Thursday, June 05, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 25


ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರಗಳು,

ನಾನು ಈ ಒಂದು ವರ್ಷದ ಆಜುಬಾಜಿನಲ್ಲಿ ಪ್ರಾರಂಭಿಸಿದ ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) ” ಅಂಕಣವು ಇದೀಗ 25 ನೇ ಅಂಕ ಪೂರೈಸಿದೆ ಎನ್ನುವುದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ನಿಮ್ಮೆಲ್ಲರ ಪ್ರೊತ್ಸಾಹವು ಹೀಗೆ ಮುಂದುವರಿದಲ್ಲಿ ಈ ಅಂಕಣವು ತನ್ನ 100 ನೇ ಅಂಕವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆನ್ನುವುದರಲ್ಲಿ ಸಂದೇಹವಿಲ್ಲ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಪ್ರೀತಿಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಾ....

ನಿಮ್ಮ ಪ್ರೀತಿಯ 
ರಾಘವೇಂದ್ರ ಅಡಿಗ ಎಚ್ಚೆನ್. 
***
ಕುರುಡುಮಲೆ (Kurudumale)
ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿನ ಮುಳಬಾಗಿಲು ತಾಲೂಕು ಕೇಂದ್ರದಿಂದ ಸುಮಾರು ೧೦ ಕಿ.ಮೀ. ದೂರದಲ್ಲಿರುವ ಶ್ರೀ ಕ್ಷೇತ್ರ ಕುರುಡುಮಲೆ ಅಲ್ಲಿನ ವಿನಾಯಕ ದೇವಾಲಯದಿಂದಾಗಿ ಜಗದ್ವಿಖ್ಯಾತವಾಗಿದೆ. ತ್ರಿಮೂರ್ತಿಗ್ಳು ಸೇರಿ ಸ್ಥಾಪಿಸಿದರೆನ್ನಲಾಗುವ ಈ ಕಾರಣಿಕ ಸ್ಥಳಕ್ಕೆ ದಿನನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶ್ರೀ ಮಹಾಗಣಾಪತಿಯು ನಿಂತಿರುವ ಶೈಲಿಯಲ್ಲಿನ ಇಲ್ಲಿನ ವಿಗ್ರಹವು ನಹು ಪುರಾತನವೂ ಸುಂದರವೂ ಆಗಿದೆ.

Kurudumale Sri Siddi Vinayaka Swami 

***

ಕೃತಯುಗದಲ್ಲಿ ಲೋಕಕಂಟಕನಾಗಿದ್ದ ತ್ರಿಪುರಾಸುರನನ್ನು ಕೊಲ್ಲಕು ತ್ರಿಮೂರ್ತಿಗಳ ಸಹಿತ ಯಾರಿಂದಲೂ ಅಸಾಧ್ಯವಾಗಲು, ಆಗ ತ್ರಿಮೂರ್ತಿಗಳೂ ಸೇರಿದಂತೆ ಎಲ್ಲಾ ದೇವತೆಗಳೂ ಸೇರಿ ಗಣಪತಿಯನ್ನು ಪ್ರಾರ್ಥಿಸಲು ನಿಶ್ಚಯಿಸಿ ಹಾಗೆಯೇ ಮಾಡಿದರು. ತನ್ನ ಉಪಾಸಕನೇ ಆಗಿದ್ದ ಆ ಅಸುರನನ್ನು ನೇರವಾಗಿ ಸಂಹರಿಸುವುದಕ್ಕೆ ಗಣಪತಿಯ ಕೈಯಿಂದಲೂ ಸಾಧ್ಯವಾಗದೇ ಹೋಯಿತು. ಆಗ ಗಣಪತಿಯು ತನ್ನೊಂದು ದಂತವನ್ನು ಕಿತ್ತು ಇಂದ್ರನಿಗೆ ಕೊಡುವುದರ ಮೂಲಕ ಅದರ ಸಹಾಯದಿಂದ ರಾಕ್ಷಸನನ್ನು ಸಂಹರಿಸಲು ತಿಳಿಸಿದನು. ಅಂದಿನಿಂದ ಗಣಪತಿಯು “ಏಕದಂತ” ಎನ್ನುವ ವಿಶೇಷಣಕ್ಕೆ ಭಾಜನನಾದನು.

Sri Siddi Vinayaka Swami temple, Kurudumale
ಹಾಗೆ ಗಣಪತಿಯ ಅಣತಿಯಂತೆ ತ್ರಿಪುರಾಸುರನನ್ನು ಇಂದ್ರನು ಸಂಹರಿಸಿದ ಬಳಿಕ ಎಲ್ಲಾ ದೇವಾನುದೇವತೆಗಳೂ ಈ ಒಂದು ಗಿರಿಯ ಮೇಲೆ ಕೂಡಿಕೊಂಡು ಸಂಭ್ರಮ ಪಟ್ಟರು. ಹಾಗೆ ದೇವತೆಗಳೆಲ್ಲಾ ಒಂದೆಡೆ ಕೂಡಿದ್ದ ಈ ಸ್ಥಳವೇ “ಕೂಡುಮಲೆ” ಎಂದು ಖ್ಯಾತವಾಯಿತು. ಕಾಲಕ್ರಮೇಣ ಜನರ ಬಾಯಿಗೆ ಸಿಕ್ಕು ಈ “ಕೂಡುಮಲೆ” ಎನ್ನುವುದು “ಕುರುಡುಮಲೆ” ಎಂದು ನಾಮ ಪರಿವರ್ತನೆಯನ್ನು ಹೊಂದಿತು.

ಇದು ಕೌಂಡಿನ್ಯ ಕ್ಷೇತ್ರ.ಕೌಂಡಿನ್ಯ ಮಹರ್ಷಿಗಳು ಇಲ್ಲಿ ತಪವನ್ನಾಚರಿಸಿದ್ದರು ಎಂಬ ಉಲ್ಲೇಖವಿದೆ.  ಕೌಂಡಿನ್ಯ ನದಿ ಇಲ್ಲಿಯೇ ಹುಟ್ಟುವುದು. ಹೀಗಾಗೇ ಇದು ಪವಿತ್ರ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ.

ಕೃತಯುಗದಲ್ಲಿ, ದ್ವಾಪರದಲ್ಲಿ ಇದು `ಗಣೇಶಗಿರಿ' ಎನಿಸಿಕೊಂಡಿತ್ತು. 

No comments:

Post a Comment