Sunday, January 23, 2022

ಇತ್ತೀಚೆಗೆ ನಾನು ಓದಿದ ಮೂರು ಮಹತ್ವದ ಕೃತಿಗಳು

ನಿವೃತ್ತ ಡಿಜಿಪಿ  ಪ್ರಮುಖ ಲೇಖಕರಲ್ಲಿ ಒಬ್ಬರಾಗಿರುವ ಡಿವಿ ಗುರುಪ್ರಸಾದ್ ವರ "ಪ್ರತೀಕಾರ" ಪುಸ್ತಕ ನಾನು ಇತ್ತೀಚೆಗೆ ಓದಿದ ಪುಸ್ತಕಗಳ ಪೈಕಿ ಗಮನ ಸೆಳೆದ ಪುಸ್ತಕವಾಗಿದೆ. ಇಸ್ರೇಲಿನ ಗೂಢಚಾರಿ ಸಂಸ್ಥೆ ಮೊಸಾದ್ ಹಾಗೂ ಅದರ ಕಾರ್ಯಾಚರಣೆಗಳ ಕುರಿತಂತೆ ಕನ್ನಡದಲ್ಲಿ ಇಷ್ಟು ವಿಸ್ಕೃತವಾಗಿ ಬೇರಾವ ಲೇಖಕರೂ ಇದುವರೆಗೆ ಬರೆದಿಲ್ಲ ಎಂದು ನಾನು ಭಾವಿಸಿದ್ದೇನೆ. 

ತನ್ನ ಸುತ್ತಲೂ ಬದ್ದ ವೈರಿ ರಾಶ್ಃಟ್ರಗಳನ್ನು ಹೊಂದಿದ್ದರೂ ಒಂದೆ ದೇಶ ತನ್ನ ರಕ್ಷಣೆಯನ್ನು ಮಾಡಿಕೊಳ್ಳುವುದರೊಡನೆಯೇ ತನ್ನ ವಿರುದ್ಧ ನಡೆದ ಎಲ್ಲಾ ಪಿತೂರಿಗಳಿಗೂ ಯಾವ ರೀತಿಯಲ್ಲಿ ನೇರಾ ನೇರ ಪ್ರತೀಕಾರ ತೆಗೆದುಕೊಳ್ಳುತ್ತದೆ ಎನ್ನಲು ಇಸ್ರೇಲ್ ನಮ್ಮ ಮುಂದಿರುವ ಸ್ಪಷ್ಟ ಉದಾಹರಣೆ. ಇಸ್ರೇಲ್ ತಾನು ಒಂದು ಪುಟ್ಟ ದೇಶವಾಗಿದ್ದರೂ ತನ್ನ ಕೆಲಸಗಳ ಮೂಲಕ ವಿಶ್ವದ ಅಗ್ರ ದೇಶಗಳ ಸಾಲಿನಲ್ಲಿ ನಿಲ್ಲಬಲ್ಲ ಸಾಮರ್ಥ್ಯವನ್ನು ತೋರಿಸಿದೆ. ಅಲ್ಲಿನ ಗೂಢಚರ ವ್ಯವಸ್ಥೆ ಎಷ್ಟು ಬಲವಾಗಿದೆ ಎಂದರೆ ಯಾವುದೇ ರಾಷ್ಟ್ರ ಅದರ ವಿರುದ್ಧ ಪಿತೂರಿ ನಡೆಸುವ ಮುನ್ನ ಎರಡೆರಡು ಬಾರಿ ಯೋಚಿಸಬೇಕಿದೆ. 

ಗುರುಪ್ರಸಾದ್ ಅವರು ತಮ್ಮ "ಪ್ರತೀಕಾರ" ದಲ್ಲಿ ವಿಶ್ವದ ಪ್ರಸಿದ್ಧ ಗೂಢಚಾರಿ ಸಂಘಟನೆ ಮೊಸಾದ್ ಮಾಡಿದ ಆಪರೇಷನ್ ರಾತ್ ಅಪ್ ಗಾಡ್,  ಆತಂಕವಾದಿ ನಾಯಕರ ಹತ್ಯೆ, ಇರಾನ್ ಇರಾಕ್, ಸಿರಿಯಾ ಅನುಸ್ಥಾವರಗಳ ಮೇಲಿನ ದಾಳಿಗಳು, ಮ್ಯೂನಿಕ್ ಒಲಂಪಿಕ್ ನಲ್ಲಿ ನಡೆದ ಇಸ್ರೇಲಿ ಕ್ರೀಡಾಪಟುಗಳು ಮೇಲಿನ ದಾಳಿ ಆ ನಂತರ ನಡೆದ ಮೊಸಾದ್ ಕಾರ್ಯಾಚರಣೆಗಳ ಬಗೆಗೆ ವಿವರವಾಗಿ ಬರೆದಿದ್ದಾರೆ.  ಅಲ್ಲದೆ ಮೊಸಾದ್ ನ. ಗೂಡಚಾರಿ  ಎಲಿ ಕೋಹೆನ್ .ಪಿ ಎಲ್ ಓ .  / ಬಿ.ಎಸ್.ಓ ಹಾಗೂ ಪಿ.ಎಫ್.ಎಲ್.ಪಿ. ಉಗ್ರ ಸಂಘಟನೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

 ಇಂತಹಾ ಇಸ್ರೇಲ್ ನಿಂದ ನಾವು (ಭಾರತ ಹಾಗೂ ಭಾರತೀಯರು) ಕಲಿಬಹುದಾದ ಸಾಕಷ್ಟು ಅಂಶಗಳಿದೆ ಎನ್ನುವುದರ ಬಗ್ಗೆ ಸಹ ಲೇಖಕರು ಸೂಚಿಸಿದ್ದಾರೆ. ಉದಾಹರಣೆಗೆ ಕಂದಹಾರ್ ವಿಮಾನ ಅಪಹರಣವಾಗಿದ್ದಾಗ ಭಾರತ ಸರ್ಕಾರ ತೆಗೆದುಕೊಂಡ ನಿಲುವು ಹಾಗೂ ಇಸ್ರೇಲ್ ಗೆ ಸೇರಿದ್ದ ವಿಮಾನಗಳ ಸಾಲು ಸಾಲು ಅಪಹರಣ ನಡೆದಾಗ ಆ ರಾಷ್ಟ್ರ  ತೆಗೆದುಕೊಂಡ ತೀರ್ಮಾನಗಳು ಹೇಗೆ ಭಿನ್ನವಾಗಿದೆ ಎನ್ನುವುದನ್ನು ನಾವು ಕಲಿಯಬಹುದು. 

ಒಟ್ಟೂ ೧೩ ಅಧ್ಯಾಯಗಳಲ್ಲಿ ಇಸ್ರೇಲ್ ರಾಷ್ಟ್ರ ಹಾಗೂ ಮೊಸಾದ್ ಕುರಿತ ಕಿರುಪರಿಚಯದಿಂದ ಪ್ರಾರಂಭಿಸಿ ಮೊಸಾದ್ ಗೆ ಮುಖಭಂಗವಾಗಿದ್ದ ಎರಡು ಕಾರ್ಯಾಚರಣೆಗಳ ವರೆಗೆ ಸಾಕಷ್ಟು ಮಾಹಿತಿಗಳಿದೆ. ಅವುಗಳಲ್ಲಿ "ಅಡಾಲ್ಫ್ ಐಕ್ ಮನ್ ಮೇಲಿನ ಪ್ರತೀಕಾರ", "ಎಲಿ ಕೊಹೇನ್", "ಮ್ಯೂನಿಚ್ ಒಲಂಪಿಕ್ ಘಟನೆ". "ಆಪರೇಷನ್ ಎಂಟಬೇ" ಸೇರಿದಂತೆ ಹಲವಾರು ಪ್ರಮುಖ ಅಧ್ಯಾಯಗಳಿದ್ದು ಇವೆಲ್ಲವೂ ಒಂದು ರೀತಿಯಲ್ಲಿ ಇಸ್ರೇಲ್ ನ ಇತಿಹಾಸದ ಜತೆಜತೆಗೆ ೧೯೪೫ರ ಎರಡನೇ ವಿಶ್ವ ಯುದ್ಧದ ನಂತರದ ಜಾಗತಿಕ ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತದೆ. ಏಕೆಂದರೆ ಗುರುಪ್ರಸಾದ್ ಅವರ ಪುಸ್ತಕದಲ್ಲಿ ೧೯೪೫ರಿಂದ ಹಿಡಿದು ೨೦೨೧ರವರೆಗೆ(ಇರಾನ್ ಅಣುಸ್ಥಾವರಗಳ ಮೇಲಿನ ಇಸ್ರೇಲ್ ದಾಳಿ) ವರೆಗೆ ಎಲ್ಲಾ ವಿವರಗಳಿದೆ..

ಇನ್ನು ಗುರುಪ್ರಸಾದ್ ಅವರು ಈ ಪುಸ್ತಕ ಬರೆಯುವ ಮುನ್ನ ತಾವು ನಡೆಸಿದ್ದ ಅಧ್ಯಯನ ಆಳ ವಿಸ್ತಾರಗಳ ಬಗ್ಗೆ ಹೇಳಲೇ ಬೇಕು. ಸ್ವತಃಅ ಅವರೇ ಇಸ್ರೇಲ್, ಪ್ಯಾಲಸ್ತೈನ್, ಜೆರುಸಲೆಂ ಸೇರಿ ನಾನಾ ಪ್ರದೇಶಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ ಬರೆದ ಪುಸ್ತಕವಾಗಿರುವುದರಿಂದ ಕನ್ನಡ ಸಾಹಿತ್ಯಕ್ಕೆ, ಪುಸ್ತಕ ಲೋಕಕ್ಕೆ ಇದೊಂದು ಅಮೂಕ್ಲ್ಯ ಕೊಡುಗೆ ಆಗಬಲ್ಲದು. ಇನ್ನು ಪುಸ್ತಕ ಓದುತ್ತಿದ್ದರೆ ಅದೊಂದು ಪತ್ತೇದಾರಿ ಕಥಾನಕದಂತೆ ಭಸವಾಗುವುದರಿಂದ ಓದುವವರಿಗೆ ಯಾವ ಕಾರಣಕ್ಕೂ ಸುದ್ದಿ ವರದಿಯ ಆಧಾರಿತ ಲೇಖನ ಓದಿದ ಅನುಭವವಾಗುವುದಿಲ್ಲ ಅಬ್ದಲಿಗೆ ಒಂದು ಉತ್ತಮ ಕಥೆ ಓದಿದ ಅನುಭವವಾಗುತ್ತದೆ. ಆ ಪ್ರಕಾರವಾಗಿ ಪುಸ್ತಕ ಸಾಮಾನ್ಯ ಓದುಗ ಸಹ ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಎನಿಸಿದೆ.

ಇದೇ ವೇಳೆ ನಾನು ಇತ್ತೀಚೆಗೆ ಓದಿದ ಇನ್ನೆರಡು ಪುಸ್ತಕಗಳ ಬಗ್ಗೆ ಎರಡು ಮಾತುಗಳನ್ನಿಲ್ಲಿ ಹೇಳಬಯಸುತ್ತೇನೆ. ಅದರಲ್ಲಿ ಒಂದು ಸಂತೋಷ್ ಕುಮಾರ್ ಮೆಹಂದಳೆ ಅವರ "ಅಬೋಟ್ಟಾಬಾದ್" ಹಾಗೂ ಇನ್ನೊಂದು ಎಸ್. ಉಮೇಶ್ ಅವರ "ಸಿಯಾಚಿನ್" ಈ ಮೇಲಿನ ಎರಡೂ ಪುಸ್ತಕಗಳು ಕನ್ನಡದ ಮಟ್ಟಿಗೆ ಮಹತ್ವದ ಪುಸ್ತಕಗಳೆಂದು ನಾನು ಭಾವಿಸುತ್ತೇನೆ. "ಅಬೋಟ್ಟಾಬಾದ್" ನಲ್ಲಿ ಉಗ್ರ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಜೀವನ ಕೇಂದ್ರವಾಗಿರಿಸಿಕೊಂಡು ಬರೆಯಲಾದ ಕಥೆ ಇದ್ದರೂ ಜಗತ್ತಿನಲ್ಲಿ ಮುಸ್ಲಿಂ ಉಗ್ರವಾದ ಬೆಳೆದು ಬಂದ ರೀತಿಯನ್ನು ಸುವಿವರ ಆಗಿ ಕಟ್ಟಿಕೊಡಲಾಗಿದೆ. ಜತೆಗೆ ಲಾಡೆನ್ ನನ್ನು ಹಣಿಯಲು ಅಮೆರಿಕಾ ಪಡೆ ನಡೆಸಿದ ಕಾರ್ಯಾಚರ್ಣೆ ತಂತ್ರಗಳ ವಿವರಣೆಗಳು ಸಹ ಅತ್ಯಂತ ಸ್ಪಷ್ಟ ಹಾಗೂ ಸುಂದರವಾಗಿ ಮೂಡಿ ಬಂದಿದೆ. ಇನ್ನು "ಸಿಯಾಚಿನ್" ನಲ್ಲಿ ಉಮೇಶ್ ಅವರು ತಾವು ಭಾರತೀಯ ಸೈನಿಕರು ಸಿಯಾಚಿನ್ ಎಂಬ ಏನೂ ಬೆಳೆಯದ ಬರಡುಭೂಮಿಯ ರಕ್ಷಣೆಗಾಗಿ ಹೇಗೆ ಹಗಲಿರುಳು ಹೆಣಗುತ್ತಾರೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಅಲ್ಲದೆ ಕರುನಾಡ ಹೆಮ್ಮೆ ಹನುಮಂತಪ್ಪ ಕೊಪ್ಪದ್ ಅವರ ವೀರತ್ವದ ಬಗ್ಗೆ ಸಹ ವಿವರವಾಗಿ ಮಾಹಿತಿ ನೀಡಿದ್ದಾರೆ, ಯಾರೇ ಆದರೂ ಈ ಪುಸ್ತಕವನ್ನೊಮ್ಮೆ ಓದಿದರೆ ನಮಗೇ ಸಿಯಾಚಿನ್ ಗೆ ಹೋಗಿ ಬಂದಷ್ಟು ಅನುಅಭವವಾಗುವುದಲ್ಲದೆ ಭಾರತೀಯ ಸೈನಿಕರು, ಸೇನೆಯ ಮೇಲೆ ಅಪಾರ ಗೌರವ ಮೂಡುತ್ತದೆ. ನಾವು ಭಾರತೀಯರೆಂದು ಹೇಳಿಕೊಳ್ಲಲು ಹೆಮ್ಮೆ ಎನಿಸುತ್ತದೆ.

ಒಟ್ಟಾರೆ ಇಂತಹಾ ಪುಸ್ತಕಗಳನ್ನು ನೀಡೀದ ಮೂವರು ಲೇಖಕರಿಗೆ ನನ್ನ ಅನಂತ ನಮಸ್ಕಾರಗಳು.



No comments:

Post a Comment