Sunday, December 19, 2021

ರವಿಚಂದ್ರನ್ ಇಂತಹಾ ಪಾತ್ರಗಳಿಗೂ ಬಣ್ಣ ಹಚ್ಚುತ್ತಾರೆ!

 ರವಿಚಂದ್ರನ್ ಇಂತಹಾ ಪಾತ್ರಗಳಿಗೂ ಬಣ್ಣ ಹಚ್ಚುತ್ತಾರೆ! ಇದು ನನ್ನ ಕಲ್ಪನೆಯನ್ನೂ ಮೀರಿದ್ದು... "ಪ್ತ್ರೇಮಲೋಕ", "ರಣಧೀರ"ದಿಂದ "ಮಲ್ಲ", "ಸಾಹುಕಾರ"ದಂತಹಾ ಸಿನಿಮಾಗಳಲ್ಲಿ ಕ್ಕಾಣಿಸಿಕೊಂಡಿದ್ದ ಕ್ರೇಜಿಸ್ಟಾರ್ ರವಿ ಮಾಮ ಕಿಚ್ಚ ಸುದೀಪ್ ಅವರ "ಮಾಣಿಕ್ಯ" ನಂತರದಲ್ಲಿ ಸಾಕಷ್ಟು ವಿಭಿನ್ನ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ. ಆದರೂ ಇತ್ತೀಚೀ ಬಿಡುಗಡೆಯಾದ ಅವರ ಅಭಿನಯದ "ಕನ್ನಡಿಗ" ಸಿನಿಮಾ ಇದೆಯಲ್ಲ ಅದು ನನ್ನನ್ನು ಈ ಬರಹ ಬರೆಯದೇ ಹೋದರೆ ಆಗುವುದೇ ಇಲ್ಲ ಎಂಬಷ್ಟು ಕಾಡಿಸಿದ್ದು ಸುಳ್ಳಲ್ಲ.... ರವಿಚಂದ್ರನ್ "ಸಿಪಾಯಿ", "ರಾಮಾಚಾರಿ", "ಅಣ್ಣಯ್ಯ" ಹೀಗೆ ಸಾಲು ಸಾಲು ಯಶಸ್ವಿ ಚಿತ್ರಗಳಲ್ಲಿ ಅದರಲ್ಲಿಯೂ ಸಂಗೀತವೇ ಪ್ರಧಾನವಾಗಿರುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದವರು ಇಂದು ಒಂದು ಐತಿಹಾಸಿಕ ಕಥಾನಕದಲ್ಲಿ ಗುಣಭದ್ರ ಎಂಬ ಐತಿಹಾಸಿಕ ಪಾತ್ರದ ಮೂಲಕ ತೆರೆಗೆ ಬಂದಿರುವುದು ನಿಜಕ್ಕೂ ಸಂಭ್ರಮದ ವಿಚಾರ.

ಕನ್ನಡ ಭಾಷೆಗೆ ಅಪೂರ್ವ ಕೊಡುಗೆ ನೀಡಿದ್ದ ಜರ್ಮನ್ ಮೂಲದ ಫರ್ಡಿನಾಂಡ್ ಕಿಟಲ್ ಅವರ ಕಥಾನಕ ಆಧಾರಿತ "ಕನ್ನಡಿಗ" ನಿಜಕ್ಕೂ ಪ್ರತಿ ಕನ್ನಡಿಗರೂ ನೋಡಲೇಬೇಕಾದ ಚಿತ್ರ. ಹೊಸ ನಿರ್ದೇಶಕ ಬಿ.ಎಂ. ಗಿರಿರಾಜ್ ಇದಕ್ಕೆ ಮುನ್ನ "ಜಟ್ಟ" ಸಿನಿಮಾದ ಮೂಲಕ ಪ್ರಥಮ ಹೆಜ್ಜೆಯಲ್ಲೇ ದೊಡ್ಡ ಯಶಸ್ಸು ಕಂಡಿದ್ದರು. ಈ ಸಿನಿಮಾದಲ್ಲಿ ಇನ್ನಷ್ಟು ಎತ್ತರಕ್ಕೇರಿದ್ದಾರೆ ಎನ್ನುವುದು ನನ್ನ ಭಾವನೆ. 

ಇನ್ನು ನಾನಿಲ್ಲಿ ಬರೆದಿರುವುದು ಸಿನಿಮಾ ವಿಮರ್ಶೆ ಅಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ.. ಸಿನಿಮಾ ಆಗಲಿ, ಪುಸ್ತಕವೇ ಆಗಲಿ, ನಾಟಕವಾಗಿರಲಿ ನೋಡಿದ ಪ್ರೇಕಹಾಕ ಅಥವಾ ಓದಿದ ಓದುಗನನ್ನು ಅದರ ಬಗ್ಗೆ ಮಾತನಾಡುವಂತೆ, ಬರೆಯುವಂತೆ ಕಾಡಬೇಕು. ಅಷ್ಟರಮಟ್ಟಿಗೆ ಅದು ಮನಸ್ಸಿಗೆ ನಾಟಿದ್ದೇ ಆದಲ್ಲಿ ಆ ಸಿನಿಮಾ ಅಥವಾ ನಾಟಕ, ಕಥೆ ಗೆದ್ದಿದೆ ಎಂದೇ ಅರ್ಥ... ಈ ನಿಟ್ಟಿನಲ್ಲಿ "ಕನ್ನಡಿಗ" ಸಿನಿಮಾ ನಿಜವಾಗಿ ಗೆಲುವು ಕಂಡಿದೆ.

ಇಂತಹಾ ಸಿನಿಮಾಗಳನ್ನು ತಾಯಿ ತಂದೆಗಳು ತಮ್ಮ ಮಕ್ಕಳೊಂದಿಗೆ ಆಗಮಿಸಿ ಸಿನಿಮಾ ಮಂದಿರಗಳಲ್ಲಿ ನೋಡಿದ್ದಾದರೆ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಇಂದಿನ ಆಧುನಿಕ ಕಾಲದಲ್ಲಿ ಮೊಬೈಲ್ ಮಾಯಾಲೋಕ ತೆರೆದಿದೆ ಎನ್ನುವುದು ಸತ್ಯವಾದರೂ ದೊಡ್ಡ ಪರದೆಯ ಮೇಲೆ ಸಿನಿಮಾ ಮೂಡಿಬಂದಿದ್ದಾದರೆ ಇನ್ನಷ್ಟು ಚೆನ್ನಿತ್ತು ಎನ್ನುವುದು ನನ್ನ ವೈಯುಕ್ತಿಕ ಭಾವನೆ. ಆರಂಭದಲ್ಲಿ ಇದೊಂದು ಸಾಕ್ಷಿಚಿತ್ರವೇನೋ ಎನ್ನಿಸುತ್ತದೆಯಾದರೂ ಚಿತ್ರ ಮುಂದುವರಿದ ಹಾಗೆಲ್ಲಾ ಪಕ್ಕಾ ವಾಣಿಜ್ಯ ಚಿತ್ರದಲ್ಲಿರಬೇಕಾದ ಎಲ್ಲವೂ ಇದೆ ಎನ್ನುವುದು ಸಾಬೀತಾಗುತ್ತದೆ. 

ರವಿಚಂದ್ರನ್ ಈ ಚಿತ್ರದಲ್ಲಿ ಲಿಪಿಕಾರ ವಂಶದ ಕಡೆಯ ಕುಡಿ ಗುಣಭದ್ರನಾಗಿ ಕಾಣಿಸಿಕೊಂಡಿದ್ದಾರೆ. ಹತ್ತನೇ ಶತಮಾನದಲ್ಲಿ ಬದುಕಿ ದಾನಚಿಂತಾಮಣಿಯೆಂದೇ ಪ್ರಸಿದ್ಧಳಾದ ಅತ್ತಿಮಬ್ಬೆಯ ವಂಶಜನಾದ  ಸಮಂತಭದ್ರ ಎಂಬ  ಜೈನ ವೀರ ಸೇನಾನಿ, 16ನೇ ಶತಮಾನದಲ್ಲಿ  ಕನ್ನಡನೆಲವನ್ನು, ಆಳುತ್ತಿದ್ದ ಸಾಳ್ವ ವಂಶದ ಅರಸಿ ಕಾಳುಮೆಣಸಿನ ರಾಣಿಯೆಂದೇ ಪ್ರಸಿದ್ಧಳಾದ ಕನ್ನಡತಿ ರಾಣಿ ಚೆನ್ನಭೈರಾದೇವಿಯ ಸೇನಾ ನಾಯಕನೀತ.

ರಾಣಿ ಚೆನ್ನಾಭೈರಾದೇವಿಯಿಂದ ಆಣತಿಗೊಂಡು ಕನ್ನಡ ನೆಲವನ್ನು, ಕನ್ನಡವನ್ನು ಉಳಿಸುವ ಪಣತೊಟ್ಟು , ಕತ್ತಿ ಬಿಟ್ಟು, ಕಂಠ ಹಿಡಿದು ( ಕಂಠ ಎಂದರೆ ಹಿಂದೆ  ಓಲೆಗರಿಯ ಮೇಲೆ ಬರೆಯಲು ಬಳಸುತ್ತಿದ್ದ ಕಬ್ಬಿಣದ ಲೇಖನಿ) ಕನ್ನಡವ ಕಾವ ಧೀರನಾಗುತ್ತಾನೆ. 

ಕನ್ನಡ ಸೇವೆಗಾಗಿ ರಾಣಿಯಿಂದ ಒಂದು ದ್ವೀಪವನ್ನು ಉಡುಗೊರೆಯಾಗಿ ಪಡೆದು, ಅಲ್ಲೊಂದು ಕನ್ನಡಮ್ಮನ ದೇವಳ ಕಟ್ಟಿಸಿ, ತನ್ನ ಮುಂದಿನ ಇಡೀ ಬದುಕನ್ನು  ಕನ್ನಡದ ಏಳಿಗೆಗಾಗಿ ಸವೆಸಬೇಕೆಂದು ಆಜ್ಞೆಗೊಂಡಿದ್ದರಿಂದ ಹಾಗೆಯೇ ಬದುಕುತ್ತಾನೆ. ಮುಂದೆ ಆತನ ವಂಶಸ್ಥರು ಕನ್ನಡ ಸೇವೆಯ ಕೆಲಸವನ್ನು ಮುಂದುವರೆಸಿಕೊಂಡು ಬರುತ್ತಾರೆ.

 ಮುಂದೆ 1858 ರಲ್ಲಿ ಆತನ ಎಂಟನೇ ತಲೆಮಾರಿನ ಕುಡಿ "ಗುಣಭದ್ರ" ನು ತನ್ನ ವಂಶಸ್ಥರು ರಾಣಿ ಚೆನ್ನಭೈರಾದೇವಿ ಕೊಟ್ಟಿದ್ದ ದ್ವೀಪವನ್ನು ಮತ್ತು ಆ ದ್ವೀಪದ ಗುಹೆಯಲ್ಲಿ ಕನ್ನಡದ ಇತಿಹಾಸ, ಸಾಹಿತ್ಯ, ಕಲೆಗೆ ಸಂಬಂಧಿಸಿದ ಶಾಸನ, ಹಸ್ತಪ್ರತಿಗಳನ್ನು ರಕ್ಷಿಸಿ ಕಾಪಾಡಿಕೊಂಡು ಹೋಗಲು  ಪಣತೊಟ್ಟು, ನಿಲ್ಲುತ್ತಾನೆ. ಮುಂದೆ ಆತ ತನ್ನ ವಂಶಜರು ಒಂದು ಕಠಿಣ ವ್ರತದಂತೆ ಪಾಲಿಸಿಕೊಂಡು ಬಂದಿದ್ದ ಕನ್ನಡವನ್ನು ಕಾಪಾಡುವ ಕೆಲಸವನ್ನು ಗುಣಭದ್ರ ಹೇಗೆ ಮಾಡುತ್ತಾನೆ. ಅದರಲ್ಲಿ ಅವನು ಯಶಸ್ಬಿಯಾಗುತ್ತಾನೋ? ಇಲ್ಲವೋ ಎನ್ನುಗ್ಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಿರಿ.

ನಿರ್ದೇಶಕ ಬಿ.ಎಂ. ಗಿರಿರಾಜ್ ಅವರೊಂದಿಗೆ ರವಿಚಂದ್ರನ್
ಆದರೆ ಈಗಿಲ್ಲಿ ನಾವು ಗಮನಿಸಬಹುದಾದ ವಿಷಯವೆಂದರೆ ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸ ಇದೆ, ಪಂಪ, ರನ್ನಾದಿ ಕವಿಗಳಿದ್ದರು ಎನ್ನುವುದನ್ನೆಲ್ಲಾ ನಾವು ಆಹಿತ್ಯ ಚತ್=ರಿತ್ರೆ ಪುಸ್ತಕದಲ್ಲಿ ಓದಿದ್ದೇವೆ. ಆದರೆ ಕನ್ನಡ ಲಿಪಿಯನ್ನು ಹಲವಾರು ತಲೆಮಾರುಗಳವರೆಗೆ  ಕಾಪಾಡಿಕೊಂಡು ಬಂದು ನಮ್ಮವರೆವಿಗೆ ತಲುಪಿಸಿದವರು ಈ ಲಿಪಿಕಾರರು. ಆ ವಿಶೇಷವಾದ ಲಿಪಿಕಾರರ ಬಗ್ಗೆ ನಾವಿಂದಿಗೂ ಸಾಕಷ್ಟು ಗಮನವನ್ನೇ ನೀಡಿಲ್ಲ ಎನ್ನುವುದು ವಿಪರ್ಯಾಸ. ನಿರ್ದೇಶಕರು ಈ ಸಿನಿಮಾದ ಮೂಲಕ ಕನ್ನಡದ ಲಿಪಿಕಾರರ ಬಗ್ಗೆ ಹೊಸದೊಂದು ಹೊಳಹನ್ನು ತೋರಿಸಿಕೊಟ್ಟಿದ್ದಾರೆ ಎಂದರೆ ತಪ್ಪಲ್ಲ. ಇನ್ನು ಮುಂಡಾದರೂ ಕನ್ನಡದ ಸಾಹಿತಿಗಳು, ಕಾವ್ಯ ರಚನೆಗಾರರ ಕುರಿತ ಸಂಶೋಧನೆಗಳಂತೆ ಲಿಪಿಕಾರರ ಬಗ್ಗೆ ಸಹ ಸಾಕಷ್ಟು ಅಧ್ಯಯನಗಳು ನಡೆಯಲಿ.

ಅಂದ ಹಾಗೆ ಈ ಚಿತ್ರದಲ್ಲಿ ಕೇವಲ ಕನ್ನಡ ಮಾತ್ರವೇ ಇಲ್ಲ ಬದಲಿಗೆ ಜಾತಿ, ಧರ್ಮ, ದೇಶ, ಪ್ರೀತಿ, ಪ್ರೇಮ ಎಲ್ಲವೂ ಇದೆ.

ಪಾತ್ರಧಾರಿಗಳ ಬಗ್ಗೆ ಹೇಳುವುದಾದರೆ ಮೈತ್ರಿ ಖ್ಯಾತಿಯ ಜಗ್ಗ , ಜೀವಿಕ, ರಚನಾ, ಬ್ರಹ್ಮಾಂಡ ಗುರುಜೀ,  ಪಾವನಾ, ಬಾಲಾಜಿ ಮನೋಹರ್, ಜಯಶ್ರೀ ಹೋಗೆ ಎಲ್ಲರೂ ಒಬ್ಬರಿಗಿಂತ ಒಬ್ಬರು ಹೆಚ್ಚು ಇಷ್ಟವಾಗುತ್ತಾರೆ. ಇನ್ನು ರವಿ ಬಸ್ರೂರು ಹಿನ್ನಲೆ ಸಂಗೀತ,ಶಿವಣ್ಣ ಹಾಡಿರುವ ಕನ್ನಡಂ ಗೆಲ್ಗೆ ಹಾಡು. ಅದ್ಭುತವಾಗಿದೆ. ಇಲ್ಲೇ ಇನ್ನೊಂದು ವಿಷಯ ಹೇಳುವುದಾದರೆ ರವಿಚಂದ್ರನ್ ಅವರ ಹೆಸರು ಎಲ್ಲಾ ಚಿತ್ರಗಳಲ್ಲಿ ತೆರೆ ಮೇಲೆ ಬರುವಾಗ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಎಂದು ಬರುತ್ತಿದ್ದದ್ದಾರೆ "ಕನ್ನಡಿಗ"ದಲ್ಲಿ ಮಾತ್ರ ಡಾ.ರವಿಚಂದ್ರ ಎಂದು ಬರುತ್ತದೆ!

ರವಿಚಂದ್ರನ್ ಅವರ ಅಭಿನಯದ, ನಿರ್ದೇಶಕ ಪಿ. ವಾಸು ಅವರ  "ದೃಶ್ಯ 2" ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಇದು ಮಲಯಾಳಂ ಚಿತ್ರದ ರಿಮೇಕ್ ಆಗಿದ್ದರೂ ಅದ್ಭುತ ಕಥೆ, ಪಾತ್ರಧಾರಿಗಳ ಮನಮುಟ್ಟುವ ಅಭಿನಯ ನಮಗೆ ಕನ್ನಡದ ಚಿತ್ರವನ್ನೇ ನೋಡಿದಂತಾಗುತ್ತದೆ. ಇನ್ನು ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಕಲಾವಿದ ಶಿವರಾಮ್ ಅವರ ಕೊನೆಯ ಚಿತ್ರ ಸಹ ಇದಾಗಿತ್ತು ಎನ್ನುವುದನ್ನು ನಾನಿಲ್ಲಿ ಸ್ಮರಿಸಬೇಕು.

ಇರಲಿ ಕನ್ನಡ ಭಾಷೆಯ ಮೇಲಿನ ಪ್ರೇಮವನ್ನು ಇಷ್ಟೋಂದು ನೀಟಾಗಿ ವಾಣಿಜ್ಯ ಚಿತ್ರವೊಂದರ ಮೂಲಕ ಸಹ ತೋರಿಸಬಹುದು ಎಂದು ಹೇಳುವುದಕ್ಕೆ ರವಿಮಾಮನ "ಕನ್ನಡಿಗ" ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ಇರಲಿ ರವಿಚಂದ್ರನ್ ಅವರ ಅಭಿನಯದ. ಕನ್ನಡಿಗರು ಹೆಮ್ಮೆಪಡುವಂಥ ಸಿನಿಮಾ "ಕನ್ನಡಿಗ"zee5 ಆ್ಯಪ್ ನಲ್ಲಿ ಪ್ರಸಾರವಾಗುತ್ತಿದೆ ನೋಡಿ ಆನಂದಿಸಿ....


No comments:

Post a Comment