Friday, September 11, 2020

ಶುಕ್ರಾಚಾರ್ಯ-ಕವಿ ಉಸಾನಾನ ಬಗೆಗಿನ ಕೆಲ ವಿಶೇಷ ವಿವರಗಳು

 ಪರ್ಷಿಯನ್ ರಾಜರು, ಅಲ್ಲಿನ ಜನಸಮುದಾಯದೊಂದಿಗೆ ಶುಕ್ರಾಚಾರ್ಯನ ಪಂಪರ್ಕವನ್ನು ಶೋಧಿಸುವ ಮುನ್ನ ಕವಿ ಉಸಾನಾ ಬಗೆಗೆ ಇನ್ನಷ್ಟು ನೋಡೋಣ ಋಗ್ವೇದದಲ್ಲಿ ಉಲ್ಲೇಖಿಸಿರುವ ಕವಿ ಉಸಾನಾ ಹಾಗೂ ಶುಕ್ರಾಚಾರ್ಯ ಇಬ್ಬರೂ ಒಬ್ಬರೆ? ಬೇರೆ ಬೇರೆಯೆ? ಬಗ್ಗೆ ಕೆಲವೊಂದು ಅಂಶಗಳ ಮೂಲಕ ವಿವರಿಸುವ ಯತ್ನವನ್ನು ಇಲ್ಲಿ ಮಾಡಲಾಗಿದೆ.

ಮೊದಲು ಕೆಳಗಿನ ಕೆಲ ಅಂಶಗಳನ್ನು ಗಮನಿಸಿ

वृष्णीनां वासुदेवः अस्मि पाण्डवानां धनञ्जयः I
मुनीनां अपि अहं व्यासः कवीनां उष्ण कविः II श्लोक 37

"ವೃಷ್ಣಿಗಳಲ್ಲಿ ನಾನು ವಾಸುದೇವ; ಪಾಂಡವರಲ್ಲಿ ನಾನು ಧನಂಜಯ (ಸಂಪತ್ತಿನ ಒಡೆಯ)ಋಷಿಮುನಿಗಳಲ್ಲಿ  ನಾನು ವ್ಯಾಸ ಮತ್ತು ಕವಿಗಳಲ್ಲಿ ನಾನು ಉಷ್ಣ" ( ಭಗವದ್ಗೀತೆ 10-37)

1)ನಮಗೆ ಹೆಚ್ಚು ತಿಳಿದಿಲ್ಲದ ಪ್ರಾಚೀನ ಕವಿ ಉಸಾನ ಕವಿ ತಾನೆಂದು ಕೃಷ್ಣನೇಕೆ ಹೇಳಿದನು? ನಮಗೆ ಇತರ ವೈದಿಕ ಕವಿಗಳು ತಿಳಿದಿದ್ದಾರೆ, ಆದರೆ ಉಸಾನರಲ್ಲ.

ಇದು ಗೀತೆಯ ಪ್ರಾಚೀನತೆಯನ್ನು ತೋರಿಸುತ್ತದೆ. ಕೃಷ್ಣನು ಋಗ್ವೇದದಲ್ಲಿ ಉಲ್ಲೇಖಿಸಲಾಗಿರುವ ಉಸಾನ ಕವಿ ಅತ್ಯಂತ ಹಳೆಯ ಕವಿಗಳಲ್ಲಿ ಒಬ್ಬನನ್ನು ಉಲ್ಲೇಖಿಸಿದ್ದಾನೆ! ಎಎ ಮ್ಯಾಕ್ಡೊನೆಲ್ ಮತ್ತು ಬಿ ಕೀಟ್ ತಮ್ಮ ವೈದಿಕ ಸೂಚ್ಯಂಕದ ಹೆಸರುಗಳು ಮತ್ತು ವಿಷಯಗಳ ಪ್ರಕಾರ, “ಉಷಾನಸ್ ಕಾವ್ಯ ಅಥವಾ ಕವಿ ಉಸಾನ " ಒಬ್ಬ ಪ್ರಾಚೀನ ದರ್ಶಕ ಎಂದಿದ್ದಾರೆ. ಋಗ್ವೇದವವೇ ಹಳೆಯ ಗ್ರಂಥ. ವಾಸ್ತವವಾಗಿ ನಮಗೆ ತಿಳಿದಿರುವ ಅತ್ಯಂತ ಪ್ರಾಚೀನ ಗ್ರಂಥ ಋಗ್ವೇದ. ಉಸಾನ ಕವಿ ಋಗ್ವೇದದ ದರ್ಶಕರಿಗೆ ಪ್ರಾಚೀನವಾಗಿದ್ದರು! ಆದರೆ ಕೃಷ್ಣನಿಗೆ ಅವನನ್ನು ಸ್ಮರಿಸಲು ಸಾಧ್ಯವಾಯಿತು . ಅಂದರೆ ಕೃಷ್ಣನು ವ್ಯಾಸ ಋಗ್ವೇದ ಸ್ತೋತ್ರ ಸಂಗ್ರಹಿಸುವ ಮೊದಲು ಉಸಾನನ ಬಗ್ಗೆ ಅರಿತಿದ್ದ!!

2)ತಮಿಳು ಸೇರಿದಂತೆ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ನಾವು ಕಾವ್ಯರಚನೆಗಾರನನ್ನು "ಕವಿ" ಎಂದು ಕರೆಯುತ್ತೇವೆ.  ("ಪುಲವರ್" ಹಳೆಯ ಮತ್ತು "ಕವಿಂಜರ್" ಎಂದರೆ  ಪ್ರಸ್ತುತ).

3)ಉಸಾನ  ಕಾವ್ಯ ಗೋತ್ರಕ್ಕೆ ಸೇರಿದವರಾಗಿದ್ದತಮಿಳಿನಲ್ಲಿ, ಹಳೆಯ ಕವಿ ತಾಳ್ಕೊಪ್ಪಿಯನ್  ಗೋತ್ರದಿಂದ ಬಂದವನೆಂದು ನಂಬಲಾಗಿದೆ. ಮತ್ತು ಅದೇ ಗೋತ್ರದ ಪತಿತ್ರುಪತು(ಹತ್ತು ದಶಕಗಳು) ಕವಿ ಕಪ್ಪಿಯತ್ರು ಕಪ್ಪಿಯಾನಾರ್ ಇದ್ದಾರೆ.

4) ಉಸಾನ ಕಾವ್ಯಾ ಒಬ್ಬ ಪ್ರಾಚೀನ ದಾರ್ಶನಿಕ ಈಗಾಗಲೇ ಋಗ್ವೇದದಲ್ಲಿ ಅರ್ಧ ಪೌರಾಣಿಕ ವ್ಯಕ್ತಿಯಾಗಿ ಅವನನ್ನು ಚಿತ್ರಿಸಲಾಗಿದೆ. ವಿಶೇಷವಾಗಿ ಕುತ್ಸಾ ಹಾಗೂ ಇಂದ್ರನೊಂದಿಗೆ ಕವಿ ಉಸಾನನಿಗೆ ಸಂಪರ್ಕವಿದೆ.

 5)ಉಸಾನ ದೇವತೆಗಳೊಂದಿಗಿನ  ಸ್ಪರ್ಧೆಗಳಲ್ಲಿ ಅಸುರರ ಪುರೋಹಿತ / ಅರ್ಚಕರಾಗುತ್ತಾನೆ. ಅವನ ಹೆಸರಿನ ಒಂದು ರೂಪಾಂತರವೆಂದರೆ ಕಾವ್ಯಾ ಉಸನಾಸ್(ಕಾವ್ಯ ಉಷನಸ್) ಅವನು ಬ್ರಾಹ್ಮಣಶಿಕ್ಷಕನಾಗಿಯೂ ಕಾಣಿಸಿಕೊಳ್ಳುತ್ತಾನೆ. ನಂತರದ ದಿನಗಳಲ್ಲಿ ಅದೇ ಹೆಸರಿನ ಹೆಚ್ಚಿನ ಕವಿಗಳು ಇದ್ದರು ಎಂದು ಇದು ತೋರಿಸುತ್ತದೆ. ಶುಕ್ರಾಚಾರ್ಯರು ಅಸುರರ ಗುರು ಎಂದು ನಾವಿಲ್ಲಿ ಸ್ಮರಿಸಬಹುದು!!! ಅಸುರರು ಮತ್ತು ಸುರರು ಇಬ್ಬರೂ ಬ್ರಾಹ್ಮಣ ಶಿಕ್ಷಕರನ್ನು ಹೊಂದಿದ್ದರು ಎಂಬ ಇನ್ನೊಂದು ಸಂಗತಿಯನ್ನು ಇದು ಬಹಿರಂಗಪಡಿಸುತ್ತದೆ. ದೇವತೆಗಳು  ಮತ್ತು ಅಸುರರು ಇಬ್ಬರೂ ಮಣ್ಣಿನ ಮಕ್ಕಳು. ತಮಿಳು ಭಾಷೆಯಲ್ಲಿಯೂ ನಾವು ವಿವಿಧ ಯುಗಗಳಲ್ಲಿ ಸಂಗಮ್ ಕಾಲ, ಕಪಿಲಾ, ಪರಾನ, ನಕ್ಕಿರಾರ್ ಮತ್ತು ಅವ್ವಾಯರ್ ಎಂಬ ಪ್ರಸಿದ್ಧ ಹೆಸರುಗಳನ್ನು ನೋಡಿದ್ದೇವೆಎಲ್ಲ ಕವಿಗಳು ನಂತರದ ಯುಗಗಳಲ್ಲಿ ತಮಿಳಿನಲ್ಲೂ ಕೆಲವು ಕೃತಿಗಳನ್ನು  ರಚಿಸಿದ್ದಾರೆ. ದ್ದರಿಂದ ನಾವು ಉಸಾನ ಕವಿ  ಹೆಸರಿನೊಂದಿಗೆ ಇತರ ಕವಿಗಳನ್ನು ಹೊಂದಿದ್ದೇವೆ. ಆದರೆ ಅವರ ಕೃತಿಗಳು ಸಹ ಲಭ್ಯವಿಲ್ಲ

6)ಇನ್ನು ಉಸಾನನ  ಹೆಸರು ಕೌಟಿಲ್ಯ ಅಲಿಯಾಸ್ ಚಾಣಕ್ಯಕ್ಕಿಂತ ಮುಂಚೆಯೇ ಅರ್ಥಶಾಸ್ತ್ರದ (ಅರ್ಥಶಾಸ್ತ್ರದ ಗ್ರಂಥ)) ಲೇಖಕರಾಗಿ ಕಾಣಿಸಿಕೊಂಡಿದೆ!

 7)ಶುಕ್ರಾಚಾರ್ಯ ಭೃಗುಮತ್ತು ಕಾವ್ಯಮಾತಾ(ಉಷಾನಾ) ಅವರ ಪುತ್ರನಾಗಿದ್ದ. ಹಾಗಾಗಿ ಅವನು ಕಾವ್ಯ ಉಸಾನ ಅಥವಾ ಕವಿ ಉಸಾನನಾಗಿದ್ದಾನೆ.

ಶಿವನಿಂದ ಶುಕ್ರಾಚಾರ್ಯರು ಸಂಜೀವನಿ ಮಂತ್ರವನ್ನು ಹೇಗೆ ಪಡೆದನೆಂದು ನಾವು ಹಿಂದಿನ ಬ್ಲಾಗಿನಲ್ಲಿ ನೋಡಿದ್ದೇವೆ. ಹಾಗೆಯೇ ಕಚ ಹಾಗೂ ಶುಕ್ರಾಚಾರ್ಯನ ನಡುವೆ ಸಂಬಂಧವನ್ನೂ ನೋಡಿದ್ದೇವೆ.

ಈಗ ದೇವಋಷಿ ಉಸಾನ ಕಾವ್ಯ ಅಥವಾ ಕವಿ ಉಸಾನನಾಗಿದ್ದು ಹೇಗೆ ಎಂದು ನೋಡೋಣ ಈತ ದೇವತೆಗಳ ವಿರೋಧಿಯಾಗಿದ್ದ ಅಸುರಕುಲ, ದೈತ್ಯಕುಲದವರ ಗುರು! ಮತ್ತು ಈಗ ನಾನು ಇಲ್ಲಿ ಹೇಳ ಹೊರಟ ಕಥೆ ಮಹಾಭಾರತದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ನಿರೂಪಿಸಿದ್ದಾಗಿದೆ!!

ಭೃಗು ಮಹರ್ಷಿಯ ವಂಶಸ್ಥನಾದ ಋಷಿ ಉಷಾವಸ್ ತನ್ನ ಯೋಗದ ಶಕ್ತಿಯನ್ನು ಕುಬೇರನನ್ನು ಬಂಧಿಸಲು ಮತ್ತು ಅವನ ಸಂಪತ್ತನ್ನು ಕಸಿದುಕೊಳ್ಳಲು ಬಳಸಿದನು! ವಿಚಲಿತನಾದ ಮತ್ತು ಕೋಪಗೊಂಡ ಕುಬೇರನು ಶಿವನನ್ನು ಸಮೀಪಿಸಿ ಅವನಿಗೆ ಎಲ್ಲವನ್ನೂ ಹೇಳಿದನು.

ಕೋಪಗೊಂಡ ಮಹೇಶ್ವರನು ತನ್ನ ತ್ರಿಶೂಲವನ್ನು ತೆಗೆದುಕೊಂಡು ಉಷವಸ್ ನನ್ನು ನೋಡಿದನು. ಆಗ ಭಯಗೊಂಡ ಉಷವಸ್ ಗೆ ತಾನಿಲ್ಲಿಂದ ಓಡಿಹೋಗಬೇಕೆ? ಇಲ್ಲೇ ಇರಬೇಕೆ? ಎಂದು ತಿಳಿಯಲಿಲ್ಲ. ಕಡೆಗೆ ಉಅಷವಸ್ ತನ್ನ ಯೋಗದ ಶಕ್ತಿಯನ್ನು ಬಳಸಿ ತನ್ನನ್ನು ತಾನು ಶಿವನ ತ್ರಿಶೂಲದ ಮೇಲ್ಭಾಗದಲ್ಲಿ ಕುಳ್ಳಿರುವಂತೆ ಮಾಡಿದನು.  ನಂತರ ಶಿವನು ತನ್ನತ್ರಿಶೂಲವನ್ನು ತನ್ನ ಕೈಗಳಿಂದ ಬಿಲ್ಲಿನ ಆಕಾರಕ್ಕೆ ಬಾಗಿಸಿದ್ದನು. ಅದರಿಂದ ಉಷವಸ್(ಭಾರ್ಗವ/ಶುಕ್ರ)ನನ್ನು ಶಿವನ ಅಂಗೈಗೆ ಬರುವಂತೆ ಮಾಡಿತು. ಆಗ ಶಿವ ಅವನನ್ನು ಬಾಯಿಯೊಳಗಿಟ್ಟು ನುಂಗಿ ಹಾಕಿದನು. ಇದರಿಂದ ಉಷವಸ್ ಶಿವನ ಹೊಟ್ಟೆಯಲ್ಲಿ ಅಲೆಯುವಂತಾಯಿತು!!

Who is Kavya Ushanas in the Vedas? How is he related to Shukra in the  Puranas, who is the guru of the anti-gods? - Quora

ಶಿವನ ಹೊಟ್ಟೆಯಿಂದ ಹೊರಬರಲು ಉಷವಸ್ ಅಥವಾ ಉಸಾನ ಪದೇ ಪದೇ ಪ್ರಾರ್ಥಿಸುತ್ತಿದ್ದರು. ಹೆಚ್ಚಿನ ಪ್ರಾರ್ಥನೆಗಳ ನಂತರ ಹಲವು ವರ್ಷಗಳ ಬಳಿಕ ಶಿವನು ಅವನನ್ನು ಹೊಟ್ಟೆಯಿಂದ ಹೊರಬರಲು ಸಮ್ಮತಿಸಿದನು. ಮತ್ತು ಋಷಿ ಉಸಾನತನ್ನ ಶಿಶ್ನದಿಂದ ನಿರ್ಗಮಿಸಲು ಅನುಮತಿ ನೀಡಿದನು!!! ಹೀಗೆ ಉಸಾನ  ಹೊರಹೊಮ್ಮಿದರು ಮತ್ತು ಶುಕ್ರ ಎಂಬ ಹೆಸರನ್ನು ಪಡೆದರು! ಹೀಗೇಕೆ ಎಂದರೆ ಸಂಸ್ಕೃತದಲ್ಲಿ ಶುಕ್ರ ಎಂದರೆವೀರ್ಯಅಥವಾ  ಬೀಜಎಂದೂ ಅರ್ಥೈಸಬಹುದು. ಏನೇ ಇರಲಿ, ಶುಕ್ರನನ್ನು ನೋಡಿದ ನಂತರ ಭವ (ಶಿವ) ಅವನನ್ನು ಕೊಲ್ಲಲು ಸಿದ್ಧನಾಗಿದ್ದನು, ಆದರೆ ಪಾರ್ವತಿಯ ಕಾರಣ ಶಾಂತನಾಗಿದ್ದನು.

ಶಂಕರನ ಹೊಟ್ಟೆಯಿಂದ ಹೊರಹೊಮ್ಮಿದ ಶುಕ್ರ ಕೊಲೆಯಾಗಲು ತಕ್ಕವನಲ್ಲ ಎಂದು ದೇವಿ ಪಾರ್ವತಿ ವಾದಿಸಿದಳು. ಆಗ ಶಾಂತನಾದ ಶಿವ ತನ್ನ ತಪ್ಪಿಗೆ  ಪಶ್ಚಾತ್ತಾಪಪಟ್ಟು ಶುಕ್ರನು ತಾನು ಬಯಸಿದಲ್ಲೆಲ್ಲಾ ತಿರುಗಾಡಲು ಅನುಮತಿಸಿದನು.

(ಶಿವನು ಉಸಾನನಿದ್ದ ತ್ರಿಶೂಲವನ್ನು ಬಿಲ್ಲಿನಾಕೃತಿಗೆ ಬಾಗಿಸಿದ್ದಾಗ ಅದನ್ನು "ಪಿನಾಕ" ಎನ್ನಲಾಗಿದೆ. "ಪಿನಾಕಾ" ಪದದ  ವ್ಯುತ್ಪತ್ತಿಯು ಕೈನಿಂದ ಬಗ್ಗಿಸಿದ (ಪನಿ) ಎಂಬುದರಿಂದ ಬಂದಿದೆ,) ಮೇಲಿನ ಕಥೆಯು ನಮಗೆ ಶುಕ್ರಾಚಾರ್ಯನೇ ಉಸಾನ ಕವಿ ಎನ್ನುವುದನ್ನು ಇನ್ನಷ್ಟು ದೃಢವಾಗಿಸುತ್ತದೆ.

ಋಗ್ವೇದದಲ್ಲಿ ಕವಿ ಉಸಾನನ ಉಲ್ಲೇಖಗಳು

ಋಗ್ವೇದದ ಹತ್ತು ಮಂಡಲಗಳ ಪೈಕಿ ಏಳು ಮಂಡಲಗಳಲ್ಲಿ ಕವಿ ಉಸಾನನ ಹೆಸರು ಕಾಣುತ್ತದೆ. 2,3 ಮತ್ತು 7ನೇಮಂಡಲಗಳಲ್ಲಿ ಉಸಾನನ ಹೆಸರು ಕಾಣೆಯಾಗಿದೆ.  ಅಂತಹ ಜನಪ್ರಿಯ ಕವಿಯ ಕಾವ್ಯ ನಾವು ಓದಲಾಗದೆ ಹೋದದ್ದು ನಿಜಕ್ಕೂ ದುರದೃಷ್ಟಕರ. ಪ್ರಾಚೀನ ಸಂಸ್ಕೃತ ಸಾಹಿತ್ಯಗಳು ಅದೆಷ್ಟು ನಷ್ಟವಾಗಿದೆ ಎನ್ನುವುದಕ್ಕೆ ಇದೊಂದು ಚಿಕ್ಕ ಸೂಚನೆ.

ಎಲ್ಲಾ ಜನರು ಅವನನ್ನು ಹೊಗಳಿದ ರೀತಿ ಕವಿ ಮತ್ತು ಕಾವ್ಯಾ (ಕವಿ ಮತ್ತು ಶಾಸ್ತ್ರೀಯ) ಪದಗಳು - ಎಲ್ಲವೂ ಉಸಾನ ಕವಿಯ ಕಾವ್ಯದಿಂದ ಎಲ್ಲಾ ಕಾವ್ಯಗಳು ಹುಟ್ಟಿಕೊಂಡಿದೆ ಎಂದು ಹೇಳುತ್ತಿರುವಂತಿದೆ.

(ವೈದಿಕ ಸೂಚಕಗಳಿಂದ)ಕೆಳಗಿನ ಉಲ್ಲೇಖಗಳನ್ನು ಮುಖ್ಯವೆಂದು ಪರಿಗಣಿಸಲಾಗಿದೆ-

  • ಋಗ್ವೇದದ 1-51-10, 1-83-5, 1-121-12;
  • ಋಗ್ವೇದದ  4-16-2, 6-2011, 8-23-17, 4-26-1
  • ಋಗ್ವೇದದ 9-87-3, 9-97-7, 10-40-7
  • ಅದೇ ಋಗ್ವೇದದ  1-130-9, 5-31-8, 5-34-2
  • ಅಥರ್ವನ ವೇದದ 4-29-6

ಇನ್ನು ತೈತ್ತರಿಯ ಸಂಹಿತೆತೆ, ಪಂಚವಿಂಶಾ ಬ್ರಾಹ್ಮಣ, ಶಾಖ್ಯಾಯನ ಶ್ರೌತ ಸೂತ್ರವು  ಅಸುರರ ಪುರೋಹಿತ/ಅರ್ಚಕ ಶುಕ್ರಾಚಾರ್ಯರನ್ನು ಉಲ್ಲೇಖಿಸಿದೆ. ಋಗ್ವೇದದ 4-26-1 ಭಾಗದಲ್ಲಿ ಶುಕ್ರಾಚಾರ್ಯನನ್ನು ಇಬ್ಬರು ಬ್ರಾಹ್ಮಣ ಶಿಕ್ಷಕರ ಪೈಕಿ ಒಬ್ಬರೆಂದು ಗುರುತಿಸಲಾಗಿದೆ. ಯಜುರ್ ವೇದ ಮತ್ತು ಸಾಮ ವೇದದಲ್ಲಿ ಸಹ ಕವಿ ಉಸಾನನನ್ನು  ಶ್ರೇಷ್ಠ ಕವಿ ಎಂದು ಹೊಗಳಿವೆ.

ಇನ್ನು ಋಗ್ವೇದದಲ್ಲಿ ಕವಿ ಉಷಾವಸ್ ಕೆಲ ಸಂಯೋಜನೆಗಳೂ ಕಂಡುಬಂದಿದೆ!! 9-87 ರಿಂದ 89 ಮತ್ತು  8-84. ನೇ ಭಾಗಗಳು ಕವಿ ಉಸಾನನ ಅಥವಾ ಉಷವಸ್ ಸಂಯೋಜನೆ ಎನ್ನಲಾಗಿದೆ.  ಆದರೆ ಸೂತ್ರಗಳನ್ನು ಅರ್ಥೈಸಿಕೊಳ್ಳುವುದು ಕಷ್ಟ ಎಂದು  ಟಿಪ್ಪಣಿಗಳು ಹೇಳಿದೆ. ಋಗ್ವೇದದ  ಒಂಬತ್ತನೇ ಮಂಡಲವು ಸೋಮ ಪವಮಾನ(ಸೋಮ ಸಸ್ಯ ಮತ್ತು ರಸ) ವಿವರಣೆಯನ್ನು ಹೊಂದಿದೆ.

ಕವಿಯ ಮಗನಾದ ಉಸಾನನು ಅಗ್ನಿಯನ್ನು ತಯಾರಿಸುವುದರಲ್ಲಿ(ಉಂಟು ಮಾಡುವಲ್ಲಿ) ಪ್ರವೀಣನಿದ್ದನು. ಮಂತ್ರಿ ಅರ್ಚಕನಾಗಿ ಮನುವಿಗಾಗಿ ತ್ಯಾಗದ ಸಮರ್ಪಣೆ ಮಾಡಿಸುವುದರಲ್ಲಿ ಹೆಸರುವಾಸಿಯಾಗಿದ್ದಾನೆ (ಋಗ್ವೇದ  8-23-17)

ಅವನನ್ನು  ಜನರ ದರ್ಶಕ ಮತ್ತು ನಾಯಕ ಎಂದು ಕರೆಯಲಾಗುತ್ತದೆ. ಅವನ ಕಾವ್ಯಾತ್ಮಕ ಉಡುಗೊರೆಯಿಂದ ಅವನು ಇಂದ್ರನ ಹಸುಗಳ ರಹಸ್ಯ ಹಾಲನ್ನು ಕಂಡುಕೊಂಡಿದ್ದ ಎಂದು  ಹೇಳಲಾಗುತ್ತದೆ (ಋಗ್ವೇದ . 9-87-3)

ಉಸಾನನು ಇಂದ್ರನ ಚೈತನ್ಯವನ್ನು ಹೆಚ್ಚಿಸಿದ್ದಾನೆಂದು ಹೇಳಲಾಗುತ್ತದೆ(ಋಗ್ವೇದ 1-51-10) ಮತ್ತು ವೃತ್ರನನ್ನು ಕೊಂದಿದ್ದಕ್ಕಾಗಿ ಅವನಿಗೆ ಸಿಡಿಲು ಬಡಿದಿತ್ತು(ಋಗ್ವೇದ 1-121-12; 5-34-2).

ಅವನು ವಿಶಿಷ್ಟಬುದ್ಧಿವಂತ ಮತ್ತು ಅವನ ಬುದ್ಧಿವಂತಿಕೆಯಿಂದಾಗಿ ಸೋಮನನ್ನು ಅವನೊಂದಿಗೆ ಹೋಲಿಸಲಾಗುತ್ತದೆ (ಋಗ್ವೇದ 9-97-7)

ಉಸಾನನ ಗುಪ್ತ ಸ್ವಭಾವ ಹಸುಗಳನ್ನು ಮುಚ್ಚಿಡುವ(ಕದ್ದೊಯ್ಯುವ?)ಅತ್ಯಂತ ನಿಗೂಢ ವಿಧ್ಯೆಯನ್ನು ಸಹ ತಿಳಿದಿದ್ದನು(ಋಗ್ವೇದ  9-87-2 / 3)

ಇಲ್ಲಿ ಬರುವ ಕಡ್ಯ ವಿವರಣೆ(ಹಸುಗಳನ್ನು ಮರೆಮಾಚುವವನು) ಎನ್ನುವುದು ಶುಕ್ರಾಚಾರಯನಿಗೆ ಹೆಚ್ಚು ಹೋಲಿಕೆಯಾಗುತ್ತದೆ. ಶುಕ್ರ ಅಸುರರ ಗುರು. ದೇವತೆಗಳಿಗೆ(ಇನ್ನೂ ಸ್ಪಷ್ಟವಾಗಿ ಆರ್ಯಕುಲದವರಿಗೆ) ಹಸುಗಳು ಪೂಜನೀಯವಾದದ್ದು. ಅವುಗಳನ್ನು ಸಂಪತ್ತನ್ನಾಗಿ ಕಾಣಲಾಗುತ್ತಿತ್ತು.( ಹಿಂದೆ ವಿಶ್ವಾಮಿತ್ರನ ಕೌಶಿಕ ವಸಿಷ್ಟರ ಕಥೆಯಲ್ಲಿಯೂ ನಾನಿದನ್ನು ಹೇಲಿದ್ದೆ) ಹಾಗಾಗಿ ಅಸುರರು, ದೈತ್ಯರು ಅಂತಹಾ ಹಸುವನ್ನು ವಿರೋಧಿಸುತ್ತಿದ್ದರು, (ಕೆಲವೊಮ್ಮೆ ಕದ್ದೊಯ್ಯುತ್ತಿದ್ದರು) ಹಾಗಾಗಿ ಅಸುರ ಕುರುವಾಗಿದ್ದ ಶುಕ್ರಾಚಾರ್ಯ ಇಂತಹಾ ಹಸುಗಳನ್ನು ಮರೆಮಾಚುವ, ಕ್ಳವು ಮಾಡುವ ವಿದ್ಯೆಯಲ್ಲಿ ಪಾರಂಗತನಾಗಿದ್ದ!!

ಏನಾದರೂ ಮೇಲಿನ ಎಲ್ಲಾ ವಿವರಣೆ ಗಮನಿಸಿ ಹೇಳುವುದಾದರೆ ಕವಿ ಉಸಾನ(ಶುಕ್ರಾಚಾರ್ಯ) ಮಹಾಭಾರತ ಕಾಲಕ್ಕೆ ಸಾಕಷ್ಟು ಪ್ರಾಚೀನ ಕಾಲದವನಾಗಿದ್ದ. ಮತ್ತು ಅಷ್ಟೇ ಶ್ರೇಷ್ಠ ಕವಿಯಾಗಿದ್ದ ಎನ್ನುವುದು ಸತ್ಯ. ಹಾಗಾದರೆ ಇದೇ ಉಸಾನ ಕವಿಯ ಬಗ್ಗೆ ಪರ್ಷಿಯಾ ಬಾಷೆಯಲ್ಲಿ, ಜಿಂದ್ ಅವೆಸ್ತಾದಲ್ಲಿ ಹೇಗೆ ಉಲ್ಲೇಖಿಸಿದೆ ನೋಡೋಣ...

....ಮುಂದುವರಿಯುವುದು

No comments:

Post a Comment