Thursday, September 03, 2020

ವಿಶ್ವಾಮಿತ್ರ ಗುರುತಿಸಿದ ವಿಶ್ವದ ದಕ್ಷಿಣ ಬಿಂದು - ತ್ರಿಶಂಕುವಿನ ಸ್ವರ್ಗದ ಕಥೆ!!!

 ವಿಶ್ವಾಮಿತ್ರ "ಬ್ರಹ್ಮರ್ಶಿ" ಎಂದು ಕರೆಯಲ್ಪಟ್ಟ ನಂತರ ಸಹ ವಸಿಷ್ಟ, ಇಂದ್ರಾದಿಗಳಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾನೆ. ವಿಶ್ವಾಮಿತ್ರನ ಹೊಸ, ಆಧುನಿಕ ಎನ್ನಬಹುದಾದ ಆಲೋಚನೆಗಳನ್ನು ಒಪ್ಪಿಕೊಳ್ಳಲು ವಸಿಷ್ಟ, ಇಂದ್ರಾದಿಗಳು ಸಿದ್ದವಿರಲಿಲ್ಲ. ಇದನ್ನು ನಾವು ಸಂಪ್ರಧಾಯಿಕ ಹಾಗೂ ಆಧುನಿಕ ಆಲೋಚನೆಗಳ ಸಂಘರ್ಷ ಎಂದೂ ಸಹ ಕರೆಯಬಹುದು.  ವಿಶ್ವಾಮಿತ್ರ ತ್ರಿಶಂಕುವಿಗಾಗಿ ಸೃಷ್ಟಿಸಿದ ಸ್ವರ್ಗದ ಹಿಂದಿರುವ ಕಥೆಯೂ ಇದೇ ಆಗಿದೆ! ಮುಂದೆ ಅವನ ಪುತ್ರ ಹರಿಶ್ಚಂದ್ರನ ಪರೀಕ್ಷೆಯ ಕಥೆಯಲ್ಲಿಯೂ ಸಹ ಇದೇ ವಿಧದ ಸಂಘರ್ಷವು ಮುಂದುವರಿದಿದೆ. ಎಂದರೆ ಮಾನವ ಸಮಾಜ ಇಂದು ಮಾತ್ರವಲ್ಲದೆ ಎಲ್ಲಾ ಕಾಲದಲ್ಲಿಯೂ ಹೊಸತನ ಅಥವಾ ಹೊಸ ದ್ರ್‍ಷ್ಟಿಕೋನಗಳನ್ನು ಅಷ್ಟು ಸುಲಭದಲ್ಲಿ ಒಪ್ಪುತ್ತಿರಲಿಲ್ಲ. (ಪಾಶ್ಚಾತ್ಯ ನಾಗರಿಕತೆಯಲ್ಲಿ ಕಟ್ಟಾ ಕ್ಯಾಥೋಲಿಕ್ ಸಂಪ್ರದಾಯಸ್ಥರು ಭೂಮಿ ಹಾಗೂ ಅನ್ಯಗ್ರಹಗಳ ನಿಜಸ್ವರೂಪವನ್ನು ತಿಳಿಸಿದ ಅನೇಕರನ್ನು ವಿಷ ಪ್ರಾಶನ ಮಾಡಿಸಲಾಗಿತ್ತು, ಕೊಲ್ಲಲಾಗಿತ್ತು. ಕ್ರೈಸ್ತ ಧರ್ಮ ಸ್ಥಾಪಕ ಎನ್ನಲಾಗಿರುವ ಯೇಸುವನ್ನೂ ಸಹ ಶಿಲುಬೆಗೇರಿಸಿದ್ದನ್ನು ನಾವು ಕಾಣುತ್ತೇವೆ!!!)

Universe–Trishanku's Heaven | This and That, There and Here

ಆದರೆ ಈ ಲೇಖನದಲ್ಲಿ ನಾನು ಹೇಳ ಹೊರಟಿರುವುದು ಇದನ್ನಲ್ಲ. ವಿಶ್ವಾಮಿತ್ರ ಎಂಬ ಮಹಾನ್ ಜ್ಞಾನಿ ತನಗೊದಗಿದ ಎಲ್ಲಾ ಅಡ್ಡಿ ಆತಂಕಗಳನ್ನು ಎದುರಿಸಿ ತನಗೆ ಸರಿ ಎನಿಸಿದ್ದನ್ನು ಸೃಷ್ಟಿಸಿಕೊಂಡು ಮುಂದೆ ಸಾಗಿಯೇ ಬಿಟ್ಟಿದ್ದ. ಇದಕ್ಕೆ ತ್ರಿಶಂಕುವಿನ ಸ್ವರ್ಗ ಸೃಷ್ಟಿಯ ಕಥೆ ಅತ್ಯಂತ ಉತ್ತಮ ಉದಾಹರಣೆ. ಆದರೆ ನಿಜಕ್ಕೂ ಈ ತ್ರಿಶಂಕು ಸ್ವರ್ಗ ಎಂದರೇನು? ಅದು ಈ ವಿಶ್ವದಲ್ಲಿ ಎಲ್ಲಿದೆ? ಇದನ್ನು ಖಗೋಳಶಾಸ್ತ್ರದ ಹಿನ್ನೆಲೆಯಲ್ಲಿ ಈ ಮುಂದೆ ವಿವರಿಸುವ ಪ್ರಯತ್ನ ಮಾಡಿದ್ದೇನೆ. 

ತ್ರಿಶಂಕುವಿನ ಕಥೆ ವಾಲ್ಮೀಕಿ ರಾಮಾಯಣ ಬಾಲಕಾಂಡದ  4 ಅಧ್ಯಾಯಗಳಲ್ಲಿ ವಿವರಿಸಲ್ಪಟ್ಟಿದೆ.ತ್ರಿಶಂಕು ಅಂದರೆ ಸತ್ಯವ್ರತ-ಇಕ್ಷಾಕು ವಂಶದ ಅರಸ, ಸತ್ಯಕ್ಕೆ ಹೆಸರಾದ ಸತ್ಯಹರಿಶ್ಚಂದ್ರನ ತಂದೆ ತಾನು ಸಶರೀರವಾಗಿ ಸ್ವರ್ಗಕ್ಕೆ ಹೋಗಬೇಕೆಂದು ಬಯಸಿದ್ದ. ಆದರೆ ವಸಿಷ್ಟರು, ಇಂದ್ರ ಅದಕ್ಕೆ ಒಪ್ಪದೆ ಹೋದರು. ಆಗ ತ್ರಿಶಂಕು ವಿಶ್ವಾಮಿತ್ರನ ಬಳಿ ಬಂದು ತನ್ನ ಬಯಕೆ ವ್ಯಕ್ತಪಡಿಸಿದ್ದ, ವಸಿಷ್ಟರ ಬಗೆಗೆ ಮೊದಲಿಂದಲೂ ಬೇಸರ ಹೊಂದಿದ್ದ ವಿಶ್ವಾಮಿತ್ರ ತ್ರಿಶಂಕುವಿನ ಸಹಾಯಕ್ಕೆ ನಿಂತ, ಮತ್ತು ತನ್ನ  ತಪಃಶಕ್ತಿಯಿಂದ ತ್ರಿಶಂಕುವನ್ನು ಮೇಲಕ್ಕೆ ಕಳಿಸತೊಡಗಿದ.ಶಂಕುವು ಆಕಾಶ ಮಾರ್ಗವಾಗಿ ಪ್ರಯಾಣಿಸುತ್ತಾ ಸ್ವರ್ಗದಕಡೆಗೆ ವೇಗವಾಗಿ ಸಾಗತೊಡಗಿದ.  ಆದರೆ ಇಂದ್ರ ಸ್ವರ್ಗಕ್ಕೆ ಬರುತ್ತಿದ್ದ ಅವನನ್ನು ತಲೆಕೆಳಗಾಗಿ ಭೂಮಿಗೆ ಬೀಳೆಂದು ಶಾಪವಿತ್ತ!!!

ತಕ್ಷಣ ತಲೆಕೆಳಗಾಗಿ ಭೂಮಿಯ ಮೇಲೆ ಬೀಖತಿಡಗಿದ ತ್ರಿಶಂಕು ವಿಶ್ವಾಮಿತ್ರನನ್ನು ತನ್ನನ್ನು ರಕ್ಷಿಸುವಂತೆ ಬೇಡಿದ. ಅದಾಗ ವಿಶ್ವಾಮಿತ್ರ ಸ್ವರ್ಗದಲ್ಲಿ ತ್ರಿಶಂಕುವಿಗೆ ಜಾಗ ಕೊಡದಿದ್ದರೇನು? ತಾನೇ ಬೇರೊಂದು ಸ್ವರ್ಗ ಸೃಷ್ಟಿಸುತ್ತೇನೆ ಎಂದು ನಿಶ್ಚಯಿಸಿ ತಪಃಶಕ್ತಿಯಿಂದ ದಕ್ಷಿಣ ದಿಕ್ಕಿನಲ್ಲಿ ಮತ್ತೊಂದು ನಕ್ಷತ್ರ ಮಂಡಲವನ್ನೂ, ಸಪ್ತರ್ಷಿ ಮಂಡಲವನ್ನೂ ಸೃಷ್ಠಿಸಿದ್ದ! ಬಳಿಕ ದೇವತೆಗಳನ್ನೂ ಸೃಷ್ಟಿಸಲು ನಿರ್ಧರಿಸಿದಾಗ ಇಂದ್ರಾದಿ ದೇವತೆಗಳು ಆತನ ಬಳಿ ಬಂದು ಕೃತಕ ಸ್ವರ್ಗ ಸೃಷ್ಟಿಸದಂತೆ ವಿನಂತಿಸಿದರು. ಮತ್ತು ಅದುವರೆಗೆ ವಿಶ್ವಾಮಿತ್ರ ಸೃಷ್ಟಿಸಿದ್ದ  ನಕ್ಷತ್ರ ಮಂಡಲವು ಜ್ಯೋತಿಷ್ಯ ಚಕ್ರದ ಹೊರಗಿದ್ದು ಅಲ್ಲೇ ತ್ರಿಶಂಕು ನೆಲೆಯಾಗಲಿ ಎಂದು ಹೇಳಿದರು!! ವಿಶ್ವಾಮಿತ್ರ ಅದಕ್ಕೊಪ್ಪಿದ ಹಾಗೂ ಸ್ವರ್ಗ ಹಾಗೂ ಭೂಮಿಯ ಮಧ್ಯೆ "ತ್ರಿಶಂಕು ಸ್ವರ್ಗ" ಸೃಷ್ಟಿಯಾಗಿತ್ತು.

ತ್ರಿಶಂಕುವಿನ ಸ್ವರ್ಗದ ವೈಜ್ಞಾನಿಕ ಸತ್ಯ 

ಈ ಮೇಲಿನ ತ್ರಿಶಂಕುವಿನ ಕಥೆಯನ್ನು ಖಗೋಳಶಾಸ್ತ್ರದ ರೀತಿಯಲ್ಲಿ ವಿಶ್ಲೇಷಿಸಿದ್ದಾದರೆ ದಕ್ಷಿಣದ ದಿಕ್ಕಿನಲ್ಲಿ ನಕ್ಷತ್ರ ಪುಂಜವನ್ನು ಚಿಸುವ ನಿರೂಪಣೆ ಇದೆ, ಉತ್ತರದ ನಕ್ಷತ್ರ ಪುಂಜಗಳ ಪ್ರತಿರೂಪವಾಗಿ ಸಪ್ತರ್ಷಿ ಮಂಡಲ ಅಥವಾ ಬಿಗ್ ಡಿಪ್ಪರ್ , ಭೂಮಿಯ ಅಕ್ಷೀಯ ತಿರುಗುವಿಕೆಗೆ ಆಧಾರವಾಗಿದೆ. ಕಥೆಯಲ್ಲಿ ಬರುವಂತೆ ತ್ರಿಶಂಕುವನ್ನು ಉತ್ತರದಿಂದ ಕೆಳಕ್ಕೆ ತಳ್ಳಲಾಯಿತು ಮತ್ತು ವಿಶ್ವಾಮಿತ್ರ ಅವನಿಗಾಗಿ ದಕ್ಷಿಣದಲ್ಲಿ ಗಿ ಒಂದು ಜಗತ್ತನ್ನು ಸೃಷ್ಟಿಸಿದನು ಮತ್ತು ದಕ್ಷಿಣದ ಎಲ್ಲಾ ನಕ್ಷತ್ರಗಳು ಆ "ತ್ರಿಶಂಕು"ವನ್ನು ಸುತ್ತಬೇಕೆಂದು ಆದೇಶಿಸಿದನು. ಕಾಸ್ಮಾಲಾಜಿಕಲ್ ಪರಿಭಾಷೆಯಲ್ಲಿ, ಭೂಮಿಯ ದಕ್ಷಿಣ ಧ್ರುವವು ತ್ರಿಶಂಕು ಕಡೆಗೆ ಆಧಾರಿತವಾಗಿದ್ದರೆ ಮಾತ್ರ ಇದು ಸಂಭವಿಸುತ್ತದೆ, ಇದರಿಂದಾಗಿ ದಕ್ಷಿಣದಲ್ಲಿರುವ ನಕ್ಷತ್ರಗಳು ತ್ರಿಶಂಕುವನ್ನು ಸುತ್ತುತ್ತಿರುವಂತೆ ತೋರುತ್ತದೆ!
Large fuzzy white disk against a background of stars

ಡಿಜಿಟೈಸ್ಡ್ ಸ್ಕೈ ಸರ್ವೆ 2 ರಿಂದ ಆಲ್ಫಾ ಸೆಂಟೌರಿಯ ನೋಟ
ಬೇರೆ ಬಗೆಯಲ್ಲಿ ಹೇಳುವುದಾದರೆ ಉತ್ತಾನಪಾದ ಹಾಗೂ ಸುನೀತಿಗೆ ಜನ್ಮಿಸಿದ ಧ್ರುವನಂತೆಯೇ ದಕ್ಷಿಣ ಧ್ರುವ ನಕ್ಷತ್ರವನ್ನು ತ್ರಿಶಂಕು ಎಂದು ಭಾವಿಸಿದ್ದರೆ ಹಾಗೆ ಸಂಭವಿಸುತ್ತದೆ!! ಆದರೆ ತ್ರಿಶಂಕುವಿನ ಕಥೆ ಧ್ರುವನ ಕಥೆಯಂತೆ ಸ್ಪಷ್ಟವಿಲ್ಲ!! ಹಾಗಾಗಿ ಇದಕ್ಕೆ ಇನ್ನಷ್ಟು ವಿಶ್ಲೇಷಣೆ ಅಗತ್ಯವಿದೆ. 

ಮೊದಲು ತ್ರಿಶಂಕು ಎಂಬ ಹೆಸರನ್ನು ತೆಗೆದುಕೊಳ್ಳೋಣ. ತ್ರಿಶಂಕು ಸೂರ್ಯವಂಶದ ಆಡಳಿತಗಾರನಾಗಿದ್ದ. . ತ್ರಿಶಂಕು ಎಂಬ ಹೆಸರು ಮೂರು-ಶಂಕು ಅಥವಾ ಮೂರು ‘ಪಾಪಗಳು’ ಅಥವಾ 'ಭಯಗಳು' ಅಥವಾ 'ಡಾರ್ಟ್ಸ್' ಅಥವಾ ಕಳಂಕ ಎಂಬುದರಿಂದ ವ್ಯುತ್ಪನ್ನವಾಗಿದೆ. ಮೊದಲ ಕಳಂಕವೆಂದರೆ ತಂದೆಯ ಶಾಪವೆಂದರೆ ಅವನು ತನ್ನ ತಂದೆಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದ! ಎರಡನೆಯ ಕಳಂಕವೆಂದರೆ ವಸಿಷ್ಠನ ಆಶ್ರಮದಲ್ಲಿದ್ದ ಹಸುಗಳನ್ನು ಕೊಂದ! ಮೂರನೆಯ ಕಳಂಕವೆಂದರೆ ಮಾಂಸವನ್ನು ತಿನ್ನುವುದು!!  ಈ ಮೂರು ಕಲೆಗಳೂ ಅವನನ್ನು ತ್ರಿಶಂಕು ಎಂದು ಕರೆಯುವಂತೆ ಮಾಡಿತು  - ಮೂರು ಕಲೆಗಳನ್ನು ಹೊತ್ತುಕೊಂಡವನು.!!

ಮಾನವನು ತಂದೆ-ತಾಯಿ(ಜನ್ಮವಿತ್ತವರ) ಋಣ, ಸಂಪತ್ತು(ಭೂಮಿ, ಭೂಮಿಯಿಂದ ಪಡೆದ ಆಹಾರ)ದ ಋಣ ಹಾಗೂ ಆಹಾರ ಸಂಪಾದನೆಗಾಗಿ ನಾವು ಮಾಡುವ ಕೆಲ್ಲಸದಲ್ಲಿನ ಪಾಪಕರ್ಮಗಳ ಋಣವನ್ನು ಹೊಂದಿರುತ್ತಾನೆ. ಹಾಗಾಗಿ ಈ ಮೂರೂ ಋಣ ಅಥವಾ  ಕಲೆಗಳ ಸಹಿತ ಸ್ವರ್ಗ ಅಥವಾ ದೇವಲೋಕಕ್ಕೆ ಹೋಗಲು ನಮಗೆ ಅರ್ಹತೆ ನೀಡುವುದಿಲ್ಲ! ಮತ್ತು ಈ ಮೂರು ಋಣಗಳು ನಮ್ಮಮ್ಮು ಜನ್ಮಜನ್ಮಗಳ ಚಕ್ರಕ್ಕೆ ಬಂಧಿಸುತ್ತವೆ. ಈ ಮೂರು ಕಲೆಗಳನ್ನು ಅಳಿಸಿಕೊಳ್ಲದೆ, ನಾಶಪಡಿಸಿಕೊಳ್ಲದೆ  ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ. ತ್ರಿಶಂಕು ಸಹ ಆ ಮೂರು ದೋಷಗಳಿಂದ ಮುಕ್ತನಾಗಿರಲಿಲ್ಲ!!!

ತ್ರಿಶಂಕು ತಲೆಕೆಳಗಾಗಿ ಬೀಳುತ್ತಾನೆ ಎಂದರೆ ಇದು ಉತ್ತರದಿಂದ ದಕ್ಷಿಣಕ್ಕೆ ಇರುವ ದಿಕ್ಕನ್ನು ಸೂಚಿಸುತ್ತದೆ ಏಕೆಂದರೆ ಉತ್ತರವು ಸ್ವರ್ಗದ ಸ್ಥಳವಾಗಿದೆ. ತಲೆಕೆಳಗಾದ ಸ್ಥಾನದಲ್ಲಿ, ತಲೆ ಮುಂದಾಗಿದ್ದು ಅದು ದಕ್ಷಿಣಕ್ಕಿರುವುದು ಸೂಚಿಸುತ್ತದೆ. ಎಂದರೆ ತ್ರಿಶಂಕು (3 ಕಲೆಗಳಿರುವ) ದಕ್ಷಿಣದತ್ತ ಸಾಗುತ್ತಿದ್ದ.  ಆ ಹಂತದಲ್ಲಿ ವಿಶ್ವಾಮಿತ್ರ  ಹಸ್ತಕ್ಷೇಪ ಮಾಡುತ್ತಾನೆ. ಅವನು ತ್ರಿಶಂಕುವನ್ನು ದಕ್ಷಿಣಕ್ಕೆ ಸಂಪೂರ್ಣವಾಗಿ ಬೀಳದಂತೆ ತಡೆಯುತ್ತಾನೆ. 

ವಿಶ್ವಾಮಿತ್ರನು ತ್ರಿಶಂಕುವನ್ನು ಭೂಮಿಗೆ (ದಕ್ಷಿಣಕ್ಕೆ) ಬೀಳುವುದನ್ನು ತಡೆದು ಅವನಿದ್ದಲ್ಲೇ ಸ್ವರ್ಗದಂತಹಾ ಜ್ಸ್ಥಳಬ್ಬು ಸೃಷ್ಟಿಸುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವಾಮಿತ್ರ ದಕ್ಷಿಣ ದಿಕ್ಕಿನಲ್ಲಿ ಸಪ್ತರ್ಷಿ ಮಂಡಲವನ್ನು ರಚಿಸುತ್ತಾನೆ(ವಾಲ್ಮೀಕಿ ರಾಮಾಯಣ, 1-6- 21).!! ಉತ್ತರ ದಿಕ್ಕಿನಲ್ಲಿರುವ ಸಪ್ತರ್ಶಿ ಮಂಡಲವವು  ವಿವಿಧ ಕಾಲದ ಧ್ರುವ ನಕ್ಷತ್ರಗಳ ಸುತ್ತಲೂ  ಸುತ್ತುತ್ತದೆ. ಆದ್ದರಿಂದ ದಕ್ಷಿಣದಲ್ಲಿರುವ ಸಪ್ತರ್ಷಿ ಮಂಡಲವು ದಕ್ಷಿಣ ಧ್ರುವ ನಕ್ಷತ್ರವನ್ನು ವಿವಿಧ ಸಮಯಗಳಲ್ಲಿ ಸುತ್ತಬೇಕು!!!

ಬ್ರಹ್ಮನ ಸೃಷ್ಟಿಗೆ ಸವಾಲೆಸೆದ ವಿಶ್ವಾಮುತ್ರ!

ಸೃಷ್ಟಿ ಸರ್ವಶಕ್ತನ (ಬ್ರಹ್ಮನ) ಏಕೈಕ ಅಧಿಕಾರ ಹಾಗಿದ್ದು ವಿಶ್ವಾಮಿತ್ರ ಪ್ರಪಂಚದ ಸೃಷ್ಟಿ ನಿಯಮವನ್ನು ಮುರಿಯುತ್ತಾನೆ. ಮತ್ತು ತ್ರಿಶಂಕುವನ್ನು ಮಧ್ಯದಲ್ಲೇ ತಡೆದು ಕು ನಕ್ಷತ್ರವಾಗಿ ಉಳಿಸುತ್ತಾನೆ. ಈಗ  ಸ್ವರ್ಗಕ್ಕೆ ಹೋಗಲು ಬಯಸುವವರೆಲ್ಲರೂ ಈ ತ್ರಿಶಂಕುವನ್ನು ಸುತ್ತಿಯೇ ಹೋಗಬೇಕಾಗುತ್ತದೆ! ಅಕ್ಷರಶಃ ಹೇಳುವುದಾದರೆ ಇದರರ್ಥ ದಕ್ಷಿಣ ಧ್ರುವದ ಒಂದು ಬಿಂದುವಿನ ಸುತ್ತ ಆಕಾಶಕಾಯಗಳ ಸುತ್ತಿವಿಕೆ ಅಥವಾ ದಕ್ಷಿಣ ಧ್ರುವ ನಕ್ಷತ್ರದ ಸುತ್ತ ವೃತ್ತಾಕಾರದ ಚಲನೆ.

"ವಿಶ್ವಾಮಿತ್ರನು ಬ್ರಹ್ಮನಂತೆಯೇ , ಸ್ವತಃ ಸಪ್ತರ್ಷಿ ಮಂಡಲವನ್ನು ಸೃಷ್ಟಿಸಿದ. ಹಾಗೂ ಉಳಿದ ನಕ್ಷತ್ರಗಳನ್ನೂ ಯಥಾವತ್ ಮರುಸೃಷ್ಟಿ ಮಾದಲು ತೊಡಗಿದ ಇದಕ್ಕಾಗಿ ಉತ್ತರ ಗೋಳಾರ್ಧದಿಂದ(ವಸಿಷ್ಟ ಹಾಗೂ ಇಂದ್ರರಿರುವ ಜಾಗದಿಂದ) ದೂರದ ದಕ್ಷಿಣ ಗೋಳಾರ್ಧವನ್ನು ಆಶ್ರಯಿಸಿದನು" ವಾಲ್ಮೀಕಿ ರಾಮಾಯಣ (1-60- 20,21,22)

"ತ್ರಿಶಂಕು ತನ್ನ ಮೃತ ಶರೀರದ ಸಮೇತ ಶಾಶ್ವತ ಸ್ವರ್ಗದಲ್ಲಿರುತ್ತಾನೆ, ಮುಂದೆ, ಪ್ರಪಂಚಗಳು ಉಳಿದುಕೊಂಡಿರುವವರೆಗೂ, ನಾನು ರಚಿಸಿದ ಈ ಎಲ್ಲಾ ನಕ್ಷತ್ರಗಳು ಮತ್ತು ಗೆಲಕ್ಸಿಗಳು ಸಹ ನನ್ನ ಸೃಷ್ಟಿಯಂತೆ ಅವುಗಳ ಸ್ಥಳಗಳಲ್ಲಿ ಶಾಶ್ವತವಾಗಿ ಉಳಿಯಲಿ. ಇದಕ್ಕೆ ಒಪ್ಪಿಕೊಳ್ಳುವುದು ನಿಮ್ಮೆಲ್ಲರಿಗೆ (ಇಂದ್ರಾದಿ ದೇವತೆಗಳ, ಸಪ್ತರ್ಷಿಗಳ)ಸೂಕ್ತವಾಗಿದೆ. (ವಾಲ್ಮೀಕಿ ರಾಮಾಯಣ - 1-60-28, 29). ಆಗ ವಿಶ್ವಾಮಿತ್ರ ಎಲ್ಲಾ ದೇವತೆಗಳನ್ನು ಕರೆದು ಹೀಗೆಂದಾಗ ದೇವತೆಗಳು ವಿಶ್ವಾಮಿತ್ರನಿಗೆ ಉತ್ತರಿಸಿದ್ದಾರೆ-  'ಹಾಗಾದರೆ ಹಾಗೇ ಆಗಲಿ! ನೀವು ಸುರಕ್ಷಿತವಾಗಿರಿ! ಸೃಷ್ಟಿಯಾದ ಎಲ್ಲಾ ವಸ್ತುಗಳು ಆಯಾ ಸ್ಥಳಗಳಲ್ಲಿ ಮೇಲುಗೈ ಸಾಧಿಸಲಿ. ನೀವು ರಚಿಸಿದ ಅದ್ಭುತ ಮತ್ತು ಅಸಂಖ್ಯಾತ ನಕ್ಷತ್ರಗಳು ಆಕಾಶದಲ್ಲಿ ಉಳಿಯುತ್ತವೆ, ಆದರೆ ಕಾಸ್ಮಿಕ್ ವ್ಯಕ್ತಿಯ ಸ್ಟೆಲಿಫಾರ್ಮ್ಸ್ ನ ಹಾದಿಯ ಹೊರಗೆ(ಜ್ಯೋತಿಷ್ಯ ಮಂಡಲದಿಂದ ಹೊರಗೆ ಎಂಬ ಪುರಾಣ ಕಥೆಯನ್ನು ನೆನಪಿಸಿಕೊಳ್ಳಿ!)  ತ್ರಿಶಂಕು ಸಹ ನೀವು ರಚಿಸಿದ ನಕ್ಷತ್ರಗಳ ವಲಯದಲ್ಲಿಯೂ ಉಳಿಯುತ್ತಾರೆ, ಆದರೆ ತಲೆಕೆಳಗಾಗಿ, ಏಕೆಂದರೆ ಇಂದ್ರನ  ಶಾಪವನ್ನು ನಿವಾರನಿಸುವುದು ಸಾಧ್ಯವಿಲ್ಲ.  ಅವನು ನಕ್ಷತ್ರದಂತೆ ಮಿನುಗುತ್ತಾನೆ ಮತ್ತು ಯಾವುದೇ ಆಕಾಶಕಾಯವನ್ನು ಸರಿಯಾಗಿ ಹೋಲುತ್ತಾನೆ" (ವಾಲ್ಮೀಕಿ ರಾಮಾಯಣ  1-60-30, 31, 32 ಎ)

ಜ್ಯೋತಿಷ್ಯಮಂಡಲದ ಹೊರಗಿರುವ ತ್ರಿಶಂಕು

ತ್ರಿಶಂಕು ಪ್ರಸಂಗದಲ್ಲಿ ದೇವರುಗಳು ವಿಶ್ವಾಮಿತ್ರನು ರಚಿಸಿದ ಯಾವುದೇ (ದಕ್ಷಿಣ ಸಪ್ತರ್ಷಿ ಮಂಡಲ ಹಾಗೂ ಇತರೆ ) ಜ್ಯೋತಿಷ್ಯಮಂಡಲದ ಹೊರಗೆ ಉಳಿಯಲಿದೆ ಎಂದರು. ಅಂದರೆ ಅವು ದಕ್ಷಿಣ ಧ್ರುವದ ಹೊರಗೆ  ಅಥವಾ ಭೂಮಿಯ ಅಕ್ಷದ ಹೊರಗೆ ಇರುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ತ್ರಿಶಂಕು ಲೋಕದ ಸುತ್ತ ದಕ್ಷಿಣದ ದಿಕ್ಕಿನಲ್ಲಿ ಜೀವಿಗಳು ಅಸ್ತಿತ್ವದಲ್ಲಿಲ್ಲ!

ತ್ರಿಶಂಕು ಲೋಕ  ಒಂದು ರೀತಿಯ ಹೆಗ್ಗುರುತಾಗಿ ಮಾರ್ಪಟ್ಟಿರುವುದರಿಂದ ಅವು ಸ್ವರ್ಗಕ್ಕೆ ಸಮನಾಗಿರಬೇಕು. ಅಥವಾ ಸ್ವರ್ಗದತ್ತ ಮುಖವಾಗಿರಬೇಕು. ಎಂದರೆ ದಕ್ಷಿಣದ ಕಡೆಗೆ ನಮ್ಮ ಪ್ರಯಾಣವು ನಿರಂತರವಾಗಿರುವುದಿಲ್ಲ ಎಂದು ಸೂಚಿಸುತ್ತದೆ. ನಮ್ಮ ಕ್ಷೀರಪಥ ನಕ್ಷತ್ರಪುಂಜವು ದಕ್ಷಿಣದ ಕಡೆಗೆ ಹೋದ ನಂತರ ಒಂದು ತಿರುವು ತೆಗೆದುಕೊಳ್ಳಬೇಕಾಗಿದೆ. ಅದನ್ನು ದಕ್ಷಿಣ ದಿಕ್ಕಿನಲ್ಲಿ ತ್ರಿಶಂಕು ಮತ್ತು ಸಪ್ತರ್ಷಿ ನಕ್ಷತ್ರಪುಂಜಗಳನ್ನು ವಿಶ್ಲೇಷಿಸುವ ಮೊದಲು, ಇನ್ನಷ್ಟು ವಿಶ್ಲೇಷಿಸೋಣ 

ತ್ರಿಶಂಕುವಿನ ಜೀವನದ ಕಥೆಯಿಂದ ನಾವು , ಪ್ರತಿಯೊಬ್ಬ ವ್ಯಕ್ತಿಯು ತನ್ನ ಸೃಷ್ಟಿಕರ್ತನಿಗೆ (ಪೋಷಕರು ಮತ್ತು ಸೂರ್ಯನಿಗೆ) ತನ್ನಋಣ ತೀರಿಸಬೇಕು, , ತನ್ನ ಸ್ವಾರ್ಥಕ್ಕಾಗಿ ತನ್ನ ಅನ್ವೇಷಣೆಯಲ್ಲಿ ಜಗತ್ತನ್ನು ಹಾಳು ಮಾಡಬಾರದು ಮತ್ತು ತನ್ನ ಆಹಾರವನ್ನು ಪಡೆಯುವಲ್ಲಿ ಯಾವುದೇ ಪ್ರಾಣಿಗೆ ಹಾನಿ ಮಾಡಬಾರದು. ಈ ಮೂರು ಋಣವನ್ನು ಹೆಚ್ಚಾಗದಂತೆ ಹಾಗೂ ಕಡಿಮೆ ಮಾಡಿಕ್ಳ್ಳುವತ್ತ ಗಮನ ಹರಿಸುವವನು ಅಂತಿಮವಾಗಿ ಕರ್ಮ ಚಕ್ರ ಅಥವಾ ಪುನರ್ಜನ್ಮಗಳಿಗೆ ಬರುವುದರಿಂದ ಮುಕ್ತನಾಗುತ್ತಾನೆ. ಅಂತಹ ವ್ಯಕ್ತಿಯು ಬ್ರಹ್ಮಾಂಡದ ಗೆಳೆಯ(ವಿಶ್ವಾಮಿತ್ರ ಶಬ್ದದ ಪದಶಃ ಅರ್ಥ -ವಿಶ್ವದ ಮಿತ್ರ ಅಂದರೆ ಬ್ರಹ್ಮಾಂಡದ ಗೆಳೆಯ) ಪ್ರಿಯನಾಗಿರುತ್ತಾನೆ ಮತ್ತು ತನಗೆ ತಾನೇ ವಿಶ್ವವಾಗುತ್ತಾನೆ. ಅವನು ಎಲ್ಲಿದ್ದರೂ ಸ್ವರ್ಗ ಅಲ್ಲಿಯೇ ಇರುತ್ತದೆ. ಇದುವೇ ತ್ರಿಶಂಕುವಿನ ನಿಜಸ್ಥಿತಿ

ಹಾಗಾದರೆ ಮೂರು ಕಳಂಕವನ್ನು ಹೊತ್ತಿದ್ದ ತ್ರಿಶಂಕುವಿಗೆ ವಿಶ್ವಾಮಿತ್ರನ ಸಹಾಯ ದೊರಕಿದ್ದು ಯಾಕೆಂದು ನೋಡಿದಾಗ ನಾವು ಸ್ವರ್ಗವನ್ನು ತಲುಪಲು (ಕರ್ಮ ಚಕ್ರದಿಂದ ವಿಮೋಚನೆ) ಬಯಸಿದರೆ ಮಾತ್ರ ನಮಗೆ ಸಹಾಯ ಮಾಡಲು ಬ್ರಹ್ಮಾಂಡದ ಸ್ನೇಹಿತನ ಸಹಾಯ ಸಿಕ್ಕುತ್ತದೆ  ಎಂದು ನಿರ್ಣಯಿಸಲಾಗುತ್ತದೆ. ಬಹುಶಃ ವಿಶ್ವಾಮಿತ್ರ ಕಂಡುಕೊಂಡ,  ಬಹಿರಂಗಪಡಿಸಿದ ಗಾಯತ್ರಿ ಮಂತ್ರವು ಸೌರ ಮಾರ್ಗದಲ್ಲಿ ಅಸ್ತಿತ್ವದ ಮೂರು ಹಂತಗಳನ್ನು (ಭು, ಭುವ, ಸ್ವ) ಧ್ಯಾನಿಸುವ ಮೂಲಕ ಮೂರು ಕಲೆಗಳಿಂದ ನಮ್ಮನ್ನು ಮುಕ್ತಗೊಳಿಸುವ ಪ್ರಯತ್ನವಾಗಿದೆ. . ಈ ಮಂತ್ರವು ಅದನ್ನು ಪುನರಾವರ್ತಿಸುವ, ಧ್ಯಾನ ಮಾಡುವವರಿಗೆ ರಕ್ಷಣೆ ನೀಡುತ್ತದೆ.  ಅಂತಹ ರಕ್ಷಣೆ ಬಹುಶಃ ಮೂರು ಕಲೆಗಳಿಂದ ಬಿಡುಗಡೆಯನ್ನು ನೀಡುತ್ತದೆ ಮತ್ತು ಧ್ಯಾನ ಮಾಡುವವರಿಗೆ ಸಹಾಯ ಮಾಡುತ್ತದೆ, ಆದರೆ ಈ ರೀತಿಯ ಹೊಸ ಕಲೆಗಳನ್ನು ಸೃಷ್ಟಿಸುವುದಿಲ್ಲ!!!

ವಿಶ್ವದ ದಕ್ಷಿಣ ಬಿಂದುವಿನ ಆವಿಷ್ಕಾರವನ್ನು ಮಾಡಿದವನು ವಿಶ್ವಾಮಿತ್ರ!!

ಇನ್ನು  ದೇವ ಲೋಕಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಅಥವಾ ದೇವಯನ ಅಥವಾ ಬ್ರಹ್ಮದ ಮಾರ್ಗ. ನಕ್ಷತ್ರವನ್ನು ತ್ರಿಶಂಕು ಎಂದು ಏಕೆ ಗುರುತಿಸಬೇಕು ಮತ್ತು ತ್ರಿಶಂಕುಗಾಗಿ ಸ್ವರ್ಗವನ್ನೇಕೆ ರಚಿಸಬೇಕು ಎಂದರೆ ಪ್ರಪಂಚವು ಉತ್ತರದ ಕಡೆಗೆ ತಿರುಗುವ ದಕ್ಷಿಣ ಬಿಂದುವಿನ ಆವಿಷ್ಕಾರವನ್ನು ಮಾಡಿದವನು ವಿಶ್ವಾಮಿತ್ರ!!
 ರೇಖಾಚಿತ್ರವು ಬೇಸಿಗೆಯ ರಾತ್ರಿಯಲ್ಲಿ ನಾವು ಬರಿಗಣ್ಣಿನಿಂದ ನೋಡುವ ಆಕಾಶದ ಚಿತ್ರವನ್ನು ವಿವರಿಸುತ್ತದೆ

ಅವನು ಅವರು ಆಧ್ಯಾತ್ಮಿಕ ಎತ್ತರಕ್ಕೆ ಏರುವುದನ್ನು ತಡೆಯುವ ಕಲೆಗಳನ್ನು ಮತ್ತು ಅಡೆತಡೆಗಳನ್ನು ನಿವಾರಿಸುವ ವಿಧಾನವನ್ನು ಸಹ ಕಂಡುಹಿಡಿದಿದ್ದ. ಬಹುಷಃ ಋಷಿಗಳು  ತ್ರಿಶಂಕು ಕಥೆಯನ್ನು ವ್ಯಕ್ತಿ ಕೇಂದ್ರಿತವನ್ನಾಗಿಸಿ ಭೂಮಿಯ ಸುತ್ತಲಿನ ನಕ್ಷತ್ರಗಳ ಸೃಷ್ಟಿಯ ಅಸಾಧ್ಯ ಅಂಶದೊಂದಿಗೆ ರಚಿಸಿ, ಆ ಕಥೆಯನ್ನು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದರು. ಆದ್ಯಾತ್ನಿಕ ಎತ್ತರವನ್ನು ಋಷಿಗಳು ನಮಗೆ ಯುಗಗಳಿಂದ ತಿಳಿಸಿದ್ದರು, ಆದರೆ ಕಾಸ್ಮಿಕ್ ಸತ್ಯವನ್ನು ಅವರು ವಿಜ್ಞಾನದ ಅಂಶದಿಂದ ತೆರೆದಿಟ್ಟಾಗ ಮಾತ್ರ ತಿಳಿಯಬಹುದು. ಈಗ ಗ್ರೇಟ್ ಅಟ್ರಾಕ್ಟರ್ ಮತ್ತು ಕ್ಷೀರಪಥದ ಮಾರ್ಗದ ಆವಿಷ್ಕಾರದೊಂದಿಗೆ, ತ್ರಿಶಂಕು ಕಥೆಯು ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿದೆ.

ತ್ರಿಶಂಕು ನಕ್ಷತ್ರವೆಲ್ಲಿದೆ?

ಮೊದಲು ನಾವು ತ್ರಿಶಂಕು ಎಂಬ ನಕ್ಷತ್ರವನ್ನು ಕಂಡುಹಿಡಿಯಬೇಕು. ಜನಪ್ರಿಯ ವಾದದ ಆಧಾರದಲ್ಲಿ  “ಆಲ್ಫಾ ಸೆಂಟೌರಿ.” ಯನ್ನು  ತ್ರಿಶಂಕು ಎಂದು ಗುರುತಿಸಲಾಗಿದೆ. ಆಧುನಿಕ ಸಂಶೋಧನೆಯು ಅದು ನಿಜಕ್ಕೂ ತ್ರಿವಳಿ ಎಂದು ತೋರಿಸುತ್ತದೆ! ನಾವು ಅದನ್ನು ಒಂದೇ ನಕ್ಷತ್ರವಾಗಿ ನೋಡುತ್ತೇವೆ. ಇದು ಮೂರು ನಕ್ಷತ್ರಗಳನ್ನು ವಿಲೀನವಾಗಿಸಿಕೊಂಡು  ಒಂದು ನಕ್ಷತ್ರದಂತೆ ಕಾಣುತ್ತದೆ!! ಹಾಗಾಗಿ  ಒಂದರಲ್ಲಿ 3 ಎಂಬ ತ್ರಿಶಂಕು ಕಲ್ಪನೆಯೊಂದಿಗೆ ಇದು ಹೋಲಿಕೆಯಾಗುತ್ತದೆ! . 

ಮೂರು ನಕ್ಷತ್ರಗಳು ಆಲ್ಫಾ ಸೆಂಟೌರಿ ಎ, ಆಲ್ಫಾ ಸೆಂಟೌರಿ ಬಿ ಮತ್ತು ಪ್ರಾಕ್ಸಿಮಾ ಸೆಂಟೌರಿ. ಈ ನಕ್ಷತ್ರ ಆಲ್ಫಾ ಸೆಂಟೌರಿಯನ್ನು ನಮ್ಮ ಭೂಮಿಗೆ ಹತ್ತಿರದ ನಕ್ಷತ್ರವೆಂದು ಪರಿಗಣಿಸಲಾಗಿದ್ದರೂ, ವಾಸ್ತವದಲ್ಲಿಪ್ರಾಕ್ಸಿಮಾ ಸೆಂಟೌರಿ ಸೌರವ್ಯೂಹಕ್ಕೆ ಹತ್ತಿರದ ನಕ್ಷತ್ರವಾಗಿದೆ. ತ್ರಿಶಂಕುವಿನ  ತಂದೆ ಸೂರ್ಯರುಣ ಮತ್ತು ಅವನು ಸೂರ್ಯವಂಶಕ್ಕೆ ಸೇರಿದವನು ಹಾಗಾಗಿ ಈ ಆಲ್ಫಾ ಸೆಂಟೌರಿ ಸೂರ್ಯನಿಗೆ ಸಮೀಪವಿದೆ!!
Series of partial circles centred on a small yellow disk labelled "Sun", each circle labelled with a distance, and several other small disks labelled with the names of stars
ಸೂರ್ಯನಿಗೆ ಹತ್ತಿರದ ನಕ್ಷತ್ರಗಳು
ದಕ್ಷಿಣದ ಆಕಾಶದಲ್ಲಿ ಆಲ್ಫಾ ಸೆಂಟೌರಿಯನ್ನು ಯಾರೂ ನೋಡಬಹುದು. ಬೇಸಿಗೆಯ ತಿಂಗಳುಗಳಲ್ಲಿ (ಪ್ರಸ್ತುತ ಮಧ್ಯರಾತ್ರಿಯ ನಂತರ), ದಕ್ಷಿಣದ ಆಕಾಶದಲ್ಲಿ ಆಲ್ಫಾ ಸೆಂಟೌರಿಯೊಂದಿಗೆ ಉತ್ತರದ ಸಪ್ತರ್ಷಿ ಮಂಡಲದ ಸುಂದರವಾದ ಜೋಡಣೆಯನ್ನು ನೋಡಬಹುದು. ಬಿಗ್ ಡಿಪ್ಪರ್ ಎಂದು xಕರೆಯಲ್ಪಡುವ ಉತ್ತರ ಸಪ್ತರ್ಷಿ ಮಂಡಲ ಆಕಾಶದಾದ್ಯಂತ ಕನ್ಯಾರಾಶಿ ನಕ್ಷತ್ರಪುಂಜದಲ್ಲಿ ಸ್ವಾತಿ (ಆರ್ಕ್ಟುರಸ್) ಮತ್ತು ನಂತರ ಚಿತ್ರ (ಸ್ಪಿಕಾ) ನಕ್ಷತ್ರಗಳೊಂದಿಗೆ ಜೋಡಣೆ ಮಾಡುತ್ತಾರೆ ಚಿತ್ರಾ ನಕ್ಷತ್ರ ದಕ್ಷಿಣ ಭಾರತದಿಂದ ನೋಡುವಾಗ ಹೆಚ್ಚು ಕಡಿಮೆ ಮಧ್ಯದ ಬಿಂದು-ತಲೆಯ ನೇರಕ್ಕೆ ಕಾಣುತ್ತದೆ.  ದಕ್ಷಿಣದ ಚಿತ್ರಾ ಮತ್ತು ಆಲ್ಫಾ ಸೆಂಟೌರಿ ನಡುವೆ, ಆಕಾಶವು ಮಂಕಾಗಿ ಕಾಣುತ್ತದೆ (ಧುಮಾ / ಚಂದ್ರ ಮಾರ್ಗ / ದಕ್ಷಿಣದ ಮಾರ್ಗ?) ಮತ್ತು ಪ್ರಮುಖ ನಕ್ಷತ್ರಗಳಿಲ್ಲದೆ.ಖಾಲಿಯಾಗಿರುವಂತೆ ಕಾಣುತ್ತದೆ.  ಈಗ ಇದು ಅನೇಕ ಗುಪ್ತ ಗೆಲಕ್ಸಿಗಳನ್ನು ಹೊಂದಿರುವ ಗ್ರೇಟ್ ಅಟ್ರಾಕ್ಟರ್ ಪ್ರದೇಶವೆಂದು ತಿಳಿದುಬಂದಿದೆ. (ನಮ್ಮ ಕ್ಷೀರಪಥ ನಕ್ಷತ್ರಗಳು ಈ ಪ್ರದೇಶದಲ್ಲಿ ದೃಷ್ಟಿಯನ್ನು ಮರೆಮಾಡುತ್ತವೆ). ಅಲ್ಲಿಂದ ಮುಂದೆ ಆಲ್ಫಾ ಸೆಂಟೌರಿ ಕೇಂದ್ರವಾಗಿರುವ ನಕ್ಷತ್ರಗಳು ಕಾಣಿಸಿಕೊಳ್ಳುತ್ತವೆ.
Simulated night-sky image centred on Orion labelled with constellation names in red and star names in yellow, including Sirius very close to Betelgeuse and the Sun near Cassiopeia
ಆಲ್ಫಾ ಸೆಂಟೌರಿಯ ಕೇಂದ್ರದಿಂಡ ನೋಡಿದಾಗ ಕಾಣುವ ಆಕಾಶದ ದೃಶ್ಯ

ಆಲ್ಫಾ ಸೆಂಟೌರಿ ಪ್ರದೇಶದಲ್ಲಿ, ದಕ್ಷಿಣ ಸಪ್ತರ್ಷಿ ಮಂಡಲವಿರಬೇಕು. ಆಲ್ಫಾ ಸೆಂಟೌರಿ ಭೂಮಿಗೆ ಹತ್ತಿರದ ನಕ್ಷತ್ರವಾಗಿದ್ದರೂ, ಇದು ದೊಡ್ಡ ಸೆಂಟಾರಸ್ ಸೂಪರ್ ಕ್ಲಸ್ಟರ್‌ನ ಭಾಗವಾಗಿ ಕಂಡುಬರುತ್ತದೆ, ಅದು ತುಂಬಾ ದೂರದಲ್ಲಿದೆ.  ನಾವು ಕನ್ಯಾರಾಶಿ ಸೂಪರ್ ಕ್ಲಸ್ಟರ್‌ನಿಂದ ಆಕರ್ಷಿತರಾಗಿದ್ದೇವೆ. ಅದರಾಚೆಗೆ 1000 ಟ್ರಿಲಿಯನ್ ಸೂರ್ಯನ ರಾಶಿಯನ್ನು ಹೊಂದಿರುವ ಗ್ರೇಟ್ ಅಟ್ರಾಕ್ಟರ್ ನಮ್ಮನ್ನು ಆಕರ್ಷಿಸುತ್ತಿದೆ. ಅದರಾಚೆಗೆ ಹೆಚ್ಚು ಬೃಹತ್ ಹೈಡ್ರಾ ಸೆಂಟಾರಸ್ ಸೂಪರ್ ಕ್ಲಸ್ಟರ್.ಇದು ನಮ್ಮನ್ನು ಲಾನಿಯಾಕಿಯಾದ ಮಧ್ಯಭಾಗಕ್ಕೆ ಆಕರ್ಷಿಸುತ್ತದೆ. ಭೂಮಿಯಿಂದ ನೋಡಿದ ಆಲ್ಫಾ ಸೆಂಟೌರಿ ಹೈಡ್ರಾ ಸೆಂಟಾರಸ್ ಗುಂಪಿನ ಒಂದು ಭಾಗದಂತೆ ಕಾಣುತ್ತದೆ.

"ಸದರನ್ ಕ್ರಾಸ್"ಅಥವಾ ಕ್ರಕ್ಸ್  ಎಂದರೆ ವಿಶ್ವಾಮಿತ್ರ!!!

ಆಲ್ಫಾ ಸೆಂಟೌರಿಯ ಪಕ್ಕದಲ್ಲಿ ಸುಲಭವಾಗಿ ಗುರುತಿಸಬಹುದಾದ ಸದರನ್ ಕ್ರಾಸ್ ಇದೆ, ಇದನ್ನು ಕ್ರಕ್ಸ್ ಎಂದೂ ಕರೆಯುತ್ತಾರೆ. ಜನಪ್ರಿಯ ನಂಬಿಕೆಯ ಪ್ರಕಾರ, ಈ "ಸದರನ್ ಕ್ರಾಸ್" ಎಂದರೆ ವಿಶ್ವಾಮಿತ್ರ!!!
"ಸದರನ್ ಕ್ರಾಸ್"ಅಥವಾ ಕ್ರಕ್ಸ್  ಎಂದರೆ ವಿಶ್ವಾಮಿತ್ರ!

ತ್ರಿಶಂಕುವಿನ ದಂತಕಥೆಯ  ಪ್ರಕಾರ, ತ್ರಿಶಂಕುವನ್ನು ಸುತ್ತುವರೆದಿರುವ ದಕ್ಷಿಣ ಸಪ್ತರ್ಷಿ  ಮಂಡಲ ಇರಬೇಕು. ಆದಾಗ್ಯೂ  ಜ್ಯೋತಿಷ್ಯಮಂಡಲದ ರ ಹೊರಗಿನ ಉಲ್ಲೇಖದಿಂದ, ಆಲ್ಫಾ ಸೆಂಟೌರಿ ಎಂದಿಗೂ ದಕ್ಷಿಣದ ಧ್ರುವ ನಕ್ಷತ್ರವಾಗಲು ಸಾಧ್ಯವಿಲ್ಲ. ವೈದಿಕ ಸಮಾಜವು ಹೇಳಿದಂತೆ 54 ಡಿಗ್ರಿ ಅಳತೆ ಮಾಪಕವನ್ನು  ನಾವು ಗಣನೆಗೆ ತೆಗೆದುಕೊಂಡಾಗ ಅದು ಎಂದಿಗೂ ಧ್ರುವ ನಕ್ಷತ್ರವಾಗಿರಲಿಲ್ಲ ಎಂಬುದು ಸ್ಪಷ್ಟವಾಗಲಿದೆ.  ವಿಶ್ವಾಮಿತ್ರ , ಕ್ರಕ್ಸ್ ಪ್ರಸ್ತುತ ದಕ್ಷಿಣ ಧ್ರುವ ನಕ್ಷತ್ರಕ್ಕೆ ಒಂದು ಸೂಚಕವಾಗಿದೆ. ಈ ಧ್ರುವ ನಕ್ಷತ್ರವನ್ನು ಸಿಗ್ಮಾ ಆಕ್ಟಾಂಟಿಸ್ ಎಂದು ಕರೆಯಲಾಗುತ್ತದೆ. ಉತ್ತರ ಆಕಾಶವು ಉತ್ತರ ಧ್ರುವ ನಕ್ಷತ್ರವಾದ ಪೋಲಾರಿಸ್ (ಧ್ರುವ ನಕ್ಷತ್ರ) ಸುತ್ತ ಹೇಗೆ ತಿರುಗುತ್ತದೆ ಎಂದು ತೋರುತ್ತದೆಯೋ, ದಕ್ಷಿಣ ಆಕಾಶವು ಈ ದಕ್ಷಿಣ ಧ್ರುವ ನಕ್ಷತ್ರದ ಸುತ್ತ ಸುತ್ತುತ್ತದೆ. ಮತ್ತು ಕ್ರಕ್ಸ್ ಲೋಕಲೋಕಾ (ಕ್ಷೀರಪಥ) ಕ್ಲಸ್ಟರ್‌ನಲ್ಲಿ ಕಂಡುಬರುತ್ತದೆ.

ಉತ್ತರ ಧ್ರುವ ನಕ್ಷತ್ರವನ್ನು ಉತ್ತರ ಸಪ್ತರ್ಷಿ ಮಂಡಲ ಎನ್ನುವಂತೆ ನಾಲ್ಕು ನಕ್ಷತ್ರಗಳ ಕ್ರಕ್ಸ್ ಅನ್ನು ಸಪ್ತಾ ರಿಷಿ ಮಂಡಲ ಎಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಹೆಸರೇ ಸೂಚಿಸುವಂತೆ, ದಕ್ಷಿಣದ ಸಪ್ತರ್ಷಿ ಮಂಡಲ ದಲ್ಲಿ ಉತ್ತರ ಸಪ್ತರ್ಷಿ ಮಂಡಲ (ಉರ್ಸಾ ಮೇಜರ್ ನಕ್ಷತ್ರಪುಂಜದಲ್ಲಿ ಬಿಗ್ ಡಿಪ್ಪರ್) ನಂತಹ 7 ಪ್ರಮುಖ ನಕ್ಷತ್ರಗಳು ಇರಬೇಕು 

ದಕ್ಷಿಣದ ಸಪ್ತರ್ಷಿ ಮಂಡಲ
ವಿಶ್ವಾಮಿತ್ರ ಗುರುತಿಸಿದ್ದ(ಪುರಾಣದ ಕಥೆಯಂತೆ ಸೃಷ್ಟಿಸಿದ್ದ)ದಕ್ಷಿಣ ಸಪ್ತರ್ಷಿ ಮಂಡಲವು ಹೀಗಿರಬಹುದು

ತ್ರಿಶಂಕು ಕಥೆಯ  ಪ್ರಕಾರ, ಉತ್ತರ ಗೋಳಾರ್ಧದ ಸಪ್ತರ್ಷಿ ಮಂಡಲವನ್ನು ಹೋಲುವಂತೆ ದಕ್ಷಿಣ ಗೋಳಾರ್ಧದಲ್ಲಿ ವಿಶ್ವಾಮಿತ್ರ 7 ಋಷಿಗಳ ಸಪ್ತರ್ಷಿ ಮಂಡಲವನ್ನು ರಚಿಸಿದ. ಮೊದಲು ಉತ್ತರ ಸಪ್ತರ್ಷಿ ಮಂಡಲ ನೋಡುವುದಾದರೆ ಏಳು ನಕ್ಷತ್ರಗಳು ವೈದಿಕ ಧರ್ಮದ ಆಧಾರ ಸ್ತಂಭಗಳಾಗಿರುವ ಸಪ್ತರ್ಷಿ ಗಳುಮಾನವಕುಲದ ವಿಕಾಸಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಅವು ಕಾಲಕಾಲಕ್ಕೆ ಬದಲಾಗುತ್ತವೆ (ಮನ್ವಂತರ)ಈ ಕಾಪ್ಮಿಕ್ ಜ್ಞಾನವು ಈ ಸಪ್ತರ್ಷಿ ಮಂಡಲದ ಆಕಾರವನ್ನು (ಬಿಗ್ ಡಿಪ್ಪರ್ ಎಂದು ಕರೆಯಲಾಗುತ್ತದೆ) ಸಮಯದೊಂದಿಗೆ ಬದಲಾಗುತ್ತದೆ ಎಂದು ಹೇಳುತ್ತದೆ.

ವಿಶ್ವಾಮಿತ್ರನು ತ್ರಿಶಂಕುವಿನ ಸಲುವಾಗಿ  ದಕ್ಷಿಣ ದಿಕ್ಕಿನಲ್ಲಿ ಇದರ ಪ್ರತಿಕೃತಿಯನ್ನು ರಚಿಸಿದರು. ಸಪ್ತರ್ಷಿಗಳ ದಕ್ಷಿಣದ ಪ್ರತಿರೂಪವಾಗಲು ಸೆಂಟಾರಸ್ ಒಂದನ್ನು ನಾವು ಕಾಣಬಹುದು. ಸೆಂಟಾರಸ್ ನಿಂದ ಮುಂದೆಲ್ಲೋ  ದಕ್ಷಿಣ ಸಪ್ತರ್ಷಿ ಮಂಡಲವನ್ನು ಗುರುತಿಸಲಾಗುತ್ತದೆ.ದು ದಕ್ಷಿಣ ಧ್ರುವದ ಸುತ್ತಲೂ ತಿರುಗುತ್ತಲೇ ಇರುವುದರಿಂದ, ಇದು ತ್ರಿಶಂಕು ಸುತ್ತ ಸುತ್ತಿದಂತೆ ಭಾಸವಾಗುತ್ತದೆ. ವಿಶ್ವಾಮಿತ್ರನು ಗುರುತಿಸಿದ  (ಪುರಾಣದ ಪ್ರಕಾರ ರಚಿಸಲಾದ)ದಕ್ಷಿಣ ಸಪ್ತರ್ಷಿ ಮಂಡಲದ ವಿನ್ಯಾಸವು ಸೆಂಟಾರಸ್ ನಕ್ಷತ್ರಪುಂಜದ 7 ನಕ್ಷತ್ರಗಳು ಪ್ರತಿದಿನ ತ್ರಿಶಂಕು (ಆಲ್ಫಾ ಸೆಂಟೌರಿ) ಯನ್ನು ಸುತ್ತುವರಿಯುತ್ತದೆ. , ಅದು ವೃತ್ತಾಕಾರದಲ್ಲಿ ಚಲಿಸುವಾಗ ಇದು ಧ್ರುವದ ಚಲನೆಯ 4 ಡಿಗ್ರಿ ವ್ಯಾಪ್ತಿಯ ವೈದಿಕ ಪರಿಕಲ್ಪನೆಯನುಸಾರ ಎಲ್ಲಾ ಕಾಲಕ್ಕೆ ಸರಿಯಾಗಿ ಹೋಲುತ್ತದೆ.

ದಕ್ಷಿಣ ಧ್ರುವವು ಜ್ಯೋತಿಷ್ಯಮಂಡಲ ಮಾರ್ಗವನ್ನು ಗುರುತಿಸುವುದರೊಂದಿಗೆ, ತ್ರಿಶಂಕು ಉಲ್ಲೇಖಗಳು ತ್ರಿಶಂಕು ಸ್ವರ್ಗದ ಅಥವಾ ದಿಕ್ಕಿನಲ್ಲಿರುವ ಸೆಂಟಾರಸ್ / ಲಾನಿಯಾಕಿಯ ತಿರುವನ್ನು ಸೂಚಿಸುತ್ತವೆ, ಅಂದರೆ ಬಾಹ್ಯಾಕಾಶದಲ್ಲಿ ಜೀವನದ, ಜೀವಿಗಳ ಬಗೆಗೆ ತಿಳಿಯಬಯಸುವವರು ಮ್ಮ ಗಮನವನ್ನು ಈ ದಿಕ್ಕಿನಿಂದ ಬೇರೆಡೆಗೆ ತಿರುಗಿಸಬಹುದು.

--ಮುಂದುವರಿಯುವುದು

No comments:

Post a Comment