Sunday, April 07, 2024

ಶ್ರೀನಿವಾಸ ಪದ್ಮಾವತಿ ಮದುವೆ ದಿನಾಂಕ ಕ್ರಿಸ್ತಪೂರ್ವ 9 ಮಾರ್ಚ್ 2602

 ರಾಜ ಸಂಖಾನ ತಿರುಮಲ ಬೆಟ್ಟದಲ್ಲಿ ವೆಂಕಟೇಶ್ವರನ ವಿಗ್ರಹವನ್ನು ನಿರ್ಮಿಸಿ ಪ್ರತಿಷ್ಠಾಪಿಸಿದ ನಂತರ, ಬೆಟ್ಟದ ಮೇಲೆ ನಿಯಮಿತವಾದ ಪೂಜೆಯನ್ನು ಹಲವಾರು ವರ್ಷಗಳವರೆಗೆ ನಡೆಸಲಾಯಿತು ಮತ್ತು ನಂತರ ಒಂದು ಅವಧಿಯಲ್ಲಿ ದೇವಾಲಯವು ನಿರ್ಲಕ್ಷಿಸಲ್ಪಟ್ಟಿತು.


ಋಷಿ ದೂರ್ವಾಸನು ವಿಷ್ಣುವನ್ನು ಅವಮಾನಿಸಿದಾಗ, ಲಕ್ಷ್ಮಿಯು ವೈಕುಂಠವನ್ನು ತೊರೆದು ಮಹಾರಾಷ್ಟ್ರದ ಕೊಲ್ಲಾಪುರದ(ಪ್ರಾಚೀನ ಹೆಸರಾದ ಕರವೀರಪುರದಲ್ಲಿ) ನೆಲೆಸಿದಳು. ವಿಷ್ಣುವು ತಿರುಮಲವನ್ನು ತಲುಪಿ ಪುಷ್ಕರಿಣಿ ಬಳಿಯ ಹುಣಸೆ ಮರದ ಕೆಳಗೆ ಧ್ಯಾನ ಮಾಡಲು ಪ್ರಾರಂಭಿಸಿದನು. ಅವನ ಸುತ್ತಲೂ ಗೆದ್ದಲು ಹುತ್ತ ಕಟ್ಟಿತು. ಇದೇ ಸಮಯದಲ್ಲಿ ವಿಷ್ಣುವಿನ್ ಜೊತೆ ಜೊತೆಗೆ ಬ್ರಹ್ಮ ಮತ್ತು ಶಿವ ಹಸು ಮತ್ತು ಕರುವಾಗಿ ಬಂದರು. ಸೂರ್ಯ ಇದನ್ನು ಲಕ್ಷ್ಮಿಗೆ ವಿವರಿಸುತ್ತಾನೆ ಮತ್ತು ಅವಳು ಗೋಪಾಲಕಿಯಾಗಿ ಬರುವಂತೆ ಕೇಳುತ್ತಾನೆ. ಹಸು, ಕರುವಾಗಿದ್ದ ಬ್ರಹ್ಮ ಹಾಗೂ ಶಿವನನ್ನು ಚೋಳ ರಾಜನಿಗೆ ಮಾರಾಟ ಮಾಡಲಾಗುತ್ತದೆ. 

ಆದರೆ ಆ ಹಸು ಪ್ರತಿನಿತ್ಯ ಮೇಯುವುದಕ್ಕೆ ಹೋದಾಗ ವಿಷ್ಣು ತಪಸ್ಸು ಮಾಡುತ್ತಿದ್ದ ಹುತ್ತದ ಸಮೀಪ ಬಂದು ಅಲ್ಲಿ ವಿಷ್ಣುವಿಗೆ ಹಾಲನ್ನು ನೀಡಿ ಖಾಲಿ ಕೆಚ್ಚಲಿನೊಂದಿಗೆ ಹಿಂದಿರುಗುತ್ತಿತ್ತು. ಚೋಳ ರಾಣಿಯು ಹಾಲಿನ ಕೊರತೆಯ ಕಾರಣ ಗೋಪಾಲಕರನ್ನು ಶಿಕ್ಷಿಸುತ್ತಾಳೆ. ಆಗ ಅವರು ಒಮ್ಮೆ ಹಸುವನ್ನು ಬೆನ್ನತ್ತಿ ಬಂದರು. ಆಗ ಹಸು ಹುತ್ತದ ಒಳಗೆ ಹಾಲು ಸುರಿಯುತ್ತಿರುವುದು ಕಂಡರು. ಹುತ್ತವನ್ನು ಒಡೆಯಲು ಕೊಡಲಿಯಿಂದ ಅದರ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಹುತ್ತದೊಳಗಿದ್ದ ವಿಷ್ಣುವಿನ ಹಣೆಗೆ ಗಾಯವಾಗುತ್ತದೆ. ಗಾಯಗೊಂಡ ವಿಷ್ಣುವನ್ನು ಮಾನವ ರೂಪದಲ್ಲಿ ನೋಡಿದ ಮೇಲೆ ಗೋಪಾಲಕರು ಅಲ್ಲೇ ಪ್ರಾಣ ಬಿಡುತ್ತಾನೆ. ಇತ್ತ ಹಸು ರಕ್ತದ ಕಲೆಗಳೊಂದಿಗೆ ಹಿಂದಿರುಗಿದ ನಂತರ, ಚೋಳ ರಾಜ ತನ್ನ ಗೋಪಾಲಕನ ಮೃತ ದೇಹ ಹುಡುಕುತ್ತಾ ಹುತ್ತದ ಸಮೀಪ ಬರುತ್ತಾನೆ.  ಆಗ ವಿಷ್ಣು ಹುತ್ತದಿಂದ ಹೊರಬಂದು ಸೇವಕನು ಮಾಡಿದ ತಪ್ಪಿಗೆ ರಾಜನನ್ನು ಶಪಿಸಿದನು.

ರಾಜನು ಕರುಣೆ ತೋರೆಂದು ಬೇಡಿಕೊಂಡಾಗ , ವಿಷ್ಣುವು ಮುಂದಿನ ಜನ್ಮದಲ್ಲಿ ರಾಜನು ಆಕಾಶರಾಜನಾಗಿ ಹುಟ್ಟುತ್ತಾನೆ ಎಂದು ಹೇಳಿದನು. ಅಲ್ಲದೆ ಆ ಸಮಯದಲ್ಲಿ ಅವನ ಪುತ್ರಿಯನ್ನು ನನ್ನೊಂದಿಗೆ ಮದುವೆ ಮಾಡಿ ಮತ್ತು ಅವನ ಕಿರೀಟವನ್ನು ತನ್ನ (ವಿಷ್ಣು) ತಲೆ ಮೇಲಿಟ್ತಾಗ , ಅವನು ಶಾಪದಿಂದ ಮುಕ್ತನಾಗುತ್ತಾನೆ ಎಂದು ಭರವಸೆ ನೀಡುತ್ತಾನೆ. 

ಅಂದಿನಿಂದ ವಿಷ್ಣುವು ವರಾಹನ ಅನುಮತಿಯೊಂದಿಗೆ ತಿರುಮಲ ಬೆಟ್ತದ ಮೇಲೆ ಉಳಿಯಲು ಪ್ರಾರಂಭಿಸಿದನು,

ದ್ವಾಪರ ಯುಗದ ಅಂತ್ಯದಲ್ಲಿ, ಶ್ರೀ ಕೃಷ್ಣನನ್ನು ಅವನ ಸಾಕು ತಾಯಿ ಯಶೋದೆ ಅದೊಮ್ಮೆ ತಾನು ನಿನ್ನನ್ನು ಸಾಕಿ ಬೆಳೆಸಿದರೂ ಅವನ ಮದುವೆಗಳನ್ನು ನೋಡಲಾಗುವುದಿಲ್ಲವೆ? ಎಂದು ಕೇಳಿದ್ದಳು. ಆಗ ಕೃಷ್ಣ ಮುಂದಿನ ಜನ್ಮದಲ್ಲಿ ನೀನು ನನ್ನ ಮದುವೆ ಮಾಡಿಸುತ್ತೀಯೆ ಎಂದು ವಚನ ನೀಡಿದ್ದನು. ಈ ಯಶೋಧೆಯು ಬಕುಳಾ ದೇವಿಯಾಗಿ ಪುನರ್ಜನ್ಮ ಪಡೆದು ತಿರುಮಲ ಬೆಟ್ಟದಲ್ಲಿ ವರಾಹ ಸೇವೆ ಮಾಡುತ್ತಿದ್ದಳು.

ಲಕ್ಷ್ಮಿಯಿಂದ ಬೇರ್ಪಟ್ಟ ವಿಷ್ಣುವು ಇಂದಿನ ತಿರುಚಾನೂರಿನಲ್ಲಿ ಪಂಚಮಿ ತೀರ್ಥಂ ಎಂಬ ಕೊಳದಲ್ಲಿ ಭಗವಾನ್ ಸೂರ್ಯನಿಗಾಗಿ ತೀವ್ರ ತಪಸ್ಸು ಮಾಡಿದನು. ಈಗ ಪದ್ಮ ಸರೋವರಂ ಎಂದು ಕರೆಯಲ್ಪಡುವ ಆ ಕೊಳವನ್ನು ವಿಷ್ಣುವೇ ನಿರ್ಮಿಸಿ ಅದನ್ನು ಚಿನ್ನದ ಕಮಲದ ಹೂವುಗಳಿಂದ ತುಂಬಿಸಿ ಅದರ ದಂಡೆಯ ಮೇಲೆ 12 ವರ್ಷಗಳ ಕಾಲ ತಪಸ್ಸು ಮಾಡಿದನು. ಇದು ತಿರುಚಾನೂರಿನ ಪದ್ಮಾವತಿ ದೇವಿ ದೇವಸ್ಥಾನದ ಪಕ್ಕದಲ್ಲಿ ಈಗಲೂ ಇದ್ದು ಪಕ್ಕದಲ್ಲೇ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಸ್ಥಾನವಿದೆ. 13ನೇ ವರ್ಷದಲ್ಲಿ ಕಾರ್ತಿಕ ಮಾಸದ ಶುಕ್ಲ ಪಕ್ಷ ಪಂಚಮಿ ತಿಥಿ, ಉತ್ತರಾಷಾಢ ನಕ್ಷತ್ರ, ಶುಕ್ರವಾರ ಪದ್ಮ ಸರೋವರದಿಂದ ಲಕ್ಷ್ಮಿ ಆವಿರ್ಭವಿಸಿದಳು.

ಲಕ್ಷ್ಮಿ ಪದ್ಮಾವತಿ ದೇವಿಯಾಗಿ ಹಿಂತಿರುಗುತ್ತಾಳೆ ಎಂದು ವಿಷ್ಣುವಿಗೆ ಖಚಿತವಾಗಿತ್ತು.

ಶಾಪಗ್ರಸ್ತ ಚೋಳ ರಾಜನು ಚಂದ್ರ ವಂಶದಲ್ಲಿ ಜನಿಸಿದನು, ಪಾಂಡವರ ವಂಶಸ್ಥರಲ್ಲಿ ಒಬ್ಬನಿಗೆ ಮಿತ್ರ ವರ್ಮ ಅಥವಾ ಸುಧನ್ವ (ಕೆಲವು ಬಾರಿ ಸುಧರ್ಮ ಎಂದು ಉಲ್ಲೇಖಿಸಲಾಗಿದೆ) ಮತ್ತು ಅವನ ಪತ್ನಿ ಪಾಂಡ್ಯ ರಾಜಕುಮಾರಿ ಮನೋರಮಾ, ಅವರು ತುಂಡಿರ ಮಂಡಲವನ್ನು ನಾರಾಯಣಪುರವನ್ನು ರಾಜಧಾನಿಯಾಗಿಸಿಕೊಂಡು ಆಳ್ವಿಕೆ ನಡೆಸುತ್ತಿದ್ದಾಗ ಅವನಿಗೆ ಆಕಾಶ ರಾಜ ಎಂಬ ಮಗನಿದ್ದನು.  ಆಕಾಶ ರಾಜನು ಶಾಕ್ಯ ರಾಜಕುಮಾರಿ ಧರಣಿಯನ್ನು ಮದುವೆಯಾಗುತ್ತಾನೆ. ಆದರೆ ಅವರಿಗೆ ಮಕ್ಕಳಾಗಲಿಲ್ಲ. ಆಕಾಶ ರಾಜನು ಯಜ್ಞವನ್ನು ಮಾಡಲು ಬಯಸಿದನು ಮತ್ತು ಇಂದಿನ ಆಂಧ್ರ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಅರಣಿ ನದಿಯ ಬಳಿ ಭೂಮಿಯನ್ನು ಉಳುಮೆ ಮಾಡಲು ಪ್ರಾರಂಭಿಸಿದಾಗ, ಅವನಿಗೆ ಒಂದು ಹೆಣ್ಣು ಮಗುವಿನೊಂದಿಗೆ ಚಿನ್ನದ ಕಮಲಪುಷ್ಪ ದೊರಕಿತು.  ಅವರು ಮಗುವನ್ನು ದತ್ತು ಪಡೆದರು ಮತ್ತು ಪದ್ಮಾವತಿ ಎಂದು ನಾಮಕರಣ ಮಾಡಿದರು.  ದಂಪತಿಗಳು ಪದ್ಮಾವತಿಯನ್ನು ದತ್ತು ತೆಗೆದುಕೊಂಡ ಕೆಲವೇ ದಿನಗಳಲ್ಲಿ, ರಾಣಿ ಧರಣಿ ಗರ್ಭಿಣಿಯಾಗಿ ವಸುದಾನ ಎಂಬ ಗಂಡು ಮಗುವಿಗೆ ಜನ್ಮ ನೀಡಿದರು

ವಸುದಾನನ ಜಾತಕದಲ್ಲಿ ಮೇಷ ರಾಶಿಯಸೂರ್ಯ ಸೇರಿದಂತೆ 5 ಗ್ರಹಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು. ಶ್ರೀ ಕೃಷ್ಣನು ಕ್ರಿಸ್ತಪೂರ್ವ18 ಜೂನ್ 3229 ಮತ್ತು ಕ್ರಿಸ್ತಪೂರ್ವ23ನೇ ಜನವರಿ 3102 ಸಮಯದಲ್ಲಿ ಜೀವಂತವಾಗಿದ್ದನು. ಮರುದಿನ ಅಂದರೆ ಕ್ರಿಸ್ತಪೂರ್ವ24ನೇ ಜನವರಿ 3102  ಕಲಿಯುಗ ಪ್ರಾರಂಭವಾಯಿತು, ಮತ್ತು ಕೆಲವು ವರ್ಷಗಳ ನಂತರ, ಆಕಾಶ ರಾಜನಿಗೆ ವಸುದಾನ ಜನಿಸಿದನು.  5 ಗ್ರಹಗಳು ಉತ್ಕೃಷ್ಟವಾಗಬೇಕಾದರೆ, ವಸುದಾನ ಕರ್ಕ ರಾಶಿಯಲ್ಲಿ ಗುರು, ತುಲಾದಲ್ಲಿ ಶನಿ, ಮೇಷದಲ್ಲಿ ಸೂರ್ಯ, ಮೀನದಲ್ಲಿ ಶುಕ್ರ ಮತ್ತು ವೃಷಭದಲ್ಲಿ ಚಂದ್ರನೊಂದಿಗೆ ಜನಿಸಿದ್ದನು.  ಗುರುವು ಪ್ರತಿ 12 ವರ್ಷಗಳಿಗೊಮ್ಮೆ ತನ್ನ ಉಚ್ಚ ಸ್ಥಾನಕ್ಕೆ ಬರುತ್ತಾನೆ.  ಆದರೆ ಶನಿಯು ಪ್ರತಿ 30 ವರ್ಷಗಳಿಗೊಮ್ಮೆ ತುಲಾ ರಾಶಿ ಬರುತ್ತಾನೆ ಹಾಗಾಗಿ  , ಈ ಎರಡೂ ಗ್ರಹಗಳು ಸುಮಾರು 60 ವರ್ಷಗಳಲ್ಲಿ ಒಮ್ಮೆ ಉಚ್ಚವಾಗಿರುತ್ತವೆ. 

ವಿಕ್ರಮಾರ್ಕ ಮತ್ತು ಶಕ ಕರ್ತರು ನಿಧನರಾದ ನಂತರ ಆಕಾಶ ರಾಜ ಜನಿಸಿದ ಎಂದು ಪುರಾಣ ಉಲ್ಲೇಖಿಸುತ್ತದೆ, ಆದರೆ ಅವರು ಕ್ರಿಸ್ತಪೂರ್ವ1 ನೇ ಶತಮಾನದ(ಮತ್ತು ಶಾತವಾಹನ ವಿಕ್ರಮಾರ್ಕ ಅಲ್ಲ. ವಿಕ್ರಮಾರ್ಕ (ಅರ್ಕ ಎಂದರೆ ಸೂರ್ಯ) ಎಂಬ ಬಿರುದು ಹೊಂದಿರುವ ಅನೇಕ ರಾಜರಿದ್ದಾರೆ. ಪಾಂಡ್ಯ ಮತ್ತು ಚೋಳ ರಾಜವಂಶಗಳು ದ್ವಾಪರ ಯುಗದಿಂದ ಅಸ್ತಿತ್ವದಲ್ಲಿದ್ದವು, ಪಾಂಡ್ಯ ಎಂದರೆ ಹಳೆಯದು ಮತ್ತು ಚೋಳ ಎಂದರೆ ಹೊಸದು.)

ಪದ್ಮಾವತಿ ಮತ್ತು ವಸುದಾನರ ಜನನವು ಕಲಿಯುಗದ ಆರಂಭದಲ್ಲಿ ಮತ್ತು ಗೌತಮ ಬುದ್ಧನ (ಕ್ರಿಸ್ತಪೂರ್ವ1887 - 1807) ಜನನಕ್ಕೆ ಹಿಂದೆಯೇ ಸಂಭವಿಸಿರಬೇಕು, ಅದುಕ್ರಿಸ್ತಪೂರ್ವ  3102 - 1887 ನಡುವೆ ಇರಬೇಕು.

ಕಲಿಯುಗ ಪ್ರಾರಂಭವಾದ ನಂತರ (ಕ್ರಿಸ್ತಪೂರ್ವ3102 ) ಮತ್ತು ಕ್ರಿಸ್ತಪೂರ್ವ 1887  ನಡುವೆ ನಾವು ಒಂದು ಪೀಳಿಗೆಯಿಂದ ಎಣಿಸಲು ಪ್ರಾರಂಭಿಸಿದರೆ, ಸುಮಾರು 1200 ವರ್ಷಗಳು ಮತ್ತು ಗುರು ಮತ್ತು ಶನಿಯುಉಚ್ಚರಾಗಿರುವ  20 ವರ್ಷಗಳನ್ನು ನೋಡುತ್ತೇವೆ. ಆ 20 ವರ್ಷಗಳಲ್ಲಿ, ಸೂರ್ಯ ಅಥವಾ ಶುಕ್ರ 10 ಕ್ಕಿಂತ ಹೆಚ್ಚು ಬಾರಿ ತಮ್ಮ ಉಚ್ಚ ಸ್ಥಾನವನ್ನು ಕಳೆದುಕೊಳ್ಳುತ್ತಾನೆ. ಅಲ್ಲದೆ, ಶ್ರೀನಿವಾಸ ಮತ್ತು ಪದ್ಮಾವತಿಯ ವಿವಾಹ ಮುಹೂರ್ತವು ವಿಳಂಬಿ ನಾಮ ಸಂವತ್ಸರದಲ್ಲಿ, ವೈಶಾಖ ಮಾಸ, ದಶಮಿ ತಿಥಿ, ಶುಕ್ರವಾರ ಉತ್ತರ ಫಾಲ್ಗುಣಿ ನಕ್ಷತ್ರದಲ್ಲಿ ಚಂದ್ರನಿದ್ದಾಗ ಸಂಭವಿಸಿದೆ.  ಈ ವಿವರಗಳು ವಸುದಾನ ಅವರ ಮದುವೆಯ ಸಮಯದಲ್ಲಿ ಚಿಕ್ಕ ಬಾಲಕನಾಗಿದ್ದ ದಿನಾಂಕದೊಂದಿಗೆ ಹೊಂದಿಕೆಯಾಗಬೇಕು.

ಒಂದು ದಿನ, ಶ್ರೀನಿವಾಸನು ಆನೆಗಳ ಹಿಂಡನ್ನು ಹೆದರಿಸಲು ತನ್ನ ಕತ್ತಿಯೊಂದಿಗೆ ತನ್ನ ಕುದುರೆಯ ಮೇಲೆ ಹೊರಟನು, ಅದು ಹೆದರಿ ಪದ್ಮಾವತಿ ಇದ್ದ ಅರಮನೆಯತ್ತ ಓಡಿತು.  ಶ್ರೀನಿವಾಸನು ಅವಳ ಅರಮನೆಗೆ ಬಂದು ರಾಜಕುಮಾರಿಯ ಬಗ್ಗೆ ವಿಚಾರಿಸಿದನು ಆದರೆ ಅವಳ ಪರಿಚಾರಕರು ಅವನ ಮೇಲೆ ಕಲ್ಲುಗಳನ್ನು ಎಸೆದರು, ಏಕೆಂದರೆ ಶ್ರೀನಿವಾಸ ರಾಜಕುಮಾರನಾಗಿರಲಿಲ್ಲ. ಅವನು ಬಕುಳಾ ದೇವಿಯ ಬಳಿಗೆ ಹಿಂತಿರುಗಿದನು. ಬಕುಳಾ ದೇವಿಯು ಈ ವಿವಾಹ ನೆರವೇರಿಸುವ ಜವಾಬ್ದಾರಿ ತೆಗೆದುಕೊಂಡಳು. ಹತ್ತಿರದ ಶಿವ ದೇವಾಲಯದಿಂದ ಹಿಂದಿರುಗುತ್ತಿದ್ದ ಪದ್ಮಾವತಿಯ ಪರಿಚಾರಕರನ್ನು ಭೇಟಿ ಮಾಡಲು ತೀರ್ಮಾನಿಸಿದಳು.  

ಆಕಾಶ ರಾಜ ಕೋಟೆಯು ನಾರಾಯಣಪುರಂನಲ್ಲಿತ್ತು, ಇದು ಇಂದಿನ ನಾರಾಯಣವನಂ ಆಗಿದೆ ಮತ್ತು ನಾರಾಯಣವನಂ ದೇವಸ್ಥಾನದಿಂದ 1 ಕಿಮೀ ದೂರದಲ್ಲಿ ಪುರಾತನ ಈಶ್ವರ ದೇವಾಲಯವಿದೆ.

ಇತ್ತ ಪದ್ಮಾವತಿಯು ಅನಾರೋಗ್ಯಕ್ಕೆ ಒಳಗಾಗುತ್ತಾಳೆ ಮತ್ತು ಆಕೆಯ ಪೋಷಕರು ಬೃಹಸ್ಪತಿಯನ್ನು ಸಂಪರ್ಕಿಸಿ ಅವಳಿಗೂ ಶ್ರೀನಿವಾಸನಲ್ಲಿ ಆಸಕ್ತಿ ಇದೆ ಎಂದು ತಿಳಿಯಲು, ಅವರು ಮದುವೆಗೆ ಸೂಕ್ತವಾದ ದಿನಾಂಕವನ್ನು ನಿಗದಿಪಡಿಸಲು ಕೇಳುತ್ತಾರೆ.

ಪದ್ಮಾವತಿ ಶ್ರೀನಿವಾಸ ಕಲ್ಯಾಣವು 28 ನೇ ಕಲಿಯುಗ (ಪ್ರಸ್ತುತ), ವಿಳಂಬಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಶುಕ್ರವಾರ ಉತ್ತರ ಫಾಲ್ಗುಣಿ ನಕ್ಷತ್ರದಲ್ಲಿ ಸೂರ್ಯೋದಯಕ್ಕೆ ಸರಿಯಾಗಿ ನಡೆಯಿತು.  ಶ್ರೀನಿವಾಸನ ಜನ್ಮ ನಕ್ಷತ್ರ ಶ್ರವಣ ಮತ್ತು ಪದ್ಮಾವತಿಯದು ಮೃಗಶಿರ ಎಂದು ಅವರು ಈ ಮುಹೂರ್ತವನ್ನು ಹೇಳಿದ್ದಾರೆ ಆದುದರಿಂದ ಉತ್ತರ ಫಲ್ಗುಣಿ ಅವರಿಬ್ಬರಿಗೂ ಶುಭ ದಿನವಾಗಿರುತ್ತದೆ.  ಈ ಮುಹೂರ್ತವು ಕ್ರಿಸ್ತಪೂರ್ವ 9ನೇ ಮಾರ್ಚ್ 2602 ರಂದು ಬೆಳಿಗ್ಗೆ 6:45-7:00 ನಡುವೆ ಶುಭ ಗ್ರಹವಾದ ಗುರುವು ವೃಷಭ ಲಗ್ನದಲ್ಲಿದ್ದಾಗ ಬರುತ್ತದೆ. 

ಇದಕ್ಕೆ ಒಂಬತ್ತು ವರ್ಷಗಳ ಹಿಂದೆ ಎಂದರೆ ಕ್ರಿಸ್ತಪೂರ್ವ  10 ನೇ ಮಾರ್ಚ್ 2611  ರಂದು, ಪದ್ಮಾವತಿಯ ಕಿರಿಯ ಸಹೋದರ ವಸುದಾನನು 5 ಗ್ರಹಗಳು ಉಚ್ಚ ಸ್ಥಾನದೊಂದಿಗೆ ಜನಿಸಿದನು.  ಪೂರ್ವ ಕಲಿಯುಗದಲ್ಲಿ ಪುರಾಣಗಳಲ್ಲಿ ವಿವರಿಸಿರುವ ಈ 2 ದಿನಾಂಕಗಳು ಮತ್ತು ಗ್ರಹಗಳ ಸ್ಥಾನಗಳೊಂದಿಗೆ ನಿಖರವಾಗಿ ಹೊಂದಿಕೆಯಾಗುವ ಯಾವುದೇ ದಿನಾಂಕಗಳಿಲ್ಲ.

ತಿರುಪತಿಯಿಂದ 42 ಕಿ.ಮೀ ದೂರದಲ್ಲಿರುವ ಇಂದಿನ ನಾರಾಯಣವನದಲ್ಲಿ ಶ್ರೀನಿವಾಸ - ಪದ್ಮಾವತಿ ಕಲ್ಯಾಣವನ್ನು ನಡೆಸಲಾಯಿತು.


ಇಂದಿಗೂ, ನಾವು ಮದುವೆಗೆ ಮೊದಲು ವಧು ಮತ್ತು ವರರಿಗೆ ತೊಡಿಸಲು ಅನೇಕ ಗಿಡಮೂಲಿಕೆಗಳು ಮತ್ತು ಧಾನ್ಯಗಳನ್ನೊಳಗೊಂಡ ಗಿಡಮೂಲಿಕೆಗಳ ಸ್ನಾನದ ಪುಡಿಯನ್ನು ತಯಾರಿಸಲು ಬಳಸಲಾಗುವ ದೊಡ್ಡ ರುಬ್ಬುವ ಕಲ್ಲು (ತಿರುಗಾಲಿ) ಅನ್ನು ನೋಡಬಹುದು.


ಮದುವೆಗೆ ಮೊದಲು, ಶ್ರೀನಿವಾಸನು ಎಲ್ಲ ಋಷಿಗಳು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಅವರ ಆಶೀರ್ವಾದವನ್ನು ಪಡೆಯುತ್ತಾನೆ. ಆ ಸ್ಥಳ ಇಂದು ಅಪ್ಪಲಾಯಗುಂಟ, ಅಲ್ಲಿ ಪ್ರಸನ್ನ ವೆಂಕಟೇಶ್ವರ ಸ್ವಾಮಿಯು ಆನೆ ಹಿಂಡನ್ನು ಹೆದರಿಸುವ ಖಡ್ಗವನ್ನು ಹಿಡಿದಿದ್ದಾನೆ.

ಮದುವೆಯ ನಂತರ, ಅವರು ತಿರುಪತಿಯಿಂದ ಪಶ್ಚಿಮಕ್ಕೆ 12 ಕಿಮೀ ದೂರದಲ್ಲಿರುವ ಶ್ರೀನಿವಾಸ ಮಂಗಾಪುರದಲ್ಲಿ 6 ತಿಂಗಳ ಕಾಲ ಇದ್ದರು.

ಮದುವೆಯ ಸಮಯದಲ್ಲಿ ಶ್ರೀನಿವಾಸನ ತಲೆಯ ಮೇಲೆ ಕಿರೀಟವನ್ನು ಇರಿಸಿದ ನಂತರ ಆಕಾಶ ರಾಜನು ಮೋಕ್ಷವನ್ನು ಪಡೆದನು ಮತ್ತು ಅವನ ಸಹೋದರ ತೊಂಡೈಮಾನ್ ರಾಜನನ್ನು ವಹಿಸಿಕೊಂಡನು, ಏಕೆಂದರೆ ವಸುದಾನನು ಇನ್ನೂ ಚಿಕ್ಕವನಾಗಿದ್ದನು.

ಶ್ರೀನಿವಾಸ ತೊಂಡೈಮಾನ್‌ನನ್ನು ಬೆಟ್ಟದ ತುದಿಗೆ ಕರೆದೊಯ್ದು ಪುಷ್ಕರಿಣಿ ಬಳಿಯ ಸ್ಥಳವನ್ನು ತೋರಿಸಿದನು, ಅಲ್ಲಿ ಆಂಧ್ರ ರಾಜ ಸಂಖಾನ ಮೊದಲು ವಿಷ್ಣುವಿನ ವಿಗ್ರಹವನ್ನು ಸ್ಥಾಪಿಸಿದನು. ಹುತ್ತದೊಡನೆ ಹಲವು ವರ್ಷಗಳಿಂದ ತಂಗಿದ್ದ ಹುಣಸೆ ಮರವನ್ನು ತೋರಿಸಿ ಅಲ್ಲಿ ತನಗೆ ದೇವಸ್ಥಾನದಂತಹ ಕೋಟೆಯನ್ನು ನಿರ್ಮಿಸಿಕೊಡುವಂತೆ ಕೋರಿದನು.  ಕೆಲವು ವರ್ಷಗಳ ನಂತರ, ವಸುದಾನನು ಬೆಳೆದು ದೊಡ್ಡವನಾದನು.ತನ್ನ ತಂದೆಯ ರಾಜ್ಯವನ್ನು ಬಯಸಿದನು. ತೊಂಡೈಮಾನ್ ದಕ್ಷಿಣಕ್ಕೆ ತಿರುಮಲಕ್ಕೆ ಮತ್ತು ವಸುದಾನ ಉತ್ತರ ಭಾಗವನ್ನು ಆಳುವ ರಾಜ್ಯವನ್ನು ಶ್ರೀನಿವಾಸ ಮಧ್ಯಸ್ಥಿಕೆ ವಹಿಸಿ ವಿಭಜಿಸಬೇಕಾಯಿತು.

ವೆಂಕಟೇಶ್ವರನ ರೂಪದಲ್ಲಿ ಶ್ರೀನಿವಾಸರು ತಿರುಮಲದಲ್ಲಿ ಉಳಿದರು, ಪದ್ಮಾವತಿಯು ತಿರುಚಾನೂರಿನಲ್ಲಿ ಉಳಿದರು.

ಹಲವು ವರ್ಷಗಳಿಂದ ತಿರುಮಲ ದೇವಸ್ಥಾನದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಗೋಪಿನಾಥರು ತಿರುಮಲದ ಮೊದಲ ವೈಖಾನಸ ಆಗಮ ಪುರೋಹಿತರು.

ತಿರುಚನೂರಿನಲ್ಲಿ 2500 ವರ್ಷಗಳ ಹಿಂದೆ ರಚನೆಯಾದ ವೈಷ್ಣವ ಸಭೆಯು ತಿರುಮಲದ ದೈನಂದಿನ ಚಟುವಟಿಕೆಗಳನ್ನು ನಿರ್ಧರಿಸುತ್ತಿತ್ತು.

ಭೋಗ ಶ್ರೀನಿವಾಸನ ಉತ್ಸವ ಮೂರ್ತಿಯನ್ನು ಪಲ್ಲವ ರಾಣಿ ಸಮವಾಯಿ (ಅಕಾ ಕಡವನ್ - ಪೆರುಂದೇವಿ) ಕ್ರಿಸ್ತಶಕ 614  ರಲ್ಲಿ ದಾನ ಮಾಡಿದರು. ಬೆಟ್ಟದ ಮೇಲಿನ ವಿಗ್ರಹವು ವಿಷ್ಣುವನ್ನು (ಸೆಂಗನ್ ನೆಡಿಯೊನ್) ಪ್ರತಿನಿಧಿಸುತ್ತದೆ ಎಂದು ತಮಿಳು ಗ್ರಂಥ ಸಿಲಪ್ಪಾದಿಕಾರಮ್ ಹೇಳುತ್ತದೆ. ಸೂರ್ಯ ಮತ್ತು ಚಂದ್ರರು ವಿಷ್ಣುವನ್ನು ಬೆಳಗಿಸುತ್ತಾರೆ ಎಂದು ವಿವರಣೆಯು ಹೇಳುತ್ತದೆ, ಹಾಗಾಗಿ ಮೂರ್ತಿಯ ಮೇಲ್ಭಾಗದಲ್ಲಿ ಯಾವ ಛಾವಣಿ ರುವುಉದಿಲ್ಲಅಥವಾ ಹೊದಿಕೆಯು ಮಂಟಪದ ಪ್ರಕಾರವಾಗಿದೆ ಎಂದು ತೋರಿಸುತ್ತದೆ. 11 ನೇ ಶತಮಾನದಲ್ಲಿ ರಾಮಾನುಜಾಚಾರ್ಯರು ವೈಷ್ಣವ ಪೂಜಾ ವಿಧಾನಗಳನ್ನು ಮತ್ತು ತಿರುಮಲದಲ್ಲಿ ಜೀಯರ್ ಮಠವನ್ನು ಪರಿಚಯಿಸಿದರು.

ನಂತರ, ಚೋಳ, ಪಾಂಡ್ಯ, ಪಲ್ಲವ ಮತ್ತು ವಿಜಯನಗರದ ರಾಜರು ದೇವಾಲಯವನ್ನು ನವೀಕರಿಸಿದರು ಮತ್ತು ನಿರ್ವಹಿಸಿದರು.

No comments:

Post a Comment