Tuesday, September 30, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 33

ಕಾಣಿಪಾಕಮ್ (Kanipakam)

ಆಂದ್ರಪ್ರದೇಶದ ಚಿತ್ತೂರು ಜಿಲ್ಲಾ ಕೇಂದ್ರದಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಶ್ರೀ ವರಸಿದ್ದಿ ವಿನಾಯಕ ನೆಲೆನಿಂತ ಕ್ಷೇತ್ರವೇ ಕಾಣಿಪಾಕಮ್. ಬಹುಧಾ ನದಿಯ ತೀರದಲ್ಲಿ ಇರುವ ಈ ಸಣ್ಣ ಗ್ರಾಮದಲಿ ಶ್ರೀ ವಿನಾಯಕನ ಸ್ವಯಂಭೂ ಮೂರ್ತಿಯಿದ್ದು ವಿನಾಯಕ ದೇಶದ ನಾನಾ ಮೂಲೆಗಳಿಂದ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದಾನೆ. ಈ ಸ್ವಯಂಭೂ ವಿನಾಯಕ ಸ್ವಾಮಿಯು ಶತಮಾನಗಳಿಂದಲೂ ತನ್ನ ಭಕ್ತರನ್ನು ಆರೋಗ್ಯಾದಿ ಐಶ್ವರ್ಯವನ್ನು ನ್ಡಿ ಕಾಪಾಡುತ್ತಾ ಬರುತ್ತಿದ್ದಾನೆ.
Svayambhoo Sri Varasiddi Vinayaka Swami


***
Sri Vinayaka Swami temple, Kanipakam
ನೂರಾರು ವರ್ಷಗಳ ಹಿಂದೆ ಮೂಗ, ಕಿವುಡ ಹಾಗೂ ಕುರುಡರಾಗಿದ್ದ ಅಂಗವಿಕಲ ಸೋದರರು ಈ ವಿಹಾರಪುರ ಪ್ರದೇಶದಲ್ಲಿ ನೆಲೆಸಿದ್ದರು. ಇವರಿಗೆ ಸೇರಿದ್ದ ಚಿಕ್ಕ ಜಮೀನಿನಲ್ಲಿ ವ್ಯವಸಾಯವನ್ನು ಮಾಡುತ್ತಿದ್ದ ಇವರಿಗೆ ಅದೊಂದು ದಿನ ತೋಟಕ್ಕೆ ನೀರುಣಿಸುವ ಬಾವಿಯು ಬರಿದಾಯಿತು. ಅದಾಗ ಅವರಲ್ಲಿನ ಓರ್ವ ಸೋದರನು ತಾನು ಬಾವಿಗಿಳಿದು ಹರಿತವಾದ ಹಾರೆಯೊಂದರಿಂದ ಬಾವಿಯನ್ನು ಅಗೆಯಲು ತೊಡಗಿದನು.ಅದಾಗ ಸ್ವಲ್ಪ ಸಮಯದಲ್ಲಿ ಹಾರೆಯು ಬಂಡೆಯೊಂದಕ್ಕೆ ತಗುಲಿತು. ತಕ್ಷಣಾವೇ ಆ ಬಂಡೆಯಿಂದ ರಕ್ತವು ಚಿಮ್ಮಿತು, ಬಾವಿಯ ನೀರೆಲ್ಲಾ ರಕ್ತಮಯವಾಗಿ ಹೋಯಿತು. ಇಷ್ಟಾದ ಕೆಲ ಸಮಯದಲ್ಲೇ ಆ ಮೂವರು ಅಂಗವೈಕಲ್ಯ ಹೊಂದಿದ ಸಹೋದರರ ವೈಕಲ್ಯವು ನೀಗಿಹೋಯಿತು. ಆ ಸುದ್ದಿ ಊರಿಗೆಲ್ಲಾ ಹರಡಿ ಊರ ಜನರೆಲ್ಲರೂ ಬಾವಿಯ ಬಳಿ ಸಾರಿದರು. ಬಾವಿಯನ್ನು ಅಗೆಯಲು ತೊಡಗಿದರು. ಹಾಗೆ ಅಗೆಯುವಾಗ ಶ್ರೀ ವಿನಾಯಕ ಸ್ವಾಮಿಯ ಶಿರೋಭಾಗವು ಹೊರಬಂದಿತು. ಬಳಿಕ ಅಗೆತದ ಕಾರ್ಯ ಪೂರ್ಣವಾದರೂ ಸ್ವಾಮಿಯು ಪೂರ್ಣ್ ಗೋಚರವಾಗಲಿಲ್ಲ.
ಅದು ಶ್ರೀ ವಿನಾಯಕನ ಸ್ವಯಂಭೂ ಮೂರ್ತಿ ಎನ್ನುವುದು ತಿಳಿಯಿತು. ಊರ ಜನರೆಲ್ಲರೂ ಹರ್ಷ ಚಿತ್ತರಾದರು.  ಎಲ್ಲರೂ ಸ್ವಾಮಿಗಾಗಿ ಎಳನೀರನ್ನು ಅರ್ಪಿಸಿದರು. ಬಳಿಕ ಸಣ್ಣ ದೇವಾಲಯವು ನಿರಾಣ ಮಾಡಲಾಯಿತು. ಕಾಲ ಕ್ರಮೇಣ ಆ ದೇವಾಲಯವು ದೊಡ್ದ ದಾಗಿ ಇಂದಿನ ಸ್ವರೂಪ ತಾಳಿದೆ. ಅಂದು ಆ ಊರ ಜನರಿಗೆ ಗಣಪತಿಯ ಮೂರ್ತಿ ದೊರೆತ ಬಾವಿಯು ಇಂದಿಗೂ ಸಹ ನೋಡಬಹುದಾಗಿರುತ್ತದೆ.

Wednesday, September 24, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 32

ಕುಕ್ಕೆ ಸುಬ್ರಹ್ಮಣ್ಯ (Kukke Subrahmanya)
ಭಾಗ – 3

ಪರಶುರಾಮ ಕ್ಷೇತ್ರವೆಂದು ಪ್ರಸಿದ್ದವಾದ ಕರ್ನಾಟಕ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ನಂಬಿದ ಭಕ್ತರಿಗೆ ಸುಖ ಶಾಂತಿಯನ್ನು ಕರುಣಿಸುತ್ತಿರುವ ಪರಮ ಪಾವನ ಕ್ಷೇತ್ರವಾಗಿದೆ. ಪ್ರಾಚೀನ ಐತಿಹ್ಯಗಳನ್ನು, ಪೌರಾಣಿಕ ಹಿನ್ನೆಲೆಗಳನ್ನೂ ಹೊಂದಿರುವ ಶ್ರೀ ಕ್ಷೇತ್ರದ ಇನ್ನಷ್ಟು ಪುರಾಣ ಹಿನ್ನೆಲೆಯನ್ನು ನಾವೀಗ ತಿಳಿದುಕೊಳ್ಳೋಣ....

***
ಕೃತ ಯುಗದಾರಂಭದಲ್ಲಿ ಕಷ್ಯಪ ಮಹರ್ಷಿಗಳ ಧರ್ಮ ಪತ್ನಿಯಾದ ಅದಿತಿಯು ತಮ್ಮ ಮಕ್ಕಳಾದ ಇಂದ್ರಾದಿ ದೇವತೆಗಳ ಬಾಲಕ್ರೀಡೆಗಳನ್ನು ನೋಡಿ ಸಂತೋಷಿಸುತ್ತಿರಲು ಅಸಿತರೆನ್ನುವ ಮಹಾಮುನಿಗಳು ಇಂದಾದಿಗಳನ್ನು ನೋಡುವುದಕ್ಕಾಗಿ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಮನೆಯಲ್ಲಿದ್ದು ತನ್ನ ಮಕ್ಕಾಳ ಆಟ, ವಿನೋದಗಳಿಂದ ಮೈಮರೆತಿದ್ದ ಅದಿತಿಯು ತಾನು ಬಂದ ಅತಿಥಿಗಳಾನ್ನು ಉಪಚರಿಸದೇ ಹೋದಳು. ಇದರಿಂದಾಗಿ ಮಹಾನ್ ಕೋಪವನ್ನು ತಾಳಿದ ಅಸಿತರು “ಮನೆಗೆ ಬಂದ ಅತಿಥಿಯನ್ನು ಲಕ್ಷಿಸದೆ ಸೊಕ್ಕಿದ ನೀನು ರಾಕ್ಷಸಿಯಾಗಿ ಹುಟ್ಟು” ಎಂದು ಶಾಪವನ್ನು ಕೊಟ್ಟು ಮುಂದುವರಿಯಲು ಅದಿತಿಯು ಮಹಾಭೀತಿಯಿಂದ ಮುನಿಗಳ ಕಾಲಿಗೆರಗಿ “ನನ್ನದು ಮಹಾಪರಾಧವಾಯಿತು. ತಮ್ಮ ಬರುವಿಕೆಯನ್ನು ತಿಳಿಯಲಿಲ್ಲ. ನಾನು ಅಜ್ಞಾನಿ, ಈ ನನ್ನ ಅಪರಾಧವನ್ನು ಮನ್ನಿಸಿ ನನ್ನನ್ನು ಕಾಪಾಡಬೇಕು, ನನ್ನನ್ನು ಉದ್ದರಿಸಬೇಕು.// ಎಂದು ಸೆರಗೊಡ್ಡಿ ಬೇಡಿದಳು. ಆಗ “ನಿನ್ನ ಕರ್ಮಫ್ಲದಿಂದ ನನ್ನ ಬಾಯಲ್ಲಿ ಶಾಪವಾಕ್ಯವು ಬಂದಿದೆ. ಅದು ಸುಳ್ಳಾಗಲಾರದು. ನೀನು ಪಿಶಿತಾಶಿನಿ ಎನ್ನುವ ರಕ್ಕಸಿಯಾಗಿ ಹುಟ್ಟಿ ತಮನೆಂಬ ದೈತ್ಯನ ಪತ್ನಿಯಾಗಿ ಮತ್ಸ್ಯಾವತಾರಿಯಾದ ಹರಿಯಿಂದ ನಿನ್ನ ಪತಿಯು ಹತನಾದ ತರುವಾಯ ಕುಮಾರಧಾರಾ ತೀರ್ಥಕ್ಕೆ ಹೋಗಿ ಅಲ್ಲಿ ಸ್ನಾನ ಮಾಡಿ ಕ್ಷೇತ್ರಾಧಿಪತಿಯಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಸೇವಿಸು, ಆಕ್ಷಣದಲ್ಲಿಯೇ ನಿನಗೆ ಜನ್ಮಾಂತರದ ನೆನಪುಗಳು ಮರುಕಳಿಸಿ ರಾಕ್ಷಸ ದೇಹವನ್ನು ತೊರೆದು ದಿವ್ಯ ದೇಹಧಾರಿಯಾಗುತ್ತೀಯೆ. ನಿನಗೆ ಮಂಗಳವಾಗಲಿ.” ಎಂದು ಹರಸಿ ಹೊರಟು ಹೋದರು. ಅದಿತಿಯು ತನಗೊದಗಿದ ಈ ದುಃಖವನ್ನು ತನ್ನ ಪತಿಯಾದ ಕಷ್ಯಪರಿಗೆ ತಿಳಿಸಲು “ದೈವವನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಚಿಂತಿಸಬೇಡ, ಸ್ವಲ್ಪ ಕಾಲದಲ್ಲಿಯೇ ಶಾಪವಿಮುಕ್ತಳಾಗಿ ಬಂದು ಸೇರುವೆ.” ಎಂದರು.
ಮುಂದೆ ಅಸಿತ ಮುನಿಗಳ ಮಾತಿನಂತೆಯೇ ಎಲ್ಲವೂ ನಡೆಯಿತು. ಅದಿತಿಯು ತಾನು ಪಿಶಿತಾಶಿನಿ ರಕ್ಕಸಿಯಾಗಿ ಹುಟ್ಟಿ ಭಯಂಕರನಾದ ತಮನೆಂಬ ರಕ್ಕಸನ ಪತ್ನಿಯಾದಳು. ಆತನು ಮೂಲೋಕಗಳನ್ನು ವಿಚಿತ್ರವಾಗಿ ಹಿಂಸಿಸಿ ನಾರಯಣನೇ ನಮ್ಮ ಕುಲವೈರಿಯೆಂದು ತಿಳಿದು ಅವನನ್ನು ಬ್ರಾಹ್ಮಣರು ವೇದಗಳಿಂದ ಸ್ತುತಿಸುವರು, ಆ ಬ್ರಾಹ್ಮಣಿಗೆ ಆಧಾರವಾದ ವೇದಗಳಾನ್ನೇ ಸಮುದ್ರದಲ್ಲಿ ಅಡಗಿಸುತ್ತೇನೆಂದು ನಿರ್ಧರಿಸಿ ನಾಲ್ಕು ವೇದಗಳೊಡನೆ ಸಮುದ್ರ ಪ್ರವೇಶಿಸಲು. ಮುರಾರಿಯಾದ ಶ್ರೀ ವಿಷ್ಣುವು ತಾನು ಮತ್ಸ್ಯಾವತಾರಿಯಾಗಿ ತಮನನ್ನು ವಧಿಸಿ ನಾಲ್ಕು ವೇದಗಳನ್ನು ಹಿಂದಕ್ಕೆ ತಂದನು. ಇಷ್ಟರ್ ಬಳಿಕ ಪಿಶಿತಾಶಿನಿಯು ತಾನು ಅದೇಷ್ಟೋ ಪ್ರದೇಶಗಳಾನ್ನು ಸುತ್ತಿ ಸುತ್ತಿ ಕುಮಾರಧಾರಾ ಪ್ರದೇಶಕ್ಕೆಬಂದು ಅಲ್ಲಿ ಸ್ನಾನಾದಿಗಳನ್ನು ಮಾಡುತ್ತಲೇ ತಮ್ಮ ಪೂರ್ವ ಜನ್ಮದ ಸ್ಮರಣೆ ಬಂದು ರಾಕ್ಷಸ ದೇಹವನ್ನು ತೊರೆದು ದಿವ್ಯ ದೇಹವನ್ನು ಹೊಂದಿದಳು. ಅಲ್ಲಿಂದ ಕ್ಷೇತ್ರದ ಸ್ವಾಮಿ ಸುಬ್ರಹ್ಮಣ್ಯನನ್ನು ಭಕ್ತಿಯಿಂದ ಸೇವಿಸಿದ ಬಳಿಕ ಪುನಃ ತನ್ನ ಪತಿಯಾದ ಕಷ್ಯಪರಲ್ಲಿಗೆ ತೆರಳಿದಳು.

***
ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನ ಪುತ್ರನಾದ ಸಾಂಬನು ತಾನು ಮುನಿಗಳ್ ಆಶ್ರಮಗಳಾಲ್ಲಿ ಸಂಚರಿಸುತ್ತಿದ್ದನು. ಅವನ ಅನುಪಮ ಸೌಂದರ್ಯವನ್ನು ನೋಡಿದ ಮುನಿಪತ್ನಿಯರು ತಾವು ಮನೋವಿಕಾರವನ್ನು ಹೊಂದಲು ಮುನಿಗಳು ಕುಪಿತರಾಗಿ “ಎಲೈ ದುರಾತ್ಮನೇ ಯಾವ ರೂಪಮದದಿಂದ ಆಶ್ರಮ ವಾಸಿಗಳ ಮೇಲೆ ಮನೋವಿಕಾರವನ್ನುಂಟು ಮಾಡಿದೆಯೋ ಆ ನಿನ್ನ ರೂಪವು ಕುಷ್ಟರೋಗದಿಂದ ಜಿಗುಪ್ಸಿತವಾಗಲಿ.” ಎಂದು ಶಾಪವನ್ನು ಕೋಟ್ತರು. ಆಗ ದುಃಖಿತನಾಇದ್ದ ಸಾಂಬನನ್ನು ಕಂಡ ನಾರದ ಮಹರ್ಷಿಗಳು “ಈ ಜಿಗುಪ್ಸಿತವಾದ ವ್ಯಾಧಿಯ ನಿವಾರಣೆಗಾಗಿ ನೀನು ಕೌಮಾರ ಕ್ಷೇತ್ರದಲ್ಲಿನ ಧಾರಾ ನದಿಯಲ್ಲಿ ಮಿಂದು ಮೂಲಮೃತ್ತಿಕೆ
Sri Kukke Subrahmanya Swami Temple 
ಯನ್ನು ಮೈಗೆ ಲೇಪಿಸಿಕೊಂಡು ಸುಬ್ರಹ್ಮಣ್ಯ ಸ್ವಾಮಿಯ ಸನ್ನ್ನಿಧಿಯ ಪರ್ಯಂತವಾಗಿ ಹೊರಳುತ್ತಾ ಹೋಗಿ ವಾಸುಕಿಯನ್ನು ದರ್ಶಿಸಿದರೆ ವ್ಯಾಧಿಯು ಗುಣಹೊಂದುವುದು” ಎಂದರು. ಸಾಂಬನು ಮಹರ್ಷಿಗಳ ಆಣಾತಿಯಂತ್ರೆಯೇ ನಡೆದು ದಿವ್ಯ ದೇಹಧಾರಿಯಾದನು.

***
ಪೂರ್ವ ಕಾಲದಲ್ಲಿ ದೇವತೆಗಳೂ, ಅಸುರರೂ ತಮ್ಮೊಳಗೆ ಯುದ್ಧ ಮಾಡಿಕೊಂಡಾಗ ದೇವತೆಗಳು ಸೋತುಹೋಗಿ ತಾವು ಸೂರ್ಯ ನಾರಾಯಣಾನನ ಶರಣುಹೋದರು. ಆಗ ಸೂರ್ಯನಾರಾಯಣ ಸ್ವಾಮಿಯು “ದೇವತೆಗಳಿರಾ, ನೀವು ಬೂಮಿಯನ್ನು ಬಿಟ್ಟು ಪರ್ವತದ ತುದಿಯಿಂದ ಯುದ್ಧವನ್ನು ಮಾಡಿರಿ. ಆಗ ನಿಮಗೆ ಖಚಿತವಾಗಿಯೂ ಜಯ ಲಭಿಸುತ್ತದೆ.” ಎನ್ನಲು ದೇವತೆಗಳೆಲ್ಲರೂ ತಾವು ಕುಮಾರ ಪರವತವನ್ನೇರಿ ಯುದ್ಧದಲ್ಲಿ ತೊಡಗಿದ್ದಲ್ಲದೆ ಅಸುರರ ಮೇಲೆ ಸತತ ಬಾಣ ಪ್ರಯೋಗಗಳನ್ನು ಮಾಡಿ ಅವರನ್ನು ದಶದಿಕ್ಕುಗಳಿಗೆ ಓಡುವಂತೆ ಮಾಡಿದರು. ದೇವತೆಗಳು ಜಯಶೀಲರಾದರು. ಅದಾಗಲು ದೇವತೆಗಳು ಪುನಃ ಸೂರ್ಯನಾರಾಯಣನನ್ನು ಸ್ತುತಿಸಿ “ಸೂರ್ಯನೇ, ನಿನ್ನ ಕಟಾಕ್ಷದಿಂದ ನಾವೆಲ್ಲ ಸರ್ವ ಭಯದಿಂದ ಮುಕ್ತರಾದೆವು. ” ಎನ್ನ್ಸ್ಲು ದೂರ್ಯ್ಸ್ದೇವರು ಹೀಗೆಂದನು -“ದೇವತೆಗಳಿಆ ರಹಸ್ಯವನ್ನು ಹೇಳುವೆನು ಕೇಳಿರಿ, ಈ ಗಿರಿಯು ಅಜೇಯವಾದುದು. ಇಲ್ಲಿ ನೀವೆಲ್ಲರೂ ಸುಖವಾಗಿ ವಾಸಮಾಡಿರಿ.” ಎನ್ನಲು ಸೂರ್ಯ ಭಗವಾನನ ಮಾತಿನಂತೆ ಅಂದಿನಿಂದಲೂ ಸರ್ವ ದೇವತೆಗಳೂ ಈ ಕುಮಾರ ಪರ್ವತದಲಿ ನೆಲೆಸಿರುವರು.

***
ಅತ್ಯಂತ ಪೂರವದಲ್ಲಿ ದ್ರಾವಿದ ದೇಶದಲ್ಲೊಬ್ಬನು ತನ್ನ ಗ್ರಾಮದ ಮನೆಯಲ್ಲಿ ವಾಸವಿದ್ದನು. ಆತನ ಮನೆಯಲ್ಲಿ ಒಂದು ಸರ್ಪವೂ ಸಹ ವಾಸಮಾಡುತ್ತಿದ್ದುದು ನೋಡಿ ಕೋಪದಿಂದದನ್ನು ಕೋಲಿನಿಂದ ಹೊಡೆದು ಕೊಂದನು. ಪಾಪದಿಂದ ವ್ಯಕ್ತಿಯು ಕುಷ್ಟರೋಗಪೀಡಿತನಾಗಲು, ಆರೋಗವನ್ನು ಯಾವೊಬ್ಬ ಪಂಡಿತನೂ, ವೈದ್ಯರೂ ಗುಣಪಡಿಸಲಾಗದೆ ಹೋದರು. ಅದಾಗ ವ್ಯಕ್ತಿಯು ತಾನು ಮಾಡಿದುದು ತಪ್ಪಾಯ್ತ್ಂದು ದೈನ್ಯದಿಂದ ಶ್ರೀ ಸುಬ್ರಹ್ಮಣ್ಯನನ್ನು ಮಲಗಿದ್ದಲ್ಲಿಂದಲೇ ಪ್ರಾರ್ಥಿಸುತ್ತಿರಲು ಒಂದು ದಿನ ಸ್ವಮಿಯು ಕನಸಿನಲ್ಲಿ ಕುಮಾರ ರೂಪವನ್ನು ಧರಿಸಿ ಬಂದುಸುಬ್ರಹ್ಮಣ್ಯಕ್ಕೆ ಬಂದು ದೇವರಿಗೆ ಒಂದಿಸು, ಆದೇವರೆದುರಿನ ತೀರ್ಥದಲ್ಲಿ ಸ್ನಾನ ಮಾಡಲಾಗಿ ನಿನ್ನ ವ್ಯಾಧಿಯು ಉಪಶಮನಗೊಳ್ಳುವುದು.” ಎಂದು ಆದೇಶಿಸಲು ವ್ಯಕ್ತಿಯು ತಾನು ಶ್ರೀ ಕ್ಷೇತ್ರದತ್ತ ಪಯಣ ಮಾಡಿದನು. ಕ್ಷೇತ್ರದ ದರ್ಶನ, ಸ್ವಾಮಿಯ ಸೇವೆ ಹಾಗೂ ಅಲ್ಲಿನ ತೀರ್ಥ್ದಲ್ಲಿ ಮಿಂದುದರ ಫಲವಾಗಿ ಅವನು ತನ್ನ ರೋಗದಿಂದ ಮುಕ್ತಿ ಪಡೆದುದಲ್ಲದೆ ದಿವ್ಯ ದೇಹಧಾರಿಯಾಗಿ ಬದಲಾದನು. ಮುಂದೆ ಸ್ವಾಮಿಗೆ ಉಚಿತ ಸೇವೆಗಳನ್ನು ಮಾಡಿಸಿ ಸಂತೃಪ್ತಿಯಿಂದ ತನ್ನ ಊರಿಗೆ ಮರಳಿ ಸುಖದಿಂದಿದ್ದನು.

***
ತೌಳವ ದೇಶದಲ್ಲಿನ ರಾಜಕುಮಾರಿಯೋರ್ವಳು ಪುತ್ರ ಸಂತಾನದ ಬಯಕೆಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸೇವೆಯನ್ನು ನಿತ್ಯವೂ ಭಕ್ತಿ ಶ್ರದ್ದೆಯಿಂದ ಮಾಡುತ್ತಿರಲು ಸ್ವಾಮಿಯು ಪ್ರಸನ್ನನಾಗಿ “ಒಂದು ವರ್ಷಗಳ ಕಾಲ ನನ್ನ ಸೇವೆಯನ್ನು ಮಾಡುತ್ತಿರು, ನಿನಗೆ ನೀತಿವಂತನಾದ ಮಗನನ್ನ ಕರುಣಿಸುವೆ.” ಎನ್ನಲು ರಾಜಕುಮಾರಿಯು ಅದರಂತೆಯೇ ವರ್ಷಾವಧಿಯ ವ್ರತವನ್ನು ಮಾಡಿ ಬಳಿಕ ಸುಂದರನೂ, ನೀತಿವಂತನೂ ಆದ ಪುತ್ರನನ್ನು ಪಡೆದು ಸುಖದ ಬಾಳ್ವೆ ನಡೆಸಿದಳು. ಅಲ್ಲದೆ ತನ್ನ ಕೋರಿಕೆಯನ್ನು ಸಲ್ಲಿಸಿಅ ಸ್ವಾಮಿಗೆ ತಾನು ಸಹ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಿದಳು. ದೇವಾಲಯದ ಸುತ್ತಲೂ ಪ್ರಾಕಾರವನ್ನು ಮಾಡಿಸಿದಳು. ರಾಜಭಂಡಾರದಿಂದ ಹಣವನ್ನು ವ್ಯಯಿಸಿ ಅರ್ಚಕರಿಗೆ ವಾಸ ಮಾಡಲು ಮನೆಗಳಾನ್ನು ಕಟ್ಟಿಕೊಟ್ಟದ್ದಲ್ಲದೆ ದೇವಾಲಯ ಪ್ರಾಕಾರದಲ್ಲಿ ಪೂಜೆಗೆ ಅಗತ್ಯವಾದ ಅಡಿಕೆ, ಕೇದಿಗೆ, ಹಣ್ಣುಗಳೇ ಮೊದಲಾದ ಬೇಳೆಗಳನ್ನು ಬೆಳೆಸುವುವ ತೋಟಗಳಾನ್ನು ನಿರ್ಮಾಣ ಮಾಡಿದಳು. ಹಾಗೆಯೇ ಆಕೆಯ ಪುತ್ರನೂ ಸಹ ತಾನು ಸ್ವಾಮಿಯ ಸೇವೆಗೈದು ಅಂತ್ಯಕಾಲದಲ್ಲಿ ಈರ್ವರೂ ಸುಖ ಸಂಪದಗಳೊಂದಿಗೆ ಸ್ವರ್ಗವಾಸಿಗಳಾದರು. 

Monday, September 15, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 31

ಕುಕ್ಕೆ ಸುಬ್ರಹ್ಮಣ್ಯ (Kukke Subrahmanya)
ಭಾಗ – 2

ಪರಶುರಾಮ ಕ್ಷೇತ್ರವೆಂದು ಪ್ರಸಿದ್ದವಾದ ಕರ್ನಾಟಕ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರವು ನಂಬಿದ ಭಕ್ತರಿಗೆ ಸುಖ ಶಾಂತಿಯನ್ನು ಕರುಣಿಸುತ್ತಿರುವ ಪರಮ ಪಾವನ ಕ್ಷೇತ್ರವಾಗಿದೆ. ಪ್ರಾಚೀನ ಐತಿಹ್ಯಗಳನ್ನು, ಪೌರಾಣಿಕ ಹಿನ್ನೆಲೆಗಳನ್ನೂ ಹೊಂದಿರುವ ಶ್ರೀ ಕ್ಷೇತ್ರದ ಇನ್ನಷ್ಟು ಪುರಾಣ ಹಿನ್ನೆಲೆಯನ್ನು ನಾವೀಗ ತಿಳಿದುಕೊಳ್ಳೋಣ....

***
ಒಂದು ಕಾಲದಲ್ಲಿ ಕೇರಳ ದೇಶದಲ್ಲಿ ಭೀಕರ ಕ್ಷಾಮವು ಹುಟ್ಟಿತು. ಅದಾಗ ಅಲ್ಲಿನ ರಾಜನಾಗಿದ್ದ ಸುಬಾಹು ಎನ್ನುವವನು ತತ್ವಜ್ಞಾನ ಹಾಗೂ ನಿಶ್ಚಲ ಮನಸ್ಸುಳ್ಳ, ನಿಶ್ಚಲ ಬುದ್ದಿಯನ್ನು ಹೊಂದಿದ ಯಾರು ಮಹಾಪುರುಷರಿದ್ದಾರೆಯೋ ಅವರನ್ನು ಇಲ್ಲಿಗೆ ಕರೆದು ತಂದು ನೆಲೆಸಲು ಹೇಳುವೆನು, ಅದರಿಂದಾಗಿ ನಾಡಿಗೆ ಬಂದಕ್ಷಾಮ ಪೀಡೆಯು ತೊಲಗುವುದೆಂದು ಆಲೋಚಿಸಿದನು. ಅದಾಗ ಆ ನಾಡಿನಲ್ಲಿದ್ದ ಓರ್ವ ಬ್ರಾಹ್ಮಣನು “ಮಹಾರಾಜನೇ, ನೀನು ಹೇಳಿದ ಸಕಲ ಗುಣಗಳಿರುವ ಯೋಗಿಯೂ ತಪಸ್ವಿಗಳೂ ಆದ ಋಷ್ಯಶೃಂಗ ಮಹರ್ಷಿಗಳು ತುಂಗಭದ್ರಾ ನದಿದಂಡೆಯಲ್ಲಿರುವ ಮಾರ್ಕಾಂಡೇಯ ಕ್ಷೇತ್ರದಲ್ಲಿ ನೆಲೆಸಿದ್ದಾರೆ.” ಎನ್ನಲು ಮಹಾರಾಜನು ತಾನು ಋಷ್ಯಶೃಂಗರ ಆಶ್ರಮಕ್ಕೆ ತೆರಳಿ ವ್ರತನಿಷ್ಠರಾಗಿದ್ದ ಮುನಿಗಳನ್ನು ಸ್ತುತಿಸಿ “ಮುನಿವರ್ಯರೇ, ನಮ್ಮ ನಾಡಿನಲ್ಲಿ ಭೀಕರ ಬರಗಾಲದಿಂದಾಗಿ ಜನರು ತತ್ತರಿಸಿದ್ದಾರೆ, ತಾವುಗಳು ನಮ್ಮ ನಾಡಿಗೆ ದಯಮಾಡಿ ನಮ್ಮನ್ನು ಕ್ಷಾಮಬಾಧೆಯಿಂದ ಉದ್ದರಿಸಬೇಕು.” ಎಂದು ಬೇಡಲು ಋಷ್ಯಶೃಂಗರು ಸಂತೋಷದಿಂದೊಪ್ಪಿ ಸುಬಾಹುವಿನ ರಾಜ್ಯಕ್ಕೆ ಬಂದು ಅಲ್ಲಿನ ಪೂರ್ವ ಭಾಗದ ಸಸ್ಯಪರ್ವತದ ಸರೋವರದ ಬಳಿಯಲ್ಲಿ ನಿಂತು ಆ ನಾಡಿನ ಸುಖ ಸಮೃದ್ದಿಗಾಗಿ ಅನೇಕ ಯುಗಗಳ ಕಾಲ ತಪವನ್ನು ಆಚರಿಸಿದರು. ಇದರಿಂದಾಗಿ ಆ ಪರ್ವತ ಶಿಖರವು “ಋಷ್ಯಶೃಂಗ ಪರ್ವತ” ಎನಿಸಿಕೊಂಡಿತು.
ಮುಂದಿನ ಅನೇಕ ವರುಷಗಳಾ ಬಳಿಕ ಈ ಒಂದು ಋಷ್ಯಶೃಂಗ ಪರ್ವತದ ಮಹಿಮೆಯನ್ನರಿತ ಸುಬ್ರಹ್ಮಣ್ಯ ಸ್ವಾಮಿಯು ತಾನು ಕುಮಾರ ಸ್ವರೂಪದಲ್ಲಿ ಈ ಸ್ಥಳದಲ್ಲಿಯೇ ನಿಂತು ದೀರ್ಘವಾದ, ಕಠೋರವಾದ ತಪಸ್ಸನ್ನಾಚರಿಸುತ್ತಾನೆ. ಸ್ಕಂದ ಸ್ವಾಮಿಯ ತಪಸ್ಸಿಗೆ ಮೆಚ್ಚಿದ ರುದ್ರದೇವರು ಪ್ರತ್ಯಕ್ಷನಾಗಿ ನಿನಗೇನು ವರವು ಬೇಕೆನ್ನಲು “ಇಲ್ಲಿ ನಿತ್ಯವೂ ಅನ್ನದಾನ ಸೇವೆಯು ನಡೆಯುವಂತಾಗಲಿ.” ಎಂದು ಕೇಳಿಕೊಳ್ಳುತ್ತಾನೆ. ದರಂತೆ ಅಂದಿನಿಂದಲೂ ಈ ಪರ್ವತ ಸೀಮೆಗೆ “ಕುಮಾರ ಪರ್ವತ” ಎನ್ನುವ ಹೆಸರು ಬಂದಿರುತ್ತದೆ.

***
ತೌಳವ ದೇಶದಲ್ಲಿದ್ದ ದೇವಜ್ಞ ಬ್ರಾಹ್ಮಣ ನೋರ್ವನು ತಾನು ಕುಷ್ಟ ರೋಗದಿಂದ ಬಾಧೆಪಡುತ್ತಿರಲು ಅನೇಕ ಬಗೆಯ ಔಷಧೋಪಚಾರಗಳಿಂದಲೂ ಆ ರೋಗವು ಗುಣಮುಖವಾಗಲಿಲ್ಲ. ಅದಾಗ ಮಾರ್ಗಶಿರ ಮಾಸದ ಆದಿಭಾಗದಲ್ಲಿ ಆ ಬ್ರಾಹ್ಮಣನು ಕೇರಳ ದೇಶಕ್ಕೆ ಬರಲು ಅಲ್ಲಿನ ಬ್ರಾಹ್ಮಣರು ತಾವು ಸುಬ್ರಹ್ಮಣ್ಯಕ್ಕೆ ಹೊರಟುದನ್ನು ತಿಳಿದು ಅಲ್ಲಿನ ವಿಶೇಷತೆಗಳನ್ನು ಅರಿತವನಾಗಿ ತಾನೂ ಅವರೊಡನೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದನು. ಬ್ರಾಹ್ಮಣನು ತಾನು ಶ್ರೀ ಸ್ವಾಮಿಯ ದರ್ಶನವನ್ನು ಮಾಡಿದುದಲ್ಲದೆ ಅವನನ್ನು ನಾನಾ ವಿಧದಲ್ಲಿ ಸ್ತುತಿಸಲು ಸ್ವಾಮಿಯು ಪ್ರಸನ್ನನಾಗಿ “ಎಲೈ ವ್ರತನಿಷ್ಠನಾದ ಬ್ರಾಹ್ಮಣಾನೇ ನಿನಗೇನು ವರಬೇಕೆಂದು ಕೇಳು. ಒಂದು ವರ್ಷದ ಕಾಲ ಇಲ್ಲಿಯೇ ವಾಸಮಾಡು, ವರ್ಷಾಂತ್ಯದಲ್ಲಿ ನಿನ್ನ ರೋಗಬಾಧೆಯನ್ನು ಗುಣಪಡಿಸುವೆನು” ಎನ್ನುತ್ತಾನೆ. ಅದಾಗ ಆ ನುಡಿಗಳಾಂತೆಯೇ ವರ್ಷಪೂರ್ತಿ ಸುಬ್ರಹ್ಮಣ್ಯದಲಿಯೇ ನೆಲೆಸಿದ ಆ ಬ್ರಾಹ್ಮಣಾನು ಕೊಂಚವೂ ಆಲಸ್ಯವಿಲ್ಲದೆ ನಿತ್ಯವೂ ಸ್ವಾಮಿಯ ಸೇವೆಯನ್ನು ಶ್ರದ್ದಾಪೂರ್ವಕವಾಗಿ ಮಾಡುತ್ತಾಬರಲು ವರ್ಷಾಂತ್ಯದ ವೇಳೆಗೆ ಅವನ ದೇಹದಲ್ಲಿದ್ದ ಕುಷ್ಟದ ಹುಣ್ಣುಗಳೆಲ್ಲವೂ ಕಳೆಯಿತು. ಆದರ ಬಳಿಕದ ದಿವ್ಯ ದೇಹರೂಪಿಯಾದ ಬ್ರಾಹ್ಮಣನು ಪುನಃ ತನ್ನ ಸ್ವಂತ ನಾಡಾದ ತೌಳವ ದೇಶಕ್ಕೆ ಮರಳಿ ಅಲ್ಲಿನ ಜನರಿಂದ ಸನ್ಮಾನಿತಗೊಂಡು ಸುಖದಿಂದಿದ್ದನು.
ಇತ್ತ ತೌಳವ ದೇಶದ ಬ್ರಾಹ್ಮಣ ಸಮಾಜದಲ್ಲೆಲ್ಲಾ ಆ ದೇವಜ್ಞ ಬ್ರಾಹ್ಮಣನಿಗೆ ಕುಷ್ಟರೋಗ ನಿವಾರಣೆಯಾದ ಕಥೆಯು ಕಾಳ್ಗಿಚ್ಚಿನಂತೆ ಹರಡಿತಲ್ಲದೆ ಮಿಕ್ಕ ಸಮಾಜ ಬಾಂಧವರೆಲ್ಲರೂ ತಾವುಗಳು ತಮ್ಮ ತಮ್ಮ ಪಾಪ ಪ್ರಾಯಶ್ಚಿತ್ತಕ್ಕಾಗಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದಯಮಾಡಿಸಲಾರಂಭಿಸಿದರು. ಅದಾಗ ಮೂಲದಲ್ಲಿ ಅಲ್ಲಿಯೇ ನೆಲೆಸಿದ್ದ ಬ್ರಾಹ್ಮಣರಿಗೆ ‘೦ತಮ್ಮ ಅತಿಥಿಗಳ ಹೊಟ್ಟೆ ತುಂಬುವಷ್ಟು ಅನ್ನದಾನವನ್ನು ಒದಗಿಸುವುದು ಹೇಗೆ?’ ಎನ್ನುವ ಚಿಂತೆಯು ಕಾಡಲು ತೊಡಗಿದಾಗ ಸ್ವತಃ ಸ್ಕಂದ ಸ್ವಾಮಿಯು ಬ್ರಾಹ್ಮಣ ವೇಶವನ್ನು ಧರಿಸಿ ಬಂದು ಹೀಗೆಂದನು -  “ಬಾಳೆಕಾಯಿಗಳ ರಾಶಿಯನ್ನು ಮೆಟ್ಟುಗತ್ತಿಯಲ್ಲಿ ಪಲ್ಯಕ್ಕಾಗಿ ಹೆಚ್ಚಿ ತಾಮ್ರದ ದೊಡ್ದ ಬಾಂಡದಲ್ಲಿ ಆ ತುಂಡುಗಳಾನ್ನು ಹಾಕಿ ನೀರು ಹೊಯ್ದು, ಕೊಯ್ದ ಭಾಗ ಮೇಲಿರುವ ತುಂಡುಗಳನ್ನೆಣಿಸಿ ಒಂದಕ್ಕೆ ಒಂದು ಸಹಸ್ರವೆಂದು ಲೆಖ್ಖ ಮಾಡಿ ಇಷ್ಟು ಜನರೆಂದು ಊಹಿಸಿ ಅದಕ್ಕೆ ತಕ್ಕಷ್ಟು ಅಕ್ಕಿ ಹಾಕಿ ಅಡುಗೆ ಮಾದಬೇಕು. ಅಷ್ಟು ಅನ್ನಕ್ಕೆ ತಕ್ಕಷ್ಟು ಸಕ್ಕರೆ, ತುಪ್ಪದ ಪಾಕಮಾಡಿ ಅನ್ನದ ರಾಶಿ ಮಾಡಿ ಅದಕ್ಕೆ ಸ್ವಾಮಿಯ ಮಂತ್ರಜಲವನ್ನು ಪ್ರೋಕ್ಷಿಸಿದರೆ ಆ ಅನ್ನವು ನಿಶ್ಚಯವಾಗಿಯೂ ಅಕ್ಷಯವಾಗುತ್ತದೆ. ಅದನ್ನು ಸ್ವಾಮಿಗೆ ನೈವೇದ್ಯ ಮಾಡಿ ಅದರ ಭಾಗದಿಂದ ವೈಶ್ವದೇವಮಾಡಿ ಸಮರ್ಪಿಸಿದ ಅಂಗವನ್ನು ಅನ್ನದ ರಾಶಿಯಲ್ಲಿಡಬೇಕು. ಆಗ ಅದು ವೃದ್ದಿಯಾಗಿ ಎಷ್ಟು ಜನ ಬಂದರೂ ಸಾಕಾಗುವಷ್ಟು ಅನ್ನವಿರುತ್ತದೆ.” ಹೀಗೆ ಅಪ್ಪಣೆ ಇತ್ತ ಸ್ವಾಮಿ ಸುಬ್ರಹ್ಮಣ್ಯನು ಬಳಿಕದಲ್ಲಿ ತಾನು ಸರ್ಪ ರೂಪವನ್ನು ಧರಿಸಿ ಗುಹೆಯನ್ನು ಹೊಕ್ಕು ಅಂತರ್ಧಾನನಾದನು.

***
ಲವಣ ಸಮುದ್ರ ಬಳಿಯಲ್ಲಿನ ದೇಶದಲ್ಲಿಯ ಒಬ್ಬ ವೈಶ್ಯನು ವ್ಯಾಪಾರದಿಂದ ಧನವಂತನಾಗಿ ವಜ್ರ ವೈಢೂರ್ಯ ಮೊದಲಾದ ಮುಂತಾದ ರತ್ನಗಳನ್ನೂ, ಚಿನ್ನ ಬೆಳ್ಳಿಯೇ ಮೊದಲಾದ ಲೋಹಗಳನ್ನು ವಾಹನದಲಿ ಹೊರಿಸಿಕೊಂಡು ಶ್ರೇಷ್ಠವಾದ ಪಟ್ತಣಕ್ಕೆ ತೆರಳಿ ಅಲ್ಲಿ ಅವುಗಳನ್ನು ಮಾರಾಟ ಮಾಡಿ ದ್ರವ್ಯವನ್ನು ಪಡೆದು ಅಲ್ಲಿಂದ ಬೇಗನೆ ತನ್ನ ದೇಶಕ್ಕೆ ಬರಲು ಹೊರಟನು. ಅಷ್ಟರಲ್ಲಿಯೇ ಅಲ್ಲಿ ಬಂದ ಯತಿಗಳೋರ್ವರನ್ನು ವಂದಿಸಿ “ಸ್ವಾಮಿ ನನಗೆ ಸಂತಾನವಿಲ್ಲ, ದಯಮಾಡಿ ತಮ್ಮ ಆಶೀರ್ವಾದವನ್ನು ಬೇಡಿಕೊಳ್ಳುತ್ತೇನೆ.” ಎಂದು ಪ್ರಾರ್ಥಿಸಿದುದಲ್ಲದೆ “ನಾನು ನನ್ನ ದೇಶ್ಕ್ಕೆ ಹೊರಡುತ್ತಿದ್ದೇನೆ, ತಾವುಗಳು ಯಾವ ಕಡೆಗೆ ಹೊರಟಿರುವುದು?” ಎಂದು ಕೇಳಲಾಗಿ ಯತಿಗಳು “ನಾನು ಕುಮಾರ ಪರ್ವತಕ್ಕಾಗಿ ಹೊರಟಿದ್ದೇನೆ, ಅಲ್ಲಿಯ ಸುಬ್ರಹ್ಮಣ್ಯನನ್ನು ಸಂದರ್ಶಿಸಲಿಕ್ಕಾಗಿ ಹೋಗುತ್ತಿದ್ದೇನೆ.” ಎನ್ನಲಾಗಿ ಅದರಿಂದ ಕುತೂಹಲಗೊಂಡ ಆ ವೈಶ್ಯೋತ್ತಮನು “ಸುಬ್ರಹ್ಮಣ್ಯ ಕ್ಷೇತ್ರದ ಮಹಿಮೆಯನ್ನು ತಿಳಿಸಿಕೊಡಬೇಕೆಂದು ಕೇಳಿದನು. ಅವನಿಚ್ಚೆಯತೆಯೇ ಸ್ವಾಮಿಯ, ಹಾಗೂ ಕ್ಷೇತ್ರದ ಮಹಿಮೆಯನ್ನು ಯತಿಗಳು ತಿಳಿಸಲಾಗಿ ವೌಶ್ಯೋತ್ತಮನು ತಾನೂ ಸಹ ಕ್ಷೇತ್ರಕ್ಕೆ ದಯಮಾಡಿಸಿ ಅಲ್ಲಿನ ಕುಮಾರಧಾರೆಯಲ್ಲಿ ಮಿಂದು ಶ್ರೀ ಸ್ವಾಮಿಯ ದರ್ಶನವನ್ನು ಮಾಡಿ ಸೇವೆಗೈದನು. ಈ ಕಾರಣದಿಂದಾಗಿ ಪ್ರಸನ್ನನಾದ ಸ್ವಾಮಿಯು ಆ ವೈಶ್ಯ ವರ್ತಕನಿಗೆ ಶ್ರೇಷ್ಠ ಸಂತಾನಗಳನ್ನು ಅನುಗ್ರಹಿಸಿದನು. ಮತ್ತೆ ಆ ಜನ್ಮದಲ್ಲಿ ಎಲ್ಲಾ ಬಗೆಯ ಐಹಿಕ ಭೋಗಗಳಾನ್ನನುಭವಿಸಿ ಜನ್ಮಾಂತರದಲ್ಲಿ ಸಾರ್ವಭೌಮನಾಗಿ ಹುಟ್ಟಿ ರುದ್ರದೇವರ ಸಂದನು.
 
Sri Kukke Subrahmanya Swami, Kukke Subrahmanya, Dakshina Kannada, Karnataka
***
ಕೃತಯುಗದಲ್ಲಿ ತೌಳವ ದೇಶದಲ್ಲಿನ ಕೇಶವಸ್ವಾಮಿ ಎಂಬತಕ್ಕ ಬ್ರಾಹ್ಮಣಾನು ಕೃಷಿ ಮಾಡುತ್ತಾ, ವಿದ್ವಾಂಸನೂ, ಧನವಂತನೂ, ಧರ್ಮಿಷ್ಠನೂ ಆಗಿದ್ದನು. ಈತನು ತಾನು ಸುಬ್ರಹ್ಮಣ್ಯ ಸ್ವಾಮಿಯಲ್ಲಿ ದೃಢವಾದ ಭಕ್ತಿಯನ್ನು ಹೊಂದಿ ಪ್ರತಿಯೊಂದು ಶುಕ್ಲಪಕ್ಷದ ಸೃಷ್ಟಿಯಂದು ಶ್ರದ್ದಾ ಭಕ್ತಿಯಿಂದ ಸ್ವಾಮಿಯ ಕೈಕರ್ಯವನ್ನು ಮಾಡುತ್ತಾ ಮೂವತ್ತು ವರ್ಷಗಳನ್ನು ಕಳೆದನು. ಈ ಪ್ರಕಾರವಾಗಿ ವ್ರತವನ್ನಾಚರಿಸಲು ಪ್ರಸನ್ನನಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಕೇಶವಸ್ವಾಮಿಗೆ ಕಾಣಿಸಿಕೊಳ್ಳಲು ಕೇಶವನು “ನೀನೆಲ್ಲಿ ಜನ್ಮವೆತ್ತಿದೆ? ಎಲ್ಲಿಂದ ಬಂದೆ?” ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಸ್ಕಂದನು “ ನಾನು ಅಗ್ನಿಯ ಪುತ್ರ, ನಾನು ಕ್ರೌಂಚಧಾರಣನೆಂಬ ಹೆಸರುಳ್ಳವನು. ಎಲೈ ಬ್ರಾಹ್ಮಣಾನೇ ನನ್ನ ಮಾತುಗಳನ್ನು ಕೇಳು, ಕರ್ಮಕಾಂದದ ಪ್ರಕಾರ ನಡೆವ ನಿನಗೆ ಜ್ಞಾನಮಾರ್ಗವನ್ನು ತೋರುವೆನು. ಜ್ಞಾನದಿಂದ ಮೋಕ್ಷವು ಲಭಿಸುವುದು, ಅದು ಸರ್ವಫಲಗಳಿಗೂ ಮಿಗಿಲಾದುದು. ಆದುದರಿಂದ ಪುಂದರೀಕಾಕ್ಷನನ್ನು ಚೆನ್ನಾಗಿ ಸೇವಿಸಿ ಮೋಕ್ಷಮಾರ್ಗವನ್ನು ಸೇರು.” ಎಂದು ಸ್ವಾಮಿಯು ಅಲ್ಲಿಯೇ ಅದೃಷ್ಯನಾದನು. ಮುಂದೆ ಕೇಶವಸ್ವಾಮಿಯು ಸುಬ್ರಹ್ಮಣ್ಯ ಸ್ವಾಮಿಯ ಉಪದೇಶದಂತೆಯೇ ತ್ರಿಕಾಲಗಳಲ್ಲಿ ಶ್ರೀ ಹರಿಯನ್ನು ಧ್ಯಾನಿಸಿ ಮೋಕ್ಷವನ್ನು ಹೊಂದಿದನು.

***
ಸೌದವನೆಂಬ ಶೂದ್ರನು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಉದ್ಯಾನವೊಂದನ್ನು ರಚಿಸಿಕೊಂಡು ವಾಸಿಸುತ್ತಿದ್ದನು. ಅಲ್ಲಿ ಬೂದುಗುಂಬಳವನ್ನು ಬೆಳೆಸಿ ಸುಬ್ರಹ್ಮಣ್ಯ ಯಾತ್ರೆಗೆ ಬಂದ ಭಕ್ತರಿಗೆ ಅದನ್ನು ಮಾರಲಿಕ್ಕಾಗಿ ಬಂಡಿಗಳಾಲ್ಲಿ ಹೇರಿಕೊಂಡು ಹಾಗೆ ಮಾರಿದ ಹಣವನ್ನು ಗಳಿಸುವುದರೊಡನೆ ಸುಬ್ರಹ್ಮಣ್ಯ ಸ್ವಾಮಿಗೆ ಕೈಜೋಡಿಸಿ ಪ್ರಾರ್ಥಿಸಿದನು “ಸುಬ್ರಹ್ಮಣ್ಯನೇ ನನಗೆ ಪುತ್ರನನ್ನು ಕರುಣಿಸು, ನೀನನಗೆ ಪುತ್ರನನ್ನು ಕರುಣಿಸಿದ್ದಾದಲ್ಲಿ ಬೆಳ್ಳಿಯ ತೊಟ್ಟಿಲು, ಚಿನ್ನದ ಸರಪಣಿಯಿಂದ ಕಟ್ಟಿ ಒಂದು ಮುಷ್ಟಿ ಚಿನ್ನವನ್ನು ಅದರಲ್ಲಿಟ್ಟು ನಿನಗೊಪ್ಪಿಸುವೆನು.” ಎಂದು ಬೇಡಲು ಕಾಲಕ್ರಮದಲ್ಲಿ ಆತನ ಮಡದಿಯು ಗರ್ಭವತಿಯಾಗಿ ಪುತ್ರ ಸಂತಾನವಾಯಿತು. ಹೀಗಾಗಲು ವೃದ್ದಿ ಸೂಚಕವಾದ ಅಶುಚಿಗಳೆಲ್ಲ ಕಳೆದ ಮೇಲೆ ತಾನು ಹರಕೆ ಕಟ್ಟಿಕೊಂಡಂತೆಯೇ ತೊಟ್ಟಿಲನ್ನು, ಚಿನ್ನವನ್ನೂ ಸ್ವಾಮಿಗೆ ದಾನ ನೀಡಿ ಕಿತಾರ್ಥನಾದನು. ಮುಂದೆ ಆ ಬಾಲಕನೂ ಸಹ ಸುಂದರನೂ, ಗುಣವಂತನೂ, ಸಮೃದ್ದಿವಂತನಾಗಿ ಭೂಲೋಕದ ಸುಖಭೋಗಗಳಾನ್ನೆಲ್ಲ ಅನುಭವಿಸಿ ಮೋಕ್ಷದತ್ತ ಸಾಗಿದನು.

***
ಅನಾದಿ ಕಾಲದಲ್ಲೊಮ್ಮೆ ತೌಳವ ದೇಶದಲ್ಲಿ ಭೀಕರ ಕ್ಷಾಮ ತಲೆದೋರಲು ಅಲ್ಲಿದ್ದ ಮಂದಿಗಳೆಲ್ಲಾ ಆಶ್ರಯವನ್ನು ಬಯಸಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಬರಲು ಅವರ ನಡುವೆ ಒಬ್ಬ ಕುರುಡನಾಗಿದ್ದ ಬ್ರಾಹ್ಮಣಾನೂ ಬಂದಿದ್ದನು. ದೇವ ದರ್ಶನಾರ್ಥಿಯಾಗಿ ಬಂದ ಆತನು “ದೇವಶ್ರೇಷ್ಠನೇ ನಿನ್ನ ದಯಾದೃಷ್ಟಿಯಿಂದ ನನ್ನನ್ನು ಕಾಪಾಡು, ನಾನು ಕಣ್ಣಿಲ್ಲದವನಿದ್ದೇನೆ.” ಎಂದು ಭಕ್ತಿಯಿಂದ ಬೇಡಿಕೊಳ್ಳಲಾಗಿ ಆತನಿಗೆ ಸ್ವಾಮಿಯು ಕೃಪೆದೋರಿ ದೃಷ್ಟಿಯನ್ನು ನೀಡಿದನು. ಅದರಿಂದಾಗಿ ಆನಂದಿತನಾದ ಆ ಭಕ್ತನು “ನೀನೇ ಜಗದ ಪತಿಯು... ನಿನ್ನ ಅನುಗ್ರಹದಿಂದ ನಾಣು ದೃಷ್ಟಿಯನ್ನು ಹೊಂದಿದೆನು.... ಪ್ರತಿ ಯುಗದಲ್ಲಿಯೂ ನಿನ್ನ ಸೇವಕನೆಂದು ತಿಳಿಸಲಾಗಿ “ಸುಬ್ರಹ್ಮಣ್ಯ” ಎಂಬ ನಿನ್ನ ನಾಮದೊಡನೆ ಹುಟ್ಟುವೆನು.” ಎಂದು ಪ್ರಾರ್ಥಿಸಿ ತನ್ನ ದೇಶಕ್ಕೆ ವಾಪಾಸಾದನು.

(ಇನ್ನಷ್ಟು ಪುರಾಣ ಐತಿಹ್ಯಗಳು ಮುಂದಿನ ಸಂಚಿಕೆಯಲ್ಲಿ............) 

Tuesday, September 09, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 30

ಕುಕ್ಕೆ ಸುಬ್ರಹ್ಮಣ್ಯ (Kukke Subrahmanya)
ಭಾಗ - 1

ಪರಶುರಾಮ ಕ್ಷೇತ್ರವೆಂದು ಪ್ರಸಿದ್ದವಾದ ಕರ್ನಾಟಕ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರವು ನಂಬಿದ ಭಕ್ತರಿಗೆ ಸುಖ ಶಾಂತಿಯನ್ನು ಕರುಣಿಸುತ್ತಿರುವ ಪರಮ ಪಾವನ ಕ್ಷೇತ್ರವಾಗಿದೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಕೋಟ್ಯಾಂತರ ಭಕ್ತರ ಅಭೀಷ್ಠದಾಯಕನಾಗಿ ಈ ಸ್ಥಳದಲ್ಲಿ ನೆಲೆ ನಿಂತಿದ್ದಾನೆ. ಹಿಂದೆಲ್ಲಾ ಈ ಪ್ರದೇಶ “ಕುಕ್ಕೆ ಗ್ರಾಮ” ಎಂದೇ ಹೆಸರಾಗಿತ್ತು. ಅದಾಗ ಸುಮಾರು ಒಂದು ಲಕ್ಷ ಮನೆಗಳು ಇಲ್ಲಿದ್ದವು ಎನ್ನಲಾಗುತ್ತದೆ. ಈ ಸ್ಥಳದಲ್ಲಿ ಸುಮಾರು 8 ನೇ ಶತಮಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಾಲಯವು ಸ್ಥಾಪಿತವಾಯಿತು. ನಯನ ಮನೋಹರವಾದ ಸಹ್ಯಾದ್ರಿ ಬೆಟ್ಟ ಸಾಲು, ಪಕ್ಕದಲ್ಲಿಯೇ ಹರಿವ ಕುಮಾರಧಾರಾ ನದಿ ಹಾಗೂ ದರ್ಪಣ ತೀರ್ಥಗಳಿಂದ ಶೋಭಿಸುವ ಶ್ರೀ ಕ್ಷೇತ್ರಕ್ಕೆ ವರ್ಷದ ಎಲ್ಲಾ ದಿನಗಳಲ್ಲಿಯೂ ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ ಇತ್ಯಾದಿ ಸೇವೆ, ಹರಕೆಗಳನ್ನು ಮಾಡಿಸಲು ಅಲ್ಲದೆ ತಾವು ನಂಬಿದ ದೇವನ ವಿಶೆಷ ಕೃಪೆಗೆ ಪಾತ್ರವಾಗುವ ಸಲುವಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕನ್ನಡ ನಾಡಿನ ಸುಪ್ರಸಿದ್ದ ಕ್ಷೇತ್ರವೆನಿಸಿದ ಕುಕ್ಕೆ ಸುಬ್ರಹ್ಮಣ್ಯವು ಕರ್ನಾಟಕದ ಅತ್ಯಂತ ಶ್ರೀಮಂತ ದೇವಾಲಯವೂ ಹೌದು. ಅತ್ಯಂತ ಪ್ರಾಚೀನ ಐತಿಹ್ಯಗಳನ್ನು, ಪೌರಾಣಿಕ ಹಿನ್ನೆಲೆಗಳನ್ನೂ ಹೊಂದಿರುವ ಶ್ರೀ ಕ್ಷೇತ್ರದ ಪುರಾಣ ಹಿನ್ನೆಲೆಯನ್ನು ನಾವೀಗ ತಿಳಿದುಕೊಳ್ಳೋಣ....
 
Sri Kukke Subrahmanya 


***
ಅನಾದಿ ಕಾಲದಲ್ಲಿ ಅನೇಕ ದೇವರ್ಷಿಗಳು ಶಿವಲಿಂಗಗಳನ್ನಿ ಈ ಸ್ಥಳದಲ್ಲಿ ಸ್ಥಾಪನೆ ಮಾಡಿದ್ದರು. ಸರ್ಪರಾಜನಾದ ವಾಸುಕಿಯು ತಾನೂ ಸಹ ಒಂದು ಶಿವಲಿಂಗವನ್ನು ತಾನು ವಾಸಿಸುವ ಗುಹಾ ದ್ವಾರದಲ್ಲಿ ಸ್ಥಾಪಿಸಿ ಸುಬ್ರಹ್ಮಣ್ಯ ಸ್ವಾಮಿ ಅಥವಾ ಸ್ಕಂದ ಸ್ವಾಮಿಯ ಅಂಶದೊಡನೆ ಗುಹೆಯಲ್ಲಿ ವಾಸಿಸುತ್ತಿದ್ದಾನೆ. “ಕುಕ್ಷೀ” ಎಂಬ ಸಂಸ್ಕೃತ ಶಬ್ದವು ಕನ್ನಡಕ್ಕೆ ಬಂದಾಗ “ಕುಕ್ಕೆ” ಎಂದಾಗಿ ಕುಕ್ಕೆಯಲ್ಲಿ ಸ್ಥಾಪಿತವಾದ ಲಿಂಗವೇ “ಕುಕ್ಕೆ ಲಿಂಗ” ಎಂದೆನಿಸಿತು. ಅದೇ ಮುಂದೆ “ಕುಕ್ಕೆ ಸುಬ್ರಹ್ಮಣ್ಯ” ಎಂದು ಕರೆಯಲ್ಪಟ್ಟಿತು.

***
ಕುಕ್ಕುಟ ಧ್ವಜಧಾರಿಯಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಇಲ್ಲಿ ನೆಲೆಸಿರುವುದರಿಂದಲೂ, ಆತನೇ ಸ್ಥಾಪಿಸಿದ ಲಿಂಗವಾದುದರಿಂದಲೂ ಈ ಸ್ಥಳವು “ಕುಕ್ಕೆ ಲಿಂಗ” ಎಂದೂ ಆ ಪದದಿಂದಲೇ “ಕುಕ್ಕೆ ಸುಬ್ರಹ್ಮಣ್ಯ” ಎಂದೂ ಪ್ರಸಿದ್ದಿಯನ್ನು ಹೊಂದಿತು.

***
ಅತ್ಯಂತ ಪ್ರಾಚೀನ ಕಾಲದಲ್ಲಿ ಈ ಪರಿಸರದಲ್ಲಿದ್ದ ಲಿಂಗಗಳಿಗೆ ರಕ್ಷಣೆ ನೀಡುವುದಕ್ಕಾಗಿ ಬಿದಿರು, ಬೆತ್ತಗಳಿಂದ ತಯಾರಿಸಿದ ಬುಟ್ಟಿಗಳನ್ನು ಕವುಚಿ ಹಾಕುತ್ತಿದ್ದ ಕ್ರಮವಿತ್ತು. ಅದಾಗೆಲ್ಲಾ ಸರಿಯಾದ ಕಟ್ಟಡಗಳು ಇನ್ನೂ ನಿರ್ಮಾಣ ವಾಗಿಲ್ಲದಿದ್ದ ಸಮಯದಲ್ಲಿ ಹೀಗೆ ಮಾಡಿ ತಮ್ಮಯ ಆರಾಧನಾ ಮೂರ್ತಿಗಳನ್ನು ರಕ್ಷಿಸಿಕೊಳ್ಳುವ ಪದ್ದತಿ ಇತ್ತು. ಪೂಜಾ ಸಮಯದಲ್ಲಿ ಮಾತ್ರ ಅವುಗಳಾನ್ನು ಎತ್ತಿಟ್ಟು ಪೂಜೆ ನೆರವೇರಿಸುತ್ತಿದ್ದರು. ಇದರಿಂದಾಗಿಯೂ ಸಹ ಈ ಸ್ಥಳಕ್ಕೆ “ಕುಕ್ಕೆ ಸುಬ್ರಹ್ಮಣ್ಯ’ಎಂಬ ಹೆಸರು ಪ್ರಾಪ್ತವಾಯಿತು ಎನ್ನಲಾಗಿದೆ. ಅದಕ್ಕೆ ಸರಿಯಾಗಿ ಬುಟ್ಟಿ ತಯಾರಿಸಲು ಅಗತ್ಯವಾದ ಬಿದಿರು, ಬೆತ್ತಗಳು ಇಂದಿಗೂ ಈ ಪ್ರದೇಶಗಳಾಲ್ಲಿ ಹೇರಳವಾಗಿದ್ದು ಇಲ್ಲಿನ ಮೂಲ ನಿವಾಸಿಗಳೆಂದು ಹೇಳಿಕೊಳ್ಳುವ ಅದೇಷ್ಟೋ ಮಂದಿ ಇಂದೂ ಸಹ ತಮ್ಮ ಬುಟ್ಟಿ ತಯಾರಿಕೆ ಕಸುಬನು ನಂಬಿಕೊಂಡು ನಡೆಸುತ್ತಾ ಬಂದಿದ್ದಾರೆ.

***
ಅತಿಯಾದ ಭೂಭಾರದಿಂದ ಪೀಡಿತನಾದ ಮಹಾಶೇಷನು ಶ್ರೀ ಹರಿಯನ್ನು ಪ್ರಾರ್ಥಿಸಲಾಗಿ ಶ್ರೀ ಹರಿಯು ಪ್ರತ್ಯಕ್ಷನಾದನು. ಅದಾಗ ಮಹಾಶೇಷನು ತನ್ನ ಮನೋಗತವನ್ನು ಶ್ರೀ ಹರಿಯ ಮುಂದೆ ಹೀಗೆ ಅರುಹಿದನು - “ಅದೆಷ್ಟೋ ಕಾಲದಿಂದ ಈ ಭೂಮಿಯನ್ನು ಹೊತ್ತು ಬಳಲಿದ್ದೇನೆ. ಇನ್ನು ಮುಂದೆ ನನಗೆ ಇದರಿಂದ ಮುಕ್ತಿಯನ್ನು ನೀಡು. ನಾನು ಸುಖವಾಗಿ ಸಂಚರಿಸಬೇಕೆಂದಿರುವೆನು.” ಅದಕ್ಕೆ ಶ್ರೀ ಹರಿಯು ಹೀಗೆಂದನು - “ನಾನು ಕೂರ್ಮ ರೂಪಿಯಾಗಿ ಭೂಭಾರವನ್ನು ಹೊತ್ತು ಕಾಪಾಡುವೆನು ನೀನು ನಿನ್ನ ಅಪೇಕ್ಷೆಯಂತೆ ಸಂಚರಿಸುತ್ತಲಿರು.” ಆ ಬಳಿಕ ಶ್ರೀ ಹರಿಯು ಕೂರ್ಮ ರೂಪವನ್ನು ತಾಳಿ ಪಾತಾಳದಡಿಗೆ ಹೋಗಿ ಸೇರಿದನು. ಆಗ ಮಹಾಶೇಷನು ತಾನು ಭೂಮಿಯ ಪರ್ವತ ಶ್ರೇಷ್ಠರಲ್ಲಿ ಸುಬ್ರಹ್ಮಣ್ಯನೆನಿಸಿ ಬಹಳ ಪರ್ವತಗಳಲ್ಲಿ ಇದ್ದನು. ಇದೇ ಸಮಯದಲ್ಲಿ ಕಾತ್ಯಾಯಿನೀ ದೇವಿಯು ಪುತ್ರ ಸಂತಾನಕ್ಕಾಗಿ ಹಲವು ದೇವತೆಗಳಾನ್ನು ಪ್ರಾರ್ಥಿಸುತ್ತಾ ವ್ರತಗಳಾನ್ನು ಆಚರಿಸುತ್ತಿದ್ದಳು. ಆಗ ಶೇಷದೇವನಾದ ಮಹಾಶೇಷನು ಕಾತ್ಯಾಯಿನಿ ದೇವಿಗೆ ಒಲಿದುದಲ್ಲದೆ ಅವಳಿಗೆ ಪುತ್ರ ಸಂತಾನವನ್ನು ಕರುಣಿಸಿ ತಾನು ತನ್ನ ಶಕ್ತಿಯನ್ನು ಆ ಸಂತಾನದಲ್ಲಿ ತುಂಬಿದನು.
ಹಿಂದೊಮ್ಮೆ ಅಗ್ನಿ ದೇವನು ಪರಮೇಶ್ವರ ಅಂಶವನ್ನು ತಾನು ಧರಿಸುವ ವರವನ್ನು ರುದ್ರದೇವರಿಂದಲೇ ಪಡೆದುಕೊಂಡಿದ್ದನು. ಅದರಂತೆಯೇ ಪಾರ್ವತಿ ದೇವಿಯಲ್ಲಿ ಆರು ಮುಖಗಳುಳ್ಳ ಸುಂದರ ಬಾಲಕನ ಸ್ವರೂಪದಲ್ಲಿ ಜನ್ಮಿಸಿದನು. ಆ ಬಾಲಕ ಷಣ್ಮುಖನು ಮಾತಾ ಪಿತರಾದ ಪಾರ್ವತಿ-ಪರಮೇಶ್ವರರಿಗೆ ವಂದಿಸಿ ಅವರ ಅಪ್ಪಣೆ ಪಡೆದು ಪಶ್ಚಿಮ ದಿಕ್ಕಿಗೆ ಹೊರಟು ಪರಶುರಾಮನ ತಪಃಕ್ಷೇತ್ರವಾದ ಋಷ್ಯಶೃಂಗ ಮುನಿಗಳ ಆಶ್ರಮವಿದ್ದ ಸ್ಥಳಕ್ಕೆ ಬಂದನು. ಅಲ್ಲಿನ ಪವಿತ್ರ ಜಲದಲ್ಲಿ ಮಿಂದು ಶೇಷದೇವರ ಅನುಗ್ರಹಕ್ಕಾಗಿ ತಪಸ್ಸನ್ನಾಚರಿಸತೊಡಗಿದನು. ಷಣ್ಮುಖ ಸ್ವಾಮಿಯು ಕುಮಾರ ರೂಪದಲ್ಲಿ ತಪಸ್ಸನ್ನಾಚರಿಸಿದ ಈ ಸ್ಥಳವು ಮುಂದೆ “ಕುಮಾರ ಪರ್ವತ” ಎನಿಸಿತು. ಈ ಬೆಟ್ಟದ ತಪ್ಪಲಿನಿಂದ ಹೊರಟಂತಹಾ ಪವಿತ್ರ ನದಿಯು “ಕುಮಾರಧಾರೆ” ಎಂಬ ಹೆಸರನ್ನು ಹೊಂದಿತು. ಆ ಪುಣ್ಯಕ್ಷೇತ್ರದಲ್ಲಿದ್ದ ಶಿವಲಿಂಗವು ಸಹ “ಕುಕ್ಕೆ ಲಿಂಗ” ಎನ್ನುವ ಹೆಸರು ಪಡೆಯಿತು.

***
ತ್ರೇತಾಯುಗದಲ್ಲಿ ಸಹಸ್ರಬಿಂದು ಎನ್ನುವವನು ಋಷ್ಯಶೃಂಗ ಪರ್ವತದಲ್ಲಿ ವಿಶೇಷವಾದ ತಪಸ್ಸನ್ನಾಚರಿಸಿದ್ದನು. ಗ್ರೀಷ್ಠ ಋತುವಿನಲ್ಲಿ ಸೂರ್ಯನ ಮೇಲೆ ಕಣ್ಣಿಟ್ಟೂ, ವರ್ಷ ಋತುವಿನಲ್ಲಿ ಮಳೆಯಲ್ಲಿ ಸಂಪೂರ್ಣ ನೆನೆದೂ, ಹೇಮಂತ ಋತುವಿನಲ್ಲಿ ಹಿಮದಲ್ಲಿಯೇ ನಿಂತು ತಪಸ್ಸು ಆಚರಿಸಿದ್ದನು. ಆತಾ ಕುತ್ತಿಗೆಯಲ್ಲಿದ್ದ ಸರದಲ್ಲಿ ಹಿಮವು ಜೋತಾಡುತ್ತಾ ಕೆಳಕ್ಕೆ ಬಿದ್ದು ನದಿಯಾಗಿ ಹರಿಯಿತು. ಅದುವೆ ಮುಂದೆ “ಕುಮಾರ ಧಾರೆ” ಎನಿಸಿಕೊಂಡಿತು.
ಹಾಗೆ ಕಠಿಣ ತಪಸ್ಸನ್ನಾಚರಿಸಿದ ಸಹಸ್ರಬಿಂದುವಿಗೆ ಸೂರ್ಯದೇವನು ಪ್ರತ್ಯಕ್ಷನಾಗಿ ವರವನ್ನು ಕೇಳುವಂತೆ ಕೋರಲು ಸಹಸ್ರಬಿಂದುವು “ಪುತ್ರಪ್ರಾಪ್ತಿಯಾಗುವಂತೆ ಅನುಗ್ರಹಿಸು” ಎಂದು ಬೇಡಿಕೊಂಡನು. ಅದಕ್ಕೆ ಒಪ್ಪಿದ ಸೂರ್ಯದೇವನು “ನಿನ್ನ ಪುತ್ರನು ನದಿಯ ರೂಪದಲ್ಲಿರುತ್ತಾನೆ. ಈ ಕ್ಷೇತ್ರದ ನದಿಯಾಗಿ ನಿನ್ನ ದೇಹದಲ್ಲಿದ್ದ ಹಿಮಬಿಂದುವಿನಿಂದ ಹುಟ್ಟಿದ ಕಾರಣದಿಂಅದ ಕುಮಾರಧಾರೆ ಎಂದು ಪ್ರಖ್ಯಾತವಾದ ಈ ನದಿ ಬುದ್ದಿಶಾಲಿಯಾಗಿರುವನು. ಅವನು ಶತಬಿಂದು ಎಂದು ಪ್ರಸಿದ್ದಿ ಹೊಂದುವನು.” ಎಂದು ವರವನ್ನು ಕರುಣಿಸಿ ಅಲ್ಲಿಯೇ ಅದೃಷ್ಯನಾದನು.
Sri Kshethra Kukke Subrahmany Temple
ಹಾಗೆ ಜನಿಸಿದ ಶತಬಿಂದುವು ತಾನು ಅಗ್ನಿದೇವನ ಕೃಪೆಯನ್ನು ಗಳಿಸುವುದಕ್ಕಾಗಿ ತಪಸ್ಸಿನಲ್ಲಿ ನಿರತನಾದನು. ಆತನ ಭಯಂಕರವಾದ ತಪಸ್ಸಿನ ತೇಜಸ್ಸು ಸೂರ್ಯ ಮಂಡಲವನ್ನು ತಲುಪಿತು. ಇದರಿಂದ ಸಮಸ್ತ ದೇವಾನುದೇವತೆಗಳೂ, ಪಿತೃಗಳೂ, ಸಿದ್ದರೂ ಸಂಕಟವನ್ನು ಅನುಭವಿಸಿದರು. ಶ್ತಬಿಂದುವಿನ ತಪೋ ತೇಜಸ್ಸಿನ ಪ್ರಭಾವದಿಂದ ಭೂಮಿ. ಆಕಾಶ ಮಾರ್ಗಗಳಲ್ಲಿ ದೇವಾನು ದೇವತೆಗಳಿಗೂ ಸಂಚರಿಸುವುದು ಸಾಧ್ಯವಾಗದೇ ಹೋಗಲು ಸಪ್ತರ್ಷಿಗಳು ತಾವು ಶತಬಿಂದುವಿನ ಬಳಿ ಸಾರಿ ಪ್ರತ್ಯೇಕ ಪ್ರತ್ಯೇಕವಾಗಿ ವಿನಂತಿಯನ್ನು ಮಾಡಿಕೊಂಡರು. “ಎಲೈ ಬ್ರಾಹ್ಮಣನೇ ಅತ್ಯಂತ ಕಠಿಣವಾದ ತಪಸ್ಸಿನಿಂದ ಅದೇಕೆ ಕಷ್ಟವನ್ನು ಅನುಭವಿಸುತ್ತಿರುವೆ? ಎಂದಾದರೂ ಸಜ್ಜನರು ಪರರಿಗೆ ಉಪಟಳವನ್ನು ನೀಡಬಾರದು. ಈ ನಿನ್ನ ತಪಸ್ಸು ಲೋಕಕ್ಕೆ ಉಪಟಳಾವನ್ನು ನೀಡುತ್ತಿದೆ.” ಎನ್ನುತ್ತಿದಂತೆಯೇ ಆತನ ತಪೋ ತೇಜಸ್ಸಿನ ಜ್ವಾಲೆ ಆ ಮುನಿಗಳನ್ನೂ ಸಹ ಆವರಿಸಿತು. ಅದಾಗ ಶತಬಿಂದುವು ಮಹರ್ಷಿಗಳ್ ಮಾತಿನಂತೆ ತಪಸ್ಸನ್ನು ನಿಲ್ಲಿಸಲು ಆತನ ದೇಹದ ಬೆವರು ಅದರಿಂದುಂಟಾದ ನೀರು ನದಿಯಾಗಿ ಅತಿಯಾದ ವೇಗದಿಂದ ಸುತ್ತಲೂ ಹರಿಯಿತು. ಸಹಸ್ರಬಿಂದುವಿನಿಂದ ಹುಟ್ಟಿದ ನದಿಯು “ಕನಿಷ್ಕೆ” ಎಂದು ವಿಖ್ಯಾತಳಾದಳು.
ಅದೇ ವೇಳೆಯಲ್ಲಿ ಅಗ್ನಿದೇವನು ತಾನು ಪ್ರತ್ಯಕ್ಷನಾಗಿ ಆಮುನಿಗೆ “ನೀನ್ಯಾವ ವರವನ್ನು ಅಪೇಕ್ಷಿಸುವೆ?” ಎಂದು ಕೇಳಲಾಗಿ “ಮಹಾತ್ಮನೇ ನಾನಪೇಕ್ಷಿಸುವ ವರ ಅದು ಲೋಕೋದ್ದಾರಕವಾಗಿರಬೇಕು. ನನ್ನ ದೇಹದಿಂದ ಜನಿಸಿದ ಗಂಗೆಯು ಕಲಿಯುಗದಲ್ಲಿ ಖ್ಯಾತಳಾಗಲಿ. ಗೋಹತ್ಯೆ ಮಾಡಿದವರು, ಕೃತಘ್ನರು, ಗರ್ಭನಾಶವನ್ನು ಮಾಡಿದವರು, ಗುರುಪತ್ನಿ ಸಂಪರ್ಕ ಮಾಡಿದವರು, ಸ್ತ್ರೀ, ಬಾಲ ಘಾತುಕರು ಹೀಗೆ ಯಾವುದೇ ಮಹಾ ಪಾತಕವನ್ನೆಸಗಿದವ್ರೂ ಈ ನದಿಯ ಸ್ನಾನದಿಂದ ಸರ್ವ ಪಾಪವನ್ನು ಕಳೆದುಕೊಳ್ಳಲಿ, ಈ ಬಗೆಯ ವರವನ್ನು ನೀಡಿ ನನ್ನನ್ನು ಉದ್ದರಿಸು.” ಎಂದು ಬೇಡಿದನು. “ಅಂತೆಯೇ ಹೇಮಂತ ಋತುವಿನ ಮಾರ್ಗಶಿರ ಮಾಸದ ಷಷ್ಠಿ ತಿಥಿಯ ಪುಣ್ಯದಿನದಲ್ಲಾಗಲೀ, ಪಂಚಮಿ ಅಥವಾ ಚತುರ್ಥಿಯ ದಿನಗಳಲ್ಲಾಗಲೀ ಈ ನದಿಯಲ್ಲಿ ಮಿಂದವರಿಗೆ ಕುಷ್ಟರೋಗಗಳಿದ್ದಲ್ಲಿ ಅದು ಸಹ ನಿವಾರಣೆಯಾಗಬೇಕು.” ಎಂದು ಪ್ರಾರ್ಥಿಸಿದನು. ಅದಾಗ ಅಗ್ನಿದೇವನು “ಹಾಗೆಯೇ ಆಗಲಿ.” ಎಂದು ಹೇಳಿ ಅದೃಷ್ಯನಾದನು. ಶತಬಿಂದುವು ತಾನು ಎದ್ದು ನಿಂತು ಅಗ್ನಿದೇವನನ್ನು ಸ್ತುತಿಸಿ ಅವನ ಅನುಗ್ರಹದಿಂದ ಇಹ ಸುಖಗಳನ್ನು ಭೋಗಿಸಿ ಸ್ವರ್ಗಕ್ಕೆ ನಡೆದನು. ಹೀಗೆ ಸಹಸ್ರ ಬಿಂದು ಹಾಗೂ ಶತಬಿಂದುಗಳಿಂದ ಹುಟ್ಟಿದ “ಜೇಷ್ಠೆ” ಹಾಗೂ “ಕನಿಷ್ಠೆ” ಗಳೇ ಮುಂದೆ “ಕುಮಾರಧಾರಾ” ಎನ್ನುವ ಹೆಸರಿನೊಂದಿಗೆ ಪ್ರಖ್ಯಾತವಾಗಿ ಶ್ರೀ ಸುಬ್ರಹ್ಮಣ್ಯ್ ದೇವರ ಮುಂದೆ ಪಾಪನಾಶಿನಿಯಾಗಿ ಇಂದಿಗೂ ಶೋಭಿಸುತ್ತಿದೆ.


(ಇನ್ನಷ್ಟು ಪುರಾಣ ಐತಿಹ್ಯಗಳು ಮುಂದಿನ ಸಂಚಿಕೆಯಲ್ಲಿ............)