Wednesday, February 19, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -18

ಅಹೋಬಿಲ(Ahobilam)
ನಮಸ್ಕಾರ ಗೆಳೆಯರೆ,
ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿನ ಶ್ರೀ ಕ್ಷೇತ್ರ ಅಹೋಬಿಲಮ್ ಅಲ್ಲಿನ ಮಹಾವಿಷ್ಣುವಿನ ಸಾಕ್ಷಾತ್ ಅವತಾರವಾದ ಶ್ರೀ ನರಸಿಂಹಸ್ವಾಮಿಯಿಂದಾಗಿ ಜಗತ್ಪ್ರಸಿದ್ದಿ ಹೊಂದಿದಂತಹಾ ಕ್ಷೇತ್ರ. ಬಹು ಪುರಾತನವಾದ ಐತಿಹ್ಯಗಳನ್ನು ಒಳಗೊಂಡ ಈ ಕ್ಷೇತ್ರಕ್ಕೆ ಅದರದೇ ಆದ ಪಾವಿತ್ರ್ಯತೆ ಇದೆ. ಇಲ್ಲಿಗೆ ದಿನನಿತ್ಯವೂ ದೇಶದ ನಾನಾ ಭಾಗಗಳಿಂದ ಬರುವ ಸಾವಿರಾಅರು ಸಂಖ್ಯೆಯ ಭಕ್ತಾದಿಗಳು ಶ್ರೀ ದೇವರ ದರ್ಶನವನ್ನು ಹೊಂದಿ ತಮ್ಮ ಜನ್ಮ ಪಾವನಗೊಂಡಿತೆಂದು ಭಾವಿಸುತ್ತಾರೆ.
ಅಹೋಬಿಲ ಉಗ್ರ ನರಸಿಂಹ ಉದ್ಭವ ಮೂರ್ತಿ
 ಪುರಾಣ ಕಾಲದಲ್ಲಿ ವೈಕುಂಠದ ದ್ವಾರಪಾಲಕರಾಗಿದ್ದ ಜಯ ವಿಜಯರು ಒಮ್ಮೆ ಕಾರಣಾಂತರಗಳಿಂದ ಭೂಮಿಯಲ್ಲಿ ಮಾನವರಾಗಿ ಜನ್ಮಿಸಬೇಕಾಗಿ ಬರುತ್ತದೆ. ಆಗ ಶ್ರೀ ಮನ್ಮಹಾವಿಷ್ಣುವು ಅವರಿಗೆ ಹೀಗೆಂದು ಕೇಳುತ್ತಾನೆ “ನೀವುಗಳು ಸದಾ ಕಾಲ ನನ್ನ ಭಕ್ತರಾಗಿದ್ದು ನನ್ನಿಂದ ಮೋಕ್ಷ ಹೊಂದುವವರಗಿ ಸತತ ಏಳು ಜನ್ಮಗಳನ್ನು ಕಳೆಯಬಯಸುವಿರೋ, ಇಲ್ಲವೆ ನನ್ನ ಬದ್ದ ವೈರಿಗಳಾಗಿ ನನ್ನಿಂದಲೇ ವಧಿಸಲ್ಪಟ್ಟು ಮೂರು ಜನ್ಮದಲ್ಲಿಯೇ ಶಾಪವಿಮೋಚನೆಯನ್ನು ಹೊಂದುವಿರೋ ಹೇಳಿ”. ಅದಕ್ಕೆ ಜಯ ವಿಜಯರು “ತಾವು ಮೂರು ಜನಮ್ಗಳ ಕಾಲ ನಿನ್ನ ವೈರಿಗಳಾಗಿದ್ದು ಶಾಪ ವಿಮೋಚನೆ ಹೊಂದುತ್ತೇವೆ, ಏಳು ಜನಮ್ಗಳಕಾಲಾವಧಿಯು ಬಹಳ ಅಧಿಕವಾಯಿತು.” ಎಂದುತ್ತರ್ರಿಸುತ್ತಾರೆ. ಅದಕ್ಕೊಪ್ಪಿದ ಮಹಾ ವಿಷ್ಣುವು “ತಥಾಸ್ತು” ಎನ್ನುತ್ತಲೇ ಅವರೀರ್ವರೂ ಭೂಮಿಯಲ್ಲಿ ರಕ್ಕಸರಾಗಿ ಹುಟ್ಟುತ್ತಾರೆ. ಹಾಗೆ ಜನ್ಮದಳೆದವರು ತಾವು ಹಿರಣ್ಯಾಕ್ಷ ಹಾಗ್ಜ಼್ಜ಼್ಜ಼್ಜ಼್ಜ಼ು ಹಿರಣ್ಯ ಕಷಿಪು ಎನ್ನುವ ಹೆಸರಿನೊಂದಿಗೆ ಸೋದರರಾಗಿ ಹುಟ್ಟಿ ಹರಿಯ ವದ್ದ ವಿರೋಧಿಗಳಾಗಿ ಲೋಕಕಂಟಕರಾಗಿ ಮೆರೆದಾಡುತ್ತಾರೆ. ಅದರಲ್ಲಿ ಹಿರಣ್ಯಾಕ್ಷನನ್ನು ಶ್ರೀ ಹರಿಯು ವರಾಹ ಅವತಾರವೆತ್ತಿ ಸಂಹರಿಸುತ್ತಾನೆ. ಅದೇ ಹಿರಣ್ಯಾಕ್ಷನ ಸಹೋದರನಾದ ಹಿರಣ್ಯ ಕಷಿಪ್ವಿಗೆ ಶ್ರೀ ಹರಿಯ ಮೇಲೆ ಮತ್ತಷ್ಟು ಕೋಪ ಉಕ್ಕಲು ಕಾರಣವಾಗುತ್ತದೆ. ಅದಾಗ ಹಿರಣ್ಯ ಕಷಿಪುವು ಬ್ರಹ್ಮನನ್ನು ಕುರಿತಂತೆ ಘೋರ ತಪಸ್ಸನ್ನಾಚರಿಸಿ ಅವನಿಂದ ಈ ಕೆಳಕಂಡಂತೆ ವರವನ್ನು ಪಡೆಯುತ್ತಾನೆ-

``ತನ್ನ ಮರಣವು ಮನುಷ್ಯನಿಂದಾಗಲಿ ಪ್ರಾಣಿಗಳಿಂದಾಗಲಿ ಬರಕೂಡದು, ಹಗಲು ಅಥವಾ ರಾತ್ರಿ ಬರಬಾರದು, ಮನೆಯಲ್ಲಿ ಅಥವಾ ಮನೆಯ ಹೊರಗೆ ಬರಬಾರದು’’ ಮತ್ತು “ತನಗೆ ದೊರೆತ ಈ ವರದಿಂದ ತಾನು ತ್ರಿಮೂರ್ತಿಗಳಿಗಿಂತಲೂ ದೊಡ್ಡವನು, ನನ್ನನ್ನಿನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ.” ಎನ್ನುವುದಾಗಿ ಅಹಂಕಾರದಿಂದ ಬೀಗುತ್ತಾನೆ.
ಹೀಗೆ ಕೆಲ ಕಾಲ ಸರಿಯಿತು. ಕಯಾಲು ಎಂಬ ರಾಜಕುಮಾರಿಯೊಂದಿಗೆ ಹಿರಣ್ಯ ಕಷಿಪುವಿನ ವಿವಾಹವಾಯಿತು. ಅವರಿಬ್ಬರಿಗೂ ಮುದ್ದಾದ ಒಂದು ಗಂಡುಮಗುವು ಜನ್ಮಿಸಿತು ಅದಕ್ಕೆ ‘ಪ್ರಹ್ಲಾದ’ ನೆಂಬುದಾಗಿ ನಾಮಕರಣವನ್ನು ಮಾಡಲಾಯಿತು.
ದಿನ ದಿನಕ್ಕೂ ಪ್ರಹ್ಲಾದ ಕುಮಾರನು ಬಹು ಸೊಂಪಾಗಿಯೂ, ಚೂಟಿಯಾಗಿಯೂ ಬೆಳೆಯುತ್ತಿದ್ದನು. ವಿಪರ್ಯಾಸವೆಂದರೆ ಪ್ರಹ್ಲಾದನ ತಂದೆ ಹಿರಣ್ಯ ಕಷಿಪುವು ಮೂಲೋಕದಲ್ಲಿ ಭಯವನ್ನು ಹುಟ್ಟಿಸುವ ದೈತ್ಯನಾಗಿದ್ದವನು. ಆದರೆ ಆತನ ಧರ್ಮಪತ್ನಿಯಾಗಿದ್ದ ಕಯಾಲು ಮಾತ್ರ ತಾನು ಮಹಾನ್ ದೈವ ಭಕ್ತೆಯಾಗಿದ್ದವಳು. ಅಂತೆಯೇ ದಿನನಿತ್ಯವೂ ಮುಂಜಾನೆ ಮತ್ತು ಸಂದ್ಯಾ ಸಮಯದಲ್ಲಿ ತಪ್ಪದೆ ಪರಮೇಶ್ವರನನ್ನು ಆರಾಧಿಸುತ್ತಿದ್ದಳು.  ಇದರಿಂದಲೋ ಏನೋ ಎಂಬಂತೆ ಪ್ರಹ್ಲಾದ ಕುಮಾರನೂ ಸಹ ತಾಯಿಯಂತೆಯೇ ಮಹಾನ್ ದೈವಭಕ್ತನಾದನು. ಅದರಲ್ಲಿಯೂ ತಂದೆಯು ಪರಮ ವೈರಿ ಎಂದೇ ಬಗೆದಿದ್ದ ಶ್ರೀ ಹರಿಯ ಕುರಿತು ಅಪಾರ ಪ್ರೇಮಪೂರಿತ ಭಕ್ತಿಯನ್ನು ತಾಳಿದ್ದನು.
ತನ್ನ ತಂದೆಗೆ ತಾನು ನಾರಾಯಣನ ಸ್ಮರಣೆ ಮಾಡುವುದು ಇಷ್ಟವಿಲ್ಲವೆನ್ನುವುದು ಪ್ರಹ್ಲಾದ ಕುಮಾರನಿಗೂ ತಿಳಿದಿತ್ತಾದರೂ ಅವನಿಂದ ಶ್ರೀ ಹರಿಯ ಸ್ಮರಣೆ ಮಾಡದಿರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕುಮಾರನು ಆದಷ್ಟು ತಂದೆಯ ಎದುರು ಕಾಣಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದನು. ಆದರೂ ಒಮ್ಮೊಮ್ಮೆ ಪ್ರಹ್ಲಾದನಿಗೆ ರಾಜನ ಭೇಟಿಯಾಗುತ್ತಿತ್ತು. ಆಗೆಲ್ಲಾ ಹಿರಣ್ಯನು ಮಗನ ‘ನಾರಾಯಣಾ.. ನಾರಾಯಣಾ..’ ಎಂಬ ನಾಮಸ್ಮರಣೆಯನ್ನು ಕೇಳಿ ಕ್ರೋಧದಿಂದ ಕುದಿಯುತ್ತಿದ್ದನು. ಮತ್ತು ಮಗನಿಗೆ ಸಾಕಷ್ಟು ದೊಡ್ಡ ಶಿಕ್ಷೆ ವಿಧಿಸುವಂತೆ ಸೇವಕರಿಗೆ ಆಜ್ಞೆ ಮಾಡುತ್ತಿದ್ದನು. ಆ ಕಾರಣಾದಿಂದಲಾದರೂ ಮಗನು ಶ್ರೀ ಹರಿಯ ನಾಮಸ್ಮರಣೆಯನ್ನು ನಿಲ್ಲಿಸುತ್ತಾನೆಂಬುವುದು ಹಿರಣ್ಯನ ಎಣಿಕೆಯಾಗಿತ್ತು.
ಆದರೆ ಆದದ್ದೇ ಬೇರೆ, ಹಿರಣ್ಯ ಕಷಿಪುವು ತನ್ನನ್ನು ಸಾಕಷ್ಟು ದೊಡ್ಡ ಶಿಕ್ಷೆಗೆ ಗುರಿ ಮಾಡಿದಂತೆಲ್ಲಾ ಪ್ರಹ್ಲಾದನಲ್ಲಿ ಶ್ರೀ ಹರಿಯ ಮೇಲಿನ ಭಕ್ತಿ ಇಮ್ಮಡಿ ಮುಮ್ಮಡಿಯಾಗಿ ಹೆಚ್ಚುತ್ತಾ ಹೋಯಿತಲ್ಲದೆ ಕಡಿಮೆಯಾಗಲಿಲ್ಲ! ಹೀಗಿರಲು ಅದೊಂದು ದಿನ ಹರಿನಾಮ ಭಜನೆಯಲ್ಲಿ ನಿರತನಾಗಿದ್ದ ಪ್ರಹ್ಲಾದ ಕುಮಾರನಿಗೆ ತನ್ನ ತಂದೆ ಅತ್ತ ಬಂದುದೇ ತಿಳಿಯಲಿಲ್ಲ. ಹಿರಣ್ಯ ಕಷಿಪುವು ಪ್ರಹ್ಲಾದ ಕುಮಾರನ ಹರಿ ಭಜನೆಯನ್ನು ಕೇಳಿಸಿಕೊಂಡು ಕ್ರೋಧ ತತ್ಪರನಾಗಿ ತಕ್ಷಣವೇ ತನ್ನ ಸೇವಕರಲ್ಲಿ “ರಾಜಕುಮಾರನನ್ನು ಸಾಕಷ್ಟು ಎತ್ತರದ ಭಾಗದಿಂದ ಆಳವಾದ ಕಂದರಕ್ಕೆ ನೂಕಿ ಬಂದು ನನಗೆ ತಿಳಿಸಿರಿ” ಎನ್ನುವುದಾಗಿ ಆಜ್ಞೆ ಮಾಡಿದನು. ಸೇವಕರು ತಾನೆ ಏನು ಮಾಡಿಯಾರು? ಅವರು ರಾಜಾಜ್ಞೆಯನ್ನು ಪಾಲಿಸಿ ಬಂದು ರಾಜರಿಗೆ ತಿಳಿಸಿದರು. ಆದರೆ ಇದಾದ ಸ್ವಲ್ಪ ಸಮಯದಲ್ಲಿಯೇ ಮಹಡಿಯ ಮೇಲಿದ್ದ ರಾಜನಿಗೆ ದೂರದಲ್ಲಿ ಪ್ರಹ್ಲಾದ ಕುಮಾರನು ಅರಮನೆಯತ್ತ ಬರುತ್ತಿರುವುದು ಕಾಣಿಸಿತು. ತನ್ನ ಮಗನು ಜೀವದಿಂದಿರುವುದನ್ನು ಕಂಡು ಕುಪಿತಗೊಂಡ ಹಿರಣ್ಯ ಕಷಿಪುವು ಏನು ನಡೆಯಿತೆನ್ನುವ ಬಗ್ಗೆ ಮಗನನ್ನೇ ವಿಚಾರಿಸಬೇಕೆಂದು ನಿರ್ಧರಿಸಿ ಅರಮನೆಗೆ ಬಂದ ಪ್ರಹ್ಲಾದನನ್ನು ನೇರವಾಗಿ ತನ್ನಲ್ಲಿಗೆ ಬರಲು ಹೇಳಿಕಳಿಸಿದನು. ಪ್ರಹ್ಲಾದ ಕುಮಾರನು ತಾನು ತಂದೆ ಎದುರು ಬಂದು ವಿನಮ್ರವಾಗಿ ನಿಲ್ಲಲು “ಸೇವಕರು ನಿನ್ನನ್ನು ಬೆಟ್ಟದ ಮೇಲಿನಿಂದ ನೂಕಿದರಲ್ಲವೆ?” ಎಂದು ಕೇಳಲು ಪ್ರಹ್ಲಾದನು “ಹೌದು ತಂದೆಯೇ ಹಾಗೆಯೇ ಮಾಡಿದರು” ಎಂದನು. ಅದಕ್ಕೆ ಪುನಃ ರಾಜ ಹಿರಣ್ಯನು “ ಹಾಗಾದರೆ ಮತ್ತೆ ನೀನಿಲ್ಲಿಗೆ ಹೇಗೆ ಬಂದೆ?” ಎನ್ನಲು ಪ್ರಹ್ಲಾದನು ನಗುತ್ತಾ “ತಂದೆಯೇ ನಾನೊಂದು ಮರದ ಮೇಲೆ ನಿಧಾನವಾಗಿ ಬಿದ್ದೆನು ಆ ಮರದಿಂದ ಇಳಿಯುತ್ತಲೇ ಒಂದು ಎತ್ತಿನ ಗಾಡಿ ಇತ್ತ ಹೊರಟಿತ್ತು ಅದರಲ್ಲಿ ಕುಳಿತು ಅರಮನೆಯ ಈ ದಾರಿಯವರೆಗೂ ತಲುಪಿದೆನು” ಎಂದುತ್ತರಿಸಿದನು. ಈ ಉತ್ತರದಿಂದ ನಿರಾಸೆಗೊಂಡ್ ಹಿರಣ್ಯನು ಅಲ್ಲಿಂದ ತೆರಳಿದನು.
ಕೆಲದಿನಗಳು ಉರುಳಿದವು, ಪ್ರಹ್ಲಾದನಲ್ಲಿ ಮೂಡಿದ್ದ ಶ್ರೀ ಹರಿಯ ಮೇಲಿನ ಪರಮ ಭಕ್ತಿಯು ದಿನ ದಿನಕ್ಕೂ ಹೆಚ್ಚುತ್ತಾ ಹೋಯಿತು. ಇದೇ ಕಾರಣದಿಂದಾಗಿ ತಂದೆ-ಮಗನ ನಡುವೆ ಅಂತರ ಹೆಚ್ಚುತ್ತಾ ಬಂತು. ಹಿರಣ್ಯ ಕಷಿಪುವಿಗೆ ಮಗನ ಈ ವ್ರ್ತನೆ ಕಂಡು ಕಡು ಕೋಪವು ಉಂಟಾಯಿತು. ಇದೇ ಕಾರಣಾದಿಂದೊಮ್ಮೆ ತಾನು ಹೆತ್ತ ಮಗನೆನ್ನುವುದನ್ನೂ ಲೆಕ್ಕಿಸದೆ ಅವ್ನನ್ನು ಆನೆಯ ಕಾಲಿನಡಿ ನುಸುಳಿಸಿ ಮದಭರಿತ ಗಜಪಡೆಗಳಿಂದ ತುಳಿಸುವ ಶಿಕ್ಷೆ ವಿಧಿಸಿದನು ಆದರೆ ಶ್ರೀ ಮಹಾವಿಷ್ಣುವಿನ ಕೃಪೆಯಿಂದ ಅವನದರಿಂದ ಪಾರಾಗಿ ಬ್ಂದನು. ಹಾಗೆಯೇ ಇನ್ನೊಮ್ಮೆ ಪ್ರಹ್ಲಾದ್ ಕುಮಾರನನ್ನು ಕುದಿಯುತ್ತಿದ್ದ ಎಣ್ಣೆಯ ಬಾಣಲೆಗೆ ಝಾಕಿಸಿದನು. ಆದರೆ ಅದರಲ್ಲಿಯೂ ಪ್ರಹ್ಲಾದ ಕುಮಾರನು ಪವಾಡ ಸದೃಶ ರೀತಿಯಲ್ಲಿ ಪಾರಾದನು. ಹೀಗೆಯೇ ನಾನಾ ವಿಧದಲ್ಲಿ ಮಗನನ್ನು ಶಿಕ್ಷಿಸುತ್ತಾ, ದಂಡಿಸುತ್ತಾ ಅವನನ್ನು ಕತ್ತಲೆ ಕೋಣೆಯೊದರಲ್ಲಿ ಕೂಡಿ ಹಾಕಿದ್ದನು. ಇಷ್ಟಾದರೂ ಪ್ರಹ್ಲಾದನಲ್ಲಿನ ಶ್ರೀ ಹರಿಯ ಮೇಲಿನ ಭಕ್ತಿ ಅದು ಕಿಂಚಿತ್ತು ಸಹ ಕಡಿಮೆಯಾಗಲಿಲ್ಲ, ಬದಲಿಗೆ ದಿನದಿಂದ ದಿನಕ್ಕೆ ಅಧಿಕವಾಗುತ್ತಾ ಹೋಯಿತು.
ತಂದೆಯಾದ ರಕ್ಕಸ ಹಿರಣ್ಯ ಕಷಿಪು ಹಾಗೂ ಮಗ ಪ್ರಹ್ಲಾದ ಕುಮಾರನ ಮಧ್ಯೆ ಇಷ್ಟೆಲ್ಲಾ ನಡೆಯುತ್ತಿದ್ದಾಗ ಹಿರಣ್ಯನ ಧರ್ಮಪತ್ನಿಯೂ ಪ್ರಹ್ಲಾದನ ತಾಯಿಯೂ ಆದ ಕಯಾಲು ದೇವಿಯು ಮಾತ್ರ ತಾನು ಅಂತಃಪುರದ್ಲ್ಲಿ ಕುಳಿತು ಒಬ್ಬಳೇ ರೋಧಿಸುತ್ತಿದ್ದಳು. ಅವಳ ಏಕಾಂತಾ ಕೋಣೆಯಲ್ಲಿದ್ದ ಇಷ್ಟದೇವರ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತು ತನ್ನ ಕಷ್ಟಗಳಾನ್ನು ಕಳೆಯಪ್ಪಾ... ಎಂದು ದಯಾರ್ದ್ರುಳಾಗಿ ಬೇಡಿಕೊಳ್ಳುವುದಲ್ಲದೆ ಅವಳಿಗೇನೂ ಮಾಡಲು ಸಾಧ್ಯವಿರಲಿಲ್ಲ.
ಹೀಗಿರಲು ಅದೊಂದು ದಿನ ರಾಜಾ ಹಿರಣ್ಯ ಕಷಿಪುವು ತನ್ನ ಪಟ್ತದರಸಿಯಾದ ಕಯಾಲುವಲ್ಲಿಗೆ ಬಂದನು. ಅದಾಗ ಅಲ್ಲೆಲ್ಲಾ ಆಟವಾಡಿಕೊಳ್ಳುತ್ತಿದ್ದ ಪ್ರಹ್ಲಾದ ಕುಮಾರನೂ ಭಯಗೊಂಡು ಮುಂದೆ ನನಗೇನು ಶಿಕ್ಷೆ ಕಾದಿದೆಯೋ ಎಂದು ಭೀತಿ ಪಡುತ್ತಾ ತಾಯಿಯ ಹಿಂದೆ ಅಡಗಿಕೊಂಡನು. ಅದಾಗ ರಾಜನು “ನಾನು ನಿನ್ನೊಂದಿಗೆ ಏಕಾಂತವಾಗಿ ಕೆಲ ಹೊತ್ತು ಕಳೆಯಬೇಕಾಗಿದೆ, ಒಪ್ಪಿಗೆಯೇ?” ಎನ್ನಲು ಕಯಾಲುವು “ಪತಿದೇವರು ತಮ್ಮ ಧರ್ಮ ಪತ್ನಿಯೊಂದಿಗೆ ಸಮಯ ಕಳೆಯಲು ಅಪ್ಪಣೆ ಕೇಳಬೇಕೇನು? ಖಂಡಿತಾ ಆಗಬಹುದು” ಎನ್ನುತ್ತಾ ಪ್ರಹ್ಲಾದನನ್ನು ಹೊರಗೆ ಆಟವಾಡಲು ಕಳುಹಿಸಿ ಕೊಟ್ತಳು.
ಶ್ರೀ ಕ್ಷೇತ್ರ ಅಹೋಬಿಲ ಶ್ರೀ ನರಸಿಂಹ ಸ್ವಾಮಿ ದೇವಾಲಯ
ಪ್ರಹ್ಲಾದನು ಅತ್ತ ಹೋಗುತ್ತಲೇ ಹಿರಣ್ಯ ಕಷಿಪುವು ತನ್ನ ಪತ್ನಿಯ ಇನ್ನಷ್ಟು ಸನಿಹಕ್ಕೆ ಬಂದು, “ಕಯಾಲು, ನಾನೆಂದರೆ ನಿನಗೆ ಪ್ರೀತಿಯಲ್ಲವೆ? ನನ್ನ ಮೇಲೆ ನಿನಗೆ ನಿಜವಾಗಿಯೂ ಅಪಾರವಾದ ಪ್ರೇಮವಿದೆ ತಾನೆ? ನಾನು ಏನೇ ಹೇಳಿದರೂ ಅದನ್ನು ನೀನು ಶಿರಸಾ ವಹಿಸಿ ಮಾಡುವೆ ಹೌದು ತಾನೆ?” ಎಂದು ಕೇಳಲು ಅದಕ್ಕೆ ಕಯಾಲು ದೇವಿಯು “ಪತಿದೇವ, ಇಂದು ನಿಮಗೇನಾಗಿದೆ? ಏಕೆ ಹೀಗೆಲ್ಲಾ ಕೇಳುತ್ತಿದ್ದೀರಿ?  ನಾನೆಷ್ಟೆಂದರೂ ನಿಮ್ಮವಳು, ನಿಮ್ಮ ಅರ್ಧಾಂಗಿ, ಎಂದಮೇಲೆ ನೀವು ತೋರಿದ ಮಾರ್ಗ ಅದು ಏನೇ ಆದರೂ ಅದುವೇ ನನಗೆ ಹೂವಿನ ಹಾಸಿದ್ದಂತೆ, ಸತಿಯಾದವಳಿಗೆಂದೆಂದಿಗೂ ಪತಿಯೇ ಪರಮ ದೈವ. ಹೇಳಿ ನನ್ನಿಂದೇನಾಗಬೇಕು, ಅಪ್ಪಣೆ ಕೊಡಿಸಿ” ಎನ್ನುತ್ತಾಳೆ. ತನ್ನ ರಾಣಿಯಾಡಿದ ಮಾತಿನಿಂದ ಹರ್ಷತುಂದಿಲನಾದ ರಾಜ ಹಿರಣ್ಯ ಕಷಿಪುವು “ಕಯಾಲು ನೀನೆಂದರೆ ನನ್ನ ಪ್ರಾಣ. ನನಗೆ ಗೊತ್ತು ನಾನೇನೆಂದರೂ ಅದಕ್ಕೆ ನೀನೊ ಪ್ರತಿಯಾಡದೆ ಒಪ್ಪಿ ಅದರಂತೆಯೇ ನಡೆಯುತ್ತೀ ಎಂದು, ಆದರೆ ಈಗ ನಾನು ಹೇಳುವ ವುಚಾರವು ತುಸು ಗಂಭೀರವಾದುದು. ನಿನಗೂ ಇದನ್ನು ನೆರವೇರಿಸುವುದು ಸ್ವಲ್ಪ ಕಷ್ಟವಾಗುತ್ತದೆ ಎನ್ನುವುದನ್ನು ನಾನು ಬಲ್ಲೆ, ಆದರೆ ಈ ಕೆಲಸ ನಿನ್ನಿಂದಾಗಲೇ ಬೇಕು. ಇದನ್ನು ಮತ್ತಾರೂ ಮಾಡುವುದಕ್ಕೆ ಕೂಡದು.” ಎನ್ನುತ್ತಾನೆ. ಆಗ “ “ಸ್ವಾಮೀ ನಿಮ್ಮ ಪತ್ನಿಯಾದ ನಾನು ನಮ್ಮಿಬ್ಬರ ಪ್ರೀತಿಯ ಮಗನಾದ ರಾಜಕುಮಾರನ ಸಾಕ್ಷಿಯಾಗಿ ಹೇಳುತ್ತಿದ್ದೇನೆ, ನೀವೇನೇ ಕರ್ತವ್ಯವನ್ನು ನೀಡಿದರೂ ಅದನ್ನು ಶಿರಸಾ ವಹಿಸಿ ಮಾಡುವುದೇ ನನ್ನ ಕಾರ್ಯ. ಇದರಲ್ಲಿ ಯಾವುದೇ ಕೊಂಕು ಇಲ್ಲ ಮಹಾಸ್ವಾಮಿ, ಏನಾಗಬೇಕೆಂದು ಅಪ್ಪಣೆ ಮಾಡಿ” ಎನ್ನುತಾಳೆ.  ಆಗ ಹಿರಣ್ಯನು ತಾನು ಮಂದಹಾಸವನ್ನು ಬೀರುತ್ತಾ ದೃಡವಾದ ಸ್ವರದಿಂದ “ ಸರಿ ಹಾಗಾದರೆ, ನಿನ್ನ ಪ್ರೀತಿಯ ಮಗನಿಗೆ ನೀನು ಇದನ್ನು ಕುಡಿಸಬೇಕು” ಎನ್ನುತ್ತಾ ಒಂದು ಬಟ್ಟಲಿನಲ್ಲಿ ತಾನು ತಂದಿದ್ದ ವಿಷವನ್ನು ಕಯಾಲುವಿನ ಮುಂದೆ ಹಿಡಿಯುತ್ತಾನೆ. “ಅರೆ! ಇದೇನು?” ಎಂದು ಪ್ರಶ್ನಿಸಲು, “ ನನ್ನ ಕುಲವೈರಿಯಾದ ಶ್ರೀ ಹರಿಯನ್ನು ಧ್ಯಾನಿಸುತ್ತಾ ನನ್ನ ಏಳಿಗೆಗೆ ಕಂತಕನಾದ್ ಆ ಕುಟಿಲ ನಾರಾಯಣನನ್ನು ಸ್ಮರಿಸುತ್ತಿರು ಆ ನಿನ್ನ ಕುವರ ಪ್ರಹ್ಲಾದನಿಗೆಂದು ನಾನು ವಿಶೇಷ ಪಂಡಿತರಿಂದ ಹೇಳಿ ತರಿಸಿರುವ ಕಾರ್ಕೋಟಕ ವಿಷ!!” ಎನ್ನುತ್ತಲೇ ಅದನ್ನು ಕೇಳಿ ಆಘಾತಗೊಂಡ ರಾಣಿ ಕಯಾಲು ದೇವಿಯು ತಾನು ಅಲ್ಲೇ ಕುಸಿದು ಬೀಳುತ್ತಾಳೆ.
ಇದರಿಂದ ಸ್ಠಂಭಿತನಾದ ರಾಜಾ ಹಿರಣ್ಯನು ಅಲ್ಲಿದ್ದ ರಾಣಿಯ ಸಖಿಯರಿಗೆ ಕರೆ ಕಳಿಸುತ್ತಾನೆ. ಅವರ ಶುಶ್ರೂಷೆಗಳಿಂದ ಪ್ರಜ್ಞೆ ತಿಳಿದೆದ್ದ ಕಯಾಲುವು “ಇದೇನು ಸ್ವಾಮಿ ತಾವಾಡುತ್ತಿರುವ ಮಾತು, ಹೆತ್ತ ತಾಯಿಯು ತನ್ನ ಮಗನಿಗೆ ವಿಷ ಪ್ರಾಶನ ಮಾಡಿಸಬೇಕೆ? ಇದು ನನ್ನಿಂದಾಗದ ಕಾರ್ಯ” ಎನ್ನುತ್ತಲೇ ಹಿರಣ್ಯನು “ಕಯಾಲು... ಮೊದಲು ನೀನು ನನ್ನ ಧರ್ಮ ಪತ್ನಿ, ಆ ಬಳಿಕವಷ್ಟೇ ಪ್ರಹ್ಲಾದನ ತಾಯಿ ಎನ್ನುವುದನ್ನು ನೀನು ಮರೆಯುತ್ತಿದ್ದೀಯೆ, ಇದಕ್ಕೆ ಕೆಲ ಕ್ಷಣಗಳಾ ಹಿಂದೆ ನೀನು ನನಗಿತ್ತ ಮಾತು ಮರೆತೆಯಾ? ಎಲ್ಲಾದ್ರೂ ನೀನು ಈ ಮಾತಿಗೆ ತಪ್ಪಿದೆಯಾದರೆ ಪತಿಯಾಜ್ಞೆಯನ್ನು ಧಿಕ್ಕರಿಸಿ ನಡೆದ ಹೆಣ್ಣೆಂಬ ಲೋಕಾಪವಾದಕ್ಕೆ ಸಿಲುಕುತ್ತಿಯೆ” ಎಂದು ಆರ್ಭಟಿಸಲು ಆಗಲೂ ಕಯಾಲುವು ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ. ಗ ಮತ್ತೆ ಹಿರಣ್ಯ ಕಷಿಪುವು ಅಂತಿಮವಾಗಿ ಎನ್ನುವಂತೆ ಹೀಗೆ ಹೇಳುತ್ತಾನೆ- “ಕಯಾಲು.. ಇಂದು ರಾತ್ರಿಯ ಒಳಗಾಗಿ ನಿನ್ನ ಪ್ರಿಯ ಕುಮಾರನಿಗೆ ನೀನೀ ವಿಷವನ್ನು ಕುಡಿಸಬೇಕು! ಇದು ನಾನು, ಈ ಮೂಲೋಕದ ಒಡೆಯನಾದ ಹಿರಣ್ಯ ಕಷಿಪುವಿನ ರಾಜಾಜ್ಞೆ!!” ಎಂದು ತಡಮಾಡದೆ ಅಲ್ಲಿಂದ ಹೊರಡುತ್ತಾನೆ. ಕಯಾಲು ದೇವಿಗೆ ದಿಕ್ಕು ತೋಚದಂತಾಗುತ್ತದೆ.
ಇಷ್ಟೆಲ್ಲಾ ಆದ ಕೆಲ ಸಮಯದ ಬಳಿಕ ಪ್ರಹ್ಲಾದ ಕುಮಾರನು ತಾನು ತಾಯಿಯ ಬಳಿ ಬರುತ್ತಾನೆ. ತಾಯಿಯ ಕಳೆಗುಂದಿದ ಮುಖವನ್ನು ನೋಡಿ “ಅಮ್ಮಾ.. ಏನಾಯಿತು, ಏಕೆ ಹೀಗೆ ಬೇಸರದಿಂದಿರುವಿ?” ಎನ್ನಲು ಕಯ್ಲುವು ಉಕ್ಕಿ ಬಂದ ದುಃಖದಲ್ಲಿ ಮಗನನ್ನು ತಬ್ಬಿ ಹಿಡಿದು “ ನಿನ್ನ ತಂದೆ ಬಂದಿದ್ದರು..” ಎನ್ನುತ್ತಾ ತಂದೆ ಹೇಳಿದ ಅಷ್ಟೂ ವಿಚಾರ್ಗಳನ್ನು ತಿಳಿಸುತ್ತಾಳೆ. ಅದಕ್ಕೆ ಪ್ರಹ್ಲಾದನು ತಾನು ಯಾವುದೇ ಬಗೆಯ ಆತಂಕಕ್ಕೆ ಒಳಗಾಗದೆ “ಇಷ್ಟೇ ಏನಮ್ಮಾ... ಎಲ್ಲಿ ತಂದೆ ಕೊಟಿರುವ ಆ ಪಾತ್ರೆಯನ್ನಿಲ್ಲಿ ತಾ..” ಎನ್ನುತ್ತಾನೆ. ಮತ್ತು ಹಾಗೆನ್ನುತ್ತಲೇ ತಾನೇ ಮುಂದೊತ್ತಿ ಹೋಗಿ ಆ ಪಾತ್ರೆಯತ್ತ ಧಾವಿಸಿ ಕೈಗೆತ್ತಿಕೊಡವನೇ ತಾಯಿಯ ರೋಧನ, ಚಡವಡಿಕೆಗಳಾನ್ನು ಸಹ ಗಣಿಸದೇ “ನಾರಾಯಣಾ... ನಾರಾಯಣಾ... ” ಎನ್ನುತ್ತಾ ಅದರಲ್ಲಿದ್ದ ಅಷ್ಟು ವಿಷವನ್ನೂ ಗಟಗಟನೆ ಕುಡಿದು ಬಿಡುತ್ತಾನೆ. ಕಯಾಲುವು ತನ್ನ ಮಗನ ಈ ಕಾರ್ಯವನ್ನು ಕಂಡು ಆಘಾತಗೊಂಡು ಇನ್ನೊಮ್ಮೆ ಮೂರ್ಛಿತಳಾಗುತ್ತಳೆ. ಆಗ ಪ್ರಹ್ಲಾದನೇ ತಾನು ಅಲ್ಲಿ ಪಾತ್ರೆಯೊಂದರಲ್ಲಿದ್ದ ನೀರನ್ನು ತಾಯಿಯ ಮುಖಕ್ಕೆ ಚಿಮುಕಿಸಿ ಅವಳಾನ್ನು ಎಚ್ಚರಗೊಳಿಸುತ್ತಾನೆ. ಹಾಗೆ ಎಚ್ಚರಗೊಂಡ ಕಯಾಲುವು ಕುಮಾರನನ್ನು ತಬ್ಬಿ ಹಿಡಿಯುತ್ತಾ “ಮಗನೇ.. ನಿನಗೇನೂ ಆಗಿಲ್ಲವಷ್ಟೇ...?” ಎನ್ನುತ್ತಾ ಮತ್ತೆ ರೋಧಿಸುತ್ತಾಳೆ. ಅದಕ್ಕೆ ಪ್ರಹ್ಲಾದನು “ಇಲ್ಲಮ್ಮಾ... ನನಗೇನೂ ಆಗಲಿಲ್ಲ.. ಯಾರು ಶ್ರೀ ಹರಿಯನ್ನು ಬಲವಾಗಿ ಆರಾಧಿಸಿ ಅವನಲ್ಲಿಯೇ ಶರಣಾಗುವರೋ ಅಂಥವರನ್ನು ಆ ಹರಿಯು ಎಂದೆಂದಿಗೂ ಕೈ ಬಿಡಲಾರ” ಎನ್ನುತ್ತಾನೆ. ಆಗಲೂ ಕಯಾಲುವು ತಾನು ಮಗನನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡು ಬಿಕ್ಕುತ್ತಾಳೆ.
ಅಂತಃಪುರದ ದೂತಿಯಿಂದ ಪ್ರಹ್ಲಾದ ಕುಮಾರನು ವಿಷವನ್ನು ಕುಡಿದೂ ಬ್ದುಕುಳಿದ ಸುದ್ದಿ ರಾಜಾ ಹಿರ್ಣ್ಯನಿಗೆ ತಲುಪುತ್ತಲೇ ಆತನು ಇನ್ನಷ್ಟು ಉಗ್ರ ಕೋಪವನ್ನು ತಾಳುತ್ತಾನೆ. ಮತ್ತು ‘ಆ ಕಪಟಿ ಶ್ರೀ ಹರಿಯ ಮಾಯಾಜಾಲದಿಂದ ತನ್ನ ಮಗನನ್ನು ಹೇಗೆ ಹೊರತರುವುದೆನ್ನುವ ಬಗ್ಗೆ’ ಚಿಂತಾಕ್ರಾಂತನಾಗುತ್ತಾನೆ.
ಇದಾಗಿ ಕೆ ದಿನಗಳುರುಳಿದವು. ಅದೊಮ್ಮೆ ಪ್ರಹ್ಲಾದನನ್ನು ಕಂಡ ಹಿರಣ್ಯ ಕಷಿಪುವು ಮಗನನ್ನು ಹೀಗೆಂದು ಪ್ರಶ್ನಿಸಿದನು- “ನೀನೆಷ್ಟೆಂದರೂ ಆ ಕಪಟಿಯ ಸ್ಮರಣೆ ಮಾಡುವುದನ್ನು ಬಿಡುತ್ತಿಲ್ಲವಲ್ಲ, ಹಾಗಾದರೆ ನಿಜವಾಗಿಯೂ ಎಲ್ಲಿರುವನು ಆ ನಿನ್ನ ಹರಿ?” ಅದಕ್ಕೆ ಪ್ರಹ್ಲಾದನು ತಾನು ಶಾಂತನಾಗಿ “ಎಲ್ಲೆಲ್ಲಿಯೂ ಇದ್ದಾನೆ ತಂದೆಯೇ” ಎಂದುತ್ತರಿಸಲು ಹಿರಣ್ಯನಿಗೆ ಮತ್ತೂ ರೇಗಿ ಹೋಯಿತು ಅದಾಗ “ಹಾಗಾದರೆ ಆಕಾಶ, ಭೂಮಿಯಲ್ಲಿ, ಬೆಟ್ಟ ಗುಡ್ಡಗಳಾಲ್ಲಿ, ನದಿಗಳಾಲ್ಲಿ ಇರುವನೋ?” ಎಂದು ಕೇಳಲು ಅದಕ್ಕೂ ಪ್ರಹ್ಲಾದನು “ಹೌದು ತಂದೆಯೇ.. ಇದ್ದಾನೆ” ಎಂದುತ್ತರವಿತ್ತನು. ಹಿರಣ್ಯನು ಅಷ್ಟಕ್ಕೆಯೇ ಬಿಡದೆ ಮತ್ತೆ “ಹಾಗಾದರೆ ಈ ಅರಮನೆಯಲ್ಲಿರುವನೋ? ಈ ದೊಡ್ಡ ಕಂಭದಲ್ಲಿ....?” ಎನ್ನುತ್ತಲೇ ಅಲ್ಲಿದ್ದ ಒಂದು ಬೃಹತ್ ಕಂಬವನ್ನು ತೋರಿಸಿದ್ನು. ಪ್ರಹ್ಲಾದನು ಅದಕ್ಕೂ “ಹೌದು ಇದ್ದಾನೆ” ಎಂದುತ್ತರಿಸಿದ್ದೇ ತಾನು ತನ್ನ್ ಬಲವ್ದ ಗಧೆಯಿಂದ ಆ ಕಂಭವನ್ನು ಒಡೆದನು. ಅದೇ ಕ್ಷಣದಲ್ಲಿ ಶ್ರೀ ಮಹಾವಿಷ್ಣುವು ತಾನು ನರಸಿಂಹನ್ ಅವತಾರದಲ್ಲಿ ಕಂಭದೊಳಗಿನಿಂದ ಪ್ರಕಟಾವಾದನು. ಇವನೇ ಆ ಶ್ರೀ ಹರಿ ಯೆಂದು ತಿಳಿಯುತ್ತಲೇ ಹಿರಣ್ಯ ಕಷಿಪುವು ತಾನು ಅಟ್ಟಹಾಸಗೈಯ್ಯುತ್ತಾ ಅವನೊಡನೆ ಯುದ್ದಕ್ಕೆ ಮುಂದಾದನು. ಅತ್ತ ಪ್ರಹ್ಲಾದ ಕುಮಾರನು ತನ್ನ ಆರಾಧ್ಯದೇವ ಶ್ರೀ ಹರಿಯ ಈ ಘನಘೋರ ರೂಪವನ್ನು ತಾಳಿ ಬಂದುದು ಕಂಡು ನಡುಗುತ್ತಾ “ನಾರಾಯಣಾ... ನಾರಾಯಣಾ...” ಎನ್ನುತ್ತಾ ಮೂಲೆಯೊಂದರಲ್ಲಿ ನಿಂತನು. ಹಿರಣ್ಯನಿಗೂ ನರಸಿಂಹನಿಗೂ ಬಹುಕಾಲದವರೆಗೆ ಯುದ್ದವು ನಡೆಯಿತು. ಅದಾಗ ಸಂದ್ಯಾ ಸಮಯ ಹತ್ತಿರವಾಗುತ್ತಿತ್ತು. ಅದನ್ನೇ ನಿರೀಕ್ಷಿಸುತ್ತಿದ್ದ ನರಸಿಂಹಾವತಾರಿ ಶ್ರೀ ಹರಿಯು ತಾನು ಹಿರಣ್ಯನನ್ನು ಅನಾಮತ್ತಾಗಿ ಎತ್ತಿಕೊಂಡು ಅರಮನೆಯ ಹೊಸಿಲ ಮೇಲೆ ಹತ್ತಿ ಕುಳಿತು ತನ್ನೆರಡೂ ಕೈಗಳಿಂದ ಹಿರಣ್ಯ ಕಷಿಪುವಿನ ಹೊಟ್ಟೆಯನ್ನು ಸೀಳಿ ಕರುಳನ್ನು ಹೊರತೆಗೆದು ಮಾಲೆಯಂತೆ ಧರಿಸಿದನು. ಮತ್ತು ಆ ಪ್ರಕಾರವಾಗಿ ದುಷ್ಟ ರಕ್ಕಸನಾದ ಹಿರಣ್ಯ ಕಷಿಪುವನ್ನು ಸಂಹರಿಸಿದನು. 
ಶ್ರೀ ನರಸಿಂಹ ಸ್ವಾಮಿಯು ಅವತಾರವೆತ್ತಿದ ಸ್ಥಳ: ಉಗ್ರ ಸ್ಥಂಭ
ಅದರಿಂದಾಚೆಗೂ ಸಹ ಪ್ರಹ್ಲಾದ ಕುಮಾರ್ನು ತಾನು ಎಂದೆಂದೂ ಹರಿ ದ್ಯಾನ ಮಾಡುವುದನ್ನು ನಿಲ್ಲಿಸಲಿಲ್ಲ. ತಾನು ಪ್ರಾಪ್ತವಯಸ್ಕನಾಗಿ ತನಗೆ ಪ್ರಾಪ್ತಿಯಿದ್ದ ರಾಜ್ಯವನ್ನು ದಕ್ಷತೆಯಿಂದ ಧರ್ಮ ನಿಷ್ಠನಾಗಿ ಆಳ್ವಿಕೆ ನಡೆಸಿ ಹೆಸರು, ಕೀರ್ತಿ ಗಳಿಸಿದ ಪ್ರಹ್ಲಾದನ ತಪೋಭೂಮಿಯೇ ಇಂದಿನ ಅಹೋಬಿಲಂ ಪ್ರದೇಶವಾಗಿದ್ದು. ನರಸಿಂಹಾವತಾರ ಸ್ವರೂಪಿಯಾದ ಶ್ರೀ ವಿಷ್ಣುವು ಅಂದಿನಿಂದಿಂದಿನವರೆಗೂ ತನ್ನ ಭಕ್ತಾದಿಗಳೆಲ್ಲರೂ ಒಳಿತು ಮಾಡುತ್ತಾ, ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ವಿರಾಜಮಾನನಾಗಿದ್ದಾನೆ.
ಇಂದಿಲ್ಲಿ ಶ್ರೀ ಸ್ವಾಮಿಯು ತಾನು ನವ (ಒಂಭತ್ತು) ರೂಪಗಳಲ್ಲಿ ನೆಲೆಸಿದ್ದಾನೆ. ಅವುಗಳೆಂದರೆ-
ಶ್ರೀ ಜ್ವಾಲಾ ನರಸಿಂಹ, ಶ್ರೀ ಅಹೋಬಿಲ ನರಸಿಂಹ, ಶ್ರೀ ಮಾಲೋಲ ನರಸಿಂಹ, ಶ್ರೀ ಕ್ರೋದಕರ(ವರಾಹ) ನರಸಿಂಹ, ಶ್ರೀ ಕಾರಂಜ ನರಸಿಂಹ, ಶ್ರೀ ಭಾರ್ಗವ ನರಸಿಂಹ, ಶ್ರೀ ಯೋಗಾನಂದ ನರಸಿಂಹ, ಶ್ರೀ ಚತ್ರವಾತ ನರಸಿಂಹ ಮತ್ತು ಶ್ರೀ ಪಾವನ ನರಸಿಂಹ. ಇಷ್ಟೇ ಅಲ್ಲದೆ ಅಂದು ಕಂಭವೊಂದರಿಂದ ನರಸಿಂಹಾವತಾರವಾಯಿತಷ್ಟೆ, ಆ ಕಂಭದ ಕುರುಹು ಇಂದಿಗೂ ಅಲ್ಲಿದ್ದು ಅಹೋಬಿಲ ದಿಂದ ಎಂಟು ಕಿಲೋಮೀಟರ್ ದೂರದಲ್ಲಿ ``ಉಗ್ರ ಸ್ಥಂಭ’’ ವೆನ್ನುವ ಹೆಸ್ಸರಿನೊಂದಿಗಿನ್ ಬೃಹತ್ ಕಲ್ಲಿನ ಬೆಟ್ಟವೊಂದನ್ನು ನ್ವಿಂದು ನೋಡುತ್ತೇವೆ, ಅದುವೇ ನರಸಿಂಹಾವತಾರವೆತ್ತಲು ಕಾರಣವಾದ ಕಂಭವೆನ್ನಲಾಗುತ್ತಿದೆ.
ಅಂತಿಮವಾಗಿ ಶ್ರೀದೇವರು ನಮಗೆಲ್ಲರಿಗೂ ಸನ್ಮಂಗಳಾವನ್ನುಂಟುಮಾಡಲಿ ಎಂದು ಹಾರೈಸುತ್ತಾ....
ನಮಸ್ಕಾರ. 

No comments:

Post a Comment