Wednesday, October 07, 2015

ಕುಪ್ಪಳ್ಳಿ, ಕವಿಶೈಲ - ಆದ್ಯಾತ್ಮಿಕ ಅನುಭೂತಿ ನೀಡುವ ಸ್ಮರಣೀಯ ಸ್ಥಳ



ನಾನು ಹಾಗೂ ನನ್ನ ಅಣ್ಣ ಪ್ರಭಾಕರ ಅಡಿಗ ಕವಿಶೈಲದ ಬಂಡೆಯ ಮೇಲೆ
ನಾನು ಮೊನ್ನೆ ಗಾಂಧಿ ಜಯಂತಿಯಂದು ಕನ್ನಡದ ಮಹಾನ್ ಕವಿ ರಸಋಷಿ ಕುವೆಂಪು ಜನ್ಮಭೂಮಿ ಕುಪ್ಪಳ್ಳಿಗೆ ನನ್ನ ಅಣ್ಣನೊಡನೆ ಭೇಟಿ ನೀಡಿದ್ದೆ. ಅಲ್ಲಿನ ಸುಂದರ ಪ್ರಕೃತಿ, ನಯನಮನೋಹರ ಹಸಿರು ವಾತಾವರಣ ನನ್ನನ್ನು ಮಂತ್ರಮುಗ್ದನನ್ನಾಗಿಸಿತು. ಅಂತಹಾ ಹಚ್ಚ ಹಸಿರಿನ ನಡುವೆ ಇರುವ ಕವಿಮನೆ ನಿಜಕ್ಕೂ ಪ್ರಶಾಂತವಾಗಿದ್ದು ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಮನಸ್ಸಿಗೆ ಶಾಂತಿ ಸಮಾಧಾನವನ್ನು ನೀಡುತ್ತದೆ.


ಕವಿಶೈಲದ ವರ್ಣನೆ ಇರುವ ಕಲ್ಲು




ಪ್ರಪಂಚದ ಹದಿನೆಂಟು ಜೀವ ವೈವಿದ್ಯದ ತಾಣದಲ್ಲಿ ಒಂದಾದ ಸ್ಥಳ ಸಹ್ಯಾದ್ರಿ ಬೆಟ್ಟ, ಅದರ ತಪ್ಪಲಲ್ಲೆ ಇರುವುದು ಕುವೆಂಪುರವರ ಬಾಲ್ಯ ಕಳೆದ ಮನೆ, ಈಗಕವಿಮನೆಯಾಗಿದೆಇನ್ನೂರು ವರ್ಷ ಹಳೆಯದಾದ ಮನೆಯು, ಮಲೆನಾಡಿನ ಸೌಂದರ್ಯವನ್ನು ತನ್ನ ಒಡಲಲ್ಲೆ ಇನ್ನೂರು ವರ್ಷ ಇಟ್ಟುಕೊಂಡಿದ್ದ ಮನೆಯು ಎಂತವರನ್ನು ಏನನ್ನು ಮಾತನಾಡಿಸದೆ ತನ್ನ ಕಡೆಗೆ ದಿಟ್ಟಿಸುವಂತೆ ಮಾಡುತ್ತದೆ.
ಕುವೆಂಪು ಬಳಸುತ್ತಿದ್ದ ಎತ್ತಿನ ಗಾಡಿ ಇರುವ ಕೋಣೆ
ಕುಪ್ಪಳ್ಳಿಯಲ್ಲಿ ಹುಟ್ಟಿ ಮೈಸೂರಿನಲ್ಲಿ ನಿಂತು ಅಖಂಡ ವಿಶ್ವಕ್ಕೆ ವಿಶ್ವಮಾನವ ಸಂದೇಶ ಕೊಟ್ಟ ಕುವೆಂಪುರವರ ಮನೆ ಇಂದು ಪ್ರವಸಿತಾಣ. ಅತ್ಯುತ್ತಮ ಕೃತಿಗಳನ್ನು ಕೊಟ್ಟು, ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು, ಬದುಕಿನ ಅರ್ಥವನ್ನು ತಿಳಿಸಿಕೊಟ್ಟು ಅಮರರಾದ ಕವಿ ಕುವೆಂಪುರವರ ಮನೆ ಇಂದಿನ ಆದುನಿಕ ಮನೆ ತರಹದ ಫಾಸ್ಟ್ ಫುಡ್ ನಂತೆ ಅಲ್ಲ. ಕವಿ 

ಮನೆಯ ಅಡುಗೆ ಮನೆ, ಸ್ನಾನದ ಕೋಣೆಯಿಂದ ಹಿಡಿದು ಮಲಗುವ ಕೋಣೆಯ ತನಕ ಎಲ್ಲೆಲ್ಲೂ ಎಲ್ಲವೂ ಸತ್ವ ಭರಿತ ವೈಶಿಷ್ಟವುಳ್ಳ ವಸ್ತುಗಳು, ಕುವೆಂಪು ತಮ್ಮ ನೆನಪಿನ ದೋಣಿಯಲ್ಲಿ ಉಲ್ಲೇಖಿಸಿರುವ ಹಾಗೆ ನನ್ನ ಹುಟ್ಟು ಅರ್ಥಾತ್ ಅದು ನನ್ನ ಅಜ್ಜಿ ನನ್ನನ್ನು ತಯಾರಿಸಿದಳು ಎಂದು. ಅದಕ್ಕೆ ಮೇಲೆ ನಾನು ಹೇಳಿದ್ದು " ಬದುಕಿಗೆ ಬೇಕಾದ ಅಗತ್ಯ ತಿಳುವಳಿಕೆ ನೀಡುವಲ್ಲಿ ವಿಫಲರಾದ ಹಿರಿಯರು ಕೂಡ ಇದರಲ್ಲಿ ಭಾಗಿ " ಎಂದು. ಕುವೆಂಪು ಉಪಯೋಗಿಸಿದ ವಸ್ತುಗಳು ಅವರ ಎಲ್ಲಾ ಡಾಕ್ಟರೇಟ್ ಪದವಿಗಳು, ಅವರ ಮಧುವೆಯ ಕರೆಯೋಲೆ, ತುಂಬು  ಕುಟುಂಬದ ಚಿತ್ರಗಳು, ಕುಲಪತಿಯಾಗಿ ಕುವೆಂಪು, ಅಜ್ಜನಾಗಿ ಕುವೆಂಪು ಹೀಗೆ ಹಲವು ಬಗೆಯ ವಿಚಾರಗಳು ನಮಗೆ ನೋಡ ಸಿಗುತ್ತವೆ.
ಕುಪ್ಪಳ್ಳಿ ಮಹಾಮನೆಯ ಮೂಲ ಹೆಬ್ಬಾಗಿಲು
ಕುಪ್ಪಲ್ಲಿ ಕವಿಮನೆ
ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನವು ಮನೆಯನ್ನು, ಅದರ ಮೂಲ ವಿನ್ಯಾಸಕ್ಕೆ ಹಾಳಾಗದಂತೆ ನವೀಕರಿಸಿ, ಒಂದು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡಿಸಿದೆಮನೆಯ ಒಳಗೆ ಕುವೆಂಪುರವರು ಕುಪ್ಪಳ್ಳಿ ಮತ್ತು ಮೈಸೂರಿನಲ್ಲಿ ಇದ್ದಾಗ ಬಳಸುತ್ತಿದ್ದ ವಸ್ತುಗಳು, ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಬಳಸುತ್ತಿದ್ದ ದೊಡ್ಡ ಗಾತ್ರದ ಅಡಿಗೆ ಮನೆಯ ವಸ್ತುಗಳು, ಅವರ ಸಾಹಿತ್ಯ ಭಂಡಾರ, ಅವರ ಪ್ರಶಸ್ತಿಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆಕುವೆಂಪುರವರ ವಿವಾಹದ ಮುದ್ರಿತ ಪತ್ರ ಮತ್ತು ವಿವಾಹ ಮಂಟಪ ಗಮನ ಸೆಳೆಯುವಂತ ವಸ್ತುಗಳಾಗಿವೆಕುವೆಂಪುರವರ ಕೆಲವು ಕಾದಂಬರಿಗಳ ಮೊದಲ ಮುದ್ರಿತ ಪ್ರತಿಗಳನ್ನು ಪ್ರದರ್ಶಿಸಲಾಗಿದೆಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಶ್ರೀ ರಾಮಾಯಣದರ್ಶನಂಮಹಾಕಾವ್ಯದ ಮೊದಲ ಹಸ್ತಪ್ರತಿ ಇದರಲ್ಲಿ ಪ್ರಮುಖವಾದದ್ದುಕರ್ನಾಟಕ ರತ್ನ, ಪದ್ಮ ವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪತ್ರಗಳು, ಫಲಕಗಳನ್ನು ಮೊದಲ ಬಾರಿ ಕಂಡ ನನಗೆ,ಆದ ಸಂಭ್ರಮ ಅದನ್ನು ಬರವಣಿಗೆಯಲ್ಲಿ ವರ್ಣಿಸಲು ಸಾಧ್ಯವಿಲ್ಲ!
ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು,
ಕಲಾವಂಥನಿಗೆ ಅದು ಸಗ್ಗವೀಡು.
ಕವಿಶೈಲದ ಕುರಿತಂತೆ ಕುವೆಂಪು ಆಡಿರುವ ಮಾತುಗಳು ಅಕ್ಷರಶಃ ನಿಜ.
ಕುವೆಂಪು ಸಮಾಧಿ
ಕವಿಶೈಲದ ನಿಜಮನಾಮ ಆಗ್ಗೆದಿಬ್ಬಣಕಲ್ಲು. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.
ಕವಿಶೈಲದ ಸುಂದರ ಪ್ರಕೃತಿಯ ಮಡಿಲಲ್ಲಿ ಇಂದು ವಿವಿಧ ಸಾಹಿತಿಗಳ ಹಸ್ತಾಕ್ಷರಗಳನ್ನೊಳಗೊಂಡ ಬಂಡೆಯ ಮೇಲೆ ಕುವೆಂಪು ತಾವು ಅನವರತ ಕುಳಿತು ಧ್ಯಾನಸ್ಥರಾಗುತ್ತಿದ್ದರು. ಇಂದು ಅದೇ ಸ್ಥಳದ ಎದುರಲ್ಲಿ ಅವರು ಸಮಾಧಿಸ್ಥರಾಗಿದ್ದಾರೆ (ಅದೇ ಕಲ್ಲಿನ ಎದುರು ಅವರ ಸಮಾಧಿ ಇದೆ.)

ಕುವೆಂಪು ಪುತ್ರರಾದ ಪೂರ್ಣಚಂದ್ರ ತೇಜಸ್ವಿ ಸಮಾಧಿ
ಒಟ್ಟಾರೆ ಹೇಳಬೇಕೆಂದರೆ ನಾನು ಸ್ಥಳಕ್ಕೆ ಭೇಟಿ ನೀಡುವ ಸುಯೋಗ ಕೂಡಿಬಂದದ್ದುಆದು ನನ್ನ ಸುಕೃತವೇ ಸರಿ. ಕುವೆಂಪುವಿನಂತಹಾ ಧ್ಯಾನಸ್ಥ ಕವಿ ನಡೆದ ಮಣ್ಣಿನಲ್ಲಿ ನಾವು ಹುಟ್ಟಿದ್ದೇವೆ ಎನ್ನುವುದೇ ನ್ನಡಿಗರಾದ ನಾವೆಲ್ಲ ಹೆಮ್ಮೆ ಪಡಬಹುದಾದ ಸಂಗತಿ.

No comments:

Post a Comment