Tuesday, June 30, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) – 55

ಶ್ರೀಶೈಲ (Srisailam)

ಬಾಗ -1

ಸೀಮಾಂಧ್ರದ ಕರ್ನೂಲ್ ಜಿಲ್ಲೆಯಲ್ಲಿರುವ ನಂದಿಕೊಟ್ಟೂರು ತಾಲೂಕಿನ ನಲ್ಲ ಮಲ್ಲ ಬೆಟ್ಟಗಳ ದಟ್ಟ ಅರಣ್ಯದಲ್ಲಿ ನೆಲೆಸಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರವಾದ ಶ್ರೀಶೈಲ ಭಾರತದಲ್ಲಿನ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀಶೈಲ ವು, ಭಾರತದ ಪ್ರಾಚೀನ ಧಾರ್ಮಿಕ ಕ್ಷೇತ್ರಗಳ ಇತಿಹಾಸದಲ್ಲಿ ತುಂಬಾ ಪ್ರಾಚೀನವಾದುದು . ವೇದಗಳಲ್ಲಿ, ಪುರಾಣ, ಆಗಮಗಳಲ್ಲಿ ಇದನ್ನು ತುಂಬಾ ಪವಿತ್ರ ಕ್ಷೇತ್ರವೆಂದು ಪರಿಗಣಿಸಲಾಗಿದೆ ..ಇಲ್ಲಿ ಹರಿಯುವ ಕೃಷ್ಣಾ ನದಿಯು ಆಳವಾದ ಕಮರಿಯಲ್ಲಿ ಹರಿದು ಬರುವುದರಿಂದ ತುಂಬಾ ರುದ್ರ ಭಯಾನಕವಾಗಿದೆ . ಇದನ್ನೇ ಪಾತಾಳ ಗಂಗೆ ಎಂದು ಕರೆಯುತ್ತಿದ್ದರು . ಕ್ಷೇತ್ರದ ಅಧಿದೇವತೆಗಳು ಶ್ರೀ ಮಲ್ಲಿಕಾರ್ಜುನ ,ಭ್ರಮರಾಂಬೆಯರು. ಸಮುದ್ರ ಮಟ್ಟದಿಂದ ೫೫೦೦ ಅಡಿಗಳ ಎತ್ತರದಲ್ಲಿ ಮಲ್ಲಿಕಾರ್ಜುನ ಭ್ರಮರಾಂಬ ದೇವಸ್ಥಾನಗಳಿವೆ .ಪ್ರಾಚೀನ ಕಾಲದಿಂದಲೂ ಶ್ರೀಶೈಲ ಯಾತ್ರೆಯು ಮೋಕ್ಷದಾಯಕವೆಂದು ಭಕ್ತರ ನಂಬಿಕೆ .ಉತ್ತರದಲ್ಲಿ ಕಾಶಿಯಂತೆಯೇ ದಕ್ಷಿಣದಲ್ಲಿ ಶ್ರೀಶೈಲವು ಪವಿತ್ರವೆಂದು ಭಾರತೀಯರ ನಂಬಿಕೆ .ಶ್ರೀಶೈಲ ಪರ್ವತದ ಬಗ್ಗೆ ಪೌರಾಣಿಕವಾಗಿ ಅನೇಕ ಕಥೆಗಳು ಪ್ರಚಲಿತದಲ್ಲಿವೆ . ಸ್ಥಳೀಯವಾದ ಜಾನಪದ ಇತಿಹಾಸವೂ ಹೇರಳವಾಗಿದೆ
.
Sri Mallikarjuna Swamy, Srisailam

***

ಅದೊಮ್ಮೆ ಶಿವ ಪಾರ್ವತಿಯರು ತಮ್ಮ ಮಕ್ಕಳಿಗೆ ವಿವಾಹವನ್ನು ನೆರವೇರಿಸಿಸಲು ನಿಶ್ಚಯಿಸಿದರು. ಆದರೆ ಮೊದಲು ಯಾರಿಗೆ ಮದುವೆ ಮಾಡುವುದೆನ್ನುವುದೆನ್ನುವ ವಿಚಾರದಲ್ಲಿ ಗೊಂದಲವೇರ್ಪಟ್ಟಿತು. ಅದಾಗ ಪೃಥ್ವಿಯನ್ನು ಯಾರು ಮೂರು ಬಾರಿ ಪ್ರದಕ್ಷಿಣೆ ಹಾಕಿ ಶೀಘ್ರವಾಗಿ ಹಿಂತಿರುಗುವರೋ ಅವರಿಗೆ ಮೊದಲು ವಿವಾಹ ಮಾಡುವುದಾಗಿ ನಿರ್ಧಾರವಾಯಿತು. ಇದರಂತೆಯೇ ತಮ್ಮಿಬ್ಬರು ಮಕ್ಕಳಿಗೂ ವಿಚಾರವನ್ನು ತಿಳಿಸಲಾಗಿ ಕಾರ್ತಿಕೇಯನು ತಾನು ತನ್ನ ವಾಹನವಾದ ನವಿಲನ್ನೇರಿ ವಿಶ್ವ ಪರ್ಯಟನೆಗಾಗಿ ಹೊರಟನು. ಆದರೆ ಗಣಪತಿಯು ತಾನು ಮಾತಾ ಪಿತೃಗಳಾದ ಶಿವ ಪಾರ್ವತಿಯರಿಗೆ ಮೂರು ಸುತ್ತು ಬಂದು ನಿಂತುಬಿಟ್ಟನು.
ಇದರಿಂದ ಕುಪಿತರಾದ ದಂಪವಪಾರ್ವತಿಯರುತಿಗಳು `ನೀನು ಪ್ರದಕ್ಷಿಣೆಗೆ ಇನ್ನೂ ಹೊರಟಿಲ್ಲವೇಕೆ?' ಎನ್ನಲು ಗಣೇಶನು `ನಾನೀಗಾಗಲೇ ಮೂರು ಪ್ರದಕ್ಷಿಣೆ ಮಾಡಿದ್ದೇನೆ. ಜಗದೊಡೆಯರಾದ ನಿಮಗೆ ಮೂರು ಪ್ರದಕ್ಷಿಣೆ ಹಾಕಿದ ಮೇಲೆ ಪೃಥ್ವಿಗೆ ಮೂರು ಪ್ರದಕ್ಷಿಣೆ ಹಾಕಿದಂತೆಯೇ ಅಲ್ಲವೆ?'ಎನ್ನಲು ಅವನ ಚಾಣಾಕ್ಷತೆಗೆ ಮೆಚ್ಚಿ ಪರಮೇಶ್ವರನು ಪ್ರಜಾಪತಿಯ ಮಕ್ಕಳಾದ ಸಿದ್ದಿ ಬುದ್ದಿಯರನ್ನು ಗಣೇಶನಿಗೆ ವಿವಾಹ ಮಾಡಿಸಿದನು.
ಇದಾದ ತರುವಾಯ ಭೂಪ್ರದಕ್ಷಿಣೆ ಮಾಡಿ ಹಿಂತಿರುಗಿದ ಕಾರ್ತಿಕೇಯನು ನಡೆದ ಕಾರ್ಯದಿಂದ ಕ್ರೋಧಗೊಂಡು ಶಿವ ಪಾರ್ವತಿಯರು ತನಗೆ ಮೋಸ ಮಾಡಿದರು. ಗಣೇಶನ ಪಕ್ಷಪಾತಿಗಳಾದರೆಂದು ಕೈಲಾಸದಿಂದ ಹೊರಟು ಕ್ರೌಂಚ ಪರ್ವತಕ್ಕೆ ಬಂದು ನೆಲಸಿದನು. ಘಟನೆಯಿಂದ ನೊಂದ ಪಾರ್ವತಿಯು ತಾನು ಪರಿ ಪರಿಯಾಗಿ ಮಗನನ್ನು ಒಲಿಸಲು ನೋಡಿದಳು. ನಾರದರೇ ಮೊದಲಾದವರನ್ನು ಕರೆ ಕಳಿಸಿ ಮಗನನ್ನು ಹಿಂತಿರುಗಲು ಹೇಳಿದರೂ ಕಾರ್ತಿಕೇಯನು ತಾನು ಕೋಪವನ್ನು ಬಿಡಲಿಲ್ಲ. ಹಿಂತಿರುಗಿ ಬರಲೂ ಇಲ್ಲ.
ಹೀಗಾಗಲು ಶಿವ ಪಾರ್ವತಿಯರೇ ತಾವು ಮಗನನ್ನು ಕಾಣಲು ಹೊರಟರು. ತನ್ನನ್ನು ಪುನಃ ಕೈಲಾಸಕ್ಕೆ ಕರೆಯಲು ಶಿವ ಪಾರ್ವತಿಯರೇ ಬರುತ್ತಿದ್ದಾರೆಂದು ತಿಳಿದ ಷಣ್ಮುಗನು ತಾನು ಇನ್ನಷ್ಟು ದೂರ ಹೋದನು. ಆದರೆ ಶಿವ ಪಾರ್ವತಿಯರು ತಾವು ಕ್ರೌಂಚ ಪರ್ವತದಲ್ಲಿಯೇ ನೆಲೆಸಿದರು. ಅಲ್ಲಿಂದ ಪಾರ್ವತಿಯು ತನ್ನ ಮಗನನ್ನು ಕಾಣಲಿಕ್ಕಾಗಿ ಪ್ರತೀ ಅಮಾವಾಸ್ಯೆಯಂದು ತೆರಳಿದರೆ ಪರಮೇಶ್ವರನು ಕಾರ್ತಿಕೇಯನನ್ನು ಕಾಣಲು ಪ್ರತೀ ಹುಣ್ಣೆಮೆಗೆ ಹೋಗುವನು.
ಸ್ಥಳದಲ್ಲಿ ನೆಲೆ ನಿಂತ ಶಿವನಿಗೆ `ಅರ್ಜುನ' ಎಂತಲೂ ಪಾರ್ವತೀ ದೇವಿಗೆ `ಮಲ್ಲಿಕಾ'ಎಂತಲೂ ಹೆಸರಾಯಿತು.

***
Srisailam temple

ಬಹಳ ಹಿಂದೆ ಅರುಣಾಸುರನೆಂಬ ದೈತ್ಯನು ಇಡೀ ವಿಶ್ವವನ್ನೇ ಆಳುತ್ತಿದ್ದನು. ಅವನು ಬ್ರಹ್ಮನನ್ನು ಕುರಿತು ಗಾಯತ್ರಿ ಮಂತ್ರವನ್ನು ಪಠಿಸುತ್ತಾ ಅನೇಕ ವರ್ಷಗಳ ಕಾಲ ತಪಸ್ಸನ್ನಾಚರಿಸಿದನು. ಬ್ರಹ್ಮನು ಪ್ರತ್ಯಕ್ಷನಾದಾಗ ಅಸುರನು ತನಗೆ ಎರ್ಡು ಹಾಗೂ ನಾಲ್ಕು ಕಾಲುಗಳ ಪ್ರಾಣಿಗಳಿಂದ ಸಾವು ಬರಬಾರದೆಂದು ವರವನ್ನು ಕೇಳಿ ಪಡೆದನು. ವರದಿಂದ ಮದೋನ್ಮತ್ತನಾದ ಅಸುರನು ದೇವತೆ ಹಾಗೂ ಇಗಳಿಗೆ ಹಿಂಸೆ ನೀಡಲು ಪ್ರಾರಂಭಿಸಿದನು. ಆಗ ದೇವತೆಗಳು ಆದಿಶಕ್ತಿಯನ್ನು ಪ್ರಾರ್ಥಿಸಿ ಆಕೆಯು ಪ್ರತ್ಯಕ್ಷಳಾಗಲು ` ಅಸುರನು ತನ್ನ ಭಕ್ತನಾಗಿದ್ದು ಅವನು ತನ್ನನ್ನು ಪೂಜಿಸುವುದನ್ನು ನಿಲ್ಲಿಸಿದಾಗಲಷ್ಟೇ ನಾನವನನ್ನು ಕೊಲ್ಲಲು ಶಕ್ತಳಾಗುತ್ತೇನೆ.' ಎಂದಳು.
ಅದರಂತೆಯೇ ದೇವತೆಗಳೆಲ್ಲರೂ ಉಪಾಯದಿಂದ ದೇವಗುರು ಬೃಹಸ್ಪತಿಯು ಅಸುರನನ್ನು ಭೇಟಿಯಾಗುವಂತೆ ಮಾಡಿದರು. ಹಾಗೆ ಭೇಟಿಯಾಗಿ `ತಾವೂ ಸಹ ಗಾಯ್ತ್ರಿಯನ್ನು ಪೂಜಿಸುತ್ತಿರುದರಿಂದ ನೀನೂ ನಾನೂ ಸಮಾನರಾಗಿದ್ದೇವೆ.' ಎನ್ನಲು ಅಸುರನು ದೇವತೆಗಳು ಪೂಜಿಸುವ ಗಾಯತ್ರಿಯನ್ನು ನಾನು ಪೂಜಿಸುವುದು ಸರಿಯಲ್ಲವೆಂದು ಗಾಯತ್ರಿ ಪೂಜೆಯನ್ನು ನಿಲ್ಲಿಸಿದನು. ಇದರ ನಂತರವು ಆದಿಶಕ್ತಿ ತಾನು ಭ್ರಮರದ ರೂಪದಾಳಿ ಆರು ಕಾಲುಗಳಳುಳ್ಳ ಅನೇಕ ದುಂಬಿಗಳನ್ನು ಸೃಷ್ಟಿಸಿದಳು. ದುಂಬಿಗಳೆಲ್ಲವೂ ಸೇರಿ ಅಸುರನನ್ನೂ, ಮತ್ತವನ ಸೈನ್ಯವನ್ನೂ ಸಂಹರಿಸಿದವು. ಇಂದಿಗೂ ಭ್ರಮರಾಂಬೆ ದೇವಾಲಯದ ಹಿಂಭಾಗದಲ್ಲಿ ಭಕ್ತ ಜನರು ದುಂಬಿಗಳ ಝೇಂಕಾರವನ್ನು ಆಲಿಸಬಹುದು

Saturday, June 20, 2015

ಅಂತಕರಣ ಕಲಕಿದಳು ಅರುಣಾ

ಇತ್ತೀಚೆಗೆ ನಮ್ಮ ಸ್ನೇಹಿತರು ಪ್ರಾರಂಭಿಸಿದ ಪತ್ರಿಕೆ 'ಸಿಂಹ ದ್ವನಿ' ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡ 42 ವರ್ಷಗಳ ಕಾಲ ಕೋಮಾದಲ್ಲಿದ್ದು ಇತ್ತೀಚೆಗೆ ಸಾವನ್ನಪ್ಪಿದ ದಾದಿ ಅರುಣಾ ಶಾನಭಾಗರ ಕುರಿತಾದ ನನ್ನ ಲೇಖನ

'Simha Shakthi'Kannada monthly



ಇದನ್ನು ಅತ್ಯಾಚಾರದ ಘೋರ ನರಕವೆನ್ನಬೇಕೋನರ್ಸ್ ಸೇವೆಯ ಪರಾಕಷ್ಠೆಯೆನ್ನಬೇಕೋ.. ತಿಳಿಯುತ್ತಿಲ್ಲ...
ಆಕೆ 42 ವರ್ಷಗಳಿಂದ ಮರಣಶಯ್ಯೆಯಲ್ಲಿದ್ದಳು. ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ ಅತ್ತ ಸಾಯಲೂ ಆಗದ ಇತ್ತ ಬದುಕಲೂ ಆಗದ ಸ್ಥಿತಿಯಲ್ಲಿ ನರಳುತ್ತಿದ್ದ ಅವಳ ಹೆಸರು ಅರುಣಾ ರಾಮಚಂದ್ರ ಶಾನಭಾಗ!
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರ ಎನ್ನುವ ಪುಟ್ಟ ಊರಲ್ಲಿ ಜನಿಸಿದ ಅರುಣಾ ನೂರಾರು ಕನಸುಗಳನ್ನು ಹೊತ್ತು  ಮುಂಬೈಗೆ ಬಂದರು. ರೋಗಿಗಳ ಸೇವೆಯ ಮಹತ್ವಾಕಾಂಕ್ಷೆಯೊಂದಿಗೆ ಅಲ್ಲಿನ ಕೆಇಎಂ ಆಸ್ಪತ್ರೆಯಲ್ಲಿ ನರ್ಸಿಂಗ್ ಟ್ರೈನಿಂಗ್ ಪಡೆದು, ಅಲ್ಲೇ ಕೆಲಸವನ್ನೂ ಆರಂಭಿಸುತ್ತಾರೆ. ಅದೇ ಸಮಯದಲ್ಲಿ ಅದೇ ಆಸ್ಪತ್ರೆಯ ಕಿರಿಯ ವೈದ್ಯರೊಬ್ಬರು ಅರುಣಾರನ್ನ ಇಷ್ಟಪಡುತ್ತಾರೆ. ನಿಶ್ಚಿತಾರ್ಥ ಕೂಡ ಆಗುತ್ತೆ.

ಬಂದನೊಬ್ಬ ಕೀಚಕ
ಆದರೆ ಆದರ್ಶದ ಬದುಕಿನ ಸ್ವಪ್ನ ಕಟ್ಟಿಕೊಂಡಿದ್ದ ಅರುಣಾರ ಬಾಳಿನಲಿ ಕೀಚಕನೊಬ್ಬ ಪ್ರವೇಶಿಸುತ್ತಾನೆ.
ನರ್ಸ್ ವೃತ್ತಿಯಲ್ಲಿದ್ದ ಅರುಣಾರನ್ನು ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ನಾಯಿಗಳ ಪ್ರಯೋಗಾಲಯದ ಕೆಲಸಕ್ಕೆ ನೇಮಿಸಲಾಗುತ್ತದೆ. ಅಲ್ಲಿ ಅದಾಗಲೇ ತಾತ್ಕಾಲಿಕವಾಗಿ ನೇಮಕವಾಗಿದ್ದ ಸೋಹನ್ ಲಾಲ್ ಎನ್ನುವ ಸಹಾಯಕ ನಾಯಿಗಳನ್ನು ನಿರ್ದಯವಾಗಿ ಹಿಂಸಿಸುತ್ತಿದ್ದುದಲ್ಲದೆ ಅವುಗಳಿಗಾಗಿ ಮೀಸಲಾಗಿದ್ದ ಮಾಂಸವನ್ನೂ ಕದಿಯುತ್ತಿದ್ದನು. ಅದನ್ನು ಗಮನಿಸಿದ ಅರುಣಾ ಅವನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಮೇಲಿನ ಅಧಿಕಾರಿಗಳಿಗೆ ಹೇಳುವುದಾಗಿಯೂ ಎಚ್ಚರಿಸುತ್ತಾರೆ. ಇದೇ ವಿಚಾರದಲ್ಲಿ ಅವನಲ್ಲಿ ಅರುಣಾ ಬಗ್ಗೆ ಸೇಡಿನ ಭವನೆ ಮೂಡುತ್ತದೆ.

'' ದುರ್ದಿನ
ಅರುಣಾಗೆ ತಕ್ಕ ಶಾಸ್ತಿ ಮಾಡಲೇಬೇಕೆಂದು ಪಣದೊಟ್ಟ ಸೋಹನ್ ಲಾಲ್ 1973 ನವೆಂಬರ್ 27 ಸಂಜೆ ನಿರ್ಜನವಾದ ಪ್ರಯೋಗಾಲಯದಲ್ಲಿ ಕಾದು ಕುಳಿತನು. ನಾಯಿಗಳಿಗಾಗಿ ಇದ್ದ ಲೋಹದ ಸರಪಣಿಯನ್ನು ಕೈಯಲ್ಲಿ ಹಿಡಿದ್ದ ಆತನ ಮನದಲಿ ಇನ್ನೇನು ಕೆಲಸಕ್ಕೆ ಹಾಜರಾಗಲಿದ್ದ ಅರುಣಾರ ಬಗೆಗೆ ದ್ವೇಷದ ಕಿಚ್ಚು ಹತ್ತಿಕೊಂಡಿತ್ತು.
ಇದೆಲ್ಲಾ ಏನೂ ಅರಿಯದ ಅರುಣಾ ಎಂದಿನಂತೆ ಸಮಯಕ್ಕೆ ಸರಿಯಾಗಿ ಬರುತ್ತಾರೆ. ಅದೇ ತಕ್ಷಣ ಸೋಹನ್ ತನ್ನ ಕೈಯಲ್ಲಿನ ಸರಪಣಿಯಿಂದ ಅರುಣಾ ಕತ್ತನ್ನು ಬಿಗಿದು ಕೆಡವಿಕೊಂಡು ಒಂದು ಕೈಯಲ್ಲಿ ಸರಪಣಿ ಹಗಂಟು ಇನ್ನೊಂದರಲ್ಲಿ ಆಕೆಯ ಬಾಯನ್ನು ಮುಚ್ಚಿ ಇಲ್ಲೇನು ನಡೆಯುತ್ತಿದೆ ಎನ್ನುವುದು ಅರುಣಾರ ಗಮನಕ್ಕೆ ಬರುವ ಮುನ್ನವೇ ಆಕೆಯ ಮೇಲೆ ಬಲಾತ್ಕಾರವೆಸಗುತ್ತಾನೆ.

ಕರುಣಾಲಯದಲ್ಲಿ.....
ಅರ್ಧರಾತ್ರಿಯಲ್ಲಿ ಪ್ರಯೋಗಾಲಯದ ತೆರೆದ ಬಾಗಿಲು, ಉರಿವ ದೀಪವನ್ನು ಕಂಡು ಒಳಬಂದ ವಾರ್ಡ್ ಬಾಯ್ ಗೆ ಅರುಣಾ ಪ್ರಜ್ಜ ಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಾಣುತ್ತದೆ. ನೆಲಕ್ಕೆ ಬಲವಾಗಿ ಅಪ್ಪಳಿಸಿದ ಕಾರಣ ಅವಳ ತಲೆಯಿಂದ ಸಾಕಷ್ಟು ರಕ್ತ ಸೋರಿ ಹೋಗಿರುತ್ತದೆ ಕತ್ತಿಗೆ ಬಲವಾಗಿ ಸರಪಣಿ ಬಿಗಿದದ್ದರಿಂದ ಮೆದುಳಿಗೆ ಪ್ರಾಣವಾಯುವಿನ ಪೂರೈಕೆಯೂ ಸ್ಥಗಿತಗೊಂಡು  ಮೆದುಳು ನಿಷ್ಕ್ರಿಯವಾಗಿರುತ್ತದೆ.
ಅಂತಹಾ ದಾರುಣ ಸ್ಥಿತಿಯಲ್ಲಿದ್ದ ಅರುಣಾರನ್ನು ಕೆಇಎಂ ಆಸ್ಪತ್ರೆ ಸಿಬ್ಬಂದಿಗಳೇ ಆರೈಕೆ ಮಾಡುತ್ತಾರೆ. ಅದೂ ಒಂದೆರಡು ದಿನಗಳಲ್ಲ, ತಿಂಗಳಲ್ಲ....ಬರೋಬ್ಬರಿ 42 ವರ್ಷಗಳು! ಮೊದಮೊದಲು ಅವರೊಂದಿಗೆ ಮದುವೆ ನಿಶ್ಚಯವಾಗಿದ್ದ ಗೆಳೆಯ, ಮನೆಯವರು ಬಂಧುಗಳು ಪ್ರತಿದಿನವೆನ್ನುವಂತೆ ಬರುತ್ತಿದ್ದರು. ಕಾಲ ಸರಿದಂತೆ ಅವರ ಬರುವಿಕೆಯೂ ಕ್ರಮೇಣ ಕಡಿಮೆಯಾಗಿ ನಂತರದಲ್ಲಿ  ನಿಂತೇ ಹೋಗುತ್ತದೆ. ಸೋಹನ್ ಲಾಲ್ ವಿರುದ್ಧ ಹಲ್ಲೆ ಮತ್ತು ದರೋಡೆ ಪ್ರಕರಣ ದಾಖಲಾಗಿ ಕೇವಲ ಏಳು ವರ್ಷ ಜೈಲುವಾಸದ ಶಿಕ್ಷೆಯಾಗುತ್ತದೆ. ಶಿಕ್ಷೆ ಪೂರ್ಣಗೊಳಿಸಿ ಜೈಲಿಂದ ಬಿಡುಗಡೆಯಾಯಾದ ಆತ ಕೆಲ ದಿನಗಳ ಬಳಿಕ ಎಲ್ಲಿದ್ದನೆನ್ನುವುದೂ ತಿಳಿಯದಾಗುತ್ತದೆ.

ದಾದಿಯರ ಪ್ರೀತಿ
ಮುಂಬಯಿಯ ಕೆಇಎಂ ಆಸ್ಪತ್ರೆಯ ದಾದಿಯರ ಪ್ರೀತಿಯಲ್ಲಿ ಕುಂದು ಬರಲಿಲ್ಲ ಆಸ್ಪತ್ರೆಯ ಕೆಳ ಅಂತಸ್ತಿನಲ್ಲಿರುವ ಒಂದೇ ಹಾಸಿಗೆಯ 4 ವಾರ್ಡ್ಗೆ ಅಂಟಿಕೊಂಡಿರುವ ಕೋಣೆ ಆಕೆಯ ಪ್ರಪಂಚವಾಯಿತು. ಹಾಸಿಗೆಯಲ್ಲಿದ್ದ ಚಂದದ ಹೆಣ್ಣು ನಿಧಾನವಾಗಿ ಸತ್ವಗುಂದಿದ ಸೂಕ್ಷ್ಮದೇಹಿಯಾಯಿತು. ಆದರೆ ನರ್ಸುಗಳಿಗೆಲ್ಲಾ ವರ ಅರುಣಾ ತಮ್ಮ ಹೊಟ್ಟೆಯ ಮಗುವೆನ್ನುವಂತಾ ಪ್ರೀತಿ ಇರುತ್ತದೆ ಕೋಣೆಯಲ್ಲಿನ ಸ್ಟೂಲ್ ಮೇಲೆ ಅವಳಿಷ್ಟದ ತಾರೆ ಜಯಾ ಬಾಧುರಿ ಚಿತ್ರವಿಡುತ್ತಾರೆ.ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು ಪ್ರತಿನಿತ್ಯ ಬಂದು ಹೊಸ ಹೊಸ ಹೂವನ್ನು ಇಟ್ಟು ಹೋಗುತ್ತಾರೆ.
ನರ್ಸುಗಳ ಬ್ಯಾಚ್ ಗಳು ಬದಲಾಗುತ್ತದೆ. ವೈದ್ಯರುಗಳು ನಿವೃತ್ತ್ರಾಗಿ ಅವರ ಜಾಗಕ್ಕೆ ಹೊಸಬರು ಬರುತ್ತಾರೆ ಆದರೆ ಅರುಣಾರ ಬಗೆಗಿದ್ದ ಕಾಳಜಿ ಕುಂದುವುದಿಲ್ಲ. ಸದ್ಗುರು ವಾಮನರಾವ್ ಪೈ ಅವರ ಭಕ್ತಿಗೀತೆಗಳ ಸಂಗೀತಕ್ಕೆ ಸ್ಪಂದಿಸುತ್ತಿದ್ದ ಅರುಣಾಗೆ 2010 ರಿಂದೀಚೆಗೆ ಆಹಾರವನ್ನು ನಳಿಕೆಗಳ ಮೂಲಕವೇ ನೀಡಬೇಕಾಯಿತು. ತಲೆ, ಬಾಚಿದ್ದು ಸ್ವಚ್ಛಗೊಳಿಸಿದ್ದು ಎಲ್ಲವೂ ಸರದಿಯ ಮೇಲೆ ಶುಶ್ರೂಷಕಿಯರೇ ಮಾಡಿದರು ವರ್ಷಗಳ ಕಾಲ ಹಾಸಿಗೆಯಲ್ಲಿ ಮಲಗಿದ್ದ ಅರುಣಾರ ಬೆನ್ನಿನಲ್ಲಿ ಒಂದೇ ಒಂದು ಹುಣ್ಣೂ ಮೂಡಲು ಬಿಡದ ದಾದಿಯರ ಸೇವೆಗೆ ಪ್ರಶಂಸಿಸದಿರಲಾದೀತೆ?
ಪ್ರತಿ ವರ್ಷ ಹೊಸ ನರ್ಸ್ಗಳ ತಂಡ ಬಂದಾಗ ಅರುಣಾ ಬಳಿ ಕರೆದೊಯ್ದು ಆಕೆಯನ್ನು ಪರಿಚಿಯಿಸಿ, ಆಕೆಯನ್ನು ಪರಿಸ್ಥಿತಿಗೆ ದೂಡಿದ ಘಟನೆಯನ್ನು ವಿವರಿಸಿ ಆಕೆ ನಮ್ಮೊಳಗೊಬ್ಬಳು ಎಂಬುದನ್ನು ಮನವರಿಕೆ ಮಾಡಲಾಗುತ್ತಿತ್ತು.ಆಕೆಯ ಹುಟ್ಟಿದ ಹಬ್ಬವನ್ನೂ ಆಚರಿಸಲಾಗುತ್ತಿತ್ತು!ಇದೆಲ್ಲವೂ ಅಲ್ಲಿನ ದ್ದಿಯರು ಅರುಣಾ ಬಗ್ಗೆ ಇಟ್ಟಿದ್ದ ಪ್ರೀತಿ, ಗೌರವಕ್ಕೆ ಸಾಕ್ಷಿ.

ದಯಾಮರಣದ ಪ್ರಶ್ನೆ
My article about Aruna Shanabhaga
ಅರುಣಾಗೆ ಮಾತನಾಡುವ ಚೇತನವಿರಲಿಲ. ಅವರು ಕೋಮಾದಲ್ಲಿದ್ದು ಕಾಲು ಶತಮಾನವಾಗಿತ್ತು. ಇಂತಹಾ ದಯನೀಯ ಸ್ಥಿತಿಯಲ್ಲಿರುವ ಆಕೆಗೆ ದಯಾಮರಣ ಕೊಡಬೇಕೆಂದು ಕೋರಿ ಪಿಂಕಿ ವಿರಾನಿ ಎನ್ನುವ ಪತ್ರಕರ್ತೆ 2010 ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ದಯಾಮರಣ ನೀಡಲು ನಿರಾಕರಿಸಿದ್ದ ಕೋರ್ಟ್ ಆಕೆಗೆ ನೀಡಲಾಗುತ್ತಿದ್ದ ಚಿಕಿತ್ಸೆಯನ್ನಷ್ಟೆ ನಿಲ್ಲಿಸಲು ಅನುಮತಿಸಿತ್ತು. ಅದರಂತೆ ಕಳೆದ 4 ವರ್ಷಗಳಿಂದ ಅವರಿಗೆ ಯಾವ ಚಿಕಿತ್ಸೆಯನ್ನೂ ನೀಡುತ್ತಿರಲಿಲ್ಲ. ಆದರೆ ಆಸ್ಪತ್ರೆಯ ದಾದಿಯರು ಮಾತ್ರ ಆರೈಕೆ ಮಾಡುವುದು ನಿಲ್ಲಿಸಲಿಲ್ಲ.
ವಿಚಾರವೇನೆಂದರೆ ಅರುಣಾಗೆ ದಯಾಮರಣ ನೀಡಬೇಕೆನ್ನುವ ಕೂಗು ಬಲವಾಗಿ ಕೇಳಬಂದಾಗ ಕೆಇಎಂ ಆಸ್ಪತ್ರೆಯ ನರ್ಸುಗಳು, ವೈದ್ಯರೂ ಅದನ್ನು ಬಲವಾಗಿ ವಿರೋಧಿಸಿದ್ದರು.ಅರುಣಾ ಸಾವಿನ ಬಳಿಕ ಮತ್ತೆ ದಯಾಮರಣದ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ದಯಾಮರಣ ಅಥವಾ ಇಚ್ಚಾಮರಣ ಬೇಕೆ? ಬೇದವೆ? ಎನ್ನುವ ಪ್ರಶ್ನೆ ಮೂಡಿದೆ. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಇನ್ನೂ ಕೆಲವರು ದಯಾಮರಣಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರುತ್ತಲೂ ಇದ್ದಾರೆ. ಏನಾದರೂ ದೇಶದಲ್ಲಿ ದಯಾಮರಣ ಕುರಿತಾದ ಪ್ರಶ್ನೆಯನ್ನು ಮೊದಲ ಬಾರಿಗೆ ಹುಟ್ಟುಹಾಕಿದ ಪ್ರಕರಣ - ಅರುಣಾ ಶಾನಭಗ ಪ್ರಕರಣಾವೆನ್ನುವುದರಲ್ಲಿ ಅನುಮಾನವಿಲ್ಲ.

ಅರುಣಾ ಪುಸ್ತಕ, ಚಲನಚಿತ್ರ
ಮುಂಬೈ ಮೂಲದ ಪತ್ರಕತರ್ತೆ ಪಿಂಕಿ ಬವಿರಾನಿ ಅರುಣಾ ಶಾನಭಾಗರ ಜೀವನ ಕುರಿತ 'ಅರುಣಾಸ್ ಸ್ಟೋರಿ' ಪುಸ್ತಕವನ್ನು ಹೊರತಂದಿದ್ದರು.1998 ರಲ್ಲಿ ಪ್ರಕತಗೊಂಡಿದ್ದ ಪುಸ್ತಕ ಕನ್ನದ, ಹಿಂದಿ, ಮರಾಠಿಯಲ್ಲಿಯೂ ಬಂದಿತ್ತು. ಅರುಣಾ ಬದುಕನ್ನು ಆಧರಿಸಿ 'ಮರೆಯಂ ಪೈಯಂಬೋಲ್' ಮಲಯಾಳಂ ಬಾಷೆಯ  ಚಿತ್ರವೂ ನಿರ್ಮಾಣವಾಗಿತ್ತು.

ಕೀಚಕ ಎಲ್ಲಿ?
ಅರುಣಾ ಶಾನ್ಭಾಗ್ ಮೇಲಿನ ಹಲ್ಲೆ ಆರೋಪಿಯಾಗಿದ್ದ ಪಾತಕಿ ಸೋಹನ್ಲಾಲ್ ಉತ್ತರ ಪ್ರದೇಶದ ಘಾಜಿಯಾಬಾದ್ ಪಾರ್ಪಾ ಎಂಬ ಹಳ್ಳಿಯಲ್ಲಿ ವ್ಯಕ್ತಿ ಕಾರ್ಮಿಕನಾಗಿ ಕೂಲಿ ಕೆಲಸ ಮಾಡಿಕೊಂಡಿದ್ದನು.ತಾನು ಮಾಡಿದ ಕೃತ್ಯಕ್ಕೆ ಅವನಿಗೆ ಪಶ್ಚಾತ್ತಾಪವಾಗಿದೆ "ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ, ಎಲ್ಲವೂ ಆಗಿದ್ದು ಕೋಪದಿಂದ.ನೆನಪುಗಳಿಂದ ನನಗೂ ಸಾಕಾಗಿಹೋಗಿದೆ. ನಾನು ಈಗಲೇ ಸಾಯಬೇಕು...." ಇದು ಆತನ ಮನದ ಮಾತುಗಳು.

ಅರುಣಾ ನೆನಪು ಅಮರ
ವಿನಾಕಾರಣ ಒಂದು ಜೀವಹಾನಿಯಾಗಿದೆ. ಚೂಟಿಯಾಗಿದ್ದು ಕೆಲಸ ಮಾಡುವ  ಸ್ಥಳದಲ್ಲಿ ತನ್ನ ಚುರುಕಾದ ನಡತೆ, ನೇರ ಮಾತುಗಳಿಂದ 'ಚಟಕ್ ಚಾಂದಿನಿ' (ಚುರುಗುಡುವ ಬೆಳದಿಂಗಳು) ಎಂದು ಕರೆಸಿಕೊಂಡಿದ್ದ ಅರುಣಾ ಶಾನಭಾಗ  ಇದೀಗ ತಮ್ಮ 66 ನೇ ವಯಸ್ಸಿನಲ್ಲಿ ಸಹಜ ಸಾವನ್ನು ಕಂಡಿದ್ದಾರೆ.

ಅತ್ಯಾಚಾರಕ್ಕೊಳಗಾಗಿ ಜೀವಚ್ಚವವಾಗಿದ್ದ ಅರುಣಾಗೆ  ಕಡೆಗೂ ಭಗವಂತನೇ ಮರಣವನ್ನು ಕರುಣಿಸಿದ. ಅರುಣಾ ಆತ್ಮಕ್ಕೆ ಶಾಂತಿ ಸಮಾಧಾನಗಳು ದೊರೆಯಲಿ, ಅವರನ್ನು ಇಷ್ಟು ವರ್ಷ ಶುಶ್ರೂಷೆ ಮಾಡಿದ ದಾದಿಯರ ಸೇವಾ ಮನೋಭಾವ ಮುಂದಿನ ಪೀಳಿಗೆಯವರಿಗೆಲ್ಲಾ ಮಾದರಿಯಾಗಿರುತ್ತದೆ. ಮೂಲಕ ಅರುಣಾ ಪ್ರತಿಯೊಬ್ಬರ ಮನದಲ್ಲಿಯೂ ನೆಲೆಸಿರುತ್ತಾರೆ ಎನ್ನಬಹೂದು