Saturday, June 10, 2017

ಪಾರ್ವತಮ್ಮ ರಾಜ್ ಕುಮಾರ್ ಎನ್ನುವ ವಜ್ರೇಶ್ವರಿ ಭಾಗ - 4

ಒಬ್ಬ ಗಟ್ಟಿಗಿತ್ತಿಯ ನಿರ್ಗಮನ

***

ಗಾಂಧಿನಗರದ ಹೆಡ್ಡಾಫಿಸಿನಂತಿದ್ದ ಸದಾಶಿವನ ಗರದ ಗಟ್ಟಿಗಿತ್ತಿ ಹೆಣ್ಣು ಮಗಳು ಪಾರ್ವತಮ್ಮ ರಾಜ್‌ಕುಮಾರ್ ಇನ್ನಿಲ್ಲ ಎನ್ನುವ ಮೂಲಕ ಒಂದಿಡೀ ಗಾಂಧಿನಗರವೇ ಸೊರಗಿದಂತಿದೆ. ರಾಜ್ ಕುಟುಂಬದ ಆಧಾರ ಸ್ತಂಭವಾಗಿದ್ದ, ಗಾಂಧಿನಗರದ ಹಿರಿಮಗಳಂತಿದ್ದ ಪಾರ್ವತಮ್ಮನವರು ಇತ್ತೀಚೆಗೆ ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಸಹಜವಾಗಿಯೇ ಬಹು ಅಂಗಾಂಗಗಳ ವೈಫಲ್ಯತೆ ಅವರನ್ನು ಹೈರಾಣಾಗಿಸಿತ್ತು. ಪ್ರತಿ ಆರು ಗಂಟೆ ಗೊಮ್ಮೆ ಡಯಾಲಿಸಿಸ್ ಮಾಡಲಾಗು ತ್ತಿತ್ತು. ಎಂ.ಎಸ್.ರಾಮಯ್ಯ ಆಸ್ಪತ್ರೆ ಯಲ್ಲಿ ಕಳೆದ ಎರಡು ವಾರಗಳಿಂದ ತೀವ್ರ ನಿಗಾ ಘಟಕದಲ್ಲಿದ್ದ ಪಾರ್ವತಮ್ಮ ನವರು ನೆನ್ನೆ ಬುಧವಾರ ಬೆಳಗಿನ ಜಾವ ನಾಲ್ಕು-ನಾಲ್ಕುವರೆಗೆ ಶಾಶ್ವತ ವಾಗಿ ಕಣ್ಣು ಮುಚ್ಚುವುದರ ಮೂಲಕ ಈ ಲೋಕದಿಂದಲೇ ನಿರ್ಗಮಿಸಿದ್ದಾರೆ. ಕಾಕತಾಳೀಯ ವೆಂದರೆ ರಾಜ್ ಹಾಗೂ ವರದಪ್ಪ ಕೂಡ ಬುಧವಾರ ದಂದೇ ನಿರ್ಗಮಿಸಿದ್ದರು.

(ಪಾರ್ವತಮ್ಮ ರಾಜ್ ಕುಮಾರ್ ಕುರಿತಂತೆ ಖ್ಯಾತ ಪತ್ರಕರ್ತರಾದ ರವಿ ಬೆಳೆಗೆರೆ ತಮ್ಮ ಪತ್ರಿಕೆ 'ಹಾಯ್ ಬೆಂಗಳೂರು' ನಲ್ಲಿ  ಬರೆದುಕೊಂಡ ಲೇಖನದ ಸಾಲುಗಳು)






















No comments:

Post a Comment