Tuesday, October 15, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 9

ತಳಿಪರಂಬ(Taliparamba)

    ದೇವರ ಸ್ವಂತ ನಾಡೆಂದು ಪ್ರಸಿದ್ದವಾದ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಒಂದು ಪ್ರಪ್ರಾಚೀನ ಹಿಂದೂ ಶಕ್ತಿಪೀಠವಾಗಿದ್ದು ಇಲ್ಲಿನ ಡ್ರೀ ರಾಜ ರಾಜೇಶ್ವರನು ತನ್ನ ಭಕ್ತಕೋಟಿಗೆ ಸದಾ ಒಳಿತು ಮಾಡುತ್ತಾ ತಾನು ಅವರಿಂದಿ ನಿತ್ಯವೂ ವಿವಿಧ ಬಗೆಯ ಸೇವೆ ಹೊಂದುತ್ತಿದ್ದಾನೆ. ಈ ಕ್ಷೇತ್ರಕ್ಕೆ ಕಾಲಿಟ್ಟೊಡನೆಯೇ ಪ್ರತಿಯೊಬ್ಬ ಭಕ್ತನಿಗೂ ಅಲ್ಲಿನ ಅದ್ಭುತ ಶಕ್ತಿಯ ಅನುಭವವಾಗುತ್ತದೆ. ತಮ್ಮ ದೇಹದ ಸುತ್ತಲೂ ಆ ಮಹಾಶಕ್ತಿಯ ಜ್ಯೋತಿರ್ವಲಯವೊಂದು ನಿರ್ಮಾಣವಾದಂತಹಾ ಅನುಭವವು ಆಗುವುದನ್ನು ಇಂದಿಗೂ ಇಲ್ಲಿಗೆ ಬರುವ ಸಾಮಾನ್ಯ ಭಕ್ತರು ಸ್ವತಃ ಅನುಭವಿಸಬಹುದು.

     ಒಮ್ಮೆ ಶ್ರೀ ಕ್ಷೇತ್ರಕ್ಕೆ ಭೇಟಿಕೊಟ್ತ ಶ್ರೀ ಪರಷುರಾಮರಿಗೆ ಕ್ಷೇತ್ರದಲ್ಲಿ ಉಂಟಾದ ಅತ್ಯಂತ ರೋಮಾಂಚಕ ಆಧ್ಯಾತ್ಮಿಕ ಶಕ್ತಿಯ ಅನುಭವವಾಗುತ್ತದೆ. ಇದರಿಂದ ಕುತೂಹಲಿಗಳಾದ ಪರಷುರಾಮರು ತಾವು ಕ್ಷೇತ್ರದ ಇತಿಹಾಸವನ್ನು ತಿಳಿಯಲು ಬಯಸುತ್ತಾರೆ. ಕೂಡಲೇ ತ್ರಿಲೋಕ ಸಂಚಾರಿಗಳಾದ ನಾರದರ ಬಳಿ ಸಾರಿದ ಪರಷುರಾಮರು ಶ್ರೀ ಕ್ಷೇತರ್ದ ಇತಿಹಾಶವನ್ನು ತಿಳಿಸುವಂತೆ ಕೇಳಲಾಗಿ ನಾರದರು ತಾವು ತಳಿಪರಂಬ ಶ್ರೀ ರಾಜರಾಜೇಶ್ವರನ ಮಹಿಮೆಯನ್ನು ಪರಷುರಾಮರಿಗೆ ಈ ಮುಂದಿನಂತೆ ತಿಳಿಸುತ್ತಾರೆ.
    ಸೃಷ್ಟಿಕರ್ತನಾದ ಬ್ರಹ್ಮನ ಮಕ್ಕಳಾದ ಸನಕಾ ಮತ್ತಿತರರು ವಿಶೇಷ ಮರಳು ಹಾಗೂ ಅಮೃತ ತತ್ವದಿಂದ ತಯಾರಿಸಿದ ಮೂರು ಜ್ಯೋತಿರ್ಲಿಂಗಗಳನ್ನು   ಬ್ರಹ್ಮದೇವನಿಗೆ ನೀಡಿದರು. ಆ ಮೂರು ಲಿಂಗಗಳನ್ನು ಬ್ರಹ್ಮದೇವನು ಪರಮೇಶ್ವರನ ಪತ್ನಿ ತಾಯಿ ಪಾರ್ವತಿದೇವಿಗೆ ಕೊಡುಗೆಯಾಗಿ ನೀಡಿದನು.
    ತ್ರೇತಾಯುಗದಲ್ಲಿ ಭಗವತಿಯ ಶ್ರೇಷ್ಠ ಭಕ್ತನಾದ ಮಾಂಧಾತ ಮತ್ತು ದ್ವಾಪರ ಯುಗದಲ್ಲಿ ಶ್ರೀಮಾತೆಯ ಆರಾಧಕರಾಗಿದ್ದ ಮುಚಕುಂದ ಹಾಗೂ ಶತಸೋಮನೆಂಬ ಮೂವರಿಗೆ ಶ್ರೀ ದೇವಿಯು ಆ ಅದ್ಭುತ ಲಿಂಗಗಗಳನ್ನು ನೀಡಿದ್ದಳು. ಹಾಗೆ ತಾನು ನೀಡಿದ ಲಿಂಗಗಳನ್ನು ಸೃಷ್ಟಿಯ ಯಾವುದೇ ಜೀವಜಂತುವು ಸಾವನ್ನಪ್ಪದ ಅಥವ ಯಾವುದೇ ನಿರ್ಜೀವ ಜೀವಿಯ ಭಾಗವು ಬೀಳದಿದ್ದಂತಹಾ ಸ್ಥಳದಲ್ಲಿ ಪ್ರತಿಷ್ಠೆ ಮಾಡುವಂತೆ ಸಲಹೆಯನ್ನಿತ್ತಳು.

    ತ್ರೇತಾ ಯುಗದಲ್ಲಿ ಈ ಅದ್ಭುತ ಲಿಂಗವನ್ನು ಪಡೆದಿದ್ದ ಮಾಂಧಾತನು ಈ ಲಿಂಗದ ಪ್ರತಿಷ್ಠೆಗಾಗಿ ಸಾಕಷ್ಟು ಸ್ಥಳದ ಹುಡುಕಾಟ ನಡೆಸಿದರೂ ದೇವಿ ಸಲಹೆಯಿತ್ತಂತಹಾ ಸ್ಥಳವು ಎಲ್ಲಿಯೂ ದೊರೆಯದಾಗಲು ಅಂತಿಮವಾಗಿ ಒಂದಿ ತಟ್ಟೆಯಲ್ಲಿ ಆ ಲಿಂಗವನ್ನು ಪ್ರತಿಷ್ಠಿಸಲಾಯಿತು. ಮಲಯಾಳದಲ್ಲಿ ತಟ್ಟೆಗೆ ‘ತಳಿಕ’ವೆಂದು ಕರೆಯುವುದರಿಂದ ದೈವಿ ಶಕ್ತಿಯ ಆ ಲಿಂಗವನ್ನು ಪ್ರತಿಷ್ಠಿಸಿದ ಆ ಪ್ರದೇಶಕ್ಕೆ ‘ತಳಿಪರಂಬ’ವೆಂಬ ಹೆಸರಾಯಿತು. ಹಾಗೆ ಹಲವು ಕಾಲಗಳ ನಂತರ ತ್ರೇತಾಯುಗದ ಅಂತ್ಯಕಾಲದಲ್ಲಿ ಆ ಜ್ಯೋತಿರ್ಲಿಂಗವು ಭೂಮಿಯಲ್ಲಿ ಅಂತರ್ಧಾನವಾಯಿತು. ಮತ್ತು ಆ ಸ್ಥಳದಲ್ಲಿ ಒಂದು ಅದ್ಭುತ ಶಕ್ತಿಯ ತರಂಗ ವರ್ತುಲವೊಂದು ಏರ್ಪಟ್ಟಿತು. ಮುಂದೆ ದ್ವಾಪರ ಯುಗದಲ್ಲಿ ಶ್ರೀ ದೇವಿಯಿಂದ ಎರಡನೆ ಜ್ಯೋತಿರ್ಲಿಂಗವನ್ನು ಪಡೆದ ಮುಚಕುಂದನು ತಾನು ಸಹ ಆ ಲಿಂಗ ಸ್ಥಾಪನೆಗೆ ಸೂಕ್ತ ಸ್ಥಳವನ್ನು ಅರಸುತ್ತಾ ಈ ಹಿಂದೆ ಮಾಂಧಾತ ಸ್ಥಾಪಿಸಿದ್ದ ಲಿಂಗವಿದ್ದ ಪ್ರದೇಶಕ್ಕೆ ಬಂದು ಅಲ್ಲೆ ತಾನು ಸಹ ಜ್ಯೋತಿರ್ಲಿಂಗವನ್ನು ಪ್ರತಿಷ್ಠಿಸಿದನು ಆ ಪ್ರದೇಶದಲ್ಲಿದ್ದ ಆದ್ಯಾತ್ಮಿಕ ಶಕ್ತಿವರ್ತುಲದ ಪರಿಣಾಮದಿಂದಾಗಿ ಆ ಜ್ಯೋತಿರ್ಲಿಂಗವೂ ತಾನು ಭೂಮಿಯಲ್ಲಿ ಅಂತರ್ಧಾನವಾಯಿತು. ಆ ನಂತರ ಶ್ರೀ ಮಾತೆಯಿಂದ ಮೂರನೆ ಜ್ಯೋತಿರ್ಲಿಂಗವನ್ನು ಪಡೆದಂತಹಾ ಶತಸೋಮನು ತಾನು ಸಹ ಈ ಹಿಂದೆ ಮಾಂಧಾತ, ಮುಚಕುಂದರು ತಾವು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದ್ದ ಅದೆ ಸ್ಥಳದಲ್ಲಿ ಪ್ರತಿಷ್ಠೆ ಮಾಡಿಸಿದನು. ಆದರೆ ಅಲ್ಲಿನ ಅದ್ಭುತ ವಿಶೇಷ ಶಕ್ತಿ ವರ್ತುಲದ ಪರಿಣಾಮ ಆ ಮೂರನೆ ಶಿವಲಿಂಗವೂ ಭೂಮಿಯಲ್ಲಿ ಅಂತರ್ಧಾನವಾಗುವುದಕ್ಕೆ ತೊಡಗಿತು.
    ಅದಾಗ ಶತಸೋಮನು ತಾನು ತಪಸ್ವಿಗಳಾದ ಅಗಸ್ತ್ಯ ಮಹರ್ಷಿಗಳಾ ಬಳಿ ಹೋಗಿ ತನಗೆ ಸಹಾಯ ಮಾಡುವಂತೆ ಕೋರಿದನು. ಅದಕ್ಕೊಪ್ಪಿದ ಅಗಸ್ತ್ಯರು ತಾವು ಆ ಜ್ಯೋತಿರ್ಲಿಂಗಗಳಿದ್ದ ಪ್ರದೇಶಕ್ಕೆ ಬಂದು ಅಲ್ಲೊಂದು ತುಪ್ಪದ ದೀಪವನ್ನು ಬೆಳಗಿ ತಾವು ಆ ಜ್ಯೋತಿರ್ಲಿಂಗಕ್ಕೆ ಹನ್ನೆರಡು ಬಾರಿ ಪ್ರದಕ್ಷಿಣೆ ಬಂದು ತಮ್ಮ ಹದಿಮೂರನೇ ಪ್ರದಕ್ಷಣೆಯಲ್ಲಿ ತೊಡಗಿದ್ದಾಗ ಜ್ಯೋತಿರ್ಲಿಂಗವು ಭೂಮಿಯಲ್ಲಿ ಸಧೃಢವಾಗಿ ನೆಲೆಸಿತು. ಆ ಪ್ರಕಾರವಾಗಿ ಆ ಜ್ಯೋತಿರ್ಲಿಂಗವಿದ್ದ ಪ್ರದೇಶದ ಸುತ್ತಲಿನ ಆಧ್ಯಾತ್ಮಿಕ ಪ್ರಭೆ ತಾನದು ಮೂರು ಪಟ್ಟು ಹೆಚ್ಚಿತು. (ರಾಜಾ ಶತಸೋಮನು ತಾನು ಮೂರನೆ ಜ್ಯೋತಿರ್ಲಿಂಗವನ್ನು ಅಲ್ಲಿ ಸ್ಥಾಪಿಸಿದ್ದನು. ) ಅಂದು ಅಗಸ್ತ್ಯ ಮಹಾಮುನಿಗಳು ತಾವು ಬೆಳಗಿದ ತುಪ್ಪದ ದೀಪ ಯುಗಯುಗಾಂತರದಿಂದಲೂ ನಂದಾದೀಪದಂತೆ ಬೆಳಗುತ್ತಿರುವುದನ್ನು ನಾವು ಇಂದೂ ಸಹ ಕಾಣಾಬಹುದಾಗಿದೆ.


No comments:

Post a Comment