Thursday, August 04, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 74

ಭಾವನಗರದ ನಿಷ್ಕಳಂಕ ಮಹಾದೇವ 
(Nishkalank Mahadev at Bhavanagar)



ಭಾರತದ ಪಶ್ಚಿಮದ ಭಾಗದಲಿನ ಗುಜರಾತ್ ರಾಜ್ಯವು ತನ್ನದೇ ಆದ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿನ ಭಾವನಗರದಲ್ಲಿರುವ ನಿಷ್ಕಳಂಕ ಮಹಾದೇವ ಸನ್ನಿಧಿಯು ಅಷ್ಟೇ ವಿಶಿಷ್ಟ ಪರಂಪರೆ, ಐತಿಹ್ಯವನ್ನು ಹೊಂದಿದ್ದಾಗಿದೆ. ಭಾವನಗರ ಜಿಲ್ಲೆ ಕೂಲಿಯಾಕ್ (ಬಾವನಗರದಿಂದ ಸುಮಾರು 30 ಕಿ.ಮೀ. ಅಂತರದಲ್ಲಿದೆ.)ಎನ್ನುವ ಪ್ರದೇಶದ ಸಮುದ್ರ ಕಿನಾರೆ ನಿಂದ  2 ಕಿ.ಮೀ ಅಂತರದಲ್ಲಿ ಸಮುದ್ರದ ನಡುವೆ ಮಹಾದೇವನ ಸನ್ನಿಧಾನವಿದ್ದು ಅದುವೇ ನಿಷ್ಕಳಂಕಘಾದೇವ ಸನ್ನಿಧಿ. ಇಲ್ಲಿ ಐದು ಶಿವಲಿಂಗಗಳಿದ್ದು ಎಲ್ಲವೂ ಸ್ವಯಂಭೂ ಲಿಂಗಗಳಾಗಿರುವುದು ವಿಶೇಷ. 

***

ಹಿಂದೆ ಕುರುಕ್ಷೇತ್ರ ಯುದ್ದದ ನಂತರ ಪಾಂಡವರಿಗೆ ಬಂಧುಗಳನ್ನು ಕೊಂದ ಕಳಂಕ ಅಂಟಿಕೊಂಡಿತ್ತು. ಆಗ ಕೃಷ್ಣನ ಬಳಿ ಬಂದ ಪಾಂಡವರು ತಾವು ಈ ಕಳಂಕದಿಂದ ಮುಕ್ತರಾಗುವುದಕ್ಕೆ ದಾರಿ ತೋರಿಸುವಂತೆ ಕೇಳಿದರು. ಆಗ ಕೃಷ್ಣ ಅವರಿಗೆ ಒಂದು ಕಪ್ಪು ಹಸು ಹಾಗೂ ಕಪ್ಪು ಬಾವುಟವನ್ನು ನೀಡಿ ಈ ಹಸು ಹಾಗೂ ಬಾವುಟಗಳು ಬಿಳಿ ಬಣ್ಣಕ್ಕೆ ತಿರುಗುವ ಸ್ಥಳದಲ್ಲಿ ಶಿವನನ್ನು ಕುರಿತು ತಪಸ್ಸನ್ನಾಚರಿಸಿದರೆ ನಿಮ್ಮ ಸರ್ವ ಪಾಪಗಳೂ ತೊಳೆದು ಹೋಗುವುದಾದ್ಗಿ ತಿಳಿಸುತ್ತಾನೆ. ಅದರಂತೆಯೇ ಪಾಂಡವರು ಹಸುವನ್ನು ಹಿಂಬಾಲಿಸಿಕೊಂಡು ಬರಲು ಈಗಿನ ಕೋಲಿಯಾಕ್ ಪ್ರದೇಶದ ಕಡಲ ಕಿನಾರೆಗೆ ಬಂದಾಗ ಹಸು ಹಾಗೂ ಬಾವುಟ್ಗಳು ಬಿಳಿ ವರ್ಣಕ್ಕೆ ಬದಲಾಯಿಸುತ್ತವೆ. ಆಗ ಪಾಂದವರು ಅಲ್ಲಿಯೇ ಶಿವನ ಕುರಿತಂತೆ ಘೋರ ತಪಸ್ಸನ್ನಆಚರಿಸುತ್ತಾರೆ. ಆ ತಪಸ್ಸಿಗೆ ಮೆಚ್ಚಿದ ಶಿವನು ಅವರಿಗೆ ಐದು ಶಿವಲಿಂಗಗಳನ್ನು ಅನುಗ್ರಹಿಸುತ್ತಾನೆ. ಅದನ್ನು ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಪಾಂಡವರು ನಿತ್ಯ ಪೂಜೆ ನಡೆಸುತ್ತಾ ಬರುತ್ತಾರೆ. ಅದೇ ಶಿವಲಿಂಗಗಳನ್ನು ನಾವಿಂದು ನಿಷ್ಕಳಂಕ ಮಹಾದೇವ ಮಂದಿರದಲ್ಲಿ ನೋಡುತ್ತೇವೆ. ಈ ಐದು ಲಿಂಗಗಳಿಗೂ ಐದು ಪ್ರತ್ಯೇಕ ನಂದಿ ಇರುವುದು ಇನ್ನೊಂದು ವಿಶೇಷವಾಗಿದೆ. 

No comments:

Post a Comment