Friday, May 15, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 51

ಕೈದಾಳ (Kaidaala)

ತುಮಕೂರಿನಿಂದ 8 ಕಿ.ಮೀ. ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಸ್ಥಳ ಕೈದಾಳ. ಪ್ರಾಚೀನ ಕಾಲದಲ್ಲಿ  ಕ್ರೀಡಾಪುರವೆಂದು ಖ್ಯಾತವಾಗಿದ್ದ ಪಟ್ಟಣ ಕಿರು ಸಾಮ್ರಾಜ್ಯದ ರಾಜಧಾನಿಯೂ ಆಗಿತ್ತು. ಕೈದಾಳಕ್ಕೆ ಖ್ಯಾತಿ ಬಂದಿದ್ದು ಅಮರಶಿಲ್ಪಿ ಜಕಣಾಚಾರಿಯಿಂದ.ಜಕಣಾಚಾರಿಯ ಜನ್ಮಸ್ಥಳವಾದ ಕೈದಾಳದಲ್ಲಿ  ದ್ರಾವಿಡ ವಾಸ್ತುಶೈಲಿಯಲ್ಲಿರುವ ಸುಂದರ ಚೆನ್ನಕೇಶವ ದೇವಾಲಯವಿದೆ. 1150-51ರಲ್ಲಿ  ಹೊಯ್ಸಳರ 1ನೆಯ ನರಸಿಂಹನ ಸಾಮಂತನಾಗಿದ್ದ ಗುಳೇ-ಬಾಚಿ ಎಂಬಾತ ದೇವಸ್ಥಾನ ಕಟ್ಟಿದನಂತೆ. ಚೆನ್ನಕೇಶವ ಮಂದಿರದ ಅನತಿ ದೂರದಲ್ಲಿ  ಗಂಗಾಧರೇಶ್ವರ ದೇವಾಲಯವಿದೆ. ಇದೂ ಕೂಡ ದ್ರಾವಿಡ ಶೈಲಿಯಲ್ಲಿದೆ. ಹಳೆಯ ದೇವಾಲಯದ ಗೋಪುಗಳ ಜೀರ್ಣೋದ್ಧಾರ ಮಾಡಲಾಗಿದೆ.

Lord Sri Chennakeshava Swamy, Kaidala



Lord Sri Chennakeshava Swamy temple, Kaidala
ಬೇಲೂರಿನಚೆನ್ನಕೇಶವ ದೇವಾಲಯವನ್ನೇ ಹೋಲುವ ಸುಂದರ ಕೆತ್ತನೆಗಳಿಂದ ಕೂಡಿರುವ ದೇವಾಲಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.ಇನ್ನು ಪ್ರತಿವರ್ಷ ಊರಿನಲ್ಲಿ ಗಣಪತಿ ಉತ್ಸವ ಜರುಗುತ್ತದೆ. ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಲಾಗುವ ಮಣ್ಣಿನ ಗಣಪನನ್ನು ಮೂರು ತಿಂಗಳುಗಳ ಕಾಲ ಪೂಜಿಸಲಾಗುತ್ತದೆ. ಸಂಗೀತೋತ್ಸವ, ಹರಿಕಥೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ.ಎನ್ನುವುದು ವಿಶೇಷ.

***

ಜಗಣಾಚಾರಿ ಪತ್ನಿಯನ್ನೂ ಪುತ್ರನನ್ನೂ ತೊರೆದು ದೇಶಾಂತರ ಹೋದ ಹಲವು ವರ್ಷಗಳ ಬಳಿಕ ಬೇಲೂರಿನಲ್ಲಿ ಚೆನ್ನಿಗರಾಯ ಮೂರ್ತಿಯನ್ನು ಕಡೆಯುತ್ತಿದ್ದಾಗ, ಅಲ್ಲಿಗೆ ಬಂದ ಆತನ ಮಗ ಡಕಣಾಚಾರಿ ಚೆನ್ನಿಗರಾಯಮೂರ್ತಿ ಕಡೆಯುತ್ತಿರುವ ಶಿಲೆಯಲ್ಲಿ ದೋಷವಿದೆ ಎಂದು ಸವಾಲು ಹಾಕುತ್ತಾನೆ.

 Temple, Kaidala
ಚೆನ್ನಿಗರಾಯ ಶಿಲ್ಪದ ಹೊಟ್ಟೆಯ ಭಾಗದಲ್ಲಿ ಉಳಿಯಿಂದ ಹೊಡೆದಾಗ, ಭಾಗ ಒಡೆದು ಅದರಿಂದ ಕಪ್ಪೆಯೊಂದು ಹೊರಬಂತಂತೆ. ಹೀಗಾಗೇ ದೇವಾಲಯದಲ್ಲಿರುವ ದೇವರನ್ನು ಕಪ್ಪೆ ಚೆನ್ನಿಗರಾಯ ಎಂದೇ ಕರೆಯುತ್ತಾರೆ.
ಮಗನಿಂದಲೇ ರೀತಿ ಅವಮಾನಿತನಾದ ಖ್ಯಾತ ಶಿಲ್ಪಿ  ತನ್ನ ಬಲಗೈಯನ್ನೇ ಕತ್ತರಿಸಿಕೊಳ್ಳುತ್ತಾನೆಭಗವಂತ ಆತನ ಕನಸಿನಲ್ಲಿ ಬಂದು ಕೈದಾಳದಲ್ಲಿ ಚೆನ್ನಿಗರಾಯನ ದೇವಾಲಯ ನಿರ್ಮಿಸಲು ಅವನಿಗೆ ಆದೇಶಿಸುತ್ತಾರೆ.
ಕೈದಾಳದಲ್ಲಿ ದೇವತಾ ಪ್ರತಿಷ್ಠಾಪನೆಯಾದಾಗ ಜಕಣನಿಗೆ ಮತ್ತೆ ಕೈದಳಯಿತು ಅರ್ಥಾತ್ ಕೈ ಬಂತು. ಹೀಗಾಗೇ  ಕ್ರೀಡಾಪುರಿ ಎಂದು ಕರೆಸಿಕೊಂಡಿದ್ದ ಊರು ಕೈದಳವೆಂದು ಖ್ಯಾತವಾಯಿತು.

No comments:

Post a Comment