Thursday, November 18, 2021

ಬಲಿ ಚಕ್ರವರ್ತಿಯ ರಾಜಧಾನಿ ಭೋಗಾವತಿಯೇ ಕೊಲಂಬಿಯಾದ ಬೊಗೋಟಾ!

ವಾಮನನಿಂದ ಪಾತಾಳ ಲೋಕಕ್ಕೆ (ದಕ್ಷಿಣ ಅಮೇರಿಕಾ)ಕಳುಹಿಸಲ್ಪಟ್ಟ ಮಹಾಬಲಿ ಅಲ್ಲಿ ಭೋಗಾವತಿ ಎಂಬ ನಗರವನ್ನು ತನ್ನ ರಾಜಧಾನಿಯಾಗಿ ನಿರ್ಮಿಸಿಕೊಂಡನು. ಈ ಭೋಗಾವತಿ ಇಂದಿನ ಆಧುನಿಕ ಜಗತ್ತಿನ ಕೊಲಂಬಿಯಾ ದೇಶದ ರಾಜಧಾನಿ ಬೊಗೋಟ ಆಗಿದೆ.


ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ, ರಾಮನು ವಿಶಾಖವು ಇಕ್ಷ್ವಾಕು ವಂಶದ ನಕ್ಷತ್ರಪುಂಜ ಮತ್ತು ಮೂಲ ರಾಕ್ಷಸ ವಂಶಜರ ನಕ್ಷತ್ರಪುಂಜ ಎಂದು ಉಲ್ಲೇಖಿಸಿದ್ದಾನೆ. ಅಂದಿನ ದಿನಗಳಲ್ಲಿ ವರ್ನಾಲ್ ಈಕ್ವಿನಾಕ್ಸ್ ಎನ್ನುವುದು ಬಹಳ ಪ್ರಮುಖವಾಗಿತ್ತು.ಆದ್ದರಿಂದ ವಸಂತ ಋತುವಿನ ವಿಷುವತ್ ಸಂಕ್ರಾಂತಿಯು ಮೂಲಾ ನಕ್ಷತ್ರದಲ್ಲಿದ್ದಾಗ ಬಲಿ ಚಕ್ರವರ್ತಿಯು ಭಾರತವನ್ನು ಆಳಿದ್ದನು. ಮತ್ತು ಈ ಕಾಲಾವಧಿಯು 17000 - 18000 ಬಿಸಿಇ ಅಥವಾ ಐದಕ್ಕೂ ಹಿಂದಿನ ಅವಧಿಯಾಗಿದೆ. ಅದೇ ವಿಷುವತ್ ಸಂಕ್ರಾಂತಿಯು ವಿಶಾಖಾ ನಕ್ಷತ್ರದಲ್ಲಿದ್ದಾಗ ಇಕ್ಷ್ಯಾಕು ರಾಜವಂಶದ ಪ್ರಾರಂಭವಾಗಿತ್ತು. ಅಂದರೆ ಬಲಿಯು  ಭಾರತವನ್ನು ತೊರೆದ ಸರಿಸುಮಾರು 3000-4000 ವರ್ಷಗಳ ನಂತರ, ಇಕ್ಷ್ವಾಕು ವಶದವರು ಭಾರತವನ್ನು 15000-14000 ಬಿಸಿಇ ನಿಂದ ಆಳಲು ಪ್ರಾರಂಭಿಸಿದ್ದರು.

विमले च प्रकाशेते विशाखे निरुपद्रवे || ६-४-५१

नक्षत्रम् परम् अस्माकम् इक्ष्वाकूणाम् महात्मनाम् |

ವಿಶಾಖಾ ನಕ್ಷತ್ರಪುಂಜ ಯಾವುದೇ ದುಷ್ಟ ಪ್ರಭಾವವಿಲ್ಲದೆ ಸ್ಪಷ್ಟವಾಗಿ ಹೊಳೆಯುತ್ತಿದೆ. ಈ ಸರ್ವೋಚ್ಚ ನಕ್ಷತ್ರಪುಂಜವು ನಮ್ಮ ಇಕ್ಷ್ವಾಕುಗಳ ಅತ್ಯುನ್ನತ ಆತ್ಮವಾಗಿದೆ.

नैरृतम् नैरृतानाम् च नक्षत्रम् अभिपीड्यते || ६-४-५२ ( ವಾಲ್ಮೀಕಿ ರಾಮಾಯಣ)

मूलम् मूलवता स्प्ऱ्ष्टम् धूप्यते धूम केतुना |

नैरृतम् नैरृतानाम् च नक्षत्रम् अभिपीड्यते || ६-४-५२

मूलम् मूलवता स्प्ऱ्ष्टम् धूप्यते धूम केतुना |

ಮುಲಾ ನಕ್ಷತ್ರಪುಂಜವು ಕೆಟ್ಟದಾದ ಪ್ರಭಾವಲಯ ಹೊಂದಿದ್ದು ಅದು ಧೂಮಕೇತುವಿನ ಬಾಲದಿಂಡ ಸ್ಪರ್ಶಿಸಲ್ಪಟ್ಟಿದೆ ಅಲ್ಲದೆರ್ ಅದರಿಂದ ಪೀಡಿತವಾಗಿದೆ.

ಬಲಿಯು ಮೊದಲಿಗೆ ಪೆರು ದೇಶಕ್ಕೆ ಆಗಮಿಸಿ ಅಲ್ಲಿ ರಾಕ್ಷಸರು ಅಥವಾ ಅಸುರರ ಹಾಗೂ ಇತರ ನಡುವೆ ಗಡಿರೇಖೆಯ ಗುರುತಾಗಿ ತ್ರಿಶೂಲದ ಚಿಹ್ನೆನ್ನು ಕೆತ್ತಿದ್ದನು. ಅಲ್ಲಿ ಅವನು ತನ್ನ ರಾಜ್ಯವನ್ನು 'ಭೋಗಾವತಿ' ಎಂಬ ಹೆಸರಿನೊಂದಿಗೆ ಸ್ಥಾಪಿಸಿದನು, ಇದು ಇಂದಿನ ಆಧುನಿಕ ಕಾಲದಲ್ಲಿ ಕೊಲಂಬಿಯಾದ ರಾಜಧಾನಿಯಾಗಿದೆ.  ಅಂತೆಯೇ ಮಕ್ಷಿಕಾ ಮೆಕ್ಸಿಕೋ, ಕೇತು ಮಾಲಾ ಗ್ವಾಟೆಮಾಲಾ, ಸೂರ್ಯನಾಮ ಸುರಿನಾಮ್ ಎಂಬ ಹೆಸರಿನಿಂದ ಪ್ರಚಲಿತವಿದೆ. ವಿಷ್ಣು ಪುರಾಣವು ಕೇತುಮಾಲವು ಜಂಬೂದ್ವೀಪದ ಪಶ್ಚಿಮದಲ್ಲಿ ನೆಲೆಯಾಗಿದೆ ಎಂದು ಉಲ್ಲೇಖಿಸಿದೆ. ಪುರಾಣಗಳು, ರಾಮಾಯಣ, ಉತ್ತರ ರಾಮಾಯಣ ಇತ್ಯಾದಿಗಳಲ್ಲಿ ಮಯ, ಸುಮಾಲಿ, ಮಾಲಿ, ಮಾಲ್ಯವನ, ಪ್ರಥಮ ರಾವಣ, ಸಗರನ ಮಕ್ಕಳು, ಕಪಿಲ ಋಷಿ, ಹನುಮ, ರಾಮ ಲಕ್ಷ್ಮಣರು ಪಾತಾಳಕ್ಕೆ ಪ್ರಯಾಣಿಸಿರುವುದನ್ನು ಉಲ್ಲೇಖಿಸುತ್ತದೆ.


ವಿದುರಪಡಿತ ಜಾತಕ ಪುಸ್ತಕದಲ್ಲಿ ಭೋಗಾವತಿ ಅರಮನೆಯ ವಿಸ್ಕೃತವಾಗಿರುವ ವಿವರಣೆ ಇದೆ.

ಬಲಿ ಚಕ್ರವರ್ತಿಯು ವಿಮಾನ ನಿಲ್ದಾನ, ರನ್ ವೇ ಗಳನ್ನು ಸಹ ನಿರ್ಮಾಣ ಮಾಡಿದ್ದು ಆತನ ವಿಮಾನಗಳು ಪೆರುವಿನ ನಾಜ್ಕಾ ಲೇನ್ ನಲ್ಲಿ ಇಳಿದಿದ್ದವು.

ಬಲಿಯ ಕಾಲಾವಧಿಯಲ್ಲೇ ವಿಮಾನಗಳಿದ್ದವಾದರೆ ಆ ನಂತರ ನಾವು ಇದನ್ನು ಹೇಗೆ ಕಳೆದುಕೊಂಡೆವು? ಇದಕ್ಕೆ ಉತ್ತರ ಎಂದರೆ ನಾವಿಂದು ಬಳಸುತ್ತಿರುವ ಪೆಟ್ರೋಲಿಯಂ ಅತ್ಯಂತ ವೇಗವಾಗಿ ಖಾಲಿಯಾಗುತ್ತಿರುವ ಹಾಗೆಯೇ ಅಂದಿನ ಕಾಲದಲ್ಲಿ ಬಳಸಿದ್ದ ಇಂಧನ ಖಾಲಿಯಾಗಿರಬೇಕು.


ಮೆಕ್ಸಿಕೋದ ಚಕ್ರವರ್ತಿ ಮಾಂಟೆಝುಮಾ ಸ್ಪೇನ್ ನ ಆಕ್ರಮಣಕಾರರಿಗೆ "ನನ್ನ ಪೂರ್ವಜರು ಪೂರ್ವದಿಂದ ಇಲ್ಲಿಗೆ ಬಂದವರು" ಎಂದು ಹೇಳಿದ್ದಾನೆ. ಅಜ್ಟೆಕ್, ನಹುವಾ ಇತ್ಯಾದಿ ಬುಡಕಟ್ಟುಗಳು ಭಾರತದಿಂದ ಇಲ್ಲಿಗೆ ವಲಸೆ ಬಂದವುಗಳಾಗಿದೆ,

ಬ್ಯಾಂಕೊ ಡಿ ಬೊಗೊಟಾ (ಸ್ಟೇಟ್ ಬ್ಯಾಂಕ್ ಆಫ್ ಕೊಲಂಬಿಯಾ) ಕಟ್ಟಡದ ಒಳಗಿರುವ ಬಗೋಟಾ ಗೋಲ್ಡ್ ಮ್ಯೂಸಿಯಂನಲ್ಲಿಚಿನ್ನದಿಂದ ಮಾಡಲ್ಪಟ್ಟ ವಿಮಾನದ ಮಾದರಿಗಳು ಕಂಡುಬಂದಿದೆ. ಅವು ಶುದ್ಧ ಚಿನ್ನದಿಂದ ಮಾಡಲ್ಪಟ್ಟಿದ್ದು ಸಾವಿರಾರು ವರ್ಷಗಳಿಂಡ ಯಾವುದೇ ಬಗೆಯಲ್ಲಿ ಹಾನಿಗೊಳ್ಳದೆ ಅಸ್ತಿತ್ವದಲ್ಲಿದೆ. ಅದಲ್ಲದೆ ಈಜಿಪ್ಟ್ ನಲ್ಲಿರುವ ಸಕ್ಕರಾ ಗ್ಲೈಡರ್ ಸಹ ಇದೇ ಬಗೆಯ ಮಾದರಿಯನ್ನು ಹೊಂದಿದೆ. ಅವುಗಳು ಸಹ ಪ್ರಾಚೀನ ಭಾರತೀಯರು ವಿಶ್ವದ ನಾನಾ ಭಾಗಗಳಿಗೆ ವಿಮಾನದ ಮೂಲಕ ತಲುಪಿದ್ದರೆಂದು ಸೂಚಿಸಿದೆ.


No comments:

Post a Comment