Tuesday, February 28, 2017

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 80

ಹೊರನಾಡು (Horanadu)

ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಚಿಕ್ಕಮಗಳೂರಿನ ಹೊರನಾಡಿನಲ್ಲಿರುವ ಭದ್ರಾ ನದಿಯ ದಡದ ಮೇಲಿದೆ. ಇಲ್ಲಿನ ಮುಖ್ಯ ದೇವರು ಅನ್ನಪೂರ್ಣೇಶ್ವರಿ ಹಾಗು ಇನ್ನಿತರ ದೇವರುಗಳು, ಮಹಾಗಣಪತಿ, ಆಂಜನೇಯ ಸ್ವಾಮಿ ಹಾಗು ನವಗ್ರಹಗಳು.

ಈ ದೇವಸ್ಥಾನವನ್ನು ಅಗಸ್ತ್ಯ ಮುನಿಗಳು ಕಟ್ಟಿಸಿದ್ದು. 400 ವರ್ಷಗಳ ಹಿಂದೆ ವಾಸ್ತು ಶಿಲ್ಪ ಹಾಗು ಜ್ಯೋತಿಷ್ಯವನ್ನು ಅವಲಂಬಿಸಿ ಈ ಸಣ್ಣ ದೇವಸ್ಥಾನವನ್ನು ನವೀಕರಣಗೊಳಿಸಲಾಯಿತು. ಇಲ್ಲಿ ದೇವಿ, ಪೀಠದ ಮೇಲೆ ಶಂಖ, ಚಕ್ರ ಹಾಗು ಶ್ರೀ ಚಕ್ರವನ್ನು ಹಿಡಿದು ನಿಂತಿದ್ದಾಳೆ. ಇಲ್ಲಿನ ವಿಶೇಷ ಎಂದರೆ, ಬಂದ ಭಕ್ತರಿಗೆ ತಿಂಡಿ, ಮಧ್ಯಾಹ್ನದ ಊಟ ಹಾಗು ರಾತ್ರಿ ಊಟವನ್ನು ನೀಡಲಾಗುತ್ತದೆ ಹಾಗು ಉಳಿದುಕೊಳ್ಳಲು ದೇವಸ್ಥಾನದ ಆವರಣದಲ್ಲೇ ಸ್ಥಳ ನೀಡಲಾಗುತ್ತದೆ. 


Sri Adishakt
hyathmaka Annapoorneshwari

ಇಲ್ಲಿ ಪೂಜೆ ಸಲ್ಲಿಸಿದವರಿಗೆ ತಮ್ಮ ಜೀವನದಲ್ಲಿ ಎಂದಿಗೂ ಅನ್ನದ ಕೊರತೆ ಬರುವುದಿಲ್ಲ.

***

ಶಿವ ಮತ್ತು ಪಾರ್ವತಿ ಒಂದು ಸಲ ಪಗಡೆ ಆಡುತ್ತಿದ್ದರು. ಶಿವ ತಾನು ಆಟವಾಡುವಾಗ ಅಡ ಇಟ್ಟಿದ್ದ ಎಲ್ಲವನ್ನೂ ಪಾರ್ವತಿಯ ಗೆಲುವಿನಿಂದ ಕಳೆದುಕೊಂಡನು. ಇದರಿಂದ ಅವಮಾನಗೊಂಡ ಶಿವನು ವಿಷ್ಣುವಿನ ಬಳಿ ಈ ವಿಚಾರ ಹೇಳಿಕೊಂಡಾಗ, ಮತ್ತೊಮ್ಮೆ ಆಟವಾಡ ಬೇಕೆಂಬ ಸೂಚನೆ ವಿಷ್ಣು, ಶಿವನಿಗೆ ಕೊಡುತ್ತಾನೆ. ಶಿವನು ಪುನಃ ಆಟವಾಡಿ ತಾನು ಸೋತ ಎಲ್ಲ ವಸ್ತುವನ್ನೂ ಗೆದ್ದುಕೊಳ್ಳುತ್ತಾನೆ. ಇದರಿಂದ ಅನುಮಾನ ಬಂದು, ಪಾರ್ವತಿ ಮತ್ತು ಶಿವನ ಮಧ್ಯೆ ವಾದ ನಡೆಯುತ್ತದೆ. ವಿಷ್ಣು ಮಧ್ಯ ಮಾತನಾಡಿ, ಶಿವ ಪಾರ್ವತಿ ಆ ಆಟವಾಡಿದ್ದು ನಿಜವೇ ಆದರೂ ಅದರ ಚಲನೆ ತನ್ನದು ಎಂದು ಹೇಳುವನು. ಹಾಗಾಗಿ ಶಿವ ಪಾರ್ವತಿ ಆಟವಾಡುತ್ತಿದ್ದುದು ಮಾಯೆ ಎಂದು ಹೇಳುವನು.

ಶಿವನು, ಈ ಜಗತ್ತಿನಲ್ಲಿ ಎಲ್ಲವೂ ಮಾಯೆ ಹಾಗು ಸೇವಿಸುವ ಆಹಾರವೂ ಮಾಯೆ ಎನ್ನುತ್ತಾನೆ. ಪಾರ್ವತಿಯು ಆ ಮಾತನ್ನು ಒಪ್ಪದೆ ಅದನ್ನು ನಿರೂಪಿಸಲು ಮಾಯವಾಗುತ್ತಾಳೆ. ಅದರ ಪರಿಣಾಮವಾಗಿ ಪ್ರಕೃತಿಯ ಚಲನೆ ನಿಂತು ಹೋಗುತ್ತದೆ. ಗಿಡ ಮರಗಳು ಬೆಳೆಯುವುದು ನಿಂತು ಹೋಗುತ್ತದೆ. ಹಾಗಾಗಿ, ಭೂಮಿ ಬಂಜರಾಗಿ ಬರ ಬಂದು ಬಿಡುತ್ತದೆ. ಮಾನವರು, ಪ್ರಾಣಿಗಳು ಹಾಗು ದೇವತೆಗಳು ಎಲ್ಲರೂ ಆಹಾರಕ್ಕಾಗಿ ಪ್ರಾರ್ಥಿಸುತ್ತಾರೆ. ಶಿವನಿಗೆ ಇದರಿಂದ ಆಹಾರದ ಪ್ರಾಮುಖ್ಯತೆ ಹಾಗು ಜೀವಿಗಳಿಗೆ ಆಹಾರವೇ ಮೂಲ ಅಗತ್ಯ ಎಂದು ಮನವರಿಕೆ ಆಗುತ್ತದೆ.

Sri Adishakthyathmaka Annapoorneshwari temple, Horanadu


ಎಲ್ಲರೂ ಪಾರ್ವತಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಎಲ್ಲರ ಮೇಲೆ ಕರುಣೆ ತೋರಿ ತಾಯಿ ಕಾಶಿಯಲ್ಲಿ ಪ್ರತ್ಯಕ್ಷವಾಗಿ ಆಹಾರವನ್ನು ಹಂಚಲು ಪ್ರಾರಂಭಿಸುತ್ತಾಳೆ. ಶಿವನು ಪಾರ್ವತಿ ದೇವಿಯ ಮುಂದೆ ಭಿಕ್ಷಾ ಪಾತ್ರೆಯನ್ನು ಹಿಡಿದು ನಿಂತಾಗ ಪಾರ್ವತಿ ದೇವಿಯು ಶಿವನನ್ನು ಕಂಡು ಸೌಟಿನಿಂದ ಆಹಾರವನ್ನು ತಿನ್ನಿಸುತ್ತಾಳೆ. ಆಗಿನಿಂದ ಪಾರ್ವತಿಯು ಅನ್ನಪೂರ್ಣೇಶ್ವ ರಿಯಾಗಿ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೆಲೆಸುತ್ತಾಳೆ.

No comments:

Post a Comment