Thursday, October 30, 2014

ನಮ್ಮ ಶಾಲೆಗಳು ಅಪಾಯದಲ್ಲಿವೆ!

ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿಲ್ಲ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಲ್ಲಿ ಕಲಿಕೆಗಿಂತಲೂ ಹೆಚ್ಚು ಪೈಪೋಟಿಯ ಮನೋಭಾವನೆ ಮೂಡುವಂತೆ ಮಾಡುತ್ತಿವೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಶಿಕ್ಷಣವು ಅಪಾಯದಲ್ಲಿದೆ. ಉತ್ತಮ ಗುಣಮಟ್ತದ ಶಿಕ್ಷಣವು ಏನನ್ನು ನಿರೀಕ್ಷಿಸಬಲ್ಲುದು ಎನ್ನುವುದರ ತಿಳುವಳಿಕೆಯ ಸ್ಪಷ್ಟ ಕೊರತೆಯಿಂದಾಗಿಯೂ ಮತ್ತು ಹಿಂದಿನ ದೋಷಪೂರಿತ ಶೈಕ್ಷಣಿಕ ನೀತಿಯಿಂದಾಗಿಯೂ ಇಂದು ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ರಾಜಾಸ್ಥಾನ ಸರ್ಕಾರವು ಇತ್ತೀಚೆಗೆ ತನ್ನ ರಾಜ್ಯದಲ್ಲಿನ ೧೭೦೦೦ ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಮಹಾರಾಷ್ಟ್ರ ಸರ್ಕಾರದವರೂ ಸಹ ೧೪೦೦೦ ರಾಜ್ಯ ಸರ್ಕಾರಿ ಶಾಲೆಗಳನ್ನು ಮುಚ್ಚಲಿಕ್ಕೆ ನಿರ್ಧರಿಸಿದ್ದಾರೆ. ಮತ್ತು ಒಡಿಷ್ಯಾ ಸರ್ಕಾರವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಕೊರತೆಯನ್ನು ಮುಂದಾಗಿಟ್ಟುಕೊಂಡು ಒಟ್ಟೂ ೧೯೫ ಶಾಲೆಗಳನ್ನು ಮುಚ್ಚಿದೆ. ಈ ಘಟನೆಗಳು ದೇಶದಲ್ಲಿ ಸಾರ್ವಜನಿಕ ಶಿಕ್ಷಣಾ ವ್ಯವಸ್ಥೆಯು ದಾರಿ ತಪ್ಪುತ್ತಿರುವುದನ್ನೂ, ಅವನತಿಯತ್ತ ಸಾಗುತ್ತಿರುವುದನ್ನೂ ಸೂಚಿಸುತ್ತವೆ.

ಖಾಸಗಿ ಶಾಲಾ ವ್ಯವಸ್ಥೆಗಳಲ್ಲಿನ ಸಮಸ್ಯೆಯನ್ನು ವಿವರಿಸಲು ಈ ಒಂದು ಘಟನೆಯನ್ನು ಉದಾಹಣೆಯಾಗಿ ನೋಡಬಹುದಾಗಿದೆ. ಇತ್ತಿಚೆಗೆ ತನ್ನ ಮಗನನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದ ಓರ್ವ ಪೋಷಕರು ತಮ್ಮ ಮಗನ ಕುರಿತಂತೆ ಶಾಲಾ ಶಿಕ್ಷಕರು ನೀಡಿದ ವಿವರಗಳಾನ್ನು ನನಗೆ ತಿಳಿಸಿದರು. ವಿಜ್ಞಾನ, ಸಮಾಜ ಶಾಸ್ತ್ರ ಹಾಗೂ ಆಂಗ್ಲ ಭಾಷೆಯಲ್ಲಿ ನನ್ನ ಮಗನೌ ಹಿಂದುಳಿದಿದ್ದಾನೆ. ಆ ವಿಚಾರದಲ್ಲಿ ನನ್ನನ್ನು ಶಾಲೆಗೆ ಕರೆಸಿಕೊಂಡ ಶಿಕ್ಷಕರು ನನಗೆ “ನಿಮ್ಮ ಮಗನ ಶಿಕ್ಷಣಾ ಗುಣಮಟ್ಟ ಸುಧಾರಣೆಯಾಗಬೇಕಿದೆ... ಅದಕ್ಕಾಗಿ ನೀವೇನಾದರೂ ಮಾಡಬೇಕು.” ಎಂದರು! “ಶಾಲಾ ಅವಧಿಯಲ್ಲಿ ಮಕ್ಕಳು ಪಠ್ಯ ವಿಷಯಗಳ ಹಿನ್ನೆಡೆಗೆ, ತಪ್ಪು ನಡವಳಿಕೆಗಳಿಗೆ.... ಶಿಕ್ಷಕರೇಕೆ ಜವಾಬ್ದಾರರಾಗುವುದಿಲ್ಲ?” ಮತ್ತೆ ಅವರು ಮುಂದುವರಿದು “ಮನೆಯಲ್ಲಿ ನನ್ನ ಮಗ ಓದಲು, ಬರೆಯಲು ಒಪ್ಪದೆ ತರಲೆ ಮಾಡಿದರೆ ಆ ಜವಾಬ್ದಾರಿಯನ್ನೂ ನಾವೇ ಹೊರಬೇಕು, ಅದನ್ನೂ ಶಿಕ್ಷಕರ ಮೇಲೆ ಹಾಕುವಂತಿಲ್ಲ.. ಏಕೆ ಶಿಕ್ಷಕರು ಇತ್ತೀಚೆಗೆ ಮಗುವಿನ ಕುರಿತ ಎಲ್ಲಾ ಜವಾಬ್ದಾರಿಯನ್ನು ಪೋಷಕರ ಮೇಲೆ ಆರೋಪಿಸುತ್ತಾರೆ? ಮಗುವಿನ ಓದು ಮತ್ತು ಬರವಣಿಗೆಯನ್ನು ಉತ್ತಮಗೊಳಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಪೋಷಕರಾದವರು ಅದಕ್ಕೆ ಬೇಕಾದ ಪರಿಕರಗಳಾನ್ನು ಪುಸ್ತಕ, ಪೆನ್, ಪೆನ್ಸಿಲ್ ಗಳನ್ನು ಒದಗಿಸಿಕೊಡಬಹುದು.
ಇದು ಇಂದಿನ ಪೋಷಕರು ಹಾಗೂ ಮೇಲ್ವರ್ಗದ ಖಾಸಗಿ ಶಾಲೆಗಳ ನಡುವೆ ಇರುವ ಧೋರಣೆಯಾಗಿದ್ದು ಇದೀಗ ಇದೇ ಧೋರಣೆ ಕೆಳ ಮಟ್ಟದ ಶಾಲೆಗಳನ್ನೂ ಆವರಿಸತೊಡಗಿದೆ.

ಸಾರ್ವಜನಿಕ ಶಾಲೆಯ ಅವನತಿ
ಸರ್ಕಾರಿ ಸ್ವಾಮ್ಯದ ಶಾಲೆಗಳು ದಿನ ದಿನಕ್ಕೆ ಅವನತಿಯತ್ತ ಮುಖ ಮಾಡುತ್ತಿವೆ, ಕಾರಣವೆಂದರೆ ಆ ಶಾಲೆಗಳಲ್ಲಿ ಸಮರ್ಪಕವಾದ ನಿರ್ವಹಣೆ ಇಲ್ಲದಿರುವುದೇ ಆಗಿದೆ. ೧೯೫೦ ರ ದಶಕದ ಅಂತ್ಯದಲ್ಲಿಯೂ, ೬೦ ನೇ ದಶ್ಕದಲ್ಲಿಯೂ ಸಾರ್ವಜನಿಕ ಶಾಲೆಗಳ ಈ ಪ್ರಕಾರದ ಸಮಸ್ಯೆಯು ಪ್ರಾರಂಭಗೊಂಡಿತು. ಇದಕ್ಕೆ ಕಾರಣವೆಂದರೆ ಆ ಸಂದರ್ಭದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳು ಪ್ರಾರಂಭಗೊಂಡದ್ದು. ಅಂಕೆ ಸಂಖ್ಯೆಗಳ ಲೆಖ್ಖಾಚಾರದಲ್ಲಿ ಬಹಳವೇ ಶಾಲೆಗಳು ಪ್ರಾರಂಭವಾದವಾದರೂ ಮೂಲ ಸೌಕರ್ಯ ಹಾಗೂ ತರಬೇತಿಗಳ ವಿಚಾರಗಳಾಲ್ಲಿ ಆ ಬಹುತೇಕ ಶಾಲೆಗಳು ಗಮನವನ್ನು ಹರಿಸಿರಲಿಲ್ಲ. ಇನ್ನು ಬಹುತೇಕ ರಾಜ್ಯಗಳಾಲ್ಲಿ ಪ್ರಾರಂಭಗೊಂಡ ಸಾರ್ವಜನಿಕ ಶಾಲೆಗಳಲ್ಲಿ ದುಡಿಯುತ್ತಿದ್ದ ಶಿಕ್ಷಕರಿಗೆ ಅತ್ಯಂತ ಕಡಿಮೆ ವೇತನ ಪಾವತಿಯಾಗುತ್ತಿತ್ತು. ಅಂತಹಾ ಶಾಲೆಗಳ ಆಡಳಿತ ನಿರ್ವಹಣೆಯೂ ಸಹ ಅಸಮರ್ಪಕವಾಗಿದ್ದಿತು. ಇನ್ನು ರಾಜಾಸ್ಥಾನದಂತಹಾ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ ಶಿಕ್ಷಕರಲ್ಲಿ ಬಹುತೇಕರು ಅನನುಭವಿಗಳಾಗಿದ್ದರು. ಈ ಎಲ್ಲಾ ಸನ್ನಿವೇಶವೂ ಸಹ ಶಿಕ್ಷಣ ಗುಣಮಟ್ತದ ಮೇಲೆ ನೇರವಾಗಿ ಪರಿಣಾಮವನ್ನು ಬೀರಿತು. ಶಿಕ್ಷಕ ವರ್ಗವು ಪ್ರೇರಣೆಯನ್ನೇ ಕಳೆದುಕೊಂಡು ಅಸಂತುಷ್ಟವಾಯಿತು.

ಇನ್ನು ಕೆಲ ರಾಜ್ಯ ಸರ್ಕಾರಗಳು ೧೯೫೦ ರ ದಶಕದಲ್ಲಿ ತಮ್ಮ ಸರ್ಕಾರದ ಸೇವೆಯಲ್ಲಿದ್ದ ಶಿಕ್ಷರನ್ನು ಪಂಚಾಯತ್ ರಾಜ್ ನ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಆದೇಶಿಸಿದವು. ಈ ಮೂಲಕ ಶಿಕ್ಷರನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ಇದರಿಂದಾಗಿ ಶಿಕ್ಷಕರಾದವರು ತಮ್ಮ ಶಾಲೆಯ ಕೆಲಸಗಳ ಜವಾಬ್ದಾರಿಯೊಂದಿಗೇ ಇತರೆ ಸಾರ್ವಜನಿಕ ಕೆಲಸಗಳ ಜವಾಬ್ದಾರಿಯನ್ನೂ ನಿರ್ವಹಿಸಬೇಕಾಗಿ ಬಂದು ನಿಜಾರ್ಥದಲ್ಲಿ ಅವರ ಕಾರ್ಯದಕ್ಷತೆ ಇಳಿಮುಖವಾಗುತ್ತಾ ಸಾಗಿತು. ಇದರಂತೆ ಇತರೆ ಅಂಶಗಳಾದ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆ, ಕಡಿಮೆ ವೇತನ ಪಾವತಿ, ಇನ್ನಿತರೆ ಕುಂದುಕೊರತೆಗಳ ಕಾರಣದಿಂದಾಗಿ ರಾಜಾಸ್ಥಾನದಂತಹಾ ರಾಜ್ಯಗಳಲ್ಲಿ ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರಿ ಪ್ರಮಾಣ ಅಧಿಕಗೊಂಡು ಸಮಸ್ಯೆ ತಲೆದೋರಿತು. ಇದುವೇ ಮುಂದುವರಿದು ಶಿಕ್ಷಕರು ತಮ್ಮ ಖಾಸಗಿ ಬದುಕನ್ನು ಉತ್ತಮಪಡಿಸಿಕೊಳ್ಳುವತ್ತ ಹೆಚ್ಚು ಗಮನ ನೀಡಿದರು ಇದಕೆ ಪೂರಕವಾಗಿ ಆಗಷ್ಟೇ ಜನ್ಮತಳೆದ ಶಿಕ್ಷಕರ ಸಂಘಗಳು ಶಿಕ್ಷಕರ ಈ ಪರಿಯ ಧೋರಣೆಯನ್ನು ಬೆಂಬಲಿಸಿದವು. ಶಿಕ್ಷಕರು ಬೆಳೆಸಿಕೊಂಡ ಈ ಬಗೆಯ ಸ್ವಾರ್ಥಪರ ಧೋರಣೆಗೆ ಕಾರಣ ಅವರಿಗೆ ಒದಗಿಬಂದ ಸಂಕಟದ ಪರಿಸ್ಥಿತಿಯೇ ಆಗಿರುವುದರಿಂದ ಶಿಕ್ಷಕರನ್ನು ಯಾರೂ ದೂಷಿಸಲು ಸಾಧ್ಯವಿಲ್ಲ.

ನಮ್ಮ ಶೈಕ್ಷಣಿಕ ಸಂಯೋಜಕರು ಹಾಗೂ ನಿರ್ವಾಹಕರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ದನ್ನು ಸರಿಪಡಿಸಲು ಹೆಚ್ಚು ಒತ್ತು ನೀಡುವ ಬದಲಿಗೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ ಶಿಕ್ಷಣದ ಬೇಡಿಕೆಯನ್ನು ಪರಿಹರಿಸಲು ಅಗ್ಗದ ಉಪಕ್ರಮಗಳಾನ್ನು ರೂಪಿಸಿದರು. ಈ ಬಗೆಯಾದ ಧೋರಣೆಯಿಂದಾಗಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಶಾಲೆಗಳು ಪ್ರಾರಂಭಗೊಂಡ್ವು ಆದರೆ ಅವುಗಳಿಗೆ ಸಾಕಾಗುವಷ್ಟು ಪ್ರಮಾಣದ ಹಣಕಾಸು ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಿಕ್ಕೆ ಈ ವ್ಯವಸ್ಥೆಯ ರೂವಾರಿಗಳಿಂದ ಸಾಧ್ಯವಾಗಲಿಲ್ಲ. ರಾಜಕೀಯ ವ್ಯವಸ್ಥೆಯಲ್ಲಿನ ಒತ್ತಡದಿಂದಾಗಿ ಈ ಸಮಸ್ಯೆಯು ಇನ್ನಷ್ಟು ಬಿಗಡಾಯಿಸುವಂತೆ ಮಾಡಿತು, ಅಲ್ಲದೆ ಶಿಕ್ಷಣದ ಬಗೆಗಿನ ನೈಜ ಕಾಳಜಿಯ ಕೊರತೆಯು ಕಂಡುಬಂದಿತು ೬೦ನೇ ದಶಕದಲ್ಲಿ ಪ್ರಾರಂಭಗೊಂಡ ಸರ್ಕಾರಿ ಪ್ರಾಯೋಜಿತ ಶೈಕ್ಷಣಿಕ ಯೋಜನೆಗಳಲ್ಲೆಲ್ಲವೂ ಈ ಮೇಲಿನ ಧೋರಣೆಯನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಅನೌಪಚಾರಿಕ ಶಿಕ್ಷಣ, ಶಿಕ್ಷಣ ಕ್ರಾಂತಿ, ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಾಮ, ಸರ್ವ ಶಿಕ್ಷಾ ಅಭಿಯಾನ  60 ನಂತರ ಚಾಲನೆ ಎಲ್ಲಾ ಕಾರ್ಯಕ್ರಮಗಳಲ್ಲೆಲ್ಲವೂ ಈ ಈ ಮನಸ್ಥಿತಿಯನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಅನೌಪಚಾರಿಕ ಶಿಕ್ಷಣ, ಶಿಕ್ಷಣ ಕ್ರಾಂತಿ, ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಾಮ, ಸರ್ವ ಶಿಕ್ಷಾ ಅಭಿಯಾನ - ಹೀಗೆ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಅಂದಹಾಗೆ ಈ ಉಪಕ್ರಮಗಳ ಜಾರಿಯ ಪ್ರತಿ ಹಂತಗಳಲ್ಲಿಯೂ ಟೀಕೆಗಳು ಕೇಳಿಬಂದವು. ಆದರೆ ಅದರ ಬೆಂಬಲಿಗರು ತಮ್ಮ ಚತುರ ಮಾತುಗಾರಿಕೆಯಿಂದ ಒಂದು ನಿರ್ದಿಷ್ಠ ಉತ್ತರವನ್ನು ಸಿದ್ದಪಡಿಸಿಟ್ಟುಕೊಂಡಿರುತ್ತಿದ್ದರು.

ಶಾಲೆಯ ಕಲ್ಪನೆ
ಈ ಉಪಕ್ರಮಗಳೆಲ್ಲದರ ಒಂದು ಮೂಲಭೂತ ಸಮಸ್ಯೆ ಎಂದರೆ ಅವರು ಶಾಲೆಯ ಪರಿಕಲ್ಪನೆಯನ್ನೇ ಹಾಳು ಮಾಡಿದರು. ಶಾಲೆಗಳು ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಬ್ಬರ ಕಡೆಯಿಂದಲೂ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಕೋರುತ್ತವೆ. ಇದಕ್ಕೊಂದಷ್ಟು ನಿರ್ದಿಷ್ಠ ಸಮಯವ್ನ್ನು ನಿರಂತರ ಹಾಗೂ ಸುಸಂಬದ್ದ ರೀತಿಯಲ್ಲಿ ಪರಿಶೋಧನೆಗಾಗಿ ಮೀಸಲಾಗಿರಿಸುವ ಕಲ್ಪನೆಯನ್ನು ಹೊಂದಿದೆ. ಇಲ್ಲಿ ವಿದ್ಯಾರ್ಥಿಗಳ ಬೌದ್ದಿಕ ಹಾಗೂ ಮಾನಸಿಕ ಶಿಸ್ತಿನ ಅಭಿವೃದ್ದಿಯಾಗಬೇಕಾಗಿರುತ್ತದೆ. ಆದುದರಿಂದಾಗಿ ಒಂದು ಶಾಲೆಯು ಶಿಕ್ಷಕರ ಕಡೆಯಿಂದ ವೃತ್ತಿಪರ ಜ್ಞಾನ, ಮಕ್ಕಳ ಬೌದ್ಧಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸುವ ಸಲುವಾಗಿ ಮಕ್ಕಳ ಬಗ್ಗೆ ಆಳವಾಗಿ ಸಂವೇದನೆ ಯನ್ನು ಕೋರುತ್ತದೆ. ಆದರೆ ಆದರೆ ಇದಾವುದರ ಬಗೆಗೆ ತಿಳುವಳಿಕೆ ಇಲ್ಲದವರಿಂದ ಬಗೆಯ  ಪರಸ್ಪರ ವಿರುದ್ದದ ಪರಿಕಲ್ಪನೆಗಳು ಬೆಳೆದವೋ ನಿಜವಾದ ಶಾಲೆಯ ಕಲ್ಪನೆಯೇ ವಿಕೃತಗೊಂಡಿತು. ಇದನ್ನೇ ನಮ್ಮ ಶಿಕ್ಷಣ ವ್ಯವಸ್ಥೆಯು ಕಳೆದ ಐದು ದಶಕಗಳಿಂದಲೂ ಪೋಷಿಸಿಕೊಳ್ಲುತ್ತಾ ಬಂದಿದೆ.

ಉದಾಹರಣೆಗೆ ಅನೌಪಚಾರಿಕ ಶಿಕ್ಷಣಾ ಯೋಜನೆಯನ್ನು ಕೋಟಿಗಳ ಲೆಖ್ಖದಲ್ಲಿ ಹಣವನ್ನು ವ್ಯಯಿಸಿ ೧೯೬೦ರಿಂದ ೧೯೯೦ ರ ನಡುವೆ ದೇಶದಾದ್ಯಂತ ಜಾರಿಗೆ ತರಲಾಯಿತು. ಈ ಯೋಜನೆಯು ಸುಸಂಬದ್ದ ಬೋಧನೆ, ಶಿಕ್ಷಕರ ತರಬೇತಿ, ಶೈಕ್ಷಣಿಕ ಯೋಜನೆ ಹಾಗೂ ವೃತ್ತಿಪರ ಜ್ಞಾನದ ಆಲೋಚನೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಹೀಗಾಗಿ ಯಾರು ಬೇಕಾದರೂ ಶಿಕ್ಷಕರಾಗಬಹುದು ಎನ್ನುವ ಸಂದೇಶವನ್ನು ಈ ಯೋಜನೆಯು ದೇಶಾದ್ಯಂತ ರವಾನಿಸಿದೆ. ಶಾಲೆಗಳಿಗಾಗಿ ಸುಸಜ್ಜಿತ ಹಾಗೂ ಪ್ರತ್ಯೇಕ ಸ್ಥಳಾವಕಾಶ್ಗಳನ್ನೂ, ಹೆಚ್ಚಿನ ಹಣವನ್ನು ವ್ಯಯಿಸುವಂತಹಾ ಯಾವುದೇ ಮೂಲಭೂತ ಅಗತ್ಯಗಳನ್ನೂ ಸಹ ಈ ಯೋಜನೆಯು ತಿರಸ್ಕರಿಸುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಬ್ಬರ ಬೌದ್ದಿಕ ಬೇಡಿಕೆಗಳನ್ನೂ ಇಲ್ಲಿ ನಿರ್ಲಕ್ಷಿಸಲಾಗಿದೆ. ಒಟ್ತಾರೆಯಾಗಿ ಶಿಕ್ಷಣ, ಶಿಕ್ಷಕ, ಶಾಲೆಯ ಮೌಲ್ಯವನ್ನೇ ತಗ್ಗಿಸುತ್ತದೆ.

ಶಿಕ್ಷಣ ಸಂಶೋಧಕರು ಈ ದೋಷಪೂರಿತ ಯೋಜನೆಯ ವೈಫ್ಲ್ಯಗಳನ್ನು ಕಂಡುಕೊಳ್ಳುವ ಹೊತ್ತಿಗಾಗಲೇ ಅದೇ ಬಗೆಯ ಇನ್ನಿತರೆ ಯೋಜನೆಗಳು ಜಾರಿಗೆ ಬರಲು ಸಿದ್ದವಾಗಿದ್ದವು. ರಾಜಾಸ್ಥಾನದಲ್ಲಿ ಶಿಕ್ಷಣ ಕ್ರಾಂತಿ ಯೋಜನೆ ಜಾರಿಯಾದರೆ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಾಮ ಜಾರಿಯ ಅಂತಿಮ ಹಂತವನ್ನು ತಲುಪಿದ್ದಿತು. ವೃತ್ತಿಪರ ಜ್ಞಾನ ಹಾಗೂ ಬೌದ್ದಿಕ ತೀವ್ರತೆ, ಮಗುವಿನ ಮೂಲಭೂತ ಅಗತ್ಯ ಸಂವೇದನೆಗಳ ನಡುವಣ ಸಮತೋಲನವನ್ನು ಸರ್ವ ಶಿಕ್ಷಾ ಅಭಿಯಾನ ಸೇರಿದಂತೆ ಈ ಯಾವುದೇ ಕಾರ್ಯಕ್ರಮಗಳು ಪುನಃಸ್ಥಾಪಿಸಲು ಸಾಧ್ಯವಾಗಲಿಲ್ಲ. ಉತ್ತಮ ಗುಣಮಟ್ತದ ಶಿಕ್ಷಣವು ಏನನ್ನು ನಿರೀಕ್ಷಿಸಬಲ್ಲುದು ಎನ್ನುವುದರ ತಿಳುವಳಿಕೆಯ ಸ್ಪಷ್ಟ ಕೊರತೆಯಿಂದಾಗಿಯೂ ಮತ್ತು ಹಿಂದಿನ ದೋಷಪೂರಿತ ಶೈಕ್ಷಣಿಕ ನೀತಿಯಿಂದಾಗಿಯೂ ಇಂದು ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಕಲಿಕೆಯ ವಿಧಾನಗಳು
ಏತನ್ಮಧ್ಯೆ ಖಾಸಗಿ ಶಾಲೆಗಳು ಈಗ ಒಂದು ಅಪೂರ್ವ ದರದಲ್ಲಿ ಬೆಳೆಯುತ್ತಿವೆ. ಕೆಲವು ವಿಶ್ಲೇಷಕರು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿರುವ ಈ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತವೆ ಎಂದು ಭಾವಿಸುತ್ತಾರೆ.

ಖಾಸಗಿ ವಲಯದ ಶಾಲೆಗಳು ಲಾಭಕ್ಕಾಗಿ ಕೆಲಸ ಮಾಡುತ್ತಿವೆ ಎನ್ನುವ ತಪ್ಪು ಗ್ರಹಿಕೆ ಹಲವರಲ್ಲಿ ಇದೆ. ಬಹುಷಃ ಈ ತಪ್ಪು ಗ್ರಹಿಕೆಯನ್ನು ಉದ್ದೇಶಪೂರ್ವಕವಾಗಿ ರಚಿಸಲಾಗಿದೆ. ವಾಸ್ತವದಲ್ಲಿ ಸ್ವತ ಮಗುವಿನ ಜ್ಞಾನ, ಬುದ್ದಿಶಕ್ತಿಯ ಅಭಿವೃದ್ದಿಗೆ ಅಲ್ಲಿ ಪೂರಕ ವಾತಾವರಣಾವನ್ನು ಕಾಣಬಹುದಾಗಿದೆ. ಆದರೆ ಇದೇ ವೇಳೆಯಲ್ಲಿ ಖಾಸಗಿ ಶಾಲೆಗಳ ಮಾಲಿಕರು ತಮ್ಮಲ್ಲಿನ ಪೈಪೋಟಿಯ ಕಾರಣವಾಗಿ ಮಕ್ಕಳಲ್ಲಿ ನೈಜ ಕಲಿಕೆಯ ಮನೋಭಾವನೆ ಬೆಳೆಸುವ ಬದಲಿಗೆ ಅವರಲ್ಲಿ ಪರಸ್ಪರ ಪೈಪೋಟಿ ಒತ್ತಡವನ್ನು ಮೂಡಿಸುತ್ತವೆ. ಖಾಸಗಿ ಶಾಲೆಗಳಲ್ಲಿ ಮಕ್ಳಲ್ಲಿ ಇರಬಹುದಾದ ಆಸಕ್ತಿ ಹಾಗೂ ಆಮುಖೇನ ಅವರ ತಿಳುವಳಿಕೆಯ ಮೌಲ್ಯಗಳನ್ನು ಅಲ್ಲಗೆಳೆಯುತ್ತವೆ ನಿಜವಾದ ಕಲಿಕೆಯು ಪರಿಕಲ್ಪನಾ ಸ್ಪಷ್ಟತೆ, ಕಠೀಣ ಪರ್ಶ್ರಮ ಹಾಗೂ ಹೆಚ್ಚಿನ ಸಮಯವನ್ನು ಅಪೇಕ್ಷಿಸುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಖಾಸಗಿ ಶಾಲೆಗಳು ಬಹುತೇಕ ವಿಫಲವಾಗಿವೆ ಎಂದು ಹೇಳಬೇಕು. ಅದನ್ನೇ ಇನ್ನೊಂದು ಬಗೆಯಲ್ಲಿ ನೋಡುವುದಾದಲ್ಲಿ ಖಾಸಗಿ ಶಾಲೆಗಳು ಉತ್ತಮ ಶಾಲೆಗಳಿಗಿದ್ದ ಬೇಡಿಕೆಗಳನ್ನು ಸಾಕಷ್ಟು ಕಡಿಮೆಗೊಳಿಸಲು ಶಕ್ತವಾಗಿವೆ.

ಖಾಸಗಿ ಶಾಲೆ ಹಾಗೂ ಕಾಲೇಜುಗಳಾಲ್ಲಿ ಇರುವ ಇನ್ನೊಂದು ಪ್ರಮುಖ ದೋಷವೆಂದರೆ ಇವುಗಳು ಮಕ್ಕಳ ನೈತಿಕ ಬೆಳವಣಿಗೆಯ ಜವಾಬ್ದಾರಿಯನ್ನು ಯಾವ ಕಾರಣಕ್ಕೂ ತಾವು ವಹಿಸಿಕೊಳ್ಳಲು ಬಯಸುವುದಿಲ್ಲ. ಯಾವುದೇ ಮಗುವು ಅಂತಹಾ ನೈತಿಕ ಸಮಸ್ಯೆಯನು ಹೊಂದಿದ್ದಾದರೆ ಅಂಥಹಾ ಸಮಯದಲ್ಲಿ ಆ ಮಗುವಿನ ಪೋಷಕರನ್ನು ಶಾಲೆಗೆ ಕರೆ ಕಳಿಸಲಾಗುತ್ತದೆ. ಮತ್ತು ಅವರಿಗೆ ಈ ಸಮಸ್ಯೆಯನ್ನು ನಿವಾರಿಸುವಂತೆ ಹೇಳಲಾಗುತ್ತದೆ. ಇನ್ನು ವಿದ್ಯಾರ್ಥಿಯ ಪಠ್ಯ ವಿಷಯಗಳಲ್ಲಿನ ಹಿಂದುಳಿದಿರುವಿಕೆಯ ವಿಚಾರದಲ್ಲಿ ಸಹ ಶಾಲೆಗಳು ಮಕ್ಕಳಿಗೆ ಖಾಸಗಿಯಾಗಿ ಶಿಕ್ಷಣ(ಟ್ಯೂಷನ್) ಕೊಡಿಸುವಂತೆ ಸಲಹೆ ಮಾಡುತ್ತವೆ. ಈ ಮೂಲಕ ಅವರು ಮಗುವಿಗೆ ಉತ್ತಮ ರೀತಿಯ ಶಿಕ್ಷಣ ಕೊಡಬೇಕಾದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಹೀಗಾದಾಗ ಉತ್ತಮ ಶಿಕ್ಷಣ ನೀಡುವ ದರ ಹೊರತಾಗಿ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಸ್ವಾರ್ಥಪರತೆಯತ್ತ ಸಾಗುತ್ತವೆ.

ಒಂದೆಡೆ ಸರಕಾರಿ ಶಾಲೆಗಳು ಮಕ್ಕಳನ್ನು ತಮ್ಮಲ್ಲಿಗೆ ಆಕರ್ಶಿಸಲು ವಿಫಲವಾದರೆ ಖಾಸಗಿ ಶಾಲೆಗಳು ತಾವು ಉತ್ತಮ ಬೋಧನೆಗಳನ್ನು ನೀಡುವ ಉದ್ದೇಶದಿಂದ ಹಿಂದೆ ಸರಿದು ವಿದ್ಯಾಭಾಸವನ್ನೂ ಸಹ ಒಂದು ಲಾಭದಾಯಕ ಉದ್ಯಮದಂತೆ ನಡೆಸಿಕೊಂಡು ಬರುತ್ತಿರುವುದರಿಂದ ಇಂದು ನಮ್ಮ ಶಾಲೆಗಳು ಅಪಾಯದಂಚಿಗೆ ಬಂದು ತಲಿಉಪಿವೆ. ನಾವು ಹಿಂದಿನಿಂದಲೂ ತಿಳಿದು ಬಂದಿರುವಂತೆ ಒಂದು ಸಮಾಜದಲ್ಲಿ ನಾಗರೀಕತೆಯು ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನೇ ಅವಲಂಬಿಸಿರುತ್ತದೆ. ಶಾಲೆಗಳು ಶಿಕ್ಷಣ ನೀಡುವ ಪ್ರಾಥಮಿಕ ತಾಣಗಳೆಂದು ಭಾವಿಸಲಾಗುತ್ತದೆ. ಒಂದು ವೇಳೆ ಶಾಲೆಗಳ್ ವ್ಯವಸ್ಥೆ ಹಾಳಾದಲ್ಲಿ ಶಾಲೆಗಳು ನಾಗರೀಕತೆಯೂ ಸಹ ಕೆಟ್ಟುಹೋಗುತ್ತದೆ. ಇನ್ನಾದರೂ ನಾವುಗಳುಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಯತ್ತ ಗಮನಹರಿಸದಿದ್ದಲ್ಲಿ, ಶಿಕ್ಷಣದಲ್ಲಿ ನೈತಿಕತೆ ಹಾಗೂ ಮೌಲ್ಯಾಧರಿತ ಗುಣಗಳ ಅಳವಡಿಕೆಯ ತೀವ್ರತೆಯನ್ನು ಅರಿಯದಿದ್ದಲ್ಲಿ ಶಾಲೆಯ್ಗಳ ಮುಚ್ಚುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಮತ್ತು ಮುಂದಿನ ದಿನಗಳಾಲ್ಲಿ ನಮ್ಮ ಶಾಲೆಗಳು ಕೇವಲ ಶಿಕ್ಷಣದ ವ್ಯಾಪಾರೀ ಕೇಂದ್ರಗಳಾಗಿ ಬದಲಾಗುತ್ತವೆ. ಇದಕ್ಕಾಗಿ ಇಂದಿನಿಂದಲೇ ಸೂಕ್ತ ಬಗೆಯ ರಾಜಕೀಯ ಹಾಗೂ ಆರ್ಥಿಕ ನಿಲುವುಗಳನ್ನು ತಾಳುವ ಅವಶ್ಯಕತೆಯಿದೆ. 
***

(ಈ ಲೇಖನವು ಇತ್ತೀಚೆಗೆ ಭಾರತದ ಖ್ಯಾತ ಆಂಗ್ಲ ದಿನಪತ್ರಿಕೆ “ದಿ ಹಿಂದೂ” ಪತ್ರಿಕೆಯಲ್ಲಿ ಪ್ರಕಟವಾದ ರೋಹಿತ್ ದಂಕರ್ ರವರ “Schools in grave danger” ಲೇಖನದ ಕನ್ನಡ ಭಾವಾನುವಾದವಾಗಿದೆ.ರೋಹಿತ್ ಧಂಕರ್ ರವರು ಬೆಂಗಳೂರಿನಲ್ಲಿರುವ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬೆಳವಣಿಗೆ ವಿಭಾಗದಲ್ಲಿ ಪ್ರಾದ್ಯಾಪಕರು ಹಾಗೂ ನಿರ್ದೇಶಕರಾಗಿದ್ದಾರೆ. ದಿಗಂತರ್ ಜೈಪುರ, ರಾಜಾಸ್ಥಾನದ ಗೌರವ ಕಾರ್ಯದರ್ಶಿಗಳಾಗಿರುತ್ತಾರೆ.)

Tuesday, October 28, 2014

ಬನ್ನಿ ಪ್ರಾಮಾಣಿಕರಾಗೋಣ, ಕನ್ನಡಕ್ಕಾಗಿ ಕೈ ಜೋಡಿಸೋಣ...

ಇತ್ತೀಚೆಗೆ ಬೆಂಗಳೂರಿನ ಖ್ಯಾತ ಶಿಕ್ಷಣ ಸಂಸ್ಥೆಯೊಂದರ ಕಡೆಯಿಂದ ಅಲ್ಲಿ ಕಲಿಯುತ್ತಿದ್ದ ಕೆಲವು ಸ್ನಾತಕ ಪದವೀಧರ, ವಿದ್ಯಾರ್ಥಿಗಳಿಗೆ ಕನ್ನಡ ಸಾಮಾನ್ಯ ವ್ಯಾಕರಣ ಪಾಠ ಮಾಡುವುದಕ್ಕಾಗಿ ಶಿಕ್ಷಕರು ಬೇಕಾಗಿದ್ದಾರೆ ಎನ್ನುವ ಸುದ್ದಿಯೊಂದು ನನಗೆ ತಿಳಿಯಿತು. ಆ ವಿದ್ಯಾರ್ತ್ಗಿಗಳು ಸ್ನಾತಕ ಪದವೀಧರರಾಗಿದ್ದೂ ಕನ್ನಡ ಪದಬಳಕೆ, ವಾಕ್ಯರಚನೆಯಂತಹಾ ಸಾಮಾನ್ಯ ವಿಚಾರಗಳಲ್ಲಿಯೂ ತಿಳುವಳಿಕೆ ಇಲ್ಲದಿರುವುದು ತಿಳಿದು ಬಹಳವೇ ಖೇದವೆನಿಸಿತು. ಇದೀಗ ಕನ್ನಡ ರಾಜ್ಯೋತ್ಸವ ಮತ್ತೆ ಬ0ದಿರುವ ಕಾರಣದಿಂದ ಕನ್ನಡ ಭಾಷೆಯ ಸ್ಥಿತಿಗತಿಗಳನ್ನು ಚರ್ಚಿಸಲು ಮತ್ತೊಮ್ಮೆ ಅವಕಾಶ ಒದಗಿದೆ. ಈ ಮೇಲಿನ ವಿಚಾರಗಳನ್ನೇ ಇಟ್ಟುಕೊಂಡು ನಾನಿಲ್ಲಿ ಕೆಲ ವಿಷಯಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಕನ್ನಡ ನಾಡು ಏಕೀಕರಣ ಗೊಂಡು ಐವತ್ತೆಂಟು ವರ್ಷಗಳಾದವು. ಅದಕ್ಕೂ ಮುನ್ನವೇ ಸರಿಸುಮಾರು ಎರಡು ಸಾವಿರ ವರ್ಷಗಳಿಂದಲೂ ಕನ್ನಡ ಭಾಷೆ ಇಲ್ಲಿನ ಜನಗಳ ನಡವಣ ಸಂವಹನ ಭಾಷೆಯಾಗಿತ್ತು. ಆದರೆ ಇಂದಿಗೂ ನಮ್ಮ ಜನರಿಗೆ ಕನ್ನಡದಪದಬಳಕೆಯ ಜ್ಞಾನವೇ ಸರಿಯಾಗಿ ಇಲ್ಲವೆನ್ನುವುದು ವಿಪರ್ಯಾಸ. ಇನ್ನು ಕನ್ನಡ ಭಾಷೆಯ ಉಳಿವಿಗಾಗಿ ಇಂದು ಬೀದಿ ಹೋರಾಟ, ಮುಖಕ್ಕೆ ಮಸಿ ಬಳಿಯುವ ಹೋರಾಟ ನಡೆಸಬೇಕಾಗಿ ಬಂದಿರುವುದಕ್ಕೆ ಹೊಣೆ ಯಾರು? ಅನ್ಯ ಭಾಷಿಕರು ಖಂಡಿತ ಅಲ್ಲ. ಈ ಕುರಿತು ಪ್ರಾಮಾಣಿಕವಾಗಿ ಆಲೋಚಿಸಿದರೆ ಹೊಳೆಯುವ ಸತ್ಯಸಂಗತಿ ಏನೆಂದರೆ ಕನ್ನಡದ ಅಳಿವಿಗೆ , ಕನ್ನಡ ಮೂಲೆಗುಂಪಾಗುತ್ತಿರುವುದಕ್ಕೆ ಕನ್ನಡಿಗರೇ ಕಾರಣ. ವೆಂದರೆ ಅದು ಖಂಡಿತಾ ತಪ್ಪಲ. ಇಂದು ನಾವು ಕನ್ನಡ ಜನರು ಆರೂವರೆ ಕೋಟಿಯಷ್ಟಿದ್ದೇವೆ ಇವರೆಲ್ಲರ ಮನೆಮಾತು ಕನ್ನಡ. ಆದರೆ ಇವರಲ್ಲಿ ಅದೆಷ್ಟು ಮಂದೆ ತಮ್ಮ ಭಾಷೆಯ ಬಗ್ಗೆ ಪ್ರಾಮಾಣಿಕ ಕಳಾಕಳಿ ಹೊಂದಿದ್ದಾರೆ? ಅದೆಷ್ಟು ಮಂದಿ ತಮ್ಮ ನಿತ್ಯ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸುತ್ತಾರೆ? ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುವ ಕನ್ನಡಿಗರು ಕನ್ನಡವೂ ಅಲ್ಲದ ಇತ್ತ ಇಂಗ್ಲಿಷ್ ಕೂಡ ಅಲ್ಲದ `ಕಂಗ್ಲಿಷ್ ‘ ಭಾಷೆಗೆ ಮೊರೆ ಹೋಗಿರುವುದು ಯಾವ ಪುರುಷಾರ್ಥಕ್ಕಾಗಿ? ಕನ್ನಡದ ಮನುಷ್ಯ ಸಂಬಂಧವನ್ನು ಗುರುತಿಸುವ ಪದಗಳು ಈಗಿನ ಹೊಸ ಪೀಳಿಗೆಗೆ ಅಪರಿಚಿತ ಶಬ್ದಗಳಾಗಿರುವುದಕ್ಕೆ ಯಾರು ಹೊಣೆ? ಡ್ಯಾಡಿ, ಮಮ್ಮಿ ,ಅಂಕಲ್, ಆಂಟಿ, ಶಬ್ದಗಳು ನಮ್ಮ ಮನೆಯನ್ನು ಆಕ್ರಮಿಸಿಕೊಳ್ಳಲು ನಮ್ಮ ನಡುವಿನ ಅನ್ಯಭಾಷಿಗರು ಖಂಡಿತಾ ಕಾರಣರಲ್ಲ ನಮ್ಮ ಮಗು “ಮಮ್ಮಿ/ಡ್ಯಾಡಿ” ಎಂದಾಗ ಅದೇ ಕ್ಷಣ ಅಪ್ಪಿ ಮುದ್ದಾಡುವ ನಾವುಗಳು ಎಂದಿಗೂ ನಮ್ಮ ಮಕ್ಕಳಿಗೆ “ಅಮ್ಮ/ಅಪ್ಪ” ಎಂದು ಕರೆಯಲು ಹೇಖುವುದೇ ಇಲ್ಲ!


ಮಕ್ಕಳಿಗೆ ಎದೆ ಹಾಲು ಸರ್ವಶ್ರೇಷ್ಠ ಎಂಬುದು ಹಿಂದಿನಿಂದಲೂ ನಮ್ಮವರ ನಂಬಿಕೆ. ಈಗ ವಿಶ್ವ ಆರೋಗ್ಯ ಸಂಸ್ಥೆ (World Health organisation ) ಕೂಡ ಜಗತ್ತಿನಾದ್ಯಂತ ಇದೇ ಸಂದೇಶ ಸಾರುತ್ತಿದೆ. . ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಆ ಹಾಲು ಕುಡಿದರೆ ದೇಹ ಬಲಿಷ್ಠವಾಗುವುದಲ್ಲದೆ ಯಾವುದೇ ರೋಗರುಜಿನ ಬರುವುದಿಲ್ಲ. ಅದರಲ್ಲಿ ರೋಗ ನಿವಾರಕ ಶಕ್ತಿ ಇರುತ್ತದೆ ಹಾಗೆಯೇ ತಾಯ್ನುಡಿಯೂ ಸಹ ಸರ್ವಶ್ರೇಷ್ಠವಾದದ್ದು. ಬೇರೆಲ್ಲಾ ಭಾಷೆಗಳನ್ನು ಕಲಿತರೂ ಸಹ ತಮ್ಮ ಮಾತೃಭಾಷೆಯನ್ನೇ ಪ್ರೀತಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ನಾವುಗಳು ಏನು ಮಾಡುತ್ತಿದ್ದೇವೆ? ನಮ್ಮನ್ನು ಪರವೂರ/ಪರರಾಜ್ಯದ ವ್ಯಕ್ತಿಯೊಂದಿಗೆ ಮಾತನಾಡುವ ಸಂದರ್ಭ ಒದಗಿದಾಗ ಅವರ ಭಾಷೆಯನು ಕಷ್ಟ ಬಿದ್ದಾದರೂ ಸರಿ ನಾವು ಕಲಿತು ನಾವೂ ಅವರ ಭಾಷೆಯಲ್ಲಿ ಮಾತನಾಡುತ್ತೇವೆ! ಅದರ ಬದಲು ಅವರು ನಮ್ಮ ನಾಡಿಗೆ ಬಂದಿದ್ದಾರೆ ನಾವುಗಳು ಅವರಿಗೆ ಕನ್ನಡ ಭಾಷೆಯನ್ನು ಕಲಿಸಿಕೊಡೋಣ ಎಂದು ಯೊಚಿಸುವುದಿಲ್ಲ.

ಇನ್ನು ಭಾರತ ದೇಶ ಸ್ವತಂತ್ರಗೊಂಡ ಸಮಯದಲ್ಲಿ ದೇಶೀಯ ರಾಜರುಗಳ ಅಧಿಪತ್ಯವನ್ನೆಲ್ಲಾ ಕೊನೆಗೊಳಿಸಿ ಅವರ ಆಡಳಿತದಲ್ಲಿನ ಪ್ರದೇಶಗಳಾನ್ನು ಭಾರತದ ಸಂಯುಕ್ತ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು. ಅದಾದ ನಂತರದಲ್ಲಿ ಭಾಷಾವಾರು ಪ್ರಾಂತ ರಚನೆಯು ನಡೆಯಿತು. ನಿಜಕ್ಕೂ ಭಾಷಾವಾರು ಪ್ರಾಂತ ರಚನೆಯ ಹಿಂದಿದ್ದ ಉದ್ದೇಶವೇನು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ನಾಡಿನ ಜನಜೀವನದ ಬದುಕಿನ ಅತ್ಯಗತ್ಯ ಅಂಗಗಳಾದ ಕಲಿಕೆ, ದುಡಿಮೆ, ಸಾರ್ವಜನಿಕ ಆಡಳಿತದ ಕೆಲಸ ಕಾರ್ಯಗಳ ಏರ್ಪಾಡುಗಳೆಲ್ಲವೂ ಜನರಿಗೆ ಹತ್ತಿರವಾಗಬೇಕು. ಅವರ ಕೈಗೆಟುಕಬೇಕು. ಇದು ಸಾಧ್ಯವಾಗಲು ಇರುವ ಒಂದೇ ಒಂದು ದಾರಿ ಆ ಜನರಾಡುವ ನುಡಿಯಲ್ಲಿ ನಾಡಿನ ವ್ಯವಸ್ಥೆಗಳನ್ನು ಕಟ್ಟುವುದು. ಹೀಗೆ ಎಲ್ಲಾ ವ್ಯವಸ್ಥೆಗಳೂ ಜನರನ್ನು ಒಳಗೊಂಡಾಗ ಜನರ ಮಾಡುಗತನ ಹೆಚ್ಚಬಲ್ಲದು, . ಒಂದು ನುಡಿಯಾಡುವ ಜನರಲ್ಲಿ ಆ ಕಾರಣದಿಂದಾಗಿ ಸಹಜವಾಗೇ ಇರುವ ಒಗ್ಗಟ್ಟು ಮತ್ತಷ್ಟು ಬಲಗೊಂಡು ಸಾಧನೆಯ ಹಾದಿಯತ್ತ ಇಡೀ ಜನಾಂಗ ಸಾಗುವುದು. ಹೀಗೆ ಕನ್ನಡದ ಮೂಲಕ ಕನ್ನಡಿಗರೂ, ತಮಿಳಿನ ಮೂಲಕ ತಮಿಳರೂ, ಹಿಂದಿಯ ಮೂಲಕ ಹಿಂದಿಯವರೂ ಏಳಿಗೆ ಸಾಧಿಸುವುದಾದರೆ ಭಾರತವೂ ಏಳಿಗೆ ಹೊಂದುತ್ತದೆ. ಆದರೆ ಇಂದಿನ ದಿನಗ್ಳಾಲ್ಲಿ ಈ ಉದ್ದೇಶ ಅದೆಶ್ಃಟು ಸಫಲವಾಗಿದೆ? ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡಾಗ ನಮ್ಮ ದಿನನಿತ್ಯದ ಆಡಳಿತಗಳಲ್ಲಿ ನಾವುಗಳು ಎಷ್ಟರ ಮಟ್ಟಿಗೆ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡವನ್ನು ಬಳಸುತ್ತಿದ್ದೇವೆನ್ನುವುದನ್ನು ನೋಡಿದರೆ ನಿಜಕ್ಕೂ ನಿರಾಸೆಯಾಗುತ್ತದೆ. ಸರ್ಕಾರಿ ಕಚೇರಿಗಳೂ ಸೇರಿದಂತೆ ಎಲ್ಲಾ ಸಾರ್ವಜನಿಕ ಏರ್ಪಾಟುಗಳಲ್ಲಿ ಕನ್ನಡದ ಜಾರಿಯನ್ನು ರಾಜ್ಯಸರ್ಕಾರ ಮಾಡುವುದರಲ್ಲೇ ಸಾಕಷ್ಟು ಕುಂದುಕೊರತೆ ಎದುರಿಸಿದೆ. ಇಂದು ಅವೆಲ್ಲವನ್ನೂ ಮಾಡಿದರೂ ಜನರೇ ಬಳಸಲು ಹಿಂದೇಟು ಹಾಕುತ್ತಿದ್ದೇವೆ. ಕನ್ನಡಿಗರು ಕನ್ನಡದ ಬಳಕೆಯಿಂದ ದೂರಾಗುತ್ತಿರುವುದು ಇಂತಹ ಪರಿಸ್ಥಿತಿಗೆ ಕಾರಣ. ಹೀಗಾದರೆ ಅನ್ನಡವು ದುಡಿಮೆಯ ಭಾಷೆಯಾಗುವುದು ಮರೀಚಿಕೆಯಾದೀತು.

ಕನ್ನಡಿಗರಾದ ನಾವೇ ಕನ್ನಡವನ್ನು ಪ್ರೌಡಶಾಲಾ ಶಿಕ್ಷಣಾಕ್ಕೆ ಸೀಮಿತಗೊಳಿಸಿಕೊಂಡಿದ್ದೇವೆ. ಉನ್ನತ ಪದವಿ ವ್ಯಾಸಂಗ, ಸಂಶೋಧನೆ, ತರಬೇತಿ ಎಲ್ಲವೂ ಆಂಗ್ಲಭಾಷೆಯಲ್ಲಿಯೇ ಆಗಬೇಕು ಎನ್ನುವುದು ನಮ್ಮ ಜನಗಳ ಬಯಕೆಯಾಗಿದೆ. ಅಷ್ಟೇಕೆ ನಮ್ಮ ಪುಟ್ಟ ಮಗುವನ್ನೂ ಸಹ ಇನ್ನೂ ಮನೆಯಲ್ಲಿ ತಾಯಿ ತಂದೆಯೊಂದಿಗೆ ಬೆರೆಯಬೇಕಾದ ವಯಸ್ಸಿನಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿ ಆ ಮಗುವಿನ ತಲೆಯೊಳಗೆ ಪ್ರಯತ್ನ ಪೂರ್ವಕವಾಗಿ ಪರಭಾಷೆಯನ್ನು ತುರುಕುತ್ತಿದ್ದೇವಲ್ಲ ಇದು ಯಾರೋ ಬೇರೆ ಭಾಷಿಗರು ನಮ್ಮ ನಡುವೆ ಅಂದು ಮಾಡುತ್ತಿರುವ ಕೆಲಸವಲ್ಲ ನಾವುಗಳೇ ನಮ್ಮ ಸ್ವ ಪ್ರತಿಷ್ಠೆಗಾಗಿ ಮಾಡಿಕೊಳ್ಳುತ್ತಿರುವುದಾಗಿದೆ. ತನ್ಮೂಲಕ ಸಂಸ್ಕೃತಿಯ ದ್ಯೋತಕವಾದ ಮಾತೃಭಾಷೆಯಿಂದ  ನಮ್ಮ ಮಕ್ಕಳನ್ನು ದೂರ ಸರಿಯುವಂತೆ ಮಾಡುತ್ತಿದ್ದೇವೆ. ಆಮುಖೇನ ಮುಂದಿನ ತಲೆಮಾರಿನವರಿಗೆ ನಾಡಿನ ಸಮೃದ್ದ ಭಾಷೆಯಾದ ಕನ್ನಡದ ಬಗ್ಗೆ ಸರಿಯಾದ ತಿಳುವಳಿಕೆಯೇ ಇಲ್ಲದಂತೆ ಮಾಡುತ್ತಿದ್ದೇವೆ.

ಇಷ್ಟೆಲ್ಲಾ ಹೇಳಿದಾಕ್ಷಣ ಆಂಗ್ಲಭಾಷೆ ಸೇರಿದಂತೆ ಇತರೇ ಭಾಷೆಗಳೆಲ್ಲಾ ಕನ್ನಡದ ನಾಶ್ಕ್ಕಾಗಿಯೇ ಇದೆ ಎಂದೂ ಅರ್ಥವಲ್ಲ. ಜಗತ್ತಿನ ಜ್ಞಾನ- ವಿಜ್ಞಾನಗಳನ್ನು ಅರಗಿಸಿಕೊಳ್ಳಲು, ನಮ್ಮದಾಗಿಸಿಕೊಳ್ಳಲು ಆಂಗ್ಲಭಾಷೆ ಸೇರಿದಂತೆ ಇತರೆ ಭಾಷೆಗಳ ಅಗತ್ಯ ಖಂಡಿತಾ ಇದೆ. ಆದರೆ ಅವುಗಳನ್ನು ಎಷ್ಟು ಬೇಕೋ ಅಷ್ಟೇ ಬಳಸೋಣ. ಅದಕ್ಕಾಗಿ ಒಂದು ಪರಿಧಿ.ಹಾಕೋಣ.

ಭಾರತದಂಹ ವಿಶಾಲ ಬಾಹುಳ್ಯವಿರುವ ದೇಶದಲ್ಲಿ ರಾಜ್ಯಕ್ಕೊಂದು ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ ಹಲವು ಭಾಷೆಗಳ ವೈವಿದ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಹಲವಾರು ಬಗೆಗಳಿವೆ. ಬೆಂಗಳೂರು ಕಂಗ್ಲಿಷ್‌ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡುಕನ್ನಡ, ದಕ್ಷಿಣಕನ್ನದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲೆಯಾಳಿ ಕನ್ನಡ, ಹೈದಾರಾಬಾದ್‌ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ – ಹೀಗೆ ಹತ್ತು ಹಲವು ತರ.  ಹೀಹಾಗಿ ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಇತರೆ ಭಾಷೆಗಳನ್ನು ದ್ವೇಷಿಸಬೇಕಾಗಿಲ್ಲ. ಬದಲಾಗಿ ಕರ್ನಾಟಕ ಹಿತ ರಕ್ಷಣೆ ಪ್ರಶ್ನೆ ಬಂದಾಗ ನಾವು ಸ್ವಾಭಿಮಾನವನ್ನು ಪ್ರಕಟಿಸುವುದರ ಜತೆಗೆ ನಾವು ಭಾರತಾಂಬೆಯ ಮಕ್ಕಳು, ಆಕೆಯ ಸತ್ಪುತ್ರರು ಎಂಬುದನ್ನು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿದೆ. ಭಾಷೆಯ ಬಗೆಗೆ ದುರಭಿಮಾನ ಬೆಳೆಸಿಕೊಳ್ಳದೇ ಆರೋಗ್ಯವಂತ ಚೌಕಟ್ಟಿನಲ್ಲಿ ಕನ್ನಡ ಭಾಷೆಯ ಅರಿವಿನ ಜಾಗೃತಿ ಬರಬೇಕು I ಈಗ ಬೇಕಾಗಿರುವುದು ಸಂಘರ್ಷವಲ್ಲ, ಸಾಮರಸ್ಯ. ಇಡೀ ಭಾರತದಲ್ಲಿ ಕೋಮುಸಾಮರಸ್ಯ , ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ರಾಜ್ಯಹಿತ ರಕ್ಷಣೆಯ ಜೊತೆಗೆ ರಾಷ್ಟ್ರಹಿತದ ರಕ್ಷಣೆಯೂ ಆಗುತ್ತದೆ.

ಇಂದು ನಮ್ಮ ಜೀವನದ ವಿಧಾನ ಬದಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಮಾನವನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಈ ಕ್ಷೇತ್ರವನ್ನು ನಮ್ಮ ಕನ್ನಡ ನಾಡು, ನುಡಿ ತನ್ನ ಅವಶ್ಯಕತೆಗಳಿಗೆ ತಕ್ಕಂತೆ ಬಳಸಿಕೊಳ್ಳಬೇಕಾಗಿದೆ. ಇಂದಿನ ಅತಿ ವೇಗದ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳೂ, ಮಿಂಚಂಚೆಗಳೂ ನಮ್ಮಗಳ ಪ್ರಮುಖ ಸಂಪರ್ಕ ಕೊಂಡಿಗಳಾಗಿವೆ. ಇಂತಹಾ ಸನ್ನಿವೇಶಗಳಲ್ಲಿ ಆಧುನಿಕ ತಂತ್ರಕ್ಞಾನದ ಕೊಡುಗೆಗಳಾದ ಈ ಸಂಪರ್ಕ ಸಾಧನಗಳನ್ನೇ ಕನ್ನಡ ಬಳಕೆ ಹಾಗೂ ಮೇಲ್ಮೆಗಾಗಿ ಬಳಸಿಕೊಂಡಲ್ಲಿ ಮುಂಬರುವ ದಿನಗಳಲ್ಲಿ ಕನ್ನಡವು ನಿಜಕ್ಕೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿರಾಜಿಸುವುದನ್ನು ನೋಡಬಹುದಾಗಿದೆ. ಇಂದು ಒಟ್ಟು ಎಂಟು ಜ್ಞಾನಪೀಠ ಪುರಸ್ಕಾರಗಳನ್ನು ಪಡೆದ ಭಾಷೆಯಾಗಿರುವ ಶ್ರೇಷ್ಠ ಭಾಷೆ ಕನ್ನಡವನ್ನು ಉಳಿಸಿಕೊಳ್ಳುವುದೂ, ಇನ್ನಷ್ಟೂ ಸಮೃದ್ದವಾಗಿಸುವುದೂ ಯುವಕರಾದ ನಮ್ಮ ಕೈಯಲ್ಲಿದೆ. ಕನ್ನಡ ಪ್ರೇಮ ನವೆಂಬರ್ 1ರಂದು ಮಾತ್ರ ಸೀಮಿತಗೊಳದ್ದೆ ಇಡೀ ವರುಷ ಇರಬೇಕು ಆಗಲೇ ಕನ್ನಡದ ನೈಜ ಏಳಿಗೆ ಸಾಧ್ಯವಿದೆ. ಈ ದಿಶೆಯಲಿ ವ್ಯವಸ್ಥೆಯಲ್ಲಿ ಭಾಷಾ ಕೀಳರಿಮೆಯನ್ನು ಬಿಟ್ಟು ಕನ್ನಡದ ಉಳಿವಿಗೆ ಪ್ರಯತ್ನವಾಗಬೇಕು, ಕನ್ನಡ ಭಾಷೆಯ ಪ್ರಗತಿಗೆ ಪೂರಕವಾದ ಚಟುವಟಿಕೆಗಳು ರಚನಾತ್ಮಕವಾಗಿ ಅನುಷ್ಠಾನಗೊಳ್ಳಬೇಕು.ಕನ್ನಡ ನಾಡಿನಲ್ಲಿ ಕನ್ನಡದ ಉಳಿವಿಗೆ, ಪ್ರಾದಿಕಾರ, ಕಾವಲು ಸಮಿತಿ ಮಾಡ ಬೇಕಾಗಿ ಬಂದಿರುವುದು ದುರ್ದೈವದ ಸಂಗತಿಕನ್ನಡ ಭಾಷೆ ಮಾತನಾಡಲು ಅಂಜುವ ಸ್ಥಿತಿ ವರ್ತಮಾನದ ಮನಸ್ಸುಗಳಲಿದೆ, ಜಾಗತಿಕವಾಗಿ ತೆರೆದುಕೊಳ್ಳುವ ಮತ್ತು ಗ್ರಹಿಕೆಗೆ ಆಂಗ್ಲಭಾಷೆಯೇ ಅಂತಿಮವಲ್ಲ ಕನ್ನಡ ಭಾಷೆಗೂ ಅಂತಹ ಸಾಮಥ್ರ್ಯವಿದೆ ಎಂಬುದನ್ನು ‘ನಾವು ಯುವ ಜನರು ಅರಿಯಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಂತಹ ವಿಷಯಗಳನ್ನು ಕನ್ನಡದಲ್ಲಿ ಅರ್ಥೈಸಿಕೊಂಡಾಗ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಿದೆ ಈ ದಿಸೆಯಲ್ಲಿ ‘ನಾವು ಚಿಂತಿಸಬೇಕು

ಸ್ನೇಹಿತರೇ, ಇನ್ನಾದರೂ ನಿಜಾರ್ಥದಲ್ಲಿ ಕನ್ನಡ ಭಾಷೆಗಾಗಿ ದುಡಿಯೋಣ. ಈಗಿನ ತಲೆಮಾರಿನ ಮಾಹಿತಿ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಕನ್ನಡದಲ್ಲಿಯೂ ಸಹ ಹೊಸ ಪದಗಳನ್ನು ರಚಿಸಿ ಸೇರ್ಪಡಿಸುವ ಮುಖೇನ ಕನ್ನಡ, ನಮ್ಮ ತಾಯ್ಮುಡಿಯನ್ನು ಇನ್ನಷ್ಟು ಸಮೃದ್ದಗೊಳಿಸೋಣ. ಹೀಗೆ ಮಾಡಿದ್ದೇ ಆದಲ್ಲಿ ಕನ್ನಡಕ್ಕೆ ಎಂದಿಗೂ ಅಳಿವೆಂಬುದಿರುವುದಿಲ್ಲ. ಕನ್ನಡ ಅಳಿವಿನಂಚಿನಲ್ಲಿರುವ ಭಾಷೆಯಾಗುವುದೂ ಸಾಧ್ಯವಿಲ್ಲ.

ಬನ್ನಿ ಸ್ನೇಹಿತರೆ ಪ್ರಾಮಾಣಿಕರಾಗೋಣ
ಕನ್ನಡಕ್ಕಾಗಿ ಕೈ ಜೋಡಿಸೋಣ
ಕನ್ನಡ ಧ್ವಜವನ್ನು ವಿಶ್ವ ಮಟ್ತದಲ್ಲಿ ಹಾರಾಡುವಂತೆ ಮಾಡೋಣ.
ನಮಸ್ಕಾರ,
‘’ಜಗತ್ತಿನೆಲ್ಲೆಡೆಯ ಸರ್ವ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು’’ .
ಜೈ ಹಿಂದ್...!
ಜೈ ಕರ್ನಾಟಕ!

Tuesday, October 21, 2014

ವೀರಪ್ಪನ್‌ ಹತ್ಯೆಗೆ 10 ವರ್ಷ - ಒಂದು ಸಂಕ್ಷಿಪ್ತ ಪಕ್ಷಿ ನೋಟ


ಸುಮಾರು 4 ದಶಕಗಳ ಕಾಲ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಪಾಲಿಗೆ ಸಿಂಹಸ್ವಪ್ನನಾಗಿದ್ದ ವೀರಪ್ಪನ್‌, ಎಸ್‌ಟಿಎಫ್ ಗುಂಡಿಗೆ ಬಲಿಯಾಗಿ ಶನಿವಾರಕ್ಕೆ 10 ವರ್ಷ ತುಂಬಿದೆ. 2000ಕ್ಕೂ ಹೆಚ್ಚು ಆನೆ, 150ಕ್ಕೂ ಜನರನ್ನು ಬಲಿ ಪಡೆದ ನರಹಂತಕ ಬದುಕಿದ್ದಷ್ಟು ಕಾಲವೂ ಕಾಡಿನ ರಾಜನಾಗಿ, ಕೊನೆಗೊಂದು ರಾತ್ರಿ ಅಕ್ಷರಶಃ ನಿಸ್ಸಹಾಯಕನಾಗಿ ಮಣ್ಣಾಗಿ ಹೋಗಿದ್ದ. ಆತನ 4 ದಶಕದ ಬದುಕು, ಆತನ ಅಟ್ಟಹಾಸ, ಸಾವಿನ ಕಡೆಯ ಕ್ಷಣಗಳ ಕುರಿತ ಒಂದು ನೋಟ ಹೀಗಿದೆ...... 



ವೀರಪ್ಪನ್‌ ಯಾರು? 


ಕರ್ನಾಟಕ- ತಮಿಳುನಾಡು ಸರ್ಕಾರಗಳನ್ನು ಎರಡು ದಶಕಗಳ ಕಾಲ ನಿದ್ರೆಗೆಡಿಸಿದ್ದವನು ವೀರಪ್ಪನ್‌. ಈತ ಹುಟ್ಟಿದ್ದು ತಮಿಳುನಾಡು ಗಡಿಯಲ್ಲಿರುವ ಗೋಪಿನಾಥಂ ಎಂಬ ಪುಟ್ಟ ಹಳ್ಳಿಯಲ್ಲಿ. 10ನೇ ವಯಸ್ಸಿನಲ್ಲೇ ಆನೆಯೊಂದನ್ನು ಗುಂಡಿಟ್ಟು ಕೊಂದಿದ್ದ ವೀರಪ್ಪನ್‌ ಬಳಿಕ ಕಾಡುಗಳ್ಳ, ದಂತಚೋರ, ಶ್ರೀಗಂಧಚೋರ ಹಾಗೂ ನರಹಂತಕನಾಗಿ ಬದಲಾದ. ಕರ್ನಾಟಕ, ತಮಿಳುನಾಡು- ಕೇರಳದಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟ ಶ್ರೇಣಿಯಲ್ಲಿ ಕಾಡಿನ ಅನಭಿಷಿಕ್ತ ದೊರೆಯಾಗಿ ಮೆರೆದ. ದೊಡ್ಡದೊಂದು ತಂಡ ಕಟ್ಟಿಕೊಂಡು ಅರಣ್ಯ ಪ್ರದೇಶವನ್ನು ಲೂಟಿ ಮಾಡಿದ. ತಮಿಳುನಾಡಿನ ಮುತ್ತುಲಕ್ಷ್ಮಿಯನ್ನು ವರಿಸಿದ ಈತನಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮತ್ತೂಂದು ಹೆಣ್ಣುಮಗು ಇತ್ತಾದರೂ, ಅದರ ಅಳು ತನ್ನನ್ನು ಸುತ್ತುವರಿದಿರುವ ಪೊಲೀಸರಿಗೆ ಕೇಳಿಸಿಬಿಡುತ್ತದೆ ಎಂಬ ಕಾರಣಕ್ಕೆ ಈತ ಅದನ್ನು ಕೊಂದಿದ್ದ ಎಂಬ ವರದಿಗಳಿವೆ. ವೀರಪ್ಪನ್‌ ತಲೆಗೆ ಕರ್ನಾಟಕ- ತಮಿಳುನಾಡು ಸರ್ಕಾರಗಳು 50 ಲಕ್ಷ ರೂ. ಬೆಲೆ ಕಟ್ಟಿದ್ದವು. ವೀರಪ್ಪನ್‌ ಸದೆಬಡಿಯಲು ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಟಿಎಫ್) ಕೂಡ ರಚಿಸಿದ್ದವು. ದಶಕದ ಕಾಲ ಈ ಎರಡೂ ರಾಜ್ಯಗಳ ಪೊಲೀಸರು, ಅರಣ್ಯ ಸಿಬ್ಬಂದಿಯನ್ನು ಏಮಾರಿಸಿ, ತನ್ನ ಸೆರೆಹಿಡಿಯಲು ಬರುವ ಅಧಿಕಾರಿಗಳನ್ನು ಕೊಂದು ಗಹಗಹಿಸಿ ಕೇಕೆ ಹಾಕುತ್ತಿದ್ದ ವೀರಪ್ಪನ್‌, 2004ರ ಅ.18ರಂದು ತಮಿಳುನಾಡಿನ ಧರ್ಮಪುರಿ ಬಳಿ ಎಸ್‌ಟಿಎಫ್ ಗುಂಡೇಟಿಗೆ ಬಲಿಯಾಗಿದ್ದ. ನಕಲಿ ಎನ್‌ಕೌಂಟರ್‌ ನಡೆಸಿ ಕೊಲ್ಲಲಾಗಿದೆ ಎಂಬ ಆರೋಪಗಳು ಆ ವೇಳೆ ಕೇಳಿಬಂದಿದ್ದವು. 

ಏನು ಮಾಡಿದ್ದ? 


ಅರಣ್ಯ, ಪೊಲೀಸ್‌ ಸಿಬ್ಬಂದಿ, ಪೊಲೀಸ್‌ ಮಾಹಿತಿದಾರರು ಸೇರಿದಂತೆ ಕನಿಷ್ಠ 130 ಜನರನ್ನು ನಿರ್ದಯವಾಗಿ ಕೊಂದ ಆರೋಪ ವೀರಪ್ಪನ್‌ ಮೇಲಿದೆ. 2 ಸಾವಿರಕ್ಕೂ ಆನೆಗಳನ್ನು ಕೊಂದು ಅವುಗಳ ದಂತಗಳನ್ನು ಹಾಗೂ ಲೆಕ್ಕವಿಲ್ಲದಷ್ಟು ಶ್ರೀಗಂಧದ ಮರಗಳನ್ನು ಕಳ್ಳ ಸಾಗಣೆ ಮಾಡಿದ ಕುಖ್ಯಾತಿಯೂ ಈತನಿಗಿದೆ. ಒಂದು ಅಂದಾಜಿನ ಪ್ರಕಾರ ವೀರಪ್ಪನ್‌ 136 ಕೋಟಿ ರೂ. ಮೌಲ್ಯದ 10 ಸಾವಿರ ಟನ್‌ ಶ್ರೀಗಂಧ, 16 ಕೋಟಿ ರೂ. ಬೆಲೆ ಬಾಳುವ ಆನೆದಂತಗಳನ್ನು ಲೂಟಿ ಹೊಡೆದಿದ್ದಾನೆ. ಕೆಲವು ಪೊಲೀಸ್‌ ಅಧಿಕಾರಿಗಳನ್ನು ಗುಂಡಿಟ್ಟು, ನೆಲಬಾಂಬ್‌ ಸ್ಫೋಟಿಸಿ, ರುಂಡ ಚೆಂಡಾಡಿ ಕೊಂದಿದ್ದಾನೆ. 

ಕನ್ನಡ ಚಿತ್ರರಂಗದ ವರನಟ ಡಾ| ರಾಜ್‌ಕುಮಾರ್‌ ಅವರನ್ನು ಅಪಹರಿಸಿದ ಬಳಿಕ ವೀರಪ್ಪನ್‌ ದೇಶಾದ್ಯಂತ ಪ್ರಸಿದ್ಧಿಯಾದ. ರಾಜ್‌ ಕುಮಾರ್‌ ಅವರನ್ನು ಆತ ಸುರಕ್ಷಿತವಾಗಿ ಬಿಡುಗಡೆ ಮಾಡಿದನಾದರೂ ಅದಾದ ಕೆಲವೇ ತಿಂಗಳಲ್ಲಿ ಮಾಜಿ ಸಚಿವ ಎಚ್‌. ನಾಗಪ್ಪ ಅವರನ್ನು ಕೊಳ್ಳೇಗಾಲ ತಾಲೂಕಿನ ಕಾಮಗೆರೆ ನಿವಾಸದಿಂದಲೇ ಅಪಹರಿಸಿ ಕರೆದೊಯ್ದಿದ್ದ. ಕೆಲವು ತಿಂಗಳ ಬಳಿಕ ನಾಗಪ್ಪ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇಷ್ಟಾದರೂ ಪೊಲೀಸರಿಗೆ ಈತನನ್ನು ಸೆರೆಹಿಡಿಯಲು ಆಗಿರಲಿಲ್ಲ. 

ಆತನ ಕಾರ್ಯವ್ಯಾಪ್ತಿ ಎಲ್ಲಿ? 


ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಹರಡಿಕೊಂಡಿರುವ 6000 ಚದರ ಕಿ.ಮೀ. ವಿಸ್ತೀರ್ಣದಷ್ಟು ಅರಣ್ಯವೇ ವೀರಪ್ಪನ್‌ನ ಕಾರ್ಯಕ್ಷೇತ್ರ. 150ಕ್ಕೂ ಹೆಚ್ಚು ಮಂದಿಯ ತಂಡ ಕಟ್ಟಿಕೊಂಡಿದ್ದ ಈತ ಅರಣ್ಯ ಭಾಗಗಳಲ್ಲಿನ ಜನರನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ. ಅಲ್ಲಿನ ಜನರಿಗೆ ಸಹಾಯ ಕೂಡ ಮಾಡುತ್ತಿದ್ದ. ತನ್ನ ಚಲನ-ವಲನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವವರನ್ನು ಮುಲಾಜಿಲ್ಲದೆ ಕೊಂದುಬಿಡುತ್ತಿದ್ದ. ಕರ್ನಾಟಕದಲ್ಲಿ ಒಂದು ಅಪರಾಧವೆಸಗಿದರೆ, ದಿಢೀರನೆ ತಮಿಳುನಾಡು ಅಥವಾ ಕೇರಳ ಅರಣ್ಯಕ್ಕೆ ಪರಾರಿಯಾಗಿಬಿಡುತ್ತಿದ್ದ. ಕಾಡಿನ ಮೂಲೆಮೂಲೆಯ ಮಾಹಿತಿಯೂ ಈತನಿಗೆ ಇತ್ತು. ಪೊಲೀಸರ ಸಪ್ಪಳ, ಅವರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಹಲವು ಪಕ್ಷಗಳ ಧ್ವನಿಯನ್ನು ಅನುಕರಣೆ ಕೂಡ ಮಾಡುತ್ತಿದ್ದ. ಹೀಗಾಗಿ ಈತನನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. 
---------- 

ವರನಟ ರಾಜ್‌ಕುಮಾರ್‌ ಅಪಹರಣ 


ವರನಟ ರಾಜ್‌ಕುಮಾರ್‌ ತಮಿಳುನಾಡಿನ ಗಾಜನೂರಿನಲ್ಲಿ ಹೊಸದಾಗಿ ಮನೆಯೊಂದನ್ನು ನಿರ್ಮಿಸಿದ್ದರು. ಇದರ ಗೃಹಪ್ರವೇಶ ಕಾರ್ಯಕ್ರಮಕ್ಕೆಂದು ಅವರು ಕುಟುಂಬ ಸಮೇತರಾಗಿ ಜು.27ರಂದು ಗಾಜನೂರಿಗೆ ತೆರಳಿದ್ದರು. ಅದಾದ ಮೂರು ದಿನಗಳ ಬಳಿಕ ಆಗಷ್ಟೇ ಊಟ ಮಾಡಿದ್ದ ರಾಜ್‌, ಕುಟುಂಬ ಸದಸ್ಯರಿಗೆ ಟೀವಿ ನೋಡುತ್ತಾ ಕುಳಿತಿದ್ದರು. ಈ ಹಂತದಲ್ಲಿ ತನ್ನ ಸಂಗಡಿಗರೊಂದಿಗೆ ರಾಜ್‌ ನಿವಾಸದ ಮೇಲೆ ದಾಳಿ ನಡೆಸಿದ ವೀರಪ್ಪನ್‌, ರಾಜ್‌ಕುಮಾರ್‌, ರಾಜ್‌ ಸಂಬಂಧಿ ಎಸ್‌.ಎ. ಗೋವಿಂದರಾಜ್‌, ನಾಗೇಶ್‌ ಮತ್ತು ಚಿತ್ರ ನಿರ್ದೇಶಕ ನಾಗಪ್ಪ ಅವರನ್ನು ಅಪಹರಿಸಿಕೊಂಡು ಹೋದ. ಬಳಿಕ ತನ್ನ ಸಹಚರರ ಮೇಲಿನ ಟಾಡಾ ಕೇಸು ಹಿಂಪಡೆಯುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ವೀರಪ್ಪನ್‌ ಮುಂದಿಟ್ಟಿದ್ದ. ಈ ಹಂತದಲ್ಲಿ ರಾಜ್ಯ ಸರ್ಕಾರದ ಪರವಾಗಿ ನಕ್ಕೀರನ್‌ ಪತ್ರಿಕೆ ಸಂಪಾದಕ ಗೋಪಾಲ್‌ ಮತ್ತಿತರರು, ಸಂಧಾನಕಾರರಾಗಿ ತೆರಳಿದ್ದರು. ಹೀಗಾಗಿ ಐದಾರು ಸುತ್ತಿನ ಮಾತುಕತೆ ನಡೆದು ಕೊನೆಗೆ 108 ದಿನಗಳ ಬಳಿಕ ರಾಜ್‌ಕುಮಾರ್‌ ಅವರನ್ನು ಸುರಕ್ಷಿತವಾಗಿ ವೀರಪ್ಪನ್‌ ಬಿಡುಗಡೆ ಮಾಡಿದ್ದ. 
--------- 

ಆಪರೇಷನ್‌ ಕಕೂನ್‌ಗೆ ವೀರಪ್ಪನ್‌ ಬಲಿಯಾದ 


2000ಕ್ಕೂ ಹೆಚ್ಚು ಆನೆ, 150ಕ್ಕೂ ಹೆಚ್ಚು ಜನರನ್ನು ಬಲಿಪಡೆದ ನರಹಂತಕ ವೀರಪ್ಪನ್‌ನನ್ನು ಸೆರೆಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಮಾಡದೇ ಇರುವ ಯತ್ನವೇ ಇರಲಿಲ್ಲ. 1990ರಲ್ಲೇ ಎಸ್‌ಟಿಎಫ್ ರಚನೆಯಾಗಿತ್ತಾದರೂ, ಕೆಲವೊಂದಿಷ್ಟು ವರ್ಷ ಅದು ರಾಜಕೀಯ ಒತ್ತಡಕ್ಕೆ ಒಳಗಾಗಿ ಕಾರ್ಯನಿರ್ವಹಿಸಬೇಕಾಗಿ ಬಂದಿತ್ತು. ಆದರೆ ಕೆ. ವಿಜಯ್‌ಕುಮಾರ್‌ ಅವರು ಯಾವಾಗ ಎಸ್‌ಟಿಎಫ್ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರೋ, ಆಗ ಮತ್ತೆ ಅದಕ್ಕೆ ಬಲ ತುಂಬಿಕೊಂಡಿತ್ತು. 

ವಿಜಯ್‌ಕುಮಾರ್‌ ಅಧಿಕಾರ ವಹಿಸಿಕೊಂಡ ಮೊದಲ ಕೆಲ ವರ್ಷ ಸಾಕಷ್ಟು ಯತ್ನ ನಡೆದರೂ, ಆತ ಬಲೆಗೆ ಬೀಳುವ ಯಾವುದೇ ಸುಳಿವು ಕಂಡುಬಂದಿರಲಿಲ್ಲ. ಹೀಗಾಗಿ ಕಾದು ನೋಡುವ ವಿಶೇಷ ರಹಸ್ಯ ತಂತ್ರವೊಂದನ್ನು ವಿಜಯ್‌ ಕುಮಾರ್‌ ಹೆಣೆದಿದ್ದರು. ಅದಕ್ಕೆ 'ಆಪರೇಷನ್‌ ಕಕೂನ್‌' ಎಂದು ಹೆಸರಿಡಲಾಗಿತ್ತು. 

ಹೀಗಿತ್ತು ಕಾರ್ಯಾಚರಣೆ: ವೀರಪ್ಪನ್‌ ಹತ್ಯೆಯಾಗಿದ್ದು 2004ರ ಅ.18ರಂದಾದರೂ, ಅದಕ್ಕೂ 10 ತಿಂಗಳು ಮೊದಲಿನಿಂದಲೇ ಎಸ್‌ಟಿಎಫ್ ಬಹಳ ಸಿದ್ಧತೆ ನಡೆಸಿತ್ತು. ತನ್ನ ಕೆಲ ಸಿಬ್ಬಂದಿಯನ್ನು ಅದು ಹಳ್ಳಿಗಾಡುಗಳಲ್ಲಿ ಸಾಮಾನು ಮಾರಾಟ ಮಾಡಲು ಕಳುಹಿಸಿತ್ತು. ಕೆಲವರು ಹಳ್ಳಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು, ವೀರಪ್ಪನ್‌ನ ಕುರಿತು, ಆತನ ಚಲನವಲನಗಳ ಕುರಿತು ಮಾಹಿತಿ ಸಂಗ್ರಹ ಮಾಡತೊಡಗಿದರು. ಕಾಡಿನಲ್ಲಿನ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ಮಾಹಿತಿ ಸಂಗ್ರಹಿಸಲಾಯಿತು. ಇನ್ನು ಕೆಲವರನ್ನು ಕೈದಿಗಳ ರೀತಿಯಲ್ಲಿ ಬೆಂಗಳೂರು, ಚೆನ್ನೈನ ಜೈಲುಗಳಿಗೆ ಕಳುಹಿಸಿ, ಅಲ್ಲಿ ವೀರಪ್ಪನ್‌ನ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಮಾಡಲಾಯಿತು. 

ಹೀಗೆ 10 ತಿಂಗಳು ಕಳೆಯುವಷ್ಟರಲ್ಲಿ ವೀರಪ್ಪನ್‌ ತೀವ್ರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂಬ ವಿಷಯ ಎಸ್‌ಟಿಎಫ್ ಗಮನಕ್ಕೆ ಬಂದಿತ್ತು. ಇದನ್ನೇ ದಾಳವಾಗಿ ಬಳಸಿಕೊಳ್ಳಲು ಮುಂದಾದ, ತನ್ನ ಗುಪ್ತಚರರ ಮೂಲಕ ವೀರಪ್ಪನ್‌ ಕಾಡಿನಿಂದ ಹೊರಗೆ ಬರುವಂತೆ ನೋಡಿಕೊಂಡಿತು. 

ಅದು ಅ.18 ರಾತ್ರಿ: ಅ.18ರಂದು ರಾತ್ರಿ ವೀರಪ್ಪನ್‌ ತನ್ನ ಸಹಚರರಾದ ಸೇತುಕುಳಿ ಗೋವಿಂದ, ಚಂದ್ರೇಗೌಡ ಮತ್ತು ಗೋವಿಂದನ್‌ ಜೀಪನ್ನ ಏರಿ ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಎಂಬಲ್ಲಿಗೆ ಬಂದಿದ್ದ. ಅಲ್ಲಿಂದ ಆತ ಆತನಿಗಾಗಿಯೇ ಕಾದಿದ್ದ ಆ್ಯಂಬುಲೆನ್ಸ್‌ ಏರಿ ಹೊರಡಬೇಕಿತ್ತು. ಆದರೆ ಆ ಆ್ಯಂಬುಲೆನ್ಸ್‌ನ ಚಾಲಕ ಸ್ವತಃ ಓರ್ವ ಪೊಲೀಸ್‌ ಎಂದು ವೀರಪ್ಪನ್‌ಗೆ ಗೊತ್ತಿರಲಿಲ್ಲ. ಹೀಗೇ ಏನೂ ವಿಷಯ ಅರಿಯದ ವೀರಪ್ಪನ ತನ್ನ ಸಹಚರರೊಡಗೂಡಿ ಪ್ರಯಾಣ ಬೆಳೆಸಿದ್ದ. ಅದು ರಾತ್ರಿ 10.50ರ ಸಮಯ. ಪಾಡಿ ಎಂಬಲ್ಲಿ ಶಾಲೆ ಬಳಿ ಇದ್ದಕ್ಕಿದ್ದಂತೆ ವೀರಪ್ಪನ್‌ ಪ್ರಯಾಣಿಸುತ್ತಿದ್ದ ಆ್ಯಂಬುಲೆನ್ಸ್‌ ಅನ್ನು ಎಸ್‌ಟಿಎಫ್ ಪಡೆ ಅಡ್ಡಗಟ್ಟಿತು. ಆ ಕ್ಷಣದಲ್ಲೇ ಆ್ಯಂಬುಲೆನ್ಸ್‌ನಲ್ಲಿದ್ದ ಚಾಲಕ ಛಂಗನೆ ಕೆಳಗಿಳಿದು ಕತ್ತಲಲ್ಲಿ ಪರಾರಿಯಾಗಿ ಬಿಡುತ್ತಾನೆ. ಇತ್ತ ಏನಾಗುತ್ತಿದೆ ಎಂದು ಅರಿವಾಗುವುದರೊಳಗೆ ಇಡೀ ಪ್ರದೇಶವನ್ನು ಎಸ್‌ಟಿಎಫ್ ಪಡೆ ಸುತ್ತುವರೆದು, ಶರಣಾಗುವಂತೆ ವೀರಪ್ಪನ್‌ ಮತ್ತು ಆತನ ಸಹಚರರಿಗೆ ಎಚ್ಚರಿಕೆ ನೀಡುತ್ತದೆ. ಏಕಾಏಕಿ ನಡೆದ ಈ ಘಟನೆಯಿಂದ ಆಘಾತಕ್ಕೆ ಒಳಗಾಗುವ ವೀರಪ್ಪನ್‌, ತನ್ನ ಸಹಚರರೊಡಗೂಡಿ ಎಸ್‌ಟಿಎಫ್ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗುತ್ತಾನೆ. ಇತ್ತಕಡೆಯಿಂದ ಎಸ್‌ಟಿಎಫ್ ಸಿಬ್ಬಂದಿ ಕೂಡಾ ಆ್ಯಂಬುಲೆನ್ಸ್‌ನ ಮೇಲೆ ಪ್ರತಿ ದಾಳಿ ನಡೆಸುತ್ತದೆ. 

ಹೀಗೆ 10.50ಕ್ಕೆ ಆರಂಭವಾದ ಗುಂಡಿನ ಚಕಮಕಿ, 11.10ಕ್ಕೆಲ್ಲಾ ಮುಗಿದು ಹೋಗಿರುತ್ತದೆ. ಭಾರತ ಕಂಡ ಅತ್ಯಂತ ಕುಖ್ಯಾತ ಪಾತಕಿ, ನರಹಂತಕ ವೀರಪ್ಪನ್‌ ಮತ್ತು ಆತನ ಸಹಚರರರು ಎಸ್‌ಟಿಎಫ್ ಗುಂಡಿಗೆ ಸ್ಥಳದಲ್ಲೇ ಬಲಿಯಾಗುತ್ತಾರೆ. 

ಮೀಸೆಯೇ ಇರಲಿಲ್ಲ! 


ವೀರಪ್ಪನ್‌ ಎಂದರೆ ಮೊದಲು ನೆನಪಿಗೆ ಬರುವುದು ಆತನ ಭರ್ಜರಿ ಮೀಸೆ. ಆದರೆ ಹತ್ಯೆಯಾದ ವೇಳೆ ಆತ ಮೀಸೆಯನ್‌ ಟ್ರಿಮ್‌ ಮಾಡಿಕೊಂಡಿದ್ದ. ತನ್ನನ್ನು ಸುಲಭವಾಗಿ ಯಾರೂ ಗುರುತು ಹಿಡಿಯದೇ ಇರಲಿ ಎನ್ನುವ ಕಾರಣಕ್ಕೆ ಆತನ ಹೀಗೆ ಮಾಡಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಸತ್ತಿದ್ದು ವೀರಪ್ಪನ್‌ ಹೌದೇ ಅಲ್ಲವೇ ಎಂಬ ಜಿಜ್ಞಾಸೆಯೂ ಹುಟ್ಟಿತ್ತು. ಆದರೆ ಈ ಹಿಂದೊಮ್ಮೆ ಆತನನ್ನು ಬಂಧನಕ್ಕೆ ಒಳಪಡಿಸಿದ್ದ ವೇಳೆ ಪೊಲೀಸರು ಆತನ ಫಿಂಗರ್‌ಪ್ರಿಂಟ್‌ ತೆಗೆದುಕೊಂಡಿದ್ದರು. ಹೀಗಾಗಿ ಅದರ ಜೊತೆಗೆ ಮೃತ ದೇಹದ ಹಸ್ತ ಹೋಲಿಕೆ ಮಾಡುವ ಮೂಲಕ ಸತ್ತಿದ್ದು ವೀರಪ್ಪನ್‌ ಎಂದು ಖಚಿತಪಡಿಸಿಕೊಳ್ಳಲಾಯಿತು. 
-------- 

ವೀರಪ್ಪನ್‌ ಟೈಮ್‌ಲೈನ್‌ 


1962: 10 ವರ್ಷವಿದ್ದಾಗಲೇ ತನ್ನ ಗುರು ಸೇವಿ ಗೌಂಡರ್‌ ಜೊತೆಗೂಡಿ ಆನೆ ಹತ್ಯೆ 

1983: ಕೊಡಗಿನ ಪೊನ್ನಂಪೇಟೆ ಬಳಿ ಆನೆ ಹತ್ಯೆ ತಡೆಯಲು ಯತ್ನಿಸಿದ ಅರಣ್ಯ ರಕ್ಷಣ ಕೆ.ಎಂ. ಪೃಥ್ವಿ ಹತ್ಯೆ. 

1986: ಮೊದಲ ಬಾರಿಗೆ ಬಂಧನ, ಬೂದಿಪಾದ ಗೆಸ್ಟ್‌ಹೌಸ್‌ನಲ್ಲಿ ಇಟ್ಟ ವೇಳೆ ಪೊಲೀಸರಿಗೆ ಲಂಚ ನೀಡಿ ಪರಾರಿ. 

1990: ವೀರಪ್ಪನ್‌ ಹಿಡಿಯಲು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರಿಂದ ವಿಶೇಷ ಕಾರ್ಯಪಡೆ ರಚನೆ. 

1990: ಕರ್ನಾಟಕ ಅರಣ್ಯ ಹಿರಿಯ ಇಲಾಖೆಯ ಅಧಿಕಾರಿ ಶ್ರೀನಿವಾಸ್‌ ತಲೆಗೆ ಗುಂಡಿಟ್ಟು ಹತ್ಯೆ ಮಾಡಿ, ರುಂಡ- ಮುಂಡ ಬೇರ್ಪಡೆ. 

1992: ರಾಮಾಪುರ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿ 5 ಜನರ ಹತ್ಯೆ 

1992: ವೀರಪ್ಪನ್‌ ಗುಂಡಿಗೆ ಮೈಸೂರು ಜಿಲ್ಲಾ ಎಸ್ಪಿ ಟಿ. ಹರಿಕೃಷ್ಣ, ಎಸ್‌ಐ ಶಕೀಲ್‌ ಅಹಮದ್‌ ಮತ್ತು ನಾಲ್ವರು ಪೊಲೀಸ್‌ ಪೇದೆಗಳು ಬಲಿ. 

1993: ವೀರಪ್ಪನ್‌ ಸೆರೆಗೆ ಬಿಎಸ್‌ಎಫ್ ಯೋಧರ ನಿಯೋಜನೆ. ಕೇರಳಿದ ವೀರಪ್ಪನ್‌. ಬಿಎಸ್‌ಎಫ್ ಯೋಧರ ಮೇಲೆ ದಾಳಿ ನಡೆಸಿ 20 ಜನರ ಹತ್ಯೆ. 

1993: ತಮಿಳುನಾಡಿನ ಪಾಲಾರ್‌ ಬಳಿ ನೆಲ ಬಾಂಬ್‌ ಸ್ಫೋಟಿಸಿ, 22 ಪೊಲೀಸರು, ಅರಣ್ಯ ಇಲಾಖೆ, ನಾಗರಿಕರ ಹತ್ಯೆ. 

1996: ಪೊಲೀಸ್‌ ವಶದಲ್ಲಿದ್ದ ತನ್ನ ಸೋದರ ಅರ್ಜುನ್‌ ಸಾವಿಗೆ ಪ್ರತೀಕಾರವಾಗಿ ವೀರಪ್ಪನ್‌ನಿಂದ 10 ಜನರ ಹತ್ಯೆ 

2000: ಕನ್ನಡದ ವರ ನಟ ಡಾ. ರಾಜ್‌ಕುಮಾರ್‌ ಅಪಹರಣ. 109 ದಿನಗಳ ಬಳಿಕ ಬಿಡುಗಡೆ 

2002: ಕರ್ನಾಟಕದ ಮಾಜಿ ಸಚಿವ ಎಚ್‌. ನಾಗಪ್ಪ ಅಪಹರಣ, ಬಳಿಕ ಹತ್ಯೆ. 

2004: ಆ್ಯಂಬುಲೆನ್ಸ್‌ನಲ್ಲಿ ತೆರಳುವ ವೇಳೆ ತಮಿಳುನಾಡಿನ ಚೆಕ್‌ಪೋಸ್ಟ್‌ ಬಳಿಕ ಎಸ್‌ಟಿಎಫ್ ಗುಂಡಿಗೆ ವೀರಪ್ಪನ್‌ ಬಲಿ. 
----------- 
ನಂಬರ್‌ಗೆàಮ್‌ 

184: ವೀರಪ್ಪನ್‌ ಮತ್ತು ಆತನ ಗುಂಪಿಗೆ ಬಲಿಯಾದವರು. 

2000: ವೀರಪ್ಪನ್‌ಗೆ ಬಲಿಯಾದ ಆನೆಗಳ ಸಂಖ್ಯೆ 

10000 ಟನ್‌: ವೀರಪ್ಪನ್‌ ಕಡಿದ ಗಂಧದ ಮರದ ತೂಕ 

135 ಕೋಟಿ: ವೀರಪ್ಪನ್‌ ಕಡಿದ ಆನೆದಂತದ ಅಂದಾಜು ಮೌಲ್ಯ 

50 ಲಕ್ಷ ರೂ. ವೀರಪ್ಪನ್‌ ತಲೆಗೆ ಘೋಷಿಸಲಾಗಿದ್ದ ಬಹುಮಾನದ ಮೊತ್ತ 
---- 
ವೀರಪ್ಪನ್‌ ಕುರಿತ ಚಿತ್ರ, ಧಾರಾವಾಹಿ 

ಜಂಗಲ್‌: ರಾಂ ಗೋಪಾಲ್‌ ವರ್ಮಾರಿಂದ ಚಲನಚಿತ್ರ 

ಕ್ಯಾಪ್ಟನ್‌ ಪ್ರಭಾಕರನ್‌: ತಮಿಳುಚಿತ್ರ 

ವೀರಪ್ಪನ್‌: ಕನ್ನಡ ಚಿತ್ರ 

ಸ್ಯಾಂಡನಕಾಡು: ತಮಿಳು ಧಾರಾವಾಹಿ 

ಅಟ್ಟಹಾಸ: ಕನ್ನಡ ಚಲನಚಿತ್ರ 

ವನಯುದ್ಧಂ: ತಮಿಳುಚಿತ್ರ 
----- 
ವೀರಪ್ಪನ್‌ ಕುರಿತ ಪುಸ್ತಕಗಳು 

ವೀರಪ್ಪನ್‌: ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌ ಮ್ಯಾನ್‌- ಸುನ್ನಾದ್‌ ರಘುರಾಂ 

ಬರ್ಡ್ಸ್‌, ಬೀಸ್ಟ್ಸ್ ಆ್ಯಂಡ್‌ ಬ್ಯಾಂಡಿಟ್ಸ್‌: 14 ಡೇಸ್‌ ವಿತ್‌ ವೀರಪ್ಪನ್‌- ಕೃಪಾಕರ್‌ ಮತ್ತು ಸೇನಾನಿ 
-------- 
ವೀರಪ್ಪನ್‌ ನಡೆಸಿದ ಪ್ರಮುಖ ಅಪಹರಣಗಳು 

1987: ತಮಿಳುನಾಡು ಅರಣ್ಯ ಇಲಾಖೆಯ ಚಿದಂಬರಂ ಅಪಹರಣ, ಹತ್ಯೆ 

1989: ಬೇಗೂರು ಅರಣ್ಯದಿಂದ 3 ಅರಣ್ಯ ಇಲಾಖೆ ಸಿಬ್ಬಂದಿ ಅಪಹರಣ, ಹತ್ಯೆ 

1991: ಗ್ರಾನೈಟ್‌ ಕ್ವಾರಿ ಮಾಲೀಕನ ಪುತ್ರನ ಅಪಹರಣ, ಹಣ ಪಡೆದು ಬಾಲಕನ ಬಿಡುಗಡೆ 

1994: ಕೊಯಮತ್ತೂರಿನ ಡಿಎಸ್‌ಪಿ ಚಿದಂಬರಂ ಸೇರಿ ಮೂವರ ಅಪಹರಣ 

1997: ಕರ್ನಾಟಕದ ವನ್ಯಜೀವಿ ಛಾಯಾಚಿತ್ರಗ್ರಾಹಕರಾದ ಸೇನಾನಿ ಮತ್ತು ಕೃಪಾಕರ್‌ ಅಪಹರಣ, ಬಿಡುಗಡೆ 

1997: ಬುರುಡೆ ಪ್ರದೇಶದಿಂದ ಕರ್ನಾಟಕ ಅರಣ್ಯ ಇಲಾಖೆಯ 9 ಸಿಬ್ಬಂದಿ ಅಪಹರಣ, ಹತ್ಯೆ. 

1998: ನೇತಿಕತ್‌ ಪತ್ರಿಕೆ ಸಂಪಾದಕ ಎ.ಎಸ್‌.ಮಣಿ, ಪ್ರೊ.ಕೃಷ್ಣಸಾಮಿ, ಪತ್ರಕರ್ತ ಪಯ್ಯಂಪುಲಿ, ಫೋಟೋಗ್ರಾಫ‌ರ್‌ ರಿಚರ್ಡ್‌ ಮೋಹನ್‌ ಅಪಹರಣ. ಎಸ್‌ಟಿಎಫ್ ಕಾರ್ಯಾಚರಣೆ ಬಳಿಕ ಬಿಡುಗಡೆ 

2000: ಕನ್ನಡದ ವರನಟ ರಾಜ್‌ಕುಮಾರ್‌ ಅಪಹರಣ, 109 ದಿನಗಳ ಬಳಿಕ ಬಿಡುಗಡೆ 

2002: ಕರ್ನಾಟಕದ ಮಾಜಿ ಸಚಿವ ಎಚ್‌. ನಾಗಪ್ಪ ಅಪಹರಣ, ಹತ್ಯೆ 
(ಕೃಪೆ: ಉದಯವಾಣಿ ಕನ್ನಡ ದಿನಪತ್ರಿಕೆ)

Monday, October 20, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 35

ಸಿಂಹಾಸನಪುರಿ (Hassan)

ಕರ್ನಾತಕದ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲಾಕೇಂದ್ರವಾಗಿರುವ ಹಾಸನ ಐತಿಹಾಸಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಸಾಕಷ್ಟು ಮಹತ್ವವನ್ನು ಹೊಂದಿದ ಜಿಲ್ಲೆ. ಬೇಲೂರು ಹಳೇಬೀಡುಗಳ ಶಿಲ್ಪ ಸೌಂದರ್ಯ, ಶ್ರವಣ್ಬೆಳಗೊಳದ ಗೊಮ್ಮಟೇಶನ ನೆಲೆಯಾದ ಹಾಸನ ನಗರವು ಹಿಂದೆಲ್ಲಾ “ಸಿಂಹಾಸನಪುರಿ” ಎಂದೆನಿಸಿಕೊಂಡಿತ್ತು. ಇಲ್ಲಿನ ನಗರ ದೇವತೆಯಾದ ಹಾಸನಾಂಬೆಯು ‘ಭಕ್ತರಿಗೆ ಪ್ರತಿ ವರ್ಷವೊಂದರಲ್ಲಿ 10 ರಿಂದ 12 ದಿನಗಳ ಕಾಲ ಮಾತ್ರವೇ ದರ್ಶನ ನೀಡುವವಳಾಗಿದಾಳೆ. . ಪ್ರತಿ ವರ್ಷ ಆಶ್ವಯುಜ ಮಾಸದ ಹುಣ್ಣಿಮೆ ನಂತರ ಬರುವ ಗುರುವಾರದಂದು ದೇವಾಲಯದ ಬಾಗಿಲು ತೆರೆದರೆ, ಆನಂತರ ದೀಪಾವಳಿಯ ಬಲಿ ಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಮಾತ್ರ ಭಕ್ತರಿಗೆ ದೇವಿಯ ದರ್ಶನದ ಭಾಗ್ಯ. ದೇವಾಲಯದ ಬಾಗಿಲು ಮುಚ್ಚುವ ದಿವಸ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಒಂದು ವರ್ಷ ದೇವಿಯ ಗರ್ಭಗುಡಿಯಲ್ಲಿ ಉರಿಯುತ್ತಿರುತ್ತದೆ ಹಾಗೂ ಕೊನೆಯ ದಿನ ಪೂಜಿಸಿದ ಹೂವು ಬಾಡದೇ ಇರುತ್ತದೆ. ಇವೆಲ್ಲಕ್ಕಿಂತ ಅಚ್ಚರಿಯ ವಿಷಯವೆಂದರೆ ದೇವಿಗೆ ನೈವೇದ್ಯ ಮಾಡಿದ ಅನ್ನ ಹಾಳಾಗದೇ ಇರುವುದು ಈ ದೇವಾಲಯದಲ್ಲಿನ ವಿಶೇಷ ಹಾಗೂ ದೇವಿಯ ಮಹಿಮೆ. ಹಾಸನಾಂಬಾ ದೇವಿಯ ದೇವಾಲಯವು ಬಾಗಿಲು ತೆಗೆಯುವ ದಿನಗಳಾಂದು ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಾರೆ. ಹಾಸದಲ್ಲಿ ನೆಲೆಸಿರುವ ತಳವಾರ ಸಮುದಾಯದವರೆಲ್ಲರೂ ತಾಯಿಗಾಗಿ ಅವಳ ದರ್ಶನಕ್ಕಾಗಿ ಬಾಳೆ ಕಂಬ, ತಳಿರು ತೋರಣಗಳಿಂದಲಂಕರಿಸಿ ಸಂಭ್ರಮಿಸುತ್ತಾರೆ. ಗರ್ಭಗುಡಿಯ ಎದುರಿಗೆ ಬಾಳೇ ಕಂದನ್ನು ನೆಟ್ಟು ಹಾಸನಾಂಬೆಯನ್ನು ಭಕ್ತಿಯಿಂದ ಆರಾಧಿಸುತ್ತಾ ಅದನ್ನು ಕತ್ತರಿಸಿದ ನಂತರವೇ ಬಾಗಿಲು ತೆಗೆಯು ಪ್ರತೀತಿ ಹಿಂದಿನಿಂದಲೂ ಬಂದಿದೆ.


***
ಒಮ್ಮೆ ಸಪ್ತ ಮಾತೃಕೆಯರಾದ ಬಾಹ್ಮಿ, ಮಾಹೇಶ್ವರಿ, ಕೌಮರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿಯರು ವಾರಣಾಸಿಯಿಂದ ದಕ್ಷಿಣ ಭಾಗಕ್ಕೆ ವಾಯು ವಿಹಾರಕ್ಕಾಗಿ ಬಂದರು.. ಆ ಸಪ್ತ ಮಾತೃಕೆಯರಲ್ಲಿ ವೈಷ್ಣವಿ, ಮಾಹೇಶ್ವರಿ ಹಾಗೂ ಕೌಮಾರಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರು. ಉಳಿದ ಬಾಹ್ಮೀ, ಕೆಂಚಮ್ಮನಕೋಟೆಯಲ್ಲಿ, ಚಾಮುಂಡಿ, ವಾರಾಹಿ ಹಾಗೂ ಇಂದ್ರಾಣಿಯರು ನಗರದ ಮಧ್ಯಭಾಗದಲ್ಲಿರುವ ದೇವಿಕೆರೆಯಲ್ಲಿ ನೆಲೆಸಿದರು.
***

ಕೃಷ್ಣಪ್ಪನಾಯಕ ಎಂಬ ನಾಯಕ ಒಮ್ಮೆ ಪ್ರಯಾಣಕ್ಕಾಗಿ ಹೊರ ಹೊರಟಾಗ ಒಂದು ಮೊಲ ಅಡ್ಡಬಂದು ಪಟ್ಟಣದ ಒಳಗೆ ಪ್ರವೇಶಿಸಿತು. ಈ ಅಪಶಕುನದಿಂದ ನಾಯಕ ನೊಂದುಕೊಂಡನು. ಆಗ ಅವನಿಗೆ ಹಾಸನಾಂಬ ದೇವಿ ಪ್ರತ್ಯಕ್ಷಳಾಗಿ “ಮಗು, ಭಿನ್ನ ಮನಸ್ಸು ತೊರೆದು ಈ ಸ್ಥಳದಲ್ಲಿ ಒಂದು ಕೋಟೆಯನ್ನು ಕಟ್ಟು” ಎಂದು ಹೇಳಿದಳು. . ಅದೇ ಪ್ರಕಾರ ನಾಯಕನು ಕೋಟೆ ಕಟ್ಟಿ ಅದಕ್ಕೆ ಹಸನಾಂಬಾ ಎಂದು ಹೆಸರು ಇಟ್ಟ

Saturday, October 11, 2014

ಕೈಲಾಶ್ ಸತ್ಯಾರ್ಥಿ : ಮಾನವತೆಯ ಕೈಲಾಸ ಪರ್ವತ


 ಭಾರತದ ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ “ಬಚಪನ್ ಬಚಾವೋ” ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ವ್ಯಕ್ತಿ 60 ರ ಪ್ರಾಯದ ಕೈಲಾಶ್ ಸತ್ಯಾರ್ಥಿಯವರ ಕುರಿತಾಗಿ ಮೊನ್ನೆ ನೋಬೆಲ್ ಶಾಂತಿ ಪಾರಿತೋಶಕ ಘೋಷಣೆ ಆಗುವವರೆಗೂ ನಮಗೆ ಯಾರೊಬ್ಬರಿಗೂ ಅವರ ಬಗೆಗೆ ತಿಳಿದಿರಲಿಲ್ಲ ಎನ್ನುವುದು ನಮ್ಮ ದೇಶದ ಸಾಧಕನೋರ್ವನ ಬಗೆಗೆ ನಮಗಿರುವ ಉದಾಸೀನತೆಗೆ ಸಾಕ್ಷಿಯಲ್ಲವೆ? ಭಾರತದ ಸಾಮಾನ್ಯ ಜನರಿಗಾಗಲೀ, ಭಾರತದ ಘನ ಸರ್ಕಾರಗಳಿಗಾಗಲೀ, ಸಾವಿರಾರು ಸಂಖ್ಯೆಯಲ್ಲಿರುವ ಸಂಘ ಸಂಸ್ಥೆಗಳಲ್ಲಿ ಯಾರೊಬ್ಬರಿಗೂ ಇವರ ಬಗೆಗೆ, ಇವರ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗೆಗೆ ಯಾವೊಂದು ವಿಚಾರವೂ ತಿಳಿದಿರಲಿಲ್ಲ! “ಡರ್ಟಿ ಪಿಕ್ಚರ್” ನಂತಹಾ ಚಲನಚಿತ್ರಗಳಲ್ಲಿ ನಟಿಸಿದ ನಟಿಮಣಿಯರಿಗೆಲ್ಲ ಭಾರತದ ಉನ್ನತ ನಾಗರಿಕ ಗೌರವ “ಪದ್ಮಶ್ರೀ” ಪ್ಯ್ರಸ್ಕಾರವು ಸಂದಿರುವಾಗ ನಮ್ಮ ನಡುವೆಯೇ ಇದ್ದು ಸಾವಿರಾರು ಬಡ ಮಕ್ಕಳ ಉದ್ದಾರಕ್ಕಾಗಿ ಟೊಂಕಕಟ್ಟಿದ ಕೈಲಾಶ್ ರಂತಹವರನ್ನು ನಮ್ಮ ಸರ್ಕಾರಗಳು ಗುರುತಿಸದೇ ಹೋದುದು ತೀರಾ ಖೇದಕರ ಸಂಗತಿಯಲ್ಲವೆ? ಇನ್ನಾದರೂ ನಮ್ಮ ದೇಶದ ಸರ್ಕಾರಗಳು, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಬೇಕಿದೆ. ಹಾಗಾದಾಗ ಮಾತ್ರವೇ ನಮ್ಮ ಸಮಾಜಕ್ಕೂ, ಜನತೆಗೂ ಮಾನವತೆಯ ಮೌಲ್ಯಗಳ ಅರಿವಿದೆ ಎಂದು ಇತರರಿಗೆ ತಿಳಿಸಿದಂತಾಗುತ್ತದೆ.


ಆ ಹುಡುಗನು ತಾನು ನಿತ್ಯವೂ ಶಾಲೆಗೆ ನಡೆದು ಹೋಗುತ್ತಿದ್ದಾಗ ತನ್ನದೇ ಓರಗೆಯ ಹುಡುಗನೋರ್ವನು ತನ್ನ ತಂದೆಯೊಡನೆ ಕುಳಿತು ಬೂಟು ರಿಪೇರಿ ಮಡುತ್ತಿದ್ದುದನ್ನು ಕಾಣುತ್ತಿದ್ದನು. ಅದಾಗೆಲ್ಲಾ ಈ ಹುಡುಗನ ಮನಸ್ಸಿನಲ್ಲಿ ‘ನಾನು ಉತ್ಸಾಹದಿಂದಲೂ ಸಂತೋಷದಿಂದಲೂ ಶಾಲೆಗೆ ಹೋಗುತ್ತಿದ್ದರೆ ಆ ಹುಡುಗ ಮಾತ್ರ ತನ್ನ ತಂದೆಯೊಂದಿಗೆ ಕುಳಿತು ಬೂಟು ಹೊಲಿಯುತ್ತಿದ್ದಾನೆ, ಅದೇಕೆ ಹೀಗೆ?’ಎನ್ನುವ ಆಲೋಚನೆ ಹುಟ್ಟುತ್ತಿತ್ತು.
ಅದೊಮ್ಮೆ ಅದೇ ಪ್ರಶ್ನೆಯನ್ನು ತನ್ನ ಶಾಲಾ ಉಪಾದ್ಯಾಯರ ಬಳಿ ಕೇಳಲಾಗಿ “ ಅವರ ಬಳಿ ಹಣವಿಲ್ಲ, ಅವರು ಬಡವರು. ವಿದ್ಯಾಭ್ಯಾಸ ಪಡೆದುಕೊಳ್ಳಲಿಕ್ಕೆ ಸಾಕಷ್ಟು ಧನಬಲವಿಲ್ಲದವರು.” ಎನ್ನುವ ಉತ್ತರ ದೊರಕಿತು.
ಆ ಉತ್ತರದಿಂದ ತೃಪ್ತನಾಗದ ಆ ಬಾಲಕ ಮತ್ತೊಮ್ಮೆ ಬೂಟು ಹೊಲಿಯುತ್ತಿದ್ದ ಹುಡುಗನ ತಂದೆಯನ್ನೇ ನೇರವಾಗಿ ಪ್ರಶ್ನಿಸಿದ “ನೀವೇಕೆ ನಿಮ್ಮ ಮಗನನ್ನು ಶಾಲೆಗೆ ಸೇರಿಸಿಲ್ಲ, ಬೂಟು ಹೊಲಿಯಲು ಇರಿಸಿಕೊಂಡಿದ್ದೀರಿ?” ಅದಾಗ ಒಂದು ಕ್ಷಣ ಬಾಲಕನ ಮುಖವನ್ನೇ ದೃಷ್ಟಿಸಿ ನೋಡಿದ ಹುಡುಗನ ತಂದೆ “ನಾವು ಹುಟ್ಟಿದ್ದೇ ದುಡಿಯಲಿಕ್ಕಾಗಿ, ಶಾಲೆ ಕಲಿಯಲಿಕ್ಕಲ್ಲ.” ಎಂದು ಬಿಟ್ಟರು.
ಆ ಬಡ ತಂದೆ ಅಂದು ಆಡಿದ ಆ ಮಾತು ಬಾಲಕನ ಎದೆಯಲ್ಲಿ ನಾಟಿ ಕುಳಿತಿತು. ಮುಂದೆ ತಾನು ಪಡೆದ ಉನ್ನತ ತಾಂತ್ರಿಕ ಶಿಕ್ಷಣವನ್ನೂ, ಅದರಿಂದ ಲಭಿಸಬಹುದಾಗಿದ್ದ ದೊಡ್ಡ ಸಂಬಳದ ವೃತ್ತಿಯನ್ನೂ ತೊರೆದು ದೇಶದಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಹಾಗೂ ಬಡ ಮಕ್ಕಳ ಶಿಕ್ಷಣ ಹಕ್ಕಿಗಾಗಿ ಹೋರಾಟ ನಡೆಸುವುದಕ್ಕೆ ಅವನನ್ನು ಪ್ರೇರೇಪಣೆಗೊಳಿಸಿತು. ತನ್ನ ಉದ್ದೇಶ ಸಾಧನೆಗಾಗಿ “ಬಚ್ ಪನ್ ಬಚಾವೋ” ಎನ್ನುವ ಆಂದೋಲನವನ್ನೇ ಹುಟ್ಟುಹಾಕಿ ದೇಶ ವಿದೆಶಗಳಾಲ್ಲಿ ಪ್ರಚುರಪಡಿಸಿದುದಲ್ಲದೆ ಬಾಲಕಾರ್ಮಿಕರು, ಹಾಗೂ ಶಿಕ್ಷಣ ಹಕ್ಕುಗಳ ಹೋರಾಟಗಾರನಾಗಿ ಬೆಳೆದು ಬಂದ ಆ ಬಾಲಕನೇ ಇಂದು ಭಾರತಕ್ಕೆ ಎರಡನೆ ನೋಬೆಲ್ ಶಾಂತಿ ಪ್ರಶಸ್ತಿ ತಂದುಕೊಟ್ತ ಕೈಲಾಶ್ ಸತ್ಯಾರ್ಥಿ!
ಕೈಲಾಷ್ ಸತ್ಯಾರ್ಥಿ
Kailash Sathyarthi (Nobel Peace Prize Winner - 2014)

ಭಾರತದ ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ “ಬಚಪನ್ ಬಚಾವೋ” ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ವ್ಯಕ್ತಿ 60 ರ ಪ್ರಾಯದ ಕೈಲಾಶ್ ಸತ್ಯಾರ್ಥಿಯವರ ಕುರಿತಾಗಿ ಮೊನ್ನೆ ನೋಬೆಲ್ ಶಾಂತಿ ಪಾರಿತೋಶಕ ಘೋಷಣೆ ಆಗುವವರೆಗೂ ನಮಗೆ ಯಾರೊಬ್ಬರಿಗೂ ಅವರ ಬಗೆಗೆ ತಿಳಿದಿರಲಿಲ್ಲ ಎನ್ನುವುದು ನಮ್ಮ ದೇಶದ ಸಾಧಕನೋರ್ವನ ಬಗೆಗೆ ನಮಗಿರುವ ಉದಾಸೀನತೆಗೆ ಸಾಕ್ಷಿಯಲ್ಲವೆ? ಇದಕ್ಕೆಂದೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಓರ್ವರು “ವಿಪರ್ಯಾಸವೆಂದರೆ, ಇತರೆ ಭಾರತೀಯರು ತಮ್ಮ ಸಾಧನೆಯನ್ನು ಗುರುತಿಸಲು ಕೈಲಾಶ್ ನೋಬೆಲ್ ಗೆಲ್ಲಬೇಕಾಯಿತು.” ಎಂದು ಹೇಳಿರುವುದು. ಭಾರತದ ಸಾಮಾನ್ಯ ಜನರಿಗಾಗಲೀ, ಭಾರತದ ಘನ ಸರ್ಕಾರಗಳಿಗಾಗಲೀ, ಸಾವಿರಾರು ಸಂಖ್ಯೆಯಲ್ಲಿರುವ ಸಂಘ ಸಂಸ್ಥೆಗಳಲ್ಲಿ ಯಾರೊಬ್ಬರಿಗೂ ಇವರ ಬಗೆಗೆ, ಇವರ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗೆಗೆ ಯಾವೊಂದು ವಿಚಾರವೂ ತಿಳಿದಿರಲಿಲ್ಲ! “ಡರ್ಟಿ ಪಿಕ್ಚರ್” ನಂತಹಾ ಚಲನಚಿತ್ರಗಳಲ್ಲಿ ನಟಿಸಿದ ನಟಿಮಣಿಯರಿಗೆಲ್ಲ ಭಾರತದ ಉನ್ನತ ನಾಗರಿಕ ಗೌರವ “ಪದ್ಮಶ್ರೀ” ಪ್ಯ್ರಸ್ಕಾರವು ಸಂದಿರುವಾಗ ನಮ್ಮ ನಡುವೆಯೇ ಇದ್ದು ಸಾವಿರಾರು ಬಡ ಮಕ್ಕಳ ಉದ್ದಾರಕ್ಕಾಗಿ ಟೊಂಕಕಟ್ಟಿದ ಕೈಲಾಶ್ ರಂತಹವರನ್ನು ನಮ್ಮ ಸರ್ಕಾರಗಳು ಗುರುತಿಸದೇ ಹೋದುದು ತೀರಾ ಖೇದಕರ ಸಂಗತಿಯಲ್ಲವೆ? ಅಮೇರಿಕಾ, ಜರ್ಮನಿ, ಸ್ಪೇನ್ ನಂತಹಾ ಪಾಶ್ಚಾತ್ಯ ದೇಶಗಳು ಸತ್ಯಾರ್ಥಿಯವರ ಸಾಮಾಜಿಕ ಕಾರ್ಯಗಳಿಗೆ ಮನ್ನಣೆ ಗೌರವಗಳನ್ನು ಸಾಲು ಸಾಲಾಗಿ ನೀಡಿರುವಾಗ ನಮ್ಮ ದೇಶದ ಯಾರೊಬ್ಬರಿಗೂ ಇವರ ಬಗೆಗೆ ಕನಿಷ್ಟ ತಿಳುವಳಿಕೆಯೂ ಇಲವಾದದ್ದು ನಿಜಕ್ಕೂ ತಲೆತಗ್ಗಿಸಬೇಕಾದ ಸಂಗತಿ.
ಇರಲಿ ಬಿಡಿ ಭಾರತಕ್ಕೆ 2 ನೇ ನೋಬೆಲ್ ಶಾಂತಿ ಪ್ರಶಸ್ತಿ (ಮೊದಲನೇ ನೋಬೆಲ್ ಶಾಂತಿ ಪುರಕಾರ ಭಾರತಕ್ಕೆ ಸಂದದ್ದು 1979 ರಲ್ಲಿ ಅಂದು ಭಾರತ ಪ್ರಜೆಯಾಗಿದ್ದ ಮದರ್ ತೆರೇಸಾರವರು ಆ ಗೌರವಕ್ಕೆ ಭಾಜನರಾಗಿದ್ದರು. ಅವರು ಭಾರತೀಯ ಪೌರತ್ವವನ್ನು ಹೊಂದಿದ್ದರೂ ಅವರ ಜನ್ಮಸ್ಥಳ ಅಲ್ಬೇನಿಯಾ ದೆಶವಾಗಿತ್ತು. ಹೀಗಾಗಿ ಭಾರತದಲ್ಲೇ ಜನಿಸಿ ನೋಬೆಲ್ ಶಾಂತಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಪ್ರಥಮ ವ್ಯಕ್ತಿ ಶ್ರೀ ಕೈಲಾಶ್ ಸತ್ಯಾರ್ಥಿಯವರಾಗಿದ್ದಾರೆ.) ತಂದುಕೊಟ್ಟ ಶ್ರೀ ಸತ್ಯಾರ್ಥಿಗಳ ಬಗೆಗೆ ಈಗಲಾದರೂ ಕೆಲ ವಿಚಾರಗಳನ್ನು ತಿಳಿದುಕೊಳ್ಳೋಣ. ಕೈಲಾಶ್ ಹುಟ್ಟಿದ್ದು ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ. ಜನವರಿ 11, 1954 ರಲ್ಲಿ ಜನಿಸಿದ ಕೈಲಾಶ್ ವಿದಿಶಾದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ, ಹಾಗೂ ಹೈ ವೋಲ್ಟೇಜ್ ಇಂಜಿನಿಯರಿಂಗ್ ನಲ್ಲಿ ಪಿಜಿ ಡಿಪ್ಲೋಮಾ. ಪೂರೈಸಿದ  ಸತ್ಯಾರ್ಥಿಯವರು ಕೆಲ ಸಮಯಗಳ ಕಾಲ ಭೋಪಾಲ್ ನಲ್ಲಿ ಶಿಕ್ಷಕರಾಗಿ ವೃತ್ತಿ ಮಾಡಿಕೊಂಡಿದ್ದು ನಂತರ ಮಕ್ಕಳ ಮೇಲಿನ ಮಮಕಾರದಿಂದಾಗಿ ತಮ್ಮ 26 ನೇ ವರ್ಷ ವಯಸ್ಸಿನಲ್ಲಿ ಮಕ್ಕಳ ಹಕ್ಕುಗಳ ಹೋರಾಟಕ್ಕೆ ಧುಮುಕಿದರು.
1983 ರಲ್ಲಿ ತಮ್ಮ ಮಹತ್ವಪೂರ್ಣ ಯೋಜನೆಯಾದ “ಬಚ್ ಪನ್ ಬಚಾವೋ” ಆಂದೋಲನವನ್ನು ಹುಟ್ಟು ಹಾಕಿದ ಸತ್ಯಾರ್ಥಿಯವರು ಇದುವರೆವಿಗೂ ಸರಿ ಸುಮಾರು 80 ಸಾವಿರದಷ್ಟು ಬಾಲಕರನ್ನು ಜೀತ ವಿಮುಕ್ತಗೊಳಿಸಿದ್ದಾರೆ. ತಾವು ತಮ್ಮ ಸಹಚರರ ನೆರವಿನೊಂದಿಗೆ ದೇಶದಲ್ಲಿನ ನೂರಾರು ಕಾರ್ಖಾನೆಗಳು, ಗೋದಾಮುಗಳ ಮೇಲೆ ಧಾಳಿ ನಡೆಸಿ ಅಲ್ಲಿದ್ದ ಸಾವಿರಾರು ಬಾಲಕ/ಬಾಲಕಿಯರನ್ನು ರಕ್ಶಿಸಿದ್ದಾರೆ.  ಅವರೆಲ್ಲರೂ ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುವಂತೆ ಮಾಡಿದ್ದಾರೆ.  
ಹೀಗೆ ತಾವು ಬಾಲಕಾರ್ಮಿಕ ಪದ್ದತಿ, ಮಕ್ಕಳ ಹಕ್ಕುಗಳ ಪರವಾಗಿ ಹೋರಾಟ ನಡೆಸುವ ಸಮಯದಲ್ಲಿ ಪ್ರಾರಂಭದ ವರ್ಷಗಳಾಲ್ಲಿ ಕೈಲಾಶ್ ಸತ್ಯಾರ್ಥಿಯವರು ಸ್ವತಃ ಕಾರ್ಖಾನೆಗಳಿಗೆ ಧಾಳಿ ನಡೆಸಿ ಅಲ್ಲಿದ್ದ ಮಕ್ಕಳನ್ನು ರಕ್ಷಿಸಿದ್ದು ಇದೆ. ಅಂತಹಾ ಸಮಯದಲಿ ಅನೇಕ ವೇಳೆ ಬೃಹತ್ ಕೈಗಾರಿಕಾ ಮಾಲೀಕರಿಂದ ಜೀವಬೆದರಿಕೆಗಳನ್ನು ಎದುರಿಸಬೇಕಾಗುತ್ತಿತ್ತು. ಅಲ್ಲದೆ ಸಾಕಷ್ಟು ಬಾರಿ ಗೂಂಡಾಗಳ್ನ್ನು ಬಿಟ್ಟು ಹೊಡೆಸಲಾಗುತ್ತಿತ್ತು. ಕಾರ್ಖಾನೆ ಮಾಲೀಕರು, ಪೋಲೀಸರುಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತಿತ್ತು. ಅದೊಮ್ಮೆ ಸರ್ಕಸ್ ಸಂಸ್ಥೆಯೊಂದರ ವಿರುದ್ದ ಕಾರ್ಯಾಚರಣೆಗಿಳಿದ ಸಮಯದಲ್ಲಿ ಸತ್ಯಾರ್ಥಿ ಹಾಗೂ ಅವರ ಇನ್ನೋರ್ವ ಸಹಚರರಿಗೆ ಸರ್ಕಸ್ ಸಂಸ್ಥೆಯ ಮಾಲೀಕರು ತೀವ್ರವಾಗಿ ಥಳಿಸಿ ಗಾಯಗೊಳಿಸಿದ್ದರು! ಇದುವರೆವಿಗೂ “ಬಚ್ ಪನ್ ಬಚಾವೋ” ಆಂದೋಲನದ ಇಬ್ಬರು ಕಾರ್ಯಕರ್ತರು ಹತ್ಯೆ ಮಾಡಲ್ಪಟ್ಟಿದ್ದಾರೆ. ಓರವ ಕಾರ್ಯಕರ್ತರು ಗುಂಡೇಟಿನಿಂದ ಸತ್ತಿದ್ದರೆ ಇನ್ನೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಾಯಿಸಲಾಗಿದೆ! ಇಷ್ಟೆಲ್ಲಾ ಆದರೂ ಕೈಲಾಶ್ ಮಾತ್ರ ತಾವು ಇಟ್ಟ ಹೆಜ್ಜೆಯನ್ನು ಹಿಂದೆಗೆಯದೆ ನಿರಂತರ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ.
ಇಷ್ಟೇ ಅಲ್ಲದೆ ತಾವು ಕಾರ್ಯಾಚರಣೆ ಮಾಡಿ ರಕ್ಷಿಸಿದ ಮಕ್ಕಳಲ್ಲಿ ಧೈರ್ಯ, ವಿಶ್ವಾಸವನ್ನು ತುಂಬಿ ಅವರನ್ನು ಸ್ವಾವಲಂಬನೆಯ ಬದುಕಿಗೆ ಸನ್ನದ್ದಗೊಳಿಸುವ ಕಲೆಯು ಸತ್ಯಾರ್ಥಿಯವರಿಗೆ ಕರಗತವಾಗಿತ್ತು. ಕೆಲವೊಮ್ಮೆ ಜೀತವಿಮುಕ್ತರಾದ ಮಕ್ಕಳಿಗೆ ತಾವೇ ಸ್ವತಃ ಅಡುಗೆ ಮಾಡಿ ಉಣಬಡಿಸುತ್ತಿದ್ದರು. ಇಂತಹಾ ಕೆಲಸವೆಂದರೆ ಅವರಿಗೆ ಎಲ್ಲಿಲ್ಲದ ಸಂತೋಷವನ್ನು ನೀಡುತ್ತಿತ್ತು. ಜೀತವಿಮುಕ್ತಿ ಹೊಂದಿದ ಮಕ್ಕಳ ಹಾಗೂ ಪಾಲಕರು ಸಾಕಶ್ಟು ಸಂದರ್ಭಗಳಾಲ್ಲಿ ಭೀತಿಗೊಳ್ಳುತ್ತಿದ್ದರು. ತಮ್ಮ ಮಾಲೀಕರ ಕಡೆಯಿಂದ ತಮಗೆ ತೊಂದರೆಯಾಗಬಹುದೆನ್ನುವುದು ಅವರ ಭೀತಿಗಿದ್ದ ಪ್ರಮುಖ ಕಾರಣಾವಾಗಿತ್ತು. ಆದರೆ ಅಂತಹಾ ಸಂದರ್ಭಗಳಲ್ಲಿ ಸತ್ಯಾರ್ಥಿ ಅವರಿಗೆ ನೀಡುತ್ತಿದ್ದ ಸಾಂತ್ವನದ ನುಡಿಗಳು, ಭರವಸೆಗಳು ಅಂತಹಾ ಸಮಯದಲ್ಲಿಯೂ ಅವರ ಮೊಗದಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದವು.  
1988ರಲ್ಲಿ ಬಾಲಕಾರ್ಮಿಕರ  ಮುಕ್ತಿಗಾಗಿ  ಕೈಲಾಶ್ ಸತ್ಯಾರ್ಥಿಯವರ ನೇತೃತ್ವದಲ್ಲಿ ಜಾಗತಿಕ ಮೆರವಣಿಗೆ 103 ದೇಶಗಳ 7.2 ಮಿಲಿಯನ್ ಜನ 20,000 ನಾಗರಿಕ ಸಂಘಟನೆಗಳು ಭಾಗವಹಿಸಿದ್ದವು.  
1994 ರಲ್ಲಿ ಕೈಲಾಶ್ ಸತ್ಯಾರ್ಥಿಯವರು ಪರಿಚಯಿಸಿದ “ರಗ್ ಮಾರ್ಕ್” ಯೋಜನೆ ಸಾಕಷ್ಟು ಜನಪ್ರಿಯವಾಗಿದ್ದು ಆ ಯೋಜನೆಯಂತೆ ಬಾಲ ಕಾರ್ಮಿಕರನ್ನು ಬಳಸಿಕೊಳ್ಳದೆ ರತ್ನಗಂಬಳಿ ಹಾಗೂ ರಗ್ಗುಗಳನ್ನು ದೇಶ ವಿದೇಶಗಳಲ್ಲಿ ಮಾರಾಟ ಮಾಡುವುದಾಗಿದೆ. ಹಾಗೆ ಮಾರಾಟವಾಗುವ ಉತ್ಪನ್ನಗಳಿಗೆ “ರಗ್ ಮಾರ್ಕ್” ಚಿಹ್ನೆಯನ್ನು ನೀಡಲಾಗುತ್ತದೆ. ಇದೊಂದು ಸಾಮಾಜಿಕ ಪ್ರಮಾಣಪತ್ರವಾಗಿದ್ದು ಇದನ್ನು ಬಳಸಿಕೊಳ್ಳಲು ಒಪ್ಪಿದ ಕಾರ್ಖಾನೆಗಳು ಪರಿಶೀಲನೆಗೆ ಒಳಪಡಲೂ ಸಹ ಸಹಮತವನ್ನು ಸೂಚಿಸಬೇಕಾಗುವುದು.
ದಕ್ಷಿಣ ಏಷ್ಯಾ ಹಾಗೂ ಭಾರತ ಗಳಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಂಡು ಈ ರೀತಿಯ ರಗ್ಗು ಹಾಗೂ ರತ್ನಗಂಬಳಿಗಳನ್ನು ಉತ್ಪಾದಿಸುವ ಸಾಕಷ್ಟು ಘಟಕಗಳಿರುವುದನ್ನು ಗುರುತಿಸಿದ್ದ ಸತ್ಯಾರ್ಥಿಯವರು ತಾವು “ಬಾಲ್ಯ ಉಳಿಸಿ (ಬಚ್ ಪನ್ ಬಚಾವೋ)” ಆಂದೋಲನದ ಮುಂದುವರಿದ ಭಾಗವಾಗಿ ಈ ಆಂದೋಲನವನ್ನು ರಚಿಸಿದರು ಇದೀಗ ಈ ಆಂದೋಲನಕ್ಕೆ “ಗುಡ್ ವೀವ್” ಎಂದು ಕರೆಯಲಾಗುತ್ತಿದೆ.  
2001 ರಲ್ಲಿ “ಬಾಲಮಿತ್ರ ಗ್ರಾಮ”” ಯೋಜನೆಯನ್ನು ಪ್ರಾರಂಭಿಸಿದ ಸತ್ಯಾರ್ಥಿಯವರು ಬಾಲ ಕಾರ್ಮಿಕ ಪದ್ದತಿ ನಿರ್ಮೂಲನ, ಮಕ್ಕಳ ಹಕ್ಕುಗಳ ರಕ್ಷಣೆ ಸರ್ವರಿಗೂ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಈ ಯೋಜನೆಯು ಸಹ ಯಶಸ್ವಿಯಾಗಿ ಮುಂದುವರಿದುಕೊಂಡು ಬಂದಿದೆ. ಈ ಯೋಜನೆಯಡಿಯಲ್ಲಿ ಪ್ರಾರಂಭಗೊಂಡ “ಬಾಲ ಪಂಚಾಯತ್” ಕಾರ್ಯಕ್ರಾಮದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳೂ ನೇರವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ಆ ಮೂಲಕ ಮಕ್ಕಳ ಹಕ್ಕು ಬಾದ್ಯತೆಗಳನ್ನು ಅವರ ಮೂಲಕವೇ ಸಮಾಜಕ್ಕೆ ಮನವರಿಕೆ ಮಾಡಿಸುವ ಕೆಲಸ ನಡೆಯುತ್ತದೆ.
ಹೀಗೆ ದೇಶದಲ್ಲಿ ಪ್ರಾರಂಭವಾದ ಮೊದಲ ಮಕ್ಕಳ ಹಕ್ಕುಗಳ ಸಂಘಟನೆ “ಬಚ್ ಪನ್ ಬಚಾವೋ” ಆಂದೋಲನ ಸ್ಥಾಪಕರಾದ ಕೈಲಾಶ್ ಸತ್ಯಾರ್ಥಿಯವರು ಹಲವು ಕಾರ್ಖಾನೆಗಳಲ್ಲಿ ಕೆಟ್ತ ಸನ್ನಿವೇಶಗಳಾಲ್ಲಿ ಜೀತದಾಳಿನಂತೆ ದುಡಿಯುತ್ತಿದ್ದ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಅನೇಕ ಮಹಿಳೆಯರನ್ನು ಸಹ ತಮ್ಮ ಸಂಘಟನೆಯ ಮುಖಾಂತರ ರಕ್ಷಿಸಿದ್ದಾರೆ ಹಾಗೂ ಅವರಲ್ಲಿ ಪ್ರತಿಯೊಬ್ಬರಿಗೂ ಸ್ವಾವಲಂಬನೆಯಿಂದ ಬದುಕುವ ದಾರಿ ತೋರಿಸಿದ್ದಾರೆ. “ಮಕ್ಕಳ ಮಾರಾಟ ನಿಲ್ಲಬೇಕು, ನಿರುದ್ಯೋಗ ಸಮಸ್ಯೆ, ಅನಕ್ಷರತೆ ನಿವಾರಣೆಯಾಗಬೇಕು, ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂಬ ನಿಲುವನ್ನು ಹೊಂದಿರುವ ಸತ್ಯಾರ್ಥಿಯವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಪ್ರಬಲ ಪ್ರತಿಪಾದಕರೆನಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು
ಇದೀಗ ದೆಹಲಿ ನಗರದಲ್ಲಿ ತನ್ನ ಧರ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ನೆಮ್ಮದಿ ಜೀವನ ನದೆಸುತ್ತಿರುವ, ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ಕಾರ್ಮಿಕರ ಉದ್ದಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಿಟ್ಟ ಕೈಲಾಶ್ ಸತ್ಯಾರ್ಥಿಯವರ ಕಾರ್ಯಗಳನ್ನು ಮೆಚ್ಚಿ ದೇಶ ವಿದೇಶಗಳ ಅನೇಕ ಸರ್ಕಾರ, ಸಂಘಟನೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.  1993 ರಲ್ಲಿ ಅಮೇರಿಕ ಸರ್ಕಾರದ “ಅಶೋಕ ಫೆಲೋಶಿಪ್” ಗೌರವಕ್ಕೆ ಆಯ್ಕೆಯಾದರೆ, 1994 ರಲ್ಲಿ ಜರ್ಮನಿ ಸರ್ಕಾರವು ಕೊಡಮಾಡುವ “ದಿ ಅಷೇನರ್ ಇಂಟರ್ನಾಷನಲ್ ಪೀಸ್ ಅವಾರ್ಡ್” ಗೆ ಪಾತ್ರರಾಗಿದ್ದರು.1995 ರಲ್ಲಿ ಅಮೇರಿಕಾ ದೇಶದ “ರಾಬರ್ಟ್ ಎಫ್. ಕೆನಡಿ ಮಾನವ ಹಕ್ಕುಗಳ ಪ್ರಶಸ್ತಿ ಸ್ವೀಕರಿಸಿದ್ದ ಸತ್ಯಾರ್ಥಿಯವರಿಗೆ 1998 ರಲ್ಲಿ ನೆದರ್ಲ್ಯಾಂಡ್ ದೇಶದಿಂದ “ಗೋಲ್ದನ್ ಫ್ಲ್ಯಾಗ್” ಪುರಸ್ಕಾರ ಲಭಿಸಿತ್ತು 1999 ರಲ್ಲಿ ಜರ್ಮನಿಯಿಂದ Friedrich  Ebert Stiftung ಪುರಸ್ಕಾರಕ್ಕೆ ಭಾಜನರಾಗುವ ಮೂಲಕ ಜರ್ಮನಿ ದೇಶದವರಿಂದ ಎರಡನೇ ಬಾರಿಗೆ ಗೌರವಿಸಲ್ಪಟ್ಟರು. 2002 ರಲ್ಲಿ ಮಿಚಿಗನ್ ವಿಶ್ವವಿದ್ಯಾನಿಲಯದಿಂದ “ವೆಲ್ಲಿಂಗ್ಬರ್ಗ್ ಮೆಡಲ್” ಸ್ವೀಕರಿಸ್ದ್ದ ಕೈಲಾಶ್ ಸತ್ಯಾರ್ಥಿಯವರಿಗೆ 2006 ರಲ್ಲಿ ಅಮೇರಿಕಾ ದೇಶವು “ಫ್ರೀಡಮ್ ಅವಾರ್ಡ್” ನ್ನು ನೀಡಿ ಸತ್ಕರಿಸಿತು. ಮತ್ತೆ 2007 ರಲ್ಲಿ ಇಟಾಲಿಯನ್ ಸೆನೆಟ್ ನೀಡುವ ಗೋಲ್ಡ್ ಮೆದಲ್ ಪುರಸ್ಕಾರವನ್ನು ತನ್ನದಾಗಿಸಿಕೊಂಡ ಸತ್ಯಾರ್ಥಿಯವರು 2008 ರಲ್ಲಿ ಸ್ಪೇನ್ ನಿಂದ “ಅಲ್ಫಾನ್ಸೋ ಕೋಮನ್ ಅಂತರಾಷ್ಟ್ರೀಯ ಪುರಸ್ಕಾರವನ್ನು ಪಡೆದರು. . 2009 ರಲ್ಲಿ ಅಮೇರಿಕಾ ಸರ್ಕಾರದಿಂದ “ಡಿಫೆನ್ಸ್ ಆಫ್ ಡೆಮಾಕ್ರಸಿ ಅವಾರ್ಡ್” ಪ್ರಶಸ್ತಿ ಪಡೆದಿದ್ದ ಸತ್ಯಾರ್ಥಿಯವರಿಗೆ ಇದೀಗ 2014 ನೇ ಸಾಲಿನ ಪ್ರತಿಷ್ಠಿತ ನೋಬೆಲ್ ಶಾಂತಿ ಪ್ರಶಸ್ತಿ ಒಲಿದು ಬಂದಿದೆ.
ಇಷ್ಟೆಲ್ಲ ಹೇಳಿದ ಮೇಲೆ ಇಲ್ಲಿ ಇನ್ನೊಂದು ಸ0ಗತಿಯನ್ನು ಪಸ್ತುತ ಪಡಿಸಲೇ ಬೇಕು. ಅದೆಂದರೆ ಭಾರತೀಯರಿಗೆಲ್ಲಾ ಹೆಮ್ಮೆಯಿಂದ ಬೀಗುವಂತೆ ಮಾಡಿರುವ ಭಾರತದ ವಿಶ್ವಶಾಂತಿಯ ಧೋರಣೆಯನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಬಿತ್ತರಿಸಿರುವ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾದ ಸತ್ಯಾರ್ಥಿಯಂತಹವರನ್ನು ಇನ್ನಾದರೂ ನಮ್ಮ ದೇಶದ ಸರ್ಕಾರಗಳು, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಬೇಕಿದೆ. ಹಾಗಾದಾಗ ಮಾತ್ರವೇ ನಮ್ಮ ಸಮಾಜಕ್ಕೂ, ಜನತೆಗೂ ಮಾನವತೆಯ ಮೌಲ್ಯಗಳ ಅರಿವಿದೆ ಎಂದು ಇತರರಿಗೆ ತಿಳಿಸಿದಂತಾಗುತ್ತದೆ.

ಸತ್ಯಾರ್ಥಿ ಉಕ್ತಿಗಳು
“ಈಗ ಆಗಲ್ಲ ಎಂದರೆ ಯಾವಾಗ ಆಗುತ್ತೆ? ನಿಮ್ಮ ಕಡೆ ಮಾದಲು ಆಗುವುದಿಲ್ಲವೆಂದರೆ ಬೇರೆ ಯಾರ ಬಳಿ ಆಗುತ್ತೆ? ನಾವು ಈ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗುಲಾಮಿತನ ಹೊಡೆದೋಡಿಸಲು ಸಾಧ್ಯ.”
***
“ಯಾವುದೇ ದೇಶವು ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ. ಬಾಲ ಕಾರ್ಮಿಕ ಪದ್ದತಿಗೂ ನಿರುದ್ಯೋಗಕ್ಕೂ ನೇರ ಸಂಬಂಧವಿದೆ ಎಂಬುದು ನಮ್ಮ ವಾದ ದೇಶದಲ್ಲಿ 65 ದಶಲಕ್ಷ ಮಂದಿ ನಿರುದ್ಯೋಗಿಗಳಿದ್ದಾರೆ. ಕಾರ್ಖಾನೆಗಳ ಮಾಲೀಕರು ತಂದೆ ತಾಯಿಗಳಿಗಿಂತ ಅವರ ಮಕ್ಕಳನ್ನೇ ಕೆಲಸಕ್ಕೆ ತೆಗೆದುಕೊಳ್ಳಲುಹೆಚ್ಚಾಗಿ ಆಸಕ್ತಿ ತೋರುತ್ತಾರೆ. ಯಾಕೆಂದರೆ ಮಕ್ಕಳಿಗೆ ಕಡಿಮೆ ವೇತನ ನೀಡಿ ಹೆಚ್ಚಿನ ಕೆಲಸ ಮಾಡಿಸಬಹುದು. ಇದರ ಜತೆಗೆ ಮಕ್ಕಳು ಯೂನಿಯನ್ ಗಳನ್ನು ನಿರ್ಮಿಸಿಕೊಳ್ಳುವುದಿಲ್ಲ. ಬಾಲ ಕಾರ್ಮಿಕ ಸಮಸ್ಯೆಯ ಮೂಲವಿರುವುದೇ ಇಲ್ಲಿ.”
***
“ಜಗತ್ತಿನಲ್ಲಿ ಮಕ್ಕಳ ಜೀತ ಪದ್ದತಿ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇದೊಂದು ಪಿಶಾಚಿಯಷ್ಟೇ ಅಲ್ಲ, ಮಾನವತೆಯ ವಿರುದ್ದ ಅಪರಾಧವೂ ಹೌದು.”
***
“ನನ್ನ ಪಾಲಿಗೆ ಇದನ್ನು (ಮಕ್ಕಳ ಶೋಷಣೆ) ಒಂದು ಪರೀಕ್ಷೆಯಾಗಿ ನೋಡುತ್ತೇನೆ. ಇದೊಂದು ರೀತಿಯ ನೈತಿಕ ಪರೀಕ್ಷೆ. ಈ ರೀತಿಯ ಪೈಶಾಚಿಕತೆಯ ವಿರುದ್ದ ಎದ್ದು ನಿಲ್ಲಬೇಕಾದರೆ ಈ ಪರೀಕ್ಷೆಯಲ್ಲಿ ಪ್ರತಿಯೊಬ್ಬರೂ ಉತ್ತೀರ್ಣರಾಗಲೇಬೇಕು.”
***
“ಹಿಂದೆ ಚಹಾ ಮಾರುತ್ತಿದ್ದ ಹುಡುಗ ಈಗ ಈ ದೇಶದ ಪ್ರಧಾನಿಯಾಗುವ ಮೂಲಕ ತಮ್ಮ ಟೀಕಾಕಾರರಿಗೆ ಸಡ್ಡು ಹೊಡೆದು ನಿಂತಿದ್ದಾನೆ. ಯಾವ ಮಗುವೂ ಬಾಲಕಾರ್ಮಿಕತೆಯ ಕೂಪಕ್ಕೆ ಬೀಳದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಈಗ ಅವರ ಮುಂದೆ ಇದೆ.”
- ಲೋಕಸಭಾ ಚುನಾವಣೆ ೨೦೧೪ ರ ಫಲಿತಾಂಶ ಹೊರಬಂದ ಸಮಯದಲ್ಲಿ ಕೈಲಾಶ್ ಸತ್ಯಾರ್ಥಿಯವರು ನರೇಂದ್ರ ಮೋದಿಯವರ ಕುರಿತು ಮಾಡಿದ ಟ್ವೀಟ್.  

Saturday, October 04, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 34

ಪುಷ್ಕರ (Pushkar)
ರಾಜಾಸ್ಥಾನದಲ್ಲಿರುವ ಪುಷ್ಕರ ಕ್ಷೇತ್ರವು ಭಾರತೀಯ ಹಿಂದೂಗಳ್ ಹಾಗೂ ಜೈನ ಧರ್ಮೀಯರ ಪವಿತ್ರ ಕ್ಷೇತ್ರವೆನಿಸಿದೆ. ಹಿಂದೂಗಳ ಪಾಲಿನ ಸೃಷ್ಟಿಕರ್ತ ದೇವರಾದ ಬ್ರಹ್ಮ ದೇವರ ದೇವಾಲಯವಿರುವ ಅತ್ಯಪರೂಪದ ಕ್ಷೇತ್ರ ಪುಷ್ಕರ. ಇಲ್ಲಿರುವ ಬ್ರಹ್ಮ ದೇವಾಲಯ ಹಾಗೂ ಕಲ್ಯಾಣಿ (ಕೆರೆ) ಅದರದೇ ಆದ ಪೌರಾಣಿಕ ಮಹತ್ವವನು ಹೊಂದಿವೆ.  
***

Main God Sri Brahmadeva, Pushkar, Rajasthan

ಅತ್ಯಂತ ಪೂರ್ವ ಕಾಲದಲ್ಲಿ ಬ್ರಹ್ಮ ದೇವನು ತಾನೊಮ್ಮೆ ವಜ್ರನಾಭನೆನ್ನುವ ದೈತ್ಯನೋರ್ವನನ್ನು ಸಂಧಿಸಬೇಕಾಯಿತು. ಹಾಗೆಯೇ ಬ್ರಹ್ಮನು ವಜ್ರನಾಭನನ್ನು ತನ್ನ ಆಯುಧವಾದ ಕಮಲದಿಂದಲೇ ಸಂಹಾರ ಮಾಡಿದನು. ಆ ಸಮಯದಲ್ಲಿ ಬ್ರಹ್ಮನ ಕೈನಲ್ಲಿದ್ದ ಕಮಲ ಪುಷ್ಫದ ದಳಗಳು ಮೂರು ಭಾಗವಾಗಿ ಭೂಲೋಕದಲ್ಲಿ ಬಿದ್ದವು. ಆ ರೀತಿಯಾಗಿ ಬಿದ್ದಂತಹಾ ಪ್ರದೇಶಗಳಲ್ಲಿ ಒಂದೊಂದು ಕೆರೆಗಳು ನಿರ್ಮಾಣವಾಗಿತ್ತು. ಬ್ರಹ್ಮನ ಕರ(ಕೈ) ದಲ್ಲಿದ್ದ ಕಮಲ (ಪುಷ್ಪ) ಬಿದ್ದ ಸ್ಥಳಗಳು “ಪುಷ್ಕರ” ಎನಿಸಿಕೊಂಡಿತು. ಅವುಗಳಲ್ಲಿ ಒಂದು “ಆದಿ ಪುಷ್ಕರ” (ರಾಜಾಸ್ಥಾನ)ವಾದರೆ ಮತ್ತೆರಡು ಕ್ರಮವಾಗಿ “ಮಧ್ಯ ಪುಷ್ಕರ” ಹಾಗೂ “ಕನಿಷ್ಟ ಪುಷ್ಕರ” ಎನಿಸಿತು.
Sri Brahma Temple, Pushkara
ಇದಾಗಿ ಯುಗಗಳು ಸಂದ ಬಳಿಕ ಒಮ್ಮೆ ಬ್ರಹ್ಮದೇವರು ಆದಿ ಪುಷ್ಕರದಲ್ಲಿ ತಾನು ಯಜ್ಞವೊಂದನ್ನು ಮಾಡಲು ಉದ್ಯುಕ್ತನಾದನು. ಅದಾಗ ಆತನ ಧರ್ಮಪತ್ನಿಯಾದ ಶ್ರೀ ಸರಸ್ವತಿಯು ತಾನು ಇನ್ನಿಬ್ಬರು ದೇವತೆಗಳಾದ ಲಕ್ಷ್ಮಿ ದೇವಿ ಹಾಗೂ ಪಾರ್ವತಿಗೆ ಕಾಯುತ್ತಾ ಕುಳಿತಿರಲು ಬ್ರಹ್ಮನು ತನ್ನ ಯಜ್ಞವನ್ನು ಪೂರ್ಣಗೊಳಿಸುವ ಸಲುವಾಗಿ ಸರಸ್ವತಿ ದೇವಿಯ ಆಗಮನಕ್ಕಾಗಿ ಕಾದನು, ಸರಸ್ವತಿ ದೇವಿಯ ಆಗಮನವಾಗದೇ ಹೋಗಲು ಅಲ್ಲೇ ಇದ್ದ ಗುರ್ಜರ ಸಮುದಾಯದ ಗಾಯತ್ರಿ ಎನ್ನುವ ಕನ್ಯೆಯನ್ನು ವಿವಾಹವಾಗಿ ಯಜ್ಞದ ಪೂರ್ಣಾಹುತಿಯನ್ನು ನೀಡಿ ಅಮೃತ ಕುಂಭವನ್ನು ಕರದಲ್ಲಿ ಧರಿಸಿದನು.
Pushkar Lke
ಅದೇ ಸಮಯದಲ್ಲಿ ಶ್ರೀ ಲಕ್ಷ್ಮಿ, ಪಾರ್ವತಿ ಸಹಿತವಾಗಿ ಅಲ್ಲಿಗೆ ಆಗಮಿಸಿದ ಸರಸ್ವತಿ ದೇವಿಗೆ ಬ್ರಹ್ಮನ ಪಕ್ಕದಲ್ಲಿ ಕುಳಿತ ಗಾಯಿತ್ರಿ ದೇವಿಯನ್ನು ಕಂಡು ಕೋಪ ಉಕ್ಕಿತು. ಬ್ರಹ್ಮ ದೇವನು ತನ್ನನ್ನು ಹೊರಗಿಟ್ಟು ತಾನು ಯಜ್ಞ ಕಾರ್ಯವನ್ನು ಪೂರ್ಣಗೊಳಿಸಿದರೆನ್ನುವ ಕಾರಣದಿಂದ ಬ್ರಹ್ಮನಿಗೆ ಭೂಲೋಕದಲ್ಲೆಲ್ಲೂ ಪೂಜೆ ದೊರಯದೇ ಹೋಗಲಿ ಎಂದೂ ಇಂದ್ರಾದಿ ದೇವತೆಗಳಿಗೆ ಅಸುರ ಕುಲದವರಿಂದ ಸುಲಭವಾಗಿ ಸೋಲಾಗಲಿ ಎಂದೂ, ಶ್ರೀ ವಿಷ್ಣು ಭಗವಾನನು ತಾನು ಮಾನವನಾಗಿ ಜನ್ಮಿಸಿ ಹೆಂಡತಿ/ಧರ್ಮಪತ್ನಿಯನ್ನು ತ್ಯಜಿಸಿ ಭೂಲೋಕದಲ್ಲಿ ಬಾಳುವಂತಾಗಲೆಂದೂ ಶಾಪವನ್ನು ನೀಡುತ್ತಾಳೆ. ಆದರೆ ಅಂತ್ಯದಲ್ಲಿ ಬ್ರಹ್ಮನ ಕೋರಿಕೆಗೆ ಒಪ್ಪಿದ ಮಾತೆ ಸರಸ್ವತಿಯು ಇಡಿ ಲೋಕದಲ್ಲಿ ಪುಷ್ಕರ ಕ್ಷೇತ್ರದಲಿ ಮಾತ್ರವೇ ಬ್ರಹ್ಮ ದೇವರಿಗೆ ಪೂಜೆ ಸಲ್ಲಬೇಕೆಂಬ ಶರತ್ತಿಗೆ ಬದ್ದಳಾಗುತ್ತಾಳೆ. 
ಇದೇ ಕಾರಣದಿಂದ ಇಂದಿಗೂ ಶ್ರೀ ಕ್ಷೇತ್ರ ಪುಷ್ಕರವನ್ನು ಬಿಟ್ಟು ಬೇರೆಲ್ಲಿಯೂ ಬ್ರಹ್ಮ ದೇವರ ದೇವಾಲಯವನ್ನು ನಾವು ಕಾಣಾಲಾರೆವು. ಮಾತಾ ಸರಸ್ವತಿಯ ಶಾಪದ ಪರಿಣಾಮವಾಗಿ ಶ್ರೀ ಮಹಾವಿಷ್ಣುವು ತಾನು ಶ್ರೀ ರಾಮನ ಅವತಾರವನ್ನೆತ್ತಿ ಮನುಷ್ಯ ರೂಪದಲ್ಲಿ ಭೂಮಂಡಲಕ್ಕೆ ಆಗಮಿಸಿ ತನ್ನ ಪತ್ನಿಯಾದ ಸೀತೆಯೌ ಅರಣ್ಯದಲ್ಲಿ ಕಳೆದು ಹೋಗಳಾಗಿ ಅತ್ಯಂತ ವಿಅಹ ವೇದನೆಯನ್ನು ತಾಳುವಂತಾಗುತ್ತದೆ. ಹಾಗೆಯೇ ಇಂದ್ರಾದಿ ದೇವತೆಗಳು ತಾವು ಆಗಾಗ ಅಸುರರೊಡನೆ ನಡೆಯುವ ಯುದ್ದಗಳಲ್ಲಿ ಸುಲಭದಲ್ಲಿ ಸೋಲಲ್ಪಟ್ಟು ಸಿಂಹಾಸನ ವಂಚಿತರಾಗುತ್ತಾರೆ.