Sunday, December 09, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -98

ಸಿಗಂಧೂರು (Sigandur)

ಮಲೆನಾಡಿನ ದಟ್ಟ ಕಾಡಿನ ನಡುವೆ ಚೌಡೇಶ್ವರಿ ಮಾತೆ ನೆಲೆಸಿದ ಸ್ಥಳವೇ ಸಿಗಂಧೂರು. ಸಾಗರ ತಾಲೂಕಿನ ಶರಾವತಿ ಹಿನ್ನೀರಿನ  ಮಡಿಲಲ್ಲಿರುವ ಈ ಕ್ಷೇತ್ರಕ್ಕೆ ತೆರಳಲು ಸಾಗರ-ಹೊಳೆಬಾಗಇಲು ನಡುವಿನ ಬಸ್ ಹತ್ತಿ ಸುಮಾರು ದೂರ ಶರಾವತಿಯ ಲಾಂಚ್ ನಲ್ಲಿ ಪ್ರಯಾಣಿಸಿ ಮತ್ತೆ ಬಸ್ ನಲ್ಲಿ ಐದು ಕಿಮೀ ದೂರ ಕ್ರಮಿಸಬೇಕು. ಸಾಗರ ಪಟ್ಟಣದಿಂದ ಸುಮಾರು 40 ಕಿಮೀ ಇರುವ ಸಿಗಂಧೂರಿಗೆ ಬೆಂಗಳೂರಿನಿಂದ 410 ಕಿಮೀ ಆಗಲಿದೆ.


ಸುಮಾರು ಎರಡೂವರೆ ಶತಮಾನ ಕಾಲದಷ್ಟು ಹಳೆಯದಾದ ಈ ಕ್ಷೇತ್ರದಲ್ಲಿ ಮಕರ ಸಂಗಕ್ರಮಣದಿಂದ ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ.ಸಿಗಂಧೂರು. ಹೊನ್ನೆಮರಡುವಿನಲ್ಲಿ ನೋಡಬಹುದಾದ ಮಹತ್ವವಾದ ಸ್ಥಳ ಎನಿಸಿದ್ದು ಪ್ರತಿನಿಯ ಬೇರೆ ಬೇರೆ ಊರುಗಳಿಂದ ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಸ್ಥಳದ ಸುತ್ತ ಮುತ್ತಲೆಲ್ಲಿಯೂ ಕಳ್ಳತನ ಮಾಡದಂತೆ ದೇವಿಯು ತಡೆದಿದ್ದಾಳೆ ಎನ್ನುವುದು ಸ್ಥಳೀಯ ಜನರ ನಂಬಿಕೆಯಾಗಿದೆ. ಈ ದೇವಾಲಯದ ಕೂಗಳತೆ ಅಂತರದಲ್ಲೇ ಭೂತನಾಥ ಎಂಬ ವೀರಭದ್ರ ದೇವಾಲಯವೂ ಇದೆ. ಭೂತನಾಥ ಸುತ್ತಲ ಗ್ರಾಮಗಳನ್ನು ಕಾಯುತ್ತಾರೆ ಎನ್ನುವುದು ಜನರ ನಂಬುಗೆಯಾಗಿದೆ.


***

ಸುಮಾರು ಐದು ಶತಮಾನದ ಹಿಂದೆ ಶೇಶಪ್ಪ ಎಂಬಾತಿಂದಿನ ಸಿಗಂಧೂರು ಇರುವ ಸ್ಥಳದಲ್ಲಿದ್ದ ದಟ್ಟ ಕಾಡಿಗೆ ಬೇಟೆಗಾಗಿ  ಬಂದಿದ್ದನು. ದಾರಿ ತಪ್ಪಿದ ಕಾರಣ ರಾತ್ರಿ ಅವನೊಂದು ಮರದಡಿ ಮಲಗಿದ್ದ. ಅಂದಿನ ರಾತ್ರಿ ತಾಯಿ ಚೌಡೇಶ್ವರಿ ಅವನ ಕನಸಲ್ಲಿ ಕಾಣಿಸಿಕೊಂಡು "ಅಯ್ಯಾ ಶೇಶಪ್ಪ, ಇಲ್ಲಿ ನಾನು ನೆಲೆಸಿದ್ದೇನೆ, ನೀನು ನನಗಾಗಿ ಒಂದು ಗುಡಿಯನ್ನಿಲ್ಲಿ ಕಟ್ಟಿಸಬೇಕು" ಎಂದು ಆದೇಶಿಸಿದ್ದಳು.
ಮರುದಿನ ಊರಿಗೆ ಮರಳಿದ ಶೇಶಪ್ಪ ತನ್ನೂರ ಪುರೋಹಿತರ ಬಳಿ ಈ ಸಮಾಚಾರ ಹೇಳಲು ಅವರು ಆ ಸ್ಥಳದಲ್ಲಿ ಗುಡಿ ಕಟ್ಟಿ  ದೇವಿಯನ್ನು ಪ್ರತಿಷ್ಠಾಪಿಸುತ್ತಾರೆ. 

No comments:

Post a Comment