Wednesday, February 23, 2022

अहिंसा परमो धर्मः धर्म हिंसा तथैव च: ಈ ಶ್ಲೋಕ ಯಾವ ಧರ್ಮಗ್ರಂಥದಲ್ಲಿಯೂ ಇಲ್ಲ...!

अहिंसा परमो धर्मः धर्म हिंसा तथैव च:  ಈ ಸಾಲು ಯಾವುದೇ ಧಾರ್ಮಿಕ ಗಂಥಗಳಲ್ಲಿರುವ ಶ್ಲೋಕ ಅಲ್ಲ.ಸಂಸ್ಕೃತ ವ್ಯಾಕರಣದಲ್ಲಿ ಉತ್ತಮ ಜ್ಞಾನವನ್ನು ಹೊಂದಿರುವ ಯಾರಾದರೂ 2 ನೇ ಸಾಲು ಶಬ್ದಾರ್ಥದಲ್ಲಿ ಧ್ವನಿಸುವುದಿಲ್ಲ ಎನ್ನುವುದನ್ನು ಪತ್ತೆ ಮಾಡಬಹುದು.


ಮೊದಲ ಸಾಲನ್ನುಮಹಾತ್ಮ ಗಾಂಧೀಜಿಯವರು ‘ಅಹಿಂಸೆಯೇ ಪರಮ ಧರ್ಮ’ ಎಂದು ಉಲ್ಲೇಖಿಸಲು ವ್ಯಾಪಕವಾಗಿ ಬಳಸಿದ್ದಾರೆ.  ಆದರಿದು ಅರ್ಧ ಶ್ಲೋಕ ಮಾತ್ರವೇ ಆಗಿದೆ. ಸಂಪೂರ್ಣಅರ್ಥದಲ್ಲಿ ಆ<ಗ್ಲಪದ ನಾ ವಯಲೆನ್ಸ್ ಗೂ ಸಂಸ್ಕೃತದ ಅಹಿಂಸೆ ಎಂಬ ಪದಕ್ಕೂ ಬಹಳ ದೊಡ್ಡ ವ್ಯತ್ಯಾಸವಿದೆ. ಅಲ್ಲದೆ अहिंसा परमो धर्मः ಎಂಬ ಸೂಕ್ತಿ ಮಹಾಭಾರತದಿಂದ ಬಂದಿರುವುದಾಗಿದೆ. ಈ ನುಡಿಗಟ್ಟು ಮಹಾಭಾರತದ ವಿವಿಧ ಪರ್ವಗಳಲ್ಲಿನೇಕ ಬಾರಿ ಕಾಣಿಸಿಕೊಳ್ಳುತ್ತದೆ ಮತ್ತು ಪ್ರತಿ ಸಾಲುಗಳಲ್ಲಿ  ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ನಿರ್ಣಾಯಕ ವಾಕ್ಯಗಳೊಂದಿಗೆ ಹೇಳಲಾಗಿದೆ. ಅಲ್ಲದೆ ಎಲ್ಲಾ ಸನ್ನಿವೇಶಗಳಲ್ಲಿ ಈ ನುಡಿಗಟ್ಟನ್ನು ಬ್ರಾಹ್ಮಣ, ಸನ್ಯಾಸಿಗಳ ಉಪದೇಶಕ್ಕಾಗಿ ಬಳಸಲಾಗಿದೆ. ಅವರು ಎಂದಿಗೂ  ಆಯುಧಗಳಿಂದ ದೂರವಿರುತ್ತಾರೆ ಮತ್ತು ಸ್ವಯಂ-ಸಾಕ್ಷಾತ್ಕಾರವನ್ನು ಸಾಧಿಸುವ ಸಲುವಾಗಿ ತಪಸ್ವಿಗಳ ಜೀವನ ಅನುಸರಿಸುತ್ತಾರೆ. ಧರ್ಮ ಮತ್ತು ರಾಜ್ಯವನ್ನು ರಕ್ಷಿಸುವ ಕರ್ತವ್ಯಕ್ಕೆ ಬದ್ದವಾಗಿರುವ ರಾಜರು ಯೋಧರಾಗಿದ್ದು ಅವರಿಗೆ ಈ ಸೂಕ್ತಿ ಅನ್ವಯಿಸುವುದಿಲ್ಲ. ಅಲ್ಲದೆ ತನ್ನ ಕುಟುಂಬ ಮತ್ತು ತನ್ನ ಸುತ್ತಲಿನ ಸಮಾಜವನ್ನು ರಕ್ಷಿಸುವ ಕರ್ತವ್ಯವನ್ನು ಹೊಂದಿರುವ ಸಾಮಾನ್ಯ ಮನುಷ್ಯನಿಗೆ ಇದು ಅನ್ವಯಿಸುವುದಿಲ್ಲ.

ಆದಿ ಪರ್ವದಲ್ಲಿ - ಸೂತ ಮುನಿಯು ಸರ್ಪವೊಂದು ಸಹಸ್ರಪಪದ  ಎಂಬ ಬ್ರಾಹ್ಮಣನಾಗಿ ರೂಪಾಂತರಗೊಳ್ಳುವ ಕಥೆಯನ್ನು ಹೇಳುತ್ತಿದ್ದಾನೆ ಮತ್ತು ತನ್ನ ಪತ್ನಿ ಹಾವಿನಿಂದ ಕಚ್ಚಲ್ಪಟ್ಟದ್ದರಿಂದ  ಹಾವುಗಳನ್ನು ಕೊಲ್ಲಲು ಹೊರಟಿದ್ದ ರುರು ಎಂಬ ಬ್ರಾಹ್ಮಣನಿಗೆ ಈ ಶ್ಲೋಕವನ್ನು ಹೇಳುತ್ತಾನೆ.

अहिंसा परमो धर्मः सर्वप्राणभृतां स्मृतः ।

तस्मात्प्राणभृतः सर्वान्न हिंस्याद्ब्राह्मणः क्वचित् ।। (1.11.12) [ 1 ನೇ (ಆದಿ) ಪರ್ವ, 11 ನೇ ಅಧ್ಯಾಯ, 12 ನೇ ಶ್ಲೋಕ]

ನಿಸ್ಸಂಶಯವಾಗಿ ಅಹಿಂಸೆಯು ಇತರರ ಜೀವವನ್ನು ಉಳಿಸುವುದಕ್ಕಾಗಿನ  ಅತ್ಯುನ್ನತ ಸದ್ಗುಣವಾಗಿದೆ. ಆದ್ದರಿಂದ ಬ್ರಾಹ್ಮಣನು ಯಾವುದೇ ಜೀವಿಯ ಪ್ರಾಣವನ್ನು ತೆಗೆಯಬಾರದು.

ವನಪರ್ವದಲ್ಲಿ - ಮಾರ್ಕಂಡೇಯ ಮುನಿಯು ಮಿಥಿಲೆಯಲ್ಲಿ ವಾಸಿಸುತ್ತಿದ್ದ ಕೌಶಿಕ ಎಂಬ ಬ್ರಾಹ್ಮಣ ಮತ್ತು ಧರ್ಮವ್ಯಾಧ ಎಂಬ ಕೋಳಿ ವ್ಯಾಪಾರಿಯ ನಡುವಿನ ಚರ್ಚೆಯನ್ನು ವಿವರಿಸುತ್ತಾನೆ. ಕೌಶಿಕನು ಕೋಳಿ ವ್ಯಾಪಾರಿಯಲ್ಲಿ  ಕೇಳುತ್ತಾನೆ ‘ಸದ್ಗುಣವೆಂದರೇನು ಎಂದು ನಾನು ಹೇಗೆ ತಿಳಿಯಲಿ’ ಅದಕ್ಕೆ ಧರ್ಮವ್ಯಾಧನು ಉತ್ತರಿಸುತ್ತಾನೆ:

अहिंसा सत्यवचनं सर्वभूतहितं परम

अहिंसा परमॊ धर्मः स च सत्ये परतिष्ठितः

सत्ये कृत्वा परतिष्ठां तु परवर्तन्ते परवृत्तयः ।। (3.198.69)

ಪವಿತ್ರ ಪುರುಷರಲ್ಲಿ, ಸದ್ಗುಣವನ್ನು ಮೂರು ವಿಧಗಳಲ್ಲಿ ತೋರಿಸಲಾಗುತ್ತದೆ  ವೇದಗಳಲ್ಲಿ ಅಳವಡಿಸಲಾಗಿರುವ ಮಹಾನ್ ಸದ್ಗುಣ, ಇನ್ನೊಂದು ಧರ್ಮ ಶಾಸ್ತ್ರಗಳಲ್ಲಿ ಹೇಳಲಾಗಿರುವ  ಸದ್ಗುಣ ಮತ್ತು ಜ್ಞಾನ ಸಂಪಾದನೆ, ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆಗಳ ಮೂಲಕ ಪಡೆಯುವ ಸದ್ಗುಣ  ಸತ್ಯತೆ, ಸಹನೆ, ಶುದ್ಧತೆ ಮತ್ತು ನೇರ ನಡೆ ಇವು ಸದ್ಗುಣಗಳ ರೂಪಗಳಗಿದೆ.

ಅನುಶಾಸನ ಪರ್ವದಲ್ಲಿ - ಯುಧಿಷ್ಠಿರನು ಬಾಣಗಳ ಹಾಸಿಗೆಯ ಮೇಲಿರುವ ಭೀಷ್ಮನಿಂದ ಅಂತಿಮ ಸೂಚನೆಗಳನ್ನು ಪಡೆಯುತ್ತಿದ್ದಾನೆ, ಯುಧಿಷ್ಠಿರನು ಭೀಷ್ಮನನ್ನು ಕೇಳುತ್ತಾನೆ -

अहिंसा परमॊ धर्म इत्य उक्तं बहुशस तवया ।

शराथ्धेषु च भवान आह पितॄन आमिष काङ्क्षिणः ।। (13.116.1)

ಗಾಯ ಅಥವಾ ವ್ರಣದಿಂದ ದೂರವಿರುವುದು ಅತ್ಯುನ್ನತ ಧರ್ಮ ಎಂದು ನೀವು ಹಲವು ಬಾರಿ ಹೇಳಿದ್ದೀರಿ. ಆದಾಗ್ಯೂ, ಪಿತೃಗಳ ಗೌರವಾರ್ಥವಾಗಿ ಆಚರಿಸಲಾಗುವ ಶ್ರಾದ್ಧಗಳಲ್ಲಿ, ವ್ಯಕ್ತಿಗಳು ತಮ್ಮ ಒಳಿತಿಗಾಗಿ ವಿವಿಧ ರೀತಿಯ ಮಾಂಸವನ್ನು ಅರ್ಪಿಸಬೇಕು.

ಭೀಷ್ಮನು ಇದಕ್ಕೆ ವಿವರವಾಗಿ ಉತ್ತರಿಸಿದ್ದಾನೆ.ಈ  ಎರಡು ಶ್ಲೋಕಗಳಲ್ಲಿ ಅದನ್ನು ಮತ್ತೆ ಉಲ್ಲೇಖಿಸಲಾಗಿದೆ.

अहिंसा परमॊ धर्मस्तथाहिंसा परॊ दमः।

अहिंसा परमं दानमहिंसा परमं तपः ।।

अहिंसा परमॊ यज्ञस तथाहिस्मा परं बलम

अहिंसा परमं मित्रम अहिंसा परमं सुखम

अहिंसा परमं सत्यम अहिंसा परमं शरुतम ।। (13.117.37,38)

ಅಹಿಂಸೆ ಅತ್ಯುನ್ನತ ಧರ್ಮ, ಅಹಿಂಸೆ ಅತ್ಯುನ್ನತ ಸ್ವಯಂ ನಿಯಂತ್ರಣ,

ಅಹಿಂಸೆಯೇ ಶ್ರೇಷ್ಠ ಉಡುಗೊರೆ , ಅಹಿಂಸೆಯೇ ಅತ್ಯುತ್ತಮ ಅಭ್ಯಾಸ,

ಅಹಿಂಸೆಯೇ ಅತ್ಯುನ್ನತ ತ್ಯಾಗ, ಅಹಿಂಸೆಯೇ ಶ್ರೇಷ್ಠ ಶಕ್ತಿ,

ಅಹಿಂಸೆಯೇ ಶ್ರೇಷ್ಠ ಸ್ನೇಹಿತ, ಅಹಿಂಸೆಯೇ ಶ್ರೇಷ್ಠ ಸಂತೋಷ,

ಅಹಿಂಸೆ ಅತ್ಯುನ್ನತ ಸತ್ಯ, ಮತ್ತು ಅಹಿಂಸೆಯೇ ಶ್ರೇಷ್ಠ ಬೋಧನೆ.

ಆದರೆ ರಾಮಾಯಣ ಮತ್ತು ಮಹಾಭಾರತಗಳೆರಡೂ ಯುದ್ಧ ಮತ್ತು ಆತ್ಮರಕ್ಷಣೆಯನ್ನು ಸಮರ್ಥಿಸುವ ಸಂದರ್ಭಗಳ ಕುರಿತು ಮಾತನಾಡುವ ಬಹು ಸ್ಲೋಕಗಳನ್ನು ಹೊಂದಿವೆ. ಅನುಶಾಸನ ಪರ್ವದಲ್ಲಿ ಅಂದಿನ ಕಾಲದ  ಅಗ್ರಗಣ್ಯ ಯೋಧ ಭೀಷ್ಮನು ಅಹಿಂಸೆಯ ಬಗ್ಗೆ ಮಾತನಾಡುತ್ತಾನೆ ಏಕೆಂದರೆ ಅವನು ತನ್ನ ಕರ್ತವ್ಯದ ಹಾದಿಯಲ್ಲಿ ಮಾತ್ರವೇ ಹೋರಾಟ ನಡೆಸಿದ್ದಾನೆ.

ಅಹಿಂಸೆಯ ವ್ಯಾಖ್ಯಾನದಲ್ಲಿ ಒಂದು ಹೀಗಿದೆ-

वेदोक्तेन प्रकारेण विना सत्यं तपोधन ।

कायेन मनसा वाचा हिंसाऽहिंसा न चान्यथा ॥

आत्मा सर्वगतोऽच्छेद्यो न ग्राह्य इति मे मतिः ।

स चाहिंसा वरा प्रोक्ता मुने वेदान्तवेदिभिः ॥ ( 1.7,8 दर्शनोपनिषत्) ದರ್ಶನೋಪನಿಷತ್) ದರ್ಶನ ಉಪನಿಷತ್ ಅಥವಾ ಜಬಲ್ ದರ್ಶನ ಉಪನಿಷದ್ ಅಥವಾ ಸಂವೇದದ ಯೋಗ ದರ್ಶನ ಉಪನಿಷತ್.

ವಾಸ್ತವವಾಗಿ, ವೇದಗಳ  ಸೂಚನೆಗಳಿಗೆ ಅನುಸಾರವಾಗಿ ದೇಹ, ಮನಸ್ಸು ಅಥವಾ ಬಾಯಿಮಾತಿನ ಮೂಲಕ ಹಿಂಸೆಗೆ ಒಳಗಾಗದಿರುವುದು ಅಹಿಂಸೆ: ಇಲ್ಲವಾದಲ್ಲಿ ಅಲ್ಲ. ಓ ಋಷಿ! ಆತ್ಮವು ಎಲ್ಲವನ್ನೂ ವ್ಯಾಪಿಸುತ್ತದೆ ಮತ್ತು ಅದು ಅವಿಭಾಜ್ಯವಾಗಿದೆ ಮತ್ತು ಇಂದ್ರಿಯಗಳಿಗೆ ಅದನ್ನು ಪ್ರವೇಶಿಸಲು/ಕಲ್ಪಿಸಲು ಸಾಧ್ಯವಿಲ್ಲ ಎನ್ನುವುದು ದೃಢವಾದ ನಂಬಿಕೆ ವೇದಾಂತವನ್ನು ತಿಳಿದವರು ಈ ನಂಬಿಕೆಯನ್ನು ಅಹಿಂಸೆಯ ಅತ್ಯುತ್ತಮ ಆಧಾರವೆಂದು ಹೇಳುತ್ತಾರೆ.

ಇಲ್ಲಿ, ಅಹಿಂಸೆಯು  ಯೋಗಿಯ ಮೂಲಭೂತ ನೀತಿಗಳನ್ನು (ಯಮ) ವಿವರಿಸುವ ಸಂದರ್ಭದಲ್ಲಿದೆ. ಇದು ರಾಜ, ಸೈನಿಕ, ಉದ್ಯಮಿ, ರೈತ ಇತ್ಯಾದಿ ಜನವರ್ಗಗಳಿಗೆ  ಅನ್ವಯಿಸುವುದಿಲ್ಲ.

ಒಬ್ಬ ವ್ಯಾಪಾರಿ ತನ್ನ ಅಂಗಡಿಯಿಂದ ಕಳ್ಳ ಕದಿಯುವುದನ್ನು ನೋಡಿಯೂ  ಕುಳಿತುಕೊಂಡು 'ಅಹಿಂಸಾ ಪರಮೋ ಧರ್ಮಃ' ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ರೈತ ತನ್ನ ಬೆಳೆಯನ್ನು ಕೀಟಗಳಿಂದ ರಕ್ಷಿಸದಿರಲು  ಸಾಧ್ಯವಿಲ್ಲ.

ಈ ಅನಗತ್ಯ 'ಅಹಿಂಸಾ' ಪದ್ಧತಿಗಳಿಂದ ರಾಜರು ಬೌದ್ಧ ಮತ್ತು ಜೈನ ಸನ್ಯಾಸಿಗಳ ಮಾತಿಗೆ ಕಟ್ಟುಬಿದ್ದು ದುರ್ಬಲರಾದರು. ತ್ತು ಭಾರತವನ್ನು ಆಕ್ರಮಣಕಾರರು ವಶಪಡಿಸಿಕೊಳ್ಳಲು ಅವಕಾಶವಾಗಿತ್ತು. ಒಬ್ಬ ರಾಜನು ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲನಾದರೆ ಮತ್ತು ದುಷ್ಟರನ್ನು ಶಿಕ್ಷಿಸದಿದ್ದರೆ, ಅವನ ದೇಶವು ಸಂಪೂರ್ಣ ಅವ್ಯವಸ್ಥೆಯ ಹಂತ ತಲುಪುತ್ತದೆ. ಕೊಲೆಗಾರನನ್ನು ಗಲ್ಲಿಗೇರಿಸುವುದು ರಾಜನಿಗೆ ಅಹಿಂಸೆ. ಹಲವರ ಪ್ರಾಣ ತೆಗೆಯುವ ಮನುಷ್ಯನನ್ನು ಕೊಲ್ಲುವುದು ಅಹಿಂಸೆ. ನಿಜವಾದ ಸನ್ಯಾಸಿ ತನ್ನ ಪ್ರಾಣಕ್ಕೆ ಅಪಾಯವಿರುವಾಗಲೂ ತನ್ನನ್ನು ತಾನು ರಕ್ಷಿಸಿಕೊಳ್ಳಬಾರದು. ಸನ್ಯಾಸಿ ಎಂದರೆ ತನ್ನ ದೇಹದೊಂದಿಗೆ ಸಹವಾಸ ಮಾಡದೆಯೇ  ತನ್ನನ್ನು ಆತ್ಮದೊಂದಿಗೆ ಗುರುತಿಸಿಕೊಳ್ಳುವವನಾಗಿದ್ದಾನೆ.

"ಅಹಿಂಸಾ ಪರಮೋ ಧರ್ಮಃ"  ಎಂಬ ವಾಕ್ಯ ಭಗವದ್ಗೀತೆಯಲ್ಲಿಲ್ಲ!

ಗೀತೆಯಲ್ಲಿ ಅಹಿಂಸೆ  ಪದವನ್ನು ನಾಲ್ಕು ಬಾರಿ ಉಲ್ಲೇಖಿಸಲಾಗಿದೆ.

ತಾನು ಹತಾಶನಾಗಿದ್ದೇನೆ ಮತ್ತು ಯುದ್ಧ ಮಾಡಲು ಇಷ್ಟವಿಲ್ಲ ಎಂದು ಅರ್ಜುನನು ಕೃಷ್ಣನಿಗೆ ಹೇಳಿದಾಗ, ಶ್ರೀಕೃಷ್ಣನು ಅರ್ಜುನನಿಗೆ ಎದ್ದು ಯುದ್ಧ ಮಾಡುವಂತೆ ಪದೇ ಪದೇ ಹೇಳುತ್ತಾನೆ.

अथ चेत्त्वमिमं धर्म्यं संग्रामं न करिष्यसि

ततः स्वधर्मं कीर्तिं च हित्वा पापमवाप्स्यसि [Gita 1.20]

ನೀನು ಈ ಧರ್ಮಯುದ್ಧವನ್ನು ಮಾಡದಿದ್ದರೆ ನಿನ್ನ ಕರ್ತವ್ಯಗಳನ್ನು ನಿರ್ಲಕ್ಷಿಸುವುದಕ್ಕಾಗಿ ನೀನು ಖಂಡಿತವಾಗಿಯೂ ಪಾಪಗಳನ್ನು ಅನುಭವಿಸುವೆ. ಹಾಗಾಗಿ ಓರ್ವ ಸಾಹಸಿಯಾಗಿ ನಿನ್ನ ಖ್ಯಾತಿ ಮಣ್ಣುಗೂಡಲಿದೆ.

ಕೃಷ್ಣನು ‘ಅಹಿಂಸಾ ಪರಮೋ ಧರ್ಮ’ ಎಂದು ಹೇಳಿದ್ದರೆ ಯುದ್ಧವು ಪ್ರಾರಂಭವಾಗುವ ಮೊದಲೇ ಕೊನೆಗೊಳ್ಳುತ್ತಿತ್ತು ಏಕೆಂದರೆ ಯುದ್ಧದ ಅಗತ್ಯವಿಲ್ಲ ಏಕೆಂದರೆ ಅಹಿಂಸೆಯೇ ಶ್ರೇಷ್ಠ ಮತ್ತು ಪಾಂಡವರು ಕೌರವರು ತಮ್ಮ ಮೇಲೆ ಮಾಡಿದ ಪ್ರತಿಯೊಂದು ದೌರ್ಜನ್ಯವನ್ನು ಕ್ಷಮಿಸಬೇಕು ಎಂದು ಕೃಷ್ಣ ಬೋಧಿಸುತ್ತಿದ್ದ. “ಅಹಿಂಸಾ ಪರಮೋ ಧರ್ಮಃ” ನಿವೃತ್ತಿ ಮಾರ್ಗವನ್ನು ತುಳಿಯುವ ಸನ್ಯಾಸಿಗಳು ಮಾತ್ರ ಅಭ್ಯಾಸ ಮಾಡಬೇಕಾಗಿರುವ ಮಾತು. ಇದನ್ನು ಗೃಹಸ್ಥ  ಕಟ್ಟುನಿಟ್ಟಾಗಿ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಅಪರಾಧಿಗಳನ್ನು ಶಿಕ್ಷಿಸುವುದು ಮತ್ತು ದೈಹಿಕ ಹಿಂಸಾಚಾರದ ಮೂಲಕ ಅವರಿಂದ ಮಾಹಿತಿಯನ್ನು ಪಡೆಯುವುದು ಪೊಲೀಸರ ಕರ್ತವ್ಯ.

ಆತ್ಮರಕ್ಷಣೆಗಾಗಿ ಮಾಡಿದ ಕೊಲೆ ಅಪರಾಧವಲ್ಲ ಎಂದು ಕಾನೂನು ಕೂಡ ಘೋಷಿಸಿದೆ.

परित्राणाय साधूनां विनाशाय च दुष्कृताम्

धर्मसंस्थापनार्थाय सम्भवामि युगे युगे |

ಧರ್ಮನಿಷ್ಠರನ್ನು ಬಿಡುಗಡೆ ಮಾಡಲು ಮತ್ತು ದುಷ್ಕರ್ಮಿಗಳನ್ನು ನಾಶಮಾಡಲು, ಹಾಗೆಯೇ ಧರ್ಮದ ತತ್ವಗಳನ್ನು ಮರುಸ್ಥಾಪಿಸಲು, ನಾನು ಯುಗ ಯುಗಗಳಲ್ಲಿಯೂ  ಕಾಣಿಸಿಕೊಳ್ಳುತ್ತೇನೆ. 

ಅಹಿಂಸೆಯು ಎಲ್ಲರಿಗೂ ಅನ್ವಯಿಸಬಹುದಾದ ಶ್ರೇಷ್ಠವಾದ ಧರ್ಮವಲ್ಲ ಮತ್ತು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನ ಅಥವಾ ಅವನಂತಹಾ ಯೋಧನಿಗೆ  ಖಂಡಿತವಾಗಿಯೂ ಅಲ್ಲ ಎಂದು ಕೃಷ್ಣ ಸ್ಪಷ್ಟವಾಗಿ ಹೇಳಿದ್ದಾನೆ.

No comments:

Post a Comment