Friday, March 13, 2015

ರಣಜಿ ಟ್ರೋಫಿ: ಕರ್ನಾಟಕ ಚಾಂಪಿಯನ್

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಕ್ರಿಕೆಟ್ಫೈನಲ್ಪಂದ್ಯದಲ್ಲಿ ಕರ್ನಾಟಕವು ಇನಿಂಗ್ಸ್ಹಾಗೂ 217 ರನ್ಗಳಜಯ ಪಡೆದು 2014-15ನೇ ಸಾಲಿನ ರಣಜಿ ಟ್ರೋಫಿಯನ್ನು ತನ್ನದಾಗಿಸಿಕೊಂಡ ವಿನಯ್ಬಳಗವು ಸತತ ಎರಡನೇ ಬಾರಿ ರಣಜಿ ಟೂರ್ನಿಯ ಚಾಂಪಿಯನ್ಆಗಿ ಹೊರಹೊಮ್ಮಿದೆ.

Ranaji Trophy 2015 Champions 


ರಣಜಿ ಇತಿಹಾಸ
Raja Bhupindar Singh

ಜುಲೈ 1934 ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸಭೆ ನಂತರ "ಭಾರತ ಕ್ರಿಕೆಟ್ ಚಾಂಪಿಯನ್ಷಿಪ್" ಎನ್ನುವ ಕ್ರಿಕೆಟ್ ಸರಣಿ ಪ್ರಾರಂಭಗೊಂಡಿತು. 1934-35 ರಲ್ಲಿ ಮೊದಲ ರಣಜಿ ಪಂದ್ಯಗಳು ನಡೆದವು. ಪಟಿಯಾಲದ ಮಹರಾಜ ಭುಪಿಂದರ್ ಸಿಂಗ್ 1911ರಲ್ಲಿ ಇಂಗ್ಲೆಂಡ್ ಗೆ ಭೇಟಿ ನೀಡಿದ್ದ ಬಾರತೀಯ ಕ್ರಿಕೆಟ್ ತ್ಂಡದ ನಾಯಕರಾಗಿದ್ದರುಅವರು ಕುಮಾರ್ ಶ್ರೀ ರಂಜಿತ್ಸಿಂಹಜೀ, ಸಿನ್ಜಿ ಜಾಮ್ ಸಾಹಿಬ್ ಗೌರವಾರ್ಥವಾಗಿ ರಣಜಿ ಟ್ರೋಫಿ ದಾನವಾಗಿ ನೀಡಿದ್ದರು. ಇಲ್ಲಿಂದ ಮುಂದೆ "ಭಾರತ ಕ್ರಿಕೆಟ್ ಚಾಂಪಿಯನ್ಷಿಪ್"ಎಂದಿದ್ದ್ ಸರಣಿಅಯ ಹೆಸರನ್ನು ರಣಜಿ ಟ್ರೋಫಿ ಕ್ರಿಕೆಟ್ ಸರಣಿ ಎಂದು ಬದಲಾಯಿಸಲಾಗಿತ್ತು.
ಮೊದಲ ರಣಜಿ ಟ್ರೋಫಿ ಚಾಂಪಿಯನ್ಷಿಪ್ ಬಾಂಬೆ ಗೆದ್ದುಕೊಂಡಿತು. ಅಂತಿಮ ಸುತ್ತಿನ ಪಂದ್ಯದಲ್ಲಿ ಉತ್ತರ ಭಾರತ ತಂಡವನ್ನು ಸೋಲಿಸಿದ ಮುಂಬೈ ಸಾಧನೆ ಮಾಡಿತ್ತು. ಹೈದರಾಬಾದ್ ತಂಡದ ಸೈಯದ್ ಮೊಹಮ್ಮದ್ ಹದಿ ರಣಜಿ ಪಂದ್ಯಾವಳಿಯಲ್ಲಿ ಮೊದಲ ಶತಕ ಬಾರೀಸಿದ್ ದಾಖಲೆ ಮಾಡಿದ್ದರು. ಇದುಅವರೆಗೆ ಮುಂಬೈ ಒಟ್ಟೂ 40 ಬಾರಿ ಪ್ರಶಸ್ತಿ ಗಳಿಸಿ ಅಗ್ರ ಸ್ಥಾನದಲ್ಲಿದ್ದರೆ,ಕರ್ನಾಟಕ 8 ಬಾರಿ ಪ್ರಶಸ್ತಿ ಗಳಿಸಿ ಎರಡನೇ ಸ್ಥಾನದಲ್ಲಿದೆ.

ರಣಜಿ ಕುರಿತಂತೆ ಮುಖ್ಯ ಮಾಹಿತಿಗಳು ಕೆಳಗಿನಂತಿವೆ
ಕರ್ನಾಟಕ ಪ್ರಶಸ್ತಿ ಗೆದ್ದ ವರ್ಷ ಹಾಗೂ ನಾಯಕರು
ವರ್ಷ
ಸ್ಥಳ
ನಾಯಕ
ಎದುರಾಳಿ ತ್ಂಡ
1973 - 74
ಜೈಪುರ
ಎರ್ರಪಳ್ಳಿ ಪ್ರಸನ್ನ
ರಾಜಾಸ್ಥಾನ
1977 - 78
ಮೋಹನ್ ನಗರ
ಎರ್ರಪಳ್ಳಿ ಪ್ರಸನ್ನ
ಉತ್ತರ ಪ್ರದೇಶ
1982 – 83
ಮುಂಬೈ
ಬ್ರಿಜೇಶ್ ಪಟೇಲ್
ಮುಂಬೈ
1995 – 96
ತಮಿಳು ನಾಡು
ಅನಿಲ್ ಕುಂಬ್ಳೆ
ಚೆನ್ನೈ
1997 – 98
ಉತ್ತರ ಪ್ರದೇಶ
ರಾಹುಲ್ ದ್ರಾವಿಡ್
ಬೆಂಗಳೂರು
1998 – 99
ಮಧ್ಯ ಪ್ರದೇಶ
ಸುನಿಲ್ ಜೋಷಿ
ಬೆಂಗಳೂರು
2013 – 14
ಹೈದರಾಬಾದಾಛ್
ವಿನಯ್
ಮಹಾರಾಷ್ಟ್ರ
2014 - 15
ಮುಂಬೈ
ವಿನಯ್
ತಮಿಳು ನಾಡು






ಅಂತಿಮ ಸ್ಕೋರ್ ವಿವರ
ತಮಿಳುನಾಡು  134 (62.4 ಓವರ್ಗಳಲ್ಲಿ)
ಕರ್ನಾಟಕ ಮೊದಲ ಇನಿಂಗ್ಸ್‌ 231.2 ಓವರ್ಗಳಲ್ಲಿ 762
ತಮಿಳುನಾಡು ಎರಡನೇಇನಿಂಗ್ಸ್ 107.5 ಓವರ್ಗಳಲ್ಲಿ 411
(ಬುಧವಾರದ ಅಂತ್ಯಕ್ಕೆ 40 ಓವರ್ಗಳಲ್ಲಿ 3 ವಿಕೆಟ್ಗೆ 113)

ಬಾಬಾ ಅಪರಾಜಿತ್ಸಿ ರಾಬಿನ್ ಉತ್ತಪ್ಪ ಬಿ ಎಸ್‌. ಅರವಿಂದ್‌  68
ವಿಜಯ್ಶಂಕರ್ಸಿ ಮತ್ತು ಬಿ ವಿನಯ್ಕುಮಾರ್‌  103
ದಿನೇಶ್ಕಾರ್ತಿಕ್ಸಿ ಅರವಿಂದ್ಬಿ ಶ್ರೇಯಸ್ಗೋಪಾಲ್‌  120
ರಾಮಸ್ವಾಮಿ ಪ್ರಸನ್ನ ಸಿ ಮನೀಷ್ ಪಾಂಡೆ ಬಿ ಎಚ್‌.ಎಸ್. ಶರತ್‌  08
ಎಂ. ರಂಗರಾಜನ್ ಸಿ ಮನೀಷ್ಪಾಂಡೆ ಬಿ ಅರವಿಂದ್‌  33
ಅಶ್ವಿನ್ಕ್ರೈಸ್ಟ್ಸ್ಟಂಪ್ಡ್ರಾಬಿನ್ಉತ್ತಪ್ಪ ಬಿ ಶ್ರೇಯಸ್ಗೋಪಾಲ್‌  00
ಲಕ್ಷ್ಮಿಪತಿ ಬಾಲಾಜಿ ಔಟಾಗದೆ  05
ಪ್ರಶಾಂತ್ ಪರಮೇಶ್ವರನ್‌ (ಬ್ಯಾಟ್ಮಾಡಲು ಬರಲಿಲ್ಲ)  00
ಇತರೆ: (ಬೈ-3, ಲೆಗ್ಬೈ-6, ವೈಡ್‌-5, ನೋ ಬಾಲ್‌-2)  16

ವಿಕೆಟ್ಪತನ: 4-191 (ಅಪರಾಜಿತ್‌; 60.3), 5-306 (ಶಂಕರ್‌; 80.6), 6-344 (ಪ್ರಸನ್ನ; 87.5), 7-379 (ಕಾರ್ತಿಕ್‌; 96.1), 8-379 (ಅಶ್ವಿನ್‌; 98.1), 9-411 (ರಂಗರಾಜನ್‌; 107.5)

ಬೌಲಿಂಗ್‌: ಅಭಿಮನ್ಯು ಮಿಥುನ್ 18-2-84-0, ಎಚ್‌.ಎಸ್. ಶರತ್‌ 20-4-77-1, ಎಸ್. ಅರವಿಂದ್‌ 21.5-6-52-2, ಶ್ರೇಯಸ್ ಗೋಪಾಲ್ 25-4-126-4, ವಿನಯ್ಕುಮಾರ್‌ 21-8-43-2, ಆರ್‌. ಸಮರ್ಥ್‌ 2-0-20-0.
ಫಲಿತಾಂಶ: ಕರ್ನಾಟಕಕ್ಕೆ ಇನಿಂಗ್ಸ್ಹಾಗೂ 217 ರನ್ಗೆಲುವು.
ಪಂದ್ಯ ಶ್ರೇಷ್ಠ: ಕರುಣ್ನಾಯರ್

No comments:

Post a Comment