Saturday, September 05, 2015

“ಕೃಷ್ಣಂ ವಂದೇ ಜಗದ್ಗುರು”

ಬಾರಿ ಜಗದೊಡೆಯನಾದ ಶ್ರೀ ಕೃಷ್ಣ ಹಾಗೂ ಭಾರತದ ಎರ್ಡನೇ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನುಮ ದಿನ- ಶಿಕ್ಷಕರ ದಿನ ಎರಡೂ ಒಟ್ಟಾಗಿ ಬಂದಿರುವುದು ವಿಶೇಷ. ಶ್ರೀಕೃಷ್ಣನಿಗೆ ಸಮರಾದ ಗುರು ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಸಂಧಾನಕಾರನೂ, ಸಾರಥಿಯೂ, ರಾಜತಾಂತ್ರಿಕನೂ ಆಗಿದ್ದು ಎದುರಾಳಿಗಳನ್ನು ಮಣಿಸಬಲ್ಲವನಾಗಿದ್ದನು.. ಶ್ರೀಕೃಷ್ಣನನ್ನು ನಾವು ಕೇವಲ ಆದ್ಯಾತ್ಮಿಕ ಗುರು ಎಂದು ಮಾತ್ರವೇ ಸ್ವೀಕರಿಸದೆ ಅತ್ಯುತ್ತಮ ಮ್ಯಾನೇಜ್ ಮೆಂಟ್ ಗುರುವನ್ನಾಗಿಯೂ ಸ್ವೀಕರಿಸಬೇಕು.

ಸ್ನೇಹಿತರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.
ಬಾರಿ ಜಗದೊಡೆಯನಾದ ಶ್ರೀ ಕೃಷ್ಣ ಹಾಗೂ ಭಾರತದ ಎರ್ಡನೇ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನುಮ ದಿನ- ಶಿಕ್ಷಕರ ದಿನ ಎರಡೂ ಒಟ್ಟಾಗಿ ಬಂದಿರುವುದು ವಿಶೇಷ.



ಶ್ರೀ ಕೃಷ್ಣನೇ ಗುರು
ಶ್ರೀಕೃಷ್ಣನಿಗೆ ಸಮರಾದ ಗುರು ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಅರ್ಜುನನ ಮೂಲಕ ಇಡೀ ಜಗತ್ತಿಗೆ ನೀಡಿರುವ ಸಂದೇಶವೇ ಭಗವದ್ಗೀತೆ. ಭಗವದ್ಗೀತೆ ಸರ್ವ ಕಾಲಕ್ಕೂ ಪ್ರಸ್ತುತ. ಜಗತ್ತಿನ ಸರ್ವರಿಗೂ ಆದ್ಯಾತ್ಮದ ಗುರುವಾಗಬಲ್ಲ ಸಾಮರ್ಥ್ಯವಿರುವುದು ಶ್ರೀ ಕೃಷ್ಣನಲ್ಲಿ. ಅದಕ್ಕಾಗಿಯೇ ಕೃಷ್ಣಾವತಾರವನ್ನು ಪರಿಪೂರ್ಣ ಅವತಾರವೆನ್ನುತ್ತಾರೆ.
ಐದು ಸಾವಿರ ವರ್ಷಗಳ ಹಿಂದೆ ಉತ್ತರ ಪ್ರದೇಶದ ಮಥುರಾದಲ್ಲಿ ಹುಟ್ಟಿದ ಶ್ರೀ ಕೃಷ್ಣನು ಇಡೀ ಜಗತ್ತಿಗೇ ಗುರು ಎಂದು ಗುರುತಿಸಿಕೊಂಡವನು. ಮನುಷ್ಯ ತನ್ನ ಜೀವನದಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿಗಳ ಬಗ್ಗೆ ಭಗವಂತ ಮಹಾಭಾರತದ ರಣರಂಗದಲ್ಲಿ ಮಧ್ಯಮ ಪಾಂಡವನಾದ ಅರ್ಜುನನಿಗೆ ಭಗವದ್ಗೀತೆಯ 18 ಅಧ್ಯಾಯಗಳ ಮೂಲಕ ಉಪದೇಶಿಸಿ ಸರ್ವರಿಗೂ ಮಾರ್ಗದರ್ಶನ ಮಾಡಿದ್ದಾನೆ.
ಶ್ರೀಕೃಷ್ಣ ತಾನು ಸಂಧಾನಕಾರನೂ, ಸಾರಥಿಯೂ, ರಾಜತಾಂತ್ರಿಕನೂ ಆಗಿದ್ದು ಎದುರಾಳಿಗಳನ್ನು ಮಣಿಸಬಲ್ಲವನಾಗಿದ್ದನು. ಕೃಷ್ಣನಲ್ಲಿ ಒಬ್ಬ ಸಮರ್ಥ ನಾಯಕನಲ್ಲಿರಬೇಕಾದ ಎಲ್ಲಾ ಉತ್ತಮ ಗುಣಗಳಿದ್ದವು. ಅವನು ತನ್ನ ಅಪಾರವಾದ ಬುದ್ದಿಮತ್ತೆ, ಜಾಣ್ಮೆಯಿಂದ ತನಗೆದುರಾದ ಎಲ್ಲಾ ಎಡರು ತೊಡರುಗಳನ್ನು ಯಶಸ್ವಿಯಾಗಿ ಭೇಧಿಸಿ ಮುನ್ನಡೆದನು.ಯಾರಲ್ಲಿ ಆಚಲವಾದ ಆತ್ಮವಿಶ್ವಾಸ, ಮನೋದಾರ್ಡ್ಯವಿರುತ್ತದೋ ಅಂತಹವರು ತಾವು ದೈಹಿಕವಾಗಿ ದುರ್ಬಲರಾಗಿದ್ದರೂ ಸಹ ಜೀವನದಲ್ಲಿ ಯಶಸ್ಸು ಕಾಣಬಲ್ಲರು. ಶ್ರೀಕೃಷ್ಣನಲ್ಲಿ ಅಂತಹಾ ಮನೋಬಲವಿತ್ತು. ಅದನ್ನೇ ಆದ್ಯಾತ್ಮವಾದಿಗಳು "ಕೃಷ್ಣಪ್ರಜ್ಞೆ" ಎನ್ನುತ್ತಾರೆ. ಅರಿವಿನ ಬೆಳಕಿನಿಂದ ಮೂಡಿದುದೇ ಭಗವದ್ಗೀತೆ. ಹೀಗಾಗಿ ಶ್ರೀಕೃಷ್ಣನನ್ನು ನಾವು ಕೇವಲ ಆದ್ಯಾತ್ಮಿಕ ಗುರು ಎಂದು ಮಾತ್ರವೇ ಸ್ವೀಕರಿಸದೆ ಅತ್ಯುತ್ತಮ ಮ್ಯಾನೇಜ್ ಮೆಂಟ್ ಗುರುವನ್ನಾಗಿಯೂ ಸ್ವೀಕರಿಸಬೇಕು.
ಮನುಕುಲವು ತನ್ನ ಇತಿಹಾಸದಲ್ಲಿ ಅಂತಹ ಸರಿಸಾಟಿಯಿಲ್ಲದ ಇನ್ನೊಂದು ವ್ಯಕ್ತಿತ್ವವನ್ನು ಕಂಡಿಲ್ಲ. ಭಗವತ್ವಾಣಿಯಾಗಿರುವ ಭಗವದ್ಗೀತೆಯು ಅಳೆಯಲಸಾಧ್ಯವಾದ ಆಳ ಮತ್ತು ನೈಜ ಬೋಧನೆಗಳಿಂದ ಪರಿಪ್ಲುತವಾಗಿರುವ ಗ್ರಂಥವೆಂದು ಇಡೀ ಪ್ರಪಂಚವೇ ಒಪ್ಪಿಕೊಂಡಾಗಿದೆ. ಅದು ಮನುಕುಲಕ್ಕೆ ನೀಡುತ್ತಿರುವ ಅತ್ಯಮೂಲ್ಯ ಜ್ಞಾನವನ್ನು ಜಗತ್ತಿನ ಅಗ್ರಗಣ್ಯ ಪಾಶ್ಚಿಮಾತ್ಯ ತತ್ತ್ವಜ್ಞಾನಿಗಳು ಶ್ಲಾಘಿಸಿದ್ದಾರೆ. ಸೂಕ್ಷ್ಮದರ್ಶಿಯೊಬ್ಬನು ಭಗವದ್ಗೀತೆಯಲ್ಲಿರುವ ಬೋಧನೆಗಳು ಜಗತ್ತಿನ ಇತರ ಧಾರ್ಮಿಕ ಗ್ರಂಥಗಳಲ್ಲಿಯೂ ದೊರೆಯುವುದೆಂದು ಯೋಚಿಸುವನು. ಆದರೆ ಭಗವದ್ಗೀತೆಯಲ್ಲಿರುವಂತಹ ಅತ್ಯುಚ್ಚ ಜ್ಞಾನವು ಬೇರೆ ಯಾವ ಜ್ಞಾನ ಗ್ರಂಥದಲ್ಲಿಯೂ ಸಿಗುವುದಿಲ್ಲ.

ಶ್ರೀಕೃಷ್ಣ ಎಂಬ ಮಹಾರಹಸ್ಯ
ಡಿವಿಜಿಯವರ ಉಕ್ತಿಯಂತೆ - ‘ಶ್ರೀಕೃಷ್ಣ ಎಂಬುದು ಒಂದು ಪ್ರಸಿದ್ಧ ರಹಸ್ಯ. ಹಿಂದೂಜನರು ಅದನ್ನು ಶ್ರದ್ಧೆಯಿಂದ ಅಂಗೀಕರಿಸಿದ್ದಾರೆ. ವಿಚಾರಮಾಡಹೊರಟವರು ವಿಸ್ಮಿತರಾಗಿದ್ದಾರೆ. ಶ್ರೀಕೃಷ್ಣ ವ್ಯಕ್ತಿಮನಸ್ಸಿಗೆ ರಮಣೀಯವಾಗಿ, ಆದರೂ ಬುದ್ಧಿಗೆ ಪೂರ್ತಿ ಅರ್ಥವಾಗದ್ದಾಗಿ ಉಳಿದುಕೊಂಡಿದೆ. ಅದರ ಮರ್ಮವೇನು? ಪ್ರಸಿದ್ಧ ದಶಾವತಾರಗಳಲ್ಲಿ ಶ್ರೀಕೃಷ್ಣಾವತಾರದಂತೆ ಬುದ್ಧಿಪ್ರಯತ್ನಕ್ಕೆ ದುಸ್ಸಾಧ್ಯವಾಗಿರುವ ಅವತಾರ ಇನ್ನಾವುದೂ ಇಲ್ಲ." ‘ಕೃಷ್ಣಎಂದರೆ ಕಪ್ಪು ಎಂದು ಅರ್ಥವಿದೆ. ಕಪ್ಪುಬಣ್ಣ ರಹಸ್ಯಕ್ಕೆ ಸಂಕೇತ. ಇಡಿಯ ಅವತಾರಗಳಲ್ಲಿ ಅತ್ಯಂತ ಸಂಕೀರ್ಣ ಪಾತ್ರವೆಂದರೆ ಶ್ರೀಕೃಷ್ಣನೇ ಹೌದು; ಅವನಷ್ಟು ನಿಗೂಢವಾಗಿರುವ, ರಹಸ್ಯವಾಗಿರುವ ಮತ್ತೊಂದು ದೈವವನ್ನಾಗಲೀ ಅವತಾರಪುರುಷನನ್ನಾಗಲೀ ವ್ಯಕ್ತಿಯನ್ನಾಗಲೀ ಕಾಣಲಾರೆವು. ಆದುದರಿಂದಲೇ ಕೃಷ್ಣನ ಜೀವನದ ಘಟನೆಗಳನ್ನು ನಾವುಹೀಗೆಎಂದು ತೀರ್ಪು ಕೊಡಲು ಆಗದು; ಅವನ ವ್ಯಕ್ತಿತ್ವದ ಬಣ್ಣಇದೇಎಂದು ನಿಸ್ಸಂಶಯವಾಗಿ ಹೇಳಲು ಬಾರದು. ಅವನು ಮನುಷ್ಯನೋ ದೇವರೋ? ತೀರ್ವನಿಸುವುದು ಕಷ್ಟ. ಅವನು ಯೋಗಿಯೋ ಭೋಗಿಯೋ? ನಿರ್ಧಾರ ಮಾಡಲು ಕಷ್ಟ. ‘ಕೃಷ್ಣನೆಂದರೆ ಆಕರ್ಷಣೆ, ಸೆಳೆತ, ಉಜ್ಜುವಿಕೆ ಎಂದೂ ಅರ್ಥವಿದೆ. ಅವನು ನಮ್ಮನ್ನು ಅವನ ಗುಣಗಳಿಂದ ಸೆಳೆಯುತ್ತಾನೆ; ನಮ್ಮ ಕಲ್ಮಷಗಳನ್ನು ಉಜ್ಜಿ ತೆಗೆದುಹಾಕಿ ಶುದ್ಧಗೊಳಿಸುತ್ತಾನೆ.
ಕೃಷ್ಣ ಹೆಸರು ಪ್ರಸ್ತಾಪ ವಾದಗೆಲ್ಲ ಲೀಲಾ ವಿನೋದಗಳು ,ಯುದ್ದದಲ್ಲಿ ಕೃಷ್ಣ ಅನುಸರಿಸಿದ ತಂತ್ರಗಾರಿಕೆ ನೆನಪಿಗೆ ಬರುತ್ತದೆ. ಬಾಲ್ಯದಲ್ಲಿ ತನ್ನ ಸಾಕು ತಾಯಿ ಯಶೋದೆಗೆ ತಾನೇ ಸ್ವತಃ ಮಣ್ಣು ತಿಂದಂತೆ ನಟಿಸಿ, ಇಡೀ ಬ್ರಹ್ಮಾಂಡ ತನ್ನ ಬಾಯಿಯಲ್ಲಿ ತೋರಿಸಿದ.ನಾವುಗಳು ಮಕ್ಕಳಿಂದ ಕಲಿಯುವ ಎಸ್ಟೋ ವಿಷಯಗಳು ಇರುತ್ತದೆ.ಶ್ರೀಕೃಷ್ಣ ನಿಗೆ ಹಾಲಿನ ರೀತಿಯಲ್ಲಿ ವಿಷವುನಿಸಿದ ಪೂತನಿ ರಾಕ್ಷಸಿಯನ್ನು ತಾಯಿಯೆಂದೇ ಭಾವಿಸಿದ.ಹೆತ್ತ ತಾಯಿ -ದೇವಕಿ,ಸಾಕುತಾಯಿ-ಯಶೋದೆ ,ಹಾಲು ಎಂದು ವಿಷವುನಿಸಿದ - ಪೂತನಿ ಎಲ್ಲರೂ ತಾಯಿಗಳು. ತಾಯಿ ಪಾತ್ರದಲ್ಲಿ ಮೋಸ,ಕಪಟವಿಲ್ಲ.ತಾಯಿಗೆ ನೀಡಬೇಕಾದ ಗೌರವ ಬಾಲಕೃಷ್ಣ ಎತ್ತಿ ಹಿಡಿದ. ಸಾಂದೀಪನಿ ಗುರುಕುಲದಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿ ,ಸುಧಾಮಾನಂತಹ,ಇನ್ನುಳಿದ  ಸಹವರ್ತಿಯೊಂದಿಗೆ,ಶ್ರಮದಾನ ಕಾರ್ಯ ನಿರ್ವಹಿಸಿ ವಿದ್ಯೆ ಗಳಿಸಿದ ರೀತಿ ಅನುಕರಣೀಯ.ಅದೇ ಸುಧಾಮನಿಂದ ಅಕ್ಕಿಯ ಪುಡಿ ಅವಲಕ್ಕಿ ಸ್ವೀಕರಿಸಿ ಸ್ನೇಹದಲ್ಲಿ ಬಡವ ಶ್ರೀಮಂತಿಕೆ ಎಂಬ ಭೇದವಿಲ್ಲ ಎಂದು ಸಾರಿದ ಮಹಾನ್ ದೈವ.ಬಂಧುವಾದ ಶಿಶುಪಾಲನನ್ನುಸಂತೈಸಿ,ಅವನು ಕ್ರೂರನಾದ ಕಾರಣ ಸಮಾಜದ ಹಿತಕ್ಕಾಗಿ ದಂಡಿಸಿದ.ಅಂದರೆ ಬಂಧುಗಳನ್ನು ಆದರಿಸುವ ಸಮನ್ವಯತೆ ಇರಬೇಕೆಂದು ಜಗತ್ತಿಗೆ ಸಾರಿದ ವ್ಯಕ್ತಿ.ಗೋವರ್ದನ ಗಿರಿಯನ್ನು ತನ್ನ ಕಿರು ಬೆರಳಲ್ಲಿ ಎತ್ತಿ ಹಿಡಿದು ಗೋವುಗಳನ್ನು ಸಂರಕ್ಷಿಸಿ,ಪ್ರಾಣಿದಯೆ ತತ್ವವನ್ನು ಗಿರಿಧರನಾಗಿ ತಿಳಿಸಿದ.ಇಂದ್ರನ ಗರ್ವವನ್ನು ಮೆಟ್ಟಿ ನಿಂತು ,ಸ್ವಪ್ರತಿಸ್ತ್ತೆಸಲ್ಲದು ಎಂಬ ಅಂಶ ಬಹಿರಂಗಪಡಿಸಿದ.ಬಲರಾಮನ ಸೋದರತೆಗೆ ಗಟ್ಟಿತನ ಕೂಡಿಸಿದ ರಾಮಕೃಷ್ಣ .ಶಮಂತ ಮಣಿ ವಿಷಯದಲ್ಲಿ ಆರೋಪ ಬಂದಾಗ ಅದರಿಂದ ಹೊರಬರುವ ತನ್ನ ನಡೆಯನ್ನು  ಪಣ ವಾಗಿಸಿ ನಿರ್ದೋಷ ಸಾಬೀತುಪಡಿಸಿದ.ಮಹಾಸಾಧ್ವಿ ರುಕ್ಮಣಿಯ ಮುಕೇನ,ತಾನು ಸರಳ ಪೂಜೆಗೂ,ಆರಾಧನೆಗೂ,ಕೇವಲ ತುಳಸಿದಳಕ್ಕೆತಾನು ದೊರಕಬಲ್ಲೆ ಎಂದು ಶ್ರೀಹರಿ ನಿರೂಪಿಸಿದ.ನರಕಾಸುರನನ್ನು ವಧಿಸುವಾಗ ತನ್ನ ಪತ್ನಿ ಸತ್ಯಭಾಮೆಯನ್ನು ಯುದ್ದ ರಂಗಕ್ಕೆ ಕರೆದೊಯ್ದು , ಶತ್ರುವಿನ ವಶದಲ್ಲಿ ಹದಿನಾಲ್ಕು ಸಾವಿರ ಸ್ತ್ರೀಯರನ್ನು ವಿಮೊಚಿಸಿ,ಸ್ತ್ರೀಯರಿಂದಲೇ ಸ್ತ್ರೀಯರನ್ನು ಉದ್ದರಿಸಲು ಸಾದ್ಯ ಸಂದೇಶ ಸಾರಿದ.ಈಗಲೂ ಬ್ರಿಂನ್ದಾವನದ ಅಬಲೆಯರಿಗೆ ಆಶ್ರಯದಾತ.ಮಹಾಭಾರತ ಯುದ್ದದಲ್ಲಿ ಒಬ್ಬ ಯೋಧನಿಗಿರ ಬೇಕಾದ ಗುಣಗಳನ್ನು ತಿಳಿ ಹೇಳಿ ಅರ್ಜುನನನ್ನು ಜಾಗೃತಗೊಳಿಸಿದ.ಧರ್ಮವಂತ ಯೋಧನಿಗೆ ಪಾರ್ಥಸಾರಥಿ ತಾನಾಗಬಲ್ಲೆ .ಇದರಿಂದ ಜಗತ್ತಿಗೆ ಭಗವದ್ಗೀತೆ ದೊರಕಿತು. ಶಸ್ತ್ರ ಹಿಡಿಯದೆ ಕೌಶಲ್ಯದಿಂದ ದುಷ್ಟರಾದ ಕೌರವರನ್ನು  ಸಂಹರಿಸಿಲು ಕಾರಣನಾದ.
ಹೀಗೆ ಕೃಷ್ಣಾವತಾರದ ಪ್ರತಿ ಹಂತದಲ್ಲಿಯೂ ಒಂದೊಂದು ಸಂದೇಶವಿದೆ. ಇಂತಹಾ ಮಹಾಪುರುಷ, ದೇವೋತ್ತಮನಾದ ಶ್ರೀಕೃಷ್ಣನನ್ನು ನಾವೆಲ್ಲರೂ ಗುರು ಎಂದು ಭಾವಿಸುವುದರಲ್ಲಿ ಯಾವ ಹೆಚ್ಚುಗಾರಿಕೆಯೂ ಇರುವುದಿಲ್ಲ.
ಸ್ನೇಹಿತರೆ, ಇಂದು ಕೃಷ್ಣಾಷ್ಠಮಿಯಾಗಿದ್ದು ಶ್ರೀಕೃಷ್ಣನ ಕುರಿತು ನನ್ನ ವಿಚಾರಗಳನ್ನು ಕೊಂಚಮಟ್ಟಿಗೆ ತಮ್ಮೊಡನೆ ಹಂಚಿಕೊಳ್ಳಬೇಕೆನಿತು. ಜಗದೊದ್ದಾರಕ ಶ್ರೀಕೃಷ್ಣ ನಮ್ಮೆಲ್ಲರಿಗೂ ಸರ್ವಮಂಗಳಾವನ್ನುಂಟುಮಾದಲಿ
ನಮಸ್ಕಾರ

No comments:

Post a Comment