Thursday, November 11, 2021

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 105

 ಸಾವನದುರ್ಗ (Savandurga )

ಸಾವನದುರ್ಗ ಬೆಂಗಳೂರು ನೆರೆ ಜಿಲ್ಲೆಯಾದ ರಾಮನಗರದ ಮಾಗಡಿಯಿಂದ ) ಪಶ್ಚಿಮಕ್ಕೆ 60 ಕಿಮೀ ದೂರದಲ್ಲಿದೆ. ಈ ಬೆಟ್ಟವನ್ನು ಏಷ್ಯಾದ ಅತಿ ದೊಡ್ಡ ಏಕಶಿಲೆಯ ಬೆಟ್ಟ ಎಂದು ಪರಿಗಣಿಸಲಾಗಿದೆ.ಈ ಬೆಟ್ಟವು ಸರಾಸರಿ ಸಮುದ್ರ ಮಟ್ಟದಿಂದ 1226 ಮೀ ಎತ್ತರದಲ್ಲಿದೆ ಮತ್ತು ದಕ್ಷಿಣ ಪ್ರಸ್ಥಬೂಮಿಯ ಭಾಗವಾಗಿದೆ. . ಇದು ಪೆನಿನ್ಸುಲರ್ ಗ್ನಿಸ್, ಗ್ರಾನೈಟ್‌ಗಳು, ಅಪರೂಪದ  ಡೈಕ್‌ಗಳು ಮತ್ತು ಲ್ಯಾಟರೈಟ್‌ಗಳನ್ನು ಒಳಗೊಂಡಿದೆ ಸಾವನದುರ್ಗ ಬೆಟ್ಟ ಬೆಂಗಳೂರು ಸಿಟಿ ಜಂಕ್ಷನ್‌ನಿಂದ 48 ಕಿ.ಮೀ, ರಾಮನಗರದಿಂದ 31 ಕಿ.ಮೀ ಮತ್ತು ಮಾಗಡಿಯಿಂದ 13 ಕಿ.ಮೀ ದೂರದಲ್ಲಿದೆ. ಚಾರಣಕ್ಕಾಗಿ  ಇಲ್ಲಿಗೆ ಬೆಂಗಳೂರಿನಿಂದ ಸಾಕಷ್ಟು ಜನ ಪ್ರತಿನಿತ್ಯ ಆಗಮಿಸುತ್ತಾರೆ.

ಚಿತ್ರಕೃಪೆ: ಕೆಂಗೇರಿ ಚಕ್ರಪಾಣಿ



ಲಕ್ಷ್ಮಿ ನರಸಿಂಹ ದೇವಾಲಯ ಮತ್ತು ಚಾರಣ ಪ್ರಿಯರ ಸ್ಥಳ

ಸಾವನದುರ್ಗ ದಲ್ಲಿನ ಎರಡು ನಿಷಿದ್ಧ ಬೆಟ್ಟಗಳು, ದೇವಸ್ಥಾನಗಳು ಹಾಗು ಪ್ರಕೃತಿ ಸೌಂದರ್ಯ ಆಕರ್ಷಣೀಯವಾಗಿದೆ. ಬೆಂಗಳೂರಿಂದ ಇದು 33 ಕಿಮೀ ದೂರವಿದ್ದು  ಭಾರತದ ಇತರೆ ಯಾವುದೇ ಭಾಗದಿಂದ ಸುಲಭವಾಗಿ  ತಲುಪಬಹುದು.

ಬೆಟ್ಟಗಳು ಹಾಗು ಕೋಟೆಗಳು


ಕರಿಗುಡ್ಡ ಹಾಗು ಬಿಳಿಗುಡ್ಡಗಳಿಂದಾಗಿ  ಸಾವನದುರ್ಗ  ಹೆಚ್ಚು  ಪ್ರಖ್ಯಾತಿ ಹೊಂದಿದೆ . ಇದರ  ಮೂಲಾರ್ಥ ‘ಬ್ಲ್ಯಾಕ್  ಹಿಲ್ಲ್’ ಹಾಗು  ‘ವೈಟ್ ಹಿಲ್ಲ್  ಎಂದು.  ಕರಿಗುಡ್ಡ ಹಾಗು ಬಿಳಿಗುಡ್ಡಗಳು ಡೆಕ್ಕನ್ ತಪ್ಪಲಿಗಿಂತ ಮೇಲೆ  1226 ಮೀಟರ್ ಗಳಷ್ಟು ಎತ್ತರವಿದೆ. ಇವು ಬೃಹದಾಕಾರದ ಬಂಡೆಗಳು,  ಗ್ರಾನೈಟ್  ಹಾಗು ಲಾಟೆರೈಟ್ ಗಳಿಂದ  ನಿರ್ಮಿತವಾಗಿದ್ದು ಏರಲು ಕಷ್ಟವಾಗಿದೆ. ಬೆಟ್ಟದ ತಳದಿಂದ ತುದಿಯವರೆಗಿನ ಪ್ರಯಾಣ ಹಲವು ಬಂಡೆ ಮುರುಕುಗಳು ಮತ್ತು ಬಾಗುವಿಕೆಯಿಂದ ಕಷ್ಟಕರವಾಗಿರುತ್ತದೆ. ಹಾಗಿದ್ದರೂ  ಉತ್ಸುಕರಿಗೆ  ಇದು ಪರಿಶ್ರಮಕ್ಕೆ ತಕ್ಕ ಫಲವಾಗುತ್ತದೆ. ಪುರಾತನ ಕೋಟೆಯ ಅವಶೇಷಗಳು ಬೆಟ್ಟದ ತುದಿಯಲ್ಲಿ ಕಿರೀಟವಾಗಿ ಅಲಂಕರಿಸುತ್ತವೆ.

ಬೆಟ್ಟಗಳನ್ನು ಹತ್ತುವ  ಆಸಕ್ತಿ ಹೊಂದಿರದವರು ವೀರಭದ್ರೇಶ್ವರ ಸ್ವಾಮಿ ಹಾಗು ನರಸಿಂಹ ಸ್ವಾಮಿ ದೇವಸ್ಥಾನಗಳನ್ನು ಅನ್ವೇಷಿಸಬಹುದಾಗಿದೆ (ಸಂದರ್ಶಿಸಬಹುದಾಗಿದೆ). ಬೆಟ್ಟದ ಕೆಳಗಿರುವ ಗುಡ್ಡಗಳ ಮೇಲೆ ಈ ದೇವಸ್ಥಾನಗಳು ನೆಲೆಸಿವೆ. ಇಲ್ಲಿನ ಪ್ರಕೃತಿ ಸೌಂದರ್ಯ ರಮಣೀಯವಾಗಿದ್ದು ವಾಯುವಿಹಾರಕ್ಕೆ ಹೊರಟರೆ ಅಪರೂಪದ ಮರಗಳು ಅಲ್ಲದೆ ಹಳದಿ-ಗಂಟಲಿನ ಬುಲ್ ಬುಲ್  ಹಕ್ಕಿಗಳನ್ನು ಕಾಣಬಹುದು. ಈ ಸ್ಥಳದಲ್ಲಿ ಹಲವು ಕುತೂಹಲಕಾರಿ ಹಿನ್ನೆಲೆಯಿರುವ ಬಹಳಷ್ಟು ಚಿತಾಭಸ್ಮದ ಪಾತ್ರೆಗಳನ್ನು ಕಾಣಬಹುದಾಗಿದೆ.

ಬೆಂಗಳೂರಿಂದ ಮಾಗಡಿಗೆ ಹೋಗುವ ಬಸ್ಸುಗಳು ಸಾವನದುರ್ಗಕ್ಕೆ ಬಹಳ ಹತ್ತಿರದಲ್ಲಿ ಸಂಚರಿಸುತ್ತವೆ. ಅಲ್ಲದೆ ತುಂಬಾ ಬಸ್ಸುಗಳು ಲಭ್ಯವಿದ್ದು ಅಲ್ಲಿಗೆ ಎರಡು ತಾಸಿನ ಪ್ರಯಾಣ, ಅಲ್ಲಿಂದ ಸಾವನದುರ್ಗಕ್ಕೆ ಹೋಗಲು ಸ್ಥಳೀಯ ಬಸ್ಸುಗಳು ಹಾಗು ಆಟೋಗಳ ಸೌಲಭ್ಯವಿದೆ.

***

ಸಾವನದುರ್ಗವು ಸ್ಥಳೀಯವಾಗಿ ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ರೂಪುಗೊಂಡಿದೆ. ಈ ಬೆಟ್ಟದ ಹೆಸರಿನ ಆರಂಭಿದ ದಾಖಲೆಯು ಕ್ರಿ.ಶ. 1340ರಲ್ಲಿ ಮಾಡಬಲುವಿನ ಹೊಯ್ಸಳ ಬಲ್ಲಾಳ III ರ ಅವಧಿಯಲ್ಲಿ ಕಂಡುಬಂದಿದೆ, ಇಲ್ಲಿ ಇದನ್ನು ಸಾವಂಡಿ ಎಂದು ಕರೆಯಲಾಗುತ್ತದೆ. ಈ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ಸಾಮಂತರಾಯ ನಿಗೆ ಸೇರಿದ್ದೆಂದು ಹೇಳಲಾದ ಸಾಮಂತದುರ್ಗ ದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ, ಆದರೂ ಇದನ್ನು ದೃಢಪಡಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೆಂಪೆಗೌಡದಂತೆ ಮಾಗಡಿ ರಾಜರ ಎರಡನೇ ರಾಜಧಾನಿಯಾಗಿತ್ತು. 1638ರಿಂದ 1728ರವರೆಗೆ, ಮೈಸೂರು ಈ ಸ್ಥಳವನ್ನು ವಶಪಡಿಸಿಕೊಂಡಿತು ಮತ್ತು ದಳವಾಯಿ ದೇವರಾಜರು ನೆಲಪಟ್ಟಣದಲ್ಲಿ ಅರಮನೆಯನ್ನು ನಿರ್ಮಿಸಿಕೊಂಡು ಈ ಸ್ಥಳದಲ್ಲಿ ವಾಸಿಸಿದರು. 1791ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಮೂರನೇ ಆಗ್ಲೊ-ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಿಂದ ಇದನ್ನು ವಶಪಡಿಸಿಕೊಂಡರು.ರಾಬರ್ಟ್ ಹೋಮ್ ಆತನ ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್ ‌ನಲ್ಲಿ (1794) ಬೆಂಗಳೂರಿನಿಂದ ಬೆಟ್ಟದ ದೂರದ ದೃಶ್ಯಗಳನ್ನು ತೋರಿಸುತ್ತಾರೆ.ಆತ ಇದನ್ನು ಸಾವಿನದುರ್ಗ ಅಥವಾ ಫೋರ್ಟ್ ಆಫ್ ಡೆತ್ ಎಂದು ಕರೆದಿದ್ದಾರೆ. ಈ ಬೆಟ್ಟದ ತುದಿಯನ್ನು ತಲುಪಲು ಮೆಟ್ಟಿಲುಗಳಿರಲಿಲ್ಲ ಮತ್ತು ಇದರ ಸುತ್ತ ಬಿದಿರು ಮತ್ತು ಇತರ ಮರಗಳು ಆವರಿಸಿಕೊಂಡು ಒಂದು ತಡೆಗಟ್ಟನ್ನು ರೂಪಿಸಿದ್ದವು.

ಸಾವನದುರ್ಗ. ವಿಜಯನಗರ ಸಾಮ್ರಾಜ್ಯ ಪತನಾನಂತರ ಕೆಲ ಕಾಲದಲ್ಲೇ ಕೆಂಪೇಗೌಡರು ಮಡಿದಾಗ ಮೈಸೂರಿನ ದಳವಾಯಿ ಮಾಗಡಿ ಪ್ರದೇಶವನ್ನು ಆಕ್ರಮಿಸಿಕೊಂಡರು. ಅಲ್ಲಿಂದ ಮುಂದೆ ಮೈಸೂರಿನ ಟಿಪ್ಪುಸುಲ್ತಾನ್ ಆಡಳಿತಕ್ಕೆ ಒಳಪಟ್ಟ ಸಾವನ ದುರ್ಗವನ್ನು ಟಿಪ್ಪು ಸುಲ್ತಾನ್ ಶಿಕ್ಷಿಸುವ ತಾಣವಾಗಿಸಿಕೊಳ್ಳುತ್ತಾನೆ. ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಘೋರ ಅಪರಾಧ ಮಾಡಿದರೆ ಅವರನ್ನು ಬೆಟ್ಟದ ಮೇಲಿನಿಂದ ತಳ್ಳುವ ಶಿಕ್ಷೆಗೆ ಗುರಿಪಡಿಸುತ್ತಿದ್ದನಂತೆ. ಈ ಕಾರಣದಿಂದ ಈ ಸ್ಥಳಕ್ಕೆ ಸಾವಿನ ದುರ್ಗ ಎಂಬ ಹೆಸರು ಬಂದಿದ್ದು, ಮುಂದೆ ಸಾವನ ದುರ್ಗ ಎಂದಾಗಿದೆ ಎನ್ನುವುದು ಒಂದು ಊಹೆ.ಮುಂದೆ ಟಿಪ್ಪು ಸುಲ್ತಾನನಿಂದ ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಾಗಡಿ ಪ್ರದೇಶವನ್ನು ಲಾರ್ಡ್ ಕಾರ್ನ್ ವಾಲಿಸ್ ವಶಪಡಿಸಿಕೊಂಡನು. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರ ದೇವರ ಗುಡಿ ಹಾಗು ಲಕ್ಷ್ಮಿ ನರಸಿಂಹ ದೇವರ ಗುಡಿಗಳಿವೆ. ಕರ್ನಾಟಕ ಸರ್ಕಾರ ನಿಭಾಯಿಸುತ್ತಿರುವ ಸಣ್ಣ ಅರಣ್ಯ ಪ್ರದೇಶವು ಇಲ್ಲಿದೆ. 'ಎ ಪ್ಯಾಸೇಜ್ ಟು ಇಂಡಿಯಾ' ಎನ್ನುವ ಹಾಲಿವುಡ್ ಚಿತ್ರವನ್ನು ಸಾವನದುರ್ಗದ ಬೆಟ್ಟ ಪ್ರದೇಶಗಳ ಸುತ್ತ ಮುತ್ತ ಚಿತ್ರೀಕರಿಸಲಾಗಿದ್ದು ಒಂದು ಕಾಲಕ್ಕೆ ಸಾವನದುರ್ಗದಲ್ಲಿ ಅತೀ ಹೆಚ್ಚಾಗಿ ಚಿತ್ರೀಕರಣಗಳು ನಡೆಯುತ್ತಿದ್ದವು.

ಈ ಪ್ರದೇಶದಲ್ಲಿ ಬೃಹತ್ ಶಿಲೆಯ ಹೂಳುವ ಸಮಾಧಿಗಳು ಕಂಡುಬಂದಿವೆ. ಸಂಸ್ಕೃತದಲ್ಲಿ ಸಾವಣವೆಂದರೆ ಮೂರು ಬಾರಿ ಮಾಡುವ ವಿಧಿವಿಹಿತ ಕ್ರಮವೆಂದು ಅರ್ಥ.


No comments:

Post a Comment