Friday, January 30, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -43

ಶಬರಿಮಲೆ (Sabarimalai)
ಭಾಗ - 5

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು ಎನ್ನುವ ಪ್ರತೀತಿಯೂ ಸ್ಥಳಕ್ಕಿದೆ. ಶಬರಿಯ ಆಶ್ರಮವಿದ್ದ ಸ್ಥಳಕ್ಕೆ ಇದೇ ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ.
***

ಅರಮನೆಯನ್ನು ಸೇರಿದ ಶಿಶುವಿನ ಕಾರಣದಿಂದ ರಾಜ ರಾಣಿಯರ ಸಂತಸಕ್ಕೆ ಪಾರವಿರುವುದಿಲ್ಲ. ಮು೦ದೊ೦ದು ದಿನ ಮಗುವಿನ ನಾಮಕರಣಕ್ಕಾಗಿ ಪ೦ಡಿತರು, ಆಚಾರ್ಯರ ಮತ್ತು ಗುರುಗಳ ಸಮ್ಮುಖದಲ್ಲಿ ರಾಜರಾಣಿಯರು ಮಗುವಿನೊ೦ದಿಗೆ ಕುಳಿತಿರಲು... ರಾಜ ಗುರುಗಳು ಮಗು ಉತ್ತರಾ ನಕ್ಷತ್ರದಲ್ಲಿ ಜನಿಸಿರುವುದರಿ೦ದ ಲೋಕ ವಿಖ್ಯಾತನಾಗುತ್ತಾನೆ. ಹುಟ್ಟುವಾಗಲೇ ಕೊರಳಲ್ಲಿ ದಿವ್ಯವಾದ ಮಣಿ ಇರುವುದರಿ೦ದ ಇವನಿಗೆ "ಮಣಿಕ೦ಠ" ಎ೦ದು ಹೆಸರಿಡಿ. ಶುಭವಾಗುವುದು ಎನ್ನಲು ಇಬ್ಬರೂ ಸಂತಸದಿಂದೊಪ್ಪಿ ಅದೇ ಹೆಸರನ್ನಿಟ್ಟು ಮಗುವನ್ನು ಕರೆದು ಮುದ್ದಾಡುತ್ತಾರೆ. ಇನ್ನು ಮಣಿಕ೦ಠನನ್ನು ತೊಟ್ಟಿಲು ತೂಗುವ ಶುಭ ಘಳಿಗೆ. ಕಾರ್ಯ ವೈಭವದಿ೦ದ ನೆರವೇರುವುದು
ಹೀಗಿರಲು ಕೆಲ ಕಾಲಾನ೦ತರ ಇನ್ನೊಬ್ಬ ಗ೦ಡು ಮಗುವನ್ನು ಪಡೆದ ರಾಜರಾಣಿಯರು ಸದಾ ಕ್ರತಜ್ಞರಾಗಿ ದೇವರ ಪೂಜೆ ಪುರಸ್ಕಾರಗಳನ್ನು ನಿಷ್ಠೆಯಿ೦ದ ನೆರವೆರಿಸುತ್ತಾ ಮಕ್ಕಹೊಡನೆ ಆಟದಲ್ಲಿ ತೊಡಗಿದರು. ಮಕ್ಕಳು ಬಾಲಕರಾಗಿ ಬೆಳೆದು ನಿ೦ತರು. ರಾಜನು ಅವರೀರ್ವರನ್ನೂ ಸೂಕ್ತ ಶಿಕ್ಷಣ ಪಡೆಯುವ ಉದ್ದೇಶದಿಂದ ಗುರುಕುಲಕ್ಕೆ ಕಳಿಸಲು ತೀರ್ಮಾನಿಸಿದನು. ಗುರುಕುಲದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿರುವ ರಾಜಕುಮಾರರು ಕಾಲಕ್ರಮೇಣ ಸಕಲ ವಿದ್ಯೆಗಳಲ್ಲಿ ಪಾರ೦ಗತರಾಗುತ್ತಾರೆ.. ಮಣಿಕಂಠನು ತಾನು ಸಕಲ ಶಾಸ್ತ್ರವಿದ್ಯೆಗಳೊಡನೆ ಬಿಲ್ವಿದ್ಯೆ, ಕತ್ತಿವರಸೆಯಲ್ಲಿಯೂ ಪ್ರಾವೀಣ್ಯತೆ ಮೆರೆದು ಗುರುಗಳಿಂದ ಸೈ ಎನಿಸಿಕೊಳ್ಳುತ್ತಾನೆ.
ದಿನ ಗುರುಕುಲದಲ್ಲಿ೦ದು ಎಲ್ಲರ ಬುದ್ಧಿ ಪರೀಕ್ಷೆಯ ದಿನ... ಗುರುಗಳು ತನ್ನ ವಿದ್ಯಾರ್ಥಿಗಳ ಬುದ್ದಿಮತ್ತೆ ಪರೀಕ್ಷೆಗಾಗಿ ಪ್ರಶ್ನೆಗಳಾನ್ನು ಕೇಳುತ್ತಾರೆ. ಎಲ್ಲಾ ಪ್ರಶ್ನೆಗಳಿಗೆ ಬೇರೆಲ್ಲಾ ಶಿಷ್ಯರಿಗಿಂತಲೂ ಮಣಿಕಂಠನು ಹೆಚ್ಚು ಸಮರ್ಪಕ ಉತ್ತರವನ್ನು ನೀಡುತ್ತಾ ಹೋಗುತ್ತಾನೆಹೀಗೆ ತನ್ನ ವಿದ್ಯಾಭ್ಯಾಸ ಅವಧಿಯನ್ನು ಪೂರೈಸಿದ ಮಣಿಕಂಠನು ಗುರುಗಳಿಗೆ ವ೦ದಿಸುದಕ್ಕಾಗಿ ಮಣಿಕ೦ಠನು ಗುರುಕಾಣಿಕೆಯೊ೦ದಿಗೆ ಸೇವಕರೊಡಗೂಡಿ ಆಶ್ರಮಕ್ಕೆ ಬರುವನು.
ಗುರುಗಳಿಗೆ ನಮೋ ನಮಃ. ಕಲಿಸಿದ ವಿದ್ಯೆಗೆ ಬೆಲೆ ಕಟ್ಟುವುದು, ಆಕಾಶದ ಉದ್ದ ಅಗಲಗಳನ್ನು ಅಳೆಯುವುದು ಎರಡೂ ಒ೦ದೇ. ಆದರೆ, ಕರ್ತವ್ಯ ದ್ರಷ್ಟಿಯಿ೦ದ ದಕ್ಷಿಣೆ ತ೦ದಿದ್ದೇನೆ. ದಯಮಾಡಿ ಸ್ವೀಕರಿಸಬೇಕು. ಗುರುಗಳು ಅದನ್ನು ನಿರಾಕರಿಸುತ್ತಾರೆ. ಅದರಿಂದ ಅಚ್ಚರಿಗೊಂಡ ಮಣಿಕಂಠನು ತಮ್ಮ ನಿರ್ಧಾರಕ್ಕೆ ಕಾರಣವೇನೆಂದು ಕೇಳಲು  ಗುರುಗಳು ಇಂತೆನ್ನುತ್ತಾರೆ-        ನನಗಿರುವವನು ಒಬ್ಬನೇ ಮಗ. ಅವನ ಹೆಸರು ಸರ್ವೋತ್ತಮ. ಅವನಿಗೆ ಕಣ್ಣೂ ಕಾಣದು, ಮಾತೂ ಬಾರದು. ಸದಾ ಜಡ ವಸ್ತುವಿನ೦ತೆ ಬಿದ್ದಿರುತ್ತಾನೆ. ಅವನ ಸ್ತಿತಿಯನ್ನು ಕ೦ಡಾಗಲೆಲ್ಲಾ, ದೇವರು ನನಗೆ ಕೊಟ್ಟಿರುವ ದ೦ಡನೆಯನ್ನು ನೆನೆದು ಕಣ್ಣೀರಿಡುತ್ತೇನೆ. ನೂರಾರು ಮಕ್ಕಳಿಗೂ ವಿದ್ಯಾದಾನ ಮಾಡಿದರೂ ನನ್ನ ಪೂರ್ವಜನ್ಮದ ಪಾಪ ಇನ್ನೂ ಕರಗಲಿಲ್ಲ. ಇನ್ನೂ ಕರಗಲಿಲ್ಲ ಮಣಿಕ೦ಠ, ಇನ್ನೂ ಕರಗಲಿಲ್ಲಾ.... ಹೀಗಿರುವಾಗ, ನಿನ್ನ ಗುರುಕಾಣಿಕೆಯನ್ನು ತೆಗೆದುಕೊ೦ಡು ನಾನು ಯಾವ ಸುಖ ಪಡಲಿ. ಹೇಗೆ ಸುಖ ಪಡಲಿ. ನೀನೇ ಹೇಳು ಮಣಿಕ೦ಠ... ನೀನೇ ಹೇಳು……
ಅದಕ್ಕೆ ಮಣಿಕಂಠನು ದುಃಖಿಸಬೇಡಿ ಗುರುಗಳೇ, ಧೈರ್ಯವಾಗಿರಿ. ಪರಮಾತ್ಮ ಒಳ್ಳೆಯವರನ್ನು ಎ೦ದಿಗೂ ಕೈಬಿಡುವುದಿಲ್ಲ. ಎಂದು ನುಡಿದು ಗುರುಗಳ ಕುಟೀರಕ್ಕೆ ತೆರಳುತ್ತಾನೆ. ಬಾಗಿಲು ತೆರೆ ದಾಗ . ಒಳಗೆ ಸರ್ವೋತ್ತಮ ಕ೦ಬವೊ೦ದಕ್ಕೆ ಒರಗಿ ಜಡವಾಗಿ ಕುಳಿತಿದ್ದಾನೆ. ಮಣಿಕ೦ಠನು ಒಳಗೆ ನಡೆದು ಅವನ ಹತ್ತಿರ ಬ೦ದು ಸರ್ವೋತ್ತಮ, ಏಕೆ ಮ೦ಕಾಗಿ ಕುಳಿತಿರುವೆ. ಏಳು ಮೇಲೆ. ಎನ್ನುತ್ತಾನೆ ಅದಾಗ ಧ್ವನಿಯನ್ನು ಕೇಳಿ ಮೇಲೇಳುತ್ತಾ ಗದ್ಗರಿಸುತ್ತಾ, ಮಣಿಕ೦ಠನನ್ನು ಸ್ಪರ್ಶಿಸಿ ನೋಡುತ್ತಾನೆ ನಾನು, ನಿನ್ನ ಗೆಳೆಯ. ನಿನ್ನೊಡನೆ ಮಾತನಾಡಲು ಬ೦ದಿದ್ದೇನೆ.. ಮಣಿಕಂಠ ಮತ್ತೆ ಹೇಳುತ್ತಾನೆ.. ಅದಕ್ಕೆ ಉತ್ತರವಾಗಿ ಸರ್ವೋತ್ತಮನು ಕೈಸ೦ಜ್ಞೆಯಿ೦ದಲೇ ತನ್ನ ನೂನ್ಯತೆಯನ್ನು ತಿಳಿಯಪಡಿಸುತ್ತಾನೆ
ಚಿ೦ತಿಸಬೇಡ. ನಿನಗೆ ಭಗವ೦ತನ ಅನುಗ್ರಹವಾಗಿದೆ ಎನ್ನುತ್ತಾ.... ಸರ್ವೋತ್ತಮನ ಶಿರದಲ್ಲಿ ತನ್ನ ಅಮ್ರತ ಹಸ್ತವನ್ನು ಇರಿಸಿ.... ಈಗ ಹೇಳು "ಓ೦..." ಎನ್ನಲು  ಸರ್ವೋತ್ತಮ ತೊದಲುತ್ತಾ ಪ್ರಯತ್ನಿಸುತ್ತಾನೆ. ಕೂಡಗೆ ತಲೆಯಾಡಿಸುತ್ತಾನೆ
ಹೆದರಬೇಡ, ’ಓ೦ಕಾರವನ್ನು ಹೇಳುವ ಶಕ್ತಿ ನಿನ್ನಲಿದೆ. ಹ್ಹುಮ್ ಹೇಳು... ’ಓ೦’...... ಎಂದು ಧೈರ್ಯ ಹೇಳುತ್ತಾನೆ. ಬಾರಿ ಸರ್ವೋತ್ತಮ ತೊದಲುತ್ತಾ ಮೊದಲ್ಗೊ೦ಡು ಕೊನೆಗೆ ಓ೦ಕಾರವನ್ನುn ನುಡಿಯುತ್ತಲೇ ಹರ್ಷಿತನಾಗುತ್ತಾನೆ.
ಹೂಮ್ ಹೇಳು. "ಓ೦ ನಮಃ ಶಿವಾಯ"......... ಎನ್ನಲು ಸರ್ವೋತ್ತಮನು ತಾನೂ ಓ೦ ನಮಃ ಶಿವಾಯ... ಓ೦ ನಮಃ ಶಿವಾಯ.... ಹರ್ಷೋಲ್ಲಸಿತನಾಗಿ ಬಾರಿ ಬಾರಿ ಶಿವ ಷಢಾಕ್ಷರೀ ಮ೦ತ್ರವನ್ನು ನಡಿಯತ್ತಾನೆ. ಮತ್ತು ತನಗೆ ಮಾತಆಡಲು ಬರುತ್ತಿರುವುದಕ್ಕೆ ಹರ್ಷಿತನಾಗುತ್ತಾನೆ. ಆಗ ಮಣಿಕಂಠನು ಹಾಗೆಯೇ ಕಣ್ತೆರೆದು ನೋಡು.... ಎಂದಾಗ ಅ೦ತೆಯೇ, ಕಣ್ಣು ತೆರೆದು ನೋಡಲು ತನ್ನೆದುರು ನಿ೦ತಿರುವ ದಿವ್ಯತೇಜೋ ಸ್ವರೂಪಿ ಮಣಿಕ೦ಠನನ್ನು ಸರ್ವೋತ್ತಮ ಕಾಣುತ್ತಾನೆ. ಹರುಷದಿ೦ದ ನಗುತ್ತಾ , ’ಆಹಾಎನ್ನುತ್ತಾ, ಸುತ್ತಲೂ ಒಮ್ಮೆ ನೋಡುತ್ತಾನೆ.. ತನ್ನೆರಡೂ ಕೈಗಳಿ೦ದ ಮಣಿಕ೦ಠನನ್ನು ಅಪ್ಪಿ, ಕರೆದು ಕುಳ್ಳಿರಿಸುತ್ತಾನೆ. ಪಕ್ಕದಲ್ಲೇ ಇರಿಸಿರುವ ತಟ್ಟೆ, ನೀರು, ಹೂವನ್ನು ತ೦ದು ಮಣಿಕ೦ಠನ ಪಾದವ ತೊಳೆದು, ಹೂವ ಅರ್ಪಿಸಿ ಪಾದಪೂಜೆ ಮಾಡುತ್ತಾನೆಕೈಜೋಡಿಸಿ ನಮಿಸಿ ಸ್ತುತಿಸುತ್ತಾನೆ....
ಅಷ್ಟರಲ್ಲಿಮಗೂ, ಸರ್ವೋತ್ತಮ..., ಸರ್ವೋತ್ತಮ...’ ಎ೦ದು ತ೦ದೆತಾಯಿಯರು ಎಚ್ಚರಿರಿಸುತ್ತಲೇ.... ಪ್ರವೇಶಿಸುತ್ತಾರೆ... ಅದರಲ್ಲಾಗಲೇ ಮಣಿಕಂಠನು ತಾನು ಆಶ್ರಮದಿಂದ ಮಾಯವಾಗಿರುತ್ತಾನೆ... ಆಚಾರ್ಯರೂ ಅವರ ಪತ್ನಿಯೂ ತಾವು ಕಂಡದ್ದನ್ನು ನಂಬಲಾಗದೆ ದಿಗ್ಮೂಢರಾಗುತ್ತಾರೆ. ಭಗವ೦ತಾ, ನೀನೆ೦ತಾ ದಯಾಮಯಿ... ನಮ್ಮ ಜನ್ಮ ಸಾರ್ಥಕವಾಯಿತು ತ೦ದೇ. ನಮ್ಮ ಜನ್ಮ ಸಾರ್ಥಕವಾಯಿತು.ಕ೦ದಾ, ಭಗವ೦ತಾ ಎನ್ನುತ್ತಾ ಮಗನನ್ನು ಅಪ್ಪಿ ಹಿಡಿದು ಇಬ್ಬರೂ ಅಳುವರು.


No comments:

Post a Comment