Saturday, March 30, 2019

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -101

ಸುಚೀಂದ್ರಂ (Suchindram )


ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್ಯದ ಪ್ರತಿ ಪ್ರಮುಖ ನಗರಗಳಲ್ಲಿ ಶಿವನ ಹಾಗೂ ವಿಷ್ಣುವಿನ ದೇವಾಲಯಗಳನ್ನು ಕಾಣಬಹುದು. ಆದರೆ ಈ ಮೂರೂ ಪ್ರಮುಖ ದೇವತೆಗಳು ಒಟ್ಟಾಗಿ ನೆಲೆಸಿದ್ದರೆ?

ಹೌದು ಅಂತಹ ದೇವಾಲಯ ವಿಶೇಷ. ಸೃಷ್ಟಿಕರ್ತ ಬ್ರಹ್ಮ, ಪಾಲನಕರ್ತ ವಿಷ್ಣು ಹಾಗೂ ಲಯಕರ್ತ ಶಿವ, ಈ ಮೂವರೂ ತ್ರಿಮೂರ್ತಿಗಳು ಒಟ್ಟಾಗಿ ಒಂದೆಡೆ ನೆಲೆಸಿರುವುದು ಬಹು ಅಪರೂಪ. ಆದರೆ ದಕ್ಷಿಣ ದೇವಾಲಯಗಳ ರಾಜ್ಯವೆಂದೆ ಹೇಳಬಹುದಾದ ತಮಿಳುನಾಡು ಇಂತಹ ಒಂದು ವಿಶಿಷ್ಟ ದೇವಾಲಯಕ್ಕೆ ನೆಲೆಯಾಗಿದೆ. ತನುಮಲಯನ್ ಎಂತಲೂ ಕರೆಯಲ್ಪಡುವ ಈ ದೇವಾಲಯವಿರುವುದು ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಸುಚೀಂದ್ರಂ ಪಟ್ಟಣದಲ್ಲಿದೆ. ಸುಚೀಂದ್ರಂ, ಕನ್ಯಾಕುಮಾರಿ ನಗರದಿಂದ 11 ಕಿ.ಮೀ, ನಾಗರಕೋಯಿಲ್ ನಿಂದ 7 ಕಿ.ಮೀ, ತಿರುನೆಲ್ವೇಲಿಯಿಂದ 70 ಕಿ.ಮೀ ಹಾಗೂ ಕೇರಳದ ತಿರುವನಂತಪುರಂನಿಂದ 85 ಕಿ.ಮೀ ಗಳಷ್ಟು ದೂರದಲ್ಲಿದೆ.
 17 ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು ಅದ್ಭುತ ಶಿಲ್ಪಕಲೆಯ ಕಲಾಕೃತಿಗಳಿಂದ ಶ್ರೀಮಂತವಾಗಿದ್ದು  ಶ್ರೇಷ್ಠ ಕೆತ್ತನೆಯ ಕೆಲಸಗಳಿಂದಾಗಿ ಗಮನಸೆಳೆಯುತ್ತದೆ. ಹದಿನೆಂಟಿ ಅಡಿಗಳಷ್ಟು ಎತ್ತರದ ನಾಲ್ಕು ಸಂಗೀತ ಹೊರಡಿಸುವ ಅದ್ಭುತ ಖಂಬಗಳನ್ನು ಇಲ್ಲಿ ಕೆತ್ತಲಾಗಿರುವುದನ್ನು ಕಾಣಬಹುದು. ದೇವಾಲಯದಲ್ಲಿರುವ ಅಲಂಕಾರ ಮಂಟಪದಲ್ಲಿ ಆ ನಾಲ್ಕು ಸಂಗೀತ ಖಂಬಗಳನ್ನು ಕಾಣಬಹುದಾಗಿದ್ದು ಅದರಿಂದ ವಿವಿಧ ಸಂಗೀತಮಯ ಕಮ್ಪನಗಳು ಬರುವುದನ್ನು ಆಸ್ವಾದಿಸಬಹುದು. ಇದಲ್ಲದೆ ನೃತ್ಯ ಮಂಟಪವಿದ್ದು ಅಲ್ಲಿ ಸಾವಿರಕ್ಕೂ ಅಧಿಕ ಕೆತ್ತನೆಯ ಖಂಬಗಳನ್ನು ಕಾಣಬಹುದು.

ದೇವಾಲಯದಲ್ಲಿ ವಿಶಿಷ್ಟವಾದ ಆಂಜನೇಯನ ಪ್ರತಿಮೆಯೊಂದಿದ್ದು ಒಂದೆ ಗ್ರಾನೈಟ್ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾದ ಈ ಆಂಜನೇಯನ ಮೂರ್ತಿಯು 22 ಅಡಿಗಳಷ್ಟು ಎತ್ತರವಿದೆ. ಇನ್ನೂ ವಿಶೇಷವೆಂದರೆ ಇಲ್ಲಿನ ಹನುಮಂತನ ಮೂರ್ತಿಯ ಬಾಲಕ್ಕೆ ಭಕ್ತರು ಬೆಣ್ಣೆ ಹಚ್ಚಿ ಪೂಜಿಸುತ್ತಾರೆ.

***

ಅತ್ಯಂತ ಹಿಂದೆ ಇಂದಿನ ಸುಚೀಂದ್ರಂ ಇರುವ ಜಾಗ" ಜ್ಞಾನವನ" ಕ್ಷೇತ್ರ ಎಂದು ಹೆಸರಾಗಿತ್ತು. ಇಲ್ಲಿ ಅತ್ರಿ ಮಹರ್ಷಿಗಳು ಅನುಸೂಯಾದೇವಿಯೊಡನೆ ಆಶ್ರಮದಲ್ಲಿ ವಾಸಿಸುತ್ತಿದ್ದರು. ಅದೊಮ್ಮೆ ತ್ರಿಮೂರ್ತಿಗಳು ಅನಸೂಯಾದೇವಿಯ ಪಾತಿವ್ರತ್ಯ ಧರ್ಮದ ಪರೀಕ್ಷೆಗೆ ಮುಂದಾಗಿದ್ದರು. ಅವರು ಅತ್ರಿ ಮಹರ್ಷಿಗಳು ಆಶ್ರಮದಲ್ಲಿಲ್ಲದ ವೇಳೆ ಆಕೆಯಲ್ಲಿ ಭಿಕ್ಷೆ ಬೇಡಲು ಆಗಮಿಸಿದ್ದರು. ಆಗ ಅನಸೂಯಾದೇವಿ ಅವರಿಗೆ ಭಿಕ್ಷೆ ನೀಡಲು ಬಂದಾಗ ತ್ರಿಮೂರ್ತಿಗಳು "ನೀನು ನಗ್ನಳಾಗಿ(ಹುಟ್ಟಿದಾಗ ಇದ್ದಂತೆ) ಬಂದು ಭಿಕ್ಷೆ ನೀಡಿದ್ದಾದರೆ ಮಾತ್ರವೇ ನಾವು ಸ್ವೀಕರಿಸುವೆವು" ಎಂದು ಷರತ್ತು ಹಾಕಿದ್ದರು.

ಆಗ ಕ್ಷಣ ಕಾಲ ಯೋಚಿಸಿದ ಅನಸೂಯಾದೇವಿ ಅದಕ್ಕೆ ಒಪ್ಪಿದಳು ಮತ್ತು ಆ ತ್ರಿಮೂರ್ತಿಗಳನ್ನು ತನ್ನ ಪಾತಿವ್ರತ್ಯದ ಬಲದಿಂದ ಶಿಶುಗಳನ್ನಾಗಿಸಿ ಎದೆಹಾಲುಡಿಸಿದ್ದಳು ಮತ್ತು ತೊಟ್ಟಿಲಲ್ಲಿಟ್ಟು ತೂಗಿದಳು. ಕಡೆಗೆ ಹೊರ ಹೋಗಿದ್ದ ಅತ್ರಿ ಮಹರ್ಷಿಗಳು ಆಶ್ರಮಕ್ಕೆ ಆಗಮಿಸಿದಾಗ ಅವರಿಗೂ ಅನಸೂಯಳ ಈ ಶಕ್ತಿ ಕಂಡು ಅಚ್ಚರಿಯಾಗಿತ್ತು. ಮುಂದೆ ಇದೇ ಮೂರು ಮಕ್ಕಳು ಒಂದಾಗಿ ಸೇರಿದಾಗ ಶ್ರೀ ಗುರು ದತ್ತಾತ್ರೇಯನ ಜನ್ಮವಾಗಿತ್ತು.

***

ಗೌತಮ ಋಷಿಯ ಪತ್ನಿ ಅಹಲ್ಯೆಯಲ್ಲಿ ಮೋಹಗೊಂಡಿದ್ದ ದೇವೇಂದ್ರ ಗೌತಮ ಮಹರ್ಷಿಯಿಂದ ಶಾಪವನ್ನು ಹೊಂದಿದ್ದನು. ಅಹಲ್ಯೆ ಗೌತಮರ ಶಾಪದ ಕಾರಣ ಕಲ್ಲಾಗಿದ್ದರೆ ದೇವೇಂದ್ರನ ಮೈಮೇಲೆ ಹೆಣ್ಣಿನ ಜನನಾಂಗಗಳೂ ಕಾಣಿಸಿಕೊಂಡು ಅಸಹ್ಯ ಹುಟ್ಟಿಸಿದ್ದವು. ಆಗ ದೇವೇಂದ್ರನು ಗೌತಮರಿಗೆ ಸಾಷ್ಟಾಂಗ ಎರಗಿ ತನ್ನಿಂದಾದ ಪ್ರಮಾದಕ್ಕೆ ಕ್ಷಮೆ ಕೋರಲು ಅವರು "ತ್ರಿಮೂರ್ತಿಗಳನ್ನು ಏಕಸ್ಥಾನದಲಿ ಪೂಜಿಸಿದ್ದಾದರೆ ನಿನ್ನ ಮೇಲಿನ ಶಾಪ ದೂರಾಗಲಿದೆ" ಎಂದು ವಚನ ಕೊಟ್ಟರು. ದೇವೇಂದ್ರ ತ್ರ್ಮೂರ್ತಿಗಳು ಒಟ್ಟಾಗಿ ಇರುವ ಜಾಗವಾವುದು ಎಂದು ಹುಡುಕುತ್ತಾ ನಾರದ ಸಹಾಯ ಕೇಳಿದಾಗ ಅವರು ಅತ್ರಿ ಮಹರ್ಷಿಯ ಆಶ್ರಮದಲ್ಲಿ ತ್ರಿಮೂರ್ತಿಗಳಿರುವುದನ್ನು ಪತ್ತೆ ಮಾಡಿ ಅವನಿಗೆ ಸಹಾಯ್ ನೀಡಿದ್ದರು. ಅತ್ರಿ ಮಹರ್ಷಿ ಹಾಗೂ ತ್ರಿಮೂರ್ತಿಗಳು ದೇವಂದ್ರನ ಶಾಪ ವಿಮೋಚನೆಗೆ ಒಪ್ಪಿಕೊಂಡಿದ್ದು ಅದರಂತೆ ಪ್ರಜ್ಞಾ ತೀರ್ಥದ ದಕ್ಷಿಣ ಭಾಗದಲ್ಲಿನ ಅರಳಿಮರದ ಕೆಳಗೆ ತ್ರಿಮೂರ್ತಿಗಳು ಸ್ಥಿತರಾದರು.
ಅಲ್ಲಿ ಬ್ರಹ್ಮನು ಪಾದವಾಗಿಯೂ, ವಿಷ್ಣು ದೇಹಭಾಗವಾಗಿಯೂ, ಶಿವನು ಶಿರೋಭಾಗವಾಗಿಯೂ ಕಾಣಿಸಿದರು. ಅಲ್ಲದೆ  ಅವರು ಕುಳಿತಿದ್ದ ಅರಳಿಮರ ಯುಗ ಯುಗಗಳಲ್ಲಿ ಅರಳಿ, ತುಳಸಿ, ಬಿಲ್ವ ಹಾಗೂ ಕೊನ್ನೆ ವೃಉಕ್ಷವಾಗಿ ಉಳಿಯಿತು. ಇಂದೂ ನಾವು ಸುಚೀಂದ್ರಂ ನಲ್ಲಿ ಕೊನ್ನೆ ಮರವನ್ನು ಕಾಣುತ್ತೇವೆ.  

ನಾರದರ ಸಂದೇಶದಂತೆ ದೇವೇಂದ್ರ ತ್ರಿಮೂರ್ತಿ ದರ್ಶನಕ್ಕಾಗಿ ಬಂಗಾರದ ರಥದಲ್ಲಿ ಹೊರಟನು. ಆಗ ನಂದಿಯು "ದೇವೇಂದ್ರ ತ್ರಿಮೂರ್ತಿ ದರ್ಶನ್ ಅಮಾಡಲು ಒಬ್ಬನೇ ಬರುವಂತಿಲ್ಲ ಜತೆಗೆ ಕುಲಗುರುಗಳ ಆಶೀರ್ವಾದ ಪಡೆದು ಬರಬೇಕು" ಎಂದು ದೇವೇಂದ್ರನನ್ನು ತಡೆಯುತ್ತಾನೆ. ಇಂದಿನ ತಿರೂರ್ ನಲ್ಲಿ ದೇವೇಂದ್ರ ಬಂಗಾರದ ರಥ ನಿಲ್ಲಿಸಿದ ಸ್ಥಳವಿದೆ. ಇಂದ್ರನನ್ನು ಅಡ್ಡಗಟ್ಟಿದ ನಂದಿಯನ್ನು ಸಹ ನಾವು ದೇವಸ್ಥಾನದಲ್ಲಿ ಕಾಣುತ್ತೇವೆ.

ನಂದಿಯ ಆದೇಶದಂತೆ ಇಂದ್ರ ಕುಲಗುರು ಬೃಹಸ್ಪತಿಯನ್ನು ಸಂತೃಉಪ್ತಗೊಳಿಸಲು ಘನಾರಣ್ಯದ ಪೂರ್ವದಲ್ಲಿರುವ ಬೆಟ್ಟಕ್ಕೆ ಹೊರಟಿದ್ದನು. ಅಲ್ಲಿ ಇಂದ್ರ ತಪಸ್ಸು ಮಾಡಿ ಬೃಉಅಹಸ್ಪತಿಯನ್ನು ಒಲಿಸಿಕೊಂಡನು. ಇಂದ್ರನಿಗೆ ಪ್ರತ್ಯಕ್ಷನಾದ ಬೃಉಹಸ್ಪತಿ "ನೀನು ಮೊದಲು ನಂದಿ, ಗಣೇಶನನ್ನು ಸ್ಮರಿಸಿ, ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ ನಮಿಸಬೇಕು. ವೃಉಕ್ಷದ ಮುಂದೆ ಕುದಿಯುವ ತುಪ್ಪದ ಹಂಡೆ ನಿರ್ಮಾಣ ಮಾಡಿ ಅದರಲ್ಲಿ ೧೦೦೩ ಬಾರಿ ಮುಳುಗಿ ಪಂಚಾಕ್ಷ ಮಂತ್ರ ಪಠಿಸಬೇಕು. ಆಗ ತ್ರಿಮೂರ್ತಿಗಳು ಪ್ರತ್ಯಕ್ಷರಾಗಿ ಶಾಪ ವಿಮೋಚನೆಯಾಗಲಿದೆ" ಎನ್ನುತ್ತಾರೆ.  ಇಂದ್ರ ತಪಸ್ಸು ಮಾಡಿದ ಬೆಟ್ಟದ ಭಾಗ ಇಂದು "ಮುರುತ್ವ ಮಲೈ" ಎಂದು ಹೆಸರಾಗ್ಗಿದ್ದು ಇಲ್ಲಿ ದೇವೇಂದ್ರ ಸ್ಥಾನ ಹಾಗೂ ದೇವೇಂದ್ರ ತೀರ್ಥಗಳಿದೆ.
suchindram
ಹಾಗೆ ಬೃಹಸ್ಪತಿಯ ಆದೇಶದಂತೆ ನಂದ್ ಗಣೇಶನನ್ನು ಪೂಜಿಸಿ ಅರಳಿ ವೃಉಕ್ಷಕ್ಕೆ ನಮಿಸಿ ಹಂಡೆಯೊಂದರಲ್ಲಿ ಕುದಿಯುವ ತುಪ್ಪದಲಿ ಮುಳುಗೇಳುವ ಇಂದ್ರನಿಗೆ ತ್ರಿಮೂರ್ತಿಗಳ ದರ್ಶ್ನ ಮಾತ್ರ ಲಭಿಸಲಿಲ್ಲ. ಕಡೆಗೆ ನಿರಾಶನಾದ ಇಂದ್ರದೇವೆ ಅಗ್ನಿಪ್ರವೇಶಕ್ಕೆ ಮುಂದಾಗುತ್ತಾನೆ. ಆಗ ಕಡೇ ಕ್ಷಣದಲ್ಲಿ ತ್ರಿಮೂರ್ತಿಗಳು ಇಂದ್ರನಿಗೆ ದರ್ಶನ ನೀಡುತ್ತಾರೆ. "ನೀನು ಓರ್ವ ಗೃಉಹಸ್ಥೆಯನ್ನು ಬಯಸಿದ್ದಕ್ಕೇ ಇಷ್ಟೆಲ್ಲಾ ಅನರ್ಥವಾಗಿದೆ" ಎಂದ ತ್ರಿಮೂರ್ತೊಗಳು ಇಂದ್ರನ ಶಾಪವನ್ನು ವಿಮೋಚನೆ ಮಾಡುತ್ತಾರೆ. ಆದರೆ ಇಂದ್ರ ಪ್ರತಿನಿತ್ಯ ಇಲ್ಲಿ ಬಂದು ಪೂಜೆ ಸಲ್ಲಿಸಬೇಕೆಂದು ಆದೇಶಿಸುತ್ತಾರೆ.

ತ್ರಿಮೂರ್ತಿಗಳ ಆದೇಶದಂತೆ ಇಂದ್ರ ತ್ರಿಮೂರ್ತಿಗಳ ಪ್ರತಿನಿಧಿ ಸುವಂತಹ (ಜ್ಯೋತಿರ್ಲಿಂಗ) ನಿರ್ಮಾಣ ಮಾಡಿ ಪೂಜಿಸುತ್ತಾ ಬರುತ್ತಾನೆ. ಅಂದಿನಿಂಡ ಇಂದಿನವರೆಗೆ ಪ್ರತಿದಿನವೂ ಇಲ್ಲಿ ಇಂದ್ರನು ಪೂಜೆ ಕೈಗೊಳ್ಳುತ್ತಾನೆ ಎಂಬ ನಂಬಿಕೆ ಇದೆ.

ಇಂದ್ರ ಅರ್ಧ ಜಾಮದ ಪೂಜೆ ನೆರವೇರಿಸಿದ್ದ ಕಾರಣ ಸಂಜೆಯ ಪೂಜೆ ನೆರವೇರಿಸಿದ ಅರ್ಚಕರು ಮುಂಜಾನೆ ಪೂಜೆ ಮಾಡುವಂತಿಲ್ಲ. ಹಾಗಾಗಿ ದೇವಾಲಯದ ಅರ್ಚಕರಲ್ಲಿ ಇಬ್ಬರು ಅರ್ಚಕರು ಸರದಿ ಪ್ರಕಾರ ಪೂಜೆ ನೆರವೇರಿಸುತ್ತಾರೆ. ದೇವಾಲಯದಲ್ಲಿ ಅರ್ಧ ಜಾಮದ ಪೂಜೆ ಇಲ್ಲ, ಲಿಂಗಕ್ಕೆ ಅಭಿಷೇಕವಾಗುವುದಿಲ್ಲ, ಅಭಿಷೇಕ ತೀರ್ಥ ಹೊರಹೋಗಲು "ಗೋಮುಖಿ" ಸಹ ಇಲ್ಲ!

ಇಂದ್ರನ ಶಾಪ ವಿಮೋಚನೆಯಾಗಿ ದೇಹ ಶುದ್ದವಾದ ಈ ಸ್ಥಳಕ್ಕೆ ಸುಚಂದ್ರಂ ಎಂದು ಹೆಸರು ಬಂದಿದೆ. "ಸುಚಿ" ಎಂದರೆ ಶುದ್ದ ಎಂದೂ ಇಂದ್ರನು ಶುಚಿಯಾದ ಸ್ಥಳ ಸುಚೀಂದ್ರಂ ಎಂದು ಕರೆಯಲ್ಪಡುವುದು

***

ಲಂಕೆಗೆ ಹಾರಿ ಸೀತಾಮಾತೆಯನ್ನು ಕಂಡ ಹನುಮಂತ ರಾವಣನ ಭೇಟಿಯಾದ ಬಳಿಕ ರಾವಣನ ಆದೇಶದಂತೆ ಅಲ್ಲಿನ ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುತ್ತಾರೆ. ಆಗ ಅದೇ ಬೆಂಕಿಯಿಂದ ಹನುಮನು ಇಡೀ ಲಂಕೆಯನ್ನು ಸುಟ್ಟು ಬೂದಿ ಮಾಡುತ್ತಾನೆ. ಆದರೆ ಇದೇ ವೇಳೆ ಹನುಮನ ಬಾಲದ ಬಹುಭಾಗವೂ ಸಹ ಸುಟ್ಟು ಹೋಗಿರುತ್ತದೆ. ಹಾಗಾಗಿ ಇದರ ಉಪಶಮನಕ್ಕಾಗಿ ಸುಚೀಂದ್ರಂ ನಲ್ಲಿನ ಮಾರುಯತಿಯ ಬಾಲಕ್ಕೆ ಭಕ್ತರು ಇಂದಿಗೂ ಬೆಣ್ಣೆ ಹಚ್ಚಿ ಪೂಜಿಸುತ್ತಾ ಬಂದಿದ್ದಾರೆ. ಇದು ಭಾರತದಲ್ಲಿ ಬೇರೆಲ್ಲೂ ಇಲ್ಲದ  ವಿಶೇಷ ಸಂಪ್ರದಾಯವಾಗಿದ್ದು ಯುಗ ಯುಗಗಳಿಂದ ಇಲ್ಲಿ ನಡೆದು ಬಂದಿದೆ.

No comments:

Post a Comment