Thursday, August 29, 2013

ನಮ್ಮಲ್ಲಿನ ಪೌರಾಣಿಕ ಪಾತ್ರಗಳು

ಸೂರ್ಯ

ಸೂರ್ಯ ಭಗವಾನ್ 
    ಇಂದು ನಾವೆಲ್ಲಾ ದಿನನಿತ್ಯ ಕಾಣುವ ಸೂರ್ಯ ಒದು ಸಾಮಾನ್ಯ ನಕ್ಷತ್ರ ಎಂದು ಹೇಳುತ್ತೇವಾದರೂ ನಮ್ಮ ಹಿರಿಯರು, ಅದರಲ್ಲೂ ಪುರಾಣ ರಚನಾಕಾರರು ಸೂರ್ಯನನ್ನು ಭಗವಾನ್ ಎಂದೇ ಸಂಭೋಧಿಸಿದ್ದಾರೆ. ಹೀಗಾಗಿ ಇಂದೂ ಪುರಾಣಗಳ ಪ್ರಕಾರ ಸೂರ್ಯನು ಕಷ್ಯಪ ಮಹರ್ಷಿ ಮತ್ತು ಅದಿತಿಯರ ಮಗ. ಈ ಕಾರಣಕ್ಕಾಗಿ ಅವನಿಗೆ ಆದಿತ್ಯನೆಂಬ ಹೆಸರು(ಅದಿತಿಯ ಮಗ= ಆದಿತ್ಯ). ಸೂರ್ಯನಿಗೆ ಚಿನ್ನದ ಹೊಳಪಿನಿಂದ ಕೂಡಿದ ಕೂದಲುಗಳಿದ್ದು ಆತನು ದಿನನಿತ್ಯ ತನ್ನ ಏಳು ಕುದುರೆಗಳನ್ನು ಹೊಂದಿರುವ ವಿಜಯೋತ್ಸವದ ರಥದಲ್ಲಿ ದಯಮಾಡಿಸುತ್ತಾನೆ. ಈ ಏಳು ಕುದುರೆಗಳು ಕಾಮನಬಿಲ್ಲಿನ ಏಳು ಬಣ್ಣಗಳಾನ್ನು ಪ್ರತಿನಿಧಿಸುತ್ತವೆ. ಸೂರ್ಯನ ಇನ್ನೊಂದು ಹೆಸರು ವೈವಸ್ವತ. ಇವನಿಗೆ ಮೂವರು ಪತ್ನಿಯರು- ಸರಣ್ಯಾ, ರಾಗ್ಯೀ ಮತ್ತು ಪ್ರಭಾ.
    ಸರಣ್ಯಾಳಿಗೆ ಒಟ್ಟು ಮೂವರು ಮಕ್ಕಳು- ವೈವಸ್ವತ ಮನು(ಇಂದಿನ ಏಳನೇ ಮನು), ಯಮ(ಸಾವಿನ ದೇವತೆ) ಮತ್ತು ಯಮನ ತಂಗಿ ಯಮಿ(ಯಮುನಾನದಿಯ ದೇವತೆ). ಯಮಿಗೆ ಮೂವರು ಮಕ್ಕಳಾದರು- ಅವಳಿ-ಜವಳಿಗಳಾದ ಅಶ್ವಿನಿ ದೇವತೆಗ್ಳು ಹಾಗೂ ಮಾನವರೂಪಿ ಕುದುರೆಯ ಮುಖವನ್ನು ಹೊಂದಿದ ಹಯವದನ(ಈ ಮೂವರ ತಾತ ಸೂರ್ಯ ಭಗವಾನ್). ಮುಂದೊಮ್ಮೆ ಸರಣ್ಯಾಗೆ ಸೂರ್ಯನ ಪ್ರಭೆಯನ್ನು ತಾಳಲಾಗಲಿಲ್ಲ.ಅದಾಗ ಅವಳು ತನ್ನ ನೆರಳಿನಿಂದ ಸ್ಥೂಲವಾದ ಚಾಯಾದೇವಿಯನ್ನು ಸೃಜಿಸಿದಳುಹೀಗೆ ಸೃಷ್ಟಿಯಾದ ಚಾಯಾದೇವಿಗೆ ಸರಣ್ಯಾಳು ತನ್ನ ಗೈರುಹಾಜರಿಯಲ್ಲಿ ಸೂರ್ಯನ ಪತ್ನಿಯಾಗಿ ನಟಿಸುವಂತೆ ಅಪ್ಪಣೆ ಕೊಟ್ಟಳು. ಚಾಯಾದೇವಿ ಇಬ್ಬರು ಗಂಡು ಮಕ್ಕಳ ತಾಯಿಯಾದಳು- ಮನುಗಳಲ್ಲಿ ಎಂಟನೆಯವನಾದ ಸವರ್ಣೀ ಮನು ಹಾಗೂ ಶನಿ(ಶನಿಗ್ರಹದ ದೇವತೆ).
ಕೊನಾರ್ಕದಲ್ಲಿನ ಸೂರ್ಯ ದೇವಾಲಯ 
    ಹೀಗೆ ಸೂರ್ಯನಿಗೆ ಒಟ್ಟು ಐವರು ಮಕ್ಕಳು ಹಾಗೂ ಮೂವರು ಮೊಮ್ಮಕ್ಕಳು.
   ಇಷ್ಟಲ್ಲದೆ ರಾಮಾಯಣದಲ್ಲಿ ರಾಮನಿಗೆ ಸಹಾಯ ಮಾಡುವ ಸುಗ್ರೀವನನ್ನು ಸೂರ್ಯನ ಮಗನೆಂದು ಕರೆಯಲಾಗಿದೆ. ಇನ್ನು ರಾಮಾಯಣದಲ್ಲಿನ ರಾಮನೂ ಸೇರಿದಂತೆ ಅವನ ಪೂರ್ವಜರನ್ನು ಸೂರ್ಯವಂಶಜರೆನ್ನಲಾಗಿದೆ ಅಂತೆಯೇ ಮಹಾಭಾರತದಲ್ಲಿ ಕುಂತಿ ದೂರ್ವಾಸ ಮುನಿಗಳಿಂದ ಪಡೆದ ಮಂತ್ರದ ಪರೀಕ್ಷಾರ್ಥ ಹುಟ್ಟಿದ ಕರ್ಣ ಸೂರ್ಯಪುತ್ರನಾಗಿದ್ದಾನೆ.
.   ಇಂತಹಾ ಸೂರ್ಯ ಭಗವಾನ್ ನಿಗೆ ಭಾರತದಾದ್ಯಂತ ಹಲವಾರು ದೇವಾಲಯಗಳಿದ್ದು ಅದರಲ್ಲಿ ಪ್ರಸಿದ್ದವಾದುದು ಒಡಿಷ್ಯಾದ ಕೊನಾರ್ಕ ಸೂರ್ಯ ದೇವಾಲಯ. ಹಾಗೆಯೇ ಮಕರ ಸಂಕ್ರಾಂತಿಯಂತಹಾ ಹಬ್ಬವೂ ಸೇರಿದಂತೆ ಹಲವಾರು ಹಬ್ಬಗಳಲ್ಲಿ ಭಾರತೀಯರು ಸೂರ್ಯ ದೇವರ ಆರಾಧನೆ ಕೈಗೊಳ್ಳುತ್ತಾರೆ. 

No comments:

Post a Comment