Friday, October 16, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 59

ಭಕ್ತಾಪುರ (ನೇಪಾಳ) – Bhakthapur (Nepal)



ಹಿಂದೂ, ಬೌದ್ದ ಸಂಸ್ಕೃತಿಗಳ ನೆಲೆವೀಡಾದ ನೇಪಾಳದಲ್ಲಿರುವ ಭಕ್ತಾಪುರ ಅಲ್ಲಿನ ತುಳಜಾ ಭವಾನಿ (ತಲೈಜು ಭವಾನಿ) ದೇವಾಲಯದಿಂದಲೂ, ಅರಮನೆಗಳಿಂದಲೂ ಪ್ರಸಿದ್ದವಾಗಿದೆ. ರಲ್ಲಿ ಭಾರತದ ಓರ್ವ ಅರಸನಾದ ಹರಸಿಂಗ ದೇವ ಭಕ್ತಾಪುರಕ್ಕೆ ಆಗಮಿಸಿದ್ದನು. ಅವನ ಕುಲದೇವಿಯಾದ ತುಳಜಾ ಭವಾನಿಯನ್ನೂ ಜತೆಗೊಯ್ದಿದ್ದ ಅರಸನು ಭಕ್ತಾಪುರದ ರಾಜನಾಗಿ ಪ್ರಾಚೀನವಾದ ತುಳಜಾ ಭವಾನಿ ದೇವಾಲಯವನ್ನು ನಿರ್ಮಿಸಿದನು. ನೇಪಾಳಿಗರ ಬಾಯಲ್ಲಿ ತುಳಜಾ ಭವಾನಿಯು ತಲೇಜು ಭವಾನಿಯಾಗಿ ಕಠ್ಮಂಡು ಕಣಿವೆಯ ರಕ್ಷಕಿ ಎನಿಸಿದಳು.

ಕುಮಾರಿ ದೇವಿ (Kumari Devi, Nepal)
ಹರಸಿಂಗನ ಕಾಲದಿಂದಲೂ ತಲೇಜು ಭವಾನಿಯನ್ನು ಕುಮಾರಿ ದೇವತೆಯ ಸ್ವರೂಪದಲ್ಲಿ ಆರಾಧಿಸುವ ಸಂಪ್ರದಾಯವು ಬೇಳೆದು ಬಂದಿದೆ. ನೇಪಾಳದ ಕಠ್ಮಂಡು ಕಣಿವೆಯ ಮೂರು ಜಿಲ್ಲೆಗಳಲ್ಲಿಯೂ ತಲೇಜು ಭವಾನಿಯ ದೇವಾಲಯಗಳಿದ್ದು ಅವುಗಳಲ್ಲಿ ಭಕ್ತಾಪುರದ ದೇವಾಲಯವೇ ಅತ್ಯಂತ ಪುರಾತನವಾದದ್ದು.
ಅದರಂತೆ ಇಂದಿಗೂ ನೇಪಾಳದ ಗರ್ಭಿಣಿ ಮಹಿಳೆಯರು ತಾವು ಕನಸಿನಲ್ಲಿ ಕೆಂಪು ಸರ್ಪವನ್ನು ಕಂದದ್ದಾದರೆ ದೇವಿ ತಲೇಜು ಭವಾನಿಯು ತಮ್ಮ ಗರ್ಭದಲ್ಲಿ ಕುಮಾರಿ ದೇವಿಯ ಸ್ವರೂಪದಲ್ಲಿ ಅವತರಿಸುತ್ತಾಳೆಂದು ನಂಬುವರು.

***

ದರ್ಬಾರ್ ಚೌಕ, ಭಕ್ತಾಪುರ್ (Darbar Circle, Bhakthapur, Nepal) 
ನೇಪಾಳದ  ಅರಸ ಜಯಪ್ರಕಾಶ ಮಲ್ಲನಿಗೆ ತ್ರಿಪಾಸಾ ಹೆಸರಿನ ಪಗಡೆಯಾಟವು ಅತ್ಯಂತ ಪ್ರಿಯವಾಗಿತ್ತು. ಅದೊಂದು ದಿನ ರಾತ್ರಿಯ ವೇಳೆ ಅವನೊಬ್ಬನೇ ತನ್ನ ಕೋಣೆಯಲ್ಲಿ ಆಟವನ್ನಾಡುತ್ತಿರಲು ಒಂದು ಕೆಂಪು ಸರ್ಪ ಅವನ ಮುಂದೆ ಬಂದಿತು. (ಕೆಂಪು ಸರ್ಪವು ತಲೇಜು ಭವಾನಿಯ ವಾಹನ.) ರಾಜನೆದ್ದು ದೇವಿಯನ್ನು ಸ್ವಾಗತಿಸಿದನು. ಅವಳು ರಾತ್ರಿಯಿಡೀ ಅವನೊಡನೆ ಆಟವನ್ನಾಡಿದ್ದಳು.


ತಲೇಜು ಭವಾನಿ (Thalelu Bhavani, Bhkthapur, Nepal)
ಅಂದಿನಿಂದಲೂ ಪ್ರತಿ ದಿನದ ರಾತ್ರಿ ದೇವಿಯು ಅರಸನೊಡನೆ ತ್ರಿಪಾಸಾ ಆದಲು ಬರುತ್ತಿದ್ದಳು. ಬೆಳಗಿನ ಸೂರ್ಯೋದಯದ ಒಳಗೆ ಮರೆಯಾಗುತ್ತಿದ್ದಳು. "ತನ್ನ ಆಗಮನದ ವಿಚಾರವನ್ನು ರಾಜನು ಮೂರನೆಯವರಿಗೆ ಹೇಳಬಾರದು" ಎಂದು ದೇವಿಯು ಅರಸನಿಗೆ ಅಪ್ಪಣೆ ಕೊಡಿಸಿದ್ದು ಅದರಂತೆಯೇ ರಾಜನು ವಿಚಾರವನ್ನು ಯಾರಲ್ಲಿಯೂ ಹೇಳಿರಲಿಲ್ಲ. ಅದೊಂದು ದಿನ ರಾತ್ರಿಯ ವೇಳೆಯಲ್ಲಿ ಅರಸನು ಯಾರೊಡನೆ ಕಳೆಯುತ್ತಾನೆನ್ನುವ ಕೆಟ್ಟ ಕುತೂಹಲದಿಂದ ಅರಸನ ಕೋಣೆಗೆ ರಾಣಿಯು ಪ್ರವೇಶಿಸಿದಳು. ರಾಣಿಗೆ ತಲೇಜು ದೇವಿ ಕಾಣಿಸಿಕೊಂಡಳು, ಮತ್ತು ಅವಳು ತಾನು ಕೂಡಲೇ ಸರ್ಪವನ್ನೇರಿ ಮರೆಯಾದಳು. ಅದಾಗ ರಾಜ ಅವಳನ್ನು ತಡೆಯಲು ಪ್ರಯತ್ನಿಸಿದ. ಬಗೆ ಬಗೆಯಾಗಿ ಬೇಡಿಕೊಂಡನಾದರೂ ಅವಳು ಹೊರಟು ಹೋದಳು. ಹಾಗೆ ಹೊರಡುವುದಕ್ಕೂ ಮುನ್ನ - "ಮುಂದೆ ತಾನು ರತ್ನಾವಳಿಯ ನೇವಾರಿ ಶಾಕ್ಯ ಪಂಥದ ಜನರ ನಡುವೆ ಅವತರಿಸುತ್ತೇನೆ. ಅಲ್ಲಿ ನನ್ನನ್ನು ಹುಡುಕಬಹುದು." ಎಂದು ನುಡಿದಳು. ಅದರಂತೆಯೇ ರಾಜನು ಅವಳನ್ನು ಹುಡುಕುತ್ತಾ ತಾನೂ ಅರಮನೆಯನ್ನು ಬಿಟ್ಟು ಹೊರಟನು.

***

ತಲೇಜು ಭವಾನಿ ದೇವಾಲಯ (Thalelu Bhavani temple, Bhkthapur, Nepal)
ನೇಪಾಳದ ಅರಸ ತ್ರೈಲೋಕ್ಯ ಮಲ್ಲನು ರಾಜ್ಯವನ್ನಾಳುತ್ತಿರಲು ದೇವಿ ತಲೇಜು ಭವಾನಿಯು ಪ್ರತಿದಿನ ರಾತ್ರಿಯ ವೇಳೆ ಮಾನವ ರೂಪ ಧರಿಸಿ ಬರುತ್ತಿದ್ದಳು. ಅರಸನು ಅವಳೊಡನೆ ರಾಜ್ಯದ ಕ್ಷೇಮ ಸಮಾಚಾರಗಳನ್ನು ಚರ್ಚಿಸುತ್ತಿದ್ದ. ಅದೊಮ್ಮೆ ಅರಸನು ತಾನು ದೇವಿಯೊಡನೆ ದೇಹ ಸಂಪರ್ಕ ಬೇಳೇಸಲು ಮುಂದಾದಾಗ ಅವಳು ಕೋಪಗೊಂಡು ಅವನಿಂದ ದೂರಾದಳು. ಅದಾದ ನಂತರ ಅರಸನು ತಾನು ಪಶ್ಚಾತ್ತಾಪದಿಂದ ಕೂಡಿ ದೇವಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸಿದನು. ಮತ್ತು ಮರಳಿ ಬರುವಂತೆ ಪ್ರಾರ್ಥಿಸಿದನು. ಅಂತ್ಯದಲ್ಲಿ ದೇವಿಯು "ತಾನು ಶಾಕ್ಯ ಕುಟುಂಬದ ಕನ್ಯೆಯ ದೇಹದಲ್ಲಿ ಕಾಣಿಸಿಕೊಳ್ಳುತ್ತೇನೆ" ಎಂದು ನುಡಿದಳು.

***

ನೇಪಾಳದ  ಅರಸ ಜಯಪ್ರಕಾಶ ಮಲ್ಲನ ಕಾಲದಲ್ಲಿ ಓರ್ವ ಎಳೆ ಬಾಲೆಯ ಮೈಮೇಲೆ ದೇವಿ ತಲೇಜು ಆವಾಹನೆಯಾಗುವಳೆಂದು ಅವಳನ್ನು ರಾಜ್ಯದಿಂದಲೇ ಗಡಿಪಾರು ಮಾಡಲಾಗಿತ್ತು. ಇದನ್ನು ತಿಳಿದ ರಾಣಿಯು ಆ ಬಾಲಕಿಯನ್ನು ಕೂದಲೇ ಹುಡುಕಿ ತರುವಂತೆ ತನ್ನ ಪತಿಯನ್ನು ವಿನಂತಿಸಿದ್ದಳು. ಆ ಹುಡುಗಿಯನ್ನು ದೇವಿಯ ಜೀವಂತ ಅವತಾರವೆಂದು ಪೂಜಿಸಬೇಕೆಂದು ಅಣತಿ ಮಾಡಿದ್ದಳು. 

No comments:

Post a Comment