದಲ್ಲಿವೆ.

ಇದಲ್ಲದೆ ‘ಟಿ ಟ್ವೆಂಟಿ ವೇಗಕ್ಕೆ ಸಾಯದಿರಲಿ ಕನಸು’, ‘ಕ್ರಿಕೆಟ್ಟು ನಮ್ಮ ಬದುಕಿಗೆ ಹೇಳಿ ಕೊಡಲಿದೆ ಸಾಕಷ್ಟು’ ಎನ್ನುವ ಲೇಖನಗಳಲ್ಲಿ ಜೀವನವನ್ನು ಕ್ರಿಕೆಟ್ ಆಟದೊಡನೆ ಹೋಲಿಸಿರುವುದು ವಿಶೇಷ. ಕ್ರಿಕೆಟ್ಟಿನಲ್ಲಿ ಹೇಗೆ ಸೋಲು ಗೆಲುವುಗಳಿರುತ್ತದೆಯೋ ಹಾಗೇ ಜೀವನದಲ್ಲಿಯೂ ಸೋಲು ಗೆಲುವುಗಳಿರುತ್ತವೆ, ಅದನ್ನು ನಾವು ಕ್ರಿಕೆಟ್ಟಿನ ಸೋಲು ಗೆಲುವಿನಂತೇ ಸಾಮಾನ್ಯವಾಗಿ ಸ್ವೀಕರಿಸಬೇಕು ಎಂದು ಹೇಳಿರುವ ಲೇಖಕರು ಇದು ಕ್ರಿಕೆಟ್ಟಿನಿಂದ ನಾವು ಕಲಿಯಬೇಕಾಗಿರುವ ಆಶಾವಾದದ ಪಾಠ ಎಂದಿದ್ದಾರೆ.

‘ಐ ಡೋಂಟ್ ಕೇರ್ ಎನ್ನುವ ಮೊದಲು…’ ಎನ್ನುವ ಲೇಖನದಲ್ಲಿ ಹಾಗೆನ್ನುವವರ ಮನದಾಳದಲ್ಲಿರುವ ತಮ್ಮನ್ನು ಅರ್ಥ ಮಾಡಿಕೊಳ್ಳದವರ” ಬಗೆಗಿನ ನಿರಾಶೆಯ ಕುರಿತಂತೆ ಲೇಖಕರು ಆಪ್ತ ಮಾತುಗಳನ್ನಾಡಿದ್ದಾರೆ.

‘ನೀವು ನಿಮ್ಮ ಮೊಬೈಲ್ ಬಿಟ್ಟು ಇರಬಲ್ಲಿರಾ?‘ ಎಂಬ ಲೇಖನದಲ್ಲಿ ಬರಹಗಾರ ಇಂದು ನಾವೆಷ್ಟು ಮೊಬೈಲಿಗೆ ಅಡಿಯಾಳಾಗಿದ್ದೇವೆ, ಸ್ಮಾರ್ಟ್ ಫೋನ್ ಗೆ ನಾವೆಷ್ಟು ಒಗ್ಗಿ ಹೋಗಿದ್ದೇವೆ, ಆ ಮೂಲಕ ನಮ್ಮ ನೆಮ್ಮದಿಯನ್ನು ಹೇಗೆ ಕೆಡಿಸಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.

ಇನ್ನು ‘ಬದುಕಲ್ಲಿ ಸ್ಪಷ್ಟತೆ ಇರಲಿ, ಉತ್ತರದಲ್ಲೂ,’ ‘ನಿಮ್ಮ ಗುರಿ, ನಿರೀಕ್ಷೆ ಎರಡೂ ಒಂದೇನಾ?’ ’ನಂಬಿಕೆ ಅಂದ್ರೆ ನಂಬಿಕೆ ಅಷ್ಟೇ’ ಎಂಬ ಲೇಖನಗಳೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ವಿಚಾರಪೂರ್ಣವಾಗಿದೆ.

ಇಷ್ಟೆಲ್ಲಾ ಹೇಳಿದ ಮೇಲೆ ಈ ಪುಸ್ತಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿ ಎನ್ನುವುದನ್ನು ಗಮನಿಸಲೇಬೇಕು. ಒಬ್ಬ ಲೇಖಕ ತನ್ನ ಚೊಚ್ಚಲ ಕೃತಿಯಲ್ಲಿ ಏನೆಲ್ಲಾ ವಿಷಯಗಳನ್ನು ಹೇಗೆಲ್ಲಾ ಪ್ರಸ್ತುತಪಡಿಸಬಹುದು? ಎಂಬ ಕುತೂಹಲದಿಂದ ನೀವೇನಾದರೂ ಈ ಪುಸ್ತಕ ಓದಲು ಮುಂದಾದರೆ ನಿಮಗೆ ಖಂಡಿತಾ ನಿರಾಶೆಯಾಗುವುದಿಲ್ಲ. ಏಕೆಂದರೆ ಈ ಕೃತಿಯಲ್ಲಿರುವ ಲೇಖನಗಳನ್ನು ಓದಿದಾಗ ನಿಮಗೆ ಇದು ಹೊಸಬರ ಬರಹ ಎಂಬಂತೆ ಕಾಣಿಸುವುದೇ ಇಲ್ಲ. ಬದಲಿಗೆ ಪ್ರತಿಯೊಂದು ಲೇಖನದಲ್ಲಿಯೂ ಗಂಭೀರ ವಿಚಾರಗಳಿದ್ದು ಬರಹದ ಭಾಷೆ ಹಾಗೂ ಶೈಲಿ ಸಹ ಯಾವುದೇ ವಯೋಮಾನದವರೂ ಓದಿ ಅರ್ಥ ಮಾಡಿಕೊಳ್ಳಬಹುದಾದಷ್ಟು ಆಪ್ತ ಹಾಗೂ ಸರಳವಾಗಿದೆ.

ಇದನ್ನೇ ಲೇಖಕರು ತಮ್ಮ ಮಾತುಗಳಲ್ಲಿ “ಸಣ್ಣ ಸಣ್ಣ ಸಾಮಾನ್ಯವೆನ್ನಿಸುವ ವಿಚಾರಗಳೆಲ್ಲಾ ಈ ಪುಸ್ತಕದ ಲೇಖನದಲ್ಲಿ ಮುಖ್ಯವಾದ ಸಂಗತಿ ಎನಿಸುತ್ತದೆ…… ಈ ನಿಟ್ಟಿನಲ್ಲಿ ಈ ಪುಸ್ತಕ ಎಲ್ಲಾ ವರ್ಗದವರಿಗೂ ಎಲ್ಲಾ ವಯೋಮಾನದವರಿಗೂ ತಾಕುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ ಆವಿ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಮೂಲಕ ಹೊರಬಂದಿರುವ ಮಧುಕರ್ ಬಳ್ಕೂರು ಅವರ ಈ ಕೃತಿ ಬದುಕಿನಲ್ಲಿ ಸೋತೆವೆಂದುಕೊಂಡವರಿಗೆ ಒಂದೇ ಒಂದು ಗೆಲುವಿಗಾಗಿ ಹಂಬಲಿಸುವವರಿಗೆ ಸ್ಫೂರ್ತಿ, ಭರವಸೆಗಳನ್ನು ನೀಡಬಲ್ಲ ಪುಸ್ತಕವಾಗಿದೆ.

ಗೆಳೆಯ #ಮಧುಕರಬಳ್ಕೂರ್ ಅವರ ಪುಸ್ತಕ #ಆಸೆಗಳುಕನಸಾಗಿಬದಲಾಗಲಿ ಕುರಿತ ನನ್ನ ಪರಿಚಯ ಲೇಖನ #ಪಂಜು ಜಾಲತಾಣದಲ್ಲಿ ದಿನಾಂಕ 21-01-2022ರಂದು ಪ್ರಕಟವಾಗಿದೆ.

ಇಸ್ಲಾಂ ಹಿಜಾಬ್ ಮತ್ತು ವಿದ್ಯಾಭ್ಯಾಸ:

 ಕಳೆದ ಕೆಲ ದಿನಗಳಿಂದ ದೇಶದಾದ್ಯಂತ ಹಿಜಾಬ್ ಕುರಿತ ವಿವಾದ ಹೊಗೆಯಾಡುತ್ತಿದೆ. ಉಡುಪಿಯ ಕಾಲೇಜಿನಲ್ಲಿ ಪ್ರಾರಂಭವಾದ ಚಿಕ್ಕ ಘಟನೆಯೊಂದು ದೇಶದ ಗಡಿಗಳನ್ನು ಮೀರಿ ವಿವಾದವಾಗಿ ಮಾರ್ಪಟ್ಟಿದೆ ಎಂದರೆ ಈ ಆಧುನಿಕ ಕಾಲದಲ್ಲಿಯೂ ಮಾನವನು ಧರ್ಮದ ಸಂಬಂಧವಾಗಿ ಹೇಗೆ ಭಾವಿಸಿಕೊಂಡಿದ್ದಾನೆ ಎನ್ನುವುದಕ್ಕೆ ಸಾಕ್ಷಿ. ರಾಜ್ಯದ ನಾನಾ ಶಾಲೆ, ಕಾಲೇಜುಗಳಲ್ಲಿನ ಕೆಲ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಹಾಕಿಕೊಳ್ಳಲು ಅವಕಾಶ ಸಿಗದಿದ್ದರೆ ಶಿಕ್ಷಣವನ್ನೇ ಮೊಟಕು ಮಾಡುತ್ತೇವೆ ಎನ್ನುವವರೆಗೆ ಮುಂದುವರಿದಿದ್ದಾರೆ. ಇದು ನಿಜಕ್ಕೂ ಆಘಾತಕರ. ”ನಮಗೆ ನಮ್ಮ ಇಸ್ಲಾಂ ಧರ್ಮ, ಹಿಜಾಬ್ ಮುಖ್ಯ, ಶಾಲೆಯ ಶಿಕ್ಷಣವಲ್ಲ, ಮನೆಯಲ್ಲಿ ನಮ್ಮ ಅಪ್ಪ-ಅಮ್ಮ ಏನು ಹೇಳುತ್ತಾರೆ ಅವರ ಮಾತುಗಳನ್ನು ಕೇಳುತ್ತೇವೆ” ಎನ್ನುವ ಇವರು ಕರ್ನಾಟಕ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶಕ್ಕೂ ಕ್ಯಾರೇ ಎನ್ನುತ್ತಿಲ್ಲ. ಇನ್ನೊಂದೆಡೆ ಹಿಜಾಬ್ ವಿವಾದದ ವಸ್ತುವೇ ಅಲ್ಲ, ಇದು ಮುಸ್ಲಿಂ ಯುವತಿಯರನ್ನು, ಮಹಿಳೆಯರನ್ನು ಶಿಕ್ಷಣದಿಂಡ ದೂರ ಸರಿಸುವ ಸಂಚಾಗಿದೆ ಎಂದು ಕೇರಳ ರಾಜ್ಯಪಾಲರಾದ ಆರಿಫ್ ಮೊಹಮದ್ ಖಾನ್ ಹೇಳುತ್ತಾರೆ.

ಮೂಲ ಇಸ್ಲಾಂ ಧರ್ಮದಲ್ಲಿ ಐದು ವಿಷಯಗಳನ್ನು ಕಡ್ಡಾಯ ಮಾಡಲಾಗಿದೆ. ಅವುಗಳೆಂದರೆ ಕಲಿಮಾ, ಪ್ರಾರ್ಥನೆ, ರಂಜಾನ್ ಉಪವಾಸ, ದಾನ ಮತ್ತು ಹಜ್. ಈ ಪಟ್ಟಿಯಲ್ಲಿ ಹಿಜಾಬ್ ಇಲ್ಲ. ಹಾಗಾಗಿ ಇದು ಇಸ್ಲಾಂ ಧರ್ಮದ ಮೂಲ ಅಗತ್ಯವಾಗಿಲ್ಲ ಎಂದು ಕೇರಳ ರಾಜ್ಯಪಾಲರು ತಮ್ಮ ಮಾತುಗಳಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖಾರ್ಹ.

ಹಿಜಾಬ್ ಪರವಾಗಿ ವಾದಿಸುವ ವಿದ್ಯಾರ್ಥಿನಿಯರು ಮಾತ್ರ ತಾವು ನೂರಾರು ವರ್ಷಗಳಿಂದ ಇದನ್ನು ಧರಿಸುತ್ತಾ ಬಂದಿದ್ದೇವೆ. ಇದೇನೂ ನಿನ್ನೆ ಮೊನ್ನೆ ಬಂದ ಆಚರಣೆಯಲ್ಲ. ಇಷ್ತೂ ದಿನ ನಾವು ಶಾಲೆಗೆ ಹಿಜಾಬ್ ಧರಿಸಿಯೇ ಬರುತ್ತಿದ್ದೆವು, ಈಗ ಮಾತ್ರವೇ ವಿರೋಧ ವ್ಯಕ್ತವಾಗುತ್ತಿರುವುದೇಕೆ? ಎನ್ನುತ್ತಾರೆ. ಅಲ್ಲದೆ ಹಿಂದೂ ಯುವತಿಯರು ಬಳೆ, ಕುಂಕುಮಗಳನ್ನು, ಯುವಕರು ರುದ್ರಾಕ್ಷಿಯಂತಹಾ ವಸ್ತುಗಳನ್ನು, ಕ್ರಿಶ್ಚಿಯನ್ನರು ಶಿಲುಬೆಗಳನ್ನು ಧರಿಸಿ ಶಾಲೆಗೆ ಬರಬಹುದಾದರೆ ನಾವೇಕೆ ಹಿಜಾಬ್ ಧರಿಸಕೂಡದು? ಹೀಗೆ ಅವರ ವಾದ ಸರಣಿ ಸಾಗುತ್ತದೆ.

ಹಾಗಾದರೆ ಸಮವಸ್ತ್ರ ಎನ್ನುವುದಕ್ಕೆ ಯಾವ ಮಾನ್ಯತೆ, ಮೌಲ್ಯವೂ ಇಲ್ಲವೆ? ಖಂಡಿತವಾಗಿಯೂ ಇದೆ. ಮಕ್ಕಳಲ್ಲಿ ತಾವು ಇಂತಹಾ ಜಾತಿ, ಧರ್ಮದವರು, ಶ್ರೀಮಂತರು, ಬಡವರು, ಮೇಲು ಕೀಳು ಎಂಬ ನಾನಾ ಬೇಧ ಭಾವಗಳು ಮೂಡದಿರಲಿ ಎಂಬ ಕಾರಣಕ್ಕಾಗಿಯೇ ಒಂದೇ ಬಗೆಯ ಬಣ್ಣ, ವಿನ್ಯಾಸವುಳ್ಳ ಸಮವಸ್ತ್ರ ಹಾಕಿಕೊಳ್ಳುವ ಪದ್ದತಿಯನ್ನು ಜಾರಿಗೆ ತರಲಾಗಿದೆ. ಎಂದರೆ ಒಂದು ಶಾಲೆಯಲ್ಲಿ ಕಲಿಯುವ ಮಕ್ಕಳು ಅವರೆಂತಹಾ ಧಾರ್ಮಿಕ ಹಿನ್ನೆಲೆಯವರಾಗಿದ್ದರೂ, ಆರ್ಥಿಕ ಹಿನ್ನೆಲೆ ಏನೇ ಇದ್ದರೂ ಜಾತಿ ಹೇಗಾಗಿದ್ದರೂ ಅವರೆಲ್ಲಾ ಒಂದೇ ಎಂದು ಮನೋಭಾವ ಬೆಳೆಯುವಂತಿರಬೇಕು. ಆ ಮೂಲಕ ಮಕ್ಕಳಲ್ಲಿ ಪರಸ್ಪರ ಸಮಾನತೆ ಅರಿವು ಮೂಡಬೇಕೆಂಬ ಉದಾತ್ತ ನಿಲುವು ಈ ಸಮವಸ್ತ್ರ ನೀತಿಯ ಹಿಂದಿದೆ. ಆದರೆ ಇದೀಗ ಹುಟ್ಟಿಕೊಂಡಿರುವ ಹಿಜಾಬ್ ವಿವಾದ ಮಕ್ಕಳಲ್ಲಿ ಧರ್ಮ ಬೇಧವನ್ನು ಉಂಟು ಮಾಡಿ ಪರಸ್ಪರ ಸ್ನೇಹದಿಂದಿರಬೇಕಾದವರು ಪರಸ್ಪರ ವೈರತ್ವ ಬೆಳೆಸಿಕೊಳ್ಲಲು ದಾರಿ ಮಾಡಿಕೊಡುತ್ತಿದೆ. ಮುಂದೊಂದು ದಿನ ಇದೇ ಸಮಸ್ಯೆ ಬೃಹತ್ ಗಾತ್ರದಲ್ಲಿ ಬೆಳೆದು ವಿದ್ಯಾರ್ಥಿ ಸಮುದಾಯದ ಒಳಗೆ ಬಹುದೊಡ್ಡ ಸಾಮಾಜಿಕ ಕಂದಕವನ್ನು ನಿರ್ಮಾಣ ಮಾಡುವ ಸಾಧ್ಯತೆಯಿದೆ.

ಇದಲ್ಲದೆ ಕಳೆದ ಎರಡು ವರ್ಷಗಳಿಂಡ ಕೊರೋನಾ ಮಹಾಮಾರಿಯ ಕಾರಣ ಸರಿಯಾಗಿ ತರಗತಿಯು ನಡೆಯದೆ ಶಿಕ್ಷಣ ವಯವಸ್ಥೆ ತಳ ಹಿಡಿದಿದ್ದು ಶಾಲಾ ಕಾಲೇಜುಗಳು ಕೆಲವೇ ತಿಂಗಳ ಹಿಂದೆ ಸಹಜ ಸ್ಥಿತಿಯನ್ನು ತಲುಪಿದೆ. ಅಈ ಸಮಯದಲ್ಲಿ ,ಕೋವಿಡ್‌ನಿಂದ ಅನಿಯಮಿತವಾದ ಪಠ್ಯ ಚಟುವಟಿಕೆಗಳಿಗೆ ತಲೆ ಕೊಡಬೇಕಾಗಿದ್ದ ಶಿಕ್ಷಣ ಸಂಸ್ಥೆಗಳು ಹಿಜಾಬ್ ನಿಂದಾಗಿ ಸಮವಸ್ತ್ರ ವಿವಾದಕ್ಕೆ ಸಿಲುಕಿರುವುದು ವಿಷಾದನೀಯ.

ಇದೆಲ್ಲಕ್ಕಿಂತ ಮಿಗಿಲಾಗಿ ನಾವಿಲ್ಲಿ ಇನ್ನೊಂದು ಮಹತ್ವದ ಅಂಶವನ್ನು ಗಮನಿಸಬೇಕು. ಅದೆಂದರೆ ಇಂದು ಹಿಜಾಬ್, ಕೇಸರಿ ಶಾಲು ವಿವಾದದಿಂದ ಶಿಕ್ಷಣದಿಂದ ವಂಚಿತರಾದವರಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಇದೇ ದೊಡ್ಡ ಸವಾಲಾಗಲಿದೆ. ಕಾಲೇಜು ವಿದ್ಯಾಭ್ಯಾಸ ಮುಗಿಸಿ ಹೊರಬಂದು ಉದ್ಯೋಗ ಹುಡುಕಾಟ ನಡೆಸುವ ವೇಳೆಯಲ್ಲಿ ಯಾವ ಉದ್ಯೋಗದಾತ ಸಂಸ್ಥೆ ಅಥವಾ ವ್ಯಕ್ತಿಯೂ ಅಂಕಪಟ್ಟಿ ಹಾಗೂ ಶ್ರೇಯಾಂಕ (ಪರ್ಸಂಟೇಜ್) ನೋಡಿ ಆತ/ಆಕೆಗೆ ಉದ್ಯೋಗ ನೀಡುವನೇ ವಿನಃಅ ಆತ/ಆಕೆ ಹಿಜಾಬ್ ಅಥವಾ ಕೇಆರಿ ಶಾಲು ಹಾಕಿರುವುದನ್ನು ನೋಡಿ ಯಾರೂ ಕೆಲಸ ನೀಡುವುದಿಲ್ಲ. ಪ್ರತಿಯೊಬ್ಬ ಮಕ್ಕಳ ಪೋಷಾಕರೂ ತಮ್ಮ ಮಕ್ಕಳು ಒಳ್ಳೇ ಓದು ಓದಿ ವಿದ್ಯಾವಂತರಾಗಿ ಸ್ವಾವಲಂಬಿಗಳಾಗಿ ಬದುಕಬೇಕೆಂದು ಬಯಸುವವರಿದ್ದಾರೆ. ಅದಕ್ಕಾಗಿ ತಾವು ಕಷ್ಟ ಪಟ್ಟು ಸಾಲ, ಸೋಲಗಳನ್ನು ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ತಾವು ಧರಿಸುವ ಬಟ್ಟೆಯೇ ಮುಖ್ಯ, ಅದರ ಹಿಂದಿನ ಧಾರ್ನಿಕ ಕಾರಣಗಳೇ ತಮಗೆ ಶ್ರೇಷ್ಠವಾದದ್ದೆಂದು ನಂಬಿ ನಡೆಯುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ತಮ್ಮ ತಂದೆ ತಾಯಿಗಳ ಕನಸು ಈಡೇರಿಸಲು ಇರುವ ಏಕೈಕ ಮಹೋನ್ನತ ಮಾರ್ಗ ಶಿಕ್ಷಣ ಎನ್ನುವುದು ಅರಿವಾಗುವ ಮುನ್ನ ಕಾಲ ಮಿಂಚಿ ಹೋಗಿರುತ್ತದೆ.

ಇನ್ನು ಹಿಂದೂ ಅಥವಾ ಮುಸ್ಲಿಂ ಯಾವುದೇ ಧರ್ಮದವರಿರಲಿ ಧಾರ್ಮಿಕ ಆಚರಣೆಗಳ ಮಹತ್ವ ಅದೆಷ್ಟೇ ದೊಡ್ಡದಾಗಿರಲಿ ಅದೆಲ್ಲಕ್ಕೀಂತ ಶಿಕ್ಷಣ, ಭವಿಷ್ಯದ ಜೀವನ ಮುಖ್ಯ ಎನ್ನುವುದನ್ನು ಮನಗಾಣಬೇಕಿದೆ. ಇದಕ್ಕೆ ಉತ್ತಮ ಉದಾಹರಣೆಯನ್ನಾಗಿ ನಾವು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೋಡಬಹುದು. ಓರ್ವ ದಲಿತ ಕುಟುಂಬದಿಂದ ಬಂದ ಅಂಬೇಡ್ಕರ್ ತಾವು ಉನ್ನತ ಜಾತಿಯವರಿಗೆ ಸರಿಸಮನಾಗಿ ನಿಲ್ಲಬೇಕಾದರೆ ನನಗೆ ಶಿಕ್ಷಣವೊಂದೇ ಮಾರ್ಗ ಎಂದು ಅರಿತಿದ್ದರು. ಅದಕ್ಕಾಗಿ ಅವರು ಹಗಲಿರುಳು ಕುಳಿತು ಓದಿ ತಮ್ಮ ಗುರಿಯನ್ನು ಸಾಧಿಸಿದ್ದರು. ಹಾಗಿಲ್ಲದೆ ಅವರೇನಾದರೂ ತಾನು ದಲಿತ, ದಲಿತ ಜಾತಿಯ ಸೂಚಕ ಗುರುತು ಧರಿಸಿ ಮಾತ್ರ ಶಾಲೆಗೆ ಬರುವೆನು ಇಲ್ಲವಾದರೆ ಬರಲಾರೆ ಎಂದು ಪ್ರತಿಭಟಿಸಿ ಉಳಿದಿದ್ದರೆ ಅವರೆಂದೂ ಭಾರತದ ಸರ್ವಶ್ರೇಷ್ಠ ನೇತಾರರಾಗಿರುತ್ತಿರಲಿಲ್ಲ.

ಇದೇ ವೇಳೆ ಶಿಕ್ಷಣ ಮುಖ್ಯವಲ್ಲ ಬದಲಿಗೆ ಧಾರ್ಮಿಕ ಆಚರಣೆ, ನಂಬಿಕೆಗಳು ಮುಖ್ಯ ಎನ್ನುವವರು ಹೇಗೆ ರೂಪುಗೊಳ್ಳಬಹುದು ಎನ್ನಲು ಅಮೆರಿಕಾದ ಅವಳಿ ಕಟ್ಟಡ ನಾಶಪಡಿಸಿದ ಜಾಗತಿಕ ಉಗ್ರ ಅಲ್ ಖೈದಾದ ಜನಕ ಒಸಾಮಾ ಬಿನ್ ಲಾಡೆನ್ ಜೀವನ ನಮ್ಮ ಕಣ್ಣ ಮುಂದಿದೆ. ಲಾಡೆನ್ ಶ್ರೀಮಂತ ಕುಟುಂಬದಲ್ಲಿ ಜನಿಸಿ ಉತ್ತಮ ಶಿಕ್ಷಣ ಪಡೆದಿದ್ದರೂ ಕೂಡ ಧರ್ಮಾಂಧತೆಯಲ್ಲಿ ಮುಳುಗೆದ್ದು ಅದನ್ನೇ ಸರ್ವಸ್ವ ಎಂದುಕೊಂಡ ಪರಿಣಾಮ ಜಾಗತಿಕ ಭಯೋತ್ಪಾದಕನಾಗಿ ಬದಲಾಗಿದ್ದ ಹಾಗೂ ಅಂತ್ಯದಲ್ಲಿ ಅಮೆರಿಕಾ ಕೈನಲ್ಲಿ ಒಂದು ಯಕಶ್ಚಿತ್ ಕ್ರಿಮಿಯಂತೆ ಹತ್ಯೆಯಾದ.

ಹಾಗಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ತಮ್ಮ ಧರ್ಮದ ನಂಬಿಕೆಗಳಿಗೆ ಜೋತು ಬೀಳದೆ ಶಿಕ್ಷಣದ ಶ್ರೇಷ್ಠತೆಯನ್ನರಿತು ಮುಂದುವರಿದರೆ ಭಾರತ ಇನ್ನಷ್ಟು ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ ಅವರುಗಳನ್ನು ಪಡೆಅಯಲಿದೆ ಅಲ್ಲದೆ ಹೋದರೆ ಮುಂದೊಂದು ದಿನ ಭಾರತದಲ್ಲಿ ಸಹ ನೆರೆಯ ಅಫ್ಘಾನಿಸ್ಥಾನದಂತಹಾ ವ್ಯವಸ್ಥೆ ತಲೆ ಎತ್ತಬಹುದು.ಹಾಗಾಗಿ ಭವ್ಯ ಭಾರತದ ಭವಿಷ್ಯವಾದ ಮಕ್ಕಳು, ಯುವಕ, ಯುವತಿಯರು ರಾಜಕೀಯ ಪ್ರೇರಿತ, ಅಂತರಾಷ್ಟ್ರೀಯ ಒತ್ತಡ ತಂತ್ರಗಳಿಗೆ ಬಲಿಯಾಗದೆ ಹಿಜಾಬ್, ಕೇಸರಿ ಶಾಲುಗಳ ಹಿಂದೆ ಬೀಳದೆ ನೈಜ ಶಿಕ್ಷಣ ಪಡೆಯುವತ್ತ ಗಮನಹರಿಸಿ ಮುಂದಿರುವ ಉಜ್ವಲ ಭವಿಷ್ಯಕ್ಕಾಗಿ ಸಜ್ಜಾಗಬೇಕಿದೆ.

ಹಿಜಾಬ್ ಮತ್ತು ಶಿಕ್ಷಣ ಕುರಿತಂತೆ ನನ್ನ ಲೇಖನ My article @  #ಪಂಜು ಆನ್ಲೈನ್ ಪತ್ರಿಕೆಯಲ್ಲಿ ದಿನಾಂಕ 25-02-2022ರಂದು ಪ್ರಕಟವಾಗಿದೆ

Wednesday, February 23, 2022

अहिंसा परमो धर्मः धर्म हिंसा तथैव च: ಈ ಶ್ಲೋಕ ಯಾವ ಧರ್ಮಗ್ರಂಥದಲ್ಲಿಯೂ ಇಲ್ಲ...!

अहिंसा परमो धर्मः धर्म हिंसा तथैव च:  ಈ ಸಾಲು ಯಾವುದೇ ಧಾರ್ಮಿಕ ಗಂಥಗಳಲ್ಲಿರುವ ಶ್ಲೋಕ ಅಲ್ಲ.ಸಂಸ್ಕೃತ ವ್ಯಾಕರಣದಲ್ಲಿ ಉತ್ತಮ ಜ್ಞಾನವನ್ನು ಹೊಂದಿರುವ ಯಾರಾದರೂ 2 ನೇ ಸಾಲು ಶಬ್ದಾರ್ಥದಲ್ಲಿ ಧ್ವನಿಸುವುದಿಲ್ಲ ಎನ್ನುವುದನ್ನು ಪತ್ತೆ ಮಾಡಬಹುದು.


ಮೊದಲ ಸಾಲನ್ನುಮಹಾತ್ಮ ಗಾಂಧೀಜಿಯವರು ‘ಅಹಿಂಸೆಯೇ ಪರಮ ಧರ್ಮ’ ಎಂದು ಉಲ್ಲೇಖಿಸಲು ವ್ಯಾಪಕವಾಗಿ ಬಳಸಿದ್ದಾರೆ.  ಆದರಿದು ಅರ್ಧ ಶ್ಲೋಕ ಮಾತ್ರವೇ ಆಗಿದೆ. ಸಂಪೂರ್ಣಅರ್ಥದಲ್ಲಿ ಆ<ಗ್ಲಪದ ನಾ ವಯಲೆನ್ಸ್ ಗೂ ಸಂಸ್ಕೃತದ ಅಹಿಂಸೆ ಎಂಬ ಪದಕ್ಕೂ ಬಹಳ ದೊಡ್ಡ ವ್ಯತ್ಯಾಸವಿದೆ. ಅಲ್ಲದೆ अहिंसा परमो धर्मः ಎಂಬ ಸೂಕ್ತಿ ಮಹಾಭಾರತದಿಂದ ಬಂದಿರುವುದಾಗಿದೆ. ಈ ನುಡಿಗಟ್ಟು ಮಹಾಭಾರತದ ವಿವಿಧ ಪರ್ವಗಳಲ್ಲಿನೇಕ ಬಾರಿ ಕಾಣಿಸಿಕೊಳ್ಳುತ್ತದೆ ಮತ್ತು ಪ್ರತಿ ಸಾಲುಗಳಲ್ಲಿ  ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ನಿರ್ಣಾಯಕ ವಾಕ್ಯಗಳೊಂದಿಗೆ ಹೇಳಲಾಗಿದೆ. ಅಲ್ಲದೆ ಎಲ್ಲಾ ಸನ್ನಿವೇಶಗಳಲ್ಲಿ ಈ ನುಡಿಗಟ್ಟನ್ನು ಬ್ರಾಹ್ಮಣ, ಸನ್ಯಾಸಿಗಳ ಉಪದೇಶಕ್ಕಾಗಿ ಬಳಸಲಾಗಿದೆ. ಅವರು ಎಂದಿಗೂ  ಆಯುಧಗಳಿಂದ ದೂರವಿರುತ್ತಾರೆ ಮತ್ತು ಸ್ವಯಂ-ಸಾಕ್ಷಾತ್ಕಾರವನ್ನು ಸಾಧಿಸುವ ಸಲುವಾಗಿ ತಪಸ್ವಿಗಳ ಜೀವನ ಅನುಸರಿಸುತ್ತಾರೆ. ಧರ್ಮ ಮತ್ತು ರಾಜ್ಯವನ್ನು ರಕ್ಷಿಸುವ ಕರ್ತವ್ಯಕ್ಕೆ ಬದ್ದವಾಗಿರುವ ರಾಜರು ಯೋಧರಾಗಿದ್ದು ಅವರಿಗೆ ಈ ಸೂಕ್ತಿ ಅನ್ವಯಿಸುವುದಿಲ್ಲ. ಅಲ್ಲದೆ ತನ್ನ ಕುಟುಂಬ ಮತ್ತು ತನ್ನ ಸುತ್ತಲಿನ ಸಮಾಜವನ್ನು ರಕ್ಷಿಸುವ ಕರ್ತವ್ಯವನ್ನು ಹೊಂದಿರುವ ಸಾಮಾನ್ಯ ಮನುಷ್ಯನಿಗೆ ಇದು ಅನ್ವಯಿಸುವುದಿಲ್ಲ.

ಆದಿ ಪರ್ವದಲ್ಲಿ - ಸೂತ ಮುನಿಯು ಸರ್ಪವೊಂದು ಸಹಸ್ರಪಪದ  ಎಂಬ ಬ್ರಾಹ್ಮಣನಾಗಿ ರೂಪಾಂತರಗೊಳ್ಳುವ ಕಥೆಯನ್ನು ಹೇಳುತ್ತಿದ್ದಾನೆ ಮತ್ತು ತನ್ನ ಪತ್ನಿ ಹಾವಿನಿಂದ ಕಚ್ಚಲ್ಪಟ್ಟದ್ದರಿಂದ  ಹಾವುಗಳನ್ನು ಕೊಲ್ಲಲು ಹೊರಟಿದ್ದ ರುರು ಎಂಬ ಬ್ರಾಹ್ಮಣನಿಗೆ ಈ ಶ್ಲೋಕವನ್ನು ಹೇಳುತ್ತಾನೆ.

अहिंसा परमो धर्मः सर्वप्राणभृतां स्मृतः ।

तस्मात्प्राणभृतः सर्वान्न हिंस्याद्ब्राह्मणः क्वचित् ।। (1.11.12) [ 1 ನೇ (ಆದಿ) ಪರ್ವ, 11 ನೇ ಅಧ್ಯಾಯ, 12 ನೇ ಶ್ಲೋಕ]

ನಿಸ್ಸಂಶಯವಾಗಿ ಅಹಿಂಸೆಯು ಇತರರ ಜೀವವನ್ನು ಉಳಿಸುವುದಕ್ಕಾಗಿನ  ಅತ್ಯುನ್ನತ ಸದ್ಗುಣವಾಗಿದೆ. ಆದ್ದರಿಂದ ಬ್ರಾಹ್ಮಣನು ಯಾವುದೇ ಜೀವಿಯ ಪ್ರಾಣವನ್ನು ತೆಗೆಯಬಾರದು.

ವನಪರ್ವದಲ್ಲಿ - ಮಾರ್ಕಂಡೇಯ ಮುನಿಯು ಮಿಥಿಲೆಯಲ್ಲಿ ವಾಸಿಸುತ್ತಿದ್ದ ಕೌಶಿಕ ಎಂಬ ಬ್ರಾಹ್ಮಣ ಮತ್ತು ಧರ್ಮವ್ಯಾಧ ಎಂಬ ಕೋಳಿ ವ್ಯಾಪಾರಿಯ ನಡುವಿನ ಚರ್ಚೆಯನ್ನು ವಿವರಿಸುತ್ತಾನೆ. ಕೌಶಿಕನು ಕೋಳಿ ವ್ಯಾಪಾರಿಯಲ್ಲಿ  ಕೇಳುತ್ತಾನೆ ‘ಸದ್ಗುಣವೆಂದರೇನು ಎಂದು ನಾನು ಹೇಗೆ ತಿಳಿಯಲಿ’ ಅದಕ್ಕೆ ಧರ್ಮವ್ಯಾಧನು ಉತ್ತರಿಸುತ್ತಾನೆ:

अहिंसा सत्यवचनं सर्वभूतहितं परम

अहिंसा परमॊ धर्मः स च सत्ये परतिष्ठितः

सत्ये कृत्वा परतिष्ठां तु परवर्तन्ते परवृत्तयः ।। (3.198.69)

ಪವಿತ್ರ ಪುರುಷರಲ್ಲಿ, ಸದ್ಗುಣವನ್ನು ಮೂರು ವಿಧಗಳಲ್ಲಿ ತೋರಿಸಲಾಗುತ್ತದೆ  ವೇದಗಳಲ್ಲಿ ಅಳವಡಿಸಲಾಗಿರುವ ಮಹಾನ್ ಸದ್ಗುಣ, ಇನ್ನೊಂದು ಧರ್ಮ ಶಾಸ್ತ್ರಗಳಲ್ಲಿ ಹೇಳಲಾಗಿರುವ  ಸದ್ಗುಣ ಮತ್ತು ಜ್ಞಾನ ಸಂಪಾದನೆ, ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆಗಳ ಮೂಲಕ ಪಡೆಯುವ ಸದ್ಗುಣ  ಸತ್ಯತೆ, ಸಹನೆ, ಶುದ್ಧತೆ ಮತ್ತು ನೇರ ನಡೆ ಇವು ಸದ್ಗುಣಗಳ ರೂಪಗಳಗಿದೆ.

ಅನುಶಾಸನ ಪರ್ವದಲ್ಲಿ - ಯುಧಿಷ್ಠಿರನು ಬಾಣಗಳ ಹಾಸಿಗೆಯ ಮೇಲಿರುವ ಭೀಷ್ಮನಿಂದ ಅಂತಿಮ ಸೂಚನೆಗಳನ್ನು ಪಡೆಯುತ್ತಿದ್ದಾನೆ, ಯುಧಿಷ್ಠಿರನು ಭೀಷ್ಮನನ್ನು ಕೇಳುತ್ತಾನೆ -

अहिंसा परमॊ धर्म इत्य उक्तं बहुशस तवया ।

शराथ्धेषु च भवान आह पितॄन आमिष काङ्क्षिणः ।। (13.116.1)

ಗಾಯ ಅಥವಾ ವ್ರಣದಿಂದ ದೂರವಿರುವುದು ಅತ್ಯುನ್ನತ ಧರ್ಮ ಎಂದು ನೀವು ಹಲವು ಬಾರಿ ಹೇಳಿದ್ದೀರಿ. ಆದಾಗ್ಯೂ, ಪಿತೃಗಳ ಗೌರವಾರ್ಥವಾಗಿ ಆಚರಿಸಲಾಗುವ ಶ್ರಾದ್ಧಗಳಲ್ಲಿ, ವ್ಯಕ್ತಿಗಳು ತಮ್ಮ ಒಳಿತಿಗಾಗಿ ವಿವಿಧ ರೀತಿಯ ಮಾಂಸವನ್ನು ಅರ್ಪಿಸಬೇಕು.

ಭೀಷ್ಮನು ಇದಕ್ಕೆ ವಿವರವಾಗಿ ಉತ್ತರಿಸಿದ್ದಾನೆ.ಈ  ಎರಡು ಶ್ಲೋಕಗಳಲ್ಲಿ ಅದನ್ನು ಮತ್ತೆ ಉಲ್ಲೇಖಿಸಲಾಗಿದೆ.

अहिंसा परमॊ धर्मस्तथाहिंसा परॊ दमः।

अहिंसा परमं दानमहिंसा परमं तपः ।।

अहिंसा परमॊ यज्ञस तथाहिस्मा परं बलम

अहिंसा परमं मित्रम अहिंसा परमं सुखम

अहिंसा परमं सत्यम अहिंसा परमं शरुतम ।। (13.117.37,38)

ಅಹಿಂಸೆ ಅತ್ಯುನ್ನತ ಧರ್ಮ, ಅಹಿಂಸೆ ಅತ್ಯುನ್ನತ ಸ್ವಯಂ ನಿಯಂತ್ರಣ,

ಅಹಿಂಸೆಯೇ ಶ್ರೇಷ್ಠ ಉಡುಗೊರೆ , ಅಹಿಂಸೆಯೇ ಅತ್ಯುತ್ತಮ ಅಭ್ಯಾಸ,

ಅಹಿಂಸೆಯೇ ಅತ್ಯುನ್ನತ ತ್ಯಾಗ, ಅಹಿಂಸೆಯೇ ಶ್ರೇಷ್ಠ ಶಕ್ತಿ,

ಅಹಿಂಸೆಯೇ ಶ್ರೇಷ್ಠ ಸ್ನೇಹಿತ, ಅಹಿಂಸೆಯೇ ಶ್ರೇಷ್ಠ ಸಂತೋಷ,

ಅಹಿಂಸೆ ಅತ್ಯುನ್ನತ ಸತ್ಯ, ಮತ್ತು ಅಹಿಂಸೆಯೇ ಶ್ರೇಷ್ಠ ಬೋಧನೆ.

ಆದರೆ ರಾಮಾಯಣ ಮತ್ತು ಮಹಾಭಾರತಗಳೆರಡೂ ಯುದ್ಧ ಮತ್ತು ಆತ್ಮರಕ್ಷಣೆಯನ್ನು ಸಮರ್ಥಿಸುವ ಸಂದರ್ಭಗಳ ಕುರಿತು ಮಾತನಾಡುವ ಬಹು ಸ್ಲೋಕಗಳನ್ನು ಹೊಂದಿವೆ. ಅನುಶಾಸನ ಪರ್ವದಲ್ಲಿ ಅಂದಿನ ಕಾಲದ  ಅಗ್ರಗಣ್ಯ ಯೋಧ ಭೀಷ್ಮನು ಅಹಿಂಸೆಯ ಬಗ್ಗೆ ಮಾತನಾಡುತ್ತಾನೆ ಏಕೆಂದರೆ ಅವನು ತನ್ನ ಕರ್ತವ್ಯದ ಹಾದಿಯಲ್ಲಿ ಮಾತ್ರವೇ ಹೋರಾಟ ನಡೆಸಿದ್ದಾನೆ.

ಅಹಿಂಸೆಯ ವ್ಯಾಖ್ಯಾನದಲ್ಲಿ ಒಂದು ಹೀಗಿದೆ-

वेदोक्तेन प्रकारेण विना सत्यं तपोधन ।

कायेन मनसा वाचा हिंसाऽहिंसा न चान्यथा ॥

आत्मा सर्वगतोऽच्छेद्यो न ग्राह्य इति मे मतिः ।

स चाहिंसा वरा प्रोक्ता मुने वेदान्तवेदिभिः ॥ ( 1.7,8 दर्शनोपनिषत्) ದರ್ಶನೋಪನಿಷತ್) ದರ್ಶನ ಉಪನಿಷತ್ ಅಥವಾ ಜಬಲ್ ದರ್ಶನ ಉಪನಿಷದ್ ಅಥವಾ ಸಂವೇದದ ಯೋಗ ದರ್ಶನ ಉಪನಿಷತ್.

ವಾಸ್ತವವಾಗಿ, ವೇದಗಳ  ಸೂಚನೆಗಳಿಗೆ ಅನುಸಾರವಾಗಿ ದೇಹ, ಮನಸ್ಸು ಅಥವಾ ಬಾಯಿಮಾತಿನ ಮೂಲಕ ಹಿಂಸೆಗೆ ಒಳಗಾಗದಿರುವುದು ಅಹಿಂಸೆ: ಇಲ್ಲವಾದಲ್ಲಿ ಅಲ್ಲ. ಓ ಋಷಿ! ಆತ್ಮವು ಎಲ್ಲವನ್ನೂ ವ್ಯಾಪಿಸುತ್ತದೆ ಮತ್ತು ಅದು ಅವಿಭಾಜ್ಯವಾಗಿದೆ ಮತ್ತು ಇಂದ್ರಿಯಗಳಿಗೆ ಅದನ್ನು ಪ್ರವೇಶಿಸಲು/ಕಲ್ಪಿಸಲು ಸಾಧ್ಯವಿಲ್ಲ ಎನ್ನುವುದು ದೃಢವಾದ ನಂಬಿಕೆ ವೇದಾಂತವನ್ನು ತಿಳಿದವರು ಈ ನಂಬಿಕೆಯನ್ನು ಅಹಿಂಸೆಯ ಅತ್ಯುತ್ತಮ ಆಧಾರವೆಂದು ಹೇಳುತ್ತಾರೆ.

ಇಲ್ಲಿ, ಅಹಿಂಸೆಯು  ಯೋಗಿಯ ಮೂಲಭೂತ ನೀತಿಗಳನ್ನು (ಯಮ) ವಿವರಿಸುವ ಸಂದರ್ಭದಲ್ಲಿದೆ. ಇದು ರಾಜ, ಸೈನಿಕ, ಉದ್ಯಮಿ, ರೈತ ಇತ್ಯಾದಿ ಜನವರ್ಗಗಳಿಗೆ  ಅನ್ವಯಿಸುವುದಿಲ್ಲ.

ಒಬ್ಬ ವ್ಯಾಪಾರಿ ತನ್ನ ಅಂಗಡಿಯಿಂದ ಕಳ್ಳ ಕದಿಯುವುದನ್ನು ನೋಡಿಯೂ  ಕುಳಿತುಕೊಂಡು 'ಅಹಿಂಸಾ ಪರಮೋ ಧರ್ಮಃ' ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ರೈತ ತನ್ನ ಬೆಳೆಯನ್ನು ಕೀಟಗಳಿಂದ ರಕ್ಷಿಸದಿರಲು  ಸಾಧ್ಯವಿಲ್ಲ.

ಈ ಅನಗತ್ಯ 'ಅಹಿಂಸಾ' ಪದ್ಧತಿಗಳಿಂದ ರಾಜರು ಬೌದ್ಧ ಮತ್ತು ಜೈನ ಸನ್ಯಾಸಿಗಳ ಮಾತಿಗೆ ಕಟ್ಟುಬಿದ್ದು ದುರ್ಬಲರಾದರು. ತ್ತು ಭಾರತವನ್ನು ಆಕ್ರಮಣಕಾರರು ವಶಪಡಿಸಿಕೊಳ್ಳಲು ಅವಕಾಶವಾಗಿತ್ತು. ಒಬ್ಬ ರಾಜನು ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲನಾದರೆ ಮತ್ತು ದುಷ್ಟರನ್ನು ಶಿಕ್ಷಿಸದಿದ್ದರೆ, ಅವನ ದೇಶವು ಸಂಪೂರ್ಣ ಅವ್ಯವಸ್ಥೆಯ ಹಂತ ತಲುಪುತ್ತದೆ. ಕೊಲೆಗಾರನನ್ನು ಗಲ್ಲಿಗೇರಿಸುವುದು ರಾಜನಿಗೆ ಅಹಿಂಸೆ. ಹಲವರ ಪ್ರಾಣ ತೆಗೆಯುವ ಮನುಷ್ಯನನ್ನು ಕೊಲ್ಲುವುದು ಅಹಿಂಸೆ. ನಿಜವಾದ ಸನ್ಯಾಸಿ ತನ್ನ ಪ್ರಾಣಕ್ಕೆ ಅಪಾಯವಿರುವಾಗಲೂ ತನ್ನನ್ನು ತಾನು ರಕ್ಷಿಸಿಕೊಳ್ಳಬಾರದು. ಸನ್ಯಾಸಿ ಎಂದರೆ ತನ್ನ ದೇಹದೊಂದಿಗೆ ಸಹವಾಸ ಮಾಡದೆಯೇ  ತನ್ನನ್ನು ಆತ್ಮದೊಂದಿಗೆ ಗುರುತಿಸಿಕೊಳ್ಳುವವನಾಗಿದ್ದಾನೆ.

"ಅಹಿಂಸಾ ಪರಮೋ ಧರ್ಮಃ"  ಎಂಬ ವಾಕ್ಯ ಭಗವದ್ಗೀತೆಯಲ್ಲಿಲ್ಲ!

ಗೀತೆಯಲ್ಲಿ ಅಹಿಂಸೆ  ಪದವನ್ನು ನಾಲ್ಕು ಬಾರಿ ಉಲ್ಲೇಖಿಸಲಾಗಿದೆ.

ತಾನು ಹತಾಶನಾಗಿದ್ದೇನೆ ಮತ್ತು ಯುದ್ಧ ಮಾಡಲು ಇಷ್ಟವಿಲ್ಲ ಎಂದು ಅರ್ಜುನನು ಕೃಷ್ಣನಿಗೆ ಹೇಳಿದಾಗ, ಶ್ರೀಕೃಷ್ಣನು ಅರ್ಜುನನಿಗೆ ಎದ್ದು ಯುದ್ಧ ಮಾಡುವಂತೆ ಪದೇ ಪದೇ ಹೇಳುತ್ತಾನೆ.

अथ चेत्त्वमिमं धर्म्यं संग्रामं न करिष्यसि

ततः स्वधर्मं कीर्तिं च हित्वा पापमवाप्स्यसि [Gita 1.20]

ನೀನು ಈ ಧರ್ಮಯುದ್ಧವನ್ನು ಮಾಡದಿದ್ದರೆ ನಿನ್ನ ಕರ್ತವ್ಯಗಳನ್ನು ನಿರ್ಲಕ್ಷಿಸುವುದಕ್ಕಾಗಿ ನೀನು ಖಂಡಿತವಾಗಿಯೂ ಪಾಪಗಳನ್ನು ಅನುಭವಿಸುವೆ. ಹಾಗಾಗಿ ಓರ್ವ ಸಾಹಸಿಯಾಗಿ ನಿನ್ನ ಖ್ಯಾತಿ ಮಣ್ಣುಗೂಡಲಿದೆ.

ಕೃಷ್ಣನು ‘ಅಹಿಂಸಾ ಪರಮೋ ಧರ್ಮ’ ಎಂದು ಹೇಳಿದ್ದರೆ ಯುದ್ಧವು ಪ್ರಾರಂಭವಾಗುವ ಮೊದಲೇ ಕೊನೆಗೊಳ್ಳುತ್ತಿತ್ತು ಏಕೆಂದರೆ ಯುದ್ಧದ ಅಗತ್ಯವಿಲ್ಲ ಏಕೆಂದರೆ ಅಹಿಂಸೆಯೇ ಶ್ರೇಷ್ಠ ಮತ್ತು ಪಾಂಡವರು ಕೌರವರು ತಮ್ಮ ಮೇಲೆ ಮಾಡಿದ ಪ್ರತಿಯೊಂದು ದೌರ್ಜನ್ಯವನ್ನು ಕ್ಷಮಿಸಬೇಕು ಎಂದು ಕೃಷ್ಣ ಬೋಧಿಸುತ್ತಿದ್ದ. “ಅಹಿಂಸಾ ಪರಮೋ ಧರ್ಮಃ” ನಿವೃತ್ತಿ ಮಾರ್ಗವನ್ನು ತುಳಿಯುವ ಸನ್ಯಾಸಿಗಳು ಮಾತ್ರ ಅಭ್ಯಾಸ ಮಾಡಬೇಕಾಗಿರುವ ಮಾತು. ಇದನ್ನು ಗೃಹಸ್ಥ  ಕಟ್ಟುನಿಟ್ಟಾಗಿ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಅಪರಾಧಿಗಳನ್ನು ಶಿಕ್ಷಿಸುವುದು ಮತ್ತು ದೈಹಿಕ ಹಿಂಸಾಚಾರದ ಮೂಲಕ ಅವರಿಂದ ಮಾಹಿತಿಯನ್ನು ಪಡೆಯುವುದು ಪೊಲೀಸರ ಕರ್ತವ್ಯ.

ಆತ್ಮರಕ್ಷಣೆಗಾಗಿ ಮಾಡಿದ ಕೊಲೆ ಅಪರಾಧವಲ್ಲ ಎಂದು ಕಾನೂನು ಕೂಡ ಘೋಷಿಸಿದೆ.

परित्राणाय साधूनां विनाशाय च दुष्कृताम्

धर्मसंस्थापनार्थाय सम्भवामि युगे युगे |

ಧರ್ಮನಿಷ್ಠರನ್ನು ಬಿಡುಗಡೆ ಮಾಡಲು ಮತ್ತು ದುಷ್ಕರ್ಮಿಗಳನ್ನು ನಾಶಮಾಡಲು, ಹಾಗೆಯೇ ಧರ್ಮದ ತತ್ವಗಳನ್ನು ಮರುಸ್ಥಾಪಿಸಲು, ನಾನು ಯುಗ ಯುಗಗಳಲ್ಲಿಯೂ  ಕಾಣಿಸಿಕೊಳ್ಳುತ್ತೇನೆ. 

ಅಹಿಂಸೆಯು ಎಲ್ಲರಿಗೂ ಅನ್ವಯಿಸಬಹುದಾದ ಶ್ರೇಷ್ಠವಾದ ಧರ್ಮವಲ್ಲ ಮತ್ತು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನ ಅಥವಾ ಅವನಂತಹಾ ಯೋಧನಿಗೆ  ಖಂಡಿತವಾಗಿಯೂ ಅಲ್ಲ ಎಂದು ಕೃಷ್ಣ ಸ್ಪಷ್ಟವಾಗಿ ಹೇಳಿದ್ದಾನೆ.