Saturday, August 15, 2015

ಕಲಾಂ: ಮರೆಯಾದರೂ ಮರೆಯಲಾಗದ ಕರ್ಮಯೋಗಿ

ಮಾನವೀಯತೆಯ ಪ್ರತಿರೂಪದಂತಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ, ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ   (83) ಇಂದು ನಮ್ಮೊಡನಿಲ್ಲ.ಭಾರತ ಸ್ವಾತಂತ್ರ್ಯ ದಿನವಾದ ಇಂದು ಅವರ ನೆನಪೇಕೋ ಬಹಳ ಕಾಡುತ್ತಲಿದೆ.ಸಾರ್ವಜನಿಕ ಜೀವನದಲ್ಲಿ ಸಾಧನೆಯ ಉತ್ತುಂಗ ಶಿಖರವನ್ನೇರಿ, ಜನಸಾಮಾನ್ಯರ ಮನದಾಳದಲ್ಲಿ ಶಾಶ್ವತವಾದ ಸ್ಥಾನ ಪಡೆಯುವ ಯಾವುದೇ ವ್ಯಕ್ತಿ  ಸ್ವತಂತ್ರ ಭಾರತದ ಚರಿತ್ರೆಯಲ್ಲಿ ವಿರಳ. ಅಂತಹ ಮೇಧಾವಿಗಳ ಪೈಕಿ ಭಾರತ ರತ್ನ ಡಾ ಕೆ ಪಿ ಜೆ ಅಬ್ದುಲ್ ಕಲಾಂ ಒಬ್ಬರೆನ್ನಬೇಕು. ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ, ನಿಷ್ಠೆ, ಸರಳತೆ ಮತ್ತು ಪಾರದರ್ಶಕತೆ ಇವೆಲ್ಲವೂ ಎಲ್ಲದರಿಂದ ಮೇಳವೆತ್ತಿದ್ದ ವ್ಯಕ್ತಿತ್ವ ಅವರದ್ದು. ದೇಶದ ಯುವ ಜನತೆಗೆ ಪ್ರಾಮಾಣಿಕತೆ ಮತ್ತು ಶ್ರದ್ಧಾಭಕ್ತಿಗಳ ಪಾಠ ಕಲಿಸಲು ಅವಿರತ ಯತ್ನಿಸಿದ ಕಲಾಂ ಅಭಿವೃದ್ಧಿ ಅಥವಾ ಪ್ರಗತಿಯನ್ನು ಆಢಳಿತ ವ್ಯವಸ್ಥೆಯ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಿದರು.

ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ (1931 - 2015)


ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂರವರು  ತಮಿಳುನಾಡು ರಾಜ್ಯದ ರಾಮೇಶ್ವರಂನಲ್ಲಿ, ೧೫ ಅಕ್ಟೋಬರ್ ೧೯೩೧ ರಂದು ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು.ಅವರ ತಂದೆ  ಜೈನುಲಬ್ದೀನ್, ಅವರು ದೋಣಿ ಮಾಲೀಕರಾಗಿದ್ದರು ಮತ್ತು ಅವನ ತಾಯಿ ಅಶಿಮಾ ಒಬ್ಬ ಗೃಹಿಣಿ. ಕಲಾಂ ಅವರ ತಂದೆ, ಈಗ ನಿರ್ನಾಮವಾದ ಧನುಷ್ಕೋಡಿ ಮತ್ತು ರಾಮೇಶ್ವರಂ ನಡುವೆ ತಮ್ಮ ದೋಣಿಯಲ್ಲಿ ಹಿಂದು ಭಕ್ತಾದಿಗಳನ್ನು ಕರೆದುಕೊಂಡು ಹೋಗುತ್ತಿದ್ದರು.ಕಲಾಂಅವರು ಕುಟುಂಬದ ನಾಲ್ಕು ಜನ ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅತ್ಯಂತ ಕಿರಿಯರಾಗಿದ್ದರು. ಅವರು ಬಡ ಹಿನ್ನೆಲೆಯಿಂದ ಬಂದವರು ಮತ್ತು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸುವ ಸಲುವಾಗಿ, ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. ತಮ್ಮ ತಂದೆಗೆ ಆರ್ಥಿಕವಾಗಿ ಸಹಾಯ ಮಾಡಲು, ಅವರು ಶಾಲೆಯ ನಂತರ ತಮ್ಮ ಸಂಸೂದ್ದಿನ ಕಲಾಂ ಜೊತೆಗೆ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು. ಇವರ ಬಾಲ್ಯವು ಬಹಳ ಆರ್ಥಿಕ ಬಡತನದಿಂದ ಸಾಗಿತ್ತು. ಮುಂಜಾನೆ :೦೦ ಘಂಟೆಗೆ ಎದ್ದು ದಿನದ ಪಾಠಗಳನ್ನು ಓದಿ ಶಾಲೆಗೆ ಹೋಗುತ್ತಿದ್ದರು. ಅವರು ಶಾಲೆಯಲ್ಲಿ ದ್ದಾಗ ಒಬ್ಬ ಸಾಧಾರಣ ವಿಧ್ಯಾರ್ಥಿಯಾಗಿದ್ದರು, ಆದರೆ ಚುರುಕಾದ ಮತ್ತು ಕಠಿಣ ಶ್ರಮ ಪಡುವ ವಿಧ್ಯಾರ್ಥಿಯಾಗಿದ್ದರು. ಅವರಿಗೆ ಗಣಿತದಲ್ಲಿ ವಿಶೇಷ ಆಸಕ್ತಿ ಇತ್ತು, ಅವರು ಗಣಿತವನ್ನು ಗಂಟೆಗಳ ಅಧ್ಯಯನ ಮಾಡುತ್ತಿದ್ದರು. ಅವರು ರಾಮನಾಥಪುರಂ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ನಂತರ ತಿರುಚಿರಾಪಳ್ಳಿಯಲ್ಲಿ ಕಲಾಂ ಸೇಂಟ್ ಜೋಸೆಫ್ಸ್ ಕಾಲೇಜಿಗೆ ಸೇರಿಕೊಂಡರು. ೧೯೫೪ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಕೋರ್ಸ್ ಕೊನೆಯಲ್ಲಿ ಅವರಿಗೆ ವಿಷಯದ ಬಗ್ಗೆ ಉತ್ಸಾಹ ಕಡಿಮೆಯಾಗುತ್ತಾ ಬಂತು ಮತ್ತು ವಿಷಯವನ್ನು ನಾಲ್ಕು ವರುಷಗಳ ಕಾಲ ಅಧ್ಯಯನ ಮಾಡಿದಕ್ಕೆ ಆಮೇಲೆ ಪಶ್ಚಾತಾಪ ಪಟ್ಟರು. ಅವರು ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್ ಗೆ ತೆರಳಿದರು. ಕಲಾಂ ಅವರು ಕೆಲಸ ಮಾಢುತಿದ್ದಾ ಹಿರಿಯ ವರ್ಗದ ಯೋಜನೆಯ ಪ್ರಗತಿ ಬಗ್ಗೆ ಡೀನ್ ಅವರು ಅತೃಪ್ತಿ ವ್ಯಕ್ತಪಡಿಸಿ, ಇನ್ನೂ ಮೂರು ದಿನಗಳಲ್ಲಿ ಯೋಜನೆ ಮುಗಿಸದ್ದಿದರೆ, ಅವರ ವಿದ್ಯಾರ್ಥಿವೇತನ ರದ್ದು ಮಾಡುವ ಬೆದೆರಿಕೆ ಹಾಕಿದರು, ಕಲಾಂ ಅವರು ಡೀನ್ ಕೊಟ್ಟ ಗಡುವಿನಲ್ಲಿ ಯೋಜನೆ ಪೂರೈಸಿದರು. ಅವರ ಕೆಲಸದಿಂದ ಪ್ರಭಾವಿತರಾದ ಡೀನ್ ಅವರು "ನಾನು ನಿನ್ನ ಮೇಲೆ ಹೆಚ್ಚು ಒತ್ತಡ ಹಾಕಿ ಕಠಿಣವಾದ ಗಡುವಿನಲ್ಲಿ ಕೆಲಸ ಪೂರೈಸಲು ಹೇಳಿದ್ದೆ" ಎಂದು ಹೇಳಿದರು. ಎಂಟು ಸ್ಥಾನಗಳು ಖಾಲಿ ಇದ್ದ ಭಾರತೀಯ ವಾಯುಪಡೆಯಾ ಅರ್ಹತಾ ಸುತ್ತಿನಲ್ಲಿ ಒಂಬತ್ತೆನೆಯ ಸ್ಥಾನ ಪಡೆದುದ್ದರಿಂದ, ಯುದ್ದ ವಿಮಾನದ ಚಾಲಕನಾಗುವ ಅವರ ಕನಸಿನ ಅವಕಾಶ ತಪ್ಪಿಹೋಯಿತು.
ಮುಂದಿನದೆಲ್ಲಾ ಇತಿಹಾಸ. ದೇಶಕ್ಕಾಗಿ ಅವಿರತ ದುಡಿದ ಈ ಮಿಸೈಲ್ ಮ್ಯಾನ್,  ಮಾನವತಾವಾದಿ ಮೇಷ್ಟ್ರು ನಮ್ಮನ್ನೆಲ್ಲಾ ಬಿಟ್ಟು ನಡೆದಿದ್ದಾರೆನ್ನುವುದನ್ನು ಈಗಲೂ ನಂಬಲು ಕಷ್ಟವಾಗುತ್ತಿದೆ.
ಈ ಮುಂದೆ ಕಲಾಂ ಬದುಕಿನ ಪುಟಗಳಲ್ಲಿ ಘಟಿಸಿದ ಒಂದೆರಡು ಘಟನೆಗಳನ್ನು ನಾನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತದ್ದೇನೆ.

ಘಟನೆ
ಅದು ಮೈಸೂರಿನ ಖಾಸಗಿ ವಿದ್ಯಾಸಂಸ್ಥೆಯೊಂದರ ಸಮಾರಂಭ. ಅಂದಿನ ರಾಷ್ಟ್ರಪತಿ ಡಾ.. ಪಿ.ಜೆ.ಅಬ್ದುಲ್ ಕಲಾಂ ಅವರೇ ಸಮಾರಂಭದ ಕೇಂದ್ರ ಬಿಂದು. ಎಂದಿನಂತೆ ನಿಗದಿತ ಸಮಯಕ್ಕೆ ಕಲಾಂ ವೇದಿಕೆ ಏರಿ, ಕಣ್ಮುಂದಿನ ಸಭಾಸದರಿಗೆ ಕೈ ಬೀಸಿ, ಮುಗುಳ್ನಗೆ ಮೂಲಕ ಶುಭ ಹಾರೈಸಿದರು.
15 ರಿಂದ 30ರೊಳಗಿನ ಕಿಶೋರ/ಕಿಶೋರಿಯರು, ತರುಣ/ತರುಣಿಯರು ಪ್ರತಿಯಾಗಿ ತಮ್ಮ ಮಂದಾಸ್ಮಿತ ಹೂ ನಗೆಯೊಂದಿಗೆ ರೋಮಾಂಚನದ ಭಾವವನ್ನು ಅಭಿವ್ಯಕ್ತಗೊಳಿಸಿದರು !
ಬೆನ್ನಲ್ಲಿಯೇ, ರಾಷ್ಟ್ರಗೀತೆ ಜನಗಣ ಮನ ಶುರುವಾಯಿತು. ಅದೇಕೋ ಏನೋ ಕೆಲ ಸೆಕೆಂಡ್ ಗಳಲ್ಲಿ ಮೈಕ್ ಕೈ ಕೊಟ್ಟಿತೆಂದು ಕಾಣುತ್ತೆ. ಪಂಜಾಬ ಸಿಂಧು ಗುಜರಾತ ಮರಾಠಸಾಲು ಕ್ಷೀಣವಾಗಲಾರಂಭಿಸಿತು. ಮುಂದೇನಾಗಬಹುದು ಎಂದು ಉಳಿದವರು ಚಿಂತಿಸುವ ವೇಳೆಯಲ್ಲಿಯೇ, ವೇದಿಕೆಯ ನಟ್ಟ ನಡುವೆ ನಿಂತಿದ್ದ ಕಲಾಂ ತಾತ, …ದ್ರಾವಿಡ ಉತ್ಕಲ ವಂಗಾ./ ವಿಂಧ್ಯ ಹಿಮಾಚಲ ಯಮುನಾ ಗಂಗಾಎಂದು ಗೀತೆಗೆ ಕಂಠವಾಗಿದ್ದರು. ಮಾತ್ರವಲ್ಲ, ಹಾಡಿಗೆ ರಾಗ ಸಂಯೋಜಿಸುವಾಗ ಆರ್ಕೇಸ್ಟ್ರಾ ತಂಡದ ಮುಖ್ಯಸ್ಥ ಸ್ಟೈಲಿನಲ್ಲಿ ನಮ್ಮ ಎರಡೂ ಕೈಗಳನ್ನು ಅಗಲಿಸಿ, ಉಳಿದ ಸಭಿಕರಿಗೆ ಗೀತೆಗೆ ಸಾಥ್ ನೀಡುವಂತೆ ಹುರಿದುಂಬಿಸುತ್ತಿದ್ದರು. ಪರಿಣಾಮ, ಉಳಿದವರೂ ಗೀತೆಗೆ ದನಿಯಾಗಿ ರಾಷ್ಟ್ರಗೀತೆಯನ್ನು ಮುಂದುವರಿಸಿದರು !

ಘಟನೆ
ಕಲಾಂ ರಾಷ್ಟ್ರಪತಿಗಳಾಗಿದ್ದ ಸಮಯದಲ್ಲಿ ಒಮ್ಮೆ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಕಲಾಂ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಸೇರಿದಂತೆ ಹಲವು ಕಾನೂನು ಪರಿಣಿತರೊಂದಿಗೆ ಸಮಾಲೋಚನೆ ನಡೆಸಿದ್ದರು. ಪಕ್ಕದ ರೂಮಿನಲ್ಲಿ ಕುಳಿತಿರುವಂತೆ ನನಗೆ (ಕಲಾಂ ಅವರು ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಅವರ ಕಾರ್ಯದರ್ಶಿಯಾಗಿದ್ದ ಪಿ ಎಂ ನಾಯರ್ ) ಸೂಚಿಸಲಾಗಿತ್ತು. ಹದಿನೈದು ನಿಮಿಷಗಳ ನಂತರ ಬೆಲ್ ಸದ್ದಾಯಿತು ಸಹಾಯಕ ಬಂದು 'ಸರ್  ನಿಮ್ಮನ್ನು ಕರೆಯುತ್ತಿದ್ದಾರೆ ಬರಬೇಕಂತೆ' ಎಂದ.
ನಾನು ಒಳ ಹೋದೆ. ರಾಷ್ಟ್ರಪತಿ ಹಾಗೂ ಅವರ ಗೆಸ್ಟ್ ಸೋಫಾದಲ್ಲಿ ಕುಳಿತಿದ್ದರು. ನಾನು ಅವರ ಮುಂದಿನ ಆಸನದಲ್ಲಿ ಕುಳಿತೆ. ಗೆಸ್ಟ್ ಹೇಳಿದರು 'ಮಿಸ್ಟರ್ ನಾಯರ್ ಗಲ್ಲು ಶಿಕ್ಷೆ ಬಗ್ಗೆ  ಚರ್ಚಿಸುತ್ತಿದ್ದೇವೆ.  ರಾಷ್ಟ್ರಪತಿಯವರು ಈ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ ಹಾಗೂ ಅದೆನೆಂಬುದು ನಿಮಗೂ ಗೊತ್ತಿದೆ. ರಾಷ್ಟ್ರಪತಿಯವರ ನಿಲುವಿಗೆ ನಾನು ಸಮ್ಮತಿ ಸೂಚಿಸುತ್ತೇನೆ. ನಿಮ್ಮ ಅನಿಸಿಕೆ ಏನು?'
ನಾನು ಕಲಾಂ ಅವರನ್ನು ನೋಡಿದೆ. ನಾನೇನು ಹೇಳುತ್ತೆನೆಂಬುದು ಅವರಿಗೆ ಗೊತ್ತಿತ್ತು. ಅವರು ಮುಗುಳ್ನಕ್ಕರು. 'ಸರ್ ನಾನು ನನ್ನ ಅನಿಸಿಕೆ ಹೇಳಬಹುದೇ?' ಎಂದೆ. ಕಲಾಂ ತಲೆಯಾಡಿಸಿದರು. ಗೌರವಯುತವಾಗಿ ನಾನು ನನ್ನ ಅಭಿಪ್ರಾಯ ತಿಳಿಸಿದೆ. ನನ್ನ ಮಾತು ಕೇಳಿ ಆ ಕಾನೂನು ಪರಿಣಿತರಿಗೆ ಬಹಳ ಅಚ್ಚರಿಯಾಯಿತು. ಆ  ಚರ್ಚೆ ಅಲ್ಲಿಗೇ ಮುಗಿಯಿತು. ನಾನು ಅವರನ್ನು ಕಳಿಸಲು  ಹೊರಟೆ. ಕಾರನ್ನೇರುವ ಮೊದಲು ಕಾನೂನು ಪರಿಣಿತರು ನನ್ನನ್ನು ನೋಡಿ 'ಭಾರತದ ರಾಷ್ಟ್ರಪತಿಯವರೊಂದಿಗೆ ನೀವು ಈ ರೀತಿ ಮಾತನಾಡಬಹುದಾ?' ಎಂದು ಕೇಳಿದರು.
'ಹೌದು ಸರ್ ಅದರಲ್ಲೇನು ಬಂತು? ಅದು ಅವರ ತಾಕತ್ತು ಹಾಗೂ ನನ್ನ ತಾಕತ್ತೂ ಹೌದು' ಎಂದೆ. ಕಾರು ಹೊರಟಿತು.
ಒಬ್ಬ ಅಧಿಕಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲಾಂ ದೊರಕಿಸಿಕೊಟ್ಟಿದ್ದರು.
ಕೊನೆಯದಾಗಿ ಭಾರತದ ಸ್ವಾತಂತ್ರ್ಯ ದಿನದ ಈ ಶುಭ ಸಮಯದಲ್ಲಿ ನೆನೆಯುವಂತೆ, ನಮ್ಮ ಹಿಂದಿನ ತಲೆಮಾರು ಗಾಂಧೀಜಿಯ ಆದರ್ಶವನ್ನು ಉದಾಹರಿಸುತ್ತಿದ್ದಂತೆಯೇ ನಾವುಗಳು ಅಬ್ದುಲ್ ಕಲಾಂ ಆದರ್ಶ ಜೀವನವನ್ನು ನಮ್ಮ ಮುಂದಿನ ತಲೆಮಾರಿಗೆ ಧಾರಾಳವಾಗಿ ಉದಾಹರಿಸಬಹುದಾಗಿದೆ. ಏನೆನ್ನುತ್ತೀರಿ?
ಎಲ್ಲಾ ಸ್ನೇಹಿತರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
ಜೈ ಹಿಂದ್.... ಜೈ ಭಾರತಾಂಬೆ!

No comments:

Post a Comment