Sunday, August 20, 2023

ಕಸದ ರಾಶಿಯ ನಡುವೆ ಚಾಣಕ್ಯನ ಅಂತ್ಯ! ಚಾಣಕ್ಯ - ಭಾಗ 1

ಚಾಣಕ್ಯನು ಕ್ರಿ.ಪೂ. 15 ನೇ ಶತಮಾನದ ಕೊನೆಯಲ್ಲಿ ಚಣಕ ಎಂಬ ಹಳ್ಳಿಯಲ್ಲಿ ಚನಿ ಮತ್ತು ಚನೇಶ್ವರಿ ಎನ್ನುವ ದಂಪತಿಗಳಿಗೆ ಜನಿಸಿದನು.  ಈ ಚಣಕ ಎನ್ನುವ ಗ್ರಾಮವು ದಕ್ಷಿಣ ಭಾರತದ ಗೊಲ್ಲ ವಿಷಯ (ಗೊಲ್ಲ ಪ್ರದೇಶ)ದಲ್ಲಿದೆ. ಪರಿಶಿಷ್ಟ-ಪರ್ವರಚನೆಗಾರನಾದ ಹೇಮಚಂದ್ರ ಸೇರಿದಂತೆ ಅನೇಕ ಮೂಲಗಳು ಚಾಣಕ್ಯನನ್ನು ಡ್ರಾಮಿಳ ಎಂದು ಉಲ್ಲೇಖಿಸುತ್ತವೆ, ಈ ಪದವನ್ನು ಆ ದಿನಗಳಲ್ಲಿ ದ್ರಾವಿಡ ಸ್ಥಳೀಯರಿಗೆ ಪರ್ಯಾಯವಾಗಿ ಬಳಸಲಾಗುತ್ತಿತ್ತು. ವಾತ್ಸಾಯನನನ್ನು ಸಹ ದ್ರಮಿಳ ಎಂದು ಕರೆಯಲಾಗುತ್ತದೆ. ಇದರರ್ಥ ಪೂರ್ವಜರು ಪ್ರಾಚೀನ ತಮಿಳನ್ನು ಮಾತನಾಡುವ ದ್ರಾವಿಡರು ಎಂದಾಗಿದೆ. 


ಚಾಣಕ್ಯನುಜನಿಸುವಾಗಲೇ ಅವನಿಗೆ ಬಾಯಲ್ಲಿ ಹಲ್ಲುಗಳಿದ್ದವು. ಇಂತಹಾಮಗು ರಾಜ್ಯವನ್ನು ಆಳುತ್ತದೆ ಎಂದು ಋಷಿಗಳು ಭವಿಷ್ಯ ನುಡಿದರು. ಆದರೆ ಚಾಣಕ್ಯನ ತಂದೆ ಸರಳ ಜೀವನವನ್ನು ನಡೆಸಲು ಬಯಸಿದ್ದ. ಆ ಕಾರಣದಿಂದ ಚಾಣಕ್ಯನಿಗಿದ್ದ ಹಲ್ಲುಗಳನ್ನು ಕಿತ್ತು ಹಾಕಾಲಾಯಿತು. ಆಗ ಋಷಿಗಳು ಈ ಮಗು ರಾಜನನ್ನು ನಿಯಂತ್ರಿಸಬಲ್ಲ ಮಹಾನ್ ಗುರುವಾಗಿತ್ತಾನೆ. ಇವನ ಕೆಳಗೆ ರಾಜನು ಆಳುತ್ತಾನೆ ಎಂದು ಭವಿಷ್ಯ ನುಡಿದರು. ಚಾಣಕ್ಯನು ಉನ್ನತ ವ್ಯಾಸಂಗಕ್ಕಾಗಿ ತಕ್ಷಶಿಲೆಗೆ ಹೋದನು ಮತ್ತು ಮದುವೆಯಾಗುವುದಕ್ಕಾಗಿ ಮತ್ತೆ ತನ್ನ ಹಳ್ಳಿಗೆ ಹಿಂತಿರುಗಿದನು. 

ತಕ್ಷಶಿಲಾ ವಿಶ್ವವಿದ್ಯಾನಿಲಯ"

ಇಂದು ಪಾಕಿಸ್ತಾನದಲ್ಲಿ ತಕ್ಷಶಿಲಾ ಎಂದು ಕರೆಯಲ್ಪಡುವ ತಕ್ಷಶಿಲಾ ವಿಶ್ವವಿದ್ಯಾನಿಲಯವು ಸುಮಾರು 3700 ವರ್ಷಗಳ ಹಿಂದೆ (ಸುಮಾರು ಕ್ರಿ.ಪೂ. 1700) ಸ್ಥಾಪಿತವಾಗಿದೆ 10500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆಲೆಯಾಗಿತ್ತು.  ಅಲ್ಲಿ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ವೇದಗಳಂತಹ 64 ವಿಭಿನ್ನ ವಿದ್ಯೆಗಳಲ್ಲಿ ಪರಿಣತಿಯನ್ನು ಪಡೆಯಲು ಬರುತ್ತಿದ್ದರು. , ವ್ಯಾಕರಣ, ತತ್ವಶಾಸ್ತ್ರ, ಆಯುರ್ವೇದ, ಕೃಷಿ, ಶಸ್ತ್ರಚಿಕಿತ್ಸೆ, ರಾಜಕೀಯ, ಬಿಲ್ಲುಗಾರಿಕೆ, ಯುದ್ಧ, ಖಗೋಳಶಾಸ್ತ್ರ, ವಾಣಿಜ್ಯ, ಭವಿಷ್ಯಶಾಸ್ತ್ರ, ಸಂಗೀತ, ನೃತ್ಯ, ಇತ್ಯಾದಿ ವಿದ್ಯೆಗಳನ್ನು ಕಲಿಸಲಾಗುತ್ತಿತ್ತು. ಈ ವಿಶ್ವವಿದ್ಯಾಲಯದ ಪ್ರಸಿದ್ಧ ಪದವೀಧರರಲ್ಲಿ ಪಾಣಿನಿ, ಚಾಣಕ್ಯ, ಚರಕ, ವಿಷ್ಣು ಶರ್ಮ, ಜೀವಕ ಮುಂತಾದವರು ಸೇರಿದ್ದಾರೆ.ಇದು ಇಲ್ಲಿಯವರೆಗೆ ಕಂಡುಬರುವ ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ. 

ಚಾಣಕ್ಯನ ಪತ್ನಿ ಯಶೋಮತಿ. ಯಶೋಮತಿಯು ಅವಳ ಸಹೋದರಿಯರಿಂದ ಬಡತನದ ಕಾರಣಕ್ಕೆ ಅವಮಾನಿತಳಾದ ನಂತರ ಚಾಣಕ್ಯನು ಮಗಧದ ದೊರೆ ಮಹಾಪದ್ಮ ನಂದನನ್ನು ಭೇಟಿ ಮಾಡಲು ಮತ್ತು ಹಣವನ್ನು ಸಂಪಾದಿಸುವ ಮಾರ್ಗ ಹುಡುಕಲು ಮುಂದಾದನು.  ಚಾಣಕ್ಯನು ಅಲ್ಲಿಯೂ ಅವಮಾನಿಸಲ್ಪಟ್ಟನು ಹಾಗಾಗಿ ಅವನು ನಂದ ಮತ್ತು ಅವನ ಮಕ್ಕಳನ್ನು ರಾಜ  ಸಿಂಹಾಸನದಿಂದ ತೊಡೆದುಹಾಕಲು ಪ್ರತಿಜ್ಞೆ ಮಾಡಿದನು. ವಾಸ್ತವವಾಗಿ, ಚಾಣಕ್ಯ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಾನೆ ಏಕೆಂದರೆ ಕ್ಷೌರಿಕನ ಮಗ ನಂದ ಮತ್ತು ಅವನ ರಾಜವಂಶವನ್ನು ಪದಚ್ಯುತಗೊಳಿಸಲು ಅವನಿಗೆ ಒಂದು ಕಾರಣ ಬೇಕಾಗಿತ್ತು. ಅದೇ ಕಾರಣವೆಂದರೆ ಅವರು (ನಂದರು)ಈಗಾಗಲೇ ನೆರೆಯ ರಾಜ್ಯಗಳಲ್ಲಿ ಹೆಚ್ಚಿನ ಕ್ಷತ್ರಿಯ ಮೂಲದವರನ್ನು ನಿರ್ಮೂಲನೆ ಮಾಡಿದ್ದಾರೆ. ಅಲ್ಲದೆ ಅವರ ಆಳ್ವಿಕೆ ಧರ್ಮದ ಪರವಿದ್ದಿರಲಿಲ್ಲ. ಪ್ರಜೆಗಳಿಗೆ ಅಸಹನೀಯವಾಗಿತ್ತು.  ಪ್ರಾಣಿಗಳ ಚರ್ಮ, ಒಸಡುಗಳು, ಮರಗಳು, ಕಲ್ಲುಗಳು ಇತ್ಯಾದಿಗಳ ಮೇಲೆ ತೆರಿಗೆಯನ್ನು ವಿಧಿಸಿ, ಅವರು ಹಣವನ್ನು ಸಂಗ್ರಹಿಸಿದರು. ಅವರು ಒಟ್ಟೂ ಎಂಬತ್ತು ಮಹಾಪದ್ಮದಷ್ಟು ಹಣ ಸಂಗ್ರಹ ಮಾಡಿ ಗಂಗಾ ತಟದಲ್ಲಿ ಹೂತಿಟ್ಟರು.  ಗಂಗೆಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟಿನ ಮೂಲಕ ಮುಖ್ಯ ಪ್ರವಾಹವನ್ನು ಬೇರೆಡೆ ತಿರುಗಿಸಿ ನದಿ ದಂಡೆಯಲ್ಲಿ ಹಣ ಇಡಲು ಸಾಕಾಗುವಷ್ಟು ದೊಡ್ಡ ಬಂಡೆಯೊಂದರಲ್ಲಿ ರಂದ್ರ ಕೊರೆದು ತಮ್ಮ ಧನದ ಸಂಗ್ರಹವನ್ನು ಅಲ್ಲಿಟು ಮುಚ್ಚಿದರು.  ಬಳಿಕ ಅದರ ಮೇಲೆ ಕರಗಿದ ಸೀಸವನ್ನು ಬೆರೆಸಿ ನದಿಯನ್ನು ಪುನ್ಃಅ ಮತ್ತೆ ಮೊದಲಿನ ಮಾರ್ಗಕ್ಕೆ ತಿರುಗಿಸಲಾಗಿತ್ತು. ಹೀಗೆ ನಿಧಿಯನ್ನು ಬಹಳ ಬಲವಾದ ಸ್ಥಳದಲ್ಲಿ ಭದ್ರಪಡಿಸಲಾಯಿತು. ಅವರ ಜೀವಿತಾವಧಿಯಲ್ಲಿ, ಅವರು ಸಂಗ್ರಹಣೆಯನ್ನು ಮುಂದುವರೆಸಿದರು ಮತ್ತು ಕಾಲಕಾಲಕ್ಕೆ ನದಿಯ ತಳದಲ್ಲಿ ನಿಧಿಯನ್ನು ಸಂಗ್ರಹಿಸುತ್ತಾ ಸಾಗಿದರು. 

ಮಹಾಪದ್ಮನಂದ"

ಮಹಾಪದ್ಮನಂದ ನಂದ ರಾಜವಂಶದ ದೊರೆ. ಸಾಯಿಸುನಾಗ ರಾಜವಂಶದ 11 ನೇ ರಾಜನಾಗಿ ಮಹಾಪದ್ಮ ನಂದ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಸಾಯಿಸುನಾಗ ರಾಜವಂಶವು ಕೊನೆಗೊಂಡಿತು, ಎಂದರೆ ವನು ಕ್ಷೌರಿಕ ಮತ್ತು ಮಹಾನಂದಿಯ ರಾಣಿಯ ಮಗನಾಗಿದ್ದರಿಂದ, ಅವನ ರಾಜವಂಶವನ್ನು ಪ್ರತ್ಯೇಕವಾಗಿ ನಂದ ರಾಜವಂಶವೆಂದು ಗುರುತಿಸಲಾಯಿತು.ಅವನು ಮತ್ತು ಅವನ ಮಕ್ಕಳು ಕ್ರಿ.ಪೂ. 1634 - 1534ರವರೆಗೆ  100 ವರ್ಷಗಳ ಕಾಲ ಆಳಿದರು.

ಕ್ರಿ.ಪೂ. 1546 ಯಲ್ಲಿ ಚಾಣಕ್ಯನ ಸಹಾಯದಿಂದ ಚಂದ್ರಗುಪ್ತ ಮೌರ್ಯ ಅವರನ್ನು ತೊಡೆದು ಹಾಕಿದನು.  (ಮಹಾಪದ್ಮ ಎಂಬುದು ಒಂದು ಸಂಖ್ಯೆ = ಪದ್ಮ x 1000 x 100 = 1037.) ಮಹಾಪದ್ಮ ನಂದನು ಆ ಅನೇಕ ಚಿನ್ನದ ನಾಣ್ಯಗಳನ್ನು ಗಂಗಾ ನದಿಯ ದಡದಲ್ಲಿ ಮಡಕೆಗಳಲ್ಲಿ ಹೂತಿಟ್ಟಿದ್ದನು.

ಚಾಣಕ್ಯನು ತಾನು ರಾಜ್ಯವನ್ನು ರಾಜಗುರುವಾಗಿ ಆಳಬಹುದೆನ್ನುವ ಬ ಋಷಿಗಳ ಭವಿಷ್ಯವನ್ನು ನೆನಪಿಸಿಕೊಳ್ಳುತ್ತಾನೆ ಮತ್ತು ಭವಿಷ್ಯದ ರಾಜನಿಗಾಗಿ ಸೂಕ್ತ ವ್ಯಕ್ತಿಯನ್ನು ಹುಡುಕುತ್ತಾನೆ.

 ಅವನುಉ ಪಿಫಲಿವನ(ನೇಪಾಳದ ತೆರಾಯ್ ಪ್ರದೇಶದ ರುಮ್ಮಿಂದೆ ಅಥವಾ ಲುಂಬಿನಿಯ ನಡುವಿನ ಪ್ರದೇಶ ಮತ್ತು ಆಧುನಿಕ ಗೋರಖ್‌ಪುರ ಜಿಲ್ಲೆಯ ಕಾಸಿಯಾ) ಗ್ರಾಮವನ್ನು ತಲುಪುತ್ತಾರೆ, ಅಲ್ಲಿ ಹೆಚ್ಚಿನ ಕ್ಷತ್ರಿಯ ಕುಟುಂಬಗಳು ರಾಜ ನವಿಲುಗಳನ್ನು ಸಾಕಿ ಬೆಳೆಸಿ ಅವುಗಳನ್ನು ತಿನ್ನುವವರಿರುತ್ತಾರೆ. ಅವರನ್ನು ಮೌರ್ಯ ಎಂದು ಕರೆಯಲಾಗುತ್ತಿತ್ತು (ಮಯೂರ - ನವಿಲು ತಿನ್ನುವವನು). ಮಹಾಪರಿನಿಬ್ಬನ ಸುತ್ತದಲ್ಲಿ (ಸೂತ್ರದಲ್ಲಿ)ಬೌದ್ಧ ಗ್ರಂಥದಲ್ಲಿ, ಮೋರಿಯರು ಅಥವಾ ಮೌರ್ಯರು ಕ್ಷತ್ರಿಯ ಕುಲವಾಗಿ ಪಿಪ್ಪಲಿವನವನ್ನು ಆಳುತ್ತಿದ್ದರೆನ್ನುವ ಉಲ್ಲೇಖವಿದೆ. ಆರಂಭದಲ್ಲಿ,ಮೌರ್ಯರು ಸಾಯಿಸುನಾಗ ರಾಜವಂಶಕ್ಕೆ ನಿಷ್ಠರಾಗಿದ್ದರು, ಈ ರಾಜವಂಶವು ಕ್ರಿ.ಪೂ. 1994-1643ರ ನಡುವೆ ಆಳ್ವಿಕೆ ನಡೆಸಿತ್ತು.  ಮಹಾನಂದಿ ಕ್ಷೌರಿಕನಿಂದ ಕೊಲ್ಲಲ್ಪಟ್ಟ ನಂತರ, ಅವರು ಮಹಾಪದ್ಮ ನಂದ ಮತ್ತು ಅವರ ಪುತ್ರರ ವಿರುದ್ಧ ನಿರಂತರವಾಗಿ ಯುದ್ಧಗಳನ್ನು ನಡೆಸುತ್ತಿದ್ದರು.

ಗ್ರಾಮದ ಮುಖ್ಯಸ್ಥನ ಮಗಳು ಮುರಾ ಗರ್ಭಿಣಿಯಾಗಿದ್ದಾಳೆ ಮತ್ತು ಹುಣ್ಣಿಮೆಯನ್ನು ಹಾಗೆಯೇ ಹೀರಲು ಬಯಸಿದ್ದಾಗಿ ಚಾಣಕ್ಯನು ಕಂಡುಕೊಂಡನು. ಭವಿಷ್ಯದಲ್ಲಿ ಅವಳ ಮಗುವನ್ನು ಬೆಳೆಸುವ ಜವಾಬ್ದಾರಿ ತನಗೆ ಕೊಡಬೇಕೆನ್ನುವ ಷರತ್ತಿನೊಂದಿಗೆ ಚಾಣಕ್ಯನು ಅವಳ ಆಸೆಯನ್ನು ಪೂರೈಸಲು ಒಪ್ಪಿಕೊಳ್ಳುತ್ತಾನೆ. ಗ್ರಾಮದ ಮುಖ್ಯಸ್ಥರು ಮತ್ತು ಅವರ ಕುಟುಂಬದವರು ಈ ಒಪ್ಪಂದಕ್ಕೆ ಒಪ್ಪುತ್ತಾರೆ. ಮುರಾ ಹಾಗೂ ಅವಳ ಪತಿ ಸರ್ವಾರ್ಥಸಿದ್ದಿ ಮೌರ್ಯ ನಂದರ ಮ್ರಾಜ್ಯದ ವಿರುದ್ಧದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಸೇನಾ ದಂಡನಾಯಕನಾಗಿದ್ದ. 

ಚಾಣಕ್ಯನು ಛಾವಣಿಯ ಮೇಲೆ ರಂಧ್ರವಿರುವ ಗುಡಿಸಲು ನಿರ್ಮಿಸುತ್ತಾನೆ. ಬೆಳದಿಂಗಳು ಬೀಳುವ ಗುಡಿಸಲಿನಲ್ಲಿ ಹಾಲು ತುಂಬಿದ ಮಡಕೆಯನ್ನು ಇಟ್ಟುಕೊಂಡು ಗರ್ಭಿಣಿ ಮುರನನ್ನು ಆಹ್ವಾನಿಸುತ್ತಾನೆ. ಚಂದ್ರನ ಪ್ರತಿಬಿಂಬವಿರುವ ಹಾಲಿನ ಪಾತ್ರೆಯನ್ನು ತೋರಿಸಿ ‘ಆ ಚಂದ್ರನನ್ನು ಕುಡಿ’ ಎಂದು ಹೇಳುತ್ತಾರೆ. ಚಾಣಕ್ಯನ ಮಾತಿನಿಂದ ಸಂತೋಷಗೊಂಡ ಮುರಾ ತುಂಬಿದ ಪಾತ್ರೆಯಲ್ಲಿದ್ದ ಹಾಲನ್ನು ಕುಡಿಯುತ್ತಾಳೆ. ಹಾಗೆ ತಾನು ಚಂದ್ರನನ್ನೇ ಹೀರಿದೆನೆಂದು ಭಾವಿಸುತ್ತಾಳೆ. ಚಾಣಕ್ಯನು ಹಾಗೆ ಮುರಾ ಹಾಲು ಕುಡಿಯುತ್ತಿದ್ದಾಗಲೇ ಗುಡಿಸಲ್ಲಿನ ಚಾವಣಿಯಲ್ಲಿನ ರಂದ್ರವನ್ನು ಉಪಾಯದಿಂದ ಮುಚ್ಚುತ್ತಾನೆ. ಮಡಕೆಯನ್ನು ಖಾಲಿ ಮಾಡಿದ ನಂತರ ಚಂದ್ರನು ಕಣ್ಮರೆಯಾದ ಎಂಬ ಭ್ರಮೆಯನ್ನು ಸೃಷ್ಟಿಸುತ್ತಾನೆ. ನಂತರ ಮುರಾ ತನ್ನ ಮಗುವಿಗೆ ಚಂದ್ರ-ಗುಪ್ತ ಎಂದು ಹೆಸರಿಸುತ್ತಾಳೆ(ಚಂದ್ರನನ್ನು ಗುಪ್ತವಾಗಿ ಸೇವಿಸಿದಳೆನ್ನುವ ಅರ್ಥ)


ಚಾಣಕ್ಯನು ಮಗಧದ ರಾಜಧಾನಿ ಪಾಟಲೀಪುತ್ರವನ್ನು ಪ್ರವೇಶಿಸುತ್ತಾನೆ ಮತ್ತು ವಿಷ್ಣು ಗುಪ್ತನ ವೇಷವನ್ನು ಧರಿಸುತ್ತಾನೆ. ಮಹಾಪದ್ಮ ನಂದನಿಗೆ ಅನೇಕ ಶತ್ರುಗಳಿದ್ದರು ಆದರೆ ರಾಜನ ಮೇಲೆ ಆಕ್ರಮಣ ಮಾಡಲು ಏಕತೆ ಮತ್ತು ನಾಯಕತ್ವದ ಕೊರತೆ ಇತ್ತು. ವಿಷ್ಣು ಗುಪ್ತನಾಗಿ ಚಾಣಕ್ಯನು ಇಂತಹಾ ಸಮಾನ ಶತ್ರುಗಳನ್ನು ಒಂದುಗೂಡಿಸಲು ಮತ್ತು ರಾಜನ ಮೇಲೆ ಆಕ್ರಮಣ ಮಾಡಲು ಅನೇಕ ಬಾರಿ ಪ್ರಯತ್ನಿಸಿ ವಿಫಲವಾಗುತ್ತಾನೆ. ಒಂದು ದಿನ, ಪಿಫಲಿವನದಲ್ಲಿಸಾಗುತ್ತಿದ್ದಾಗ ಅವನು ತನ್ನ ಸ್ನೇಹಿತರ ನಡುವೆ ರಾಜನಂತೆ ವರ್ತಿಸುತ್ತಿರುವ 12 ವರ್ಷದ ಮಗುವನ್ನು ಕಾಣುತ್ತಾನೆ. ಚಾಣಕ್ಯ ಅವನನ್ನು ಪರೀಕ್ಷಿಸಲು ಬಯಸಿ ದಾನ ಕೇಳುತ್ತಾನೆ. ಆಗ ಬಾಲಕ ದಾನಕ್ಕಾಗಿ ಹಸುವಿನ ಹಿಂಡನ್ನು ತೋರಿಸುತ್ತಾನೆ.  ಚಾಣಕ್ಯನು ಈ ಮಗು ಚಂದ್ರಗುಪ್ತನೆಂದು ತಿಳಿದುಕೊಳ್ಳುತ್ತಾನೆ ಮತ್ತು 'ನೀನು ನಿಜವಾದ ರಾಜನಾಗಲು ಬಯಸಿದರೆ, ನಿನಗೆ ಆಳುವುದಕ್ಕೆ ರಾಜ್ಯ ಬೇಕಾಗುತ್ತದೆ. ನಾನು ನಿನಗೆ ಒಂದು ರಾಜ್ಯವನ್ನು ನಿಡಬಹುದು'. ಆ ಬಾಲಕನ ಕುಟುಂಬ ಅವರ ಮೊದಏ ಮಾತು ನೀಡಿದಂತೆ ಚಂದ್ರಗುಪ್ತನನ್ನು ಚಾಣಕ್ಯನೊಂದಿಗೆ ಕಳುಹಿಸುತ್ತಾರೆ.

No comments:

Post a Comment