Tuesday, February 28, 2017

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 80

ಹೊರನಾಡು (Horanadu)

ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಚಿಕ್ಕಮಗಳೂರಿನ ಹೊರನಾಡಿನಲ್ಲಿರುವ ಭದ್ರಾ ನದಿಯ ದಡದ ಮೇಲಿದೆ. ಇಲ್ಲಿನ ಮುಖ್ಯ ದೇವರು ಅನ್ನಪೂರ್ಣೇಶ್ವರಿ ಹಾಗು ಇನ್ನಿತರ ದೇವರುಗಳು, ಮಹಾಗಣಪತಿ, ಆಂಜನೇಯ ಸ್ವಾಮಿ ಹಾಗು ನವಗ್ರಹಗಳು.

ಈ ದೇವಸ್ಥಾನವನ್ನು ಅಗಸ್ತ್ಯ ಮುನಿಗಳು ಕಟ್ಟಿಸಿದ್ದು. 400 ವರ್ಷಗಳ ಹಿಂದೆ ವಾಸ್ತು ಶಿಲ್ಪ ಹಾಗು ಜ್ಯೋತಿಷ್ಯವನ್ನು ಅವಲಂಬಿಸಿ ಈ ಸಣ್ಣ ದೇವಸ್ಥಾನವನ್ನು ನವೀಕರಣಗೊಳಿಸಲಾಯಿತು. ಇಲ್ಲಿ ದೇವಿ, ಪೀಠದ ಮೇಲೆ ಶಂಖ, ಚಕ್ರ ಹಾಗು ಶ್ರೀ ಚಕ್ರವನ್ನು ಹಿಡಿದು ನಿಂತಿದ್ದಾಳೆ. ಇಲ್ಲಿನ ವಿಶೇಷ ಎಂದರೆ, ಬಂದ ಭಕ್ತರಿಗೆ ತಿಂಡಿ, ಮಧ್ಯಾಹ್ನದ ಊಟ ಹಾಗು ರಾತ್ರಿ ಊಟವನ್ನು ನೀಡಲಾಗುತ್ತದೆ ಹಾಗು ಉಳಿದುಕೊಳ್ಳಲು ದೇವಸ್ಥಾನದ ಆವರಣದಲ್ಲೇ ಸ್ಥಳ ನೀಡಲಾಗುತ್ತದೆ. 


Sri Adishakt
hyathmaka Annapoorneshwari

ಇಲ್ಲಿ ಪೂಜೆ ಸಲ್ಲಿಸಿದವರಿಗೆ ತಮ್ಮ ಜೀವನದಲ್ಲಿ ಎಂದಿಗೂ ಅನ್ನದ ಕೊರತೆ ಬರುವುದಿಲ್ಲ.

***

ಶಿವ ಮತ್ತು ಪಾರ್ವತಿ ಒಂದು ಸಲ ಪಗಡೆ ಆಡುತ್ತಿದ್ದರು. ಶಿವ ತಾನು ಆಟವಾಡುವಾಗ ಅಡ ಇಟ್ಟಿದ್ದ ಎಲ್ಲವನ್ನೂ ಪಾರ್ವತಿಯ ಗೆಲುವಿನಿಂದ ಕಳೆದುಕೊಂಡನು. ಇದರಿಂದ ಅವಮಾನಗೊಂಡ ಶಿವನು ವಿಷ್ಣುವಿನ ಬಳಿ ಈ ವಿಚಾರ ಹೇಳಿಕೊಂಡಾಗ, ಮತ್ತೊಮ್ಮೆ ಆಟವಾಡ ಬೇಕೆಂಬ ಸೂಚನೆ ವಿಷ್ಣು, ಶಿವನಿಗೆ ಕೊಡುತ್ತಾನೆ. ಶಿವನು ಪುನಃ ಆಟವಾಡಿ ತಾನು ಸೋತ ಎಲ್ಲ ವಸ್ತುವನ್ನೂ ಗೆದ್ದುಕೊಳ್ಳುತ್ತಾನೆ. ಇದರಿಂದ ಅನುಮಾನ ಬಂದು, ಪಾರ್ವತಿ ಮತ್ತು ಶಿವನ ಮಧ್ಯೆ ವಾದ ನಡೆಯುತ್ತದೆ. ವಿಷ್ಣು ಮಧ್ಯ ಮಾತನಾಡಿ, ಶಿವ ಪಾರ್ವತಿ ಆ ಆಟವಾಡಿದ್ದು ನಿಜವೇ ಆದರೂ ಅದರ ಚಲನೆ ತನ್ನದು ಎಂದು ಹೇಳುವನು. ಹಾಗಾಗಿ ಶಿವ ಪಾರ್ವತಿ ಆಟವಾಡುತ್ತಿದ್ದುದು ಮಾಯೆ ಎಂದು ಹೇಳುವನು.

ಶಿವನು, ಈ ಜಗತ್ತಿನಲ್ಲಿ ಎಲ್ಲವೂ ಮಾಯೆ ಹಾಗು ಸೇವಿಸುವ ಆಹಾರವೂ ಮಾಯೆ ಎನ್ನುತ್ತಾನೆ. ಪಾರ್ವತಿಯು ಆ ಮಾತನ್ನು ಒಪ್ಪದೆ ಅದನ್ನು ನಿರೂಪಿಸಲು ಮಾಯವಾಗುತ್ತಾಳೆ. ಅದರ ಪರಿಣಾಮವಾಗಿ ಪ್ರಕೃತಿಯ ಚಲನೆ ನಿಂತು ಹೋಗುತ್ತದೆ. ಗಿಡ ಮರಗಳು ಬೆಳೆಯುವುದು ನಿಂತು ಹೋಗುತ್ತದೆ. ಹಾಗಾಗಿ, ಭೂಮಿ ಬಂಜರಾಗಿ ಬರ ಬಂದು ಬಿಡುತ್ತದೆ. ಮಾನವರು, ಪ್ರಾಣಿಗಳು ಹಾಗು ದೇವತೆಗಳು ಎಲ್ಲರೂ ಆಹಾರಕ್ಕಾಗಿ ಪ್ರಾರ್ಥಿಸುತ್ತಾರೆ. ಶಿವನಿಗೆ ಇದರಿಂದ ಆಹಾರದ ಪ್ರಾಮುಖ್ಯತೆ ಹಾಗು ಜೀವಿಗಳಿಗೆ ಆಹಾರವೇ ಮೂಲ ಅಗತ್ಯ ಎಂದು ಮನವರಿಕೆ ಆಗುತ್ತದೆ.

Sri Adishakthyathmaka Annapoorneshwari temple, Horanadu


ಎಲ್ಲರೂ ಪಾರ್ವತಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಎಲ್ಲರ ಮೇಲೆ ಕರುಣೆ ತೋರಿ ತಾಯಿ ಕಾಶಿಯಲ್ಲಿ ಪ್ರತ್ಯಕ್ಷವಾಗಿ ಆಹಾರವನ್ನು ಹಂಚಲು ಪ್ರಾರಂಭಿಸುತ್ತಾಳೆ. ಶಿವನು ಪಾರ್ವತಿ ದೇವಿಯ ಮುಂದೆ ಭಿಕ್ಷಾ ಪಾತ್ರೆಯನ್ನು ಹಿಡಿದು ನಿಂತಾಗ ಪಾರ್ವತಿ ದೇವಿಯು ಶಿವನನ್ನು ಕಂಡು ಸೌಟಿನಿಂದ ಆಹಾರವನ್ನು ತಿನ್ನಿಸುತ್ತಾಳೆ. ಆಗಿನಿಂದ ಪಾರ್ವತಿಯು ಅನ್ನಪೂರ್ಣೇಶ್ವ ರಿಯಾಗಿ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೆಲೆಸುತ್ತಾಳೆ.

Wednesday, February 22, 2017

ನಿಮಗೂ ಲವ್ವಾಗಿಸುವ 'ನನಗೂ ಲವ್ವಾಗಿದೆ...'



ಬದುಕಿನಲ್ಲಿ ಬೇಕು ಅಂದಿದ್ದೆಲ್ಲವೂ ಆ ಕ್ಷಣದಲ್ಲಿ ಕೈ ಸೇರುತ್ತಿರುತ್ತದೆ. ಅದಿಲ್ಲ, ಇದಿಲ್ಲ ಎಂದು ಕೊರಗಿದ್ದು, ಕನವರಿಸಿದ್ದ್ಯಾವುದೂ ನೆನಪಿಲ್ಲ. 

ಆದರೆ,


ಒಂದು ಲವ್ವೆನ್ನುವ ಲವ್ವು...?

ಊಹ್ಹೂಂ.. ಅದೊಂದು ಮಾತ್ರ ಈ ಬದುಕಿನ ತೋಟದಲ್ಲಿ ಹೂವಾಗಿ ಅರಳಿಕೊಂಡಿರುವುದಿಲ್ಲ. ಪರಿಮಳ ಚೆಲ್ಲಿರುವುದಿಲ್ಲ. ಚೆಲುವು ತುಂಬಿರುವುದಿಲ್ಲ. 

ಬದುಕಿಗೆ ಎಲ್ಲವೂ ಇದೆ. ಆದರೆ ಏನೆಂದರೆ ಏನೂ ಇಲ್ಲ ಎನ್ನುವಂತಹಾ ತಿರುಬೋಕಿ ಸ್ಥಿತಿಯಲ್ಲಿ ಬದುಕು ಬೀದಿ ಬೀದಿ ಅಲೆಯುತ್ತಿರುತ್ತದೆ. ಹೇಗಾದರೂ ಸರಿ ಒಂದೇ ಒಂದು ಲವ್ವಾದರೆ ಸಾಕು ಎಂದ್ ಹಂಬಲಿಸಿ ಪ್ರೀತಿಯನ್ನು ಹೊತ್ತು ತರುವ ಜೀವಕ್ಕಾಗಿ ಹುಡುಕಾಡುತ್ತಿರುತ್ತದೆ........

***

ಇವು ಕೆ. ಗಣೇಶ್ ಕೊಡೂರು (ಅರುಡೋ ಗಣೇಶ) ಅವರ ನೂತನ ಪುಸ್ತಕ 'ನನಗೂ ಲವ್ವಾಗಿದೆ...' ಯಲ್ಲಿನ ಪ್ರಥಮ ಸಾಲುಗಳು. 

ಪ್ರೀತಿ ಇಲ್ಲದ ಬದುಕು ಬದುಕೂ ಅಲ್ಲ. ಅಂತಹಾ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. - ಇವು ನನಗೂ ಲವ್ವಾಗಿದೆ ಪುಸ್ತಕದ ಲೇಖಕರಾದ ಗಣೇಶ್ ಅವರ ನುಡಿಗಳು. ಹಾಗೆಂದು ಇದು ಅವರ ಮಾತಷ್ಟೇ ಅಲ್ಲ. ಪ್ರತಿಯೊಬ್ಬ ಮಾನವ ಜೀವಿಯ ಮಾತು ಕೇವಲ ಮಾನವರಲ್ಲ ಈ ಸೃಷ್ಟಿಯಲ್ಲಿರಬಹುದಾದ ಎಲ್ಲಾ ಪಶು, ಪಕ್ಷಿ, ಕೀಟಾದಿಗಳೂ ಜೀವಿಸುವುದಕ್ಕೆ ಕಾರಣ ಪ್ರೀತಿ. ಭಗವಂತನು ಈ ಜಗತ್ತನ್ನು ಸೃಷ್ಟಿಸಿದ್ದಾನೆ ಎಂದು ನಂಬುವುದಾದರೆ ಅದಕ್ಕೂ ಅವನಲ್ಲಿದ್ದ ಪ್ರೀತಿಯೇ ಕಾರಣ. ಹೀಗಾಗಿ ಪ್ರೀತಿಯೇ ಜಗತ್ತಿನ ತಾಯಿ ಬೇರು.

ನಾವೆಲ್ಲ ಪ್ರೀತಿ ಎಂದರೆ ಕಾಲೇಜು ದಿನಗಳಲ್ಲಿ ಯುವ ಜೋಡಿಗಳಲ್ಲಿ ಅಂಕುರಿಸುವ ಪ್ರೀತಿ ಎಂದೇ ಭಾವಿಸುತ್ತೇವೆ. ಇಂದಿನ ಸಿನಿಮಾಗಳಂತೂ ಇದನ್ನೇ ವೈಭವೀಕರಿಸಿ ತೋರಿಸುತ್ತವೆ. ಆದರೆ ಈ ಪ್ರೀತಿ ಎಂದರೆ ಅಷ್ಟೇ ಅಲ್ಲ ಇನ್ನೂ ಬೇರೇನೇ ಆಗಿದೆ ಎಂದು ತಿಳಿಯಬೇಕಾದರೆ ಈ ಪುಸ್ತಕವನ್ನೊಮ್ಮೆ ಓದಬೇಕು.

ಲೇಖಕ ಕೆ. ಗಣೇಶ್ ಕೊಡೂರು
ನನಗೂ ಲವ್ವಾಗಿದೆ- ಹೀಗೆಂದು ಪ್ರತಿಯೊಬ್ಬರೂ ಘೋಷಿಸಿಕೊಳ್ಲ್ಲಲು ಬಯಸುತ್ತಾರೆ. ಆದರೆ ಎಲ್ಲರಿಗೂ ಹೀಗೆ ಸ್ವಯಂ ಘೋಷಿಸಿಕೊಳ್ಳುವ ಅವಕಾಶ ಸಿಗುವುದಿಲ್ಲ. ಎನ್ನುವುದು ಜೀವನದಷ್ಟೇ ಸತ್ಯ. ಪ್ರೀತಿಯಲ್ಲಿನ ನಾನಾ ಹಂತಗಳನ್ನು ಮತ್ತು ಆ ಹಂತಗಳಲ್ಲಿ ನಮಗೆ ಆಗಬಹುದಾದ ಲವ್ವಿನ ದಟ್ಟ ಅನುಭವವನ್ನೂ ಸರಳವಾದ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಗಣೇಶ್ ಇಲ್ಲಿ ಪ್ರೀತಿಗೆ ಇರಬಹುದಾದ ಎಲ್ಲಾ ಬಗೆಯ ಆಯಾಮಗಳನ್ನು ತೋರಿಸಿದ್ದಾರೆ. 

ಪ್ರೀತಿ ಹೇಗೆಲ್ಲ ಹುಟ್ತಬಲ್ಲದು? ಅದರ ಹಿನ್ನೆಲೆಯ ಸನ್ನಿವೇಶ, ಪ್ರೀತಿಸುವವರಲ್ಲಿ ಇರಬೇಕಾದ ಪರಸ್ಪರ ನಂಬಿಕೆ, ಬಡತನದ ಬೇಗೆಯಲ್ಲಿಯೂ ಪ್ರೀತಿ ಹೇಗೆ ಮರವಾಗಿ ಬೆಳೆಯಬಲ್ಲದು ಎನ್ನುವುದನ್ನ ಒಂದು ಬಗೆಯ ಕಾವ್ಯಾತ್ಮಕ ಗದ್ಯ ಶೈಲಿಯಲ್ಲಿ ಕಟ್ಟಿ ಕೊಟ್ಟಿರುವ ಗಣೇಶ್ ಕೊಡೂರು ಅವರ ಈ ಪುಸ್ತಕ ಯುವ ಜನತೆಗೆ ಅತ್ಯಂತ ಹೆಚ್ಚು ಆಪ್ತವಾಗುತ್ತದೆ. ಯುವ ಮನಸ್ಸುಗಳಲ್ಲಿ ಪ್ರೀತಿಯ ಕುರಿತಾಗಿ ಏನಾದರೂ ಸಂದೇಹಗಳಿದ್ದಲ್ಲಿ ಇದನ್ನು ನಿವಾರಿಸಿಕೊಳ್ಳಲು ಈ ಪುಸ್ತಕ ಸೂಕ್ತ ಮಾರ್ಗದರ್ಶಿಯೂ ಆಗಬಹುದು. ಈ ಅರ್ಥದಲ್ಲಿ ಹೇಳಿದರೆ ಇದು ಪ್ರೇಮಿಗಳ ಪಾಲಿನ ಪಠ್ಯ ಪುಸ್ತಕ!

ಒಟ್ಟೂ ಸುಮಾರು ಎಂಭತ್ತು ಪುಟಗಳ ಈ ಕಿರುಹೊತ್ತಿಗೆಯಲ್ಲಿ ಬದುಕೆಂದ ಮೇಲೆ ಲವ್ವಾಗಲಏಬೇಕು... ಎನ್ನುವ ಮುಖ್ಯ ಶೀರ್ಷಿಕೆಯಡಿಯಲ್ಲಿ ಒಂದು ಸುದೀರ್ಘ ಪ್ರಬಂಧ ಇದೆ. ನಡು ನಡುವೆ ಉಪ ಶೀರ್ಷಿಕೆಗಳಿದ್ದರೂ ಸಹ ಪುಸ್ತಕ ಪೂರ್ಣವಾಗಿ ಓದಿದಾಗ ಪ್ರೀತಿ ಎನ್ನುವ ಏಕ ಸಮ ಭಾವ ನಮ್ಮಲ್ಲಿ ಮೂಡುವುದು ಸುಳ್ಳಲ್ಲ. 

ಒಟ್ತಾರೆ ಪ್ರೀತಿಸುವ ಜೋಡಿಗಳ ನಡುವಿನ ಸಂಬಂಧ ಸಾಮೀಪ್ಯ, ಅವರಲ್ಲಿನ ಅನಂಬಿಕೆ ಅಪನಂಬಿಕೆಗಳ ತಾಕಲಾಟ, ಜೀವನದಲ್ಲೆದುರಾಗುವ ಪರಿಸ್ಥಿತಿಗಳನ್ನು ಎದುರಿಸಿ ಪ್ರೇಮವನ್ನು ಗೆಲ್ಲುವ ಬಗೆ ಎಲ್ಲವನ್ನೂ ಗಣೇಶ್ ಅವರು ಅತ್ಯಂತ ಸುಂದರವಾಗಿ ಇಲ್ಲಿ ಹಣೇದಿರುತ್ತಾರೆ. ನಾವೇಕೆ ಪ್ರೀತಿಗಾಗಿ ಹಂಬಲಿಸುತ್ತೇವೆ? ಎನ್ನುವ ಪ್ರಶ್ನೆಗೆ ಉತ್ತರವಾಗಿ ಈ ಪುಸ್ತಕವಿದೆ ಎಂದರೆ ಅತು ಕ್ಲೀಶೆಯಲ್ಲ.

ಇನ್ನೇನು ಹೇಳಲಿ....?  ನಿಮಗೆ ಲವ್ವಾಗಿದೆಯೊ, ಇಲ್ಲವೋ ಈ ಪುಸ್ತಕವನ್ನೊಮ್ಮೆ ಓದಿದರೆ ನಿಮಗೆಲ್ಲೋ ಒಂದು ಕಡೆ ಲವ್ವಾಗುವುದಂತೂ ಖಚಿತ,  ಅಂದ  ಹಾಗೆ. ಹೌದು ನನಗೂ ಲವ್ವಾಗಿದೆ.... :)

Friday, February 03, 2017

ಈಜು ಕೊಳದ "ಚಿನ್ನದ ಚಿಟ್ಟೆ"


















ನನ್ನ ಈ ಲೇಖನವು ಗೃಹಶೋಭಾ ಮಾಸಪತ್ರಿಕೆ ಜನವರಿ 2017 ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.